Homeಕರ್ನಾಟಕಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

- Advertisement -
- Advertisement -

ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ವಿದ್ಯಾಸಂಸ್ಥೆಗಳು ಒಂದರ ಹಿಂದೊಂದರಂತೆ ಸ್ಪರ್ಧೆಗೆ ಬಿದ್ದಂತೆ ವಿಕೃತಿ ಮೂಲಕವೇ ಲೋಕ ಪ್ರಸಿದ್ಧವಾಗುತ್ತಿವೆ! ಕಲ್ಲಡ್ಕದಲ್ಲಿ ಭಟ್ಟರು ನಡೆಸುವ ಶ್ರೀರಾಮ ವಿದ್ಯಾಕೇಂದ್ರದ ಮುಗ್ಧ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಗುಂಬಜಗಳನ್ನು ರಣೋತ್ಸಾಹದಲ್ಲಿ ಉರುಳಿಸುವ “ಪ್ರಹಸನ” ಆಡಿಸಲಾಗಿದೆ! ಅಲ್ಲಿಗೆ ಹಿಂದೂತ್ವದ ಹರಿಕಾರ ಕಲ್ಲಡ್ಕ ಭಟ್ಟರು ಪ್ರಾಂಜಲ ಮನಸ್ಸಿನ ಮಕ್ಕಳ ಹೃದಯದಲ್ಲಿ ಕಾರ್ಕೋಟಕ ವಿಷ ತುಂಬುವ ಕಾರ್ಯದಲ್ಲಿ ತಲ್ಲೀನನಾಗಿರುವುದು ಪಕ್ಕಾ ಆಗಿಹೋಗಿದೆ…

ಕಲ್ಲಡ್ಕದ ಶ್ರೀರಾಮಶಾಲೆಯ ಪ್ರತಿ ವರ್ಷದ ಕ್ರೀಡೋತ್ಸವದಲ್ಲಿ ಯಾವುದಾದರೊಂದು ಮತಾಂಧ ಮಸಲತ್ತಿನ ಕಾರ್ಯಕ್ರಮ ಮಾಡಿಸದಿದ್ದರೆ ಭಟ್ಟರಿಗೆ ನಿದ್ದೆಯೇ ಬೀಳುವುದಿಲ್ಲ. ಕೊಲ್ಲೂರು ದೇವಳದ ಹುಂಡಿ ಹಣ ವಿದ್ಯಾರ್ಥಿಗಳ ಉದ್ಧಾರದ ನೆಪದಲ್ಲಿ ಸ್ವಾಹಾ ಮಾಡುತ್ತಿದ್ದ ಭಟ್ಟರು, ಆ ಅನುದಾನ ನಿಂತಾಗ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈನನ್ನು ಧರ್ಮ ಭ್ರಷ್ಟನೆಂಬಂತೆ ಬಿಂಬಿಸಿ ಕಳೆದ ವರ್ಷದ ಕ್ರೀಡಾ ಉತ್ಸವದಲ್ಲಿ “ಆಟ” ಆಡಿಸಿದ್ದ. ಈ ಬಾರಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಠಿ ನಾಟಕ ವಿದ್ಯಾರ್ಥಿಗಳಿಂದ ಮಾಡಿಸಿ ಭಟ್ಟರು ಕೇಕೆ ಹಾಕಿದ್ದಾರೆ. ಕೇಂದ್ರದ ಗೊಬ್ಬರ ಮಂತ್ರಿ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್‍ಬೇಡಿ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಕೇಸರಿ-ಬಿಳಿ ಬಣ್ಣದ ಕರಸೇವಕ ವೇಷದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರೋಷಾವೇಷದಲ್ಲಿ ಬಾಬರಿ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ.

