Homeಮುಖಪುಟಒಂದಿಷ್ಟು ಶಾಯರಿಗಳು

ಒಂದಿಷ್ಟು ಶಾಯರಿಗಳು

- Advertisement -
- Advertisement -

1.
ಬದುಕು ನಡೆಯುವುದು
ತನ್ನ ಕಾಲುಗಳ ಮೇಲೆ ಫರಾಜ್,

ಬೇರೆಯವರ ಸಹಾಯದಿಂದ ಸಾಗುವುದು
ಶವಯಾತ್ರೆ ಮಾತ್ರ.
– ಫರಾಜ್ ಅಹ್ಮದ್

2.
ಎಷ್ಟೊಂದು ಜನರಿಗೆ ಪ್ರೀತಿಸುವೆನೆಂದು
ಮಾತು ಕೊಟ್ಟಿದ್ದೀಯ ಫರಾಜ್?

ಪ್ರತಿದಿನ ಹೊಸಬರೊಬ್ಬರು
ನಿನ್ನ ವಿಳಾಸ ಕೇಳುತ್ತಿದ್ದಾರೆ.
– ಫರಾಜ್ ಅಹ್ಮದ್

3.
ಕೇವಲ ದ್ವೇಷವಷ್ಟೇ ಅಲ್ಲ
ಜಗತ್ತಿನ ದುಃಖಕ್ಕೆ ಕಾರಣ ಫರಾಜ್,

ಪ್ರೇಮವೂ ಸಮಾಧಾನಿಗಳಿಗೆ ಕೊಡುತ್ತದೆ
ಬಹಳ ಕಷ್ಟ.
– ಫರಾಜ್ ಅಹ್ಮದ್

4.
ಯಾರು ಯಾಕೆ ಅಳುತ್ತಾರೆ ಗೆಳೆಯ
ಬೇರೆ ಯಾರದೋ ಸಲುವಾಗಿ,

ಎಲ್ಲ ಅಳುತ್ತಿರುವುದು
ತಮ್ಮದೇ ಯಾವುದೋ ಮಾತಿನ ಕಾರಣವಾಗಿ.
– ಸಾಹಿರ್ ಲುಧಿಯಾನ್ವಿ

5.
ತಾನೇ ಸ್ವತಃ ಒಂದು
ಸಮಸ್ಯೆಯಾಗಿರುವಾಗ,

ಬೇರೆ ಯಾವ ಸಮಸ್ಯೆಗಳಿಗೆ ತಾನೇ
ಪರಿಹಾರವಾದೀತು ಯುದ್ಧ?
– ಸಾಹಿರ್ ಲುಧಿಯಾನ್ವಿ

6.
ಅಕಸ್ಮಾತ್ ಬದುಕಿನಲ್ಲಿ
ಮತ್ತೆ ಭೇಟಿಯಾದರೆ,

ವಿಚಾರಿಸುತ್ತೇನೆ ನನ್ನ ಹತಾಶೆಯ ಬಗ್ಗೆ
ನಿನ್ನ ವಿವಶತೆಯನ್ನ.
– ಸಾಹಿರ್ ಲುಧಿಯಾನ್ವಿ

7.
ಬಿರುಗಾಳಿಯ ದೋಣಿ
ಬದುಕಿಸಿತು ನನ್ನ,

ಮುಳುಗಿಸಿಬಿಡುತ್ತಿದ್ದರು ತೀರದ ಜನ
ನನ್ನ ಹಡಗನ್ನ.
– ಮಜ್ರೂಹ್ ಸುಲ್ತಾನ್‌ಪುರಿ

8.
ನಿನ್ನ ಹೊರತಾಗಿಯೂ ಇದ್ದವು
ಶರಣಾಗುವ ಜಾಗಗಳು, ಮರೆತುಹೋದೆ,

ಹೊರಬಿದ್ದ ಮೇಲೆ ನಿನ್ನ ಸುಂದರ ಸಂಜೆಯಿಂದ
ಎಲ್ಲ ದಾರಿಗಳ ನಾನು, ಮರೆತುಹೋದೆ.
– ಮಜ್ರೂಹ್ ಸುಲ್ತಾನ್‌ಪುರಿ

9.
ದೂರ ಕುಳಿತಿದ್ದೆ ಆದರೂ ಬಿತ್ತು
ನನ್ನ ಮೇಲೆ ಸಾಕಿಯ ಕಣ್ಣು,

ದಾಹ ನಿಜವಾಗಿದ್ದರೆ ಬಂದೇ ಬರುತ್ತದೆ
ಮಧುಪಾತ್ರೆಯೂ ಹುಡುಕಿಕೊಂಡು.
– ಮಜ್ರೂಹ್ ಸುಲ್ತಾನ್‌ಪುರಿ

10.
ನಾನು ಸತ್ತಮೇಲೆಯೂ
ತೆರೆದುಕೊಂಡೇ ಇರಲಿ ನನ್ನ ಕಣ್ಣು,

ನಿನಗಾಗಿ ಕಾಯುವ ಹವ್ಯಾಸ
ಬಿಟ್ಟುಹೋಗಿಲ್ಲ ನನ್ನ ಇನ್ನೂ.
– ಫೈಜ್ ಅಹ್ಮದ್ ಫೈಜ್

11.
ಲೆಕ್ಕ ಹಾಕುತ್ತಿದ್ದೆ ಜಗತ್ತು ಕರುಣಿಸಿರುವ
ನೋವುಗಳ ಮತ್ತೆ ಮತ್ತೆ,

ಯಾಕೋ ನೆನಪಾಗುತ್ತಿರುವೆ ನೀನು
ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ.
– ಫೈಜ್ ಅಹ್ಮದ್ ಫೈಜ್

