Homeಮುಖಪುಟಒಂದಿಷ್ಟು ಶಾಯರಿಗಳು

ಒಂದಿಷ್ಟು ಶಾಯರಿಗಳು

- Advertisement -
- Advertisement -

1.
ಬದುಕು ನಡೆಯುವುದು
ತನ್ನ ಕಾಲುಗಳ ಮೇಲೆ ಫರಾಜ್,

ಬೇರೆಯವರ ಸಹಾಯದಿಂದ ಸಾಗುವುದು
ಶವಯಾತ್ರೆ ಮಾತ್ರ.
– ಫರಾಜ್ ಅಹ್ಮದ್

2.
ಎಷ್ಟೊಂದು ಜನರಿಗೆ ಪ್ರೀತಿಸುವೆನೆಂದು
ಮಾತು ಕೊಟ್ಟಿದ್ದೀಯ ಫರಾಜ್?

ಪ್ರತಿದಿನ ಹೊಸಬರೊಬ್ಬರು
ನಿನ್ನ ವಿಳಾಸ ಕೇಳುತ್ತಿದ್ದಾರೆ.
– ಫರಾಜ್ ಅಹ್ಮದ್

3.
ಕೇವಲ ದ್ವೇಷವಷ್ಟೇ ಅಲ್ಲ
ಜಗತ್ತಿನ ದುಃಖಕ್ಕೆ ಕಾರಣ ಫರಾಜ್,

ಪ್ರೇಮವೂ ಸಮಾಧಾನಿಗಳಿಗೆ ಕೊಡುತ್ತದೆ
ಬಹಳ ಕಷ್ಟ.
– ಫರಾಜ್ ಅಹ್ಮದ್

4.
ಯಾರು ಯಾಕೆ ಅಳುತ್ತಾರೆ ಗೆಳೆಯ
ಬೇರೆ ಯಾರದೋ ಸಲುವಾಗಿ,

ಎಲ್ಲ ಅಳುತ್ತಿರುವುದು
ತಮ್ಮದೇ ಯಾವುದೋ ಮಾತಿನ ಕಾರಣವಾಗಿ.
– ಸಾಹಿರ್ ಲುಧಿಯಾನ್ವಿ

5.
ತಾನೇ ಸ್ವತಃ ಒಂದು
ಸಮಸ್ಯೆಯಾಗಿರುವಾಗ,

ಬೇರೆ ಯಾವ ಸಮಸ್ಯೆಗಳಿಗೆ ತಾನೇ
ಪರಿಹಾರವಾದೀತು ಯುದ್ಧ?
– ಸಾಹಿರ್ ಲುಧಿಯಾನ್ವಿ

6.
ಅಕಸ್ಮಾತ್ ಬದುಕಿನಲ್ಲಿ
ಮತ್ತೆ ಭೇಟಿಯಾದರೆ,

ವಿಚಾರಿಸುತ್ತೇನೆ ನನ್ನ ಹತಾಶೆಯ ಬಗ್ಗೆ
ನಿನ್ನ ವಿವಶತೆಯನ್ನ.
– ಸಾಹಿರ್ ಲುಧಿಯಾನ್ವಿ

7.
ಬಿರುಗಾಳಿಯ ದೋಣಿ
ಬದುಕಿಸಿತು ನನ್ನ,

ಮುಳುಗಿಸಿಬಿಡುತ್ತಿದ್ದರು ತೀರದ ಜನ
ನನ್ನ ಹಡಗನ್ನ.
– ಮಜ್ರೂಹ್ ಸುಲ್ತಾನ್‌ಪುರಿ

8.
ನಿನ್ನ ಹೊರತಾಗಿಯೂ ಇದ್ದವು
ಶರಣಾಗುವ ಜಾಗಗಳು, ಮರೆತುಹೋದೆ,

ಹೊರಬಿದ್ದ ಮೇಲೆ ನಿನ್ನ ಸುಂದರ ಸಂಜೆಯಿಂದ
ಎಲ್ಲ ದಾರಿಗಳ ನಾನು, ಮರೆತುಹೋದೆ.
– ಮಜ್ರೂಹ್ ಸುಲ್ತಾನ್‌ಪುರಿ

9.
ದೂರ ಕುಳಿತಿದ್ದೆ ಆದರೂ ಬಿತ್ತು
ನನ್ನ ಮೇಲೆ ಸಾಕಿಯ ಕಣ್ಣು,

ದಾಹ ನಿಜವಾಗಿದ್ದರೆ ಬಂದೇ ಬರುತ್ತದೆ
ಮಧುಪಾತ್ರೆಯೂ ಹುಡುಕಿಕೊಂಡು.
– ಮಜ್ರೂಹ್ ಸುಲ್ತಾನ್‌ಪುರಿ

10.
ನಾನು ಸತ್ತಮೇಲೆಯೂ
ತೆರೆದುಕೊಂಡೇ ಇರಲಿ ನನ್ನ ಕಣ್ಣು,

ನಿನಗಾಗಿ ಕಾಯುವ ಹವ್ಯಾಸ
ಬಿಟ್ಟುಹೋಗಿಲ್ಲ ನನ್ನ ಇನ್ನೂ.
– ಫೈಜ್ ಅಹ್ಮದ್ ಫೈಜ್

11.
ಲೆಕ್ಕ ಹಾಕುತ್ತಿದ್ದೆ ಜಗತ್ತು ಕರುಣಿಸಿರುವ
ನೋವುಗಳ ಮತ್ತೆ ಮತ್ತೆ,

ಯಾಕೋ ನೆನಪಾಗುತ್ತಿರುವೆ ನೀನು
ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ.
– ಫೈಜ್ ಅಹ್ಮದ್ ಫೈಜ್

