Homeಅಂಕಣಗಳುಮೋದಿಜಿಯ ಸಮುದ್ರ ಗೀತೆಗಳು

ಮೋದಿಜಿಯ ಸಮುದ್ರ ಗೀತೆಗಳು

- Advertisement -
- Advertisement -

| ಥೂತ್ತೇರಿ ಯಾಹೂ |

ಭಾಜಪದ ಮೊದಲ ಪ್ರಧಾನಿ ವಾಜಪೇಯಿ ಆಗಾಗ್ಗೆ ಕವನ ಕೆರೆಯುತ್ತಿದ್ದರು. ಕವಿ ಹೃದಯವೂ ಅವರಿಗಿತ್ತು. ಆದ್ದರಿಂದ ಬಿಜೆಪಿ-ಕವಿ ಎನಿಸಿದ್ದರು. ಅವರಿಗೆ ನಾನೇನು ಕಡಿಮೆ ಎಂದು ಸೆಡ್ಡು ಹೊಡೆದಿರುವ ಈಗಿನ ಪ್ರಧಾನಿ ನರೇಂದ್ರ ಮೋದಿಯೂ ಪದಬೇಧಿ ಮಾಡಿಕೊಂಡು ಅದನ್ನೇ ಕಾವ್ಯವೆಂದು ಪರಿಗಣಿಸಿ ಬಿಜೆಪಿ ಕಾವ್ಯಪ್ರಿಯರಿಗೆ ಬಡಿಸಿದ್ದಾರಂತಲ್ಲಾ. ಅದನ್ನ ಕನ್ನಡ ಕರಪತ್ರ ಎಂಬ ಪತ್ರಿಕೆ ಪ್ರಕಟಿಸಿರುವುದಲ್ಲದೆ ಮೋದಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನ ತಿರುಚಿ ಪ್ರಕಟಿಸಿದೆಯಲ್ಲಾ. ವಾಸ್ತವವಾಗಿ ಮೋದಿ ಮೂಲಪ್ರತಿ ಹೇಗಿತ್ತು ಎಂಬ ಊಹೆಯ ಸಾಲುಗಳನ್ನು ನ್ಯಾಯಪಥ ಓದುಗರಿಗೆ ಕೊಡುವುದು ನಮ್ಮ ಧರ್ಮ. ಇದು ಕವಿಯೊಬ್ಬನ ಕಾವ್ಯದ ಸಾಲುಗಳ ನಡುವಿನ ಅಕ್ರಮ ಪ್ರವೇಶವಲ್ಲ. ಕಳೆದ ಶತಮಾನದಲ್ಲೇ ವರಕವಿ ಬೇಂದ್ರೆಯವರು ವಾಚನಕ್ಕೆ ಕಳುಹಿಸಿದ ಕವನದ ಸಾಲುಗಳಲ್ಲಿ ಕಡೆಯ ಕೆಲಸಾಲುಗಳು ಬಿಟ್ಟು ಹೋಗಿದ್ದು ಅದನ್ನ ಊಹಿಸಿ ಬರೆದು ಪೂರ್ಣಗೊಳಿಸಿದ ಕೀರ್ತಿ, ಕೀರ್ತಿನಾಥ ಕುರ್ತುಕೋಟಿಯವರದ್ದು. ಅಂತಹ ಭಾಗ್ಯ ಯಾಹುಗೆ ದೊರಕಿದ್ದು ಭಿನ್ನದೊಳಗಿನ ಸೌಭಾಗ್ಯವಲ್ಲವೆ, ಥೂತ್ತೇರಿ!

“ಮೋದಿಯ ಪದಬೇದಿ”