ತೀರಾ ಅಸಹ್ಯವೆಂದರೆ, ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಹ ಈ ಕಾನೂನುಬಾಹಿರ ಆಟಾಟೋಪ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ, ಕಲ್ಲಡ್ಕ ಭಟ್ಟರ ತರಬೇತಿಯಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಟ್ವೀಟ್ ಸಹ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಧರ್ಮಸೂಕ್ಷ್ಮ ‘ಮನರಂಜನೆ’ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡಿತೇ ವಿನಃ ಇದು ಅನಾಹುತಕಾರಿ ಅತಿರೇಕದ ಮಿಮಿಕ್ರಿ ಎಂದು ತಡೆಯುವ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಲಿಲ್ಲ!! ಕಲ್ಲಡ್ಕ ಭಟ್ಟರ ಅಡಿಯಾಳಿನಂತಿರುವ ಶ್ರೀರಾಮ ಶಾಲೆಯಲ್ಲಿ ಈ ವಿಧ್ವಂಸಕತೆಗೂ ಮೊದಲು ಎಲ್.ಕೆ.ಆಡ್ವಾಣಿ ಹಿಂದೆ ಮಾಡಿದ್ದ ರಥಯಾತ್ರೆ ಕಿತಾಪತಿಯ ಅಣುಕು ಪ್ರದರ್ಶನವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಡಿಸಲಾಯಿತ್ತು.

ಕಲ್ಲಡ್ಕ ಭಟ್ಟರ ಧರ್ಮಕಾರಣಕ್ಕಾಗಿ ಶ್ರೀರಾಮ ಶಾಲೆಯಲ್ಲಿ ಕಲಿಯುವ ಮಕ್ಕಳು ದ್ವೇಷಾಸೂಯೆ-ಹಿಂಸೋನ್ಮಾದದ ಮನಃಸ್ಥಿತಿಯಲ್ಲಿ ಬೆಳೆಯಬೇಕಾಗಿ ಬಂದಿರುವುದು ದುರಂತ. ಬಾಸ್‍ನ ಸಂಪ್ರೀತಗೊಳಿಸಲು ಮಕ್ಕಳಿಗೆ ಮುಸ್ಲಿಮರ ದ್ವೇಷಿಸುವ, ಅಟ್ಟಾಡಿಸಿ ಹೊಡೆಯುವ “ವಿದ್ಯೆ” ಬೋಧಿಸುತ್ತಿರುವ ಶ್ರೀರಾಮ ಶಾಲೆಯ ಶಿಕ್ಷಕ ಗಣ ಅವರಿಗರಿವಿಲ್ಲದೆ ಸಮಾಜದ ಯುವಪೀಳಿಗೆಯನ್ನು ಸಮಾಜಘಾತುಕರಾಗಿ ತಯಾರಿಸುತ್ತಿದೆ. ಅಸಹಿಷ್ಣುತೆಯ ತರಬೇತಿ ಪಡೆಯುವ ಮಗು ಮುಂದೆ ಸಾಬರಿಗೇ ಘಾಸಿಗೊಳಿಸಬೇಕೆಂದೇನೂ ಇಲ್ಲ. ಭಿನ್ನಮತ ಬಂದಾಗ ಆ ಪಾಖಂಡಿ ಮಗು ಒಡಹುಟ್ಟಿದವರನ್ನೋ, ಸ್ವಂತ ಧರ್ಮದವರನ್ನೋ ಹಿಂಸಿಸಲು ಹಿಂಜರಿಯದು. ಇದು ಸರಳ ಸಮಾಜ ಶಾಸ್ತ್ರ. ಪಕ್ಕಾ ಮನೋವಿಜ್ಞಾನ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಶ್ರೀರಾಮ ಶಾಲೆಯ ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಧರ್ಮ ಪಾಠ ಹುಲಿ ಸವಾರಿ ಆಗುವುದು ಗ್ಯಾರಂಟಿ!!

ಇವತ್ತು ಕರಾವಳಿಯಲ್ಲಿ ಆಗುತ್ತಿರುವುದು ಹಿಂದೂ ಧರ್ಮ ರಕ್ಷಣೆ ಸ್ವಧರ್ಮದವರಿಗೇ ತಿರುಗುಬಾಣವಾಗುತ್ತಿದೆ. ದನ ಸಾಗಿಸುತ್ತಾರೆಂಬ ಅನುಮಾನದಲ್ಲಿ ಪಾಪದ ಹಿಂದೂ ಹುಡುಗರೇ ಹತರಾಗಿದ್ದಾರೆ. ಸಹಪಾಠಿಗಳೊಂದಿಗೆ ಮಾತಾಡಿದರೂ ಸಾಕು, ಹಿಂದೂ ಹುಡುಗಿಯರು ವ್ಯಭಿಚಾರಿಣಿ ಪಟ್ಟ ಪಡೆದು ಹಿಂಸೆ-ಹಲ್ಲೆ ಅನುಭವಿಸಬೇಕಾಗಿ ಬಂದಿದೆ. ಹಲವು ಹಿಂದೂ ಹುಡುಗಿಯರ ಬದುಕು ಅನೈತಿಕ ಪೊಲೀಸ್‍ಗಿರಿಯಿಂದ ಬರ್ಬಾದಾಗಿ ಹೋಗಿದೆ. ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿರುವ ಮಗು ಅನಾಹುತಕಾರಿ ಅನೈತಿಕ ಪೊಲೀಸ್ ಆಗುತ್ತದೆಯೇ ಹೊರತು ಸಂಯಮ-ಸಹಬಾಳ್ವೆಯ ನೈತಿಕ ಶಿಷ್ಟಾಚಾರದ ಪ್ರಜೆಯಾಗಲು ಹೇಗೆ ಸಾಧ್ಯ? ಬೇವು ಬಿತ್ತಿ ಮಾವು ಬೇಕೆಂದರೆ ಹೇಗೆ?

ಭಟ್ಟರ ಆಟ-ಹೂಟಗಳನ್ನು ಶ್ರೀರಾಮ ಶಾಲೆ, ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಭಟ್ಟರ ಶಾಲೆಯಲ್ಲಿ ಕೊಡುತ್ತಿರುವ ಅಸಹಿಷ್ಣುತೆ, ವ್ಯಗ್ರತೆ, ಸಂಘಟಿತ ಅಪರಾಧ ಕಲೆಯ ತರಬೇತಿಯ ಅಡ್ಡ ಪರಿಣಾಮ ಆಗುವುದು ತಮ್ಮ ಕುಂಟುಂಬದಲ್ಲೇ ಎಂಬುದು ಪಾಲಕರಿಗೆ ಅರಿವಾಗಬೇಕಿದೆ. ಶಾಲೆಯಂಥ ತೀರಾ ಸೂಕ್ಷ್ಮ ಮನಸ್ಸುಗಳಿರುವಲ್ಲಿ ಧ್ವಂಸ-ದ್ವೇಷದ ಕೇಸರಿ ಕಾರ್ಯಕ್ರಮ ನಡೆಸಿದ ಕಲ್ಲಡ್ಕ ಭಟ್ಟರಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಂಗಳಾರತಿ ಆಗುತ್ತಿದೆ. ಭಟ್ಟರ ಮೇಲೆ ಕೇಸೇನೊ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಭಟ್ಟರಂತವರ ಕೋಮು ಅಜೆಂಡಾ ಅರ್ಥವಾದಷ್ಟು ಸಲೀಸಾಗಿ ಮಕ್ಕಳ ಮನೋಸಂಕೀರ್ಣತೆಯ ಮೇಲಾಗುತ್ತಿರುವ ಸೂಕ್ಷ್ಮ ಎಲ್ಲಿ ಅರ್ಥವಾದೀತು. ಪ್ರಕರಣ ಗಟ್ಟಿಯಾಗಿ ನಿಲ್ಲುವ ಸಂಭವವೇ ಇಲ್ಲ. ಆದರೆ ತಮ್ಮ ಮಕ್ಕಳು ರೂಪುಗೊಳ್ಳುತ್ತಿರುವ ಭಯಾನಕ ಭವಿಷ್ಯವನ್ನು ಈಗ ಹೆತ್ತವರೇ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆಯಷ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...