Facebook Instagram Telegram Youtube
  • ಮುಖಪುಟ
  • ಕರ್ನಾಟಕ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಅಂಕಣಗಳು
  • ಫ್ಯಾಕ್ಟ್‌ಚೆಕ್
  • ಸಾಹಿತ್ಯ
  • ಸಿನಿಮಾ
    • ಕ್ರೀಡೆ
    • ಒಲಂಪಿಕ್
    • ಕ್ರಿಕೆಟ್
    • ಸಿನಿ ಸುದ್ದಿ
    • ಸಿನಿಮಾ ವಿಮರ್ಶೆ
  • ಚಳವಳಿ
  • ವಿಡಿಯೋ
  • ರೈತ ಹೋರಾಟ
  • ದಲಿತ್ ಫೈಲ್ಸ್
Search
Subscribe
Donate
Logo
Logo
Facebook
Instagram
Telegram
Youtube
Subscribe
Donate
Logo
  • ಮುಖಪುಟ
  • ಕರ್ನಾಟಕ
    • ಕರ್ನಾಟಕ

      ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

      ಕರ್ನಾಟಕ

      ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

      ಕರ್ನಾಟಕ

      ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

      ಕರ್ನಾಟಕ

      ಮಹಿಳೆಯ ಹಿಜಾಬ್ ಎಳೆದ ಆರೋಪ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬೆಂಗಳೂರಿನ ವಕೀಲರಿಂದ ದೂರು

      ಕರ್ನಾಟಕ

      ಬೆಳ್ತಂಗಡಿ | ಆಭರಣ ಮಳಿಗೆ ವ್ಯವಸ್ಥಾಪಕನಿಂದ ಮೂವರು ವಿದ್ಯಾರ್ಥಿಗಳಿಗೆ ಹಲ್ಲೆ : ಪ್ರಕರಣ ದಾಖಲು

  • ರಾಷ್ಟ್ರೀಯ
    • ಮುಖಪುಟ

      ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

      ಮುಖಪುಟ

      ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

      ಮುಖಪುಟ

      ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

      ಮುಖಪುಟ

      ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

      ಮುಖಪುಟ

      ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

  • ಅಂತಾರಾಷ್ಟ್ರೀಯ
  • ರಾಜಕೀಯ
    • ಕರ್ನಾಟಕ

      ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

      ಮುಖಪುಟ

      ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

      ಮುಖಪುಟ

      ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

      ಮುಖಪುಟ

      ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

      ಮುಖಪುಟ

      ನ್ಯಾಷನಲ್ ಹೆರಾಲ್ಡ್ ಪ್ರಕರಣ : ಮೋದಿ, ಅಮಿತ್ ಶಾ ರಾಜೀನಾಮೆಗೆ ಖರ್ಗೆ ಒತ್ತಾಯ

  • ಅಂಕಣಗಳು
  • ಫ್ಯಾಕ್ಟ್‌ಚೆಕ್
  • ಸಾಹಿತ್ಯ
  • ಸಿನಿಮಾ
    • Allಕ್ರೀಡೆಒಲಂಪಿಕ್ಕ್ರಿಕೆಟ್ಸಿನಿ ಸುದ್ದಿಸಿನಿಮಾ ವಿಮರ್ಶೆ
      ಮುಖಪುಟ

      ಕೇರಳ ಚಲನಚಿತ್ರೋತ್ಸವ : ಪ್ಯಾಲೆಸ್ತೀನ್ ಕುರಿತ 4 ಸಿನಿಮಾಗಳು ಸೇರಿ 19 ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ ಕೇಂದ್ರ

      ಮುಖಪುಟ

      ಪರೇಶ್ ರಾವಲ್‌ರ ‘ದಿ ತಾಜ್ ಸ್ಟೋರಿ’ ಪೋಸ್ಟರ್‌ಗೆ ವ್ಯಾಪಕ ಆಕ್ರೋಶ; ಸ್ಪಷ್ಟನೆ ನೀಡಿದ ನಿರ್ಮಾಪಕರು

