Homeಕರ್ನಾಟಕದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

- Advertisement -
- Advertisement -

ಲಲಿತಮ್ಮನವರು ಹುಟ್ಟಿದ್ದು ಮದ್ದೂರು ತಾಲೂಕು ಕೌಡ್ಲೆ. ಬೆಳೆದಿದ್ದು ಬೆಂಗಳೂರು. ದೊರೆಸ್ವಾಮಿಯವರ ಜೊತೆ ಮದುವೆ (ದೊರೆಸ್ವಾಮಿಯವರ ಪ್ರಕಾರ “ಒಂದು ರೀತಿಯಲ್ಲಿ ಲವ್ ಮ್ಯಾರೇಜ್”!) ಡಿಸೆಂಬರ್ 1950. ಭರ್ತಿ 69 ವರ್ಷಗಳ ಸಹಜೀವನ ನಡೆಸಿ ಈಗ ತಮ್ಮ 89 ವರ್ಷನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಜೀವನ ಪೂರ್ತಿ ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತ ಸಾರ್ಥಕ ಬದುಕು ಬದುಕಿದರು. ಗಂಡನಾದ ಜಂಗಮ ತಿಂಗಳಿಗೆ ಕೈಗೆ ತಂದಿಡುತ್ತಿದ್ದ 100 ರೂ. ಮಾಸಾಶನದಲ್ಲಿ 34 ರೂಪಾಯಿ ಮನೆ ಬಾಡಿಗೆ ಕಟ್ಟಿ, ಮೂರೋ ನಾಲಕೋ ರೂಪಾಯಿ ಮನೆಗೆಲಸದಾಕೆಗೆ ಕೊಟ್ಟು ಮಿಕ್ಕಿದ್ದರಲ್ಲಿ ಎರಡು ಮಕ್ಕಳ ಎಲ್ಲ ಬೇಕುಬೇಡಗಳನ್ನು ನಿಭಾಯಿಸಿ ಮನೆ ತೂಗಿಸಿಕೊಂಡು ಬಂದ ಗಟ್ಟಿಗಿತ್ತಿ ಅವರಾಗಿದ್ದರು.

ಗಂಡ ಸತತ ನಾಲ್ಕು ವರ್ಷಗಳ ಕಾಲ ಭೂದಾನ ಚಳವಳಿಯ ಸಂಘಟಕರಾಗಿ ತಿಂಗಳಲ್ಲಿ ಮೂರುವಾರ ಊರೂರು ತಿರುಗಿ ಒಂದು ವಾರ ಮಾತ್ರ ಮನೆಯಲ್ಲಿರುತ್ತಿದ್ದುದು.

ಖಾದಿ ಪ್ರಸಾರ ಇತ್ಯಾದಿ ಕಾರಣ

ನಂತರ ಕೂಡ ದೊರೆಸ್ವಾಮಿಯವರು ಖಾದಿ ಪ್ರಸಾರ, ಪರಿಸರ ಚಳವಳಿ, ಶಾಲೆಗಳು-ಸಹಕಾರಿ ಸಂಘಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಇವೇ ಮುಂತಾದವುಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ತಿಂಗಳಲ್ಲಿ ಮೂರು ವಾರ ಹೊರಗೆ ಇರುತ್ತಿದ್ದವರೇ. ಕೈಗಾ ಚಳವಳಿಯಲ್ಲಿ ಸತತ ಎರಡು ವರ್ಷ ಆ ಕಡೆಯೇ ಇದ್ದವರು. ಆಗೆಲ್ಲ ಅಮ್ಮ ‘ಏಕಾಂಗವೀರ’ರೇ!

ಸಬ್‍ಇನ್‍ಸ್ಪೆಕ್ಟರ್‍ಗೇ ಗದರಿದರು!

