Homeಕರ್ನಾಟಕಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

- Advertisement -
- Advertisement -

ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ವಿದ್ಯಾಸಂಸ್ಥೆಗಳು ಒಂದರ ಹಿಂದೊಂದರಂತೆ ಸ್ಪರ್ಧೆಗೆ ಬಿದ್ದಂತೆ ವಿಕೃತಿ ಮೂಲಕವೇ ಲೋಕ ಪ್ರಸಿದ್ಧವಾಗುತ್ತಿವೆ! ಕಲ್ಲಡ್ಕದಲ್ಲಿ ಭಟ್ಟರು ನಡೆಸುವ ಶ್ರೀರಾಮ ವಿದ್ಯಾಕೇಂದ್ರದ ಮುಗ್ಧ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಗುಂಬಜಗಳನ್ನು ರಣೋತ್ಸಾಹದಲ್ಲಿ ಉರುಳಿಸುವ “ಪ್ರಹಸನ” ಆಡಿಸಲಾಗಿದೆ! ಅಲ್ಲಿಗೆ ಹಿಂದೂತ್ವದ ಹರಿಕಾರ ಕಲ್ಲಡ್ಕ ಭಟ್ಟರು ಪ್ರಾಂಜಲ ಮನಸ್ಸಿನ ಮಕ್ಕಳ ಹೃದಯದಲ್ಲಿ ಕಾರ್ಕೋಟಕ ವಿಷ ತುಂಬುವ ಕಾರ್ಯದಲ್ಲಿ ತಲ್ಲೀನನಾಗಿರುವುದು ಪಕ್ಕಾ ಆಗಿಹೋಗಿದೆ…

ಕಲ್ಲಡ್ಕದ ಶ್ರೀರಾಮಶಾಲೆಯ ಪ್ರತಿ ವರ್ಷದ ಕ್ರೀಡೋತ್ಸವದಲ್ಲಿ ಯಾವುದಾದರೊಂದು ಮತಾಂಧ ಮಸಲತ್ತಿನ ಕಾರ್ಯಕ್ರಮ ಮಾಡಿಸದಿದ್ದರೆ ಭಟ್ಟರಿಗೆ ನಿದ್ದೆಯೇ ಬೀಳುವುದಿಲ್ಲ. ಕೊಲ್ಲೂರು ದೇವಳದ ಹುಂಡಿ ಹಣ ವಿದ್ಯಾರ್ಥಿಗಳ ಉದ್ಧಾರದ ನೆಪದಲ್ಲಿ ಸ್ವಾಹಾ ಮಾಡುತ್ತಿದ್ದ ಭಟ್ಟರು, ಆ ಅನುದಾನ ನಿಂತಾಗ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈನನ್ನು ಧರ್ಮ ಭ್ರಷ್ಟನೆಂಬಂತೆ ಬಿಂಬಿಸಿ ಕಳೆದ ವರ್ಷದ ಕ್ರೀಡಾ ಉತ್ಸವದಲ್ಲಿ “ಆಟ” ಆಡಿಸಿದ್ದ. ಈ ಬಾರಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಠಿ ನಾಟಕ ವಿದ್ಯಾರ್ಥಿಗಳಿಂದ ಮಾಡಿಸಿ ಭಟ್ಟರು ಕೇಕೆ ಹಾಕಿದ್ದಾರೆ. ಕೇಂದ್ರದ ಗೊಬ್ಬರ ಮಂತ್ರಿ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್‍ಬೇಡಿ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಕೇಸರಿ-ಬಿಳಿ ಬಣ್ಣದ ಕರಸೇವಕ ವೇಷದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರೋಷಾವೇಷದಲ್ಲಿ ಬಾಬರಿ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ.