      ಮುಖಪುಟ

      ಪ್ರತಿಯೊಂದು ಮಗುವೂ ಶಾಂತಿ, ಸ್ವಾತಂತ್ರ್ಯ, ವಿಮೋಚನೆಗೆ ಅರ್ಹ; ಪ್ಯಾಲೆಸ್ತೀನ್ ಇದಕ್ಕೆ ಹೊರತಾಗಿಲ್ಲ: ವೆನಿಸ್ ಚಲನಚಿತ್ರೋತ್ಸವ ವೇದಿಕೆಯಲ್ಲಿ ಅನುಪರ್ಣ ರಾಯ್

      ಮುಖಪುಟ

      ‘ಅಮ್ಮ’ ಚುನಾವಣೆಯಲ್ಲಿ ಶ್ವೇತಾ ಮೆನನ್‌, ಕುಕ್ಕು ಪರಮೇಶ್ವರನ್‌ಗೆ ಗೆಲುವು: ಉನ್ನತ ಹುದ್ದೆಗಳಿಗೆ ಮೊದಲ ಬಾರಿಗೆ ಮಹಿಳೆಯರು ಆಯ್ಕೆ

      ಮುಖಪುಟ

      ತೆಲುಗು ಚಿತ್ರರಂಗದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ನಿಧನ

  • ಚಳವಳಿ
    • ಕರ್ನಾಟಕ

      ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ನ.26ರಂದು ‘ಬೃಹತ್ ಬೆಂಗಳೂರು ಚಲೋ’

      ಕರ್ನಾಟಕ

      ಒಳಮೀಸಲಾತಿ: ಮೂಲ ಜಾತಿ ಪ್ರಮಾಣ ಪತ್ರ ನೀಡಲು ತಂತ್ರಾಂಶ ಸಿದ್ದ

      ಕರ್ನಾಟಕ

      ಬಿಡದಿ ಉಪನಗರ ಯೋಜನೆ ‘ಭೂ ಬೆಲೆ ನಿಗದಿ ಸಭೆ’ ನ್ಯಾಯ ನಿರಾಕರಣೆಯ ಪಿತೂರಿ: ಕರ್ನಾಟಕ ಪ್ರಾಂತ ರೈತ ಸಂಘ

      ಕರ್ನಾಟಕ

      ಯಾದಗಿರಿಯಲ್ಲೂ ಆರೆಸ್ಸೆಸ್‌ಗೆ ಸೆಡ್ಡು ಹೊಡೆದ ದಲಿತ ಸಂಘಟನೆಗಳು

      ಚಳವಳಿ

      ಭಾರತದಲ್ಲಿ ಭಿನ್ನಾಭಿಪ್ರಾಯ ದಮನದ ಕ್ರೂರ ನೀತಿ; ನ್ಯಾಯಕ್ಕಾಗಿ ಕಾಯುತ್ತಿರುವ ಉಮರ್ ಖಾಲಿದ್

  • ವಿಡಿಯೋ
  • ರೈತ ಹೋರಾಟ
  • ದಲಿತ್ ಫೈಲ್ಸ್
Homeಕರ್ನಾಟಕಫೆಡರಲ್ ಫ್ರಂಟ್ ರಚಿಸಲು ಅಖಾಡಕ್ಕಿಳಿದ ಕೆ.ಸಿ.ಆರ್: ಎಚ್.ಡಿ.ಕೆ ಜೊತೆ ಚರ್ಚೆ, ಪಿಣರಾಯಿ ಮಾತಾಡಿಸಲು ಕೇರಳಕ್ಕೆ
ಕರ್ನಾಟಕಮುಖಪುಟರಾಜಕೀಯರಾಷ್ಟ್ರೀಯ

ಫೆಡರಲ್ ಫ್ರಂಟ್ ರಚಿಸಲು ಅಖಾಡಕ್ಕಿಳಿದ ಕೆ.ಸಿ.ಆರ್: ಎಚ್.ಡಿ.ಕೆ ಜೊತೆ ಚರ್ಚೆ, ಪಿಣರಾಯಿ ಮಾತಾಡಿಸಲು ಕೇರಳಕ್ಕೆ

By : Girish MB
7 May 2019, 7:16 AM
Facebook
WhatsApp
Twitter
    - Advertisement -
    - Advertisement -

    | ಅನಿಲ್ ಕುಮಾರ್ ಚಿಕ್ಕದಾಳವಟ್ಟ |

     

     

