Homeಸಾಹಿತ್ಯ-ಸಂಸ್ಕೃತಿಕವನಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

ಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

- Advertisement -
- Advertisement -

1.

ನೀನು,
ನಿನ್ನ ವಯಸ್ಸಲ್ಲ,
ನಿನ್ನ ಎತ್ತರವಲ್ಲ,
ನೀನು ಧರಿಸುವ ಉಡುಪೂ ಅಲ್ಲ,
ನಿನ್ನ ತೂಕವಲ್ಲ,
ನಿನ್ನ ಕೂದಲಿನ ಬಣ್ಣವೂ ಅಲ್ಲ.

ನೀನು ನಿನ್ನ ಹೆಸರಲ್ಲ,
ನಿನ್ನ ಕೆನ್ನೆಯಲಿ ಬೀಳುವ ಗುಳಿಯೂ ಅಲ್ಲ.

ಆದರೆ ನೀನು,
ನೀನು ಓದಿದ ಎಲ್ಲ ಪುಸ್ತಕಗಳು,
ನೀನು ಆಡಿದ ಎಲ್ಲ ಮಾತುಗಳು,
ನಿನ್ನ ಮುಂಜಾನೆಯ ಗಡಸು ದನಿ ಮತ್ತು
ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವ
ನಿನ್ನ ಮುಗುಳ್ನಗು.

ನೀನು,
ನಿನ್ನ ನಗೆಯೊಳಗಿನ ಮಾಧುರ್ಯ ಮತ್ತು
ನೀನು ಅತ್ತ ಎಲ್ಲ ಕಣ್ಣೀರು.

ನೀನು,
ಗಟ್ಟಿಯಾಗಿ ನೀನು ಹಾಡುವ ಹಾಡುಗಳು,
ನಿನಗೆ ಮಾತ್ರ ಗೊತ್ತಿರುವ ನಿನ್ನ ಏಕಾಂತ,
ನೀನು ಭೇಟಿ ಮಾಡಿದ ಎಲ್ಲ ಸ್ಥಳಗಳು ಮತ್ತು
ನೀನು ಮನೆ ಎಂದು ಕರೆಯುವ ಜಾಗ.

ನೀನು,
ನೀನು ನಂಬಿಕೆಯಿಟ್ಟಿರುವ ಸಂಗತಿಗಳು,
ನೀನು ಪ್ರೀತಿಸುವ ಎಲ್ಲ ಜನಗಳು ಮತ್ತು,
ನಿನ್ನ ಬೆಡ್ರೂಮಿನಲ್ಲಿರುವ ಎಲ್ಲ ಫೋಟೋಗಳು ಮತ್ತು
ನೀನು ಕನಸುಗಾಣುವ ಭವಿಷ್ಯ.

ಎಷ್ಟೊಂದು ಚೆಲುವುಗಳಿಂದ
ಸೃಷ್ಟಿಯಾಗಿರುವೆ ನೀನು
ಆದರೂ
ಬಹುಶಃ ಎಲ್ಲ ಮರೆತಿರುವೆ,
ಯಾವಾಗ ಜನ
ನೀನು ಯಾವುದಲ್ಲವೋ ಆ ಸಂಗತಿಗಳಿಂದಲೇ
ನಿನ್ನನ್ನು ಗುರುತಿಸುತ್ತಿದ್ದಾರೆ ಎನ್ನುವುದು
ಗೊತ್ತಾದಾಗ ನಿನಗೆ.
________________________________

2.