ತೀರಾ ಅಸಹ್ಯವೆಂದರೆ, ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಹ ಈ ಕಾನೂನುಬಾಹಿರ ಆಟಾಟೋಪ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ, ಕಲ್ಲಡ್ಕ ಭಟ್ಟರ ತರಬೇತಿಯಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಟ್ವೀಟ್ ಸಹ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಧರ್ಮಸೂಕ್ಷ್ಮ ‘ಮನರಂಜನೆ’ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡಿತೇ ವಿನಃ ಇದು ಅನಾಹುತಕಾರಿ ಅತಿರೇಕದ ಮಿಮಿಕ್ರಿ ಎಂದು ತಡೆಯುವ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಲಿಲ್ಲ!! ಕಲ್ಲಡ್ಕ ಭಟ್ಟರ ಅಡಿಯಾಳಿನಂತಿರುವ ಶ್ರೀರಾಮ ಶಾಲೆಯಲ್ಲಿ ಈ ವಿಧ್ವಂಸಕತೆಗೂ ಮೊದಲು ಎಲ್.ಕೆ.ಆಡ್ವಾಣಿ ಹಿಂದೆ ಮಾಡಿದ್ದ ರಥಯಾತ್ರೆ ಕಿತಾಪತಿಯ ಅಣುಕು ಪ್ರದರ್ಶನವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಡಿಸಲಾಯಿತ್ತು.

ಕಲ್ಲಡ್ಕ ಭಟ್ಟರ ಧರ್ಮಕಾರಣಕ್ಕಾಗಿ ಶ್ರೀರಾಮ ಶಾಲೆಯಲ್ಲಿ ಕಲಿಯುವ ಮಕ್ಕಳು ದ್ವೇಷಾಸೂಯೆ-ಹಿಂಸೋನ್ಮಾದದ ಮನಃಸ್ಥಿತಿಯಲ್ಲಿ ಬೆಳೆಯಬೇಕಾಗಿ ಬಂದಿರುವುದು ದುರಂತ. ಬಾಸ್‍ನ ಸಂಪ್ರೀತಗೊಳಿಸಲು ಮಕ್ಕಳಿಗೆ ಮುಸ್ಲಿಮರ ದ್ವೇಷಿಸುವ, ಅಟ್ಟಾಡಿಸಿ ಹೊಡೆಯುವ “ವಿದ್ಯೆ” ಬೋಧಿಸುತ್ತಿರುವ ಶ್ರೀರಾಮ ಶಾಲೆಯ ಶಿಕ್ಷಕ ಗಣ ಅವರಿಗರಿವಿಲ್ಲದೆ ಸಮಾಜದ ಯುವಪೀಳಿಗೆಯನ್ನು ಸಮಾಜಘಾತುಕರಾಗಿ ತಯಾರಿಸುತ್ತಿದೆ. ಅಸಹಿಷ್ಣುತೆಯ ತರಬೇತಿ ಪಡೆಯುವ ಮಗು ಮುಂದೆ ಸಾಬರಿಗೇ ಘಾಸಿಗೊಳಿಸಬೇಕೆಂದೇನೂ ಇಲ್ಲ. ಭಿನ್ನಮತ ಬಂದಾಗ ಆ ಪಾಖಂಡಿ ಮಗು ಒಡಹುಟ್ಟಿದವರನ್ನೋ, ಸ್ವಂತ ಧರ್ಮದವರನ್ನೋ ಹಿಂಸಿಸಲು ಹಿಂಜರಿಯದು. ಇದು ಸರಳ ಸಮಾಜ ಶಾಸ್ತ್ರ. ಪಕ್ಕಾ ಮನೋವಿಜ್ಞಾನ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಶ್ರೀರಾಮ ಶಾಲೆಯ ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಧರ್ಮ ಪಾಠ ಹುಲಿ ಸವಾರಿ ಆಗುವುದು ಗ್ಯಾರಂಟಿ!!