    ದೇಶದ ರಾಜಕೀಯ ವಿದ್ಯಮಾನಗಳಲ್ಲಿ ಮಹತ್ತರವಾದ ಬದಲಾವಣೆಗಳು ಸಂಭವಿಸುವ ಸೂಚನೆಗಳು ಕಾಣಿಸುತ್ತಿವೆ. ಬಹಳಷ್ಟು ಚುನಾವಣಾ ವಿಶ್ಲೇಷಕರ ಪ್ರಕಾರ ಈ ಬಾರಿ ಯಾವುದೇ ರಾಜಕೀಯ ಪಕ್ಷ ಸ್ಪಷ್ಟವಾದ ಬಹುಮತ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತೆ ಯಾವುದಾದರೂ ಒಕ್ಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಸಾಮಾನ್ಯವಾಗಿ ಯು.ಪಿ.ಎ ಅಥವಾ ಎನ್.ಡಿ.ಎ ಕೂಟ ಅಧಿಕಾರ ವಹಿಸಿಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ಚುನಾವಣೆ ಮುಗಿಯುತ್ತ ಬಂದಂತೆ ಗೆಲುವು ಸೋಲಿನ ಲೆಕ್ಕಾಚಾರಗಳ ಮೂಲಕ ಯಾವ ಪಕ್ಷ ಯಾವ ಒಕ್ಕೂಟದ ಜೊತೆ ಹೋಗಲಿದೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆ.ಸಿ.ಆರ್) ಪ್ರಾದೇಶಿಕ ಪಕ್ಷಗಳ ಹೊಸ ಒಕ್ಕೂಟವೊಂದನ್ನು ರಚಿಸಲು ಅಖಾಡಕ್ಕಿಳಿದಿದ್ದಾರೆ. ಆ ಮೂಲಕ ರಾಜಕೀಯ ವಲಯದಲ್ಲಿ ಹೊಸ ಅಲೆಯೊಂದನ್ನು ಎಬ್ಬಿಸಿದ್ದಾರೆ.

    ಕೇರಳ ಮತ್ತು ತಮಿಳುನಾಡು ದೇವಸ್ಥಾನಗಳ ಪ್ರವಾಸದ ಭಾಗವಾಗಿ ನಿನ್ನೆ ಮಧ್ಯಾಹ್ನ ಹೈದರಾಬಾದ್‍ನಿಂದ ಹೊರಟ ಕೆಸಿಆರ್ ಸಂಜೆ 6 ಗಂಟೆಗೆ ಸರಿಯಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತನ್ನ ಕನಸಿನ ‘ಫೆಡರಲ್ ಫ್ರಂಟ್’ನ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ಒಂದಾಗಿ ಒಕ್ಕೂಟವೊಂದನ್ನು ರಚಿಸಿಕೊಂಡು ಸರ್ಕಾರವನ್ನು ನಡೆಸಿದರೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಹಿತಾಸಕ್ತಿಗಳನ್ನು ಹತ್ತಿಕ್ಕುವ ಧೋರಣೆಯನ್ನು ಕಡಿಮೆ ಮಾಡಬಹುದು ಎಂಬ ಚರ್ಚೆ ಹೊಸದಲ್ಲ.

