Homeಅಂಕಣಗಳುಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

ಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

- Advertisement -
- Advertisement -

ಎಲೆಮರೆ-20

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು ಭಾಗದ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಒಬ್ಬ ಸರಳವಾದ ವ್ಯಕ್ತಿ ಹಾಜರಾಗುತ್ತಾರೆ. ಲುಂಗಿ ತೊಟ್ಟು, ಹೆಗಲಿಗೊಂದು ಟವಲ್ ಹಾಕಿ, ಬೆಳ್ಳಿ ಕೂದಲಿನಲ್ಲಿ ಮಿಂಚುವ ಕೋಲಿಗೆ ಬಟ್ಟೆ ತೊಡಿಸಿದಂತಹ ತೆಳ್ಳನೆಯ ದೇಹದ ಈ ವ್ಯಕ್ತಿ ಕಂಡವರನ್ನು ನಿಷ್ಕಲ್ಮಶವಾದ ನಗುವಿನೊಂದಿಗೆ ಮಾತನಾಡಿಸಿ `ಹೊಸದಾಗಿ ಏನ್ ಬರದ್ರಿ, ಏನ್ ಓದಿದ್ರಿ, ಹೆಂಗದೀರಿ’ ಅಂತ ಆತ್ಮೀಯವಾಗಿ ವಿಚಾರಿಸುವ ಸರಳ ವ್ಯಕ್ತಿತ್ವದ, ಹೆಸರಲ್ಲೆ ರೈತ ಪರಿವಾರದ `ಮೇಟಿ’ ಗುರುತು ಉಳಿಸಿಕೊಂಡ ವ್ಯಕ್ತಿಯೇ ಮೇಟಿ ಕೊಟ್ರಪ್ಪ.

ಹಗರಿಬೊಮ್ಮನಹಳ್ಳಿಯ ಹಿರಿಯ ಸಾಹಿತಿಗಳಾದ ಗುರುಮೂರ್ತಿ ಪೆಂಡಕೂರು ಅವರು ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಯುವಕ ಸಂಘದ ವತಿಯಿಂದ ಕೆ.ವಿರೂಪಾಕ್ಷಗೌಡರ ನೆನಪಿಗಾಗಿ ನೀಡಿರುವ ದತ್ತಿನಿಧಿಯ `ಜಾನಪದ ಲೋಕ’ ಪ್ರಶಸ್ತಿಯು ಈ ಬಾರಿ ಮೇಟಿ ಕೊಟ್ರಪ್ಪನನ್ನು ಹುಡುಕಿಕೊಂಡು ಬಂದಿದೆ. ಈ ನೆಪದಲ್ಲಿ ಲೋಕದ ಕಣ್ಣಿನಲ್ಲಿ ಕಳೆದುಹೋಗಬಹುದಾಗಿದ್ದ ಮೇಟಿ ಕೊಟ್ರಪ್ಪನಿಗೆ ಈ ಪ್ರಶಸ್ತಿ ಮತ್ತಷ್ಟು ಉತ್ಸಾಹದೊಂದಿಗೆ ಬದುಕುವ ಚೈತನ್ಯವನ್ನು ಇಮ್ಮಡಿಗೊಳಿಸಿದೆ. ಅಂತೆಯೇ ಬಳ್ಳಾರಿ ಜಿಲ್ಲೆಯ ಜಾನಪದ ಅಧ್ಯಯನಕ್ಕೆ ಕಾಣಿಕೆ ಕೊಟ್ಟ ಕೆ.ವಿರೂಪಾಕ್ಷಗೌಡರ ನೆನಪಿನ ಪ್ರಶಸ್ತಿಯ ಗೌರವವೂ ಹೆಚ್ಚಿದೆ.

ಈ ನೆಪದಲ್ಲಿ ಮೇಟಿ ಕೊಟ್ರಪ್ಪ ಅವರೊಂದಿಗೆ ಮಾತನಾಡಿದಾಗ ನೆನಪುಗಳನ್ನು ಮೆಲುಕುಹಾಕಿದರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ 1964 ರಿಂದಲೆ ಪದವಿ ಪ್ರಾರಂಭವಾಗಿತ್ತು. 1971 ರಲ್ಲಿ ಈ ಕಾಲೇಜಿಗೆ ಅಧ್ಯಾಪಕರಾಗಿ ಎಸ್.ಎಸ್.ಹಿರೇಮಠ ಅವರು ಬರುತ್ತಾರೆ. 1973 ರಲ್ಲಿ ಜಾನಪದ ವಿದ್ವಾಂಸರಾದ ಬಸವರಾಜ ಮಲಶೆಟ್ಟರೂ ಕಾಲೇಜಿನ ಪ್ರವೇಶಿಸುತ್ತಾರೆ. ಮೇಟಿ ಕೊಟ್ರಪ್ಪ ಅವರು 1974-75ರ ಸಾಲಿನ ಪದವಿ ವಿದ್ಯಾರ್ಥಿಯಾಗಿ ಬಸರಕೋಡಿನಿಂದ ಹೊಸಪೇಟೆಯ ಈ ಕಾಲೇಜಿಗೆ ಬರುತ್ತಾರೆ. ಆರಂಭಕ್ಕೆ ಎಡಪಂಥೀಯ ಆಲೋಚನೆಗಳಲ್ಲಿ ಆಳವಾದ ತಿಳಿವು ಮತ್ತು ಕಾಳಜಿ ಇದ್ದ ಎಸ್.ಎಸ್ ಹಿರೇಮಠರ ಪ್ರಭಾವಕ್ಕೆ ಕೊಟ್ರಪ್ಪ ಒಳಗಾಗುತ್ತಾರೆ. ಅಂತೆಯೇ ಬಸವರಾಜ ಮಲಶೆಟ್ಟರ ಪ್ರಭಾವದಿಂದ ಜಾನಪದ ಕ್ಷೇತ್ರದ ಬಗೆಗೂ ಆಸಕ್ತಿ ಮೊಳೆಯುತ್ತದೆ.

ಹೀಗೆ ಪದವಿ ಕಾಲೇಜಿನ ಇಬ್ಬರು ಕನ್ನಡ ಅಧ್ಯಾಪಕರ ಪ್ರಭಾವವು ಕೊಟ್ರಪ್ಪನ ಇಡೀ ಬದುಕಿನಲ್ಲಿ ಎರಡು ಕವಲುಗಳಾಗಿ ರೂಪುಗೊಳ್ಳುತ್ತವೆ. ಕೊಟ್ರಪ್ಪ ಪದವಿ ನಂತರ ತನ್ನೂರಿಗೆ ಮರಳಿದಾಗ ಎಸ್.ಎಸ್.ಹಿರೇಮಠರ ಪ್ರಭಾವ ಹೆಚ್ಚಾಗುತ್ತದೆ. ಹೀಗಾಗಿ ಎಂಬತ್ತರ ದಶಕದಲ್ಲಿ ಸಮುದಾಯಕ್ಕೆ ಬರುತ್ತಾರೆ. ಸಮುದಾಯದ ಜಾಥಾ, ನಾಟಕ ಮುಂತಾದ ಚಟುವಟಿಕೆಗಳಲ್ಲಿ ಕೊಟ್ರಪ್ಪ ಸಕ್ರಿಯರಾಗುತ್ತಾರೆ. ನಂತರ ಕಮ್ಯುನಿಸ್ಟ್ ಪಾರ್ಟಿ (ಎಂ) ಪ್ರಾಂತ ರೈತಸಂಘದ ಚಟುವಟಿಕೆಗಳನ್ನು ಆರಂಭಿಸುತ್ತದೆ. ಇದರ ಪರಿಣಾಮ 1986 ರಿಂದ 1996 ರವರೆಗೆ ಒಂದು ದಶಕದ ಕಾಲ ಸಿಪಿಐ (ಎಂ) ಪ್ರಾಂತ ರೈತಸಂಘದಲ್ಲಿ ಮೇಟಿ ಕೊಟ್ರಪ್ಪ ರೈತಪರವಾಗಿ ನಿಷ್ಠೆಯಿಂದ ದುಡಿಯುತ್ತಾರೆ. `ಈ ಭಾಗಕ್ಕೆ ಕಮ್ಯುನಿಸ್ಟ್ ಪಾರ್ಟಿ ಪರಿಚಯಿಸಿದ್ದೇ ನಾನು’ ಎಂದು ಕೊಟ್ರಪ್ಪ ನೆನಪಿಸಿಕೊಳ್ಳುತ್ತಾರೆ. 1990 ರ ಹೊತ್ತಿಗೆ ಸಾಹಿತ್ಯ ಒಲವು ಹೆಚ್ಚಾಗಿ `ಹಿಡಿದಿಟ್ಟಿದೆ ನೆನಪು’ ಮೊದಲ ಕವನ ಸಂಕಲನ ಪ್ರಕಟವಾಗುತ್ತದೆ.

