Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

- Advertisement -
- Advertisement -

ಪ್ರಿನ್ಸ್ ಮಾತನಾಡುವುದನ್ನ ನಿಲ್ಲಿಸಿದಾಗ ಎಲ್ಲರೂ ಅವನ ಕಡೆಗೆ ಉಲ್ಲಾಸದಿಂದ ಎವೆಯಿಕ್ಕದೇ ನೋಡುತ್ತಿದ್ದರು. ಅಗ್ಲಾಯ ಕೂಡ; ಎಲ್ಲರಿಗಿಂತ ಹೆಚ್ಚು ಸಂತೋಷದಿಂದಿರುವಂತೆ ಕಂಡವಳು ಅವರ ತಾಯಿ ಲಿಜಬೆಥ ಪ್ರೊಕೊಫಿಯೆವ್ನ.

“ಚೆನ್ನಾಗಿದೆ!” ಅವಳು ಕೂಗಿ ಹೇಳಿದಳು, “’ಅವನೀಗ ತನ್ನೆಲ್ಲಾ ಕೌಶಲ್ಯವನ್ನು ಪ್ರದರ್ಶಿಸುವಂತೆ’ ನಾವು ಮಾಡಿದ್ದೇವೆ, ಪ್ರತೀಕಾರದಿಂದ! ನನ್ನ ಪ್ರೀತಿಯ ಮಕ್ಕಳೇ, ಈ ಯುವಕನನ್ನು ಒಬ್ಬ ಬಡವ ಮತ್ತು ಆಶ್ರಯಕ್ಕಾಗಿ ಬಂದ ಕೆಲಸಕ್ಕೆ ಬಾರದವನು ಮತ್ತು ಅವನನ್ನು ಪೋಷಿಸಬೇಕು ಎಂದು ನೀವೆಲ್ಲಾ ಆತನ ಬಗ್ಗೆ ಕರುಣೆ ತೋರಿಸಲು ಕಲ್ಪಿಸಿಕೊಳ್ಳುತ್ತಿದ್ದಿರಿ ಎಂದು ನನಗನ್ನಿಸುತ್ತಿದೆ. ನಾವೆಲ್ಲರೂ ಎಂತಹ ಮೂರ್ಖರುಗಳಾದೆವು, ಮತ್ತು ನಿಮ್ಮ ತಂದೆ ಎಂಥಹ ವಿಶೇಷವಾದ ದೊಡ್ಡ ಮೂರ್ಖ! ಸರಿಯಾಗಿ ಮಾಡಿದೆ ಪ್ರಿನ್ಸ್! ಜನರಲ್ ನಿಜವಾಗಲೂ ಪರೀಕ್ಷೆಗೆ ಒಳಪಡಿಸಿ ನಿನ್ನ ಬಗ್ಗೆ ಪರಾಮರ್ಶಿಸು ಎಂದು ಹೇಳಿದ್ದ. ನೀನು ನನ್ನ ಮುಖ ಓದಿ ನನ್ನ ಬಗ್ಗೆ ಹೇಳಿದ್ದೆಲ್ಲವೂ ಅಕ್ಷರಶಃ ನಿಜ. ನಾನು ಮಗುವಿನ ರೀತಿಯೇ, ಅದು ನನಗೆ ಗೊತ್ತು. ನೀನು ಹೇಳುವುದಕ್ಕಿಂತ ಬಹಳ ಮೊದಲೇ ಅದು ನನಗೆ ಅರಿವಾಗಿತ್ತು; ನನ್ನ ಚಿಂತನೆಗಳನ್ನೇ ನೀನು ವ್ಯಕ್ತಪಡಿಸಿದ್ದೀಯ. ನಿನ್ನ ಸ್ವಭಾವ ಮತ್ತು ನನ್ನ ಸ್ವಭಾವ ಬಹಳಷ್ಟು ಒಂದೇ ಇದೆ ಎಂದು ನನಗನ್ನಿಸುತ್ತದೆ ಮತ್ತು ಅದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನಾವುಗಳು ನೀರಿನ ಎರಡು ಹನಿಗಳಂತೆ, ನೀನೊಬ್ಬ ಗಂಡಸು ಮತ್ತು ನಾನೊಬ್ಬಳು ಹೆಂಗಸು ಅನ್ನುವುದನ್ನು ಬಿಟ್ಟರೆ, ಮತ್ತು ನಾನು ಸ್ವಿಟ್ಜರ್ಲೆಂಡಿಗೆ ಹೋಗಿಲ್ಲ, ನೀನು ಹೋಗಿದ್ದೀಯ ಮತ್ತು ನಮ್ಮಿಬ್ಬರಲ್ಲಿನ ವ್ಯತ್ಯಾಸ ಅಷ್ಟೇ.”