    ಕೆಸಿಆರ್ 2018ರ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಮೊದಲಬಾರಿಗೆ ಫೆಡರಲ್ ಫ್ರೆಂಟ್ ಎಂಬ ವಿಷಯವನ್ನು ಎತ್ತಿದ್ದರು. ಆ ಚುನಾವಣೆಯಲ್ಲಿ ನಾವು ಬಹುಮತ ಪಡೆಯಲಿದ್ದೇವೆ ಎಂದು ಕೆಸಿಆರ್ ದೃಢವಾಗಿ ಹೇಳುತ್ತಿದ್ದರೂ, ಎಲ್ಲಾ ಸಮೀಕ್ಷೆಗಳು ಟಿ.ಆರ್.ಎಸ್ ಪಕ್ಷದ ವಿರುದ್ದವೇ ಇದ್ದವು. ಹೀಗಿದ್ದೂ 3/2ರಷ್ಟು ಬಹುಮತದೊಂದಿಗೆ ಅವರು ಗೆದ್ದರು. ಆಗ ರಾಷ್ಟ್ರೀಯ ಮಾಧ್ಯಮಗಳು ಇದರ ಬಗ್ಗೆ ಗಮನ ಹರಿಸಿ ಮಾತನಾಡಿಸಲು ಆರಂಭಿಸಿದ್ದವು. ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳೇ ಮುಖ್ಯವಾಗಲಿವೆ. 2019ರ ಚುನಾವಣೆಯಲ್ಲಿ ಟಿ.ಆರ್.ಎಸ್ ಮುಂಚೂಣಿಯಲ್ಲಿ ನಿಂತು ಫೆಡರಲ್ ಫ್ರಂಟ್ ರಚನೆಯಾಗಲಿದೆ ಎಂಬರ್ಥದಲ್ಲಿ ಬಲವಾಗಿ ಹೇಳಿದ್ದರು. ಮತ್ತು ಬಿಜೆಪಿ ಯಾವುದೇ ಕಾರಣಕ್ಕೂ 150ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ, ಕಾಂಗ್ರೆಸ್ ಕೂಡ 100 ಸೀಟುಗಳ ಅಂತರದಲ್ಲಿ ನಿಲ್ಲಲಿದೆ ಎಂದಿದ್ದರು. ಈ ಬಾರಿ 17 ಲೋಕಸಭಾ ಸ್ಥಾನಗಳಲ್ಲಿ ಟಿಆರ್ ಎಸ್ 16 ಸೀಟುಗಳನ್ನು ಗೆಲ್ಲುವ ಉಮೇದಿನಲ್ಲಿದೆ. ಮತ್ತೊಂದು ಸ್ಥಾನ ಟಿಆರ್.ಎಸ್‍ನ ಮೈತ್ರಿ ಪಕ್ಷ ಎ.ಐ.ಎಮ್.ಐ.ಮ್‍ಗೆ ಬಿಟ್ಟುಕೊಡಲಾಗಿತ್ತು.

    ತೆಲಂಗಾಣದ ಚುನಾವಣೆಯನ್ನು ಮುಗಿಸಿಕೊಂಡ ಕೆ.ಸಿ.ಆರ್ ಈಗ ಫೆಡರಲ್ ಫ್ರಂಟ್‍ಗಾಗಿ ಅಖಾಡಕ್ಕಿಳಿದು ಕೆಲಸ ಮಾಡುತ್ತಿದ್ದಾರೆ. ಕೇರಳದಿಂದ ತಮಿಳುನಾಡಿಗೆ ಹೊರಟು ಡಿ.ಎಮ್.ಕೆ ಪಕ್ಷದ ಅಧ್ಯಕ್ಷ ಎಮ್.ಕೆ.ಸ್ಟಾಲಿನ್‍ರನ್ನು ಮೇ 13ಕ್ಕೆ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಇದರ ಕುರಿತು ಕರ್ನಾಟಕ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೆಗೌಡ ಹಾಗೂ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕರೆಮಾಡಿ ಮಾತನಾಡಿದ್ದಾರೆ. ಕೂಡಲೇ ಅವರಿಬ್ಬರನ್ನೂ ಭೇಟಿಯಾಗಿ ಹೊಸ ಒಕ್ಕೂಟದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಮಾರ್ಚ್‍ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಕೆ.ಸಿ.ಆರ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ನಾವು ನಿಜವಾದ ಸಂಯುಕ್ತ ಒಕ್ಕೂಟವೊಂದನ್ನು ರಚಿಸಲು ಯತ್ನಿಸುತ್ತಿದ್ದೇವೆ. ಇದು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಒಕ್ಕೂಟವಾಗಿದೆ ಇಂದು ಇದು ಪ್ರಾರಂಭ ಮಾತ್ರ’ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಇದಾದ ನಂತರ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್‍ರನ್ನು ಭುವನೇಶ್ವರ್‍ನಲ್ಲಿ, ಸ್ಟಾಲಿನ್‍ರನ್ನು ಚೆನ್ನೈನ ಅವರ ಮನೆಯಲ್ಲಿಯೇ ಭೇಟಿಯಾಗಿ ಒಕ್ಕೂಟದ ಬಗ್ಗೆ ಚರ್ಚಿಸಿದ್ದರು. ಕೆ.ಸಿ.ಆರ್ ಈಗ ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಕಿಂಗ್ ಮೇಕರ್ ಆಗಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಾದೇಶಿಕ ಪಕ್ಷಗಳ ಬಲವನ್ನು ತೋರಿಸಿ, ರಾಜಕಾರಣಕ್ಕೆ ಒಂದು ದಿಕ್ಕು ತೋರಿಸುವ ಯತ್ನ ನಡೆಯುತ್ತಿದೆ. ಫಲಿತಾಂಶ ಬಂದ ನಂತರದ ತೀರ್ಮಾನಗಳಿಗೆ ಕೆ.ಸಿ.ಆರ್ ಪ್ರಯತ್ನ ಪೂರಕವಾಗಲಿದೆಯಾ ಅಥವಾ ಇವರ ಪಕ್ಷವೇ ಒಂಟಿಯಾಗಲಿದೆಯಾ ಕಾದು ನೋಡಬೇಕಿದೆ.

    ರಾಜಕಾರಣಿಗಳ ಬಯೊಪಿಕ್ ಭರಾಟೆ: ಬಾಲಿವುಡ್‍ನಿಂದ ಕಾಲಿವುಡ್‍ವರೆಗೆ

     

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
    100
    200
    500
    1000
    Donate

    LEAVE A REPLY Cancel reply

    Please enter your comment!
    Please enter your name here
    You have entered an incorrect email address!
    Please enter your email address here

    Previous article
    ನಮ್ಮ ನಡುವಣ ಸಕ್ರಿಯ ಬುದ್ದಿಜೀವಿ ದಿನೇಶ್ ಅಮೀನ್ ಮಟ್ಟು
    Next article
    6ನೇ ಮೇ ಸಾಹಿತ್ಯ ಮೇಳ: ಅಕ್ಷರ, ಮಾತು, ಚಿತ್ರಗಳ ಬೆಸೆದ ಹೋರಾಟ…
    Girish MB
    Girish MB

    ಇದೇ ಲೇಖಕರ ಬರಹ

    ಅಂಕಣಗಳು

    ಗೌರಿ ಎಂಬ ದೀಪದ ಗಿಡ

    ಕರ್ನಾಟಕ

    ಗೌರಿ ಲಂಕೇಶರ ಆಶಯದಡಿ ನಡೆಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಕೆ.ಎಲ್.ಅಶೋಕ್ ಸಂದರ್ಶನ

    ಆ ವಾರದ ಕಣ್ಣೋಟ

    ಸ್ವಾತಂತ್ರ್ಯವೀರ ಟಿಪ್ಪುಗೆ ಇದೆಂಥಾ ಅನ್ಯಾಯ!

    - Advertisment -
    ಮುಖಪುಟ

    2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    ರವಿಕುಮಾರ್ ಈಚಲಮರ - 17 December 2025, 8:01 PM0
    2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...
    ಮುಖಪುಟ

    ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

    ರವಿಕುಮಾರ್ ಈಚಲಮರ - 17 December 2025, 7:12 PM0
    ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...
    ಮುಖಪುಟ

    ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

    ರವಿಕುಮಾರ್ ಈಚಲಮರ - 17 December 2025, 6:37 PM0
    ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...
    ಕರ್ನಾಟಕ

    ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಹಾರಿಸ್ - 17 December 2025, 6:33 PM0
    ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...
    ಮುಖಪುಟ

    ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

    ರವಿಕುಮಾರ್ ಈಚಲಮರ - 17 December 2025, 5:30 PM0
    ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...
    ಮುಖಪುಟ

    ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

    ಹಾರಿಸ್ - 17 December 2025, 4:52 PM0
    ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...
    ಕರ್ನಾಟಕ

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

    Manjula - 17 December 2025, 4:45 PM1
    ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...
    ಮುಖಪುಟ

    ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

    ರವಿಕುಮಾರ್ ಈಚಲಮರ - 17 December 2025, 4:33 PM0
    ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...
    ಮುಖಪುಟ

    ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

    ಹಾರಿಸ್ - 17 December 2025, 3:27 PM0
    ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...
    ಮುಖಪುಟ

    1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

    Manjula - 17 December 2025, 3:12 PM0
    ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...
    • English
    • ನಮ್ಮ ಕುರಿತು
    • ನೀವೂ ಬರೆಯಿರಿ
    • ವಂತಿಗೆ- Donate
    © Newspaper WordPress Theme by TagDiv