12.
ಬಂದು ನೆಲೆಸಿದ ಮೇಲೆ ಹಿಂದೂ ಮುಸಲ್ಮಾನರು
ನಮ್ಮ ಓಣಿಯೊಳಗೆ,

ಮನುಷ್ಯರ ಮುಖಗಳನ್ನು ಕಾಣುವ ತಹತಹ
ತೀವ್ರವಾಯಿತು ಮನದೊಳಗೆ.
– ಕೈಫಿ ಅಝ್ಮಿ

13.
ಒಂದು ಹಿಂಜರಿಕೆ ಮಾತ್ರ
ಮನಸಿನ ಮಾತು ಹೇಳುವಾಗ ನನಗೆ

ನಿನ್ನ ಹೆಸರು ಬಂದೇ ಬರುವದು
ನನ್ನ ಈ ಕಥೆಯೊಳಗೆ.
– ಕೈಫಿ ಅಝ್ಮಿ

14.
ಏನಾಗಿದೆ ನಿನಗೆ, ಅಷ್ಟು ನಗುವಂಥದು
ಯಾವ ನೋವದು ನನ್ನಿಂದ ಬಚ್ಚಿಡುವಂಥದು.

ಕಣ್ಣಂಚಲ್ಲಿ ಹಸಿ, ತುಟಿ ಮೇಲೆ ನಗು
ಏನಾಗಿದೆ ನಿನಗೆ, ಏನೋ ಹಾಡುವಂಥದು.
– ಕೈಫಿ ಅಝ್ಮಿ

15.
ಒಂದಿಷ್ಟು ಸಮಯದಿಂದ
ನಿನ್ನ ನೆನಪಾಗುತ್ತಿಲ್ಲ ಎನ್ನುವುದು ನಿಜವಾದರೂ,

ನಿನ್ನ ಮರೆತುಬಿಟ್ಟಿರುವೆ ಎನ್ನುವುದು ಮಾತ್ರ
ಸಂಪೂರ್ಣ ಸುಳ್ಳು.
– ಫಿರಕ್ ಗೋರಕ್‌ಪುರಿ

16.
ಬಹಳ ಮೊದಲೇ ಆ ಹೆಜ್ಜೆಗಳ
ಸಂಕೋಚವನ್ನು ಗುರುತಿಸುತ್ತೇನೆ,

ಹೇ ಬದುಕು! ಬಹಳಷ್ಟು ದೂರದಿಂದಲೇ
ನಿನ್ನನ್ನು ಗುರುತಿಸುತ್ತೇನೆ.
– ಫಿರಕ್ ಗೋರಕ್‌ಪುರಿ

17.
ವೈರಿಯಲ್ಲೂ
ಸ್ವಾಭಿಮಾನದ ನಿರೀಕ್ಷೆ ನನಗೆ,

ತಲೆ ಯಾರದಾದರೇನು
ಕಾಲುಗಳ ಮೇಲೆ ಇಷ್ಟವಾಗುವುದಿಲ್ಲ ನನಗೆ.
– ಜಾವೇದ್ ಅಖ್ತರ್

18.
ಎಲ್ಲರಿಂದಲೂ ಖುಷಿ
ಒಂದು ಹೆಜ್ಜೆ ದೂರ ಇದೆ,

ಪ್ರತಿ ಮನೆಯಲ್ಲೂ ಕೋಣೆ
ಒಂದೇ ಒಂದು ಕಡಿಮೆ ಇದೆ.
– ಜಾವೇದ್ ಅಖ್ತರ್

19.
ಕದ್ದು ತರುತ್ತಿದ್ದೆವು ಕೂಡಲು
ನಾವಿಬ್ಬರೂ ಸಮಯವನ್ನ ಆಗ,

ಈಗ ಭೇಟಿಯಾಗುತ್ತೇವೆ
ಯಾವಾಗಲಾದರೂ ಸಮಯ ಸಿಕ್ಕಾಗ.
– ಜಾವೇದ್ ಅಖ್ತರ್

20.
ಬದುಕುವ ರೀತಿಗಳೇ ವಿಚಿತ್ರ
ಈ ಶಹರದಲ್ಲಿ,

ಮಾತುಗಳಲ್ಲೇನೋ ಭರ್ತಿ ತಮಾಶೆ
ನೋವಿನ ಗಾಯಗಳು ದನಿಯಲ್ಲಿ.
– ಜಾವೇದ್ ಅಖ್ತರ್

21.
ಹೋಗಿ ಹೇಳಿ ಯಾರಾದರೂ
ಜ್ವಾಲೆಗಳಿಗೆ, ಕಿಡಿಗಳಿಗೆ

ಪುರುಸೊತ್ತು ಮಾಡಿಕೊಂಡು,

ಅರಳಿನಿಂತಿವೆ ಹೂಗಳು
ಈ ಸಲ
