Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

- Advertisement -
- Advertisement -

“ಪ್ರಿನ್ಸ್ ಮೂಯಿಶ್ಕಿನ್? ಲೆಫ್ ನಿಕೊಲಾವಿಚ್ ಓಹೊ! ಅದು ದಿಟವೋ ಇಲ್ಲವೋ ಅನ್ನುವುದು ನನಗಿನ್ನೂ ತಿಳಿದಿಲ್ಲ. ಆ ರೀತಿಯ ವ್ಯಕ್ತಿಯ ಹೆಸರನ್ನು ನಾನೆಂದೂ ಕೇಳಿಯೇ ಇಲ್ಲ” ಗುಮಾಸ್ತ ಹೇಳಿದ. ಆಲೋಚನಾಪರನಾಗಿ “ಕುಟುಂಬದ ಹೆಸರಿನ ಬಗ್ಗೆ ಹೇಳ್ತಾ ಇರೋದಲ್ಲ; ಆ ಹೆಸರು ಚಾರಿತ್ರಿಕವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಕರ್ಮಜಿನ್ ತನ್ನ ಚರಿತ್ರೆಯ ಬರಹದಲ್ಲಿ ಈ ಕೌಟುಂಬಿಕ ಹೆಸರನ್ನು ನಮೂದಿಸಿರಲೇಬೇಕು. ಆದರೆ ವೈಯಕ್ತಿಕವಾಗಿ ಪ್ರಿನ್ಸ್ ಮೂಯಿಶ್ಕಿನ್ ಎಂಬ ಹೆಸರನ್ನು ಈ ನಡುವೆ ಯಾರೂ ಕೇಳಿರಲು ಸಾಧ್ಯವಿಲ್ಲ.”

“ಖಂಡಿತವಾಗಿಯೂ ಸಾಧ್ಯವಿಲ್ಲ”, ಪ್ರಿನ್ಸ್ ಉತ್ತರಿಸಿದ; “ನನ್ನೊಬ್ಬನನ್ನು ಬಿಟ್ಟು ಇನ್ನ್ಯಾರೂ ಪ್ರಿನ್ಸ್ ಮೂಯಿಶ್ಕಿನ್‌ಗಳಿಲ್ಲ. ನನ್ನ ನಂಬಿಕೆಯ ಪ್ರಕಾರ ನಾನೇ ಆ ತಲೆಮಾರಿನ ಕೊನೆಯವನು ಮತ್ತು ಉಳಿದಿರುವ ಒಬ್ಬನೇ ಒಬ್ಬ. ನನ್ನ ಪೂರ್ವಜರ ಬಗ್ಗೆ ಹೇಳಬೇಕೆಂದರೆ, ಅವರೆಲ್ಲರೂ ಕೂಡ ಬಡವರಾಗಿದ್ದರು; ನನ್ನ ತಂದೆ ಸೈನ್ಯದಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದ. ಆದರೂ, ಎಪಾಂಚಿನ್‌ನ ಹೆಂಡತಿ ಈ ಮೂಯಿಶ್ಕಿನ್ ಕುಟುಂಬದ ಒಳಗಡೆಗೆ ಹೇಗೆ ಬಂದಳು ಅನ್ನುವುದು ನನಗೂ ತಿಳಿಯದ ವಿಷಯ, ಆದರೆ ಅವಳು ಪ್ರಿನ್ಸೆಸ್ ಮೂಯಿಶ್ಕಿನ್ ವಂಶದಿಂದ ಬಂದವಳು, ಅವಳೂ ಕೂಡ ಆ ತಲೆಮಾರಿನ ಕೊನೆಯ ಕುಡಿ.”

“ಹೆ-ಹೆ-ಹೆ! ತಲೆಮಾರಿನ ಕೊನೆಯ ಕುಡಿ! ಹೆ-ಹೆ! ಇದನ್ನು ಎಷ್ಟು ತಮಾಷೆಯಾಗಿ ಹೇಳ್ತ್ಯಾ” ಗುಮಾಸ್ತ ನಕ್ಕ.

