Homeಮುಖಪುಟಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

ಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

- Advertisement -
- Advertisement -

ಮೋದಿ ಸರ್ಕಾರವು ಇಸ್ರೇಲಿನ Pegasus ಸೈಬರ್ ಗೂಢಚರ್ಯೆ ಉಪಕರಣವನ್ನು ಬಳಸಿಕೊಂಡು ಭಾರತೀಯ ಪತ್ರಕರ್ತರ ಮೇಲೆ, ವಿರೋಧ ಪಕ್ಷಗಳಮೇಲೆ ಹಾಗು ಸರ್ಕಾರದ ಬೆದರಿಕೆಗೆ ಬಗ್ಗದ ಅಧಿಕಾರಿಗಳು ಮತ್ತು ವಿದ್ವಾಂಸರ ಮೇಲೆ ಹಲವಾರು ವರ್ಷಗಳಿಂದ ಗೂಢಚರ್ಯೆ ಮಾಡುತ್ತಿರುವುದು ಇದೀಗ ಬಯಲಾಗಿಯಷ್ಟೇ..

ಆದರೇನಂತೆ… ಮೋದಿ ಸರ್ಕಾರ ಮಾಮೂಲಿನಂತೆ ಇವೆಲ್ಲಾ ವಿದೇಶಿ ಶಕ್ತಿಗಳ ಜೊತೆಸೇರಿ ಸ್ಥಳೀಯ ವಿರೋಧ ಪಕ್ಷಗಳು ದೇಶದ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂಬ ಕ್ರೋನಾಲಜಿ ಕಟ್ಟುತ್ತಿದೆ…

ಅಮಿತ್ ಷಾ ಅವರಂತೂ, ಈ ಭಾರತದ ಸಂಸತ್ತು ಸಮಾವೇಶಗೊಳ್ಳುವ ಹಿಂದಿನ ದಿನವೇ ಈ ವರದಿ ಬಿಡುಗಡೆಯಾಗಿರುವ ಹಿಂದಿನ ಕ್ರೋನಾಲಜಿ ಅರ್ಥಮಾಡಿಕೊಳ್ಳಿ ಎಂದು ಸಂಚು ಕಥನ ಹೆಣೆಯಲು ಮುಂದಾಗಿದ್ದಾರೆ…

ಗೃಹಮಂತ್ರಿಗಳು ಇಷ್ಟೆಲ್ಲಾ ಹೇಳಿದ ಮೇಲೆ ಅಸಲೀ ಕ್ರೋನಾಲಜಿಯನ್ನೇ ನೋಡಿಬಿಡೋಣ …

ಗೃಹಮಂತ್ರಿಗಳೇ … ಕ್ರೋನಾಲಜಿ ಹೀಗಿದೆ:

– ಮೊದಲನೆಯದಾಗಿ ಈ ಜಗತ್ತಿನ ಹತ್ತು ದೇಶಗಳ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿದ ಈ ತನಿಖಾ ವರದಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಜುಲೈ 18 ರಂದು ಬಿಡುಗಡೆಯಾಗಿದೆ.

ಮತ್ತು ಇದು ಭಾರತವನ್ನು ಒಳಗೊಂಡಂತೆ ಇತರ ಹತ್ತು ದೇಶಗಳ ಸರ್ಕಾರ ಗಳು ಪೆಗಾಸಸ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬ ವಿವರಗಳನ್ನು ಕೊಡುತ್ತದೆ. ಕೇವಲ ಭಾರತದ್ದಲ್ಲ…

ಈ ವರದಿಯ ಪ್ರಾಥಮಿಕ ಕಂತು ಸ್ಪಷ್ಟಪಡಿಸುತ್ತಿರುವಂತೆ ಪೆಗಾಸಸ್ ಬಳಿ ಜಗತ್ತಿನ 20 ಬೇರೆಬೇರೆ ದೇಶಗಳಲ್ಲಿ ವಾಸವಾಗಿರುವ 50,000 ಜನರ ಫೋನ್ ನಂಬರ್ಗಳು ಉದ್ದೇಶಿತ ಗೂಢಚರ್ಯೆ ಪಟ್ಟಿಯಲ್ಲಿತ್ತು.

ಅದರಲ್ಲಿ 1000 ನಂಬರ್ ಗಳು ಭಾರತಕ್ಕೆ ಸೇರಿದ್ದವಾಗಿದ್ದರೆ 15,000 ಮೆಕ್ಸಿಕೋಗೆ ಸೇರಿದ್ದವು. ಮೆಕ್ಸಿಕೋಗೆ ಸಂಬಂಧಪಟ್ಟ ವಿವರಗಳು ಸಹಾ ಜುಲೈ 18ರಂದೇ ಜಾಗತೀಕವಾಗಿ ಬಿಡುಗಡೆಯಾಗಿದೆ.

ಹಾಗೆಯೇ ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ ಇನ್ನಿತರ ಹತ್ತು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಹೇಗೆ ತನ್ನ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಈ ವರದಿ ಬಯಲು ಮಾಡಿದೆ.

ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಸಂಸತ್ ಅಧಿವೇಶನ ಇರಲಿಲ್ಲ… ಜಗತ್ತು ಎಂದರೆ ಭಾರತವೇ ಅಲ್ಲ ಅಲ್ಲವೇ ಗೃಹ ಮಂತ್ರಿಗಳೇ..??