12.
ಬಂದು ನೆಲೆಸಿದ ಮೇಲೆ ಹಿಂದೂ ಮುಸಲ್ಮಾನರು
ನಮ್ಮ ಓಣಿಯೊಳಗೆ,

ಮನುಷ್ಯರ ಮುಖಗಳನ್ನು ಕಾಣುವ ತಹತಹ
ತೀವ್ರವಾಯಿತು ಮನದೊಳಗೆ.
– ಕೈಫಿ ಅಝ್ಮಿ

13.
ಒಂದು ಹಿಂಜರಿಕೆ ಮಾತ್ರ
ಮನಸಿನ ಮಾತು ಹೇಳುವಾಗ ನನಗೆ

ನಿನ್ನ ಹೆಸರು ಬಂದೇ ಬರುವದು
ನನ್ನ ಈ ಕಥೆಯೊಳಗೆ.
– ಕೈಫಿ ಅಝ್ಮಿ

14.
ಏನಾಗಿದೆ ನಿನಗೆ, ಅಷ್ಟು ನಗುವಂಥದು
ಯಾವ ನೋವದು ನನ್ನಿಂದ ಬಚ್ಚಿಡುವಂಥದು.

ಕಣ್ಣಂಚಲ್ಲಿ ಹಸಿ, ತುಟಿ ಮೇಲೆ ನಗು
ಏನಾಗಿದೆ ನಿನಗೆ, ಏನೋ ಹಾಡುವಂಥದು.
– ಕೈಫಿ ಅಝ್ಮಿ

15.
ಒಂದಿಷ್ಟು ಸಮಯದಿಂದ
ನಿನ್ನ ನೆನಪಾಗುತ್ತಿಲ್ಲ ಎನ್ನುವುದು ನಿಜವಾದರೂ,

ನಿನ್ನ ಮರೆತುಬಿಟ್ಟಿರುವೆ ಎನ್ನುವುದು ಮಾತ್ರ
ಸಂಪೂರ್ಣ ಸುಳ್ಳು.
– ಫಿರಕ್ ಗೋರಕ್‌ಪುರಿ

16.
ಬಹಳ ಮೊದಲೇ ಆ ಹೆಜ್ಜೆಗಳ
ಸಂಕೋಚವನ್ನು ಗುರುತಿಸುತ್ತೇನೆ,

ಹೇ ಬದುಕು! ಬಹಳಷ್ಟು ದೂರದಿಂದಲೇ
ನಿನ್ನನ್ನು ಗುರುತಿಸುತ್ತೇನೆ.
– ಫಿರಕ್ ಗೋರಕ್‌ಪುರಿ

17.
ವೈರಿಯಲ್ಲೂ
ಸ್ವಾಭಿಮಾನದ ನಿರೀಕ್ಷೆ ನನಗೆ,

ತಲೆ ಯಾರದಾದರೇನು
ಕಾಲುಗಳ ಮೇಲೆ ಇಷ್ಟವಾಗುವುದಿಲ್ಲ ನನಗೆ.
– ಜಾವೇದ್ ಅಖ್ತರ್

18.
ಎಲ್ಲರಿಂದಲೂ ಖುಷಿ
ಒಂದು ಹೆಜ್ಜೆ ದೂರ ಇದೆ,

ಪ್ರತಿ ಮನೆಯಲ್ಲೂ ಕೋಣೆ
ಒಂದೇ ಒಂದು ಕಡಿಮೆ ಇದೆ.
– ಜಾವೇದ್ ಅಖ್ತರ್

19.
ಕದ್ದು ತರುತ್ತಿದ್ದೆವು ಕೂಡಲು
ನಾವಿಬ್ಬರೂ ಸಮಯವನ್ನ ಆಗ,

ಈಗ ಭೇಟಿಯಾಗುತ್ತೇವೆ
ಯಾವಾಗಲಾದರೂ ಸಮಯ ಸಿಕ್ಕಾಗ.
– ಜಾವೇದ್ ಅಖ್ತರ್

20.
ಬದುಕುವ ರೀತಿಗಳೇ ವಿಚಿತ್ರ
ಈ ಶಹರದಲ್ಲಿ,

ಮಾತುಗಳಲ್ಲೇನೋ ಭರ್ತಿ ತಮಾಶೆ
ನೋವಿನ ಗಾಯಗಳು ದನಿಯಲ್ಲಿ.
– ಜಾವೇದ್ ಅಖ್ತರ್

21.
ಹೋಗಿ ಹೇಳಿ ಯಾರಾದರೂ
ಜ್ವಾಲೆಗಳಿಗೆ, ಕಿಡಿಗಳಿಗೆ

ಪುರುಸೊತ್ತು ಮಾಡಿಕೊಂಡು,

ಅರಳಿನಿಂತಿವೆ ಹೂಗಳು
ಈ ಸಲ
