Homeಮುಖಪುಟಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು.

- Advertisement -
- Advertisement -

| ಹುಲಿಕುಂಟೆ ಮೂರ್ತಿ |

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು.

ದು.ಸರಸ್ವತಿ ಅಕ್ಕನ ‘ಜೀವಸಂಪಿಗೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪದ್ಯ ಓದಬೇಕಿತ್ತು. ಪದ್ಯ ಓದುವ ಮೊದಲು ‘ನಾನು ಕವಿಯಲ್ಲ’ ಅಂದು ‘ಎಬಿಸಿಡಿ ಎಂದರೆ..’ ಪದ್ಯ ಓದಿದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯನವರು ‘ಕವಿಯಲ್ಲ ಅಂತನೇ ಒಳ್ಳೇ ಪದ್ಯ ಓದ್ದಲ್ಲೋ’ ಎಂದು ನಕ್ಕಿದ್ದರು. ಅದಾದಮೇಲೆ ಅವರು ಅಧ್ಯಕ್ಷತೆ ವಹಿಸಿದ್ದ, ಕವಿತೆ ಓದಿದ ಅನೇಕ ಕವಿಗೋಷ್ಟಿಗಳಲ್ಲಿ ನಾನೂ ಪದ್ಯ ಓದಿದೆ. ಓದಿದ ನಂತರ ‘ಗುಡ್ ಕಣೋ’ ಅಂದು ಅಷ್ಟಗಲ ನಕ್ಕು ಬೆನ್ನು ತಟ್ಟುತ್ತಿದ್ದರು. ಅವರು ವೇದಿಕೆಯಲ್ಲಿದ್ದ ಕಾರ್ಯಕ್ರಮಗಳಲ್ಲಿ ನಾನು ಮಾತನಾಡಿದ ಮೇಲೆ ಹತ್ತಿರ ಕರೆದು ‘ಗುಡ್’ ಹೇಳದೆ ಇರುತ್ತಿರಲಿಲ್ಲ. ಕನ್ನಡದ ದಲಿತ ಸಾಹಿತಿಗಳೆಲ್ಲರಿಗಿಂತ ಅವರೊಂದಿಗೆ ಹೆಚ್ಚು ವೇದಿಕೆ ಹಂಚಿಕೊಂಡ ಖುಷಿ ನನ್ನದು.

