Homeಮುಖಪುಟಒಂದಿಷ್ಟು ಶಾಯರಿಗಳು

ಒಂದಿಷ್ಟು ಶಾಯರಿಗಳು

- Advertisement -
- Advertisement -

1.
ಬದುಕು ನಡೆಯುವುದು
ತನ್ನ ಕಾಲುಗಳ ಮೇಲೆ ಫರಾಜ್,

ಬೇರೆಯವರ ಸಹಾಯದಿಂದ ಸಾಗುವುದು
ಶವಯಾತ್ರೆ ಮಾತ್ರ.
– ಫರಾಜ್ ಅಹ್ಮದ್

2.
ಎಷ್ಟೊಂದು ಜನರಿಗೆ ಪ್ರೀತಿಸುವೆನೆಂದು
ಮಾತು ಕೊಟ್ಟಿದ್ದೀಯ ಫರಾಜ್?

ಪ್ರತಿದಿನ ಹೊಸಬರೊಬ್ಬರು
ನಿನ್ನ ವಿಳಾಸ ಕೇಳುತ್ತಿದ್ದಾರೆ.
– ಫರಾಜ್ ಅಹ್ಮದ್

3.
ಕೇವಲ ದ್ವೇಷವಷ್ಟೇ ಅಲ್ಲ
ಜಗತ್ತಿನ ದುಃಖಕ್ಕೆ ಕಾರಣ ಫರಾಜ್,

ಪ್ರೇಮವೂ ಸಮಾಧಾನಿಗಳಿಗೆ ಕೊಡುತ್ತದೆ
ಬಹಳ ಕಷ್ಟ.
– ಫರಾಜ್ ಅಹ್ಮದ್

4.
ಯಾರು ಯಾಕೆ ಅಳುತ್ತಾರೆ ಗೆಳೆಯ
ಬೇರೆ ಯಾರದೋ ಸಲುವಾಗಿ,

ಎಲ್ಲ ಅಳುತ್ತಿರುವುದು
ತಮ್ಮದೇ ಯಾವುದೋ ಮಾತಿನ ಕಾರಣವಾಗಿ.
– ಸಾಹಿರ್ ಲುಧಿಯಾನ್ವಿ

5.
ತಾನೇ ಸ್ವತಃ ಒಂದು
ಸಮಸ್ಯೆಯಾಗಿರುವಾಗ,

ಬೇರೆ ಯಾವ ಸಮಸ್ಯೆಗಳಿಗೆ ತಾನೇ
ಪರಿಹಾರವಾದೀತು ಯುದ್ಧ?
– ಸಾಹಿರ್ ಲುಧಿಯಾನ್ವಿ

6.
ಅಕಸ್ಮಾತ್ ಬದುಕಿನಲ್ಲಿ
ಮತ್ತೆ ಭೇಟಿಯಾದರೆ,

ವಿಚಾರಿಸುತ್ತೇನೆ ನನ್ನ ಹತಾಶೆಯ ಬಗ್ಗೆ
ನಿನ್ನ ವಿವಶತೆಯನ್ನ.
– ಸಾಹಿರ್ ಲುಧಿಯಾನ್ವಿ

7.
ಬಿರುಗಾಳಿಯ ದೋಣಿ
ಬದುಕಿಸಿತು ನನ್ನ,

ಮುಳುಗಿಸಿಬಿಡುತ್ತಿದ್ದರು ತೀರದ ಜನ
ನನ್ನ ಹಡಗನ್ನ.
– ಮಜ್ರೂಹ್ ಸುಲ್ತಾನ್‌ಪುರಿ

8.
ನಿನ್ನ ಹೊರತಾಗಿಯೂ ಇದ್ದವು
ಶರಣಾಗುವ ಜಾಗಗಳು, ಮರೆತುಹೋದೆ,

ಹೊರಬಿದ್ದ ಮೇಲೆ ನಿನ್ನ ಸುಂದರ ಸಂಜೆಯಿಂದ
ಎಲ್ಲ ದಾರಿಗಳ ನಾನು, ಮರೆತುಹೋದೆ.
– ಮಜ್ರೂಹ್ ಸುಲ್ತಾನ್‌ಪುರಿ

9.
ದೂರ ಕುಳಿತಿದ್ದೆ ಆದರೂ ಬಿತ್ತು
ನನ್ನ ಮೇಲೆ ಸಾಕಿಯ ಕಣ್ಣು,

ದಾಹ ನಿಜವಾಗಿದ್ದರೆ ಬಂದೇ ಬರುತ್ತದೆ
ಮಧುಪಾತ್ರೆಯೂ ಹುಡುಕಿಕೊಂಡು.
– ಮಜ್ರೂಹ್ ಸುಲ್ತಾನ್‌ಪುರಿ

10.
ನಾನು ಸತ್ತಮೇಲೆಯೂ
ತೆರೆದುಕೊಂಡೇ ಇರಲಿ ನನ್ನ ಕಣ್ಣು,

ನಿನಗಾಗಿ ಕಾಯುವ ಹವ್ಯಾಸ
ಬಿಟ್ಟುಹೋಗಿಲ್ಲ ನನ್ನ ಇನ್ನೂ.
– ಫೈಜ್ ಅಹ್ಮದ್ ಫೈಜ್

11.
ಲೆಕ್ಕ ಹಾಕುತ್ತಿದ್ದೆ ಜಗತ್ತು ಕರುಣಿಸಿರುವ
ನೋವುಗಳ ಮತ್ತೆ ಮತ್ತೆ,

ಯಾಕೋ ನೆನಪಾಗುತ್ತಿರುವೆ ನೀನು
ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ.
– ಫೈಜ್ ಅಹ್ಮದ್ ಫೈಜ್