ಕಪ್ಪು ಕೂದಲಿನ ಮನುಷ್ಯ ಕೂಡ ಮುಗುಳ್ನಕ್ಕ. ತಾನು ತಮಾಷೆ ಮಾಡಿದೆನಾ, ಅದೂ ತೀರಾ ತೆಳು ಹಾಸ್ಯದ್ದು ಎಂದು ತಿಳಿಯದೆ ಮೂಯಿಶ್ಕಿನ್ ಆಶ್ಚರ್ಯಚಕಿತನಾದ.

“ನಿಜವಾಗಲೂ, ಇದನ್ನ ನಾನು ಹೆಚ್ಚು ಯೋಚಿಸದೆ ಹೇಳಿದ್ದೇನೆ” ಎಂದು ಅಚ್ಚರಿಯಿಂದಲೇ ಕೊನೆಗೆ ವಿವರಿಸಿದ.

“ಖಚಿತವಾಗಿ, ಖಚಿತವಾಗಿರಲು ನೀನು ಹೇಳಿದೆ” ಗುಮಾಸ್ತ ಆಹ್ಲಾದದ ನಗೆಬೀರಿ ಒಪ್ಪಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಮತ್ತು ನೀನು ಅಲ್ಲಿನ ಪ್ರೊಫೆಸರ್ ಬಳಿ ವಿಜ್ಞಾನವನ್ನ ಮತ್ತು ಮಿಕ್ಕೆಲ್ಲವನ್ನೂ ಓದತ್ತಾ ಕಲಿತೆಯಾ?” ಕರೀ ಕೂದಲಿನ ಪ್ರಯಾಣಿಕ ಕೇಳಿದ.

“ಹೌದು ನಾನು ಸ್ವಲ್ಪ ಮಾತ್ರ ಕಲಿತೆ….ಆದರೆ”

“ನಾನು ಆದರೂ ಏನನ್ನೂ ಅಭ್ಯಯಿಸಲಿಲ್ಲ”

“ಒಟ್ಟಿನಲ್ಲಿ, ನಾನು ತುಂಬಾ ಕಮ್ಮಿ ಕಲಿತೆ, ಅಷ್ಟೆ!” ಪ್ರಿನ್ಸ್ ತಪ್ಪಿತಸ್ಥನಂತೆ ಹೇಳಿದ. “ನನ್ನ ಕಾಯಿಲೆಯ ಕಾರಣದಿಂದ ನನಗೆ ಜಾಸ್ತಿ ಕಲಿಸಲು ಅವರಿಗೆ ಆಗಲಿಲ್ಲ”.

“ನಿನಗೆ ರೊಗೊಜಿನ್ಸ್‌ಗಳು ಗೊತ್ತಾ?” ಅವನನ್ನು ಕಪ್ಪು ಕೂದಲಿನವ ಕೇಳಿದ.

“ಇಲ್ಲ ನನಗೆ ಅವರ್‍ಯಾರು ಗೊತ್ತೇ ಇಲ್ಲ! ರಷ್ಯಾದಲ್ಲಿ ನನಗೆ ಅತಿ ಕಡಿಮೆ ಜನರ ಪರಿಚಯವಿದೆ. ಯಾಕೆ, ಅದು ನಿನ್ನ ಹೆಸರಾ?”

“ಹೌದು, ನಾನು ರೊಗೊಜಿನ್, ಪಾರ್ಫೆನ್ ರೊಗೊಜಿನ್”.

“ಪಾರ್ಫೆನ್ ರೊಗೊಜಿನ್, ನಿಜವಾಗಲೂ, ಅಂದರೆ ನೀನು ಬಹುಶಃ ಅದೇ ರೊಗೊಜಿನ್‌ಗಳ ವಂಶಕ್ಕೆ ಸೇರಿದವನ” ಗುಮಾಸ್ತ ಶುರುಮಾಡಿದ, ಮತ್ತು ಅವನ ಧ್ವನಿಯಲ್ಲಿ ಈಗ ಹೆಚ್ಚಿದ ಗೌರವವಿತ್ತು.

“ಹೌದು….ಅವರುಗಳೇ” ರೊಗೊಜಿನ್ ಅಸಹನೆಯಿಂದ ಮತ್ತು ಅತ್ಯಲ್ಪವಾದ ಸೌಜನ್ಯತೆಯಿಂದ ಮಧ್ಯೆ ಬಾಯಿಹಾಕಿದ. ಅವನು ಒಮ್ಮೆಯೂ ಮುಖದಲ್ಲೆಲ್ಲಾ ಮಚ್ಚೆ ಇರುವ ಆ ಪ್ರಯಾಣಿಕನ ಕಡೆಗೆ ಗಮನ ಹರಿಸಿ ಮಾತಾಡಿರಲಿಲ್ಲ; ತಾನು ಮಾತನಾಡಿದ್ದೆಲ್ಲಾ ಪ್ರಿನ್ಸ್ ಜೊತೆಗೆ ಮಾತ್ರ ಎನ್ನುವಂತೆ ನೇರವಾಗಿ ಸಂಬೋಧಿಸುತ್ತಿದ್ದ.

“ಆದು ಹೇಗೆ ಸಾಧ್ಯ?” ಅಚ್ಚರಿಯಿಂದ ಕಣ್ಣುಗುಡ್ಡೆ ತಲೆಯಿಂದ ಹೊರಬರುತ್ತಿದೆಯೇನೋ ಎಂಬಂತೆ ಗುಮಾಸ್ತ ಕೇಳಿದ. ಅವನ ಮುಖದಲ್ಲಿ ಅತ್ಯಂತ ಭಕ್ತಿ ಮತ್ತು ದಾಸ್ಯದ ಭಾವ ಮೂಡುತ್ತಿತ್ತು. “ಇಲ್ಲ ಅಂದರೆ.. ಏನು, ಅದೇ ಸೆಮ್ಯೋನ್ ರೊಗೊಜಿನ್‌ನ ಮಗನಾ? ಯಾರು ಒಂದು ತಿಂಗಳ ಹಿಂದೆ ಅಸು ನೀಗಿ ಎರಡೂವರೆ ಲಕ್ಷ ರೂಬಲ್‌ನಷ್ಟು ಹಣವನ್ನ ಬಿಟ್ಟು ಹೋದನೆಲ್ಲಾ ಅವನು?”

“ನಿನಗೆ ಹೇಗೆ ಗೊತ್ತು ಅವನು ಎರಡೂವರೆ ಲಕ್ಷ ರೂಬಲ್ ಅನ್ನು ಬಿಟ್ಟುಹೋಗಿದ್ದಾನೆ ಎಂದು?” ರೊಗೊಜಿನ್ ಅವನ ಮುಖವನ್ನು ನೋಡುವುದಕ್ಕೂ ಹೋಗದೆ ತಿರಸ್ಕಾರದಿಂದ ಕೇಳಿದ.

“ನೋಡವನನ್ನ” ಮೂಯಿಶ್ಕಿನ್‌ಗೆ ಕಣ್ಣುಕೊಡೆದು ಹೇಳಿದ. “ಒಬ್ಬರ ಬಗ್ಗೆ ಈ ರೀತಿ ಮಾತನಾಡಿ ಇವರಿಗೆ ಏನು ಸಿಕ್ಕತ್ತೋ! ಆದರೆ, ನನ್ನ ತಂದೆ ಒಂದು ತಿಂಗಳ ಹಿಂದೆ ಸತ್ತು ಹೋದ ಅನ್ನುವುದು ನಿಜ. ಈಗ ನಾನು ಪಿಸ್ಕಾಫ್ ನಗರದಿಂದ ವಾಪಸ್ಸಾಗುತ್ತಿದ್ದೇನೆ, ಅದೂ ಒಂದು ತಿಂಗಳ ನಂತರ, ಕಾಲಿಗೆ ಶೂ ಹಾಕಿಕೊಳ್ಳಲೂ ಯೋಗ್ಯತೆ ಇಲ್ಲದೆ. ಅವರುಗಳು ನನ್ನನ್ನು ನಾಯಿಯ ರೀತಿ ನಡೆಸಿಕೊಂಡರು! ಪಿಸ್ಕಾಫ್‌ನಲ್ಲಿ ಇದ್ದ ಇಡೀ ಸಮಯ ನಾನು ಜ್ವರದಿಂದ ನರಳುತ್ತಿದ್ದೆ. ನನಗೆ ನನ್ನ ತಾಯಿಯಿಂದ ಆಗಲೀ ಅಥವಾ ಗೊಂದಲಕ್ಕೊಳಗಾಗಿದ್ದ ನನ್ನ ಅಣ್ಣನಿಂದ ಆಗಲೀ ಒಂದು ಬಿಡಿಗಾಸೂ ಬಂದಿಲ್ಲ. ಒಂದು ಮಾತು ಕೂಡ ಇಲ್ಲ!”

“ಈಗ ನಿನಗೆ ಕಡೇ ಪಕ್ಷ ಅಂದರೆ ಒಂದು ಲಕ್ಷ ರೂಬಲ್ ಸಿಗುತ್ತೆ ಅಂತ ಬರ್ತಾ ಇದ್ಯಾ. ಓ ದೇವರೇ” ಗುಮಾಸ್ತ ತನ್ನ ಕೈಗಳನ್ನು ಉಜ್ಜಿಕೊಳ್ಳುತ್ತಾ ಹೇಳಿದ.

“ನನಗೆ ಈ ರೀತಿ ಹೇಳುವುದಕ್ಕೆ ಆತನಿಗೇನಾಗಿದೆ?” ರೊಗೊಜಿನ್ ಆತನತ್ತ ಕೋಪ ಮತ್ತು ಕಿರಿಕಿರಿಯಿಂದ ತಲೆಯಲ್ಲಾಡಿಸುತ್ತಾ ಹೇಳಿದ. “ಯಾಕೆ, ನೀನು ಬೇಕಾದರೆ ತಲೆಕೆಳಗೆ ನಿಂತು ಕುಣಿಯಬಹುದು, ಆದರೆ ನಾನು ಅದರಲ್ಲಿ ನಿನಗೆ ಒಂದು ಬಿಡಿಗಾಸೂ ಕೊಡುವುದಿಲ್ಲ”.

“ಕುಣಿತೀನಿ, ಕುಣೀತೀನಿ”.

“ಆಯ್ತು! ನೀನು ಒಂದು ವಾರ ಕುಣಿದರೂ, ನಾನೇನೂ ನಿನಗೆ ಕೊಡುವುದಿಲ್ಲ”.

“ಸರಿ, ಕೊಡಬೇಡ! ನೀನೇಕೆ ಕೊಡಬೇಕು? ಕೊಡಬೇಡ. ಆದರೆ ನಾನು ಕುಣಿತೀನಿ. ನಾನು ನನ್ನ ಹೆಂಡತಿ ಮತ್ತು ಚಿಕ್ಕ ಮಕ್ಕಳನ್ನು ಬಿಟ್ಟುಬಂದು ನಿನ್ನ ಮುಂದೆ ಕುಣೀತೀನಿ. ಆಮೇಲೆ ತೆವಳ್ತೀನಿ”.

“ನೇಣು ಹಾಕಬೇಕು” ಕಪ್ಪು ಕೂದಲಿನವ ಉಗಿದ. ನಂತರ ಪ್ರಿನ್ಸ್ ಕಡೆಗೆ ತಿರುಗಿ, “ಐದು ವಾರಗಳಾಯಿತು, ನಾನೂ ನಿನ್ನ ರೀತಿಯಲ್ಲೇ ಇದ್ದೇನೆ. ಏನೂ ಇಲ್ಲದೆ ಇದ್ದೇನ. ಒಂದು ಗಂಟು ಮತ್ತು ನಾನು ಧರಿಸಿರುವ ಬಟ್ಟೆಗಳು ಮಾತ್ರ ನನ್ನಲ್ಲಿರುವುದು ಈಗ. ನಾನು ನನ್ನ ತಂದೆಯಿಂದ ಓಡಿಹೋಗಿ ನನ್ನ ದೊಡ್ಡಮ್ಮಳ ಜೊತೆ ಪಿಸ್ಕಾಫ್‌ನಲ್ಲಿದ್ದೆ, ಅಲ್ಲಿಯೇ ನನಗೆ ಜ್ವರ ಅಂಟಿಕೊಂಡಿದ್ದು. ನಾನು ಅಲ್ಲಿ ದೂರದಲ್ಲಿದ್ದಾಗ ಅವನು ಸತ್ತುಹೋಗಿದ್ದು. ನನ್ನ ಗತಿಸಿದ ತಂದೆಯ ನೆನಪುಗಳ ಬಗ್ಗೆ ಗೌರವದಿಂದಲೇ ನಾನು ಹೇಳುತ್ತಿದ್ದೇನೆ, ಅವನು ನನ್ನನ್ನು ಸಾಯಿಸಿಬಿಡುವ ಅಸಾಮಾನ್ಯ ಹಂತಕ್ಕೆ ಹೋಗಿದ್ದ. ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ ಪ್ರಿನ್ಸ್, ನಾನಾಗ ತಪ್ಪಿಸಿಕೊಂಡು ಓಡಿಹೋಗದೇ ಇದ್ದಿದ್ದರೆ ನಾಯಿಯನ್ನ ಕೊಲ್ಲುವ ರೀತಿ ಅವನು ನನ್ನನ್ನು ಖಂಡಿತವಾಗಿ ಕೊಂದುಬಿಡುತ್ತಿದ್ದ”.

