Homeಅಂಕಣಗಳುಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

ಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮಾತನ್ನು ಆಲಿಸದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಸಾಹಿತಿ-ಸಂಶೋಧಕ ಹಂ.ಪ.ನಾಗರಾಜಯ್ಯ ಅವರು ಬಹಳ ಸಂಯಮದಿಂದ ಮತ್ತು ಜವಾಬ್ದಾರಿಯುತ ಮಾತುಗಳಿಂದಲೇ ಟೀಕೆ ಮಾಡಿದ್ದರು. ಆದರೂ ಯಾರೋ ಒಬ್ಬ ವ್ಯಕ್ತಿ ಕುತ್ಸಿತ ಉದ್ದೇಶದಿಂದ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಡ್ಯದ ಪೊಲೀಸರು, ದೂರಿನ ಅರ್ಹತೆಯ ಬಗ್ಗೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಅಥವಾ ಬೇಕಂತಲೇ, ಹಂಪನಾರವರನ್ನು ಕರೆಸಿ ವಿಚಾರಣೆ ಮಾಡಿದ್ದು ನಾವು ಬದುಕುತ್ತಿರುವ ಇವತ್ತಿನ ಭಯಾನಕ ದಿನಗಳ ಬಗ್ಗೆ ಮತ್ತೊಂದು ಎಚ್ಚರಿಕೆಯನ್ನು ನೀಡುತ್ತಿರುವಂತೆ ಭಾಸವಾಗುತ್ತದೆ.

ಜನವರಿ 25ರಂದು ಕನ್ನಡ ರಕ್ಷಣಾ ವೇದಿಕೆ (ಕರವೇ) ಈ ವಿದ್ಯಮಾನವನ್ನು ಖಂಡಿಸಲು, ಈ ನಾಡಿನ ಹಲವು ಪ್ರಾಜ್ಞರನ್ನು ಆಹ್ವಾನಿಸಿ ಆಯೋಜಿಸಿದ್ದ ಸಭೆ ಹಲವು ಕಾರಣಗಳಿಗೆ ಮುಖ್ಯವಾಗಿತ್ತು. ನೆಲ, ಜಲ, ಭಾಷೆಯ ಕುರಿತು ಹಲವು ವರ್ಷಗಳಿಂದ ಹಲವಾರು ಹೋರಾಟಗಳನ್ನು ರೂಪಿಸಿಕೊಂಡು ಬಂದಿರುವ ಕರವೇ, ಈಗ ವಿಶಾಲವಾದ ಅರ್ಥದಲ್ಲಿ ಇವೆಲ್ಲ ಸಮಸ್ಯೆಗಳಿಗೂ ಕಾರಣವಾಗುವ ದಮನಕಾರಿ ಪ್ರಭುತ್ವವನ್ನು ಮತ್ತು ಅದರ ನಡೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಪ್ರಶ್ನಿಸಲು ಮುಂದಾಗಿರುವುದು ಬಹಳ ಆಶಾದಾಯಕ ಮತ್ತು ಸ್ಫೂರ್ತಿದಾಯಕ ಸಂಗತಿ. ಸಾಹಿತಿ ಕಲ್ಬುರ್ಗಿಯವರ ಹತ್ಯೆಯ ನಂತರವೂ ಕರವೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಜ್ಯಾದ್ಯಂತ ವಿಶಾಲವಾಗಿ ಹರಡಿರುವ ಸಂಘಟನೆಯಾಗಿರುವ ಕರವೇ, ಜಾತಿ, ಧರ್ಮಗಳ ಮತ್ತು ಕೋಮುರಾಜಕಾರಣದ ಸಲುವಾಗಿ ರಾಜ್ಯದಲ್ಲಿ ದುರ್ಬಲ ಸಮುದಾಯಗಳ ಮೇಲೆ ಆಗುವ ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಕೂಡ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಬೇಕು ಎಂಬುದು ಹಲವರ ಅಪೇಕ್ಷೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದ ಸಂದರ್ಭ ಮತ್ತು ಅದರಲ್ಲಿ ಭಾಗಿಯಾದವರಲ್ಲಿದ್ದ ವೈವಿಧ್ಯತೆಯ ಪ್ರಾತಿನಿಧ್ಯದ ದೃಷ್ಟಿಯಿಂದಲೂ ಇದು ಪ್ರಮುಖವಾಗಿತ್ತು.