ನಿನ್ನ ಕಣ್ಣುಗಳ ದಿಟ್ಟಿಸುತ್ತ,
ನಿನ್ನ ಎಲ್ಲ ಮಾತುಗಳಿಗೆ ಕಿವಿಯಾಗಬಲ್ಲೆನೇ ಹೊರತು
ಎಂದೂ ನಿನ್ನೆದುರು ನನ್ನ ಎದೆಯ ಬಿಚ್ಚಿಡುವುದಿಲ್ಲ.
ನಾನು ಬದಲಾಗಬೇಕು ಎನ್ನುವ
ನಿನ್ನ ಬೇಡಿಕೆಯಲ್ಲಿ ಇರುವ ಕಳಕಳಿ
ಗೊತ್ತಾಗುತ್ತದೆ ನನಗೆ.
ಆದರೆ ಈ ಬದಲಾಗುವುದನ್ನ
ಎಲ್ಲಿಂದ ಮೊದಲು ಮಾಡಲಿ ನಾನು?
ನನ್ನ ನಗು ಲೋಕಕ್ಕೆ ಕಾಣುವುದಕ್ಕಿಂತ ಹೆಚ್ಚಾಗಿ
ನನಗೆ ಕಾಣಿಸಿದ್ದೇ ಹೆಚ್ಚು.
ಕಾರಣ ಅಂಥ ವಿಶೇಷವೇನಿಲ್ಲ,
ನನ್ನ ನಗು
ನಾನು ನನ್ನ ಜೊತೆ ಇರುವಾಗ ಮಾತ್ರ ಸಾಚಾ.
ಅರ್ಥವಾಗುವುದಿಲ್ಲ ಜನರಿಗೆ ನನ್ನ ಭಾವನೆಗಳು
ಮತ್ತು ಈಗೀಗ ಅವರು ಅರ್ಥ ಕೇಳುವುದಿಲ್ಲ ಕೂಡ,

ಏಕೆಂದರೆ
ಮೂರ್ಖರನ್ನಾಗಿಸಿದ್ದೇನೆ ಅವರನ್ನೆಲ್ಲ ನಾನು
ಎನ್ನುವ ಅನುಮಾನ
ಅವರಿಗಷ್ಟೇ ಅಲ್ಲ ಇದೆ ನನಗೂ.
ಮುಖವಾಡದಾಚೆಗಿನ ನನ್ನ ಮುಖ
ಕಾಣಿಸುವುದಿಲ್ಲ ಅವರಿಗೆ.
ಲೋಕ ಇನ್ನೂ ನಿದ್ದೆಯಲ್ಲಿರುವಾಗ,

ರಾತ್ರಿಯನ್ನು ಸಾಕ್ಷಿಯಾಗಿಟ್ಟುಕೊಂಡು
ಜನ ನನ್ನೆದುರು
ತಮ್ಮ ಕುತೂಹಲಗಳನ್ನು ತೋಡಿಕೊಂಡಾಗಲೆಲ್ಲ,
ನನ್ನ ರಹಸ್ಯಗಳನ್ನ ಅವರೆದುರು ಬಿಚ್ಚಿಟ್ಟು
ಹಾಕಿದ್ದೇನೆ ಸವಾಲು,
ಆದರೆ ನನ್ನ ಕಣ್ಣಿನ ಹಸಿ ಆರಿ ಹೋಗುವ ಮುನ್ನವೇ
ಅವರು ಎದ್ದು ಹೋದಾಗ ಖಾತ್ರಿ ಮಾಡಿಕೊಂಡಿದ್ದೇನೆ,
ಜನರಿಗೆ ಬಾಡಿಗೆ ಕುತೂಹಲ ಮಾತ್ರ
ಸ್ವಂತಿಕೆಯಿಲ್ಲ ಒಬ್ಬರಲ್ಲೂ
ನನ್ನ ಬಗ್ಗೆ

ನನ್ನ ನಗು ನಕಲಿ ಎನ್ನುವ
ಲೋಕದ ಆಪಾದನೆಗಳನ್ನು ಕೇಳಿದಾಗಲೆಲ್ಲ
ನಗುತ್ತೇನೆ ಬಿದ್ದು ಬಿದ್ದು ಮತ್ತು
ಬಾಕಿ ಉಳಿದ ರಾತ್ರಿಗಳ ಕತ್ತಲನ್ನು ಮಡಿಚಿಟ್ಟು
ಬೆಚ್ಚಿ ಬೀಳಿಸುತ್ತೇನೆ
ಗಂಡು ಜಾತಿಯ ತಿಳಿವಳಿಕೆಯನ್ನ.
________________________________

3.

