Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-1)

- Advertisement -
- Advertisement -

ಜನರಲ್ ಎಪಾಂಚಿನ್ ನಗರದ ಲಿಟಾಯ್ನಾಯ ಪ್ರದೇಶದಲ್ಲಿ ತನ್ನದೇ ಆದ ಸ್ವಂತ ಮನೆಯಲ್ಲಿ ವಾಸವಾಗಿದ್ದ. ಐದನೇ ಆರು ಭಾಗದಷ್ಟರ ಜಾಗದಲ್ಲಿ ಫ್ಲಾಟ್‌ಗಳು ಮತ್ತು ಲಾಡ್ಜ್‌ಗಳನ್ನ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದ. ವಿಶಾಲವಾದ ಈ ಮನೆಯಲ್ಲದೆಯೇ, ಸಡೊವಾಯ ಎಂಬ ಇನ್ನೊಂದು ಪ್ರದೇಶದಲ್ಲಿ ಜನರಲ್ ಇನ್ನೊಂದು ಬೃಹತ್ತಾದ ಮನೆಯ ಮಾಲೀಕನಾಗಿದ್ದ; ಅದರಿಂದ ಮೊದಲನೆಯದಕ್ಕಿಂತಲೂ ಹೆಚ್ಚಿನ ಬಾಡಿಗೆ ಬರುತ್ತಿತ್ತು. ಇದಲ್ಲದೇ ಅವನು ನಗರದಿಂದ ಆಚೆ ಒಂದು ಸೊಗಸಾದ ಸಣ್ಣ ತೋಟವನ್ನೂ ಹೊಂದಿದ್ದ. ಮತ್ತು ನಗರದ ಇನ್ನೊಂದು ಪ್ರದೇಶದಲ್ಲಿ ಯಾವುದೋ ಒಂದು ಬಗೆಯ ಕಾರ್ಖಾನೆಯನ್ನೂ ನಡೆಸುತ್ತಿದ್ದ. ಎಲ್ಲರಿಗೂ ತಿಳಿದಂತೆ ಸರ್ಕಾರೀ ಸ್ವಾಮ್ಯದಲ್ಲಿರುವ ಕೆಲವು ಸಂಸ್ಥೆಗಳ ಜೊತೆ ಎಪಾಂಚಿನ್ ಷೇರುಗಳನ್ನು ಹೊಂದಿದ್ದ; ಅನೇಕ ಬೇರೆಬೇರೆ ರೀತಿಯ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಲ್ಲದೆ ಅವುಗಳ ನಿಯಂತ್ರಣದಲ್ಲಿ ಬಹಳಷ್ಟು ಪ್ರಭಾವವನ್ನೂ ಹೊಂದಿದ್ದ. ನಿಜವಾಗಲೂ ಹೇಳಬೇಕೆಂದರೆ ಅವನೊಬ್ಬ ಶ್ರೀಮಂತ, ಸದಾ ಕಾರ್ಯನಿರತನಾಗಿರುವ, ಸದಭಿರುಚಿಯ ಅಭ್ಯಾಸಗಳನ್ನ ರೂಢಿಸಿಕೊಂಡಿದ್ದ ಮತ್ತು ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೆಂದು ಹೆಸರನ್ನ ಗಳಿಸಿದ್ದ. ಅನೇಕ ವರ್ಗಗಳಲ್ಲಿ ಮತ್ತು ಗುಂಪುಗಳಲ್ಲಿ ತನ್ನ ಅವಶ್ಯಕತೆ ಅನಿವಾರ್ಯ ಅನ್ನಿಸುವಷ್ಟು, ಅದರಲ್ಲೂ ಅವನಿದ್ದ ಸರ್ಕಾರಿ ಇಲಾಖೆಯಲ್ಲಿ ತನ್ನನ್ನು ತಾನೇ ಭದ್ರವಾಗಿ ಸ್ಥಾಪಿಸಿಕೊಂಡಿದ್ದ; ಆದರೂ ಸರ್ವರಿಗೂ ತಿಳಿದ ಸತ್ಯವೇನೆಂದರೆ ಫ್ಯೋದೋರ್ ಇವಾನೊವಿಚ್ ಎಪಾಂಚಿನ್ ಯಾವುದೇ ರೀತಿಯಲ್ಲಿಯೂ ವಿದ್ಯಾವಂತನಲ್ಲದೇ ಇರುವುದು, ಮತ್ತು ಸಂಪೂರ್ಣವಾಗಿ ಕೆಳ ಶ್ರೇಣಿಯಿಂದ ಅಂದರೆ ಒಬ್ಬ ಸಾಮಾನ್ಯ ಸೈನಿಕನ ಮಗನಾಗಿ ಹುಟ್ಟಿ ಉನ್ನತ ಸ್ಥಾನಕ್ಕೆ ಏರಿದವನು ಎಂಬುದು.

