Homeಕರ್ನಾಟಕಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

- Advertisement -
- Advertisement -

ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ವಿದ್ಯಾಸಂಸ್ಥೆಗಳು ಒಂದರ ಹಿಂದೊಂದರಂತೆ ಸ್ಪರ್ಧೆಗೆ ಬಿದ್ದಂತೆ ವಿಕೃತಿ ಮೂಲಕವೇ ಲೋಕ ಪ್ರಸಿದ್ಧವಾಗುತ್ತಿವೆ! ಕಲ್ಲಡ್ಕದಲ್ಲಿ ಭಟ್ಟರು ನಡೆಸುವ ಶ್ರೀರಾಮ ವಿದ್ಯಾಕೇಂದ್ರದ ಮುಗ್ಧ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಗುಂಬಜಗಳನ್ನು ರಣೋತ್ಸಾಹದಲ್ಲಿ ಉರುಳಿಸುವ “ಪ್ರಹಸನ” ಆಡಿಸಲಾಗಿದೆ! ಅಲ್ಲಿಗೆ ಹಿಂದೂತ್ವದ ಹರಿಕಾರ ಕಲ್ಲಡ್ಕ ಭಟ್ಟರು ಪ್ರಾಂಜಲ ಮನಸ್ಸಿನ ಮಕ್ಕಳ ಹೃದಯದಲ್ಲಿ ಕಾರ್ಕೋಟಕ ವಿಷ ತುಂಬುವ ಕಾರ್ಯದಲ್ಲಿ ತಲ್ಲೀನನಾಗಿರುವುದು ಪಕ್ಕಾ ಆಗಿಹೋಗಿದೆ…

ಕಲ್ಲಡ್ಕದ ಶ್ರೀರಾಮಶಾಲೆಯ ಪ್ರತಿ ವರ್ಷದ ಕ್ರೀಡೋತ್ಸವದಲ್ಲಿ ಯಾವುದಾದರೊಂದು ಮತಾಂಧ ಮಸಲತ್ತಿನ ಕಾರ್ಯಕ್ರಮ ಮಾಡಿಸದಿದ್ದರೆ ಭಟ್ಟರಿಗೆ ನಿದ್ದೆಯೇ ಬೀಳುವುದಿಲ್ಲ. ಕೊಲ್ಲೂರು ದೇವಳದ ಹುಂಡಿ ಹಣ ವಿದ್ಯಾರ್ಥಿಗಳ ಉದ್ಧಾರದ ನೆಪದಲ್ಲಿ ಸ್ವಾಹಾ ಮಾಡುತ್ತಿದ್ದ ಭಟ್ಟರು, ಆ ಅನುದಾನ ನಿಂತಾಗ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈನನ್ನು ಧರ್ಮ ಭ್ರಷ್ಟನೆಂಬಂತೆ ಬಿಂಬಿಸಿ ಕಳೆದ ವರ್ಷದ ಕ್ರೀಡಾ ಉತ್ಸವದಲ್ಲಿ “ಆಟ” ಆಡಿಸಿದ್ದ. ಈ ಬಾರಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಠಿ ನಾಟಕ ವಿದ್ಯಾರ್ಥಿಗಳಿಂದ ಮಾಡಿಸಿ ಭಟ್ಟರು ಕೇಕೆ ಹಾಕಿದ್ದಾರೆ. ಕೇಂದ್ರದ ಗೊಬ್ಬರ ಮಂತ್ರಿ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್‍ಬೇಡಿ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಕೇಸರಿ-ಬಿಳಿ ಬಣ್ಣದ ಕರಸೇವಕ ವೇಷದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರೋಷಾವೇಷದಲ್ಲಿ ಬಾಬರಿ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ.

