Homeಅಂಕಣಗಳುಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

ಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

- Advertisement -
- Advertisement -

ಎಲೆಮರೆ-20

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು ಭಾಗದ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಒಬ್ಬ ಸರಳವಾದ ವ್ಯಕ್ತಿ ಹಾಜರಾಗುತ್ತಾರೆ. ಲುಂಗಿ ತೊಟ್ಟು, ಹೆಗಲಿಗೊಂದು ಟವಲ್ ಹಾಕಿ, ಬೆಳ್ಳಿ ಕೂದಲಿನಲ್ಲಿ ಮಿಂಚುವ ಕೋಲಿಗೆ ಬಟ್ಟೆ ತೊಡಿಸಿದಂತಹ ತೆಳ್ಳನೆಯ ದೇಹದ ಈ ವ್ಯಕ್ತಿ ಕಂಡವರನ್ನು ನಿಷ್ಕಲ್ಮಶವಾದ ನಗುವಿನೊಂದಿಗೆ ಮಾತನಾಡಿಸಿ `ಹೊಸದಾಗಿ ಏನ್ ಬರದ್ರಿ, ಏನ್ ಓದಿದ್ರಿ, ಹೆಂಗದೀರಿ’ ಅಂತ ಆತ್ಮೀಯವಾಗಿ ವಿಚಾರಿಸುವ ಸರಳ ವ್ಯಕ್ತಿತ್ವದ, ಹೆಸರಲ್ಲೆ ರೈತ ಪರಿವಾರದ `ಮೇಟಿ’ ಗುರುತು ಉಳಿಸಿಕೊಂಡ ವ್ಯಕ್ತಿಯೇ ಮೇಟಿ ಕೊಟ್ರಪ್ಪ.

ಹಗರಿಬೊಮ್ಮನಹಳ್ಳಿಯ ಹಿರಿಯ ಸಾಹಿತಿಗಳಾದ ಗುರುಮೂರ್ತಿ ಪೆಂಡಕೂರು ಅವರು ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಯುವಕ ಸಂಘದ ವತಿಯಿಂದ ಕೆ.ವಿರೂಪಾಕ್ಷಗೌಡರ ನೆನಪಿಗಾಗಿ ನೀಡಿರುವ ದತ್ತಿನಿಧಿಯ `ಜಾನಪದ ಲೋಕ’ ಪ್ರಶಸ್ತಿಯು ಈ ಬಾರಿ ಮೇಟಿ ಕೊಟ್ರಪ್ಪನನ್ನು ಹುಡುಕಿಕೊಂಡು ಬಂದಿದೆ. ಈ ನೆಪದಲ್ಲಿ ಲೋಕದ ಕಣ್ಣಿನಲ್ಲಿ ಕಳೆದುಹೋಗಬಹುದಾಗಿದ್ದ ಮೇಟಿ ಕೊಟ್ರಪ್ಪನಿಗೆ ಈ ಪ್ರಶಸ್ತಿ ಮತ್ತಷ್ಟು ಉತ್ಸಾಹದೊಂದಿಗೆ ಬದುಕುವ ಚೈತನ್ಯವನ್ನು ಇಮ್ಮಡಿಗೊಳಿಸಿದೆ. ಅಂತೆಯೇ ಬಳ್ಳಾರಿ ಜಿಲ್ಲೆಯ ಜಾನಪದ ಅಧ್ಯಯನಕ್ಕೆ ಕಾಣಿಕೆ ಕೊಟ್ಟ ಕೆ.ವಿರೂಪಾಕ್ಷಗೌಡರ ನೆನಪಿನ ಪ್ರಶಸ್ತಿಯ ಗೌರವವೂ ಹೆಚ್ಚಿದೆ.