ಕರ್ನಾಟಕದ ಜಾನಪದ ಪರಿಷತ್ತಿನ ಮೊದಲ ಟ್ರಸ್ಟಿಯ ಸದಸ್ಯರಲ್ಲಿ ಕೆ.ವಿರೂಪಾಕ್ಷಗೌಡರು ಸೇರ್ಪಡೆಗೊಳ್ಳುತ್ತಾರೆ. ಆಗಾಗಲೆ ಕೆ.ವಿರೂಪಾಕ್ಷಗೌಡರು, ಗುರುಮೂರ್ತಿ ಪೆಂಡಕೂರು, ಹುರಿಕಡ್ಲಿ ಶಿವಕುಮಾರ್ ಇವರೆಲ್ಲರ ಸಂಪರ್ಕ ಬಂದಾಗ ಕೊಟ್ರಪ್ಪ ಅವರಲ್ಲಿ ಬಸವರಾಜ ಮಲಶೆಟ್ಟರ ಪ್ರಭಾವ ಮೊಳಕೆಯೊಡೆಯುತ್ತದೆ. ಇಲ್ಲಿಂದ ಕೊಟ್ರಪ್ಪ ಜಾನಪದ ಚಟುವಟಿಕೆಗೆ ಹೊರಳುತ್ತಾರೆ. ಹಳ್ಳಿಹಳ್ಳಿಗಳಲ್ಲಿ ಜಾನಪದ ಸಂಗ್ರಹದಲ್ಲಿ ತೊಡಗುತ್ತಾರೆ. ಕೊಟ್ರಪ್ಪನ ಬಹುಪಾಲು ಸಂಗ್ರಹಗಳು ಕೆ.ವಿರೂಪಾಕ್ಷಗೌಡ ಮತ್ತು ಗುರುಮೂರ್ತಿ ಪೆಂಡಕೂರರ ಹೆಸರಲ್ಲಿ ಪುಸ್ತಕಗಳಾಗಿ ಪ್ರಕಟವಾದವು. ನಮ್ಮ ಸಂಗ್ರಹ ನಮ್ಮ ಹೆಸರಲ್ಲೇಕೆ ಪ್ರಕಟವಾಗುವುದಿಲ್ಲ ಎಂದಾಗ, ಕೆ.ವಿರೂಪಾಕ್ಷ ಗೌಡರ ಜತೆಯಲ್ಲಿ ಮೇಟಿ ಕೊಟ್ರಪ್ಪ ಅವರ ಸಂಪಾದನೆಯ `ನಡಿಯಪ್ಪ ನಮ್ಮ ನಾಡಿಗೆ’ ಡೊಳ್ಳಿನ ಹಾಡಿನ ಸಂಗ್ರಹ ಪ್ರಕಟವಾಗುತ್ತದೆ.

ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್. ರಾಜಪ್ಪ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗ ಜಿಲ್ಲೆಯಾದ್ಯಂತ ಕೊಟ್ರಪ್ಪ ತಿರುಗಾಡುತ್ತಾರೆ. ಆಗ `ಬಳ್ಳಾರಿ ಜಿಲ್ಲೆಯ ಜಾನಪದ ಗೀತೆಗಳು’ ಮತ್ತು `ಬಳ್ಳಾರಿ ಜಿಲ್ಲೆಯ ಜನಪದ ಕಥೆಗಳು’ ಎನ್ನುವ ಎರಡು ಪುಸ್ತಕಗಳು ಟಿ.ಎಸ್. ರಾಜಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತವೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಹೆಚ್.ಎ. ಕೃಷ್ಣಯ್ಯ ಈ ಭಾಗಕ್ಕೆ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗಲೂ ಕೊಟ್ರಪ್ಪ ನೆರವಾಗಿ, ಟೇಪ್‍ರೆಕಾರ್ಡರ್ ಮತ್ತು ಕ್ಯಾಮರಾ ಮುಂತಾದ ಎಲೆಕ್ಟ್ರಾನಿಕ್ ಪರಿಕರಗಳನ್ನು ಹೊತ್ತು ಓಡಾಡಿ ಸಂಗ್ರಹಕ್ಕೆ ನೆರವಾಗುತ್ತಾರೆ. ಕೃಷ್ಣಯ್ಯ ಅವರ ಹೆಸರಲ್ಲಿ `ಬಾಚಿಗೊಂಡನಹಳ್ಳಿ ಮತ್ತು ಏಣಿಗೆ ಬಸಾಪುರದ ಜನಪದ ಹಾಡುಗಳು’ಎನ್ನುವ ಪುಸ್ತಕ ಬರುತ್ತದೆ. ಕೊಟ್ರಪ್ಪ ಆಯಾ ಪುಸ್ತಕಗಳ ಕೃತಜ್ಞತೆಯ ಭಾಗದಲ್ಲಿ ನೆನಕೆಯ ಹೆಸರಾಗಿ ಉಳಿಯುತ್ತಾರೆ.

ಕೊಟ್ರಪ್ಪನ ಪಯಣ ಜಾನಪದ ಪರಿಷತ್ತಿನ ಜೊತೆಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೂ ವಿಸ್ತರಿಸುತ್ತದೆ. ಗುರುಮೂರ್ತಿ ಪೆಂಡಕೂರ್ ಕಸಾಪ ಅಧ್ಯಕ್ಷರಾದಾಗ ಕೊಟ್ರಪ್ಪ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. 1999 ರಿಂದ 2001 ಕನ್ನಡ ಸಾಹಿತ್ಯ ಪರಿಷತ್ತಿನ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಬಳ್ಳಾರಿ ಜಿಲ್ಲಾ ಕಸಾಪವನ್ನು ಕಟ್ಟಿ ಬೆಳೆಸುವಲ್ಲಿ ಕೊಟ್ರಪ್ಪನವರ ಶ್ರಮವನ್ನು ಅಲ್ಲಗಳೆಯುವಂತಿಲ್ಲ.

ಕೆ. ವಿರೂಪಾಕ್ಷ ಗೌಡರು ತೀರಿದ ಬಳಿಕ ಅವರ ಬಂಧುಬಳಗ, ಸ್ನೇಹಿತರು ಎಲ್ಲರಿಗೂ ಹೀಗೆ ಗೌಡರ ಹೆಸರಲ್ಲಿ ದತ್ತಿನಿಧಿ ಇಡಲು ಆರ್ಥಿಕಸಹಾಯ ಕೋರಿ ಪತ್ರ ಬರೆಯುತ್ತಾರೆ. ಈ ಪತ್ರಕ್ಕೆ ಸ್ಪಂದಿಸಿ ಕೊಟ್ಟ ಹಣ ಒಂದು ಲಕ್ಷ ರೂಪಾಯಿ ಆಗುತ್ತದೆ. ಈ ಹಣವನ್ನು ಪೆಂಡಕೂರು ಮತ್ತು ಕೊಟ್ರಪ್ಪ ಕೂಡಿಯೇ ಸಂಗ್ರಹಿಸಿದ್ದರೂ, ಈ ದತ್ತಿನಿಧಿ ಕೇವಲ ಪೆಂಡಕೂರು ಅವರ ಹೆಸರಲ್ಲಿ ನೊಂದಣಿಯಾಗುತ್ತದೆ. ಈ ಕಾರಣಕ್ಕೆ ಪೆಂಡಕೂರರೆ ಈ ಪ್ರಶಸ್ತಿಗಾಗಿ ಕಲಾವಿದರನ್ನು ಸೂಚಿಸುತ್ತಾರೆ. ಸ್ವತಃ ಕೊಟ್ರಪ್ಪನೇ ಅಂಕಲಿಯ ಜೋಗಿನ ಬಾಳಮ್ಮ, ಮರಿಯಮ್ಮನಹಳ್ಳಿಯ ರಾಮಕ್ಕ ಜೋಗತಿ, ಕ್ಯಾದಗಿಹಳ್ಳಿಯ ಹಂಬಮ್ಮ, ಧೂಪದ ಕೊಟ್ರಪ್ಪ, ಗೊಂದಲಿಗರ ರಾಮಣ್ಣನನ್ನು ಒಳಗೊಂಡಂತೆ ಎಂಟೆತ್ತು ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಗುರುಮೂರ್ತಿ ಪೆಂಡಕೂರರಿಗೆ ಸೂಚಿಸುತ್ತಾರೆ. ಹಾಗಾಗಿ ತನಗೆ ಬಂದಿರುವ ಈ ಪ್ರಶಸ್ತಿಯಲ್ಲೇನು ವಿಶೇಷವಿಲ್ಲ `ನಾವೇ ಸಂಗ್ರಹಿಸಿದ ದತ್ತಿನಿಧಿ ಆಗಿನ ಶ್ರಮಕ್ಕೆ ಪ್ರತಿಫಲವೆಂಬಂತೆ ಪ್ರಶಸ್ತಿರೂಪದಲ್ಲಿ ಮರಳಿ ನನಗೆ ಸಿಕ್ಕಿದೆ’ ಎಂದು ಕೊಟ್ರಪ್ಪ ನಗುತ್ತಾರೆ.