“ಆತುರ ಪಡಬೇಡ ಅಮ್ಮ, ಪ್ರಿನ್ಸ್ ಹೇಳುತ್ತಿರುವುದು ಅವನ ಸರಳತೆಯ ಹಿಂದೆ ಒಂದು ಉದ್ದೇಶ ಇದೆ ಎಂದು,” ಅಗ್ಲಾಯ ಹೇಳಿದಳು.

“ಹೌದು, ಹೌದು, ಅವನಿಗೆ ಅದು ಇದೆ,” ಮಿಕ್ಕವರೆಲ್ಲರೂ ನಗುತ್ತಾ ಹೇಳಿದರು.

“ಓ ಪುನಃ ಅವನನ್ನು ಪರಿಹಾಸ್ಯ ಮಾಡಲು ಶುರುಮಾಡಬೇಡಿ,” ತಾಯಿ ಹೇಳಿದಳು. “ನಿಮ್ಮೆಲ್ಲರಲ್ಲೂ ಒಟ್ಟಿಗೇ ಇರುವ ಬುದ್ಧಿಶಕ್ತಿಯು ಅವನೊಬ್ಬನಲ್ಲೇ ಇದೆ. ಮುಂದೆ ನೋಡೋಣ. ನೀನು ಅಗ್ಲಾಯಳ ಬಗ್ಗೆ ಮಾತ್ರ ಏನನ್ನೂ ಹೇಳಲಿಲ್ಲ, ಪ್ರಿನ್ಸ್. ಅಗ್ಲಾಯ ಮತ್ತು ನಾನು, ಇಬ್ಬರೂ ನೀನು ಹೇಳುವುದನ್ನ ಕೇಳಲು ಕಾತುರರಾಗಿದ್ದೇವೆ.”

“ಸದ್ಯಕ್ಕೆ ನನಗೆ ಏನನ್ನೂ ಹೇಳಲಾಗುತ್ತಿಲ್ಲ. ನಂತರ ನಿಮಗೆ ಏನಾದರೂ ಹೇಳುತ್ತೇನೆ.”

“ಯಾಕೆ, ಅವಳ ಮುಖ ಸಾಕಷ್ಟು ಸ್ಪಷ್ಟವಾಗಿದೆ, ಹೌದೊ ಅಲ್ಲವೋ?”

“ಖಂಡಿತ ಹೌದು, ನೀನು ಬಹಳ ಸುಂದರಿ ಅಗ್ಲಾಯ ಇವಾನೊವ್ನ, ಎಷ್ಟು ಸುಂದರಿ ಎಂದರೆ ಯಾರಿಗೇ ಆದರೂ ನಿನ್ನ ಕಡೆ ನೋಡಲೂ ಹೆದರಿಕೆಯಾಗುತ್ತದೆ.”

“ಅಷ್ಟೇನ? ಅವಳ ಗುಣಗಳ ಬಗ್ಗೆ ಏನು ಹೇಳುವುದಿಲ್ಲವೇ?” ಮೇಡಮ್ ಎಪಾಂಚಿನ್ ಒತ್ತಾಯಿಸಿದಳು.

“ಆ ರೀತಿಯ ಸೌಂದರ್ಯದಿಂದ ಕೂಡಿದ ಮುಖದ ಬಗ್ಗೆ ತಕ್ಷಣ ತೀರ್ಮಾನಿಸುವುದು ಕಷ್ಟಕರ. ನನ್ನ ಅಭಿಪ್ರಾಯವನ್ನಿನ್ನೂ ನಾನು ಕಲ್ಪಿಸಿಕೊಂಡಿಲ್ಲ. ಸೌಂದರ್ಯ ಒಂದು ಒಗಟಿನಂತೆಯೇ.”

