Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ಒಬ್ಬ ವ್ಯಕ್ತಿ ಸ್ವಂತವಾಗಿ ಚಿಂತಿಸಿ, ಭಾವನೆಗಳನ್ನು ಅನುಭವಿಸಿ, ತನ್ನ ನಿರ್ಧಾರಗಳನ್ನು ತಾನೇ ಮಾಡಿದಾಗ ಮಾತ್ರವೇ ಸಂಪೂರ್ಣ ಮುಕ್ತತೆ ಮತ್ತು ಸ್ವಾತಂತ್ರ್ಯ ಅಸ್ತಿತ್ವದಲ್ಲಿ ಇರುತ್ತದೆ. ಅವನು ನೈಜವಾಗಿ ಹೀಗೆ ಮಾಡಲು ಯಾವಾಗ ಸಾಧ್ಯ ಎಂದರೆ, ತನಗೆ ನೈಜವಾಗಿ ಪ್ರತಿಕ್ರಿಯಿಸಲು ಅನುಮತಿ ನೀಡುವ, ತನಗಿಂತ ಹೊರಗಿನ ಪ್ರಪಂಚದೊಂದಿಗೆ ಉತ್ಪಾದಕ ಸಂಬಂಧವನ್ನು ತಲಪಿದಾಗ ಮಾತ್ರ. ಮುಕ್ತತೆ ಮತ್ತು ಸ್ವಾತಂತ್ರ್ಯದ ಈ ಪರಿಕಲ್ಪನೆಯು ಕ್ರಾಂತಿಕಾರಿ ದಾರ್ಶನಿಕರು/ಯೋಗಿಗಳು (Radical mystics) ಮತ್ತು ಕಾರ್ಲ್‌ಮಾರ್ಕ್ಸ್‌ನ ಚಿಂತನೆಗಳಲ್ಲಿ ಕಂಡುಬರುತ್ತದೆ.

ಕ್ರೈಸ್ತ ದಾರ್ಶನಿಕರಲ್ಲಿಯೇ ಅತ್ಯಂತ ಕ್ರಾಂತಿಕಾರಿಯಾದ ಮೀಯ್ಸ್ಟರ್ ಎಕ್ಹಾರ್ಟ್ ಹೇಳುತ್ತಾರೆ: “ನನ್ನ ಜೀವನ ಏನು? ತನ್ನಿಂದ ತಾನಾಗಿ ತನ್ನೊಳಗೆಯೇ ಚಲಿಸಿದಂತದ್ದು. ಹೊರಗಿನಿಂದ ಚಲಿಸಿದಂತದ್ದು ಬದುಕಿರುವುದಿಲ್ಲ.”(5) ಅಥವಾ, “ಒಬ್ಬ ಮನುಷ್ಯ ಹೊರಗಿನಿಂದ ಏನನ್ನಾದರೂ ಹುಟ್ಟಿಸಿಕೊಂಡರೆ ಅಥವಾ ಪಡೆದುಕೊಂಡರೆ, ಅದು ತಪ್ಪು. ಒಬ್ಬ ವ್ಯಕ್ತಿ ದೇವರನ್ನು ಗ್ರಹಿಸಬಾರದು ಅಥವಾ ಆತನನ್ನು ತನ್ನಿಂದ ಹೊರಗಿನವನು ಎಂದು ಪರಿಗಣಿಸಬಾರದು; ಬದಲಾಗಿ, ನಮ್ಮ ಸ್ವಂತ ಮತ್ತು ನಮ್ಮೊಳಗೇ ಇರುವವನೆಂದು ಪರಿಗಣಿಸಬೇಕು.”(6)

ಮಾರ್ಕ್ಸ್ ಇದೇ ರೀತಿಯಲ್ಲಿ, ಆದರೆ ಧಾರ್ಮಿಕವಲ್ಲದ ದಾಟಿಯಲ್ಲಿ ಹೇಳುತ್ತಾರೆ:

“ತನಗೆ ತಾನೇ ಮಾಲಕ ಆಗಿರದ ತನ್ನ ಮಾಲಕ ತಾನು ಮಾತ್ರವೇ ಆಗಿರದ, ಮತ್ತು ತನ್ನ ಅಸ್ತಿತ್ವಕ್ಕೆ ತಾನೇ ಬಾಧ್ಯ ಎಂದು ಭಾವಿಸಿರದ ಹೊರತು, ಒಬ್ಬ ವ್ಯಕ್ತಿಯು ತನ್ನನ್ನು ಸ್ವತಂತ್ರ ಎಂದು ಪರಿಗಣಿಸುವುದಿಲ್ಲ. ಇನ್ನೊಬ್ಬನ ಉಪಕಾರದಲ್ಲಿ ಬದುಕುವವನು ತನ್ನನ್ನು ಅವಲಂಬಿತ ಮನುಷ್ಯನೆಂದೇ ಪರಿಗಣಿಸುತ್ತಾನೆ. ಆದರೆ, ನನ್ನ ಜೀವನದ ಮುಂದುವರಿಕೆಗೆ, ಮತ್ತು ಅದರ ಸೃಷ್ಟಿಗೂ ನಾನು ಒಬ್ಬ ವ್ಯಕ್ತಿಗೆ ಋಣಿಯಾಗಿದ್ದೇನೆ, ಏಕೆಂದರೆ, ಅವನದರ ಮೂಲವಾಗಿದ್ದಾನೆ ಎಂದಾದಾಗ, ನಾನು ಸಂಪೂರ್ಣವಾಗಿ ಇನ್ನೊಬ್ಬ ವ್ಯಕ್ತಿಯ ಉಪಕಾರದಲ್ಲಿ ಬದುಕುತ್ತಿದ್ದೇನೆ. ಅದು ನನ್ನ ಸ್ವಂತ ಸೃಷ್ಟಿ ಆಗಿರದೇ ಇದ್ದರೆ, ನನ್ನ ಜೀವನಕ್ಕೆ ಅಗತ್ಯವಾಗಿ ಇಂತಾ ಒಂದು ಹೊರಗಿನ ಕಾರಣ ಇರುತ್ತದೆ.”(7)

ಅಥವಾ ಮಾರ್ಕ್ಸ್ ಬೇರೆ ಕಡೆ ಹೇಳಿರುವಂತೆ:

“ನೋಡುವುದು, ಕೇಳುವುದು, ಮೂಸುವುದು, ರುಚಿನೋಡುವುದು, ಅನುಭವಿಸುವುದು, ಭಾವಿಸುವುದು, ಯೋಚಿಸುವುದು, ಬಯಸುವುದು, ಪ್ರೀತಿಸುವುದು- (ಸೇರಿದಂತೆ) ಪ್ರಪಂಚಕ್ಕೆ ತನ್ನ ಪ್ರತಿಯೊಂದು ಸಂಬಂಧಗಳಲ್ಲಿ ಒಬ್ಬ ಪೂರ್ಣ ಮನುಷ್ಯನಾಗಿ ತನ್ನ ವೈಯಕ್ತಿತೆಯನ್ನು ದೃಢಪಡಿಸಿದರೆ ಮಾತ್ರವೇ ಅಥವಾ ಸರಳವಾಗಿ ತನ್ನ ವೈಯಕ್ತಿಕತೆಯ ಪ್ರತಿಯೊಂದು ಎಲ್ಲಾ ಅಂಗಗಳನ್ನು ದೃಢಪಡಿಸಿದರೆ ಮತ್ತು ಅಭಿವ್ಯಕ್ತಗೊಳಿಸಿದರೆ ಮಾತ್ರವೇ ಮನುಷ್ಯನು ಸ್ವತಂತ್ರನಾಗಿರುವುದು.”

ಮುಕ್ತತೆ ಮತ್ತು ಸ್ವಾತಂತ್ರ್ಯಗಳು ಕೇವಲ ದಬ್ಬಾಳಿಕೆಯಿಂದ ವಿಮೋಚನೆಯಾಗಲೀ, ವಾಣಿಜ್ಯ ವಿಷಯಗಳಲ್ಲಿ ಸ್ವಾತಂತ್ರ್ಯ ಮಾತ್ರವೇ ಅಲ್ಲದೆ, ವೈಯಕ್ತಿಕತೆಯ ಸಾಕ್ಷಾತ್ಕಾರವಾಗಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆ ಎಂದರೆ, ನಿರ್ದಿಷ್ಟವಾಗಿ ಆತನು ತಲಪಿರುವ ಸ್ವಾತಂತ್ರ್ಯದ ಮಟ್ಟ. ಸಂಪೂರ್ಣವಾಗಿ ಜಾಗೃತಗೊಂಡರೆ, ಒಬ್ಬ ಉತ್ಪಾದಕ ಮನುಷ್ಯನು ಸ್ವತಂತ್ರ ಮನುಷ್ಯ; ಏಕೆಂದರೆ, ತನ್ನ ಸ್ವಂತಿಕೆಯೇ ತನ್ನ ಜೀವನದ ಮೂಲವಾಗಿ ಅವನು ನೈಜವಾಗಿ ಬದುಕಲು ಅವನಿಗೆ ಸಾಧ್ಯ. (ಒಬ್ಬ ಸ್ವತಂತ್ರ ಮನುಷ್ಯನೆಂದರೆ ಒಬ್ಬ ಪ್ರತ್ಯೇಕಿತ ಮನುಷ್ಯನೆಂದು ಇದರ ಅರ್ಥವಲ್ಲ ಎಂದು ಹೇಳಬೇಕಾದ ಅಗತ್ಯವಿಲ್ಲ; ಯಾಕೆಂದರೆ, ಇತರರಿಗೆ ಮತ್ತು ಪ್ರಪಂಚಕ್ಕೆ ಸಂಬಂಧಿತನಾಗಿ ಮತ್ತು ಆಸಕ್ತನಾಗಿ ಇರುವ ಪ್ರಕ್ರಿಯೆಯಲ್ಲಿಯೇ ವ್ಯಕ್ತಿತ್ವದ ಬೆಳವಣಿಗೆಯು ನಡೆಯುತ್ತದೆ. ಆದರೆ, ಈ ರೀತಿ ಸಂಬಂಧಿತನಾಗಿರುವುದು, ಅವಲಂಬಿತನಾಗಿರುವುದಕ್ಕಿಂತ ಸಂಪೂರ್ಣವಾಗಿ ಬೇರೆ.) ಸ್ವಯಂಸಾಕ್ಷಾತ್ಕಾರ ಅಥವಾ ಸ್ವಯಂ ಅನುಭೂತಿಯೆಂಬ ಸ್ವಾತಂತ್ರ್ಯದ ಸಮಸ್ಯೆ ಮಾರ್ಕ್ಸ್‌ರಿಗೆ ಬೂರ್ಜ್ವಾ ಅಥವಾ ಮಧ್ಯಮ ವರ್ಗದ ಕುರಿತು ಆತನ ಟೀಕೆ ಅಥವಾ ವಿಮರ್ಶೆಗೆ ದಾರಿಮಾಡಿ ಕೊಡುತ್ತದೆ. ಫ್ರಾಯ್ಡ್ ತನ್ನ ಸಿದ್ಧಾಂತದ ಚೌಕಟ್ಟಿನ ಒಳಗೆಯೇ, ಇದೇ ಸಮಸ್ಯೆಯನ್ನು ಈಡಿಪಸ್ ಕಾಂಪ್ಲೆಕ್ಸ್‌ಗೆ (Oedipus complex) ಸಂಬಂಧಿಸಿ ನೋಡಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಮಾನಸಿಕ ಆರೋಗ್ಯದ ದಾರಿಯು ತಾಯಿಯ ಕುರಿತ ಇರುವ ಅಗಮ್ಯ ಲೈಂಗಿಕ ಸಂಬಂಧದ (incestuous) ಮೋಹದ ಕೊಂಡಿಯನ್ನು ಕಳಚುವುದರಲ್ಲಿ ಇದೆ ಎಂದು ನಂಬಿದ ಫ್ರಾಯ್ಡ್, ಮಾನಸಿಕ ಆರೋಗ್ಯ ಮತ್ತು ಪ್ರೌಢತೆಗಳು ವಿಮೋಚನೆ ಮತ್ತು ಸ್ವಾತಂತ್ರ್ಯಗಳ ಮೇಲೆ ಆಧರಿತವಾಗಿವೆ ಎಂದು ಹೇಳಿದರು. ಆದರೆ, ಅವರಿಗೆ ಈ ಪ್ರಕ್ರಿಯೆಯು ತಂದೆಯು ತನ್ನನ್ನು ನಪುಂಸಕಗೊಳಿಸುವ (castration) ಭಯದಿಂದ ಆರಂಭಗೊಳ್ಳುತ್ತದೆ ಮತ್ತು ತಂದೆಯ ಆದೇಶ ಮತ್ತು ನಿಷೇಧಗಳನ್ನು ತನ್ನ ಸ್ವಂತ ಒಳಮನಸ್ಸಿನಲ್ಲಿ (Superego) ಆಳವಡಿಸಿಕೊಳ್ಳುವುದರಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ, ತಾಯಿಯಿಂದ ಒಬ್ಬನ ಸ್ವಾತಂತ್ರ್ಯವು ಭಾಗಶಃ ಆಗಿ ಉಳಿದರೆ, ಒಬ್ಬನ ತಂದೆ ಮತ್ತು ಸಾಮಾಜಿಕ ಅಧಿಕಾರಸ್ಥರ ಮೇಲಿನ ಅವಲಂಬನೆಯು ಸೂಪರ್ ಇಗೋ ಮೂಲಕ ಮುಂದುವರಿಯುತ್ತದೆ.

ಕ್ರಾಂತಿಕಾರಿ ಗುಣಸ್ವಭಾವವೆಂದರೆ, ಮಾನವೀಯತೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿತ್ವ, ಆದುದರಿಂದ ಆತ ತನ್ನ ಸ್ವಂತ ಸಮಾಜದ ಸಂಕುಚಿತ ಮಿತಿಗಳನ್ನು ಮೀರುತ್ತಾನೆ ಮತ್ತು ಈ ಕಾರಣದಿಂದ ಆತ ತರ್ಕ ಮತ್ತು ಮಾನವೀಯತೆಯ ನೆಲೆಯಿಂದ ತನ್ನ ಮತ್ತು ಇತರ ಸಮಾಜಗಳನ್ನು ಟೀಕಿಸಲು ಮತ್ತು ವಿಮರ್ಶಿಸಲು ಶಕ್ತನಾಗುತ್ತಾನೆ. ಅವನು, ಕೇವಲ ಕಾಲ ಮತ್ತು ದೇಶದ ಆಕಸ್ಮಿಕದ ಹೊರತು ಹೆಚ್ಚೇನೂ ಅಲ್ಲದ ಕಾರಣದಿಂದ ಮಾತ್ರವೇ ತಾನು ಹುಟ್ಟಬೇಕಾಗಿಬಂದ ಸಂಸ್ಕೃತಿಯ ಸಂಕುಚಿತ ಆರಾಧನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವನು ಒಬ್ಬ ಜಾಗೃತ ಮನುಷ್ಯನಾಗಿ ತೆರೆದ ಕಣ್ಣುಗಳಿಂದ ತನ್ನ ಪರಿಸರವನ್ನು ನೋಡಲು ಮತ್ತು ಮಾನವ ಕುಲದಲ್ಲಿ ಹಾಗೂ ಆ ಕುಲಕ್ಕಾಗಿ ಇರುವ ನಿಯಮ, ಕಟ್ಟುಪಾಡುಗಳಲ್ಲಿ ಯಾವುದು ಆಕಸ್ಮಿಕ, ಯಾವುದು ಆಕಸ್ಮಿಕವಲ್ಲ (ತಾರ್ಕಿಕ) ಎಂದು ನಿರ್ಧರಿಸುವ ಮಾನದಂಡವನ್ನು ಕಂಡುಕೊಳ್ಳಲು ಶಕ್ತನಾಗುತ್ತಾನೆ.

ಕ್ರಾಂತಿಕಾರಿ ಗುಣಸ್ವಭಾವವು ಮಾನವೀಯತೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅವನು “ಜೀವನದ ಬಗ್ಗೆ ಆಳವಾದ ಗೌರವಭಾವ” ಹೊಂದಿರುತ್ತಾನೆ. ಆಲ್ಬರ್ಟ್ ಶ್ವೇಯ್ಟ್ಝರ್‌ನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಜೀವನದ ಕುರಿತು ಆಳವಾದ ತಾದಾತ್ಮ್ಯ ಮತ್ತು ಜೀವಪ್ರೇಮ. ನಾವೆಲ್ಲರೂ, ಇತರ ಎಲ್ಲಾ ಪ್ರಾಣಿಗಳಂತೆ ಜೀವನಕ್ಕೆ ಅಂಟಿಕೊಂಡಿರುತ್ತೇವೆ ಮತ್ತು ಸಾವಿನ ಜೊತೆ ಹೋರಾಡುತ್ತೇವೆ ಎಂಬುದು ನಿಜ. ಆದರೂ, ಜೀವನಕ್ಕೆ ಅಂಟಿಕೊಳ್ಳುವುದು ಎಂಬುದು ಜೀವನವನ್ನು ಪ್ರೀತಿಸುವುದು ಎಂಬುದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುವಂತದ್ದು. ಜೀವನಕ್ಕಿಂತ ಹೆಚ್ಚಾಗಿ ಸಾವು, ವಿನಾಶ ಮತ್ತು ಕೊಳೆಯುವಿಕೆಯಿಂದ ಆಕರ್ಷಿತವಾಗುವ ಒಂದು ವಿಧದ ವ್ಯಕ್ತಿತ್ವ ಇದೆ ಎಂಬ ವಾಸ್ತವದಿಂದ ಇದು ಇನ್ನಷ್ಟು ಸ್ಪಷ್ಟವಾಗಬಹುದು. (ಇದಕ್ಕೆ ಹಿಟ್ಲರ್ ಒಬ್ಬ ಒಳ್ಳೆಯ ಐತಿಹಾಸಿಕ ಉದಾಹರಣೆ.) ಈ ವಿಧದ ಗುಣಸ್ವಭಾವವನ್ನು, “ಸಾವು ಚಿರಾಯುವಾಗಲಿ” ಎಂಬ ಘೋಷಣೆಯನ್ನು ತನ್ನ ನೆಚ್ಚಿನ ಧ್ಯೇಯವನ್ನಾಗಿಸಿಕೊಂಡಿದ್ದ ಸ್ಪಾನಿಷ್ ಸರ್ವಾಧಿಕಾರಿ ಫ್ರಾಂಕೋನ ಜನರಲ್ ಒಬ್ಬನಿಗೆ 1936ರಲ್ಲಿ ಉನಾಮುನೋ ನೀಡಿದ್ದ ಪ್ರಸಿದ್ಧ ಉತ್ತರದಲ್ಲಿ ಇದ್ದ ಪದವನ್ನು ಬಳಸಬೇಕೆಂದರೆ, ಗೊಬ್ಬರದ ಹುಳುವಿನ ಅಥವಾ ನೆಕ್ರೋಫಿಲಸ್ (necrophilous) ಸ್ವಭಾವ ಎಂದು ಕರೆಯಬಹುದು.

ಸಾವು ಮತ್ತು ವಿನಾಶದತ್ತ ಆಕರ್ಷಣೆಯು ಒಬ್ಬ ವ್ಯಕ್ತಿಯ ಪ್ರಜ್ಞೆಯಲ್ಲಿ ಇಲ್ಲದೇ ಇರಬಹುದು. ಅದರೆ, ಅದು ಅವನಲ್ಲಿ ಇರುವುದನ್ನು ಆತನ ನಡವಳಿಕೆಯಿಂದ ಕಂಡುಕೊಳ್ಳಬಹುದು. ಕತ್ತು ಹಿಸುಕಿ, ಅಪ್ಪಚ್ಚಿ ಮಾಡಿ, ಜೀವನವನ್ನು ನಾಶ ಮಾಡುವುದು ಆತನಿಗೆ- ಒಬ್ಬ ಜೀವನ ಪ್ರೀತಿಯ ಮನುಷ್ಯನಿಗೆ ಜೀವನ ಬೆಳೆದು ವಿಸ್ತರಿಸುವಾಗ, ಅಭಿವೃದ್ಧಿಗೊಳ್ಳುವಾಗ ಆಗುವಷ್ಟೇ ಖುಷಿಯನ್ನು ಉಂಟುಮಾಡುತ್ತದೆ. ನೆಕ್ರೋಫಿಲಿಯಾ ಎಂಬುದು ಜೀವಂತ ಇರುವಾಗಲೇ ವಿನಾಶದ ಗುರಿ ಹೊಂದಿರುವ ನಿಜವಾದ ಮನೋವಿಕೃತಿ.

ಕ್ರಾಂತಿಕಾರಿ ಗುಣಸ್ವಭಾವವು ಸಂಗೀತದ ಪ್ರತಿಮೆ ಬಳಸುವುದಾದಲ್ಲಿ, ಒಂದು ನಿರ್ಣಾಯಕ ಸ್ವರ ಎಂದು ಕರೆಯಬಹುದಾದ “ವಿಮರ್ಶಾತ್ಮಕ ಲಯ”ದಲ್ಲಿ ಯೋಚಿಸುತ್ತದೆ, ಭಾವಿಸುತ್ತದೆ. “motto De omnibus est dubitandum” ಎಂಬ ಲ್ಯಾಟಿನ್ ಭಾಷೆಯ ನುಡಿಯಂತೆ, “ಪ್ರತಿಯೊಂದನ್ನೂ ಸಂಶಯದಿಂದ ಕಾಣಬೇಕು” ಎಂಬುದು- ಪ್ರಪಂಚಕ್ಕೆ ಆತನ ಪ್ರತಿಕ್ರಿಯೆ ಆಗಿರುತ್ತದೆ. ನಾನಿಲ್ಲಿ ಚರ್ಚಿಸುತ್ತಿರುವ “ವಿಮರ್ಶಾತ್ಮಕ ಲಯ”ವು ಯಾವುದೇ ರೀತಿಯಲ್ಲಿ ಸಿನಿಕತನವಲ್ಲ. ಬದಲಾಗಿ, ಅದು ವಾಸ್ತವಿಕತೆ ಕುರಿತ ಒಂದು ಒಳನೋಟ. ಇದು ವಾಸ್ತವಿಕತೆಗೆ ಬದಲಿಯಾಗಿ ಸೃಷ್ಟಿಸಲಾದ ಕಟ್ಟುಕತೆಗೆ ತದ್ವಿರುದ್ಧವಾಗಿರುತ್ತದೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

(5) ಸೆರ್ಮನ್ 16, ಮೀಯ್ಸ್ಟರ್ ಎಕ್ಹಾರ್ಟ್, ಅನ್ ಇಂಟ್ರೊಡಕ್ಷನ್ ಟು ದಿ ಸ್ಟಡಿ ಆಫ್ ವರ್ಕ್ಸ್, ವಿತ್ ಅನ್ ಆಂಥಾಲಜಿ ಆಫ್ ಹಿಸ್ ಸೆರ್ಮನ್ಸ್, ಆಯ್ಕೆ: ಜೇಮ್ಸ್ ಎಂ ಕ್ಲಾರ್ಕ್, ಥಾಮಸ್ ನೆಲ್ಸನ್ & ಸನ್ಸ್, ಲಂಡನ್, 1957, ಪುಟ: 235

(6) ದೇವರಿಂದ ಸ್ವಾತಂತ್ರ್ಯದ ಬಗೆಗಿನ ಪ್ರಶ್ನೆಗಳ ಬಗ್ಗೆ ಬುದ್ಧ ಮತ್ತು ಇತರ ಅಧಿಕಾರಗಳಿಂದ ಇದೇ ಬಗೆಯ ಮನೋವೃತ್ತಿಯನ್ನು ಜೆನ್ ಬುದ್ಧಿಸಂನಲ್ಲಿ ಕಾಣಬಹುದು.

(7) ಕಾರ್ಲ್ ಮಾರ್ಕ್ಸ್, ಎಕನಾಮಿಕ್ ಅಂಡ್ ಫಿಲಾಸಾಫಿಕಲ್ ಮ್ಯಾನುಸ್ಕ್ರಿಪ್ಟ್ಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...