Homeಅಂಕಣಗಳುಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

ಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮಾತನ್ನು ಆಲಿಸದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಸಾಹಿತಿ-ಸಂಶೋಧಕ ಹಂ.ಪ.ನಾಗರಾಜಯ್ಯ ಅವರು ಬಹಳ ಸಂಯಮದಿಂದ ಮತ್ತು ಜವಾಬ್ದಾರಿಯುತ ಮಾತುಗಳಿಂದಲೇ ಟೀಕೆ ಮಾಡಿದ್ದರು. ಆದರೂ ಯಾರೋ ಒಬ್ಬ ವ್ಯಕ್ತಿ ಕುತ್ಸಿತ ಉದ್ದೇಶದಿಂದ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಡ್ಯದ ಪೊಲೀಸರು, ದೂರಿನ ಅರ್ಹತೆಯ ಬಗ್ಗೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಅಥವಾ ಬೇಕಂತಲೇ, ಹಂಪನಾರವರನ್ನು ಕರೆಸಿ ವಿಚಾರಣೆ ಮಾಡಿದ್ದು ನಾವು ಬದುಕುತ್ತಿರುವ ಇವತ್ತಿನ ಭಯಾನಕ ದಿನಗಳ ಬಗ್ಗೆ ಮತ್ತೊಂದು ಎಚ್ಚರಿಕೆಯನ್ನು ನೀಡುತ್ತಿರುವಂತೆ ಭಾಸವಾಗುತ್ತದೆ.

ಜನವರಿ 25ರಂದು ಕನ್ನಡ ರಕ್ಷಣಾ ವೇದಿಕೆ (ಕರವೇ) ಈ ವಿದ್ಯಮಾನವನ್ನು ಖಂಡಿಸಲು, ಈ ನಾಡಿನ ಹಲವು ಪ್ರಾಜ್ಞರನ್ನು ಆಹ್ವಾನಿಸಿ ಆಯೋಜಿಸಿದ್ದ ಸಭೆ ಹಲವು ಕಾರಣಗಳಿಗೆ ಮುಖ್ಯವಾಗಿತ್ತು. ನೆಲ, ಜಲ, ಭಾಷೆಯ ಕುರಿತು ಹಲವು ವರ್ಷಗಳಿಂದ ಹಲವಾರು ಹೋರಾಟಗಳನ್ನು ರೂಪಿಸಿಕೊಂಡು ಬಂದಿರುವ ಕರವೇ, ಈಗ ವಿಶಾಲವಾದ ಅರ್ಥದಲ್ಲಿ ಇವೆಲ್ಲ ಸಮಸ್ಯೆಗಳಿಗೂ ಕಾರಣವಾಗುವ ದಮನಕಾರಿ ಪ್ರಭುತ್ವವನ್ನು ಮತ್ತು ಅದರ ನಡೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಪ್ರಶ್ನಿಸಲು ಮುಂದಾಗಿರುವುದು ಬಹಳ ಆಶಾದಾಯಕ ಮತ್ತು ಸ್ಫೂರ್ತಿದಾಯಕ ಸಂಗತಿ. ಸಾಹಿತಿ ಕಲ್ಬುರ್ಗಿಯವರ ಹತ್ಯೆಯ ನಂತರವೂ ಕರವೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಜ್ಯಾದ್ಯಂತ ವಿಶಾಲವಾಗಿ ಹರಡಿರುವ ಸಂಘಟನೆಯಾಗಿರುವ ಕರವೇ, ಜಾತಿ, ಧರ್ಮಗಳ ಮತ್ತು ಕೋಮುರಾಜಕಾರಣದ ಸಲುವಾಗಿ ರಾಜ್ಯದಲ್ಲಿ ದುರ್ಬಲ ಸಮುದಾಯಗಳ ಮೇಲೆ ಆಗುವ ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಕೂಡ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಬೇಕು ಎಂಬುದು ಹಲವರ ಅಪೇಕ್ಷೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದ ಸಂದರ್ಭ ಮತ್ತು ಅದರಲ್ಲಿ ಭಾಗಿಯಾದವರಲ್ಲಿದ್ದ ವೈವಿಧ್ಯತೆಯ ಪ್ರಾತಿನಿಧ್ಯದ ದೃಷ್ಟಿಯಿಂದಲೂ ಇದು ಪ್ರಮುಖವಾಗಿತ್ತು.

ಹಂಪನಾ

ಈ ಕಾರ್ಯಕ್ರಮದಲ್ಲಿ ಕವಿ-ಸಾಮಾಜಿಕ ಕಾರ್ಯಕರ್ತ ಹುಲಿಕುಂಟೆ ಮೂರ್ತಿ ಅವರು ಆಡಿದ ಮಾತುಗಳನ್ನು ನೆನೆಯುವುದು ಇಲ್ಲಿ ಮುಖ್ಯ. ಹಂಪನಾ ಅವರಿಗೆ ಬೆಂಬಲ ನೀಡುತ್ತಿರುವುದರ ವಿರುದ್ಧ ಏಳುತ್ತಿರುವ ಹಲವು ರೀತಿಯ ತರಹೇವಾರಿ ಪ್ರಶ್ನೆಗಳಿಗೆ ಅದು ಸಮರ್ಪಕ ಉತ್ತರವಾಗಿತ್ತು. ಹಂಪನಾ ಅವರು ಈ ಹಿಂದೆ ಪ್ರಭುತ್ವದ ಯಾವುದೇ ದೌರ್ಜನ್ಯಗಳಿಗೆ ಸ್ಪಂದಿಸದೆ ಇರುವವರು. ಅವರಿಗೆ ಈ ಮಟ್ಟದ ಬೆಂಬಲ ಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೂರ್ತಿ, ನಾನು ಓದಲು ಇಷ್ಟ ಪಡದ, ಅವರ ಸಾಹಿತ್ಯವನ್ನು ಮೆಚ್ಚದ ಎಸ್ ಎಲ್ ಭೈರಪ್ಪನವರ ಮೇಲೆ ಪ್ರಭುತ್ವ ಈ ರೀತಿಯ ದಾಳಿ ನಡೆಸಿದರೆ, ಅದರ ವಿರುದ್ಧ ಕೂಡ ಧ್ವನಿ ಎತ್ತುತ್ತೇನೆ ಎಂದರು. ಇಷ್ಟು ದಿನ ತಮಗೆ ಅಪಾಯಕಾರಿ ಎಂದು ಎಂದಿಗೂ ಅನಿಸದ ಹಂಪನಾ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನೀಡಿದ ಒಂದೇ ಒಂದು ಹೇಳಿಕೆಗಾಗಿ ಖಳನಾಯಕರಾಗಿ ಹೋದರು. ಇವತ್ತು ಮೋದಿ ಮತ್ತು ಅವರ ಆಡಳಿತದ ಬಗ್ಗೆ ಭಜನೆ ಮಾಡುತ್ತಿರುವ ಭೈರಪ್ಪ ಕೂಡ ಮುಂದೊಂದು ದಿನ ಇದೇ ಅಥವಾ ಇದಕ್ಕೂ ಘೋರವಾದ (ಉತ್ತರಪ್ರದೇಶ ನೆನಪಿಸಿಕೊಳ್ಳಿ) ಪ್ರಭುತ್ವಕ್ಕೆ ಮತ್ತು ಅವರ ಬೆಂಬಲಿಗರಿಗೆ ಎದುರಾಳಿಯಾಗಬಹುದು. ಆಗ, ಅವರು ದೈವತ್ವದಿಂದ ಮಾನವತ್ವಕ್ಕೆ ಇಳಿಸಿ ಬರೆದಿರುವ ಮಹಾಭಾರತದ ಕಥೆಯ ’ಪರ್ವ ಕಾದಂಬರಿಯೇ ಅಪಾಯಕಾರಿ ಪಠ್ಯವಾಗಿ ಕಾಣಿಸಬಹದು. ಧಾರ್ಮಿಕ ಅಮಲಿನಲ್ಲಿ ಕಟ್ಟುವ ರಾಷ್ಟ್ರೀಯತೆ ಯಾರ ಯಾರ ಬಾಗಿಲಿಗೆ ಬಂದು, ಯಾವ ಕಾರಣಕ್ಕೆ ಯಾರನ್ನೆಲ್ಲ ಅಮರಿಕೊಳ್ಳುತ್ತದೋ ಬಲ್ಲವರು ಯಾರು?

PC : IUCAA page, (ಜಯಂತ್ ನಾರ್ಲೀಕರ್)

ಅದೇನೇ ಇರಲಿ, 84 ವರ್ಷಗಳ ವಯೋವೃದ್ಧರಾದ ಸಾಹಿತಿ ಹಂಪನಾ ಅವರಿಗೂ ಪ್ರಸಕ್ತ ಕೇಂದ್ರ ಸರ್ಕಾರದ ಕೆಲವಾದರೂ ನೀತಿಗಳು ಆಕ್ರೋಶ ತಂದಿವೆ ಮತ್ತು ಅವರು ಈ ವಯಸ್ಸಿನಲ್ಲಿಯೂ ಪ್ರತಿರೋಧಿಸಬೇಕು ಎಂದು ಮನಗಂಡು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವುದು, ಬದಲಾಗುತ್ತಿರುವ ಒಂದು ದೊಡ್ಡ ವರ್ಗದ ಪ್ರತಿನಿಧಿಯಂತೆ ಅವರು ಕಾಣುವುದಂತೂ ನಿಜ. ಜಾರ್ಜ್ ಆರ್ವೆಲ್ ತನ್ನ ’1984’ ಕಾದಂಬರಿಯಲ್ಲಿ ನಿರೂಪಿಸಿದಂತಹ ನಿರಂಕುಶ ಮತ್ತು ಸರ್ವಾಧಿಕಾರಿ ವ್ಯವಸ್ಥೆಗೆ ಈ ದೇಶ ಜಾರುವುದಕ್ಕೆ ಇನ್ನೂ ಹಲವು ಅಡೆತಡೆಗಳಿವೆ ಎಂಬುದನ್ನೂ ಇದು ನೆನಪಿಸುತ್ತದ್ದಲ್ಲದೆ, ಸಕ್ರಿಯವಾದ ನಾಗರಿಕ ಸಮಾಜ ಅಪಾಯಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನೂ ತೋರಿಸುತ್ತದೆ. ಹಂಪನಾ ಅವರನ್ನು ಕರೆಸಿ ವಿಚಾರಣೆ ನಡೆಸಿರುವುದಕ್ಕೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಕೋರಿದ ಕ್ಷಮೆಯೂ ಇದಕ್ಕೆ ಸಾಕ್ಷಿಯಾಗಿದೆ.

ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲ ರಂಗದ ಪ್ರಾಜ್ಞರೂ ಇಂದು ದೊಡ್ಡ ಮಟ್ಟದಲ್ಲಿ ಪ್ರತಿರೋಧ ದಾಖಲಿಸಬೇಕಿದೆ. ಇದರಲ್ಲಿ ಕನ್ನಡದ ಸಾಹಿತ್ಯ-ಸಿನಿಮಾ-ರಂಗಭೂಮಿ ಲೋಕದವರ ಪಾತ್ರ ದೊಡ್ಡದಾಗಿರಬೇಕಿತ್ತು. ಆದರೆ ಅವರೆಲ್ಲರ ಅಭಾವ ದೊಡ್ಡದಾಗಿದೆ. ಇದೇ ಸಮಯದಲ್ಲಿ ಫೆಬ್ರವರಿ ಕೊನೆಯ ಭಾಗದಲ್ಲಿ ನಡೆಯಲು ನಿಯೋಜಿಸಲಾಗಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು. ಕನ್ನಡ ನಾಡಿನ ಪ್ರಮುಖ ಸಾಹಿತ್ಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ದಿಕ್ಕು ತಪ್ಪುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ ಕೂಡ.

ಇದರ ನಡುವೆ ಮಹಾರಾಷ್ಟ್ರದಲ್ಲಿ ಮಾರ್ಚ್ ಕೊನೆಯ ಭಾಗದಲ್ಲಿ ನಡೆಯಲಿರುವ 94ನೇ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ’ಜಯಂತ್ ನಾರ್ಲೀಕರ್ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಂತೆಯೇ ಬಹಳ ಪ್ರತಿಷ್ಠಿತ ಸಾಹಿತ್ಯ ಕೂಟ ಇದು. ಈ ಬಾರಿಯ ವಿಶೇಷ ಎಂದರೆ ಸಮ್ಮೇಳನದ ಅಧ್ಯಕ್ಷರಾಗಲಿರುವ ಪದ್ಮ ವಿಭೂಷಣ ಜಯಂತ್ ನಾರ್ಲೀಕರ್ ಅವರು ವಿಜ್ಞಾನಿಗಳು. ಅಂತಾರಾಷ್ಟ್ರೀಯ ಖ್ಯಾತಿಯ ಆಸ್ಟ್ರೋಫಿಸಿಸಿಸ್ಟ್. ಇಂಗ್ಲಿಷ್‌ನಲ್ಲಿ ಜನಪ್ರಿಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತಾರು ಕೃತಿಗಳನ್ನು ಜಯಂತ್ ಅವರು ರಚಿಸಿದ್ದಾರಲ್ಲದೆ, ಮರಾಠಿಯಲ್ಲಿಯೂ ವಿಜ್ಞಾನದ ಪುಸ್ತಕಗಳನ್ನು, ಹಾಗು ವಿಜ್ಞಾನಕ್ಕೆ ಸಂಬಂಧಿಸಿದ ಕಥೆ-ಕಾದಂಬರಿಗಳನ್ನು ಬರೆದಿದ್ದಾರೆ. ಇಂಗ್ಲಿಷ್‌ನಲ್ಲಿ ಸೈ-ಫೈ ಎಂದು ಕರೆಯಲ್ಪಡುವ ಈ ಜನಪ್ರಿಯ ಸಾಹಿತ್ಯ ಪ್ರಕಾರ ವಿಶ್ವದಾದ್ಯಂತ ಮಕ್ಕಳು ಮತ್ತು ಯುವಜನರಿಗೆ ಭಾರಿ ಆಕರ್ಷಣೆ. ಕನ್ನಡದಲ್ಲಿ ಮನು, ರಾಜಶೇಖರ ಭೂಸನೂರಮಠ ಅವರನ್ನು ಒಳಗೊಂಡಂತೆ ಕೆಲವೇ ಕೆಲವು ಸಾಹಿತಿಗಳು ಈ ಪ್ರಕಾರದಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಈ ಪ್ರಕಾರ ಏಕೆ ಹೆಚ್ಚು ಜನಪ್ರಿಯವಾಗಲಿಲ್ಲ ಎಂಬುದು ಒಳ್ಳೆಯ ಅಧ್ಯಯನವಾದೀತು. ಇಂತಹ ಸಾಹಿತ್ಯ ಬೆಳೆದು, ವಿಜ್ಞಾನಿಯೊಬ್ಬರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸುಸಂದರ್ಭ ಮುಂದೊಂದು ದಿನ ಒದಗಿ ಬರಲಿ. ವೈಜ್ಞಾನಿಕ ಭಾವನೆ ಜನರಲ್ಲಿ ಹೆಚ್ಚಾಗಲಿ. ವೈಚಾರಿಕತೆಯ ಉಳಿವಿಗೆ ಜನ ತಮ್ಮನ್ನು ಅರ್ಪಿಸಿಕೊಳ್ಳಲಿ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...