“ನೀನು ಅವನನ್ನು ಕೋಪೋದ್ರಿಕ್ತಗೊಳಿಸಿರಬಹುದೇ?” ಲಕ್ಷಾಧೀಶ್ವರನ ಕಡೆಗೆ ಕುತೂಹಲದಿಂದ ನೋಡುತ್ತಾ ಪ್ರಿನ್ಸ್ ಕೇಳಿದ. ಅವನೀಗ ಲಕ್ಷಾಂತರ ರೂಬಲ್‌ಗಳಿಗೆ ವಾರಸುದಾರ ಅನ್ನುವುದು ಗಮನಾರ್ಹವಾಗಿದ್ದರೂ ಕೂಡ, ಅದೆಲ್ಲದಕ್ಕಿಂತ ಮತ್ತೊಂದು ವಿಷಯ ಪ್ರಿನ್ಸ್‌ನನ್ನು ಆಶ್ಚರ್ಯಗೊಳಿಸಿತ್ತು ಮತ್ತು ಅವನ ಬಗ್ಗೆ ಆಸಕ್ತಿಯನ್ನ ಮೂಡಿಸಿತು. ರೊಗೊಜಿನ್ ಕೂಡ ಈ ಸಂಭಾಷಣೆಯಲ್ಲಿ ಅಸಾಮಾನ್ಯವಾದ ತತ್ಪರತೆಯಿಂದ ಭಾಗವಹಿಸಿದ್ದ; ಈ ಮಾತುಕತೆ ಪ್ರಮಾಣಿಕತೆಗಿಂತಲೂ ಪೂರ್ವಾಗ್ರಹದಿಂದ ಕೂಡಿತ್ತು; ಅವನಲ್ಲಿನ ತಳಮಳವನ್ನ ಹೊರಹಾಕುವ ಸುರಕ್ಷ ಕವಾಟದ ರೀತಿಯಲ್ಲಿ, ಉತ್ಸಾಹದಿಂದ ಕೂಡಿ ಮಾನಸಿಕತೆಗಿಂತಲೂ ಭೌತಿಕವಾಗಿತ್ತು. ಸಂಪೂರ್ಣವಾಗಿ ಜ್ವರ ಬಿಟ್ಟಿದ್ದಂತೆ ಕಾಣುತ್ತಿರಲಿಲ್ಲ.

ಅವನ ಪಕ್ಕದಲ್ಲಿದ್ದ ಕೆಂಪು ಮೂಗಿನ ಗುಮಾಸ್ತ, ರೊಗೊಜಿನ್‌ನ ಗುರುತಿನ ಬಗೆಗಿನ ಮಾಹಿತಿ ಮತ್ತು ಅವನು ನುಡಿದ ಪದಗಳಲ್ಲಿ, ಜೇನಿನ ಸವಿಯನ್ನು ಸವಿಯುವಂತೆ, ಉಸಿರು ಬಿಗಿಹಿಡಿದು ಕೇಳಿಸಿಕೊಳ್ಳುತ್ತಿದ್ದ; ಪ್ರತಿಯೊಂದು ಮಾತೂ ಬೆಲೆಬಾಳುವ ಮುತ್ತು ಎನ್ನುವ ರೀತಿಯಲ್ಲಿ.

ಇದನ್ನೂ ಓದಿ: ದೊಸ್ತೊಯೆವ್‌ಸ್ಕಿ 200; ದ್ವಂದ್ವಗಳ ಜಗತ್ತಿನ ಮಾನವೀಯ ಲೇಖಕ

“ಓ ಹೌದು; ನಾನು ಅವನನ್ನು ಕೋಪೋದ್ರಿಕ್ತನನ್ನಾಗಿ ಮಾಡಿದೆ, ನಿಜವಾಗಲೂ ಅವನು ಕೆಂಡಾಮಂಡಲವಾಗುವಂತೆ ಮಾಡಿದೆ”, ರೊಗೊಜಿನ್ ಉತ್ತರಿಸಿದ. “ಆದರೆ ನಾನು ಹಾಗೆ ಮಾಡಲು ಕಾರಣ ನನ್ನ ಅಣ್ಣ. ಖಂಡಿತವಾಗಿಯೂ ನನ್ನ ತಾಯಿ ಅಸಹಾಯಕಳು. ಅವಳಿಗಾಗಲೇ ವಯಸ್ಸಾಗಿಬಿಟ್ಟಿದೆ. ಮುದುಕಿಯರ ಜೊತೆಗೆ ಕೂತು ಸಂತರ ಜೀವನದ ಬಗ್ಗೆ ಓದುತ್ತಾ ಸಮಯ ಕಳೆಯುತ್ತಾಳೆ. ನನ್ನ ಅಣ್ಣ ಸೆಮ್ಯೋನ್ ಏನನ್ನೇ ಹೇಳಿದರೂ ಅದು ಅವಳಿಗೆ ಕಾನೂನಿಗೆ ಸರಿಸಮಾನ! ಆದರೆ ಅವನು ನನಗೆ ತಂದೆಯ ಸಾವಿನ ಬಗ್ಗೆ ಯಾಕೆ ತಿಳಿಸಲಿಲ್ಲ? ಸರಿ, ಅವರು ಹೇಳಿರುವುದು ನಿಜ. ಆ ಸಮಯದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದಿದೆ. ಒಂದು ಟೆಲಿಗ್ರಾಮ್ ಕಳುಹಿಸಿದರು ಅಂತ ಅವರು ಹೇಳುತ್ತಾರೆ. ಅದೂ ನಮ್ಮ ದೊಡ್ಡಮ್ಮನಿಗೆ. ಅವರು ಮೂವತ್ತು ವರ್ಷಗಳಿಂದ ವಿಧವೆ ಹಾಗೂ ಬೆಳಗಿನಿಂದ ರಾತ್ರಿಯವರೆಗೆ ಹುಚ್ಚು ಯಾತ್ರಿಕರ ಜೊತೆಗೆ ಅವರ ಸಮಯ ಕಳೆಯುತ್ತಾರೆ. ಬರೀ ಟೆಲಿಗ್ರಾಮ್ ಕಳುಹಿಸಿದರೆ ಏನು ಪ್ರಯೋಜನ? ನನ್ನ ದೊಡ್ಡಮ್ಮಳನ್ನು ಆ ಟೆಲಿಗ್ರಾಮ್ ಭಯಪಡಿಸಿತು; ಅದನ್ನ ತೆರೆದು ಓದದೇ ಹಾಗೆಯೇ ಅದನ್ನು ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋದಳು. ಆ ದಿನ ಅದು ಅಲ್ಲೇ ಬಿದ್ದಿತ್ತು! ಈ ಸಂದರ್ಭದಲ್ಲಿ ವ್ಯಾಸಿಲಿ ವ್ಯಾಸಿಲಿಚ್ ಕೊನ್ಯೋಫ್ ನನಗೆ ಸಹಾಯ ಮಾಡಿದ್ದು. ಅವನೇ ನನಗೆ ಕಾಗದದ ಮೂಲಕ ವಿವರಗಳನ್ನೆಲ್ಲಾ ಬರೆದು ತಿಳಿಸಿದ. ಅವನೇ ಹೇಳಿದ್ದು, ನನ್ನ ಸೋದರ ನನ್ನ ತಂದೆಯ ಶವಪೆಟ್ಟಿಗೆಗೆ ಹಾಕಿದ್ದ ಚಿನ್ನದ ಕುಚ್ಚುಗಳನ್ನೂ ಕತ್ತರಿಸಿಕೊಂಡನೆಂದು; ’ಕಾರಣ ಅದು ಬೆಲೆಬಾಳುವ ವಸ್ತುವಾದದ್ದರಿಂದ!’ ಇದೊಂದು ಅಪವಿತ್ರವಾದ ಕೆಲಸ. ಆ ಅಪವಿತ್ರ ಕೆಲಸಕ್ಕಾಗಿಯೇ ಅವನನ್ನು ಸೈಬೀರಿಯಾಗೆ ಕಳುಹಿಸಬಹುದು ನಾನು ಮನಸ್ಸು ಮಾಡಿದರೆ. ಇಲ್ಲಿ ನೋಡು ನೀನು ಬರೀ ಬೆದರುಗೊಂಬೆಯೇ!” ಅವನು ತನ್ನ ಮಾತಿಗೆ ಸೇರಿಸಿದ. ಅವನ ಪಕ್ಕದಲ್ಲಿ ಕುಳಿತಿದ್ದ ಗುಮಾಸ್ತನಿಗೆ ಸಂಬೋಧಿಸುತ್ತಾ, “ಕಾನೂನಿನ ಪ್ರಕಾರ ಅದೊಂದ ಅಪವಿತ್ರವಾದ ಕೆಲಸವೊ ಅಲ್ಲವೋ?” ಎಂದ.

