Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ಒಬ್ಬ ವ್ಯಕ್ತಿ ಸ್ವಂತವಾಗಿ ಚಿಂತಿಸಿ, ಭಾವನೆಗಳನ್ನು ಅನುಭವಿಸಿ, ತನ್ನ ನಿರ್ಧಾರಗಳನ್ನು ತಾನೇ ಮಾಡಿದಾಗ ಮಾತ್ರವೇ ಸಂಪೂರ್ಣ ಮುಕ್ತತೆ ಮತ್ತು ಸ್ವಾತಂತ್ರ್ಯ ಅಸ್ತಿತ್ವದಲ್ಲಿ ಇರುತ್ತದೆ. ಅವನು ನೈಜವಾಗಿ ಹೀಗೆ ಮಾಡಲು ಯಾವಾಗ ಸಾಧ್ಯ ಎಂದರೆ, ತನಗೆ ನೈಜವಾಗಿ ಪ್ರತಿಕ್ರಿಯಿಸಲು ಅನುಮತಿ ನೀಡುವ, ತನಗಿಂತ ಹೊರಗಿನ ಪ್ರಪಂಚದೊಂದಿಗೆ ಉತ್ಪಾದಕ ಸಂಬಂಧವನ್ನು ತಲಪಿದಾಗ ಮಾತ್ರ. ಮುಕ್ತತೆ ಮತ್ತು ಸ್ವಾತಂತ್ರ್ಯದ ಈ ಪರಿಕಲ್ಪನೆಯು ಕ್ರಾಂತಿಕಾರಿ ದಾರ್ಶನಿಕರು/ಯೋಗಿಗಳು (Radical mystics) ಮತ್ತು ಕಾರ್ಲ್‌ಮಾರ್ಕ್ಸ್‌ನ ಚಿಂತನೆಗಳಲ್ಲಿ ಕಂಡುಬರುತ್ತದೆ.

ಕ್ರೈಸ್ತ ದಾರ್ಶನಿಕರಲ್ಲಿಯೇ ಅತ್ಯಂತ ಕ್ರಾಂತಿಕಾರಿಯಾದ ಮೀಯ್ಸ್ಟರ್ ಎಕ್ಹಾರ್ಟ್ ಹೇಳುತ್ತಾರೆ: “ನನ್ನ ಜೀವನ ಏನು? ತನ್ನಿಂದ ತಾನಾಗಿ ತನ್ನೊಳಗೆಯೇ ಚಲಿಸಿದಂತದ್ದು. ಹೊರಗಿನಿಂದ ಚಲಿಸಿದಂತದ್ದು ಬದುಕಿರುವುದಿಲ್ಲ.”(5) ಅಥವಾ, “ಒಬ್ಬ ಮನುಷ್ಯ ಹೊರಗಿನಿಂದ ಏನನ್ನಾದರೂ ಹುಟ್ಟಿಸಿಕೊಂಡರೆ ಅಥವಾ ಪಡೆದುಕೊಂಡರೆ, ಅದು ತಪ್ಪು. ಒಬ್ಬ ವ್ಯಕ್ತಿ ದೇವರನ್ನು ಗ್ರಹಿಸಬಾರದು ಅಥವಾ ಆತನನ್ನು ತನ್ನಿಂದ ಹೊರಗಿನವನು ಎಂದು ಪರಿಗಣಿಸಬಾರದು; ಬದಲಾಗಿ, ನಮ್ಮ ಸ್ವಂತ ಮತ್ತು ನಮ್ಮೊಳಗೇ ಇರುವವನೆಂದು ಪರಿಗಣಿಸಬೇಕು.”(6)

ಮಾರ್ಕ್ಸ್ ಇದೇ ರೀತಿಯಲ್ಲಿ, ಆದರೆ ಧಾರ್ಮಿಕವಲ್ಲದ ದಾಟಿಯಲ್ಲಿ ಹೇಳುತ್ತಾರೆ:

“ತನಗೆ ತಾನೇ ಮಾಲಕ ಆಗಿರದ ತನ್ನ ಮಾಲಕ ತಾನು ಮಾತ್ರವೇ ಆಗಿರದ, ಮತ್ತು ತನ್ನ ಅಸ್ತಿತ್ವಕ್ಕೆ ತಾನೇ ಬಾಧ್ಯ ಎಂದು ಭಾವಿಸಿರದ ಹೊರತು, ಒಬ್ಬ ವ್ಯಕ್ತಿಯು ತನ್ನನ್ನು ಸ್ವತಂತ್ರ ಎಂದು ಪರಿಗಣಿಸುವುದಿಲ್ಲ. ಇನ್ನೊಬ್ಬನ ಉಪಕಾರದಲ್ಲಿ ಬದುಕುವವನು ತನ್ನನ್ನು ಅವಲಂಬಿತ ಮನುಷ್ಯನೆಂದೇ ಪರಿಗಣಿಸುತ್ತಾನೆ. ಆದರೆ, ನನ್ನ ಜೀವನದ ಮುಂದುವರಿಕೆಗೆ, ಮತ್ತು ಅದರ ಸೃಷ್ಟಿಗೂ ನಾನು ಒಬ್ಬ ವ್ಯಕ್ತಿಗೆ ಋಣಿಯಾಗಿದ್ದೇನೆ, ಏಕೆಂದರೆ, ಅವನದರ ಮೂಲವಾಗಿದ್ದಾನೆ ಎಂದಾದಾಗ, ನಾನು ಸಂಪೂರ್ಣವಾಗಿ ಇನ್ನೊಬ್ಬ ವ್ಯಕ್ತಿಯ ಉಪಕಾರದಲ್ಲಿ ಬದುಕುತ್ತಿದ್ದೇನೆ. ಅದು ನನ್ನ ಸ್ವಂತ ಸೃಷ್ಟಿ ಆಗಿರದೇ ಇದ್ದರೆ, ನನ್ನ ಜೀವನಕ್ಕೆ ಅಗತ್ಯವಾಗಿ ಇಂತಾ ಒಂದು ಹೊರಗಿನ ಕಾರಣ ಇರುತ್ತದೆ.”(7)

ಅಥವಾ ಮಾರ್ಕ್ಸ್ ಬೇರೆ ಕಡೆ ಹೇಳಿರುವಂತೆ:

“ನೋಡುವುದು, ಕೇಳುವುದು, ಮೂಸುವುದು, ರುಚಿನೋಡುವುದು, ಅನುಭವಿಸುವುದು, ಭಾವಿಸುವುದು, ಯೋಚಿಸುವುದು, ಬಯಸುವುದು, ಪ್ರೀತಿಸುವುದು- (ಸೇರಿದಂತೆ) ಪ್ರಪಂಚಕ್ಕೆ ತನ್ನ ಪ್ರತಿಯೊಂದು ಸಂಬಂಧಗಳಲ್ಲಿ ಒಬ್ಬ ಪೂರ್ಣ ಮನುಷ್ಯನಾಗಿ ತನ್ನ ವೈಯಕ್ತಿತೆಯನ್ನು ದೃಢಪಡಿಸಿದರೆ ಮಾತ್ರವೇ ಅಥವಾ ಸರಳವಾಗಿ ತನ್ನ ವೈಯಕ್ತಿಕತೆಯ ಪ್ರತಿಯೊಂದು ಎಲ್ಲಾ ಅಂಗಗಳನ್ನು ದೃಢಪಡಿಸಿದರೆ ಮತ್ತು ಅಭಿವ್ಯಕ್ತಗೊಳಿಸಿದರೆ ಮಾತ್ರವೇ ಮನುಷ್ಯನು ಸ್ವತಂತ್ರನಾಗಿರುವುದು.”