ಹಂಪನಾ

ಈ ಕಾರ್ಯಕ್ರಮದಲ್ಲಿ ಕವಿ-ಸಾಮಾಜಿಕ ಕಾರ್ಯಕರ್ತ ಹುಲಿಕುಂಟೆ ಮೂರ್ತಿ ಅವರು ಆಡಿದ ಮಾತುಗಳನ್ನು ನೆನೆಯುವುದು ಇಲ್ಲಿ ಮುಖ್ಯ. ಹಂಪನಾ ಅವರಿಗೆ ಬೆಂಬಲ ನೀಡುತ್ತಿರುವುದರ ವಿರುದ್ಧ ಏಳುತ್ತಿರುವ ಹಲವು ರೀತಿಯ ತರಹೇವಾರಿ ಪ್ರಶ್ನೆಗಳಿಗೆ ಅದು ಸಮರ್ಪಕ ಉತ್ತರವಾಗಿತ್ತು. ಹಂಪನಾ ಅವರು ಈ ಹಿಂದೆ ಪ್ರಭುತ್ವದ ಯಾವುದೇ ದೌರ್ಜನ್ಯಗಳಿಗೆ ಸ್ಪಂದಿಸದೆ ಇರುವವರು. ಅವರಿಗೆ ಈ ಮಟ್ಟದ ಬೆಂಬಲ ಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೂರ್ತಿ, ನಾನು ಓದಲು ಇಷ್ಟ ಪಡದ, ಅವರ ಸಾಹಿತ್ಯವನ್ನು ಮೆಚ್ಚದ ಎಸ್ ಎಲ್ ಭೈರಪ್ಪನವರ ಮೇಲೆ ಪ್ರಭುತ್ವ ಈ ರೀತಿಯ ದಾಳಿ ನಡೆಸಿದರೆ, ಅದರ ವಿರುದ್ಧ ಕೂಡ ಧ್ವನಿ ಎತ್ತುತ್ತೇನೆ ಎಂದರು. ಇಷ್ಟು ದಿನ ತಮಗೆ ಅಪಾಯಕಾರಿ ಎಂದು ಎಂದಿಗೂ ಅನಿಸದ ಹಂಪನಾ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನೀಡಿದ ಒಂದೇ ಒಂದು ಹೇಳಿಕೆಗಾಗಿ ಖಳನಾಯಕರಾಗಿ ಹೋದರು. ಇವತ್ತು ಮೋದಿ ಮತ್ತು ಅವರ ಆಡಳಿತದ ಬಗ್ಗೆ ಭಜನೆ ಮಾಡುತ್ತಿರುವ ಭೈರಪ್ಪ ಕೂಡ ಮುಂದೊಂದು ದಿನ ಇದೇ ಅಥವಾ ಇದಕ್ಕೂ ಘೋರವಾದ (ಉತ್ತರಪ್ರದೇಶ ನೆನಪಿಸಿಕೊಳ್ಳಿ) ಪ್ರಭುತ್ವಕ್ಕೆ ಮತ್ತು ಅವರ ಬೆಂಬಲಿಗರಿಗೆ ಎದುರಾಳಿಯಾಗಬಹುದು. ಆಗ, ಅವರು ದೈವತ್ವದಿಂದ ಮಾನವತ್ವಕ್ಕೆ ಇಳಿಸಿ ಬರೆದಿರುವ ಮಹಾಭಾರತದ ಕಥೆಯ ’ಪರ್ವ ಕಾದಂಬರಿಯೇ ಅಪಾಯಕಾರಿ ಪಠ್ಯವಾಗಿ ಕಾಣಿಸಬಹದು. ಧಾರ್ಮಿಕ ಅಮಲಿನಲ್ಲಿ ಕಟ್ಟುವ ರಾಷ್ಟ್ರೀಯತೆ ಯಾರ ಯಾರ ಬಾಗಿಲಿಗೆ ಬಂದು, ಯಾವ ಕಾರಣಕ್ಕೆ ಯಾರನ್ನೆಲ್ಲ ಅಮರಿಕೊಳ್ಳುತ್ತದೋ ಬಲ್ಲವರು ಯಾರು?

PC : IUCAA page, (ಜಯಂತ್ ನಾರ್ಲೀಕರ್)

ಅದೇನೇ ಇರಲಿ, 84 ವರ್ಷಗಳ ವಯೋವೃದ್ಧರಾದ ಸಾಹಿತಿ ಹಂಪನಾ ಅವರಿಗೂ ಪ್ರಸಕ್ತ ಕೇಂದ್ರ ಸರ್ಕಾರದ ಕೆಲವಾದರೂ ನೀತಿಗಳು ಆಕ್ರೋಶ ತಂದಿವೆ ಮತ್ತು ಅವರು ಈ ವಯಸ್ಸಿನಲ್ಲಿಯೂ ಪ್ರತಿರೋಧಿಸಬೇಕು ಎಂದು ಮನಗಂಡು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವುದು, ಬದಲಾಗುತ್ತಿರುವ ಒಂದು ದೊಡ್ಡ ವರ್ಗದ ಪ್ರತಿನಿಧಿಯಂತೆ ಅವರು ಕಾಣುವುದಂತೂ ನಿಜ. ಜಾರ್ಜ್ ಆರ್ವೆಲ್ ತನ್ನ ’1984’ ಕಾದಂಬರಿಯಲ್ಲಿ ನಿರೂಪಿಸಿದಂತಹ ನಿರಂಕುಶ ಮತ್ತು ಸರ್ವಾಧಿಕಾರಿ ವ್ಯವಸ್ಥೆಗೆ ಈ ದೇಶ ಜಾರುವುದಕ್ಕೆ ಇನ್ನೂ ಹಲವು ಅಡೆತಡೆಗಳಿವೆ ಎಂಬುದನ್ನೂ ಇದು ನೆನಪಿಸುತ್ತದ್ದಲ್ಲದೆ, ಸಕ್ರಿಯವಾದ ನಾಗರಿಕ ಸಮಾಜ ಅಪಾಯಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನೂ ತೋರಿಸುತ್ತದೆ. ಹಂಪನಾ ಅವರನ್ನು ಕರೆಸಿ ವಿಚಾರಣೆ ನಡೆಸಿರುವುದಕ್ಕೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಕೋರಿದ ಕ್ಷಮೆಯೂ ಇದಕ್ಕೆ ಸಾಕ್ಷಿಯಾಗಿದೆ.

ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲ ರಂಗದ ಪ್ರಾಜ್ಞರೂ ಇಂದು ದೊಡ್ಡ ಮಟ್ಟದಲ್ಲಿ ಪ್ರತಿರೋಧ ದಾಖಲಿಸಬೇಕಿದೆ. ಇದರಲ್ಲಿ ಕನ್ನಡದ ಸಾಹಿತ್ಯ-ಸಿನಿಮಾ-ರಂಗಭೂಮಿ ಲೋಕದವರ ಪಾತ್ರ ದೊಡ್ಡದಾಗಿರಬೇಕಿತ್ತು. ಆದರೆ ಅವರೆಲ್ಲರ ಅಭಾವ ದೊಡ್ಡದಾಗಿದೆ. ಇದೇ ಸಮಯದಲ್ಲಿ ಫೆಬ್ರವರಿ ಕೊನೆಯ ಭಾಗದಲ್ಲಿ ನಡೆಯಲು ನಿಯೋಜಿಸಲಾಗಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಕವಿ ದೊಡ್ಡರಂಗೇಗೌಡರು, ಮೇಲಿನ ಈ ವಿದ್ಯಮಾನದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ಪ್ರಧಾನಿ ಮೋದಿಯವರ ಬಗ್ಗೆ ಪತ್ರಿಕೆಯೊಂದರಲ್ಲಿ ದೀರ್ಘ ಪದ್ಯವನ್ನು ಬರೆದಿದ್ದ ದೊಡ್ಡರಂಗೇಗೌಡರಿಂದ ದೊಡ್ಡ ಮಟ್ಟದ ನಿರೀಕ್ಷೆಗಳೇನೂ ಇರದಿದ್ದರೂ, ’ಹಿಂದಿ ಹೇರಿಕೆ’ಯಂತಹ ಪ್ರಾಥಮಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆಗಳನ್ನು ಮತ್ತೆ ಪಸರಿಸುತ್ತಿರುವುದು ಆತಂಕಕಾರಿ ವಿಷಯವಂತೂ ಹೌದು. ಕನ್ನಡ ನಾಡಿನ ಪ್ರಮುಖ ಸಾಹಿತ್ಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ದಿಕ್ಕು ತಪ್ಪುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ ಕೂಡ.

ಇದರ ನಡುವೆ ಮಹಾರಾಷ್ಟ್ರದಲ್ಲಿ ಮಾರ್ಚ್ ಕೊನೆಯ ಭಾಗದಲ್ಲಿ ನಡೆಯಲಿರುವ 94ನೇ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ’ಜಯಂತ್ ನಾರ್ಲೀಕರ್ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಂತೆಯೇ ಬಹಳ ಪ್ರತಿಷ್ಠಿತ ಸಾಹಿತ್ಯ ಕೂಟ ಇದು. ಈ ಬಾರಿಯ ವಿಶೇಷ ಎಂದರೆ ಸಮ್ಮೇಳನದ ಅಧ್ಯಕ್ಷರಾಗಲಿರುವ ಪದ್ಮ ವಿಭೂಷಣ ಜಯಂತ್ ನಾರ್ಲೀಕರ್ ಅವರು ವಿಜ್ಞಾನಿಗಳು. ಅಂತಾರಾಷ್ಟ್ರೀಯ ಖ್ಯಾತಿಯ ಆಸ್ಟ್ರೋಫಿಸಿಸಿಸ್ಟ್. ಇಂಗ್ಲಿಷ್‌ನಲ್ಲಿ ಜನಪ್ರಿಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತಾರು ಕೃತಿಗಳನ್ನು ಜಯಂತ್ ಅವರು ರಚಿಸಿದ್ದಾರಲ್ಲದೆ, ಮರಾಠಿಯಲ್ಲಿಯೂ ವಿಜ್ಞಾನದ ಪುಸ್ತಕಗಳನ್ನು, ಹಾಗು ವಿಜ್ಞಾನಕ್ಕೆ ಸಂಬಂಧಿಸಿದ ಕಥೆ-ಕಾದಂಬರಿಗಳನ್ನು ಬರೆದಿದ್ದಾರೆ. ಇಂಗ್ಲಿಷ್‌ನಲ್ಲಿ ಸೈ-ಫೈ ಎಂದು ಕರೆಯಲ್ಪಡುವ ಈ ಜನಪ್ರಿಯ ಸಾಹಿತ್ಯ ಪ್ರಕಾರ ವಿಶ್ವದಾದ್ಯಂತ ಮಕ್ಕಳು ಮತ್ತು ಯುವಜನರಿಗೆ ಭಾರಿ ಆಕರ್ಷಣೆ. ಕನ್ನಡದಲ್ಲಿ ಮನು, ರಾಜಶೇಖರ ಭೂಸನೂರಮಠ ಅವರನ್ನು ಒಳಗೊಂಡಂತೆ ಕೆಲವೇ ಕೆಲವು ಸಾಹಿತಿಗಳು ಈ ಪ್ರಕಾರದಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಈ ಪ್ರಕಾರ ಏಕೆ ಹೆಚ್ಚು ಜನಪ್ರಿಯವಾಗಲಿಲ್ಲ ಎಂಬುದು ಒಳ್ಳೆಯ ಅಧ್ಯಯನವಾದೀತು. ಇಂತಹ ಸಾಹಿತ್ಯ ಬೆಳೆದು, ವಿಜ್ಞಾನಿಯೊಬ್ಬರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸುಸಂದರ್ಭ ಮುಂದೊಂದು ದಿನ ಒದಗಿ ಬರಲಿ. ವೈಜ್ಞಾನಿಕ ಭಾವನೆ ಜನರಲ್ಲಿ ಹೆಚ್ಚಾಗಲಿ. ವೈಚಾರಿಕತೆಯ ಉಳಿವಿಗೆ ಜನ ತಮ್ಮನ್ನು ಅರ್ಪಿಸಿಕೊಳ್ಳಲಿ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...