Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ಒಬ್ಬ ವ್ಯಕ್ತಿ ಸ್ವಂತವಾಗಿ ಚಿಂತಿಸಿ, ಭಾವನೆಗಳನ್ನು ಅನುಭವಿಸಿ, ತನ್ನ ನಿರ್ಧಾರಗಳನ್ನು ತಾನೇ ಮಾಡಿದಾಗ ಮಾತ್ರವೇ ಸಂಪೂರ್ಣ ಮುಕ್ತತೆ ಮತ್ತು ಸ್ವಾತಂತ್ರ್ಯ ಅಸ್ತಿತ್ವದಲ್ಲಿ ಇರುತ್ತದೆ. ಅವನು ನೈಜವಾಗಿ ಹೀಗೆ ಮಾಡಲು ಯಾವಾಗ ಸಾಧ್ಯ ಎಂದರೆ, ತನಗೆ ನೈಜವಾಗಿ ಪ್ರತಿಕ್ರಿಯಿಸಲು ಅನುಮತಿ ನೀಡುವ, ತನಗಿಂತ ಹೊರಗಿನ ಪ್ರಪಂಚದೊಂದಿಗೆ ಉತ್ಪಾದಕ ಸಂಬಂಧವನ್ನು ತಲಪಿದಾಗ ಮಾತ್ರ. ಮುಕ್ತತೆ ಮತ್ತು ಸ್ವಾತಂತ್ರ್ಯದ ಈ ಪರಿಕಲ್ಪನೆಯು ಕ್ರಾಂತಿಕಾರಿ ದಾರ್ಶನಿಕರು/ಯೋಗಿಗಳು (Radical mystics) ಮತ್ತು ಕಾರ್ಲ್‌ಮಾರ್ಕ್ಸ್‌ನ ಚಿಂತನೆಗಳಲ್ಲಿ ಕಂಡುಬರುತ್ತದೆ.

ಕ್ರೈಸ್ತ ದಾರ್ಶನಿಕರಲ್ಲಿಯೇ ಅತ್ಯಂತ ಕ್ರಾಂತಿಕಾರಿಯಾದ ಮೀಯ್ಸ್ಟರ್ ಎಕ್ಹಾರ್ಟ್ ಹೇಳುತ್ತಾರೆ: “ನನ್ನ ಜೀವನ ಏನು? ತನ್ನಿಂದ ತಾನಾಗಿ ತನ್ನೊಳಗೆಯೇ ಚಲಿಸಿದಂತದ್ದು. ಹೊರಗಿನಿಂದ ಚಲಿಸಿದಂತದ್ದು ಬದುಕಿರುವುದಿಲ್ಲ.”(5) ಅಥವಾ, “ಒಬ್ಬ ಮನುಷ್ಯ ಹೊರಗಿನಿಂದ ಏನನ್ನಾದರೂ ಹುಟ್ಟಿಸಿಕೊಂಡರೆ ಅಥವಾ ಪಡೆದುಕೊಂಡರೆ, ಅದು ತಪ್ಪು. ಒಬ್ಬ ವ್ಯಕ್ತಿ ದೇವರನ್ನು ಗ್ರಹಿಸಬಾರದು ಅಥವಾ ಆತನನ್ನು ತನ್ನಿಂದ ಹೊರಗಿನವನು ಎಂದು ಪರಿಗಣಿಸಬಾರದು; ಬದಲಾಗಿ, ನಮ್ಮ ಸ್ವಂತ ಮತ್ತು ನಮ್ಮೊಳಗೇ ಇರುವವನೆಂದು ಪರಿಗಣಿಸಬೇಕು.”(6)

ಮಾರ್ಕ್ಸ್ ಇದೇ ರೀತಿಯಲ್ಲಿ, ಆದರೆ ಧಾರ್ಮಿಕವಲ್ಲದ ದಾಟಿಯಲ್ಲಿ ಹೇಳುತ್ತಾರೆ:

“ತನಗೆ ತಾನೇ ಮಾಲಕ ಆಗಿರದ ತನ್ನ ಮಾಲಕ ತಾನು ಮಾತ್ರವೇ ಆಗಿರದ, ಮತ್ತು ತನ್ನ ಅಸ್ತಿತ್ವಕ್ಕೆ ತಾನೇ ಬಾಧ್ಯ ಎಂದು ಭಾವಿಸಿರದ ಹೊರತು, ಒಬ್ಬ ವ್ಯಕ್ತಿಯು ತನ್ನನ್ನು ಸ್ವತಂತ್ರ ಎಂದು ಪರಿಗಣಿಸುವುದಿಲ್ಲ. ಇನ್ನೊಬ್ಬನ ಉಪಕಾರದಲ್ಲಿ ಬದುಕುವವನು ತನ್ನನ್ನು ಅವಲಂಬಿತ ಮನುಷ್ಯನೆಂದೇ ಪರಿಗಣಿಸುತ್ತಾನೆ. ಆದರೆ, ನನ್ನ ಜೀವನದ ಮುಂದುವರಿಕೆಗೆ, ಮತ್ತು ಅದರ ಸೃಷ್ಟಿಗೂ ನಾನು ಒಬ್ಬ ವ್ಯಕ್ತಿಗೆ ಋಣಿಯಾಗಿದ್ದೇನೆ, ಏಕೆಂದರೆ, ಅವನದರ ಮೂಲವಾಗಿದ್ದಾನೆ ಎಂದಾದಾಗ, ನಾನು ಸಂಪೂರ್ಣವಾಗಿ ಇನ್ನೊಬ್ಬ ವ್ಯಕ್ತಿಯ ಉಪಕಾರದಲ್ಲಿ ಬದುಕುತ್ತಿದ್ದೇನೆ. ಅದು ನನ್ನ ಸ್ವಂತ ಸೃಷ್ಟಿ ಆಗಿರದೇ ಇದ್ದರೆ, ನನ್ನ ಜೀವನಕ್ಕೆ ಅಗತ್ಯವಾಗಿ ಇಂತಾ ಒಂದು ಹೊರಗಿನ ಕಾರಣ ಇರುತ್ತದೆ.”(7)

ಅಥವಾ ಮಾರ್ಕ್ಸ್ ಬೇರೆ ಕಡೆ ಹೇಳಿರುವಂತೆ:

“ನೋಡುವುದು, ಕೇಳುವುದು, ಮೂಸುವುದು, ರುಚಿನೋಡುವುದು, ಅನುಭವಿಸುವುದು, ಭಾವಿಸುವುದು, ಯೋಚಿಸುವುದು, ಬಯಸುವುದು, ಪ್ರೀತಿಸುವುದು- (ಸೇರಿದಂತೆ) ಪ್ರಪಂಚಕ್ಕೆ ತನ್ನ ಪ್ರತಿಯೊಂದು ಸಂಬಂಧಗಳಲ್ಲಿ ಒಬ್ಬ ಪೂರ್ಣ ಮನುಷ್ಯನಾಗಿ ತನ್ನ ವೈಯಕ್ತಿತೆಯನ್ನು ದೃಢಪಡಿಸಿದರೆ ಮಾತ್ರವೇ ಅಥವಾ ಸರಳವಾಗಿ ತನ್ನ ವೈಯಕ್ತಿಕತೆಯ ಪ್ರತಿಯೊಂದು ಎಲ್ಲಾ ಅಂಗಗಳನ್ನು ದೃಢಪಡಿಸಿದರೆ ಮತ್ತು ಅಭಿವ್ಯಕ್ತಗೊಳಿಸಿದರೆ ಮಾತ್ರವೇ ಮನುಷ್ಯನು ಸ್ವತಂತ್ರನಾಗಿರುವುದು.”