ಇವತ್ತು ಕರಾವಳಿಯಲ್ಲಿ ಆಗುತ್ತಿರುವುದು ಹಿಂದೂ ಧರ್ಮ ರಕ್ಷಣೆ ಸ್ವಧರ್ಮದವರಿಗೇ ತಿರುಗುಬಾಣವಾಗುತ್ತಿದೆ. ದನ ಸಾಗಿಸುತ್ತಾರೆಂಬ ಅನುಮಾನದಲ್ಲಿ ಪಾಪದ ಹಿಂದೂ ಹುಡುಗರೇ ಹತರಾಗಿದ್ದಾರೆ. ಸಹಪಾಠಿಗಳೊಂದಿಗೆ ಮಾತಾಡಿದರೂ ಸಾಕು, ಹಿಂದೂ ಹುಡುಗಿಯರು ವ್ಯಭಿಚಾರಿಣಿ ಪಟ್ಟ ಪಡೆದು ಹಿಂಸೆ-ಹಲ್ಲೆ ಅನುಭವಿಸಬೇಕಾಗಿ ಬಂದಿದೆ. ಹಲವು ಹಿಂದೂ ಹುಡುಗಿಯರ ಬದುಕು ಅನೈತಿಕ ಪೊಲೀಸ್‍ಗಿರಿಯಿಂದ ಬರ್ಬಾದಾಗಿ ಹೋಗಿದೆ. ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿರುವ ಮಗು ಅನಾಹುತಕಾರಿ ಅನೈತಿಕ ಪೊಲೀಸ್ ಆಗುತ್ತದೆಯೇ ಹೊರತು ಸಂಯಮ-ಸಹಬಾಳ್ವೆಯ ನೈತಿಕ ಶಿಷ್ಟಾಚಾರದ ಪ್ರಜೆಯಾಗಲು ಹೇಗೆ ಸಾಧ್ಯ? ಬೇವು ಬಿತ್ತಿ ಮಾವು ಬೇಕೆಂದರೆ ಹೇಗೆ?

ಭಟ್ಟರ ಆಟ-ಹೂಟಗಳನ್ನು ಶ್ರೀರಾಮ ಶಾಲೆ, ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಭಟ್ಟರ ಶಾಲೆಯಲ್ಲಿ ಕೊಡುತ್ತಿರುವ ಅಸಹಿಷ್ಣುತೆ, ವ್ಯಗ್ರತೆ, ಸಂಘಟಿತ ಅಪರಾಧ ಕಲೆಯ ತರಬೇತಿಯ ಅಡ್ಡ ಪರಿಣಾಮ ಆಗುವುದು ತಮ್ಮ ಕುಂಟುಂಬದಲ್ಲೇ ಎಂಬುದು ಪಾಲಕರಿಗೆ ಅರಿವಾಗಬೇಕಿದೆ. ಶಾಲೆಯಂಥ ತೀರಾ ಸೂಕ್ಷ್ಮ ಮನಸ್ಸುಗಳಿರುವಲ್ಲಿ ಧ್ವಂಸ-ದ್ವೇಷದ ಕೇಸರಿ ಕಾರ್ಯಕ್ರಮ ನಡೆಸಿದ ಕಲ್ಲಡ್ಕ ಭಟ್ಟರಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಂಗಳಾರತಿ ಆಗುತ್ತಿದೆ. ಭಟ್ಟರ ಮೇಲೆ ಕೇಸೇನೊ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಭಟ್ಟರಂತವರ ಕೋಮು ಅಜೆಂಡಾ ಅರ್ಥವಾದಷ್ಟು ಸಲೀಸಾಗಿ ಮಕ್ಕಳ ಮನೋಸಂಕೀರ್ಣತೆಯ ಮೇಲಾಗುತ್ತಿರುವ ಸೂಕ್ಷ್ಮ ಎಲ್ಲಿ ಅರ್ಥವಾದೀತು. ಪ್ರಕರಣ ಗಟ್ಟಿಯಾಗಿ ನಿಲ್ಲುವ ಸಂಭವವೇ ಇಲ್ಲ. ಆದರೆ ತಮ್ಮ ಮಕ್ಕಳು ರೂಪುಗೊಳ್ಳುತ್ತಿರುವ ಭಯಾನಕ ಭವಿಷ್ಯವನ್ನು ಈಗ ಹೆತ್ತವರೇ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆಯಷ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...