“ಅದರ ಅರ್ಥವೆಂದರೆ ಅಗ್ಲಾಯಳ ಬಗ್ಗೆಗಿನ ಒಂದು ಒಗಟನ್ನು ನೀನು ಬಿಡಿಸಲು ಹೊರಟಿದ್ದೀಯ ಎಂದು!” ಅಡಲೈಡ ಹೇಳಿದಳು. “ಅದನ್ನ ಊಹಿಸು ಅಗ್ಲಾಯ! ಆದರೆ ಅವಳು ಬಹಳ ಸುಂದರಿ, ಹೌದಲ್ಲವೊ ಪ್ರಿನ್ಸ್?”

“ಅತ್ಯಂತ ಅದ್ಭುತವಾಗಿ ಅದು ಹೌದು,” ಅಗ್ಲಾಯ ಕಡೆಗೆ ಮೆಚ್ಚುಗೆಯಿಂದ ನೋಡುತ್ತಾ ಭಾವುಕತೆಯಿಂದ ಪ್ರಿನ್ಸ್ ಹೇಳಿದ. “ಹತ್ತಿರಹತ್ತಿರ ನಸ್ಟಾಸಿಯ ಫಿಲಿಪೊವ್ನಳಷ್ಟೇ ಸುಂದರಿಯಾಗಿದ್ದಾಳೆ. ಆದರೆ ಇವಳ ಸೌಂದರ್ಯವು ಸಾಕಷ್ಟು ಬೇರೇ ಬಗೆಯದ್ದು.”

ಎಲ್ಲರೂ ಆಶ್ಚರ್ಯಚಕಿತರಾಗಿ ಪರಸ್ಪರ ತಮ್ಮ ನೋಟಗಳನ್ನ ಬದಲಾಯಿಸಿಕೊಂಡರು.

“ಸುಂದರವಾಗಿರುವುದು ಯಾರಷ್ಟು?” ಮೇಡಮ್ ಎಪಾಂಚಿನ್ ಕೇಳಿದಳು. “ನಸ್ಟಾಸಿಯ ಫಿಲಿಪೊವ್ನಳೊಷ್ಟು, ನೀನು ನಸ್ಟಾಸಿಯ  ಫಿಲಿಪೊವ್ನಳನ್ನು ಎಲ್ಲಿ ನೋಡಿದ್ದೀಯ? ಯಾವ ನಸ್ಟಾಸಿಯ ಫಿಲಿಪೊವ್ನ?”

“ಗವ್ರಿಲ ಅರ್ಡಲಿಯೊನೊವಿಚ್ ಅವಳ ಭಾವಚಿತ್ರವನ್ನ ಈಗ ತಾನೆ ಜನರಲ್‌ಗೆ ತೋರಿಸಿದ.”

“ಅದು ಹೇಗೆ? ಅವನು ಆ ಭಾವಚಿತ್ರವನ್ನ ನನ್ನ ಗಂಡನಿಗೋಸ್ಕರ ತೆಗೆದುಕೊಂಡು ಬಂದನೇ?”

“ಬರೀ ತೋರಿಸುವುದಕ್ಕೆ ಅಷ್ಟೆ. ನಸ್ಟಾಸಿಯಾ ಫಿಲಿಪೊವ್ನ ಗವ್ರಿಲ ಅರ್ಡಲಿಯೊವಿಚ್‌ಗೆ ಇವತ್ತು ಕೊಟ್ಟಳು, ಮತ್ತು ಅವನು ಅದನ್ನು ಜನರಲ್‌ಗೆ ತೋರಿಸಲು ತೆಗೆದುಕೊಂಡು ಬಂದ.”