ಕೆ.ಬಿ.ಸಿದ್ದಯ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ‘ಅಲ್ಲಮ’. ಅಲ್ಲಮ ಪ್ರಭು ಕುರಿತು ಅವರು ಮಾತನಾಡಲು ಶುರು ಮಾಡಿದರೆ ನಾವೆಲ್ಲಾ ಬಹಳ ಹಿಂದುಳಿದಿದ್ದೇವೆ ಅನ್ನಿಸುತ್ತಿತ್ತು. ಶರಣ ಚಳವಳಿ ಮತ್ತು ಅಲ್ಲಮನನ್ನು ಅವರು ಅರ್ಥೈಸುತ್ತಿದ್ದ ಕ್ರಮವೇ ವಿಶಿಷ್ಟವಾಗಿತ್ತು. ಅಲ್ಲಮನ ಕುರಿತು ಆಲೋಚಿಸುತ್ತಿದ್ದ ಕೆಲವೇ ವಿದ್ವಾಂಸರಲ್ಲಿ ಕೆ.ಬಿ.ಎಸ್ ವಿಭಿನ್ನವಾಗಿದ್ದರು. ಅವರು ಯಾವ ವಿಷಯವನ್ನಾದರೂ ಮಾತನಾಡುವಾಗ ನೀಳ ಉಸಿರೆಳೆದುಕೊಂಡು ಕಣ್ಮುಚ್ಚಿ ಧ್ಯಾನಿಸಿ ತೂಕ ಹಾಕಿದಂತೆ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಅವರೇ ಮೆಚ್ಚಿಕೊಳ್ಳುವ ಹಾಗೆ.. ಬೆಳ್ಳಗಿನ ಬಟ್ಟೆ, ಬೆಳ್ಳಗಿನ ಗಡ್ಡ ಮತ್ತು ಬೆಳ್ಳಗಿನ ನಗು ಸಿದ್ದಯ್ಯನವರ ಗುರುತುಗಳು. ಆ ಗುರುತುಗಳೇ ನಮ್ಮಂಥವರನ್ನು ಅವರೆಡೆಗೆ ಸೆಳೆಯುತ್ತಿದ್ದವು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಟ್ಟಿದ ಎಚ್ಚರದ ಹಾದಿಯಲ್ಲಿ ಸ್ವಾಭಿಮಾನದ ಅಕ್ಷರಗಳ ಕೆಂಡ ಹಾದವರಲ್ಲಿ ಕೆ.ಬಿ.ಸಿದ್ದಯ್ಯ ಒಬ್ಬರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಎಚ್.ಗೋವಿಂದಯ್ಯ ಮುಂತಾದವರೊಟ್ಟಿಗೆ ದಲಿತ ಹೋರಾಟಕ್ಕೆ ಅಗತ್ಯವಿದ್ದ ಸಾಹಿತ್ಯವನ್ನು ಒದಗಿಸುವ ಕೆಲಸವನ್ನು ಮಾಡಿದರು. ಅವರ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ..’ ಹಾಡು ದಲಿತರ ಬದುಕಿನ ನೋವನ್ನು ಚಿತ್ರಿಸಿತ್ತು. ಕೋಲಾರ ಶೇಷಗಿರಿಯಪ್ಪನ ಕೊಲೆ ಪ್ರಕರಣ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಇಡೀ ರಾಜ್ಯದ ಮೂಲೆಮೂಲೆಯಲ್ಲಿ ಹೋರಾಟ ಕಟ್ಟಿದ ದಸಂಸ ಹಿಂದೆ ಸಿದ್ದಯ್ಯನವರೂ ಇದ್ದರು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಗೆ ಈ ಮಹನೀಯರು ಸೃಷ್ಟಿಸಿದ ಸಾಹಿತ್ಯ ನಾಡಿನ ದಲಿತೇತರರ ಎದೆಗಳಲ್ಲೂ ಜಾತಿವಿನಾಶದ ಕಿಡಿಯನ್ನು ಹೊತ್ತಿಸಿದ್ದು ಸುಳ್ಳಲ್ಲ.

ಇಂಥಾ ಹಾದಿಯಲ್ಲಿ ನಡೆದುಬಂದ ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು. ಅದಾಗಲೇ ಸದ್ದು ಮಾಡುತ್ತಿದ್ದ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳ ಮರು ಓದಿನ ಜೊತೆಗೆ ಸಿದ್ದಯ್ಯನವರ ಸಂಶೋಧನಾತ್ಮಕ ಜನಪದ ಸಂಕಥನಗಳು ಸೇರಿಕೊಂಡವು. ಇದರಿಂದಾಗಿ ದಲಿತ ಬದುಕುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ಗೋಚರಿಸಿತು. ಈ ಮೂಲಕ ಸಿದ್ದಯ್ಯನವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತು. ಆ ನಂತರದಲ್ಲಿ ಕರ್ನಾಟಕದ ಸಾಹಿತ್ಯ, ಹೋರಾಟ ಮತ್ತು ರಾಜಕಾರಣದಲ್ಲಿ ಸಿದ್ದಯ್ಯನವರು ಸೇರಿಹೋದರು.