“ಖಂಡಿತವಾಗಿಯೂ ಹೌದು, ಅದೊಂದು ಅಪವಿತ್ರವಾದ ಕೆಲಸ” ಅವನು ಹೇಳಿದ.

“ಮತ್ತೆ ಅದಕ್ಕೆ ಶಿಕ್ಷೆ ಸೈಬೀರಿಯಾಗೆ ಕಳುಹಿಸುವುದು, ಹೌದೊ ಅಲ್ಲವೊ?”

“ಅನುಮಾನವೇ ಇಲ್ಲ; ಖಂಡಿತವಾಗಿಯೂ ಸೈಬೀರಿಯಾ!”

“ನಾನಿನ್ನೂ ಅನಾರೋಗ್ಯದಿಂದ ಇದ್ದೇನೆ ಎಂದು ಅವರಂದುಕೊಂಡಿದ್ದಾರೆ” ರೊಗೊಜಿನ್ ಪ್ರಿನ್ಸ್‌ಗೆ ಹೇಳುವುದನ್ನ ಮುಂದುವರಿಸಿದ. “ಆದರೆ ನಾನು ಯಾರಿಗೂ ಒಂದು ಮಾತು ಹೇಳದೆ, ಸದ್ದಿಲ್ಲದೇ ಜಾರಿಕೊಂಡು ಈ ರೈಲು ಹತ್ತಿಬಿಟ್ಟೆ. ಜ್ವರದಲ್ಲಿಯೇ ನಮ್ಮ ಮನೆ ಕಡೆಗೆ ಹೊರಟಿದ್ದೇನೆ. ಆಹಾ ಸೋದರ ಸೆಮ್ಯೋನ್ ಸೆಮ್ಯೋನೋವಿಚ್, ನೀನೀಗ ನನಗೆ ಬಾಗಿಲು ತೆರೆಯುವೆ. ಅವನು ನನ್ನ ಬಗ್ಗೆ ಕಥೆಗಳನ್ನ ಕಟ್ಟಿ ನನ್ನ ತಂದೆ ತಿರುಗಿ ಬೀಳುವಂತೆ ಮಾಡಿದ ಅನ್ನುವುದು ನನಗೆ ಗೊತ್ತು. ಅದು ನನಗೆ ಚೆನ್ನಾಗಿ ಗೊತ್ತು. ಆದರೆ ಇದೂ ನಿಜ. ಖಂಡಿತವಾಗಿ ನಸ್ಟಾಸಿಯಾ ಪಿಲಿಪೊವ್ನ ಬಗ್ಗೆ ನನ್ನ ತಂದೆಯನ್ನ ಕೆರಳಿಸಿದ್ದೆ. ಅದೆಲ್ಲಾ ನನ್ನದೇ ಕೆಲಸ. ಇದರಲ್ಲಿ ನನ್ನದೇ ತಪ್ಪಿದೆ”.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...