12.
ಬಂದು ನೆಲೆಸಿದ ಮೇಲೆ ಹಿಂದೂ ಮುಸಲ್ಮಾನರು
ನಮ್ಮ ಓಣಿಯೊಳಗೆ,

ಮನುಷ್ಯರ ಮುಖಗಳನ್ನು ಕಾಣುವ ತಹತಹ
ತೀವ್ರವಾಯಿತು ಮನದೊಳಗೆ.
– ಕೈಫಿ ಅಝ್ಮಿ

13.
ಒಂದು ಹಿಂಜರಿಕೆ ಮಾತ್ರ
ಮನಸಿನ ಮಾತು ಹೇಳುವಾಗ ನನಗೆ

ನಿನ್ನ ಹೆಸರು ಬಂದೇ ಬರುವದು
ನನ್ನ ಈ ಕಥೆಯೊಳಗೆ.
– ಕೈಫಿ ಅಝ್ಮಿ

14.
ಏನಾಗಿದೆ ನಿನಗೆ, ಅಷ್ಟು ನಗುವಂಥದು
ಯಾವ ನೋವದು ನನ್ನಿಂದ ಬಚ್ಚಿಡುವಂಥದು.

ಕಣ್ಣಂಚಲ್ಲಿ ಹಸಿ, ತುಟಿ ಮೇಲೆ ನಗು
ಏನಾಗಿದೆ ನಿನಗೆ, ಏನೋ ಹಾಡುವಂಥದು.
– ಕೈಫಿ ಅಝ್ಮಿ

15.
ಒಂದಿಷ್ಟು ಸಮಯದಿಂದ
ನಿನ್ನ ನೆನಪಾಗುತ್ತಿಲ್ಲ ಎನ್ನುವುದು ನಿಜವಾದರೂ,

ನಿನ್ನ ಮರೆತುಬಿಟ್ಟಿರುವೆ ಎನ್ನುವುದು ಮಾತ್ರ
ಸಂಪೂರ್ಣ ಸುಳ್ಳು.
– ಫಿರಕ್ ಗೋರಕ್‌ಪುರಿ

16.
ಬಹಳ ಮೊದಲೇ ಆ ಹೆಜ್ಜೆಗಳ
ಸಂಕೋಚವನ್ನು ಗುರುತಿಸುತ್ತೇನೆ,

ಹೇ ಬದುಕು! ಬಹಳಷ್ಟು ದೂರದಿಂದಲೇ
ನಿನ್ನನ್ನು ಗುರುತಿಸುತ್ತೇನೆ.
– ಫಿರಕ್ ಗೋರಕ್‌ಪುರಿ

17.
ವೈರಿಯಲ್ಲೂ
ಸ್ವಾಭಿಮಾನದ ನಿರೀಕ್ಷೆ ನನಗೆ,

ತಲೆ ಯಾರದಾದರೇನು
ಕಾಲುಗಳ ಮೇಲೆ ಇಷ್ಟವಾಗುವುದಿಲ್ಲ ನನಗೆ.
– ಜಾವೇದ್ ಅಖ್ತರ್

18.
ಎಲ್ಲರಿಂದಲೂ ಖುಷಿ
ಒಂದು ಹೆಜ್ಜೆ ದೂರ ಇದೆ,

ಪ್ರತಿ ಮನೆಯಲ್ಲೂ ಕೋಣೆ
ಒಂದೇ ಒಂದು ಕಡಿಮೆ ಇದೆ.
– ಜಾವೇದ್ ಅಖ್ತರ್

19.
ಕದ್ದು ತರುತ್ತಿದ್ದೆವು ಕೂಡಲು
ನಾವಿಬ್ಬರೂ ಸಮಯವನ್ನ ಆಗ,

ಈಗ ಭೇಟಿಯಾಗುತ್ತೇವೆ
ಯಾವಾಗಲಾದರೂ ಸಮಯ ಸಿಕ್ಕಾಗ.
– ಜಾವೇದ್ ಅಖ್ತರ್

20.
ಬದುಕುವ ರೀತಿಗಳೇ ವಿಚಿತ್ರ
ಈ ಶಹರದಲ್ಲಿ,

ಮಾತುಗಳಲ್ಲೇನೋ ಭರ್ತಿ ತಮಾಶೆ
ನೋವಿನ ಗಾಯಗಳು ದನಿಯಲ್ಲಿ.
– ಜಾವೇದ್ ಅಖ್ತರ್

21.
ಹೋಗಿ ಹೇಳಿ ಯಾರಾದರೂ
ಜ್ವಾಲೆಗಳಿಗೆ, ಕಿಡಿಗಳಿಗೆ

ಪುರುಸೊತ್ತು ಮಾಡಿಕೊಂಡು,

ಅರಳಿನಿಂತಿವೆ ಹೂಗಳು
ಈ ಸಲ