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆ ದಲಿತ ಪ್ರಜ್ಞೆಯ ಮೆದುಳಿನಂತೆ ಕೆಲಸ ಮಾಡುತ್ತಿದ್ದ ದಲಿತ ಹಿರಿಯರೂ ಅಲ್ಲಲ್ಲಿ ಚದುರಿಹೋದರು. ಸಿದ್ದಯ್ಯನವರೂ ದಲಿತರೊಳಗಿನ ಮಾದಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಪ್ರಾರಂಭಿಸಿದ ‘ಒಳ ಮೀಸಲಾತಿ’ ಹೋರಾಟದ ಭಾಗವಾಗಬೇಕಾಯಿತು. ಅಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ‘ದಲಿತ’ ಅನ್ನುವ ಶಬ್ಧವನ್ನೇ ‘ದಾರಿ ತಪ್ಪಿಸುವ ಶಬ್ದ’ ಎಂದರು. ಅವರ ಮಾತು ನಿಜವೂ ಆಗಿತ್ತು. ದಲಿತ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವುದರಿಂದ ಅದಲಿತ ಬಂಧುಗಳಿಗೆ ಬೇಸರವಾಗುತ್ತದೆಂದು ವಾದಿಸಿದರು. ಅವರ ಈ ವಾದಕ್ಕೂ ಇತರ ದಲಿತ ಸಾಹಿತಿಗಳೊಂದಿಗಿನ ಅವರ ಮುನಿಸಿಗೂ ಸಂಬಂಧ ಕಲ್ಪಿಸಲಾಯಿತು. ಅದು ನಿಜವೇನೋ ಎಂಬಂತೆ ತಮ್ಮೊಂದಿಗೆ ಸಂಘಟನೆ ಕಟ್ಟಿ, ಬರೆದು, ದಲಿತ ಪ್ರಜ್ಞೆಯನ್ನು ಹಿಗ್ಗಿಸಿದ ಹಿರಿಯರ ಕುರಿತು ಅಸಹನೆ ವ್ಯಕ್ತಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ವಿರೋಧಿ ಮನುಧರ್ಮ ಶಾಸ್ತ್ರದ ಪ್ರತಿಪಾದಕ ಪೇಜಾವರ ಶ್ರೀ ಸಿದ್ದಯ್ಯನವರ ಮನೆಗೆ ಬಂದುಹೋದರು.

ಇದೆಲ್ಲದರ ಜೊತೆಗೆ ಸಿದ್ದಯ್ಯನವರು ತುಮಕೂರಿನಲ್ಲಿ ನೆಲೆಯೂರಿದ್ದು ಒಂದು ರೀತಿಯ ಸೀಮಿತ ವಾತಾವರಣವನ್ನು ಸೃಷ್ಟಿಸಿತು. ಅವರು ತುಮಕೂರನ್ನೇ ನಂಬಿ ಕೂತುಬಿಟ್ಟರು ಅಥವಾ ತುಮಕೂರು ಅವರನ್ನು ಕಟ್ಟಿಹಾಕಿಬಿಟ್ಟಿತು. ಅಲ್ಲಿನ ಕಾಲೇಜೊಂದರಲ್ಲಿ ಅವರು ಉಪನ್ಯಾಸಕ ವೃತ್ತಿ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ರಾಜಕೀಯ ನಾಯಕ ಸಿದ್ಧರಾಮಯ್ಯನವರ ಸ್ನೇಹ, ದಲಿತ ಲೋಕದ ಸಾಹಿತ್ಯಕ ಘನತೆ, ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಖಂಡಕಾವ್ಯ… ಇದ್ಯಾವುದೂ ಸಿದ್ದಯ್ಯನವರನ್ನು ಅವರು ಏರಬೇಕಿದ್ದ ಎತ್ತರಕ್ಕೆ ಬೆಳೆಸಲಿಲ್ಲ; ಬೇರೆ ಯಾರಿಗಾದರೂ ಇಂಥಾ ಒಂದೇ ಒಂದು ಸಾಧ್ಯತೆ ಇದ್ದರೂ ಪ್ರಾಧಿಕಾರಗಳ ಅಧ್ಯಕ್ಷಗಿರಿ, ಎಂಎಲ್‍ಸಿ ಪಟ್ಟ ಸಿಕ್ಕಿಬಿಡುತ್ತಿತ್ತು. ಸಿದ್ದಯ್ಯನವರು ಅಂಥಾ ಆಸೆಯನ್ನೇನೋ ಇಟ್ಟುಕೊಂಡಿದ್ದರೂ ಅದಕ್ಕೆ ಬೇಕಾದ ಶ್ರಮ ಹಾಕಲಿಲ್ಲ; ಬದಲಿಗೆ ನಿಷ್ಠುರವಾಗಿ ಮಾತನಾಡುವುದನ್ನು ಹೆಚ್ಚು ಮಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಅವರಿಂದ ದೂರವೇ ಉಳಿದರು.