ಮತ್ತು ಕಡೆಯಲ್ಲಿ ಹೇಳಿದ ಸತ್ಯಾಂಶ ಖಂಡಿತವಾಗಿ ಜನರಲ್‌ಗೆ ಹೊಗಳಿಕೆ ಮತ್ತು ಶ್ರೇಯಸ್ಸನ್ನೇ ತಂದುಕೊಟ್ಟಿತ್ತು; ಮತ್ತು ಅವನೊಬ್ಬ ಪ್ರಶ್ನಾತೀತ ಚತುರನಾಗಿದ್ದರೂ, ಅವನದೇ ಆದ ಸಣ್ಣಪುಟ್ಟ ಕ್ಷಮಿಸಿಬಿಡುವಂತಹ ದೌರ್ಬಲ್ಯಗಳನ್ನು ಹೊಂದಿರದೇ ಇರಲಿಲ್ಲ. ಅವುಗಳಲ್ಲಿ ಒಂದೆಂದರೆ, ಅವನ ಬಗ್ಗೆ, ಮೇಲೆ ಹೇಳಿದಂತಹ ಸಂದರ್ಭಗಳನ್ನ ಪ್ರಸ್ತಾಪಿಸಿ ಗುಣಗಾನ ಮಾಡುವುದನ್ನ ಇಷ್ಟ ಪಡುತ್ತಿರಲಿಲ್ಲ. ಅನುಮಾನವಿಲ್ಲದೇ ಅವನು ಬಹಳ ಜಾಣನಾಗಿದ್ದ. ಉದಾಹರಣೆಗೆ ಅವನು ತನ್ನ ಅಭಿಪ್ರಾಯವನ್ನ ವ್ಯಕ್ತಪಡಿಸದೇ ಸುಮ್ಮನಿದ್ದರೆ ತನಗೆ ಹೆಚ್ಚುಲಾಭದಾಯಕ ಎನ್ನುವುದು ತಿಳಿದಾಗ ಅವನು ಒಂದು ಮಾತನ್ನೂ ಆಡದೆ ಹಿಂಬದಿಗೆ ಸರಿಯುತ್ತಿದ್ದ. ಅದೇ ಕಾರಣಕ್ಕೆ ಅನೇಕ ಉತ್ತುಂಗಕ್ಕೇರಿದ ವ್ಯಕ್ತಿಗಳು, ಅವನನ್ನ ಮುಖ್ಯವಾಗಿ ಮಹತ್ವಪೂರ್ಣವಾದ ಮನುಷ್ಯ ಎಂದು ಪರಿಗಣಿಸುತ್ತಿದ್ದದ್ದು; ಅದು ಅವನ ವಿನಯ ಮತ್ತು ಸರಳತೆಯ ಕಾರಣಕ್ಕಾಗಿ, ಮತ್ತು ’ಅವನು ತನ್ನ ಸ್ಥಾನವು ಯಾವುದೆಂಬುದನ್ನ ಅರಿತಿದ್ದ’ ಎನ್ನುವ ಕಾರಣಕ್ಕೂ ಕೂಡ. ಮತ್ತು ಆ ಗಣ್ಯರೆಲ್ಲಾ ಈ ’ತನ್ನ ಸ್ಥಾನವನ್ನ ತಾನೇ ಅಷ್ಟೊಂದು ಚೆನ್ನಾಗಿ ಬಲ್ಲವನ’ ಆಂತರ್ಯದೊಳಗಡೆ ಏನು ನಡೆಯುತ್ತಿದೆ ಎನ್ನುವುದನ್ನ ಇಣುಕಿ ನೋಡಲು ಶಕ್ತರಾಗಿದ್ದಿದ್ದರೆ! ನಿಜಾಂಶ ಏನೆಂದರೆ, ಅವನ ಪ್ರಪಂಚ ಜ್ಞಾನ ಮತ್ತು ಗಮನಾರ್ಹವಾದ ನೈಜ ಸಾಮರ್ಥ್ಯಗಳ ಹೊರತಾಗಿಯೂ, ಅವನು ಯಾವಾಗಲೂ ಯಾವುದೂ ತನ್ನ ಸ್ವಂತದ್ದಲ್ಲದೇ ಇದ್ದ ಮತ್ತು ಬೇರೆಯವರ ಕಲ್ಪನೆಗಳನ್ನ ಸಾಕಾರಗೊಳಿಸುತ್ತಿದ್ದೇನೆ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಿದ್ದ. ಮತ್ತು ಅವನ ಅದೃಷ್ಟವು ಅವನನ್ನೆಂದೂ ಮೋಸಗೊಳಿಸಿರಲಿಲ್ಲ; ಅವನು ಅತೀವವಾಗಿ ಮೋಹಿಸುತ್ತಿದ್ದ ಇಸ್ಪೀಟಿನ ಆಟಗಳಲ್ಲಿಯೂ ಕೂಡ; ಮತ್ತು ಅವನ ಈ ದೌರ್ಬಲ್ಯವನ್ನ ಅವನೆಂದೂ ಮುಚ್ಚಿಡಲು ಪ್ರಯತ್ನಿಸಿರಲಿಲ್ಲ. ಅವನ ಅತ್ಯಂತ ಹೆಚ್ಚು ಹಣವನ್ನ ಈ ಆಟದಲ್ಲಿ ಪಣಕ್ಕಿಡುತ್ತಿದ್ದ, ಮತ್ತು ಒಟ್ಟಾರೆ, ವಿವಿಧ ರೀತಿಯ ಸಮಾಜಗಳಲ್ಲಿನ ಒಡನಾಟವನ್ನ ಏಕಕಾಲದಲ್ಲಿ ಹೊಂದಿದ್ದ.

ಅವನ ವಯಸ್ಸಿನ ಬಗ್ಗೆ ಹೇಳಬೇಕೆಂದರೆ ಈ ವಯಸ್ಸಿನಲ್ಲೇ ಜನರಲ್ ಎಪಾಂಚಿನ್ ಜೀವನದ ಉತ್ತುಂಗ ಮಟ್ಟವನ್ನ ತಲುಪಿದ್ದು; ಅಂದರೆ ಸುಮಾರು ಐವತ್ತೈದು ವರ್ಷ ಅವನ ವಯಸ್ಸು; ಮನುಷ್ಯನ ಅಸ್ತಿತ್ವವು ಅರಳುವಂತಹ ಕಾಲ; ಜೀವನದಲ್ಲಿನ ನಿಜವಾದ ಆನಂದವನ್ನ ಪಡೆಯುವಂತಹ ಕಾಲ. ಅವನ ಆರೋಗ್ಯಕರವಾದ ದೇಹದ ಹೊರನೋಟ, ಅವನ ಒಳ್ಳೆಯ ಮೈಬಣ್ಣ, ಅವನ ಧ್ವನಿ, ಸ್ವಲ್ಪ ಬಣ್ಣ ಕಳೆದುಕೊಂಡ ದಂತಪಂಕ್ತಿ, ದಷ್ಟಪುಷ್ಟವಾದ ದೇಹ, ವ್ಯವಹಾರದ ವೇಳೆಯಲ್ಲಿ ಮಗ್ನತೆಯನ್ನ ಬಿಂಬಿಸುವ ತಲ್ಲೀನತೆ, ಮತ್ತು ಸಂಜೆಯ ವೇಳೆ ಇಸ್ಪೀಟ್ ಆಡುವ ವೇಳೆಯಲ್ಲಿ ಆನಂದದಿಂದ ಕೂಡಿದ ಹಾಸ್ಯಮಯ ಸ್ವಭಾವ, ಇವೆಲ್ಲವೂ ಅವನ ಜೀವನದಲ್ಲಿನ ಯಶಸ್ಸಿಗೆ ಕಾರಣ ಏನೆಂಬುದಕ್ಕೆ ಸಾಕ್ಷಿಗಳಾಗಿ ನಿಂತು, ಅವೆಲ್ಲವೂ ಒಟ್ಟಿಗೆ ತಮ್ಮ ಯಜಮಾನನ ಹಾಸಿಗೆಯನ್ನ ಹೂವಿನ ಹಾಸಾನ್ನಾಗಿಸಿದ್ದವು. ಜನರಲ್ ಒಂದು ಪ್ರವರ್ಧಮಾನಕ್ಕೆ ಬರುತ್ತಿದ್ದ ಕುಟುಂಬದ ಪ್ರಭು, ಮತ್ತು ಆ ಕುಟುಂಬದಲ್ಲಿ ಒಳಗೊಂಡಿರುವ ಸದಸ್ಯರುಗಳೆಂದರೆ ಅವನ ಹೆಂಡತಿ ಮತ್ತು ಮೂರು ಜನ ಬೆಳೆದು ನಿಂತ ಹೆಣ್ಣುಮಕ್ಕಳು. ಅವನು ಚಿಕ್ಕವಯಸ್ಸಿನಲ್ಲಿಯೇ ಮದುವೆಯಾದ; ಅಂದರೆ ಅವನು ಇನ್ನೂ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದಾಗಲೇ. ಅವನ ಹೆಂಡತಿ ಅವನಷ್ಟೇ ವಯಸ್ಸಿನ ಹುಡುಗಿಯಾಗಿದ್ದಳು, ಮತ್ತು ಅವಳ ಸೌಂದರ್ಯ ಮತ್ತು ವಿದ್ಯೆಯಲ್ಲಿ ಎದ್ದುಕಾಣುವಂತೇನೂ ಇರಲಿಲ್ಲ. ಅವಳು ವರದಕ್ಷಿಣೆಯಾಗಿ ತಂದ ಆಸ್ತಿ ಎಂದರೆ ಐವತ್ತು ಎಕರೆ ಜಮೀನು. ಮತ್ತು ಆ ಸಣ್ಣ ಆಸ್ತಿಯೇ ಅವನ ಮುಂದಿನ ಅಗಾಧವಾದ ಸಿರಿತನಕ್ಕೆ ನಾಂದಿಯಾಗಿ ಮಾರ್ಪಟ್ಟಿತು. ಜನರಲ್ ತಾನು ಬೇಗನೆ ಮದುವೆಯಾಗಿದ್ದುದರ ಬಗ್ಗೆ ಎಂದೂ ವಿಷಾದ ವ್ಯಕ್ತಪಡಿಸಿರಲಿಲ್ಲ, ಅಥವ ಅದನ್ನು ಯೌವ್ವನದಲ್ಲಿನ ಅವಿವೇಕದ ನಿರ್ಧಾರ ಎಂದು ಕೂಡ ಪರಿಗಣಿಸಿರಲಿಲ್ಲ; ಆದದ್ದರಿಂದಲೇ ಅವನು ತನ್ನ ಹೆಂಡತಿಯನ್ನು ಗೌರವಿಸುತ್ತಿದ್ದ ಮತ್ತು ಅವಳ ಬಗ್ಗೆ ಭಯಪಡುತ್ತಿದ್ದ, ಅದಲ್ಲದೇ ಅವಳನ್ನು ಪ್ರೀತಿಸುವ ಪ್ರಕ್ರಿಯೆಯ ಹತ್ತಿರಹತ್ತಿರದ ಹಂತಕ್ಕೆ ತಲುಪಿದ್ದ. ಜನರಲ್‌ನ ಹೆಂಡತಿ ಮ್ಯೂಶ್ಕಿನ್ ರಾಜಪ್ರಮುಖ ವಂಶದಿಂದ ಬಂದವಳು; ಅದು ಪ್ರತಿಭಾವಂತದ್ದಲ್ಲದಿದ್ದರೂ, ಎಲ್ಲಾ ಸಂದರ್ಭಗಳಿಗೂ ಅನ್ವಯಿಸುವ ನಿರ್ಣಾಯಕವಾದಂತಹ ಪ್ರಾಚೀನವಾದ ಕುಟುಂಬ; ಮತ್ತು ಅವಳು ತನ್ನ ವಂಶಾವಳಿಯ ಬಗ್ಗೆ ಅತಿಯಾಗಿ ಹೆಮ್ಮೆ ಪಡುತ್ತಿದ್ದಳು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

ಕೆಲವು ಸಂದರ್ಭಗಳನ್ನ ಹೊರತುಪಡಿಸಿ ಈ ಯೋಗ್ಯ ದಂಪತಿಗಳು ಅವರ ದೀರ್ಘವಾದ ಸಂಯೋಗವನ್ನು ಅತ್ಯಂತ ಸಂತೋಷದಿಂದ ಕಳೆದಿದ್ದರು. ಇನ್ನೂ ಚಿಕ್ಕವಯಸ್ಸಿನವಳಾಗಿದ್ದ ಅವನ ಹೆಂಡತಿ ಐಶ್ವರ್ಯವಂತ ಮತ್ತು ಮೇಲ್ವರ್ಗದ ಸ್ನೇಹಬಳಗವನ್ನ ಪಡೆದಿದ್ದಳು; ಭಾಗಶಃ ಅದು ಸಾಧ್ಯವಾದದ್ದು ತನ್ನ ವಂಶಾವಳಿಯ ಶ್ರೇಷ್ಟತೆಯ ಕಾರಣದಿಂದ ಮತ್ತು ಭಾಗಶಃ ಅವಳದೇ ಆದ ಪರಿಶ್ರಮದಿಂದ; ಮತ್ತು ಕಾಲಕ್ರಮಾನುಸಾರ ಅವರ ಐಶ್ವರ್ಯ ಮತ್ತು ಸೈನ್ಯದಲ್ಲಿ ಅವಳ ಗಂಡನ ಶ್ರೇಣಿ ಎತ್ತರೆತ್ತರ ಏರುತ್ತಿದ್ದಂತೆ, ಅವಳು ಉನ್ನತ ವರ್ಗದ ವಲಯಗಳಲ್ಲಿ ತನ್ನ ಸ್ಥಾನವನ್ನ ತನ್ನ ಹಕ್ಕು ಎನ್ನುವ ರೀತಿಯಲ್ಲಿ ಸ್ಥಾಪಿಸಿಕೊಂಡಳು.

ಕಳೆದ ಮೂರುವರ್ಷಗಳ ಸಮಯದಲ್ಲಿ ಜನರಲ್‌ನ ಮೂರು ಜನ ಹೆಣ್ಣುಮಕ್ಕಳು – ಅಲೆಕ್ಸಾಂಡ್ರ, ಅಡಿಲೈಡ, ಮತ್ತು ಅಗ್ಲಾಯ, ಬೆಳೆದು ನಿಂತು ಪರಿಪಕ್ವವಾಗಿದ್ದರು. ಖಂಡಿತವಾಗಿ ಅವರುಗಳು ಎಪಾಂಚಿನ್‌ಗಳು ಮಾತ್ರ, ಆದರೆ ಅವರ ತಾಯಿಯ ಕಡೆಯ ಕುಟುಂಬವೂ ಕೂಡ ಗೌರವಾನ್ವಿತವಾದ ಮತ್ತು ರಾಜಪ್ರಭುತ್ವದ ಕುಟುಂಬವರಾಗಿತ್ತು; ಅವರು ಗಣನೀಯವಾದ ಸಂಪತ್ತನ್ನು ನಿರೀಕ್ಷಿಸಬಹುದಾಗಿತ್ತು; ಮತ್ತು ಅವರುಗಳ ತಂದೆ ಕೂಡ, ದೇಶದ ಸೈನ್ಯದಲ್ಲಿ ಉನ್ನತ ಪದವಿಯನ್ನ ಪಡೆಯುವ ಭರವಸೆಯನ್ನ ಹೊಂದಿದ್ದರು, ಮತ್ತು ಇಲ್ಲಿಯವರೆವಿಗೂ ಎಲ್ಲವೂ ಕೂಡ ತೃಪ್ತಿಕರವಾಗಿಯೇ ನಡೆದು ಬಂದಿತ್ತು. ಎಲ್ಲಾ ಮೂವರೂ ಹುಡುಗಿಯರೂ ಯಾವ ಅನುಮಾನವೂ ಇಲ್ಲದೇ ಮುದ್ದಾಗಿದ್ದರು; ಅವರಲ್ಲಿ ದೊಡ್ದವಳಾದ ಅಲೆಕ್ಸಾಂಡ್ರ ಕೂಡ. ಈಗ ಅವಳು ಬರೀ ಇಪ್ಪತ್ತೈದು ವರ್ಷ ವಯಸ್ಸಿನ ಯುವತಿ. ಮಧ್ಯದ ಹುಡುಗಿಗೆ ಈಗ ಇಪ್ಪತ್ತ ಮೂರು ವರ್ಷ ವಯಸ್ಸು, ಮತ್ತು ಎಲ್ಲರಿಗಿಂತಲೂ ಚಿಕ್ಕವಳಿಗೆ ಇಪ್ಪತ್ತು ವರ್ಷ ವಯಸ್ಸು. ಈ ಅತ್ಯಂತ ಚಿಕ್ಕವಳಾದ ಹುಡುಗಿ ಪರಿಪೂರ್ಣವಾದ ಸುರ ಸುಂದರಿ, ಮತ್ತು ಸಮಾಜದಲ್ಲಿ ಸಾಕಷ್ಟು ಎಲ್ಲರ ಗಮನವನ್ನೂ ಸೆಳೆದಿದ್ದಳು. ಇಷ್ಟೇ ಅಂತಲ್ಲ, ಮೂರು ಜನರಲ್ಲಿನ ಪ್ರತಿಯೊಬ್ಬರೂ ಕೂಡ ಚತುರೆಯರು, ವಿದ್ಯಾವಂತರು ಮತ್ತು ಸಾಕಷ್ಟು ಯಶಸ್ಸನ್ನ ಗಳಿಸಿದ್ದರು.

ಎಲ್ಲರಿಗೂ ತಿಳಿದಂತಹ ವಿಷಯವೇನೆಂದರೆ ಮೂರೂ ಹುಡುಗಿಯರು ಪರಸ್ಪರವಾಗಿ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು ಮತ್ತು ಎಲ್ಲಾ ರೀತಿಯಲ್ಲಿಯೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಿದ್ದರು; ಎಲ್ಲರೂ ಮಾತನಾಡಿಕೊಳ್ಳುತ್ತಿದ್ದ ವಿಷ್ಲಯವೇನೆಂದರೆ, ಇಬ್ಬರೂ ದೊಡ್ಡ ಹುಡುಗಿಯರು ಚಿಕ್ಕವಳಿಗೋಸ್ಕರ ಅಂದರೆ ಕುಟುಂಬದಲ್ಲಿನ ಎಲ್ಲರಿಗೂ ಅಚ್ಚುಮೆಚ್ಚಿನವಳಾದ ಅಗ್ಲಾಯಳಿಗೋಸ್ಕರ ಅನೇಕ ರೀತಿಯಲ್ಲಿ ತ್ಯಾಗಮಾಡಲೂ ಸಿದ್ಧರಿರುತ್ತಾರೆ ಎಂದು. ಸಮಾಜದಲ್ಲಿನ ವಲಯಗಳಲ್ಲಿ ಅವರುಗಳು ತೋರಿಸಿಕೊಳ್ಳುವುದಕ್ಕೆ ಅಥವಾ ಅನಗತ್ಯವಾಗಿ ಮುನ್ನುಗ್ಗುವುದನ್ನ ಇಷ್ಟಪಡುತ್ತಿರಲಿಲ್ಲ; ತಟಸ್ಥ ಮನೋಭಾವದಿಂದ ಇರುತ್ತಿದ್ದರು. ಖಂಡಿತವಾಗಿಯೂ ಯಾರಿಗೂ ಕೂಡ ಅವರನ್ನು ಅಹಂಕಾರಿಗಳು ಅಥವ ಸೊಕ್ಕಿನಿಂದ ಕೂಡಿದವರು ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ, ಮತ್ತು ಎಲ್ಲರಿಗೂ ತಿಳಿದಿದ್ದ ಸಂಗತಿ ಏನೆಂದರೆ ಅವರು ತಮ್ಮ ಬಗ್ಗೆ ಹೆಮ್ಮೆಯಿಂದ ಇರುತ್ತಿದ್ದರು ಮತ್ತು ತಮ್ಮ ಕಿಮ್ಮತ್ತೆಷ್ಟು ಅನ್ನುವುದನ್ನೂ ಅರ್ಥಮಾಡಿಕೊಂಡಿದ್ದರು. ದೊಡ್ಡವಳಿಗೆ ಸಂಗೀತದ ಬಗ್ಗೆ ಆಸಕ್ತಿ ಇತ್ತು ಮತ್ತು ಎರಡನೆಯವಳು ಚಿತ್ರಕಲೆಯಲ್ಲಿ ನಿಪುಣೆ ಮತ್ತು ಅವಳು ತನ್ನ ಕೌಶಲ್ಯವನ್ನ ಬಹಳ ಕಾಲದವರೆಗೂ ಹೊರಗೆಡವಿರಲಿಲ್ಲ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಜಗತ್ತು ಈ ಹುಡುಗಿಯರ ಬಗ್ಗೆ ಒಳ್ಳೆಯ ಮಾತುಗಳನ್ನ ಆಡುತ್ತಿತ್ತು; ಆದರೆ ಅವರಿಗೆ ವೈರಿಗಳು ಇರಲಿಲ್ಲವೆಂದಲ್ಲ, ಒಮ್ಮೊಮ್ಮೆ ಜನ ಅವರು ಓದಿದ್ದ ಪುಸ್ತಕಗಳ ಸಂಖ್ಯೆಯ ಬಗ್ಗೆ ಭಯಾನಕವಾದ ಮಾತುಗಳನ್ನ ಆಡುತ್ತಿದ್ದರು.

ಅವರುಗಳು ಮದುವೆಯ ಬಗ್ಗೆ ಯಾವುದೇ ರೀತಿಯ ಆತುರದಿಂದ ಇರಲಿಲ್ಲ. ಅವರು ಒಳ್ಳೆಯ ಸಮಾಜವನ್ನ ಇಷ್ಟ ಪಡುತ್ತಿದ್ದರು, ಆದರೆ ಅದರ ಬಗ್ಗೆ ಅನಪೇಕ್ಷಿತವಾದ ಉತ್ಸುಕತೆಯನ್ನ ತೋರಿಸುತ್ತಿರಲಿಲ್ಲ. ಇದೆಲ್ಲವೂ ಬಹಳವಾಗಿ ಗಮನಾರ್ಹವಾದದ್ದಾಗಿತ್ತು, ಕಾರಣ ಎಲ್ಲರೂ ಆ ಹುಡುಗಿಯರ ಪೋಷಕರ ಗುರಿ ಮತ್ತು ಆಕಾಂಕ್ಷೆಗಳನ್ನ ಅರಿತಿದ್ದರು.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...