ಹೃದಯಗಳಿಗಾಗಿಯೇ ಎಂಬಂತೆ
ಮಾಡಿಸಿಟ್ಟುಕೊಂಡಿದ್ದಾಳೆ ಒಂದು ಬುಕ್ ಶೆಲ್ಫ್,
ಮತ್ತು ಬರೆಯುವ ಶಾಯಿ
ತುಂಬಿಕೊಂಡಿದೆ ಅವಳ ನರನಾಡಿಗಳಲ್ಲಿ.
ಅವಳ ಮೆದುಳಿನಲ್ಲಿ ಕುಟ್ಟುವ
ಟೈಪ್ ರೈಟರ್‌ನ ಕೀಗಳು ನಿನ್ನನ್ನು
ಅವಳ ಕಥೆಯಲ್ಲಿ ಪ್ರಕಟ ಮಾಡುತ್ತವೆ.
ಅವಳ ಪುಟಗಳನ್ನು ತಿರುವಿಹಾಕಿದ,
ಆದರೆ ಕೊನೆಯ ಪುಟ ಮುಟ್ಚುವ ಮುನ್ನವೇ
ಪುಸ್ತಕ ಮುಚ್ಚಿಬಿಟ್ಟವರ ಕಥೆಗಳ ನೂಕುನುಗ್ಗಲಿನಿಂದಾಗಿ
ತುಂಬಿಹೋಗಿದೆ ಅವಳ ಬುಕ್ ಶೆಲ್ಫ್.

ಕೆಲವು ಪುಸ್ತಕಗಳು ಡಸ್ಟ ಬಿನ್ ಸೇರಿರುವಾಗಲೂ
ಆ ಒಂದು ಪುಸ್ತಕ ಮಾತ್ರ
ಅವಳ ಫೈನೆಸ್ಟ್ ರೈಟಿಂಗ್
‘The One’s Who Lost My Trust’
ಧೂಳು ತಿನ್ನುತ್ತ ಬುಕ್ ಶೆಲ್ಫ್‌ನ ತುದಿಯಲ್ಲಿ
ಕೈಗೆಟುಕುವ ಹಾಗೆ ಬಾಗಿದೆ.

ಅವಳಿಗೆ ಕೆಲ ಪುಸ್ತಕಗಳನ್ನ
ಓಪನ್ ಮಾಡಲು ಭಯ ಮತ್ತು
ಕೆಲ ಪುಸ್ತಕಗಳನ್ನು ಮುಚ್ಚಲು ಬೇಸರ.
ಭೇಟಿ ಮಾಡಿದ ಪ್ರತೀ ಮನುಷ್ಯನ ಕಥೆಗಳು
ಪುಸ್ತಕದ ಕೊನೆಯಿಲ್ಲದ ಸಾಲುಗಳಲ್ಲಿ
ಹಿಗ್ಗಿಸಿಕೊಂಡಿವೆ ತಮ್ಮನ್ನು ತಾವು.

ಕೆಲವರು ಒಂದು ವಾಕ್ಯದಲ್ಲಿ ಮಾತ್ರ
ಮತ್ತು ಕೆಲವರು ಒಮ್ಮೆ ಕಥೆಯ ಮುಖ್ಯ ಭಾಗದಲ್ಲಿ,
ಅವಳ ಎದೆಯ ಮೇಲೆ ಬಿಟ್ಟು ಹೋಗಿದ್ದಾರೆ
ಶಾಯಿಯ ಹೆಜ್ಜೆ ಗುರುತುಗಳ.

ನಿಮಗೆ ಆಶ್ಚರ್ಯ ಆಗಬಹುದು
ಯಾಕೆ ಹೀಗೆ ಅವಳು?
ಯಾಕೆ ತನಗೆ ಎದುರಾದವರನ್ನ
ಕಟ್ಟಿ ಹಾಕುತ್ತಾಳೆ ತನ್ನ ಕಥೆಗಳಲ್ಲಿ?
ಅವಳಿಗೊಂದು ಭರವಸೆ;