ಪೂರ್ತಿ ತಯಾರಿ ಮಾಡಿಕೊಂಡು.
– ರಾಹತ್ ಇಂದೂರಿ

22.
ಪ್ರತಿರಾತ್ರಿ
ನಕ್ಷತ್ರಗಳಿಗೆ ತಮ್ಮ ಮೆರೆದಾಟದಲ್ಲಿ
ಅಡಚಣಿಯಾಗುತ್ತದೆ,

ಕತ್ತಲೆಯಾದೊಡನೆ
ತಲೆತಿರುಕ ಚಂದ್ರನ ಸವಾರಿ
ಮನೆಯಿಂದ ಹೊರಗೆ ಬೀಳುತ್ತದೆ.
– ರಾಹತ್ ಇಂದೂರಿ

23.
ನನ್ನ ಚಹರೆಯ ಬದಲಾಗುವ ಬಣ್ಣಗಳನ್ನು
ಜನ ಗಂಭೀರವಾಗಿ ಗಮನಿಸುತ್ತಾರೆ

ನಿನ್ನ ಹೆಸರ ಮುಂದೆ ಮಾಡಿ
ಜನ ನನ್ನ ತಮಾಶೆ ಮಾಡುತ್ತಾರೆ
– ರಾಹತ್ ಇಂದೂರಿ

24.
ಜನ ಮಾತಾಡಿಕೊಳ್ಳುವಂತೆ ನಿನಗೆ ಇನ್ನೂ
ನನ್ನ ಮೇಲಿನ ಮುನಿಸು ಕಡಿಮೆಯಾಗಿಲ್ಲ,

ಆದರೆ ನಿನ್ನ ಕಣ್ಣುಗಳು ಮಾತ್ರ ನನಗೆ
ಬೇರೆ ಏನೋ ಹೇಳುತ್ತಿವೆಯಲ್ಲ.
– ಜನ್ ನಿಸಾರ್ ಅಖ್ತರ್

25.
ನೂರಕ್ಕೆ ನೂರು ನಿಜ
ನನ್ನ ಕವಿತೆಗಳು ಇಡೀ ಜಗತ್ತಿಗಾಗಿ,

ಆದರೆ ಕೆಲವು ಸಾಲುಗಳು ಮಾತ್ರ
ಕೇವಲ ಅವಳಿಗಾಗಿ.
– ಜನ್ ನಿಸಾರ್ ಅಖ್ತರ್

26.
ಇವತ್ತು ಮಾತ್ರ
ನಿನ್ನ ಮುಟ್ಟಿ ಮಾತನಾಡಿಸಿದರೂ
ನೀನು ಸಿಗಲಿಲ್ಲ ನನಗೆ,

ಹಿಂದೊಮ್ಮೆ
ನಿನ್ನ ಭೇಟಿ ಮಾಡುವ ಆಲೋಚನೆಯೇ
ತಬ್ಬಿಬ್ಬು ಮಾಡುತ್ತಿತ್ತು ನನ್ನ !
– ಜನ್ ನಿಸಾರ್ ಅಖ್ತರ್

27.
ಗೊತ್ತಿರಲಿ ನಿಮಗೆ ಇಷ್ಟು
ಪ್ರೀತಿ ಅಷ್ಟು ಸುಲಭವಲ್ಲ

ಬೆಂಕಿಯ ನದಿ ಇದು
ಮುಳುಗಿ ಈಜದೆ ಬೇರೆ ದಾರಿ ಇಲ್ಲ .
– ಜಿಗರ್ ಮೊರಾದಾಬಾದಿ

28.
ಎಲ್ಲ ಕಡೆ ಮೆರೆಯುತ್ತಿವೆ
ಪ್ರೇಮದ ಸಂದೇಶಗಳಾಗಿ,

ನೋಡಿ ಹೇಗಿದೆ ನನಗಿಂತಲೂ
ನನ್ನ ಕಥೆಗಳ ಅದೃಷ್ಟವೇ
ಜಬರ್ದಸ್ತಾಗಿ.
– ಜಿಗರ್ ಮೊರಾದಾಬಾದಿ

29.
ನನ್ನ ಬದುಕೇನೋ ಕಳೆದು ಹೋಯಿತು
ನಿನ್ನ ವಿರಹದ ನೆರಳಲ್ಲಿ,

ನನ್ನ ಸಾವಿಗೂ ಒಂದು ಪ್ರಿಯವಾದ
ಕಾರಣ ಬೇಕಲ್ಲ.
-ಜಿಗರ್ ಮೊರಾದಾಬಾದಿ

 

ಇದನ್ನೂ ಓದಿ: ಗುಲ್ಜಾರ್ ಅವರ ಪದ್ಯಗಳು

 

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...