ಇತ್ತ ಕರ್ನಾಟಕದಲ್ಲಿ ದಲಿತ ಯುವಜನತೆಯಲ್ಲಿ ಎಡ – ಬಲದ ಅಂತರ, ಪರಸ್ಪರ ಅಸಹನೆ ಹೆಚ್ಚುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆದರೂ ಎಪ್ಪತ್ತರ ದಶಕದ ಕಾವು ಕಾಣಲೇ ಇಲ್ಲ. ಇದನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಹಿರಿಯರು ಸಿದ್ದಯ್ಯನವರೂ ಸೇರಿದಂತೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮೇಲಿನ ಸಿದ್ದಯ್ಯನವರ ಸಿಟ್ಟಿಗೆ ಕೆಲವರು ಎಡ -ಬಲದ ಬೋರ್ಡು ನೇತುಹಾಕಿದರೂ ದಲಿತ ಸಾಹಿತ್ಯ ಮತ್ತು ಚಳವಳಿಯ ವಲಯ ಅದನ್ನೇನೂ ಗಂಭೀರವಾಗಿ ಪರಿಗಣಿಸಲಿಲ್ಲ; ಯಾಕೆಂದರೆ ಪರಮೇಶ್ವರ್ ವಿಷಯದಲ್ಲಿ ಸಿದ್ದಯ್ಯನವರ ಸಿಟ್ಟು ಸಕಾರಣವಾಗಿತ್ತು. ಆನಂತರ ಅದು ‘ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ; ಪರಮೇಶ್ವರರನ್ನು ಸೋಲಿಸುತ್ತೇವೆ’ ಎಂಬ ಘೋಷವಾಕ್ಯವಾಗುವ ಅತಿಗೆ ಹೋಯಿತು. ಇದು ಮಾದಿಗ ಸಮುದಾಯದವರೇ ಆದ ಆಂಜಿನೇಯ ಅವರ ಸೋಲಿಗೂ ಕಾರಣವಾಯಿತು. ಸದಾಶಿವ ಆಯೋಗದ ವರದಿಯನ್ನು ಜನತೆಯ ಮುಂದೆ ಇಡಿ; ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಮಾದಿಗ ಬಂಧುಗಳು ನಡೆಸಿದ ಹೋರಾಟಕ್ಕೆ ಸಿದ್ದಯ್ಯ ಮತ್ತು ಸಿದ್ದರಾಮಯ್ಯನವರ ಸ್ನೇಹ ಹೆಗಲು ನೀಡಲಿಲ್ಲ. ಇದಕ್ಕೆ ಆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ಬಿಜೆಪಿ ಸಖ್ಯದಲ್ಲಿದ್ದಾರೆ ಅನ್ನುವ ಸಿದ್ದಯ್ಯನವರ ಕೋಪ ಕಾರಣವಿರಬಹುದು. ಸ್ವಾತಂತ್ರ್ಯ ಉದ್ಯಾನದ ಹತ್ತಿರ ನಡೆಯುತ್ತಿದ್ದ ಮಾದಿಗರ ಹೋರಾಟಕ್ಕೆ ಪ್ರತಿದಿನ ಹಾಜರಾಗುತ್ತಿದ್ದ ಸಿದ್ದಯ್ಯನವರನ್ನು ಹೊರಗೇ ಓಡಾಡಿಕೊಂಡು ಹೋಗುವಂತೆ ಮಾಡಿದ್ದು ಆ ಹೋರಾಟಗಾರರ ದೊಡ್ಡ ನಷ್ಟ. ಒಂದು ದಿನ ಪ್ರತಿಭಟನೆಯ ಪೆಂಡಾಲಿನ ಹೊರಗೆ ಬಿಸಿಲಲ್ಲಿ ನಿಂತಿದ್ದ ಸಿದ್ದಯ್ಯನವರು ಆ ಹೋರಾಟ ಕುರಿತು ರೂಪಕದ ಭಾಷೆಯಲ್ಲಿ ಮಾತನಾಡಿದ್ದು ನನಗಿನ್ನೂ ನೆನಪಿದೆ. ಆವತ್ತು ‘ಯಾಕಣ್ಣಾ ಬಿಸಿಲಲ್ಲಿ ನಿಂತಿದಿರಾ’ ಎಂದು ಕೇಳಿದ ನನ್ನ ಕೆನ್ನೆ ಹಿಂಡಿ ನಕ್ಕಿದ್ದರು. ಅದಾದ ನಂತರ ತುಮಕೂರಿನ ಮಾದಿಗ ಬಂಧುಗಳು ನಡೆಸಿದ ಅದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕಂಡು ಅವರಿಗೆ ಸಮುದಾಯದ ಮೇಲಿದ್ದ ಕಾಳಜಿ ದೊಡ್ಡದು ಎಂದು ನಾವು ಗೆಳೆಯರು ಮಾತಾಡಿಕೊಂಡಿದ್ದೆವು.