ಮುಕ್ತತೆ ಮತ್ತು ಸ್ವಾತಂತ್ರ್ಯಗಳು ಕೇವಲ ದಬ್ಬಾಳಿಕೆಯಿಂದ ವಿಮೋಚನೆಯಾಗಲೀ, ವಾಣಿಜ್ಯ ವಿಷಯಗಳಲ್ಲಿ ಸ್ವಾತಂತ್ರ್ಯ ಮಾತ್ರವೇ ಅಲ್ಲದೆ, ವೈಯಕ್ತಿಕತೆಯ ಸಾಕ್ಷಾತ್ಕಾರವಾಗಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆ ಎಂದರೆ, ನಿರ್ದಿಷ್ಟವಾಗಿ ಆತನು ತಲಪಿರುವ ಸ್ವಾತಂತ್ರ್ಯದ ಮಟ್ಟ. ಸಂಪೂರ್ಣವಾಗಿ ಜಾಗೃತಗೊಂಡರೆ, ಒಬ್ಬ ಉತ್ಪಾದಕ ಮನುಷ್ಯನು ಸ್ವತಂತ್ರ ಮನುಷ್ಯ; ಏಕೆಂದರೆ, ತನ್ನ ಸ್ವಂತಿಕೆಯೇ ತನ್ನ ಜೀವನದ ಮೂಲವಾಗಿ ಅವನು ನೈಜವಾಗಿ ಬದುಕಲು ಅವನಿಗೆ ಸಾಧ್ಯ. (ಒಬ್ಬ ಸ್ವತಂತ್ರ ಮನುಷ್ಯನೆಂದರೆ ಒಬ್ಬ ಪ್ರತ್ಯೇಕಿತ ಮನುಷ್ಯನೆಂದು ಇದರ ಅರ್ಥವಲ್ಲ ಎಂದು ಹೇಳಬೇಕಾದ ಅಗತ್ಯವಿಲ್ಲ; ಯಾಕೆಂದರೆ, ಇತರರಿಗೆ ಮತ್ತು ಪ್ರಪಂಚಕ್ಕೆ ಸಂಬಂಧಿತನಾಗಿ ಮತ್ತು ಆಸಕ್ತನಾಗಿ ಇರುವ ಪ್ರಕ್ರಿಯೆಯಲ್ಲಿಯೇ ವ್ಯಕ್ತಿತ್ವದ ಬೆಳವಣಿಗೆಯು ನಡೆಯುತ್ತದೆ. ಆದರೆ, ಈ ರೀತಿ ಸಂಬಂಧಿತನಾಗಿರುವುದು, ಅವಲಂಬಿತನಾಗಿರುವುದಕ್ಕಿಂತ ಸಂಪೂರ್ಣವಾಗಿ ಬೇರೆ.) ಸ್ವಯಂಸಾಕ್ಷಾತ್ಕಾರ ಅಥವಾ ಸ್ವಯಂ ಅನುಭೂತಿಯೆಂಬ ಸ್ವಾತಂತ್ರ್ಯದ ಸಮಸ್ಯೆ ಮಾರ್ಕ್ಸ್‌ರಿಗೆ ಬೂರ್ಜ್ವಾ ಅಥವಾ ಮಧ್ಯಮ ವರ್ಗದ ಕುರಿತು ಆತನ ಟೀಕೆ ಅಥವಾ ವಿಮರ್ಶೆಗೆ ದಾರಿಮಾಡಿ ಕೊಡುತ್ತದೆ. ಫ್ರಾಯ್ಡ್ ತನ್ನ ಸಿದ್ಧಾಂತದ ಚೌಕಟ್ಟಿನ ಒಳಗೆಯೇ, ಇದೇ ಸಮಸ್ಯೆಯನ್ನು ಈಡಿಪಸ್ ಕಾಂಪ್ಲೆಕ್ಸ್‌ಗೆ (Oedipus complex) ಸಂಬಂಧಿಸಿ ನೋಡಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಮಾನಸಿಕ ಆರೋಗ್ಯದ ದಾರಿಯು ತಾಯಿಯ ಕುರಿತ ಇರುವ ಅಗಮ್ಯ ಲೈಂಗಿಕ ಸಂಬಂಧದ (incestuous) ಮೋಹದ ಕೊಂಡಿಯನ್ನು ಕಳಚುವುದರಲ್ಲಿ ಇದೆ ಎಂದು ನಂಬಿದ ಫ್ರಾಯ್ಡ್, ಮಾನಸಿಕ ಆರೋಗ್ಯ ಮತ್ತು ಪ್ರೌಢತೆಗಳು ವಿಮೋಚನೆ ಮತ್ತು ಸ್ವಾತಂತ್ರ್ಯಗಳ ಮೇಲೆ ಆಧರಿತವಾಗಿವೆ ಎಂದು ಹೇಳಿದರು. ಆದರೆ, ಅವರಿಗೆ ಈ ಪ್ರಕ್ರಿಯೆಯು ತಂದೆಯು ತನ್ನನ್ನು ನಪುಂಸಕಗೊಳಿಸುವ (castration) ಭಯದಿಂದ ಆರಂಭಗೊಳ್ಳುತ್ತದೆ ಮತ್ತು ತಂದೆಯ ಆದೇಶ ಮತ್ತು ನಿಷೇಧಗಳನ್ನು ತನ್ನ ಸ್ವಂತ ಒಳಮನಸ್ಸಿನಲ್ಲಿ (Superego) ಆಳವಡಿಸಿಕೊಳ್ಳುವುದರಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ, ತಾಯಿಯಿಂದ ಒಬ್ಬನ ಸ್ವಾತಂತ್ರ್ಯವು ಭಾಗಶಃ ಆಗಿ ಉಳಿದರೆ, ಒಬ್ಬನ ತಂದೆ ಮತ್ತು ಸಾಮಾಜಿಕ ಅಧಿಕಾರಸ್ಥರ ಮೇಲಿನ ಅವಲಂಬನೆಯು ಸೂಪರ್ ಇಗೋ ಮೂಲಕ ಮುಂದುವರಿಯುತ್ತದೆ.