1

ನಮಸ್ತೇ ಸದಾ ವತ್ಸಲೇ ಸಾಗರ;
ನೀನು ಧೀರ ಗಂಭೀರ, ಆದರೆ ನಾನು,
ಸೀರ, ಬೀರ, ಚ್ವೌರ, ಕ್ವಾರ,
ನೀನು ನೀಲಿ
ನಮ್ಮ ಸಂಘ ಹಳದಿ
ನೀನು ಜಗತ್ತಿಗೆ ಜೀವನ ನೀಡುವೆ
ನಾನು ಸಂಘವೆಂಬ ವಿಷವೃಕ್ಷಕ್ಕೆ
ಹಾಲೆರೆಯುವೆ.
ಸಮುದ್ರದ ಮೇಲೆ ಕೋಲಾಹಲವಿದೆ,
ಭಾರತದ ಒಳಗೆ ಹಾಲಾಹಲವಿದೆ,
ನೀನು ವಿಚಲಿತನಾಗಲ್ಲ,
ನಾವು ಸದಾ ವಿಚಲಿತರು.
ಗರ್ಜಿಸುವ ಕನ್ನಯ್ಯನನ್ನು ಕಂಡರೆ
ನಮ್ಮವರು ಭಯಭೀತರಾಗುತ್ತಾರೆ.
ಸಾಬರನ್ನು ಕಂಡರೆ ಸಣ್ಣಗೆ ನಡುಗುತ್ತಾರೆ.
ನಿನ್ನೊಳಗೆ ಅಡಗಿರುವ ಶಾರ್ಕುಗಳಂತೆ
ಭಾರತದಲ್ಲಿ ಅಡಿಗಿದ್ದಾರವರು.

2
ನಮಸ್ತೇ ಸದಾವತ್ಸಲೇ ಸಾಗರ;
ನೀನು ಶಕ್ತಿಭಂಡಾರ.
ನಾನು ಕುಯುಕ್ತಿ ಬಿಡಾರ,
ನೀನು ಯಾವತ್ತೂ ನಿನ್ನ ಪರಿಧಿಯಲ್ಲಿರುತ್ತೀ.
ನಾವು ಸದಾ ಪರಿಧಿ ಮೀರುತ್ತೇವೆ,
ನೀನು ಯಾವತ್ತೂ ದೊಡ್ಡತನದ ಬೋಧನೆ ಮಾಡುತ್ತಿ,
ನಾವು ಪ್ರತಿಬಾರಿ ಸಣ್ಣತನದಲ್ಲೇ ವಾದಿಸುತ್ತೇವೆ.
ನಿನ್ನ ಅಲೆಗಳಲ್ಲಿ ಜೀವನ ಸಂದೇಶವಿದೆ,
ನಮ್ಮ ಮಾತುಗಳಲ್ಲಿ ಸರ್ವನಾಶದ ಆಶಯವಿದೆ.
ನಿನಗೆ ಯಾವ ಆಸೆಯೂ ಇಲ್ಲ,
ಭರತಖಂಡವನ್ನು ಹಿಂದೂ ರಾಷ್ಟ್ರ ಮಾಡುವ ದುರಾಶೆ ನಮ್ಮನ್ನು ಆಕ್ರಮಿಸಿದೆ.

3
ನಮಸ್ತೆ ಸದಾವತ್ಸಲೇ ಸಾಗರ;
ನಡೆಯುತ್ತಲೇ ಜೀವನ ನಡೆಸುತ್ತಿ,
ನಾನು ತಿರುಗುತ್ತಲೇ ಜೀವನ ನಡೆಸುತ್ತಿದ್ದೇನೆ.
ತಿರುಗಲು ನನಗೆ ಆಯಾಸವೇ ಇಲ್ಲ
ಏಕೆಂದರೆ ನನಗೆ ಮನೆ ಎಂಬುದೇ ಇಲ್ಲ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನನ್ನ ದೇಶದಲ್ಲೇ ತಿರುಗಿದರೆ
ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾದವರ
ಅತಿಯಾದ ಬೇಡಿಕೆ ನಿಂದನೆಯ ನರಕ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನಾಯಿಗೆ ಕೆಲಸವಿಲ್ಲ,
ಕೂರಲು ಸಮಯವಿಲ್ಲ ಎಂಬಂತೆ,
ನನ್ನ ಅಲೆಮಾರಿ ಸಂದೇಶ
ಅನವರತ-ಅನವರತ.