ಸಿದ್ದಯ್ಯನವರು ಎಲ್ಲರಂತೆ ಮಿತಿಗಳಿದ್ದ ಮನುಷ್ಯ. ಸಾಹಿತ್ಯ ಮತ್ತು ಚಳವಳಿ ಎರಡರಲ್ಲಿ ‘ಸಾಹಿತಿ’ ಎಂದು ಗುರ್ತಿಸಿಕೊಳ್ಳಲು ಅವರು ಆಸೆ ಪಡುತ್ತಿದ್ದ ಹಾಗೆ, ಕನ್ನಡ ಸಾಹಿತ್ಯ ಸಮಾಜ ಅವರನ್ನು ಒಬ್ಬ ‘ಸಾಹಿತಿ’ಯಾಗಿಯೇ ನೋಡಲು ಆಸೆ ಪಡುತ್ತಿತ್ತು. ಇದಕ್ಕೆ ಕಾರಣ ಅವರಿಗಿದ್ದ ಓದಿನ ವಿಸ್ತಾರ ಮತ್ತು ಕಾವ್ಯದ ಮೇಲಿದ್ದ ಆಕರ್ಷಣೆ. ಇದರಿಂದಾಗಿ ಕೇವಲ ಬೀದಿಗಳಲ್ಲಿ ಧಿಕ್ಕಾರ ಕೂಗಿಕೊಂಡು ಬದುಕು ಮುಗಿಸುತ್ತಿದ್ದ ನೂರಾರು ದಲಿತ ಯುವಕ ಯುವತಿಯರನ್ನು ಚಳವಳಿ, ಸಾಹಿತ್ಯ ಮತ್ತು ಅಕಾಡೆಮಿಕ್ ನೆಲೆಗಳಲ್ಲಿ ನಡೆಯುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಅವರನ್ನು ಪ್ರೀತಿಸುವ ದಲಿತ ಹುಡುಗ ಹುಡುಗಿಯರು ಹೋರಾಟ, ಸಾಹಿತ್ಯ ಎರಡರಲ್ಲೂ ಸಮರ್ಥವಾಗಿ ಹೆಜ್ಜೆ ಇಡುವಂತಾಗಿದೆ.

ಈಗ ಸಿದ್ದಯ್ಯನವರು ಕನ್ನಡ ಸಾಹಿತ್ಯಕ್ಕೆ ಹೇಗೋ ಹಾಗೆ ದಲಿತ ಚಳವಳಿಯ ಹಾದಿಯೂ ಆಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...