ಪೂರ್ತಿ ತಯಾರಿ ಮಾಡಿಕೊಂಡು.
– ರಾಹತ್ ಇಂದೂರಿ

22.
ಪ್ರತಿರಾತ್ರಿ
ನಕ್ಷತ್ರಗಳಿಗೆ ತಮ್ಮ ಮೆರೆದಾಟದಲ್ಲಿ
ಅಡಚಣಿಯಾಗುತ್ತದೆ,

ಕತ್ತಲೆಯಾದೊಡನೆ
ತಲೆತಿರುಕ ಚಂದ್ರನ ಸವಾರಿ
ಮನೆಯಿಂದ ಹೊರಗೆ ಬೀಳುತ್ತದೆ.
– ರಾಹತ್ ಇಂದೂರಿ

23.
ನನ್ನ ಚಹರೆಯ ಬದಲಾಗುವ ಬಣ್ಣಗಳನ್ನು
ಜನ ಗಂಭೀರವಾಗಿ ಗಮನಿಸುತ್ತಾರೆ

ನಿನ್ನ ಹೆಸರ ಮುಂದೆ ಮಾಡಿ
ಜನ ನನ್ನ ತಮಾಶೆ ಮಾಡುತ್ತಾರೆ
– ರಾಹತ್ ಇಂದೂರಿ

24.
ಜನ ಮಾತಾಡಿಕೊಳ್ಳುವಂತೆ ನಿನಗೆ ಇನ್ನೂ
ನನ್ನ ಮೇಲಿನ ಮುನಿಸು ಕಡಿಮೆಯಾಗಿಲ್ಲ,

ಆದರೆ ನಿನ್ನ ಕಣ್ಣುಗಳು ಮಾತ್ರ ನನಗೆ
ಬೇರೆ ಏನೋ ಹೇಳುತ್ತಿವೆಯಲ್ಲ.
– ಜನ್ ನಿಸಾರ್ ಅಖ್ತರ್

25.
ನೂರಕ್ಕೆ ನೂರು ನಿಜ
ನನ್ನ ಕವಿತೆಗಳು ಇಡೀ ಜಗತ್ತಿಗಾಗಿ,

ಆದರೆ ಕೆಲವು ಸಾಲುಗಳು ಮಾತ್ರ
ಕೇವಲ ಅವಳಿಗಾಗಿ.
– ಜನ್ ನಿಸಾರ್ ಅಖ್ತರ್

26.
ಇವತ್ತು ಮಾತ್ರ
ನಿನ್ನ ಮುಟ್ಟಿ ಮಾತನಾಡಿಸಿದರೂ
ನೀನು ಸಿಗಲಿಲ್ಲ ನನಗೆ,

ಹಿಂದೊಮ್ಮೆ
ನಿನ್ನ ಭೇಟಿ ಮಾಡುವ ಆಲೋಚನೆಯೇ
ತಬ್ಬಿಬ್ಬು ಮಾಡುತ್ತಿತ್ತು ನನ್ನ !
– ಜನ್ ನಿಸಾರ್ ಅಖ್ತರ್

27.
ಗೊತ್ತಿರಲಿ ನಿಮಗೆ ಇಷ್ಟು
ಪ್ರೀತಿ ಅಷ್ಟು ಸುಲಭವಲ್ಲ

ಬೆಂಕಿಯ ನದಿ ಇದು
ಮುಳುಗಿ ಈಜದೆ ಬೇರೆ ದಾರಿ ಇಲ್ಲ .
– ಜಿಗರ್ ಮೊರಾದಾಬಾದಿ

28.
ಎಲ್ಲ ಕಡೆ ಮೆರೆಯುತ್ತಿವೆ
ಪ್ರೇಮದ ಸಂದೇಶಗಳಾಗಿ,

ನೋಡಿ ಹೇಗಿದೆ ನನಗಿಂತಲೂ
ನನ್ನ ಕಥೆಗಳ ಅದೃಷ್ಟವೇ
ಜಬರ್ದಸ್ತಾಗಿ.
– ಜಿಗರ್ ಮೊರಾದಾಬಾದಿ

29.
ನನ್ನ ಬದುಕೇನೋ ಕಳೆದು ಹೋಯಿತು
ನಿನ್ನ ವಿರಹದ ನೆರಳಲ್ಲಿ,

ನನ್ನ ಸಾವಿಗೂ ಒಂದು ಪ್ರಿಯವಾದ
ಕಾರಣ ಬೇಕಲ್ಲ.
-ಜಿಗರ್ ಮೊರಾದಾಬಾದಿ

 

ಇದನ್ನೂ ಓದಿ: ಗುಲ್ಜಾರ್ ಅವರ ಪದ್ಯಗಳು

 

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...