ತುರ್ತುಪರಿಸ್ಥಿತಿ ಅವಧಿಯಲ್ಲಿ ದೊರೆಸ್ವಾಮಿಯವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗ ಅಮ್ಮ ಪ್ರತಿವಾರ ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ, ರವೆಉಂಡೆ, ಪುಳಿಯೋಗರೆ… ಹೀಗೆ ಏನಾದರೊಂದು ತಿಂಡಿಯನ್ನು ಎಲ್ಲ ಸತ್ಯಾಗ್ರಹಿಗಳಿಗೂ ಆಗುವಷ್ಟು ಮಾಡಿಕೊಂಡು ಜೈಲುಭೇಟಿಗೆ ಹೋಗುವರು. ಎಲ್ಲರೂ ಗಂಟೆ ಕಾಲ ಕೂತು ಹರಟುತ್ತ ಕುರುಕುತ್ತ ಸಮಯ ಕಳೆಯುವರು. ಜೈಲು ಸಿಬ್ಬಂದಿ ಕೂಡ ಸಾಮಾನ್ಯವಾಗಿ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ ಒಮ್ಮೆ ಯಾರೋ ಒಬ್ಬ ಹೊಸಬ ‘ಉತ್ಸಾಹಿ’ ಸಬ್‍ಇನ್‍ಸ್ಪೆಕ್ಟರ್‍ಗೆ ಗ್ರಹಚಾರ ಕೆಟ್ಟುಬಿಟ್ಟಿತ್ತು! “ಅದನ್ನೆಲ್ಲ ಇಲ್ಲಿ ತರಬಾರದಮ್ಮ. ಇದು ಜೈಲು. ಗೊತ್ತು ತಾನೆ? ಇಲ್ಲಿ ಅದನ್ನೆಲ್ಲ ಅಲೋ ಮಾಡಲ್ಲ” ಅಂದರು. ಅಮ್ಮ ಅವರಿಗೆ ಸಮಾಧಾನವಾಗಿಯೇ ತಿಳಿಹೇಳಿ ನೋಡಿದರು. ಆತ ಜಗ್ಗಲಿಲ್ಲ. ತನ್ನ ಮಗನ ವಯಸ್ಸಿನ ಆತನಿಗೆ “ಇದೇನಪ್ಪ. ಇಷ್ಟು ದಿನ ಬಿಡುತ್ತಿದ್ದರು, ನಿಮ್ಮದೊಂದು ಹೊಸ ರೂಲ್ಸಾ?” ಎಂದರು ಅಮ್ಮ. ಆತನದು ಬಿಸಿರಕ್ತ. ತನ್ನ ರೂಲುದೊಣ್ಣೆ ಅಡ್ಡಹಿಡಿದು ತಡೆದು ಬಿಟ್ಟ. ಅಮ್ಮ ರಣಚಂಡಿಯಾಗಿ ಬಿಟ್ಟರು!

“ಏನು ಮಾಡ್ತೀಯೋ ಮಾಡ್ಕೋ. ಜೈಲಿಗೆ ಹಾಕ್ತೀಯಾ? ತಯಾರಾಗಿಯೇ ಬಂದಿದೀನಿ. ಈ ತಿಂಡಿಯನ್ನು ಮಾತ್ರ ನಾನು ಹಂಚದೆ ವಾಪಸ್ ಹೋಗೋಳಲ್ಲ..” ಎನ್ನುತ್ತಾ ಅವನ ರೂಲ್ ದೊಣ್ಣೆಯನ್ನೂ ಅವನನ್ನೂ ತಳ್ಳಿ ನುಗ್ಗಿ ನಡೆದೇಬಿಟ್ಟರು. ಇದು ಯಾಕೋ ವಿಕೋಪಕ್ಕೆ ಹೋಗಬಹುದೆಂದು ಹೆದರಿದ ಇತರ ಸಿಬ್ಬಂದಿ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಿದರು. ಅಮ್ಮನಿಗೆ, “ಸಾಹೇಬ ಹೊಸಬ. ನಿಧಾನವಾಗಿ ನಾವು ಅವನಿಗೆ ಹೇಳ್ತೀವಿ. ಇವತ್ತೊಂದು ದಿನ ನಮ್ಮ ಕೈಲೇ ಕೊಡಿಯಮ್ಮ, ನಾವೇ ಹಂಚ್ತೀವಿ” ಅಂತ ರಣಚಂಡಿಯನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು!