ಕ್ರಾಂತಿಕಾರಿ ಗುಣಸ್ವಭಾವವೆಂದರೆ, ಮಾನವೀಯತೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿತ್ವ, ಆದುದರಿಂದ ಆತ ತನ್ನ ಸ್ವಂತ ಸಮಾಜದ ಸಂಕುಚಿತ ಮಿತಿಗಳನ್ನು ಮೀರುತ್ತಾನೆ ಮತ್ತು ಈ ಕಾರಣದಿಂದ ಆತ ತರ್ಕ ಮತ್ತು ಮಾನವೀಯತೆಯ ನೆಲೆಯಿಂದ ತನ್ನ ಮತ್ತು ಇತರ ಸಮಾಜಗಳನ್ನು ಟೀಕಿಸಲು ಮತ್ತು ವಿಮರ್ಶಿಸಲು ಶಕ್ತನಾಗುತ್ತಾನೆ. ಅವನು, ಕೇವಲ ಕಾಲ ಮತ್ತು ದೇಶದ ಆಕಸ್ಮಿಕದ ಹೊರತು ಹೆಚ್ಚೇನೂ ಅಲ್ಲದ ಕಾರಣದಿಂದ ಮಾತ್ರವೇ ತಾನು ಹುಟ್ಟಬೇಕಾಗಿಬಂದ ಸಂಸ್ಕೃತಿಯ ಸಂಕುಚಿತ ಆರಾಧನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವನು ಒಬ್ಬ ಜಾಗೃತ ಮನುಷ್ಯನಾಗಿ ತೆರೆದ ಕಣ್ಣುಗಳಿಂದ ತನ್ನ ಪರಿಸರವನ್ನು ನೋಡಲು ಮತ್ತು ಮಾನವ ಕುಲದಲ್ಲಿ ಹಾಗೂ ಆ ಕುಲಕ್ಕಾಗಿ ಇರುವ ನಿಯಮ, ಕಟ್ಟುಪಾಡುಗಳಲ್ಲಿ ಯಾವುದು ಆಕಸ್ಮಿಕ, ಯಾವುದು ಆಕಸ್ಮಿಕವಲ್ಲ (ತಾರ್ಕಿಕ) ಎಂದು ನಿರ್ಧರಿಸುವ ಮಾನದಂಡವನ್ನು ಕಂಡುಕೊಳ್ಳಲು ಶಕ್ತನಾಗುತ್ತಾನೆ.