ಪೂರ್ತಿ ತಯಾರಿ ಮಾಡಿಕೊಂಡು.
– ರಾಹತ್ ಇಂದೂರಿ

22.
ಪ್ರತಿರಾತ್ರಿ
ನಕ್ಷತ್ರಗಳಿಗೆ ತಮ್ಮ ಮೆರೆದಾಟದಲ್ಲಿ
ಅಡಚಣಿಯಾಗುತ್ತದೆ,

ಕತ್ತಲೆಯಾದೊಡನೆ
ತಲೆತಿರುಕ ಚಂದ್ರನ ಸವಾರಿ
ಮನೆಯಿಂದ ಹೊರಗೆ ಬೀಳುತ್ತದೆ.
– ರಾಹತ್ ಇಂದೂರಿ

23.
ನನ್ನ ಚಹರೆಯ ಬದಲಾಗುವ ಬಣ್ಣಗಳನ್ನು
ಜನ ಗಂಭೀರವಾಗಿ ಗಮನಿಸುತ್ತಾರೆ

ನಿನ್ನ ಹೆಸರ ಮುಂದೆ ಮಾಡಿ
ಜನ ನನ್ನ ತಮಾಶೆ ಮಾಡುತ್ತಾರೆ
– ರಾಹತ್ ಇಂದೂರಿ

24.
ಜನ ಮಾತಾಡಿಕೊಳ್ಳುವಂತೆ ನಿನಗೆ ಇನ್ನೂ
ನನ್ನ ಮೇಲಿನ ಮುನಿಸು ಕಡಿಮೆಯಾಗಿಲ್ಲ,

ಆದರೆ ನಿನ್ನ ಕಣ್ಣುಗಳು ಮಾತ್ರ ನನಗೆ
ಬೇರೆ ಏನೋ ಹೇಳುತ್ತಿವೆಯಲ್ಲ.
– ಜನ್ ನಿಸಾರ್ ಅಖ್ತರ್

25.
ನೂರಕ್ಕೆ ನೂರು ನಿಜ
ನನ್ನ ಕವಿತೆಗಳು ಇಡೀ ಜಗತ್ತಿಗಾಗಿ,

ಆದರೆ ಕೆಲವು ಸಾಲುಗಳು ಮಾತ್ರ
ಕೇವಲ ಅವಳಿಗಾಗಿ.
– ಜನ್ ನಿಸಾರ್ ಅಖ್ತರ್

26.
ಇವತ್ತು ಮಾತ್ರ
ನಿನ್ನ ಮುಟ್ಟಿ ಮಾತನಾಡಿಸಿದರೂ
ನೀನು ಸಿಗಲಿಲ್ಲ ನನಗೆ,

ಹಿಂದೊಮ್ಮೆ
ನಿನ್ನ ಭೇಟಿ ಮಾಡುವ ಆಲೋಚನೆಯೇ
ತಬ್ಬಿಬ್ಬು ಮಾಡುತ್ತಿತ್ತು ನನ್ನ !
– ಜನ್ ನಿಸಾರ್ ಅಖ್ತರ್

27.
ಗೊತ್ತಿರಲಿ ನಿಮಗೆ ಇಷ್ಟು
ಪ್ರೀತಿ ಅಷ್ಟು ಸುಲಭವಲ್ಲ

ಬೆಂಕಿಯ ನದಿ ಇದು
ಮುಳುಗಿ ಈಜದೆ ಬೇರೆ ದಾರಿ ಇಲ್ಲ .
– ಜಿಗರ್ ಮೊರಾದಾಬಾದಿ

28.
ಎಲ್ಲ ಕಡೆ ಮೆರೆಯುತ್ತಿವೆ
ಪ್ರೇಮದ ಸಂದೇಶಗಳಾಗಿ,

ನೋಡಿ ಹೇಗಿದೆ ನನಗಿಂತಲೂ
ನನ್ನ ಕಥೆಗಳ ಅದೃಷ್ಟವೇ
ಜಬರ್ದಸ್ತಾಗಿ.
– ಜಿಗರ್ ಮೊರಾದಾಬಾದಿ

29.
ನನ್ನ ಬದುಕೇನೋ ಕಳೆದು ಹೋಯಿತು
ನಿನ್ನ ವಿರಹದ ನೆರಳಲ್ಲಿ,

ನನ್ನ ಸಾವಿಗೂ ಒಂದು ಪ್ರಿಯವಾದ
ಕಾರಣ ಬೇಕಲ್ಲ.
-ಜಿಗರ್ ಮೊರಾದಾಬಾದಿ

 

ಇದನ್ನೂ ಓದಿ: ಗುಲ್ಜಾರ್ ಅವರ ಪದ್ಯಗಳು

 

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...