4
ಓಂ ನಮೋ ಸದಾವತ್ಸಲೇ ಸಾಗರ:
ಅಲೆಯಿಂದ ಅಲೆಗಳು ಹೊರಬೀಳುವುದಿಲ್ಲ.
ಇದೇ ಸಂಘಕ್ಕೆ ಆದರ್ಶ,
ಬಿದ್ದರೂ ಉಪ ಅಲೆಗಳ ಆಶ್ರಯ,
ಹಿಂದೂ ಮಹಾಸಭಾ, ವಿಶ್ವಹಿಂದೂ ಪರಿಷತ್,
ಆರೆಸ್ಸೆಸ್ಸು, ಭಜರಂಗದಳದ ಅಲೆಗಳೆಲ್ಲಾ
ಸಂಘ ಸಂಯಮಗೊಂಡ ಸಮುಚ್ಛಯಗಳು.

5
ನಮಸ್ತೆ ಸದಾವತ್ಸಲೇ ಸಾಗರ:
ಸೂರ್ಯನ ಜೊತೆಗೆ ನಿನ್ನ ಗೆಳೆತನ ಹಳೆಯದು,
ನನ್ನ ಸಂಘ ಪರಿವಾರದ ಗೆಳೆತನವೂ ಹಳೆಯದು.
ಜೀವಂತ ಜಲ ನೀನು,
ನಿನ್ನನ್ನು ಕುಡಿದು, ಹೊರಬಿಡುವ ಜನ್ಮವಷ್ಟೇ ನನ್ನದು.
ನೀನು ಆಗಸವನ್ನ ಚುಂಬಿಸುತ್ತೀ,
ನಾನೇನು ಚುಂಬಿಸಲೀ,
ಚುಂಬನದಿಂದ ವಂಚಿತ ನಾನು.
ನೀನು ಮೋಡವಾಗಿ ಮಳೆ ಸುರಿಸುತ್ತಿ,
ನಾನು ಜನಸಾಗರದ ಮೇಲೆ ಸುಳ್ಳು ಸುರಿಸುತ್ತೇನೆ.
ನೀನು ಮಧುರಭಾವ ಇಟ್ಟುಕೊಂಡಿದ್ದಿ,
ಸಂಘ ಸೇರಿದಾಗಲೇ ನನ್ನ ಮಧುರಭಾವ ಮಾಯವಾಯ್ತು,
ಈಗೇನಿದ್ದರೂ ಮಧುರ ಕಾಶ ತಲೆನೋವಷ್ಟೇ..

6
ಓಂ ನಮೋ ಸದಾವತ್ಸಲೇ ಸಾಗರ:
ಜೀವನದ ಈ ಸೌಂದರ್ಯ ನೀಲಕಂಠನ ಆದರ್ಶ ನಿನ್ನದು,
ಜೀವನದ ಸೌಂದರ್ಯ ಹಾಳುಮಾಡುವುದೇ ನಮ್ಮ ಆದರ್ಶ.
ನೀನು ಭೂಮಿಯ ವಿಷವನ್ನು ಕುಡಿಯುತ್ತಿ,
ನಾವು ಭರತ ಖಂಡಕೆ ವಿಷ ಉಣಿಸುತ್ತೇವೆ.
ನೀನು ಲವಣಾಂಶವನ್ನು ನಿನ್ನಲ್ಲೇ ಇಟ್ಟುಕೊಳ್ಳುವೆ,
ನಾವು ತಡೆಯಲಾಗದೆ ಆಗಾಗ್ಗೆ ಬಿಟ್ಟುಬಿಡುತ್ತೇವೆ.
ನೀನು ಜಗತ್ತಿಗೆ ಹೊಸ ಜೀವನ ನೀಡುತ್ತಿ,
ನಾವು ಜಗತ್ತಿಗೆ ಹೊಸ ನರಕ ಕೊಡುತ್ತಿದ್ದೇವೆ.
ನೀನು ಜೀವನ ನಡೆಸುವ ಮರ್ಮ ನೀಡುತ್ತಿ,
ನಾವು ಜೀವನ ಸರ್ವನಾಶ ಮಾಡುವ ಕರ್ಮ ನೀಡುತ್ತೇವೆ.
ಹೇ ಸಮುದ್ರವೆ, ನಿನಗೆ ನನ್ನ ಶತಸಹಸ್ರ
ಪ್ರಣಾಮಗಳು.
ಥೂ…. ಥೂ….. ಥೂತ್ತೇರಿ!!!

ಸೆ: ಕನ್ನಡ ಕರಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...