“ನಾನೀಗ ಅದನ್ನ ನೋಡಲೇಬೇಕು!” ಮೇಡಮ್ ಎಪಾಂಚಿನ್ ಕೂಗಿಕೊಂಡಳು, “ಆ ಭಾವಚಿತ್ರ ಈಗ ಎಲ್ಲಿದೆ? ಅವಳು ಅವನಿಗೆ ಕೊಟ್ಟಿದ್ದರೆ ಅದು ಅವನ ಬಳಿ ಇರಬೇಕು; ಅವನಿನ್ನೂ ಓದುವ ಕೋಣೆಯಲ್ಲಿದ್ದಾನೆ. ಅವನು ಬುಧವಾರದಂದು ನಾಲ್ಕು ಗಂಟೆಗೆ ಮುಂಚೆ ಮನೆಗೆ ಹೋಗುವುದಿಲ್ಲ. ತಕ್ಷಣ ಗವ್ರಿಲ ಅರ್ಡಲಿಯೊನೊವಿಚ್‌ನನ್ನು ಬರಲು ಹೇಳಿ ಕಳುಹಿಸಿ. ಬೇಡಬೇಡ, ನನಗೇನೂ ಅವನನ್ನು ನೋಡುವ ಹಂಬಲ ಅಷ್ಟೊಂದಿಲ್ಲ. ಇಲ್ಲಿ ನೋಡು ಪ್ರಿನ್ಸ್, ಪ್ರೀತಿಯ ಪ್ರಿನ್ಸ್, ದಯಮಾಡಿ ಒಂದು ಕೆಲಸ ಮಾಡುತ್ತೀಯ? ಸುಮ್ಮನೇ ಓದುವ ಕೋಣೆಯೊಳಗೆ ಹೋಗಿ ಈ ಭಾವಚಿತ್ರವನ್ನ ತೆಗೆದುಕೊಂಡು ಬಾ! ನಾವು ಅದನ್ನ ನೋಡಬೇಕೆಂದು ಹೇಳು. ನನಗೋಸ್ಕರ ದಯವಿಟ್ಟು ಇದನ್ನು ಮಾಡುತ್ತೀಯ, ನನಗೋಸ್ಕರ?”

“ಅವನು ಒಳ್ಳೆಯ ಮನುಷ್ಯ, ಆದರೆ ಸ್ವಲ್ಪ ಜಾಸ್ತಿಯೇ ಸರಳತೆಯಿಂದ ಕೂಡಿದ ಮನುಷ್ಯ,” ಪ್ರಿನ್ಸ್ ಕೋಣೆಯಿಂದ ಆಚೆ ಹೋಗುತ್ತಿದ್ದಂತೆ ಅಡಲೈಡ ಪ್ರಿನ್ಸ್ ಬಗ್ಗೆ ಹೇಳಿದಳು.

“ಖಂಡಿತವಾಗಿಯೂ ಹೌದು,” ಅಲೆಕ್ಸಾಂಡ್ರ ಹೇಳಿದಳು; “ಕೆಲವು ಬಾರಿ ನಗೆಪಾಟಲಿಗೀಡಾಗುವಷ್ಟು.”

ಅವರಲ್ಲಿ ಯಾರೊಬ್ಬರೂ ಅವಳ ಸಂಪೂರ್ಣವಾದ ಅನಿಸಿಕೆಗಳಿಗೆ ತಮಗೇನನ್ನಿಸುತ್ತಿದೆಯೆಂಬುದನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-2)

“ಅವನು ನಮ್ಮಗಳ ಮುಖಗಳನ್ನು ನೋಡಿ ಹೇಳಿದ್ದೆಲ್ಲಾ ಕರಾರುವಾಕ್ಕಾಗಿತ್ತು.” ಅಗ್ಲಾಯ ಹೇಳಿದಳು. “ಅವನು ನಮ್ಮೆಲ್ಲರ ಬಗ್ಗೆ, ಜೊತೆಗೆ ಅಮ್ಮನನ್ನೂ ಸೇರಿದಂತೆ ಚೆನ್ನಾಗಿ ಮುಖಸ್ತುತಿ ಮಾಡಿದ.”

“ಅರ್ಥವಿಲ್ಲದ ಮಾತು!” ಮೇಡಮ್ ಎಪಾಂಚಿನ್ ಕೂಗಿ ಹೇಳದಳು. “ಅವನು ನನ್ನ ಮುಖಸ್ತುತಿಯನ್ನೇನೂ ಮಾಡಲಿಲ್ಲ. ಅವನು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನ, ನನ್ನನ್ನು ಅವನು ಹೊಗಳಿದ ಎಂದು ನಾನೇ ಅಂದುಕೊಂಡೆ. ನನ್ನ ಪ್ರಕಾರ ಅವನಿಗಿಂತಲೂ ನೀನು ಹೆಚ್ಚು ಮೂರ್ಖಳು. ಅವನೊಬ್ಬ ಖಂಡಿತವಾಗಿಯೂ ಸರಳ ವ್ಯಕ್ತಿ, ನನ್ನ ಹಾಗೆಯೇ ಅವನು ಹೆಚ್ಚು ತಿಳಿದುಕೊಂದಿದ್ದಾನೆ.”