ತೀರಾ ಅಸಹ್ಯವೆಂದರೆ, ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಹ ಈ ಕಾನೂನುಬಾಹಿರ ಆಟಾಟೋಪ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ, ಕಲ್ಲಡ್ಕ ಭಟ್ಟರ ತರಬೇತಿಯಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಟ್ವೀಟ್ ಸಹ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಧರ್ಮಸೂಕ್ಷ್ಮ ‘ಮನರಂಜನೆ’ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡಿತೇ ವಿನಃ ಇದು ಅನಾಹುತಕಾರಿ ಅತಿರೇಕದ ಮಿಮಿಕ್ರಿ ಎಂದು ತಡೆಯುವ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಲಿಲ್ಲ!! ಕಲ್ಲಡ್ಕ ಭಟ್ಟರ ಅಡಿಯಾಳಿನಂತಿರುವ ಶ್ರೀರಾಮ ಶಾಲೆಯಲ್ಲಿ ಈ ವಿಧ್ವಂಸಕತೆಗೂ ಮೊದಲು ಎಲ್.ಕೆ.ಆಡ್ವಾಣಿ ಹಿಂದೆ ಮಾಡಿದ್ದ ರಥಯಾತ್ರೆ ಕಿತಾಪತಿಯ ಅಣುಕು ಪ್ರದರ್ಶನವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಡಿಸಲಾಯಿತ್ತು.

ಕಲ್ಲಡ್ಕ ಭಟ್ಟರ ಧರ್ಮಕಾರಣಕ್ಕಾಗಿ ಶ್ರೀರಾಮ ಶಾಲೆಯಲ್ಲಿ ಕಲಿಯುವ ಮಕ್ಕಳು ದ್ವೇಷಾಸೂಯೆ-ಹಿಂಸೋನ್ಮಾದದ ಮನಃಸ್ಥಿತಿಯಲ್ಲಿ ಬೆಳೆಯಬೇಕಾಗಿ ಬಂದಿರುವುದು ದುರಂತ. ಬಾಸ್‍ನ ಸಂಪ್ರೀತಗೊಳಿಸಲು ಮಕ್ಕಳಿಗೆ ಮುಸ್ಲಿಮರ ದ್ವೇಷಿಸುವ, ಅಟ್ಟಾಡಿಸಿ ಹೊಡೆಯುವ “ವಿದ್ಯೆ” ಬೋಧಿಸುತ್ತಿರುವ ಶ್ರೀರಾಮ ಶಾಲೆಯ ಶಿಕ್ಷಕ ಗಣ ಅವರಿಗರಿವಿಲ್ಲದೆ ಸಮಾಜದ ಯುವಪೀಳಿಗೆಯನ್ನು ಸಮಾಜಘಾತುಕರಾಗಿ ತಯಾರಿಸುತ್ತಿದೆ. ಅಸಹಿಷ್ಣುತೆಯ ತರಬೇತಿ ಪಡೆಯುವ ಮಗು ಮುಂದೆ ಸಾಬರಿಗೇ ಘಾಸಿಗೊಳಿಸಬೇಕೆಂದೇನೂ ಇಲ್ಲ. ಭಿನ್ನಮತ ಬಂದಾಗ ಆ ಪಾಖಂಡಿ ಮಗು ಒಡಹುಟ್ಟಿದವರನ್ನೋ, ಸ್ವಂತ ಧರ್ಮದವರನ್ನೋ ಹಿಂಸಿಸಲು ಹಿಂಜರಿಯದು. ಇದು ಸರಳ ಸಮಾಜ ಶಾಸ್ತ್ರ. ಪಕ್ಕಾ ಮನೋವಿಜ್ಞಾನ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಶ್ರೀರಾಮ ಶಾಲೆಯ ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಧರ್ಮ ಪಾಠ ಹುಲಿ ಸವಾರಿ ಆಗುವುದು ಗ್ಯಾರಂಟಿ!!