ಈ ನೆಪದಲ್ಲಿ ಮೇಟಿ ಕೊಟ್ರಪ್ಪ ಅವರೊಂದಿಗೆ ಮಾತನಾಡಿದಾಗ ನೆನಪುಗಳನ್ನು ಮೆಲುಕುಹಾಕಿದರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ 1964 ರಿಂದಲೆ ಪದವಿ ಪ್ರಾರಂಭವಾಗಿತ್ತು. 1971 ರಲ್ಲಿ ಈ ಕಾಲೇಜಿಗೆ ಅಧ್ಯಾಪಕರಾಗಿ ಎಸ್.ಎಸ್.ಹಿರೇಮಠ ಅವರು ಬರುತ್ತಾರೆ. 1973 ರಲ್ಲಿ ಜಾನಪದ ವಿದ್ವಾಂಸರಾದ ಬಸವರಾಜ ಮಲಶೆಟ್ಟರೂ ಕಾಲೇಜಿನ ಪ್ರವೇಶಿಸುತ್ತಾರೆ. ಮೇಟಿ ಕೊಟ್ರಪ್ಪ ಅವರು 1974-75ರ ಸಾಲಿನ ಪದವಿ ವಿದ್ಯಾರ್ಥಿಯಾಗಿ ಬಸರಕೋಡಿನಿಂದ ಹೊಸಪೇಟೆಯ ಈ ಕಾಲೇಜಿಗೆ ಬರುತ್ತಾರೆ. ಆರಂಭಕ್ಕೆ ಎಡಪಂಥೀಯ ಆಲೋಚನೆಗಳಲ್ಲಿ ಆಳವಾದ ತಿಳಿವು ಮತ್ತು ಕಾಳಜಿ ಇದ್ದ ಎಸ್.ಎಸ್ ಹಿರೇಮಠರ ಪ್ರಭಾವಕ್ಕೆ ಕೊಟ್ರಪ್ಪ ಒಳಗಾಗುತ್ತಾರೆ. ಅಂತೆಯೇ ಬಸವರಾಜ ಮಲಶೆಟ್ಟರ ಪ್ರಭಾವದಿಂದ ಜಾನಪದ ಕ್ಷೇತ್ರದ ಬಗೆಗೂ ಆಸಕ್ತಿ ಮೊಳೆಯುತ್ತದೆ.

ಹೀಗೆ ಪದವಿ ಕಾಲೇಜಿನ ಇಬ್ಬರು ಕನ್ನಡ ಅಧ್ಯಾಪಕರ ಪ್ರಭಾವವು ಕೊಟ್ರಪ್ಪನ ಇಡೀ ಬದುಕಿನಲ್ಲಿ ಎರಡು ಕವಲುಗಳಾಗಿ ರೂಪುಗೊಳ್ಳುತ್ತವೆ. ಕೊಟ್ರಪ್ಪ ಪದವಿ ನಂತರ ತನ್ನೂರಿಗೆ ಮರಳಿದಾಗ ಎಸ್.ಎಸ್.ಹಿರೇಮಠರ ಪ್ರಭಾವ ಹೆಚ್ಚಾಗುತ್ತದೆ. ಹೀಗಾಗಿ ಎಂಬತ್ತರ ದಶಕದಲ್ಲಿ ಸಮುದಾಯಕ್ಕೆ ಬರುತ್ತಾರೆ. ಸಮುದಾಯದ ಜಾಥಾ, ನಾಟಕ ಮುಂತಾದ ಚಟುವಟಿಕೆಗಳಲ್ಲಿ ಕೊಟ್ರಪ್ಪ ಸಕ್ರಿಯರಾಗುತ್ತಾರೆ. ನಂತರ ಕಮ್ಯುನಿಸ್ಟ್ ಪಾರ್ಟಿ (ಎಂ) ಪ್ರಾಂತ ರೈತಸಂಘದ ಚಟುವಟಿಕೆಗಳನ್ನು ಆರಂಭಿಸುತ್ತದೆ. ಇದರ ಪರಿಣಾಮ 1986 ರಿಂದ 1996 ರವರೆಗೆ ಒಂದು ದಶಕದ ಕಾಲ ಸಿಪಿಐ (ಎಂ) ಪ್ರಾಂತ ರೈತಸಂಘದಲ್ಲಿ ಮೇಟಿ ಕೊಟ್ರಪ್ಪ ರೈತಪರವಾಗಿ ನಿಷ್ಠೆಯಿಂದ ದುಡಿಯುತ್ತಾರೆ. `ಈ ಭಾಗಕ್ಕೆ ಕಮ್ಯುನಿಸ್ಟ್ ಪಾರ್ಟಿ ಪರಿಚಯಿಸಿದ್ದೇ ನಾನು’ ಎಂದು ಕೊಟ್ರಪ್ಪ ನೆನಪಿಸಿಕೊಳ್ಳುತ್ತಾರೆ. 1990 ರ ಹೊತ್ತಿಗೆ ಸಾಹಿತ್ಯ ಒಲವು ಹೆಚ್ಚಾಗಿ `ಹಿಡಿದಿಟ್ಟಿದೆ ನೆನಪು’ ಮೊದಲ ಕವನ ಸಂಕಲನ ಪ್ರಕಟವಾಗುತ್ತದೆ.