ಓದುವ ಕೋಣೆಯೊಳಗಡೆಗೆ ಕಾಲಿಡುತ್ತಾ ಪ್ರಿನ್ಸ್, “ಭಾವಚಿತ್ರದ ಬಗ್ಗೆ ಮಾತನಾಡಿ ನಾನೆಂತಹ ಮೂರ್ಖತನದ ಕೆಲಸಮಾಡಿದೆ,” ಎಂದು ತನ್ನ ಹೃದಯದಲ್ಲಿ ಪಾಪಪ್ರಜ್ಞೆಯ ಭಾವನೆಯನ್ನ ಹೊತ್ತಿಕೊಂಡು ಆಲೋಚಿಸಿದ. “ಮತ್ತಾದರೂ ಬಹುಶಃ ನಾನು ಸರಿಯಾದದ್ದನ್ನೇ ಮಾಡಿದೆನೇನೊ.” ಅವನಲ್ಲಿ ಒಂದು ವಿಚಾರ ಇತ್ತು, ಇನ್ನೂ ರೂಪತಾಳದ ವಿಚಾರ, ಆದರೆ ಅದೊಂದು ವಿಚಿತ್ರವಾದ ವಿಚಾರ.

ಗವ್ರಿಲ ಅರ್ಡಲಿನೊವಿಚ್ ಇನ್ನೂ ಓದುವ ಕೋಣೆಯಲ್ಲಿಯೇ ಕುಳಿತಿದ್ದ, ಕಾಗದಗಳ ಮಧ್ಯೆ ಹುದುಗಿಕೊಂಡು. ಅವನ ಮುಖದಲ್ಲಿ ತಾನು ಕೆಲಸ ಮಾಡುತ್ತಿದ್ದ ಸಾರ್ವಜನಿಕ ಸಂಸ್ಥೆಯಿಂದ ತನ್ನ ಕೆಲಸಕ್ಕೆ ತಕ್ಕಷ್ಟು ಸಂಬಳವನ್ನ ತೆಗೆದುಕೊಳ್ಳುತ್ತಿಲ್ಲ ಅನ್ನುವ ಭಾವನೆ ಇತ್ತು.

ಆ ಭಾವಚಿತ್ರದ ಬಗ್ಗೆ ತಾನು ಹೆಂಗಸರ ಮುಂದೆ ಮಾತನಾಡಿದ್ದರಿಂದ ಈ ಸಂಗತಿ ಉದ್ಭವಿಸಿತು ಎಂದು ಪ್ರಿನ್ಸ್ ಹೇಳಿ ಆ ಭಾವಚಿತ್ರವನ್ನ ಕೊಡುವಂತೆ ಕೇಳಿದಾಗ ಗವ್ರಿಲ ಗೊಂದಲಗೊಂಡು ಕುಪಿತನಾದ.

“ಅದು ಹೇಗೆ ವಿವೇಚನೆಯಿಲ್ಲದೆ ನೀನು ಆ ಭಾವಚಿತ್ರದ ಬಗ್ಗೆ ಅವರಿಗೆ ಹೇಳಿದೆ, ನಿನಗೆ ಅದರ ವಿಷಯದ ಬಗ್ಗೆ ಇನ್ನೂ ಏನೂ ಕೂಡ ಗೊತ್ತಿಲದೇ ಇದ್ದಾಗ, ಮೂರ್ಖ!” ಅವನು ಹೇಳಿದ. ಕೊನೆಯ ಪದವನ್ನ ತನಗೆ ತಾನೇ ಕೋಪವನ್ನ ತಡೆದುಕೊಳ್ಳಲಾರದೇ ಹೇಳಿಕೊಂಡ.

“ನನ್ನನ್ನು ದಯವಿಟ್ಟು ಕ್ಷಮಿಸು; ಆ ಸಮಯದಲ್ಲಿ ನಾನು ಏನನ್ನೂ ಯೋಚಿಸಲೇ ಇಲ್ಲ. ನಾನು ಬರೀ ಹೇಳಿದ್ದು, ಅಗ್ಲಾಯ, ನಸ್ಟಾಸಿಯಾ ಫಿಲಿಪೊವ್ನಳಷ್ಟೇ ಸುಂದರವಾಗಿದ್ದಾಳೆ” ಎಂದು.

ಗಾನಿಯ ಇನ್ನೂ ಹೆಚ್ಚು ವಿವರಗಳನ್ನು ಹೇಳುವಂತೆ ಕೇಳಿದ; ಪ್ರಿನ್ಸ್ ಇನ್ನೊಂದು ಬಾರಿ ಅಲ್ಲಿ ನಡೆದ ಸಂಭಾಷಣೆಯನ್ನ ಪುರುಚ್ಚರಿಸಿದ. ಗಾನಿಯ ಅವನ ಕಡೆಗೆ ವ್ಯಂಗ್ಯದಿಂದ ಕೂಡಿದ ತಿರಸ್ಕಾರದಿಂದ ನೋಡಿದ,

“ನಸ್ಟಾಸಿಯ ಫಿಲಿಪೊವ್ನ” ಅವನು ಶುರುಮಾಡಿದ, ಮತ್ತು ಸ್ವಲ್ಪ ಹೊತ್ತು ಸುಮ್ಮನಿದ್ದ; ಅವನು ಸ್ಪಷ್ಟವಾಗಿ ಬಹಳ ತಳಮಳಗೊಂಡು ಸಿಟ್ಟಾಗಿದ್ದ. ಪ್ರಿನ್ಸ್ ಅವನಿಗೆ ಭಾವಚಿತ್ರದ ಬಗ್ಗೆ ನೆನಪಿಸಿದ.

“ನನ್ನ ಮಾತನ್ನ ಕೇಳು ಪ್ರಿನ್ಸ್,” ಒಂದು ಉಪಾಯ ಇದ್ದಕ್ಕಿದ್ದಂತೆ ಹೊಳೆದ ರೀತಿಯಲ್ಲಿ ಗಾನಿಯ ಹೇಳಿದ. “ನಾನೀಗ ನಿನ್ನನ್ನು ಒಂದು ಮಹತ್ತರವಾದ ಸಹಾಯ ಕೇಳಲು ಇಷ್ಟಪಡುತ್ತೇನೆ, ಅದನ್ನು ಹೇಗೆ ಕೇಳಬೇಕೆಂದು ನನಗೆ ತಿಳಿಯುತ್ತಿಲ್ಲ.”

ಅವನು ಪುನಃ ಸುಮ್ಮನಾದ, ಏನನ್ನೊ ಹೇಳಲು ಮನಸ್ಸಿನಲ್ಲಿಯೇ ನಿರ್ಧರಿಸಲು ಹವಣಿಸುತ್ತಿದ್ದ, ಮತ್ತು ಆ ವಿಷಯವನ್ನ ಮನಸ್ಸಿನಲ್ಲಿಯೇ ಮೆಲಕು ಹಾಕುತ್ತಿದ್ದ. ಪ್ರಿನ್ಸ್ ನಿಶ್ಯಬ್ದವಾಗಿ ಕಾಯುತ್ತಿದ್ದ. ಮತ್ತೊಮ್ಮೆ ಗಾನಿಯ ಅವನ ಮೇಲೆ ತನ್ನ ಪ್ರಶ್ನಿಸುವಂತಹ ದೃಷ್ಟಿಯನ್ನ ಕೇಂದ್ರೀಕರಿಸಿದ.