ಮುಕ್ತತೆ ಮತ್ತು ಸ್ವಾತಂತ್ರ್ಯಗಳು ಕೇವಲ ದಬ್ಬಾಳಿಕೆಯಿಂದ ವಿಮೋಚನೆಯಾಗಲೀ, ವಾಣಿಜ್ಯ ವಿಷಯಗಳಲ್ಲಿ ಸ್ವಾತಂತ್ರ್ಯ ಮಾತ್ರವೇ ಅಲ್ಲದೆ, ವೈಯಕ್ತಿಕತೆಯ ಸಾಕ್ಷಾತ್ಕಾರವಾಗಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆ ಎಂದರೆ, ನಿರ್ದಿಷ್ಟವಾಗಿ ಆತನು ತಲಪಿರುವ ಸ್ವಾತಂತ್ರ್ಯದ ಮಟ್ಟ. ಸಂಪೂರ್ಣವಾಗಿ ಜಾಗೃತಗೊಂಡರೆ, ಒಬ್ಬ ಉತ್ಪಾದಕ ಮನುಷ್ಯನು ಸ್ವತಂತ್ರ ಮನುಷ್ಯ; ಏಕೆಂದರೆ, ತನ್ನ ಸ್ವಂತಿಕೆಯೇ ತನ್ನ ಜೀವನದ ಮೂಲವಾಗಿ ಅವನು ನೈಜವಾಗಿ ಬದುಕಲು ಅವನಿಗೆ ಸಾಧ್ಯ. (ಒಬ್ಬ ಸ್ವತಂತ್ರ ಮನುಷ್ಯನೆಂದರೆ ಒಬ್ಬ ಪ್ರತ್ಯೇಕಿತ ಮನುಷ್ಯನೆಂದು ಇದರ ಅರ್ಥವಲ್ಲ ಎಂದು ಹೇಳಬೇಕಾದ ಅಗತ್ಯವಿಲ್ಲ; ಯಾಕೆಂದರೆ, ಇತರರಿಗೆ ಮತ್ತು ಪ್ರಪಂಚಕ್ಕೆ ಸಂಬಂಧಿತನಾಗಿ ಮತ್ತು ಆಸಕ್ತನಾಗಿ ಇರುವ ಪ್ರಕ್ರಿಯೆಯಲ್ಲಿಯೇ ವ್ಯಕ್ತಿತ್ವದ ಬೆಳವಣಿಗೆಯು ನಡೆಯುತ್ತದೆ. ಆದರೆ, ಈ ರೀತಿ ಸಂಬಂಧಿತನಾಗಿರುವುದು, ಅವಲಂಬಿತನಾಗಿರುವುದಕ್ಕಿಂತ ಸಂಪೂರ್ಣವಾಗಿ ಬೇರೆ.) ಸ್ವಯಂಸಾಕ್ಷಾತ್ಕಾರ ಅಥವಾ ಸ್ವಯಂ ಅನುಭೂತಿಯೆಂಬ ಸ್ವಾತಂತ್ರ್ಯದ ಸಮಸ್ಯೆ ಮಾರ್ಕ್ಸ್‌ರಿಗೆ ಬೂರ್ಜ್ವಾ ಅಥವಾ ಮಧ್ಯಮ ವರ್ಗದ ಕುರಿತು ಆತನ ಟೀಕೆ ಅಥವಾ ವಿಮರ್ಶೆಗೆ ದಾರಿಮಾಡಿ ಕೊಡುತ್ತದೆ. ಫ್ರಾಯ್ಡ್ ತನ್ನ ಸಿದ್ಧಾಂತದ ಚೌಕಟ್ಟಿನ ಒಳಗೆಯೇ, ಇದೇ ಸಮಸ್ಯೆಯನ್ನು ಈಡಿಪಸ್ ಕಾಂಪ್ಲೆಕ್ಸ್‌ಗೆ (Oedipus complex) ಸಂಬಂಧಿಸಿ ನೋಡಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಮಾನಸಿಕ ಆರೋಗ್ಯದ ದಾರಿಯು ತಾಯಿಯ ಕುರಿತ ಇರುವ ಅಗಮ್ಯ ಲೈಂಗಿಕ ಸಂಬಂಧದ (incestuous) ಮೋಹದ ಕೊಂಡಿಯನ್ನು ಕಳಚುವುದರಲ್ಲಿ ಇದೆ ಎಂದು ನಂಬಿದ ಫ್ರಾಯ್ಡ್, ಮಾನಸಿಕ ಆರೋಗ್ಯ ಮತ್ತು ಪ್ರೌಢತೆಗಳು ವಿಮೋಚನೆ ಮತ್ತು ಸ್ವಾತಂತ್ರ್ಯಗಳ ಮೇಲೆ ಆಧರಿತವಾಗಿವೆ ಎಂದು ಹೇಳಿದರು. ಆದರೆ, ಅವರಿಗೆ ಈ ಪ್ರಕ್ರಿಯೆಯು ತಂದೆಯು ತನ್ನನ್ನು ನಪುಂಸಕಗೊಳಿಸುವ (castration) ಭಯದಿಂದ ಆರಂಭಗೊಳ್ಳುತ್ತದೆ ಮತ್ತು ತಂದೆಯ ಆದೇಶ ಮತ್ತು ನಿಷೇಧಗಳನ್ನು ತನ್ನ ಸ್ವಂತ ಒಳಮನಸ್ಸಿನಲ್ಲಿ (Superego) ಆಳವಡಿಸಿಕೊಳ್ಳುವುದರಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ, ತಾಯಿಯಿಂದ ಒಬ್ಬನ ಸ್ವಾತಂತ್ರ್ಯವು ಭಾಗಶಃ ಆಗಿ ಉಳಿದರೆ, ಒಬ್ಬನ ತಂದೆ ಮತ್ತು ಸಾಮಾಜಿಕ ಅಧಿಕಾರಸ್ಥರ ಮೇಲಿನ ಅವಲಂಬನೆಯು ಸೂಪರ್ ಇಗೋ ಮೂಲಕ ಮುಂದುವರಿಯುತ್ತದೆ.

ಕ್ರಾಂತಿಕಾರಿ ಗುಣಸ್ವಭಾವವೆಂದರೆ, ಮಾನವೀಯತೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿತ್ವ, ಆದುದರಿಂದ ಆತ ತನ್ನ ಸ್ವಂತ ಸಮಾಜದ ಸಂಕುಚಿತ ಮಿತಿಗಳನ್ನು ಮೀರುತ್ತಾನೆ ಮತ್ತು ಈ ಕಾರಣದಿಂದ ಆತ ತರ್ಕ ಮತ್ತು ಮಾನವೀಯತೆಯ ನೆಲೆಯಿಂದ ತನ್ನ ಮತ್ತು ಇತರ ಸಮಾಜಗಳನ್ನು ಟೀಕಿಸಲು ಮತ್ತು ವಿಮರ್ಶಿಸಲು ಶಕ್ತನಾಗುತ್ತಾನೆ. ಅವನು, ಕೇವಲ ಕಾಲ ಮತ್ತು ದೇಶದ ಆಕಸ್ಮಿಕದ ಹೊರತು ಹೆಚ್ಚೇನೂ ಅಲ್ಲದ ಕಾರಣದಿಂದ ಮಾತ್ರವೇ ತಾನು ಹುಟ್ಟಬೇಕಾಗಿಬಂದ ಸಂಸ್ಕೃತಿಯ ಸಂಕುಚಿತ ಆರಾಧನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವನು ಒಬ್ಬ ಜಾಗೃತ ಮನುಷ್ಯನಾಗಿ ತೆರೆದ ಕಣ್ಣುಗಳಿಂದ ತನ್ನ ಪರಿಸರವನ್ನು ನೋಡಲು ಮತ್ತು ಮಾನವ ಕುಲದಲ್ಲಿ ಹಾಗೂ ಆ ಕುಲಕ್ಕಾಗಿ ಇರುವ ನಿಯಮ, ಕಟ್ಟುಪಾಡುಗಳಲ್ಲಿ ಯಾವುದು ಆಕಸ್ಮಿಕ, ಯಾವುದು ಆಕಸ್ಮಿಕವಲ್ಲ (ತಾರ್ಕಿಕ) ಎಂದು ನಿರ್ಧರಿಸುವ ಮಾನದಂಡವನ್ನು ಕಂಡುಕೊಳ್ಳಲು ಶಕ್ತನಾಗುತ್ತಾನೆ.

ಕ್ರಾಂತಿಕಾರಿ ಗುಣಸ್ವಭಾವವು ಮಾನವೀಯತೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅವನು “ಜೀವನದ ಬಗ್ಗೆ ಆಳವಾದ ಗೌರವಭಾವ” ಹೊಂದಿರುತ್ತಾನೆ. ಆಲ್ಬರ್ಟ್ ಶ್ವೇಯ್ಟ್ಝರ್‌ನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಜೀವನದ ಕುರಿತು ಆಳವಾದ ತಾದಾತ್ಮ್ಯ ಮತ್ತು ಜೀವಪ್ರೇಮ. ನಾವೆಲ್ಲರೂ, ಇತರ ಎಲ್ಲಾ ಪ್ರಾಣಿಗಳಂತೆ ಜೀವನಕ್ಕೆ ಅಂಟಿಕೊಂಡಿರುತ್ತೇವೆ ಮತ್ತು ಸಾವಿನ ಜೊತೆ ಹೋರಾಡುತ್ತೇವೆ ಎಂಬುದು ನಿಜ. ಆದರೂ, ಜೀವನಕ್ಕೆ ಅಂಟಿಕೊಳ್ಳುವುದು ಎಂಬುದು ಜೀವನವನ್ನು ಪ್ರೀತಿಸುವುದು ಎಂಬುದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುವಂತದ್ದು. ಜೀವನಕ್ಕಿಂತ ಹೆಚ್ಚಾಗಿ ಸಾವು, ವಿನಾಶ ಮತ್ತು ಕೊಳೆಯುವಿಕೆಯಿಂದ ಆಕರ್ಷಿತವಾಗುವ ಒಂದು ವಿಧದ ವ್ಯಕ್ತಿತ್ವ ಇದೆ ಎಂಬ ವಾಸ್ತವದಿಂದ ಇದು ಇನ್ನಷ್ಟು ಸ್ಪಷ್ಟವಾಗಬಹುದು. (ಇದಕ್ಕೆ ಹಿಟ್ಲರ್ ಒಬ್ಬ ಒಳ್ಳೆಯ ಐತಿಹಾಸಿಕ ಉದಾಹರಣೆ.) ಈ ವಿಧದ ಗುಣಸ್ವಭಾವವನ್ನು, “ಸಾವು ಚಿರಾಯುವಾಗಲಿ” ಎಂಬ ಘೋಷಣೆಯನ್ನು ತನ್ನ ನೆಚ್ಚಿನ ಧ್ಯೇಯವನ್ನಾಗಿಸಿಕೊಂಡಿದ್ದ ಸ್ಪಾನಿಷ್ ಸರ್ವಾಧಿಕಾರಿ ಫ್ರಾಂಕೋನ ಜನರಲ್ ಒಬ್ಬನಿಗೆ 1936ರಲ್ಲಿ ಉನಾಮುನೋ ನೀಡಿದ್ದ ಪ್ರಸಿದ್ಧ ಉತ್ತರದಲ್ಲಿ ಇದ್ದ ಪದವನ್ನು ಬಳಸಬೇಕೆಂದರೆ, ಗೊಬ್ಬರದ ಹುಳುವಿನ ಅಥವಾ ನೆಕ್ರೋಫಿಲಸ್ (necrophilous) ಸ್ವಭಾವ ಎಂದು ಕರೆಯಬಹುದು.

ಸಾವು ಮತ್ತು ವಿನಾಶದತ್ತ ಆಕರ್ಷಣೆಯು ಒಬ್ಬ ವ್ಯಕ್ತಿಯ ಪ್ರಜ್ಞೆಯಲ್ಲಿ ಇಲ್ಲದೇ ಇರಬಹುದು. ಅದರೆ, ಅದು ಅವನಲ್ಲಿ ಇರುವುದನ್ನು ಆತನ ನಡವಳಿಕೆಯಿಂದ ಕಂಡುಕೊಳ್ಳಬಹುದು. ಕತ್ತು ಹಿಸುಕಿ, ಅಪ್ಪಚ್ಚಿ ಮಾಡಿ, ಜೀವನವನ್ನು ನಾಶ ಮಾಡುವುದು ಆತನಿಗೆ- ಒಬ್ಬ ಜೀವನ ಪ್ರೀತಿಯ ಮನುಷ್ಯನಿಗೆ ಜೀವನ ಬೆಳೆದು ವಿಸ್ತರಿಸುವಾಗ, ಅಭಿವೃದ್ಧಿಗೊಳ್ಳುವಾಗ ಆಗುವಷ್ಟೇ ಖುಷಿಯನ್ನು ಉಂಟುಮಾಡುತ್ತದೆ. ನೆಕ್ರೋಫಿಲಿಯಾ ಎಂಬುದು ಜೀವಂತ ಇರುವಾಗಲೇ ವಿನಾಶದ ಗುರಿ ಹೊಂದಿರುವ ನಿಜವಾದ ಮನೋವಿಕೃತಿ.

ಕ್ರಾಂತಿಕಾರಿ ಗುಣಸ್ವಭಾವವು ಸಂಗೀತದ ಪ್ರತಿಮೆ ಬಳಸುವುದಾದಲ್ಲಿ, ಒಂದು ನಿರ್ಣಾಯಕ ಸ್ವರ ಎಂದು ಕರೆಯಬಹುದಾದ “ವಿಮರ್ಶಾತ್ಮಕ ಲಯ”ದಲ್ಲಿ ಯೋಚಿಸುತ್ತದೆ, ಭಾವಿಸುತ್ತದೆ. “motto De omnibus est dubitandum” ಎಂಬ ಲ್ಯಾಟಿನ್ ಭಾಷೆಯ ನುಡಿಯಂತೆ, “ಪ್ರತಿಯೊಂದನ್ನೂ ಸಂಶಯದಿಂದ ಕಾಣಬೇಕು” ಎಂಬುದು- ಪ್ರಪಂಚಕ್ಕೆ ಆತನ ಪ್ರತಿಕ್ರಿಯೆ ಆಗಿರುತ್ತದೆ. ನಾನಿಲ್ಲಿ ಚರ್ಚಿಸುತ್ತಿರುವ “ವಿಮರ್ಶಾತ್ಮಕ ಲಯ”ವು ಯಾವುದೇ ರೀತಿಯಲ್ಲಿ ಸಿನಿಕತನವಲ್ಲ. ಬದಲಾಗಿ, ಅದು ವಾಸ್ತವಿಕತೆ ಕುರಿತ ಒಂದು ಒಳನೋಟ. ಇದು ವಾಸ್ತವಿಕತೆಗೆ ಬದಲಿಯಾಗಿ ಸೃಷ್ಟಿಸಲಾದ ಕಟ್ಟುಕತೆಗೆ ತದ್ವಿರುದ್ಧವಾಗಿರುತ್ತದೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

(5) ಸೆರ್ಮನ್ 16, ಮೀಯ್ಸ್ಟರ್ ಎಕ್ಹಾರ್ಟ್, ಅನ್ ಇಂಟ್ರೊಡಕ್ಷನ್ ಟು ದಿ ಸ್ಟಡಿ ಆಫ್ ವರ್ಕ್ಸ್, ವಿತ್ ಅನ್ ಆಂಥಾಲಜಿ ಆಫ್ ಹಿಸ್ ಸೆರ್ಮನ್ಸ್, ಆಯ್ಕೆ: ಜೇಮ್ಸ್ ಎಂ ಕ್ಲಾರ್ಕ್, ಥಾಮಸ್ ನೆಲ್ಸನ್ & ಸನ್ಸ್, ಲಂಡನ್, 1957, ಪುಟ: 235

(6) ದೇವರಿಂದ ಸ್ವಾತಂತ್ರ್ಯದ ಬಗೆಗಿನ ಪ್ರಶ್ನೆಗಳ ಬಗ್ಗೆ ಬುದ್ಧ ಮತ್ತು ಇತರ ಅಧಿಕಾರಗಳಿಂದ ಇದೇ ಬಗೆಯ ಮನೋವೃತ್ತಿಯನ್ನು ಜೆನ್ ಬುದ್ಧಿಸಂನಲ್ಲಿ ಕಾಣಬಹುದು.

(7) ಕಾರ್ಲ್ ಮಾರ್ಕ್ಸ್, ಎಕನಾಮಿಕ್ ಅಂಡ್ ಫಿಲಾಸಾಫಿಕಲ್ ಮ್ಯಾನುಸ್ಕ್ರಿಪ್ಟ್ಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...