ಕರ್ನಾಟಕದ ಜಾನಪದ ಪರಿಷತ್ತಿನ ಮೊದಲ ಟ್ರಸ್ಟಿಯ ಸದಸ್ಯರಲ್ಲಿ ಕೆ.ವಿರೂಪಾಕ್ಷಗೌಡರು ಸೇರ್ಪಡೆಗೊಳ್ಳುತ್ತಾರೆ. ಆಗಾಗಲೆ ಕೆ.ವಿರೂಪಾಕ್ಷಗೌಡರು, ಗುರುಮೂರ್ತಿ ಪೆಂಡಕೂರು, ಹುರಿಕಡ್ಲಿ ಶಿವಕುಮಾರ್ ಇವರೆಲ್ಲರ ಸಂಪರ್ಕ ಬಂದಾಗ ಕೊಟ್ರಪ್ಪ ಅವರಲ್ಲಿ ಬಸವರಾಜ ಮಲಶೆಟ್ಟರ ಪ್ರಭಾವ ಮೊಳಕೆಯೊಡೆಯುತ್ತದೆ. ಇಲ್ಲಿಂದ ಕೊಟ್ರಪ್ಪ ಜಾನಪದ ಚಟುವಟಿಕೆಗೆ ಹೊರಳುತ್ತಾರೆ. ಹಳ್ಳಿಹಳ್ಳಿಗಳಲ್ಲಿ ಜಾನಪದ ಸಂಗ್ರಹದಲ್ಲಿ ತೊಡಗುತ್ತಾರೆ. ಕೊಟ್ರಪ್ಪನ ಬಹುಪಾಲು ಸಂಗ್ರಹಗಳು ಕೆ.ವಿರೂಪಾಕ್ಷಗೌಡ ಮತ್ತು ಗುರುಮೂರ್ತಿ ಪೆಂಡಕೂರರ ಹೆಸರಲ್ಲಿ ಪುಸ್ತಕಗಳಾಗಿ ಪ್ರಕಟವಾದವು. ನಮ್ಮ ಸಂಗ್ರಹ ನಮ್ಮ ಹೆಸರಲ್ಲೇಕೆ ಪ್ರಕಟವಾಗುವುದಿಲ್ಲ ಎಂದಾಗ, ಕೆ.ವಿರೂಪಾಕ್ಷ ಗೌಡರ ಜತೆಯಲ್ಲಿ ಮೇಟಿ ಕೊಟ್ರಪ್ಪ ಅವರ ಸಂಪಾದನೆಯ `ನಡಿಯಪ್ಪ ನಮ್ಮ ನಾಡಿಗೆ’ ಡೊಳ್ಳಿನ ಹಾಡಿನ ಸಂಗ್ರಹ ಪ್ರಕಟವಾಗುತ್ತದೆ.

ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್. ರಾಜಪ್ಪ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗ ಜಿಲ್ಲೆಯಾದ್ಯಂತ ಕೊಟ್ರಪ್ಪ ತಿರುಗಾಡುತ್ತಾರೆ. ಆಗ `ಬಳ್ಳಾರಿ ಜಿಲ್ಲೆಯ ಜಾನಪದ ಗೀತೆಗಳು’ ಮತ್ತು `ಬಳ್ಳಾರಿ ಜಿಲ್ಲೆಯ ಜನಪದ ಕಥೆಗಳು’ ಎನ್ನುವ ಎರಡು ಪುಸ್ತಕಗಳು ಟಿ.ಎಸ್. ರಾಜಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತವೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಹೆಚ್.ಎ. ಕೃಷ್ಣಯ್ಯ ಈ ಭಾಗಕ್ಕೆ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗಲೂ ಕೊಟ್ರಪ್ಪ ನೆರವಾಗಿ, ಟೇಪ್‍ರೆಕಾರ್ಡರ್ ಮತ್ತು ಕ್ಯಾಮರಾ ಮುಂತಾದ ಎಲೆಕ್ಟ್ರಾನಿಕ್ ಪರಿಕರಗಳನ್ನು ಹೊತ್ತು ಓಡಾಡಿ ಸಂಗ್ರಹಕ್ಕೆ ನೆರವಾಗುತ್ತಾರೆ. ಕೃಷ್ಣಯ್ಯ ಅವರ ಹೆಸರಲ್ಲಿ `ಬಾಚಿಗೊಂಡನಹಳ್ಳಿ ಮತ್ತು ಏಣಿಗೆ ಬಸಾಪುರದ ಜನಪದ ಹಾಡುಗಳು’ಎನ್ನುವ ಪುಸ್ತಕ ಬರುತ್ತದೆ. ಕೊಟ್ರಪ್ಪ ಆಯಾ ಪುಸ್ತಕಗಳ ಕೃತಜ್ಞತೆಯ ಭಾಗದಲ್ಲಿ ನೆನಕೆಯ ಹೆಸರಾಗಿ ಉಳಿಯುತ್ತಾರೆ.

ಕೊಟ್ರಪ್ಪನ ಪಯಣ ಜಾನಪದ ಪರಿಷತ್ತಿನ ಜೊತೆಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೂ ವಿಸ್ತರಿಸುತ್ತದೆ. ಗುರುಮೂರ್ತಿ ಪೆಂಡಕೂರ್ ಕಸಾಪ ಅಧ್ಯಕ್ಷರಾದಾಗ ಕೊಟ್ರಪ್ಪ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. 1999 ರಿಂದ 2001 ಕನ್ನಡ ಸಾಹಿತ್ಯ ಪರಿಷತ್ತಿನ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಬಳ್ಳಾರಿ ಜಿಲ್ಲಾ ಕಸಾಪವನ್ನು ಕಟ್ಟಿ ಬೆಳೆಸುವಲ್ಲಿ ಕೊಟ್ರಪ್ಪನವರ ಶ್ರಮವನ್ನು ಅಲ್ಲಗಳೆಯುವಂತಿಲ್ಲ.

ಕೆ. ವಿರೂಪಾಕ್ಷ ಗೌಡರು ತೀರಿದ ಬಳಿಕ ಅವರ ಬಂಧುಬಳಗ, ಸ್ನೇಹಿತರು ಎಲ್ಲರಿಗೂ ಹೀಗೆ ಗೌಡರ ಹೆಸರಲ್ಲಿ ದತ್ತಿನಿಧಿ ಇಡಲು ಆರ್ಥಿಕಸಹಾಯ ಕೋರಿ ಪತ್ರ ಬರೆಯುತ್ತಾರೆ. ಈ ಪತ್ರಕ್ಕೆ ಸ್ಪಂದಿಸಿ ಕೊಟ್ಟ ಹಣ ಒಂದು ಲಕ್ಷ ರೂಪಾಯಿ ಆಗುತ್ತದೆ. ಈ ಹಣವನ್ನು ಪೆಂಡಕೂರು ಮತ್ತು ಕೊಟ್ರಪ್ಪ ಕೂಡಿಯೇ ಸಂಗ್ರಹಿಸಿದ್ದರೂ, ಈ ದತ್ತಿನಿಧಿ ಕೇವಲ ಪೆಂಡಕೂರು ಅವರ ಹೆಸರಲ್ಲಿ ನೊಂದಣಿಯಾಗುತ್ತದೆ. ಈ ಕಾರಣಕ್ಕೆ ಪೆಂಡಕೂರರೆ ಈ ಪ್ರಶಸ್ತಿಗಾಗಿ ಕಲಾವಿದರನ್ನು ಸೂಚಿಸುತ್ತಾರೆ. ಸ್ವತಃ ಕೊಟ್ರಪ್ಪನೇ ಅಂಕಲಿಯ ಜೋಗಿನ ಬಾಳಮ್ಮ, ಮರಿಯಮ್ಮನಹಳ್ಳಿಯ ರಾಮಕ್ಕ ಜೋಗತಿ, ಕ್ಯಾದಗಿಹಳ್ಳಿಯ ಹಂಬಮ್ಮ, ಧೂಪದ ಕೊಟ್ರಪ್ಪ, ಗೊಂದಲಿಗರ ರಾಮಣ್ಣನನ್ನು ಒಳಗೊಂಡಂತೆ ಎಂಟೆತ್ತು ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಗುರುಮೂರ್ತಿ ಪೆಂಡಕೂರರಿಗೆ ಸೂಚಿಸುತ್ತಾರೆ. ಹಾಗಾಗಿ ತನಗೆ ಬಂದಿರುವ ಈ ಪ್ರಶಸ್ತಿಯಲ್ಲೇನು ವಿಶೇಷವಿಲ್ಲ `ನಾವೇ ಸಂಗ್ರಹಿಸಿದ ದತ್ತಿನಿಧಿ ಆಗಿನ ಶ್ರಮಕ್ಕೆ ಪ್ರತಿಫಲವೆಂಬಂತೆ ಪ್ರಶಸ್ತಿರೂಪದಲ್ಲಿ ಮರಳಿ ನನಗೆ ಸಿಕ್ಕಿದೆ’ ಎಂದು ಕೊಟ್ರಪ್ಪ ನಗುತ್ತಾರೆ.