ದೊರೆಸ್ವಾಮಿಯವರು ಅಮ್ಮನನ್ನು ನೆನೆದು ಹೇಳುತ್ತಾರೆ..

“70 ವರ್ಷಗಳ ಸಾರ್ಥಕ ಬದುಕು ಒಟ್ಟಿಗೆ ಕಳೆದೆವು. ಕಷ್ಟ ಸುಖ ಎಲ್ಲವನ್ನೂ ಕಂಡಿದ್ದೀವಿ. ಕಷ್ಟವನ್ನು ಪಟ್ಟಿದ್ದೀವಿ, ಸುಖವನ್ನು ಹಂಚಿಕೊಂಡಿದ್ದೆವು. ನಿಮ್ಮಂತ ನೂರಾರು ಗೆಳೆಯರನ್ನು ಪಡೆಯಲಿಕ್ಕೆ ಅವಳು ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅವಳು ನನ್ನ ಪಾಡಿಗೆ ನನ್ನನ್ನು ಬಿಟ್ಟು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದರಿಂದಲೇ ನಾನು ಊರೂರು ತಿರುಗಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಲಿಕ್ಕೆ ಸಾಧ್ಯವಾಯಿತು. ನನಗೆ ನೀವೆಲ್ಲರೂ ಸೇರಿ ಸಮಾಜ ನನ್ನ ರಕ್ಷಣೆಗೆ ನಿಲ್ಲುತ್ತದೆ. ಒಂದು ವೇಳೆ ನಾನೇ ಮೊದಲು ಹೊರಟುಹೋಗಿದ್ದರೆ ಅವಳನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬ ಆತಂಕ ಕಾಡುತ್ತಿತ್ತು. ಆ ಆತಂಕ ಇವತ್ತು ದೂರವಾಗಿದೆ. ಅವಳು ಮುಂದೆ ಹೋಗಿದ್ದಾಳೆ. ಇದು ನಿಜವಾಗಿಯೂ ಸಮಾಧಾನದ ದಿನವಾಗಿದೆ.

ಹೌದು ಅವಳಿಲ್ಲದಿರುವುದು ಹಲವು ದಿನಗಳು ಕಾಡುತ್ತದೆ ನಿಜ. ಆದರೂ ಪರವಾಗಿಲ್ಲ. ನೀವೆಲ್ಲರೂ ಇದ್ದೀರಿ, ಇಷ್ಟೊಂದು ಜನ ನನ್ನ ವಿಶ್ವಾಸಿಗಳು, ಸ್ನೇಹಿತರೂ, ಹಿತೈಷಿಗಳಾಗಿದ್ದಿರಿ. ನಿಮ್ಮೆಲ್ಲರ ಬೆಂಬಲದೊಂದಿಗೆ ಇನ್ನುಳಿದ ಜೀವನವನ್ನು ಕಳೆಯಬಲ್ಲೆ ಎಂಬುದಾಗಿ ದೊರೆಸ್ವಾಮಿಯವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ.

ಸಾವಿನಲ್ಲೂ ಮಾದರಿ

ಶ್ರೀಮತಿ ಲಲಿತಮ್ಮನವರಿಗೆ ದೊರೆಸ್ವಾಮಿಯವರು ಮತ್ತವರ ಕುಟುಂಬವರ್ಗದವರು ಯಾವುದೇ ಸಾಂಪ್ರದಾಯಿಕ ಅಂತ್ಯಸಂಸ್ಕಾರ ಮಾಡದೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೋಸ್ಕರ ದೇಹದಾನ ಮಾಡಿದ್ದಾರೆ. ಸಮಾಜಕ್ಕೆ ಮಾದರಿ ಮತ್ತು ಆದರ್ಶವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...