Homeಮುಖಪುಟಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

ಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

- Advertisement -
- Advertisement -

ಮೋದಿ ಸರ್ಕಾರವು ಇಸ್ರೇಲಿನ Pegasus ಸೈಬರ್ ಗೂಢಚರ್ಯೆ ಉಪಕರಣವನ್ನು ಬಳಸಿಕೊಂಡು ಭಾರತೀಯ ಪತ್ರಕರ್ತರ ಮೇಲೆ, ವಿರೋಧ ಪಕ್ಷಗಳಮೇಲೆ ಹಾಗು ಸರ್ಕಾರದ ಬೆದರಿಕೆಗೆ ಬಗ್ಗದ ಅಧಿಕಾರಿಗಳು ಮತ್ತು ವಿದ್ವಾಂಸರ ಮೇಲೆ ಹಲವಾರು ವರ್ಷಗಳಿಂದ ಗೂಢಚರ್ಯೆ ಮಾಡುತ್ತಿರುವುದು ಇದೀಗ ಬಯಲಾಗಿಯಷ್ಟೇ..

ಆದರೇನಂತೆ… ಮೋದಿ ಸರ್ಕಾರ ಮಾಮೂಲಿನಂತೆ ಇವೆಲ್ಲಾ ವಿದೇಶಿ ಶಕ್ತಿಗಳ ಜೊತೆಸೇರಿ ಸ್ಥಳೀಯ ವಿರೋಧ ಪಕ್ಷಗಳು ದೇಶದ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂಬ ಕ್ರೋನಾಲಜಿ ಕಟ್ಟುತ್ತಿದೆ…

ಅಮಿತ್ ಷಾ ಅವರಂತೂ, ಈ ಭಾರತದ ಸಂಸತ್ತು ಸಮಾವೇಶಗೊಳ್ಳುವ ಹಿಂದಿನ ದಿನವೇ ಈ ವರದಿ ಬಿಡುಗಡೆಯಾಗಿರುವ ಹಿಂದಿನ ಕ್ರೋನಾಲಜಿ ಅರ್ಥಮಾಡಿಕೊಳ್ಳಿ ಎಂದು ಸಂಚು ಕಥನ ಹೆಣೆಯಲು ಮುಂದಾಗಿದ್ದಾರೆ…

ಗೃಹಮಂತ್ರಿಗಳು ಇಷ್ಟೆಲ್ಲಾ ಹೇಳಿದ ಮೇಲೆ ಅಸಲೀ ಕ್ರೋನಾಲಜಿಯನ್ನೇ ನೋಡಿಬಿಡೋಣ …

ಗೃಹಮಂತ್ರಿಗಳೇ … ಕ್ರೋನಾಲಜಿ ಹೀಗಿದೆ:

– ಮೊದಲನೆಯದಾಗಿ ಈ ಜಗತ್ತಿನ ಹತ್ತು ದೇಶಗಳ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿದ ಈ ತನಿಖಾ ವರದಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಜುಲೈ 18 ರಂದು ಬಿಡುಗಡೆಯಾಗಿದೆ.

ಮತ್ತು ಇದು ಭಾರತವನ್ನು ಒಳಗೊಂಡಂತೆ ಇತರ ಹತ್ತು ದೇಶಗಳ ಸರ್ಕಾರ ಗಳು ಪೆಗಾಸಸ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬ ವಿವರಗಳನ್ನು ಕೊಡುತ್ತದೆ. ಕೇವಲ ಭಾರತದ್ದಲ್ಲ…

ಈ ವರದಿಯ ಪ್ರಾಥಮಿಕ ಕಂತು ಸ್ಪಷ್ಟಪಡಿಸುತ್ತಿರುವಂತೆ ಪೆಗಾಸಸ್ ಬಳಿ ಜಗತ್ತಿನ 20 ಬೇರೆಬೇರೆ ದೇಶಗಳಲ್ಲಿ ವಾಸವಾಗಿರುವ 50,000 ಜನರ ಫೋನ್ ನಂಬರ್ಗಳು ಉದ್ದೇಶಿತ ಗೂಢಚರ್ಯೆ ಪಟ್ಟಿಯಲ್ಲಿತ್ತು.

ಅದರಲ್ಲಿ 1000 ನಂಬರ್ ಗಳು ಭಾರತಕ್ಕೆ ಸೇರಿದ್ದವಾಗಿದ್ದರೆ 15,000 ಮೆಕ್ಸಿಕೋಗೆ ಸೇರಿದ್ದವು. ಮೆಕ್ಸಿಕೋಗೆ ಸಂಬಂಧಪಟ್ಟ ವಿವರಗಳು ಸಹಾ ಜುಲೈ 18ರಂದೇ ಜಾಗತೀಕವಾಗಿ ಬಿಡುಗಡೆಯಾಗಿದೆ.

ಹಾಗೆಯೇ ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ ಇನ್ನಿತರ ಹತ್ತು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಹೇಗೆ ತನ್ನ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಈ ವರದಿ ಬಯಲು ಮಾಡಿದೆ.

ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಸಂಸತ್ ಅಧಿವೇಶನ ಇರಲಿಲ್ಲ… ಜಗತ್ತು ಎಂದರೆ ಭಾರತವೇ ಅಲ್ಲ ಅಲ್ಲವೇ ಗೃಹ ಮಂತ್ರಿಗಳೇ..??

– ಇನ್ನು ಕೆಲವು ಅಸಲಿ ಕ್ರೋನಾಲಜಿಗಳು ಹೀಗಿವೆ..:

– ಸೌದಿ ಅರೇಬಿಯಾದ ಸಾಮ್ರಾಟರಿಗೆ ತಲೆನೋವಾಗಿದ್ದ ಜಮಾಲ್ ಕಶೊಗಿ ಎಂಬ ಪತ್ರಕರ್ತನ ಪ್ರೇಯಸಿಯ ಫೋನಿನಲ್ಲಿ ಪೆಗಾಸಸ್ ಸ್ಪೈವೇರ್ ಕೂಡಿಸಿದ ನಾಲ್ಕೇ ದಿನಗಳಲ್ಲಿ ಕಶೋಗಿ ಟರ್ಕಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ 2018ರ ಅಕ್ಟೊಬರ್ ನಲ್ಲಿ ಹೆಣವಾಗುತ್ತಾನೆ..
ಇದು ಅಸಲಿ ಕ್ರೋನಾಲಜಿ

– ಮೆಕ್ಸಿಕೋದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಮೆಕ್ಸಿಕೋದ ಬೀದಿಯಲ್ಲಿ ಕೊಲೆಯಾಗಿದ್ದ. ಕಾರಣ ಆಡಳಿತಾರೂಢ ಸರ್ಕಾರಕ್ಕೂ ಡ್ರಗ್ ಮಾಫಿಯಾಗಳಿಗೂ ಇದ್ದ ಸಂಬಂಧಗಳ ಬಗ್ಗೆ ಆತ ಬರೆಯಲು ಶುರು ಮಾಡಿದ್ದ. ಮರು ವರ್ಷ ಚುನಾವಣೆಯಿತ್ತು. ಆತನು ಸಾಯುವ ಕೆಲವು ವಾರಗಳ ಮುನ್ನ ಆತನ ಫೋನಿನಲ್ಲಿ, ಹಾಗೂ ಆತನ ಆಪ್ತರ ಫೋನುಗಳಲ್ಲಿ ಪೆಗಾಸಸ್ ಸ್ಪೈವೇರ್ ಸ್ಥಾಪಿಸಲಾಗಿತ್ತು. ಇದು ಅಸಲಿ ಕ್ರೋನಾಲಜಿ

– ಭಾರತದಲ್ಲಿ…

– indian Express ನ ಸುಶಾಂತ್ ಸಿಂಗ್ ಅವರು 2017 ರಿಂದ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ತನಿಖಾ ಲೇಖನ ಬರೆಯಲು ಪ್ರಾರಂಭಿಸುತ್ತಾರೆ. 2018ರ ಪ್ರಾರಂಭದಿಂದಲೇ ಅವರ ಫೋನಿನಲ್ಲಿ ಪೆಗಾಸಸ್ ಪತ್ತೆಯಾಗಿದೆ.

– 2019ರ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸಾ ಅವರು ಮೋದಿಯವರ ಚುನಾವಣಾ ಭಾಷಣಗಳ ಬಗೆ ತೀವ್ರವಾದ ತಕರಾರು ಎತ್ತುತ್ತಾರೆ. ಅದರ ಮರು ತಿಂಗಳಿಂದಲೇ ಅವರ ಹೆಸರು ಪೆಗಾಸಸ್ ನ ಸಂಭಾವ್ಯ ಗೂಢಚರ್ಯೆ ಪಟ್ಟಿ ಸೇರಿಕೊಳ್ಳುತ್ತದೆ.

– ಮೋದಿ ಕ್ಯಾಬಿನೆಟ್ಟಿನ ಹಾಲಿ ಮಂತ್ರಿ ಒರಿಸ್ಸಾದ ಅಷ್ವಿನಿ ವೈಷ್ಣವ್ ಅವರು ಅಧಿಕಾರಿಯಾಗಿದ್ದಾಗ ವಾಜಪೇಯಿಯವರ ಆಪ್ತ ಸಹಾಯಕನಾಗಿದ್ದರೂ ಬಿಜು ಜನತಾ ದಾಳಕ್ಕೆ ಆಪ್ತರಾಗಿದ್ದವರು. 2017ರಿಂದಲೇ ಅವರ ಫೋನ್ ನಂಬರ್ ಸಂಭಾವ್ಯ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾದ ಮರುವರ್ಷದಲ್ಲೆ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ.

-ಮಾಜಿ ಮುಖ್ಯ ನ್ಯಾಯಾಧೀಶ ಹಾಲಿ ಬಿಜೆಪಿ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ರಂಜನ್ ಗೊಗೋಯ್ ಅವರು ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಮರು ವಾರದಿಂದಲೇ ಆಕೆಯ ಹಾಗೂ ಆಕೆಯ ಸಂಬಂಧಿಕರ ಹೆಸರುಗಳು ಪೆಗಾಸಸ್ ಪಟ್ಟಿ ಸೇರಿಕೊಳ್ಳುತ್ತದೆ.

ಆ ನಂತರ ಗೊಗೋಯ್ ಕೊಟ್ಟ ತೀರ್ಪು ಗಳೆಲ್ಲ ಮೋದಿ ಸರ್ಕಾರದ ಪರವೇ.

ಈ ಕ್ರೋನಾಲಜಿಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಅಮಿತ್ ಷಾ ಅವರೇ?????

  • ಶಿವಸುಂದರ್‌

ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...