ಮುಂದೆ ಒಂದು ದಿನ ತಾನೂ ಇನ್ನೊಬ್ಬರನ್ನು
ತಾಕಬಹುದು,
ಅವರೂ ಪಾತ್ರವಾಗಿಸಬಹುದು ತನ್ನ
ಅವರ ಕಥೆಗಳಲ್ಲಿ, ಕವಿತೆಗಳಲ್ಲಿ,
ಪ್ರೀತಿಯಾಗಿ, ಸಂಕಟವಾಗಿ, ಅಸೂಯೆಯಾಗಿ,
ಅಥವಾ ಸಾಧ್ಯವಾಗದಿದ್ದರೆ
ಪ್ರಶ್ನಾರ್ಥಕದಂತೆ, ಉದ್ಘಾರ ವಾಚಕದಂತೆ
ಅಲ್ಪ ವಿರಾಮದಂತೆ, ಪೂರ್ಣ
ವಿರಾಮವಾಗಿ.
_____________________________

4.

ನೀವು
ಯಾವುದೇ ಮೂಲೆಯನ್ನ ನೋಡಿ,
ಅಲ್ಲಿ ಅವಳು ಸಿಕ್ಕೇ ಸಿಗುತ್ತಾಳೆ ನಿಮಗೆ,
ಕತ್ತಲು, ತನ್ನೊಳಗೆ ಅಡಗಿಸಿಕೊಂಡ
ಗುಂಗುರು ಕೂದಲಿನ ಹುಡುಗಿ.

ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಮೋಡಗಳಲ್ಲಿ ಕೈಚಾಚಿಕೊಂಡ,
ಸಂತೆಗಳಿಂದ ದೂರ ನಿಂತುಕೊಂಡ,
ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ
ಗುಂಗುರು ಕೂದಲಿನ ಹುಡುಗಿ.

ಜಗತ್ತು ನಿಮ್ಮನ್ನು ದಾಟಿ ಹೋಗುತ್ತಿರುವಾಗ
ಕುಳಿತುಕೊಳ್ಳಿ ಪಕ್ಕ, ಅವಳ ಕೈ ಹಿಡಿದುಕೊಂಡು.
ನಿಮ್ಮ ಐದೇ ಐದು ನಿಮಿಷ
ಅವಳದಾಗಬಹುದಾದರೆ,
ನೀವೇ ನೋಡುತ್ತೀರಿ, ಹೇಗೆ ಅವಳ ನಗು
ಜಗತ್ತಿನ ಅತ್ಯಂತ ಕೆಟ್ಟ ಸಂಗತಿಗಳನ್ನೂ
ಬೇಕೆನಿಸುವಂತೆ ಮಾಡುತ್ತದೆ,
ಮತ್ತೆ ಮತ್ತೆ ನಿಮಗೆ.

ಆದರೆ ನೀವು
ಕತ್ತಲ ಮೂಲೆಗಳನ್ನು ನೋಡುವುದಿಲ್ಲ,
ಆ ದಿಕ್ಕಿನಲ್ಲಿ ಹೊರಳುವುದೂ ಇಲ್ಲ.
ಆದರೂ ಅವಳು ನಿಮ್ಮ ಒಂದು ನೋಟಕ್ಕಾಗಿ
ಕಾಯುತ್ತಲೇ ಇದ್ದಾಳೆ ಇನ್ನೂ,
ತನ್ನ ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ,
ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಗುಂಗುರು ಕೂದಲಿನ ಹುಡುಗಿ.
—————————

ಎರಿನ್ ಹ್ಯಾನ್ಸನ್
ಅಸ್ಟ್ರೇಲಿಯಾ ಮೂಲದ ಕವಿ. ತಮ್ಮ 11ನೆಯ ವಯಸ್ಸಿನಲ್ಲಿಯೇ ಬ್ಲಾಗ್‌ನಲ್ಲಿ ಅಭಿವ್ಯಕ್ತಿಸುತ್ತಿದ್ದ ಅವರ ಪದ್ಯಗಳು ಭಾರಿ ಜನಪ್ರಿಯತೆ ಪಡೆದು ಕವಿಯಾಗಿ ಗುರುತಿಸಿಕೊಂಡವರು.

(ಕನ್ನಡಕ್ಕೆ): ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.


ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...