ಕೊಟ್ರಪ್ಪ ಮಾತನಾಡುತ್ತಾ, ಏಣಿಗೆ ಬಸಾಪುರದ ತಾರೆವ್ವ ಎನ್ನುವ ಹರಿಜನ ಕಲಾವಿದೆಯಿಂದ ಮೂರು ದಿನ ಹಾಡುವ ಕೋಮಾಲೆ ಸಂದನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಕೆಲವು ಜನಪದ ಕಲಾವಿದರಿಗೆ ಮಾಸಾಶನ ಕೊಡಿಸಲಾಗಲಿಲ್ಲ ಎನ್ನುವ ವಿಷಾದದ ಸಂಗತಿಯನ್ನು ನೋವಿನಿಂದ ಹೇಳುತ್ತಾರೆ. ಯಾವುದರಲ್ಲಿಯೂ ಗಟ್ಟಿಯಾಗಿ ನಿಲ್ಲದೆ ಎಲ್ಲಾ ಕಡೆಯೂ ಓಡಾಡಿಕೊಂಡಿದ್ದು ಕೊಟ್ರಪ್ಪ ಜೋಗಿ ಜಂಗಮನಂತಾದರು. ಈ ಓಡಾಟದಲ್ಲಿ ಮದುವೆಯಾಗುವುದನ್ನೂ ಮರೆತರು. ಇದೀಗ ಆರೋಗ್ಯ ಕೈಕೊಟ್ಟು ಮೊದಲಿನ ಉತ್ಸಾಹ ಉಳಿದಿಲ್ಲ. ಬಸರಕೋಡಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಾರೆ. ಸಾಹಿತ್ಯದ ಆಸಕ್ತಿಯ ಕಾರಣಕ್ಕೆ ಕೆಲಕಾಲ ಲಡಾಯಿ ಪ್ರಕಾಶನದ ಪುಸ್ತಕ ಮಾರಾಟದ ಕೂಲಿಯಾಗಿಯೂ ದುಡಿದರು. ಆರಂಭದಿಂದಲೂ ಮೇಟಿ ಕೊಟ್ರಪ್ಪ ಮತ್ತೊಬ್ಬರಿಗೆ ಬಳಕೆಯಾಗುತ್ತಲೆ ಬದುಕನ್ನು ಇತರರಿಗಾಗಿ ಸವೆಸಿದರು. ಈ ಇಳಿಗಾಲದ ಕಡುಕಷ್ಟದ ಸಂದರ್ಭದಲ್ಲಿ ಜಾನಪದ ಲೋಕಪ್ರಶಸ್ತಿಯ ಮೊತ್ತವೂ ಅವರಿಗೆ ಬಹಳ ಅಗತ್ಯವಾಗಿದೆ. ಅಂತೆಯೇ ಈ ಪ್ರಶಸ್ತಿ ಕೊಟ್ರಪ್ಪನ ಜೀವನೋತ್ಸಾಹವನ್ನು ಕಿಂಚಿತ್ತು ಹೆಚ್ಚಿಸಿ ಮತ್ತಷ್ಟು ಉತ್ಸಾಹ ತುಂಬಿಕೊಳ್ಳಲು ನೆರವಾಗಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...