– ಇನ್ನು ಕೆಲವು ಅಸಲಿ ಕ್ರೋನಾಲಜಿಗಳು ಹೀಗಿವೆ..:

– ಸೌದಿ ಅರೇಬಿಯಾದ ಸಾಮ್ರಾಟರಿಗೆ ತಲೆನೋವಾಗಿದ್ದ ಜಮಾಲ್ ಕಶೊಗಿ ಎಂಬ ಪತ್ರಕರ್ತನ ಪ್ರೇಯಸಿಯ ಫೋನಿನಲ್ಲಿ ಪೆಗಾಸಸ್ ಸ್ಪೈವೇರ್ ಕೂಡಿಸಿದ ನಾಲ್ಕೇ ದಿನಗಳಲ್ಲಿ ಕಶೋಗಿ ಟರ್ಕಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ 2018ರ ಅಕ್ಟೊಬರ್ ನಲ್ಲಿ ಹೆಣವಾಗುತ್ತಾನೆ..
ಇದು ಅಸಲಿ ಕ್ರೋನಾಲಜಿ

– ಮೆಕ್ಸಿಕೋದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಮೆಕ್ಸಿಕೋದ ಬೀದಿಯಲ್ಲಿ ಕೊಲೆಯಾಗಿದ್ದ. ಕಾರಣ ಆಡಳಿತಾರೂಢ ಸರ್ಕಾರಕ್ಕೂ ಡ್ರಗ್ ಮಾಫಿಯಾಗಳಿಗೂ ಇದ್ದ ಸಂಬಂಧಗಳ ಬಗ್ಗೆ ಆತ ಬರೆಯಲು ಶುರು ಮಾಡಿದ್ದ. ಮರು ವರ್ಷ ಚುನಾವಣೆಯಿತ್ತು. ಆತನು ಸಾಯುವ ಕೆಲವು ವಾರಗಳ ಮುನ್ನ ಆತನ ಫೋನಿನಲ್ಲಿ, ಹಾಗೂ ಆತನ ಆಪ್ತರ ಫೋನುಗಳಲ್ಲಿ ಪೆಗಾಸಸ್ ಸ್ಪೈವೇರ್ ಸ್ಥಾಪಿಸಲಾಗಿತ್ತು. ಇದು ಅಸಲಿ ಕ್ರೋನಾಲಜಿ

– ಭಾರತದಲ್ಲಿ…

– indian Express ನ ಸುಶಾಂತ್ ಸಿಂಗ್ ಅವರು 2017 ರಿಂದ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ತನಿಖಾ ಲೇಖನ ಬರೆಯಲು ಪ್ರಾರಂಭಿಸುತ್ತಾರೆ. 2018ರ ಪ್ರಾರಂಭದಿಂದಲೇ ಅವರ ಫೋನಿನಲ್ಲಿ ಪೆಗಾಸಸ್ ಪತ್ತೆಯಾಗಿದೆ.

– 2019ರ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸಾ ಅವರು ಮೋದಿಯವರ ಚುನಾವಣಾ ಭಾಷಣಗಳ ಬಗೆ ತೀವ್ರವಾದ ತಕರಾರು ಎತ್ತುತ್ತಾರೆ. ಅದರ ಮರು ತಿಂಗಳಿಂದಲೇ ಅವರ ಹೆಸರು ಪೆಗಾಸಸ್ ನ ಸಂಭಾವ್ಯ ಗೂಢಚರ್ಯೆ ಪಟ್ಟಿ ಸೇರಿಕೊಳ್ಳುತ್ತದೆ.

– ಮೋದಿ ಕ್ಯಾಬಿನೆಟ್ಟಿನ ಹಾಲಿ ಮಂತ್ರಿ ಒರಿಸ್ಸಾದ ಅಷ್ವಿನಿ ವೈಷ್ಣವ್ ಅವರು ಅಧಿಕಾರಿಯಾಗಿದ್ದಾಗ ವಾಜಪೇಯಿಯವರ ಆಪ್ತ ಸಹಾಯಕನಾಗಿದ್ದರೂ ಬಿಜು ಜನತಾ ದಾಳಕ್ಕೆ ಆಪ್ತರಾಗಿದ್ದವರು. 2017ರಿಂದಲೇ ಅವರ ಫೋನ್ ನಂಬರ್ ಸಂಭಾವ್ಯ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾದ ಮರುವರ್ಷದಲ್ಲೆ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ.

-ಮಾಜಿ ಮುಖ್ಯ ನ್ಯಾಯಾಧೀಶ ಹಾಲಿ ಬಿಜೆಪಿ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ರಂಜನ್ ಗೊಗೋಯ್ ಅವರು ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಮರು ವಾರದಿಂದಲೇ ಆಕೆಯ ಹಾಗೂ ಆಕೆಯ ಸಂಬಂಧಿಕರ ಹೆಸರುಗಳು ಪೆಗಾಸಸ್ ಪಟ್ಟಿ ಸೇರಿಕೊಳ್ಳುತ್ತದೆ.

ಆ ನಂತರ ಗೊಗೋಯ್ ಕೊಟ್ಟ ತೀರ್ಪು ಗಳೆಲ್ಲ ಮೋದಿ ಸರ್ಕಾರದ ಪರವೇ.

ಈ ಕ್ರೋನಾಲಜಿಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಅಮಿತ್ ಷಾ ಅವರೇ?????

  • ಶಿವಸುಂದರ್‌

ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...