ಇವತ್ತು ಕರಾವಳಿಯಲ್ಲಿ ಆಗುತ್ತಿರುವುದು ಹಿಂದೂ ಧರ್ಮ ರಕ್ಷಣೆ ಸ್ವಧರ್ಮದವರಿಗೇ ತಿರುಗುಬಾಣವಾಗುತ್ತಿದೆ. ದನ ಸಾಗಿಸುತ್ತಾರೆಂಬ ಅನುಮಾನದಲ್ಲಿ ಪಾಪದ ಹಿಂದೂ ಹುಡುಗರೇ ಹತರಾಗಿದ್ದಾರೆ. ಸಹಪಾಠಿಗಳೊಂದಿಗೆ ಮಾತಾಡಿದರೂ ಸಾಕು, ಹಿಂದೂ ಹುಡುಗಿಯರು ವ್ಯಭಿಚಾರಿಣಿ ಪಟ್ಟ ಪಡೆದು ಹಿಂಸೆ-ಹಲ್ಲೆ ಅನುಭವಿಸಬೇಕಾಗಿ ಬಂದಿದೆ. ಹಲವು ಹಿಂದೂ ಹುಡುಗಿಯರ ಬದುಕು ಅನೈತಿಕ ಪೊಲೀಸ್‍ಗಿರಿಯಿಂದ ಬರ್ಬಾದಾಗಿ ಹೋಗಿದೆ. ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿರುವ ಮಗು ಅನಾಹುತಕಾರಿ ಅನೈತಿಕ ಪೊಲೀಸ್ ಆಗುತ್ತದೆಯೇ ಹೊರತು ಸಂಯಮ-ಸಹಬಾಳ್ವೆಯ ನೈತಿಕ ಶಿಷ್ಟಾಚಾರದ ಪ್ರಜೆಯಾಗಲು ಹೇಗೆ ಸಾಧ್ಯ? ಬೇವು ಬಿತ್ತಿ ಮಾವು ಬೇಕೆಂದರೆ ಹೇಗೆ?

ಭಟ್ಟರ ಆಟ-ಹೂಟಗಳನ್ನು ಶ್ರೀರಾಮ ಶಾಲೆ, ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಭಟ್ಟರ ಶಾಲೆಯಲ್ಲಿ ಕೊಡುತ್ತಿರುವ ಅಸಹಿಷ್ಣುತೆ, ವ್ಯಗ್ರತೆ, ಸಂಘಟಿತ ಅಪರಾಧ ಕಲೆಯ ತರಬೇತಿಯ ಅಡ್ಡ ಪರಿಣಾಮ ಆಗುವುದು ತಮ್ಮ ಕುಂಟುಂಬದಲ್ಲೇ ಎಂಬುದು ಪಾಲಕರಿಗೆ ಅರಿವಾಗಬೇಕಿದೆ. ಶಾಲೆಯಂಥ ತೀರಾ ಸೂಕ್ಷ್ಮ ಮನಸ್ಸುಗಳಿರುವಲ್ಲಿ ಧ್ವಂಸ-ದ್ವೇಷದ ಕೇಸರಿ ಕಾರ್ಯಕ್ರಮ ನಡೆಸಿದ ಕಲ್ಲಡ್ಕ ಭಟ್ಟರಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಂಗಳಾರತಿ ಆಗುತ್ತಿದೆ. ಭಟ್ಟರ ಮೇಲೆ ಕೇಸೇನೊ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಭಟ್ಟರಂತವರ ಕೋಮು ಅಜೆಂಡಾ ಅರ್ಥವಾದಷ್ಟು ಸಲೀಸಾಗಿ ಮಕ್ಕಳ ಮನೋಸಂಕೀರ್ಣತೆಯ ಮೇಲಾಗುತ್ತಿರುವ ಸೂಕ್ಷ್ಮ ಎಲ್ಲಿ ಅರ್ಥವಾದೀತು. ಪ್ರಕರಣ ಗಟ್ಟಿಯಾಗಿ ನಿಲ್ಲುವ ಸಂಭವವೇ ಇಲ್ಲ. ಆದರೆ ತಮ್ಮ ಮಕ್ಕಳು ರೂಪುಗೊಳ್ಳುತ್ತಿರುವ ಭಯಾನಕ ಭವಿಷ್ಯವನ್ನು ಈಗ ಹೆತ್ತವರೇ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆಯಷ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...