ಕೊಟ್ರಪ್ಪ ಮಾತನಾಡುತ್ತಾ, ಏಣಿಗೆ ಬಸಾಪುರದ ತಾರೆವ್ವ ಎನ್ನುವ ಹರಿಜನ ಕಲಾವಿದೆಯಿಂದ ಮೂರು ದಿನ ಹಾಡುವ ಕೋಮಾಲೆ ಸಂದನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಕೆಲವು ಜನಪದ ಕಲಾವಿದರಿಗೆ ಮಾಸಾಶನ ಕೊಡಿಸಲಾಗಲಿಲ್ಲ ಎನ್ನುವ ವಿಷಾದದ ಸಂಗತಿಯನ್ನು ನೋವಿನಿಂದ ಹೇಳುತ್ತಾರೆ. ಯಾವುದರಲ್ಲಿಯೂ ಗಟ್ಟಿಯಾಗಿ ನಿಲ್ಲದೆ ಎಲ್ಲಾ ಕಡೆಯೂ ಓಡಾಡಿಕೊಂಡಿದ್ದು ಕೊಟ್ರಪ್ಪ ಜೋಗಿ ಜಂಗಮನಂತಾದರು. ಈ ಓಡಾಟದಲ್ಲಿ ಮದುವೆಯಾಗುವುದನ್ನೂ ಮರೆತರು. ಇದೀಗ ಆರೋಗ್ಯ ಕೈಕೊಟ್ಟು ಮೊದಲಿನ ಉತ್ಸಾಹ ಉಳಿದಿಲ್ಲ. ಬಸರಕೋಡಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಾರೆ. ಸಾಹಿತ್ಯದ ಆಸಕ್ತಿಯ ಕಾರಣಕ್ಕೆ ಕೆಲಕಾಲ ಲಡಾಯಿ ಪ್ರಕಾಶನದ ಪುಸ್ತಕ ಮಾರಾಟದ ಕೂಲಿಯಾಗಿಯೂ ದುಡಿದರು. ಆರಂಭದಿಂದಲೂ ಮೇಟಿ ಕೊಟ್ರಪ್ಪ ಮತ್ತೊಬ್ಬರಿಗೆ ಬಳಕೆಯಾಗುತ್ತಲೆ ಬದುಕನ್ನು ಇತರರಿಗಾಗಿ ಸವೆಸಿದರು. ಈ ಇಳಿಗಾಲದ ಕಡುಕಷ್ಟದ ಸಂದರ್ಭದಲ್ಲಿ ಜಾನಪದ ಲೋಕಪ್ರಶಸ್ತಿಯ ಮೊತ್ತವೂ ಅವರಿಗೆ ಬಹಳ ಅಗತ್ಯವಾಗಿದೆ. ಅಂತೆಯೇ ಈ ಪ್ರಶಸ್ತಿ ಕೊಟ್ರಪ್ಪನ ಜೀವನೋತ್ಸಾಹವನ್ನು ಕಿಂಚಿತ್ತು ಹೆಚ್ಚಿಸಿ ಮತ್ತಷ್ಟು ಉತ್ಸಾಹ ತುಂಬಿಕೊಳ್ಳಲು ನೆರವಾಗಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...