“ಪ್ರಿನ್ಸ್,” ಅವನು ಪ್ರಾರಂಬಿಸಿದ, “ಅವರೆಲ್ಲಾ ನನ್ನ ಬಗ್ಗೆ ಕೋಪಗೊಂಡಿದ್ದಾರೆ, ನಾನು ವಿವರಿಸಲಾಗದಂತಹ ಪರಿಸ್ಥಿತಿ ಉಂಟು ಮಾಡಿದ್ದಕ್ಕೋಸ್ಕರ, ಆದ್ದರಿಂದ ಅವರು ಕರೆಯದೆಯೇ ನನಗೆ ಒಳಗೆ ಹೋಗಲು ಆಗುವುದಿಲ್ಲ. ನಾನು ನಿರ್ದಿಷ್ಟವಾಗಿ ಅಗ್ಲಾಯಳ ಜೊತೆ ಮಾತನಾಡಬೇಕು ಮತ್ತು ಅವಳನ್ನು ನಾನು ನೋಡಲು ಆಗದೇ ಇರಬಹುದೆಂಬ ಕಾರಣ್ದದಿಂದ, ಅವಳಿಗಾಗಿ ಒಂದು ಸಂದೇಶವನ್ನ ಈ ಕಾಗದದಲ್ಲಿ ಬರೆದಿದ್ದೇನೆ.” (ಆಗ ಪ್ರಿನ್ಸ್ ಒಂದು ಸಣ್ಣ ಪೇಪರಿನಲ್ಲಿ ಬರೆದ ಅವನ ಕೈಲಿದ್ದ ಸಂದೇಶವನ್ನ ಗಮನಿಸಿದ), “ನನಗೀಗ ನನ್ನ ಸಂದೇಶವನ್ನ ಅವಳಿಗೆ ಹೇಗೆ ಮುಟ್ಟಿಸಬಹುದೆಂಬುದು ತಿಳಿಯದಾಗಿದೆ. ನೀನು ಬಹುಶಃ ಅದನ್ನ ತಕ್ಷಣ ಅವಳ ಕೈಗೆ ಕೊಡುವ ಸಾಹಸ ಮಾಡಬಹುದು ಅಂತ ನಿನಗನ್ನಿಸುವುದಿಲ್ಲವೇ, ಅದೂ ಅವಳಿಗೆ ಮಾತ್ರ, ಗಮನದಲ್ಲಿಟ್ಟುಕೊ, ನೀನು ಅವಳ ಕೈಗೆ ಕೊಟ್ಟೆ ಅನ್ನುವುದು ಯಾರಿಗೂ ತಿಳಿಯಬಾರದು. ಅದರಲ್ಲಿ ಯಾವುದೇ ರಹಸ್ಯವಿಲ್ಲ, ಆದರೂ, ಅದು, ನೀನೀ ಕೆಲಸವನ್ನ ಮಾಡುತ್ತೀಯ?”

“ನಾನು ನಿಜವಾಗಲೂ ಇದನ್ನ ಇಷ್ಟ ಪಡುವುದಿಲ್ಲ,” ಪ್ರಿನ್ಸ್ ಉತ್ತರಿಸಿದ.

“ಓ, ಅದರ ಅಗತ್ಯ ನನಗೆ ತುಂಬಾನೇ ಇದೆ,” ಗಾನಿಯ ಬೇಡಿಕೊಂಡು. “ನನ್ನನ್ನು ನಂಬು, ಅದು ಅಷ್ಟೊಂದು ಗಹನವಾದದ್ದಲ್ಲದಿದ್ದರೆ ನಾನು ನಿನ್ನನ್ನು ಕೇಳುತ್ತಲೇ ಇರಲಿಲ್ಲ; ಇನ್ನು ಹ್ಯಾಗೆ ಅವಳನ್ನ ನಾನು ಸಂಧಿಸಬಹುದು? ಅದು ಬಹಳ ಪ್ರಾಮುಖ್ಯತೆಯಿಂದ ಕೂಡಿದ್ದು, ಭಯಂಕರ ಮುಖ್ಯವಾದದ್ದು!”

ಅವನ ಸಂದೇಶವನ್ನ ಪ್ರಿನ್ಸ್ ತೆಗೆದುಕೊಂಡು ಹೋಗಲು ಒಪ್ಪದಿದ್ದರೆ ಏನು ಮಾಡುವುದು ಎಂದು ಗಾನಿಯಾ ಈಗ ಸ್ಪಷ್ಟವಾಗಿ ಎಚ್ಚೆತ್ತುಕೊಂಡಿದ್ದು, ಮತ್ತು ತನ್ನ ಮುಖವನ್ನ ಸಂಪೂರ್ಣವಾಗಿ ಬೇಡಿಕೊಳ್ಳುವವನ ರೀತಿ ಮಾಡಿದ.