ಕ್ರಾಂತಿಕಾರಿ ಗುಣಸ್ವಭಾವವು ಮಾನವೀಯತೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅವನು “ಜೀವನದ ಬಗ್ಗೆ ಆಳವಾದ ಗೌರವಭಾವ” ಹೊಂದಿರುತ್ತಾನೆ. ಆಲ್ಬರ್ಟ್ ಶ್ವೇಯ್ಟ್ಝರ್‌ನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಜೀವನದ ಕುರಿತು ಆಳವಾದ ತಾದಾತ್ಮ್ಯ ಮತ್ತು ಜೀವಪ್ರೇಮ. ನಾವೆಲ್ಲರೂ, ಇತರ ಎಲ್ಲಾ ಪ್ರಾಣಿಗಳಂತೆ ಜೀವನಕ್ಕೆ ಅಂಟಿಕೊಂಡಿರುತ್ತೇವೆ ಮತ್ತು ಸಾವಿನ ಜೊತೆ ಹೋರಾಡುತ್ತೇವೆ ಎಂಬುದು ನಿಜ. ಆದರೂ, ಜೀವನಕ್ಕೆ ಅಂಟಿಕೊಳ್ಳುವುದು ಎಂಬುದು ಜೀವನವನ್ನು ಪ್ರೀತಿಸುವುದು ಎಂಬುದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುವಂತದ್ದು. ಜೀವನಕ್ಕಿಂತ ಹೆಚ್ಚಾಗಿ ಸಾವು, ವಿನಾಶ ಮತ್ತು ಕೊಳೆಯುವಿಕೆಯಿಂದ ಆಕರ್ಷಿತವಾಗುವ ಒಂದು ವಿಧದ ವ್ಯಕ್ತಿತ್ವ ಇದೆ ಎಂಬ ವಾಸ್ತವದಿಂದ ಇದು ಇನ್ನಷ್ಟು ಸ್ಪಷ್ಟವಾಗಬಹುದು. (ಇದಕ್ಕೆ ಹಿಟ್ಲರ್ ಒಬ್ಬ ಒಳ್ಳೆಯ ಐತಿಹಾಸಿಕ ಉದಾಹರಣೆ.) ಈ ವಿಧದ ಗುಣಸ್ವಭಾವವನ್ನು, “ಸಾವು ಚಿರಾಯುವಾಗಲಿ” ಎಂಬ ಘೋಷಣೆಯನ್ನು ತನ್ನ ನೆಚ್ಚಿನ ಧ್ಯೇಯವನ್ನಾಗಿಸಿಕೊಂಡಿದ್ದ ಸ್ಪಾನಿಷ್ ಸರ್ವಾಧಿಕಾರಿ ಫ್ರಾಂಕೋನ ಜನರಲ್ ಒಬ್ಬನಿಗೆ 1936ರಲ್ಲಿ ಉನಾಮುನೋ ನೀಡಿದ್ದ ಪ್ರಸಿದ್ಧ ಉತ್ತರದಲ್ಲಿ ಇದ್ದ ಪದವನ್ನು ಬಳಸಬೇಕೆಂದರೆ, ಗೊಬ್ಬರದ ಹುಳುವಿನ ಅಥವಾ ನೆಕ್ರೋಫಿಲಸ್ (necrophilous) ಸ್ವಭಾವ ಎಂದು ಕರೆಯಬಹುದು.

ಸಾವು ಮತ್ತು ವಿನಾಶದತ್ತ ಆಕರ್ಷಣೆಯು ಒಬ್ಬ ವ್ಯಕ್ತಿಯ ಪ್ರಜ್ಞೆಯಲ್ಲಿ ಇಲ್ಲದೇ ಇರಬಹುದು. ಅದರೆ, ಅದು ಅವನಲ್ಲಿ ಇರುವುದನ್ನು ಆತನ ನಡವಳಿಕೆಯಿಂದ ಕಂಡುಕೊಳ್ಳಬಹುದು. ಕತ್ತು ಹಿಸುಕಿ, ಅಪ್ಪಚ್ಚಿ ಮಾಡಿ, ಜೀವನವನ್ನು ನಾಶ ಮಾಡುವುದು ಆತನಿಗೆ- ಒಬ್ಬ ಜೀವನ ಪ್ರೀತಿಯ ಮನುಷ್ಯನಿಗೆ ಜೀವನ ಬೆಳೆದು ವಿಸ್ತರಿಸುವಾಗ, ಅಭಿವೃದ್ಧಿಗೊಳ್ಳುವಾಗ ಆಗುವಷ್ಟೇ ಖುಷಿಯನ್ನು ಉಂಟುಮಾಡುತ್ತದೆ. ನೆಕ್ರೋಫಿಲಿಯಾ ಎಂಬುದು ಜೀವಂತ ಇರುವಾಗಲೇ ವಿನಾಶದ ಗುರಿ ಹೊಂದಿರುವ ನಿಜವಾದ ಮನೋವಿಕೃತಿ.

ಕ್ರಾಂತಿಕಾರಿ ಗುಣಸ್ವಭಾವವು ಸಂಗೀತದ ಪ್ರತಿಮೆ ಬಳಸುವುದಾದಲ್ಲಿ, ಒಂದು ನಿರ್ಣಾಯಕ ಸ್ವರ ಎಂದು ಕರೆಯಬಹುದಾದ “ವಿಮರ್ಶಾತ್ಮಕ ಲಯ”ದಲ್ಲಿ ಯೋಚಿಸುತ್ತದೆ, ಭಾವಿಸುತ್ತದೆ. “motto De omnibus est dubitandum” ಎಂಬ ಲ್ಯಾಟಿನ್ ಭಾಷೆಯ ನುಡಿಯಂತೆ, “ಪ್ರತಿಯೊಂದನ್ನೂ ಸಂಶಯದಿಂದ ಕಾಣಬೇಕು” ಎಂಬುದು- ಪ್ರಪಂಚಕ್ಕೆ ಆತನ ಪ್ರತಿಕ್ರಿಯೆ ಆಗಿರುತ್ತದೆ. ನಾನಿಲ್ಲಿ ಚರ್ಚಿಸುತ್ತಿರುವ “ವಿಮರ್ಶಾತ್ಮಕ ಲಯ”ವು ಯಾವುದೇ ರೀತಿಯಲ್ಲಿ ಸಿನಿಕತನವಲ್ಲ. ಬದಲಾಗಿ, ಅದು ವಾಸ್ತವಿಕತೆ ಕುರಿತ ಒಂದು ಒಳನೋಟ. ಇದು ವಾಸ್ತವಿಕತೆಗೆ ಬದಲಿಯಾಗಿ ಸೃಷ್ಟಿಸಲಾದ ಕಟ್ಟುಕತೆಗೆ ತದ್ವಿರುದ್ಧವಾಗಿರುತ್ತದೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

(5) ಸೆರ್ಮನ್ 16, ಮೀಯ್ಸ್ಟರ್ ಎಕ್ಹಾರ್ಟ್, ಅನ್ ಇಂಟ್ರೊಡಕ್ಷನ್ ಟು ದಿ ಸ್ಟಡಿ ಆಫ್ ವರ್ಕ್ಸ್, ವಿತ್ ಅನ್ ಆಂಥಾಲಜಿ ಆಫ್ ಹಿಸ್ ಸೆರ್ಮನ್ಸ್, ಆಯ್ಕೆ: ಜೇಮ್ಸ್ ಎಂ ಕ್ಲಾರ್ಕ್, ಥಾಮಸ್ ನೆಲ್ಸನ್ & ಸನ್ಸ್, ಲಂಡನ್, 1957, ಪುಟ: 235

(6) ದೇವರಿಂದ ಸ್ವಾತಂತ್ರ್ಯದ ಬಗೆಗಿನ ಪ್ರಶ್ನೆಗಳ ಬಗ್ಗೆ ಬುದ್ಧ ಮತ್ತು ಇತರ ಅಧಿಕಾರಗಳಿಂದ ಇದೇ ಬಗೆಯ ಮನೋವೃತ್ತಿಯನ್ನು ಜೆನ್ ಬುದ್ಧಿಸಂನಲ್ಲಿ ಕಾಣಬಹುದು.

(7) ಕಾರ್ಲ್ ಮಾರ್ಕ್ಸ್, ಎಕನಾಮಿಕ್ ಅಂಡ್ ಫಿಲಾಸಾಫಿಕಲ್ ಮ್ಯಾನುಸ್ಕ್ರಿಪ್ಟ್ಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...