“ಸರಿ, ಹಾಗಾದರೆ ನಾನದನ್ನು ತೆಗೆದುಕೊಂಡುಹೋಗುತ್ತೇನೆ.”

“ಆದರೆ ಅದನ್ನು ಯಾರೂ ನೋಡಬಾರದೆಂಬುದು ನಿನ್ನ ಗಮನದಲ್ಲಿರಲಿ.” ಗಾನಿಯ ಸಂತೋಷದಿಂದ ಹೇಳಿದ, “ನಾನು ನಿನ್ನನ್ನು ಸಂಪೂರ್ಣವಾಗಿ ನಂಬಿದ್ದೇನೆ.”

“ನಾನದನ್ನ ಯಾರಿಗೂ ತೋರಿಸುವುದಿಲ್ಲ.” ಪ್ರಿನ್ಸ್ ಹೇಳಿದ.

“ಈ ಕಾಗದವನ್ನ ಅಂಟಿಸಿಲ್ಲ,” ಗಾನಿಯ ಮುಂದುವರಿಯುತ್ತಾ ಹೇಳಿದ ಮತ್ತು ಸ್ವಲ್ಪ ಗೊಂದಲಗೊಂಡು ಸುಮ್ಮನಾದ.

“ಓ, ನಾನದನ್ನ ಓದುವುದಿಲ್ಲ,” ಪ್ರಿನ್ಸ್ ಸರಳತೆಯಿಂದಲೇ ಹೇಳಿದ,

ಅವನು ಆ ಭಾವಚಿತ್ರವನ್ನ ತೆಗೆದುಕೊಂಡು ರೂಮಿನಿಂದ ಆಚೆಗೆ ಹೋದ.

ಗಾನಿಯ ರೂಮಿನಲ್ಲಿ ಈಗ ಒಬ್ಬನೇ ಆದ, ತಲೆಯ ಮೇಲೆ ಕೈಹೊತ್ತು ಕೂತ.

“ಅವಳಿಂದ ಒಂದೇಒಂದು ಮಾತು ಬಂದರೆ ಸಾಕು”, ಅವನು ಹೇಳಿದ, “ಒಂದು ಮಾತು, ನಾನು ಸಂಪೂರ್ಣವಾಗಿ ಸ್ವತಂತ್ರನಾಗಬಲ್ಲೆ.”

ಅವನಿಗೆ ಆಗಲೇ ತಾನು ಮಾಡುತ್ತಿದ್ದ ಕೆಲಸದ ಮೇಲಿನ ಏಕಾಗ್ರತೆ ಹೊರಟುಹೋಯಿತು, ಕಾರಣ ಅವನ ತಳಮಳ ಮತ್ತು ಉದ್ರೇಕ ಸ್ಥಿತಿ; ಮೂಲೆಯಿಂದ ಮೂಲೆಗೆ ಕೋಣೆಯ ಮೇಲಕ್ಕೂ ಕೆಳಕ್ಕೂ ಅತ್ತಿಂದಿತ್ತ ಓಡಾಡಲು ಶುರುಮಾಡಿದ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...

ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ...

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು. ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ...

ಮಹಾರಾಷ್ಟ್ರ| ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲಿಗೆ ಬೆಂಬಲಿಸಿದ 5 ಜನ ಶಿಕ್ಷಕರ ಅಮಾನತು

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಂದ್ರವೊಂದರಲ್ಲಿ ನಡೆದ 12 ನೇ ತರಗತಿಯ ಹೆಚ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸಿಕ್ಕಿಬಿದ್ದ ಐದು ಶಿಕ್ಷಕರನ್ನು...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ. ಪ್ರಕರಣ ರದ್ದುಕೋರಿ...

‘ನಾವು ಎಐ ಯುಗದಲ್ಲಿದ್ದೇವೆ..’; ಸೋನಮ್ ವಾಂಗ್‌ಚುಕ್ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಅಸಮಾಧಾನ

ಲಡಾಖ್ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ವಿರುದ್ಧ ಸಲ್ಲಿಸಿದ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರವನ್ನು ಪ್ರಶ್ನಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಕಾಲದಲ್ಲಿ ಅನುವಾದ ನಿಖರವಾಗಿರಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ...