HomeUncategorizedಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

- Advertisement -
- Advertisement -

ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಹೊಸ ಸರಕಾರವು ತನ್ನದೇ ಆದ ಬಜೆಟ್ ಮಂಡಿಸುತ್ತದೆ. ಈ ಕಾರಣಕ್ಕಾಗಿ ಅದಕ್ಕೂ ಎರಡು ತಿಂಗಳ ಮುಂಚೆ ಆಡಳಿತ ನಡೆಸುತ್ತಿರುವ ಸರಕಾರವು ಸಂಪೂರ್ಣ ಬಜೆಟ್ ಬದಲಿಗೆ ’ವೋಟ್ ಆನ್ ಅಕೌಂಟ್ ಮಂಡಿಸಬೇಕಾಗುತ್ತದೆ. ಆದರೆ, ೨೦೦೪ರಲ್ಲಿ ಆಗಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆಗೂ ಮುಂಚೆ ಬಜೆಟ್ ಮಂಡಿಸಿದರು. ನಂತರ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಹೊಸ ಬಜೆಟ್ ಮಂಡಿಸಿದರು. ನಂತರ ಅಧಿಕಾರದಲ್ಲಿರುವ ಪ್ರತಿ ಸರಕಾರವು ಚುನಾವಣೆ ವರ್ಷದಲ್ಲಿ ಬಜೆಟ್ ಮಂಡಿಸುವ ಕೆಟ್ಟ ಪರಂಪರೆ ಮುಂದುವರಿಸುತ್ತಾ ಬರಲಾಗಿದೆ. ಈಗಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಎರಡು ತಿಂಗಳ ನಂತರ ಅದರ ಆಸ್ತಿತ್ವ ಇರದ ಚುನಾವಣಾ ಗಿಮಿಕ್ ಆದ ಬಜೆಟ್‌ನ್ನು ಮಂಡಿಸಿದ್ದಾರೆ. ಇದನ್ನು ಬಿಜೆಪಿ ಪಕ್ಷದ ಪ್ರಣಾಳಿಕೆ ಎಂದು ಕರೆಯುವುದು ಸೂಕ್ತ.

ಪ್ರತಿ ಬಜೆಟ್ ಮಂಡನೆಯ ನಂತರ ಅದರ ಖರ್ಚು ಮತ್ತು ವೆಚ್ಚ, ಹಂಚಿಕೆ, ವಿತ್ತೀಯ ಕೊರತೆ ಇತ್ಯಾದಿಗಳ ಚರ್ಚೆ ನಡೆಯುತ್ತದೆ. ಆದರೆ ಬಜೆಟ್ ಮಂಡಿಸುವ ಸರಕಾರವು ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರುತ್ತದೆಯೇ ಎನ್ನುವ ಮುಖ್ಯ ಪ್ರಶ್ನೆಯೇ ಚರ್ಚೆಗೆ ಬರುವುದಿಲ್ಲ. ಈ ಬಜೆಟ್ ಎನ್ನುವುದು ಅಂದಾಜು ಲೆಕ್ಕಾಚಾರ ಮಾತ್ರ. ಆದರೆ ಒಂದು ವರ್ಷದ ನಂತರ ಪ್ರಕಟವಾಗುವ ಪರಿಷ್ಕೃತ ಅಂದಾಜು (ಆರ್‌ಇ) ಆಯಾ ವರ್ಷದ ಬಜೆಟ್‌ನ ನಿಜವಾದ ಹಣೆಬರಹವಾಗಿರುತ್ತದೆ. ಎರಡು ವರ್ಷಗಳ ನಂತರ ಮಂಡಿಸುವ ಬಜೆಟ್‌ನಲ್ಲಿ ಎರಡು ವರ್ಷ ಹಿಂದಿನ ಬಜೆಟ್‌ನ ಅಸಲಿಯತ್ತು ಗೊತ್ತಾಗುತ್ತದೆ. ಅಂದರೆ 2203-24ರ ಬಜೆಟ್‌ನಲ್ಲಿ 2021-22ರ ಬಜೆಟ್‌ನ ಕರಾರುವಕ್ಕಾದ ಅಂಕಿಅಂಶಗಳು ಗೊತ್ತಾಗುತ್ತದೆ. ಆದರೆ ಆ ವರ್ಷದ ಬಜೆಟ್‌ನ ಅಂದಾಜು ಮತ್ತು ನಂತರ ಲಭ್ಯವಾಗುವ ಅಸಲಿ ಆಯವ್ಯಯವನ್ನು ತೌಲನಿಕವಾಗಿ ನೋಡಿ ಚರ್ಚೆಯಾಗುವುದಿಲ್ಲ. ಪ್ರತಿ ವರ್ಷ ಮಂಡಿತವಾದ ಬಜೆಟ್ ಕುರಿತು ಚರ್ಚೆಯಲ್ಲಿ ಕಳೆದ ಎರಡು ವರ್ಷಗಳ ಆಶ್ವಾಸನೆಗಳು, ಹಂಚಿಕೆ, ಯೋಜನೆಗಳ ವಾಸ್ತವವೇನು ಎನ್ನುವುದು ಚರ್ಚೆಗೆ ಬರದೆ ಹಿನ್ನಲೆಗೆ ಸರಿಯುತ್ತದೆ.

ಉದಾಹರಣೆಗೆ 2020-21ರ ಬಜೆಟ್‌ನಲ್ಲಿ ಜಿಎಸ್‌ಟಿ ಪರಿಹಾರ 16,116 ಕೋಟಿ ಎಂದು ಅಂದಾಜಿಸಿದ್ದರು. ಆದರೆ ಕೇಂದ್ರ ನೀಡಿದ್ದು 13,798 ಕೋಟಿ. ಶೇ.14ರಷ್ಟು ಕಡಿತವಾಗಿತ್ತು. ಈ ಬಾರಿಯ ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ 2023-24ರಲ್ಲಿ ಜಿಎಸ್‌ಟಿ ಪಾಲು 37,252 ಕೋಟಿ ಎಂದು ಅಂದಾಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಂದಾಜಿಸಿದ ಜಿಎಸ್‌ಟಿ ಪಾಲಿನಲ್ಲಿ ಶೇ.14ರಷ್ಟು ಕಡಿತವಾದದ್ದರ ಬಗ್ಗೆ ಮಾತಿಲ್ಲ. ಈ ಬಾರಿಯೂ ನೀವು ಹೇಳುವ ಮೊತ್ತ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ ಎನ್ನುವ ಖಾತರಿ ಏನು ಎಂದು ಯಾರೂ ಕೇಳುತ್ತಿಲ್ಲ. 2022-23ರ ಬಜೆಟ್‌ನಲ್ಲಿ ಕೇಂದ್ರ ಸರಕಾರದ ಸಹಾಯ ಅನುದಾನದ ಪ್ರಮಾಣ ಶೇ.6ರಷ್ಟು ಎಂದು ಅಂದಾಜಿಸಿದ್ದರು. ಆದರೆ 2023-24ರಲ್ಲಿ ಅದು ಶೇ.4ಕ್ಕೆ ಕುಸಿದಿದೆ. ಇದನ್ನು ಪ್ರಶ್ನಿಸಬೇಕಲ್ಲವೇ?

ಈ ಬಾರಿ ಬಜೆಟ್‌ನಲ್ಲಿ 77,750 ಕೋಟಿ ವಾರ್ಷಿಕ ಸಾಲ ಮತ್ತು ಒಟ್ಟು ಸಾಲ 5.64 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. 2020-21ರಲ್ಲಿ ವಾರ್ಷಿಕ ಸಾಲ 84,527 ಕೋಟಿ, 2021-22ರಲ್ಲಿ 80,767 ಕೋಟಿ, 2022-22ರಲ್ಲಿ 67,000 ಕೋಟಿ ಎಂದು ಅಂದಾಜಿಸಿದ್ದರು. ಅಂದರೆ ಒಟ್ಟು 3.10 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇದರ ಹೊರತಾಗಿ 2021ರಲ್ಲಿ ಬಜೆಟ್‌ನ ಹೊರಗೆ ಅಂದರೆ ಸಾರ್ವಜನಿಕ ಉದ್ಯಮಗಳ ಮೂಲಕ 10,000 ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಈ ಸಾಲವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದಿಲ್ಲ.2020-21 ರಲ್ಲಿ 23,620 ಕೋಟಿ ಬಡ್ಡಿ, 2021-22ರಲ್ಲಿ 24,983 ಕೋಟಿ, 2022-23ರಲ್ಲಿ 29,394 ಕೋಟಿ ಬಡ್ಡಿ ಕಟ್ಟಿದ್ದಾರೆ. 2023-24ರಲ್ಲಿ 34,023 ಕೋಟಿ ಬಡ್ಡಿ ಎಂದು ಅಂದಾಜಿಸಿದ್ದಾರೆ. ಅಂದರೆ ಒಟ್ಟು 1.12 ಲಕ್ಷ ಕೋಟಿ ಬಡ್ಡಿ ಕಟ್ಟಲಾಗಿದೆ. 2019-20ರಲ್ಲಿ ಶೇ.10.6ರಷ್ಟಿದ್ದ ಬಡ್ಡಿಯ ಪ್ರಮಾಣವು 2023-24ರ ಹೊತ್ತಿಗೆ ಶೇ.15.1ರಷ್ಟಾಗಿದೆ. ಮತ್ತೊಂದೆಡೆ 2021-22ರಲ್ಲಿ ಯೋಜನೇತರ ವೆಚ್ಚ 97,150. 2022-23 ಪರಿಷ್ಕೃತ ಯೋಜನೇತರ ವೆಚ್ಚ 1.16ಲಕ್ಷ ಕೋಟಿಯಾಗಿದೆ. 2023-24ರಲ್ಲಿ ಯೋಜನೇತರ ವೆಚ್ಚ 20.25 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಮೂರು ವರ್ಷಗಳ ಹಿಂದೆ ಶೇ.45ರಷ್ಟಿದ್ದ ಯೋಜನೇತರ ವೆಚ್ಚ 2023-24ರ ಹೊತ್ತಿಗೆ ಶೇ.60ರಷ್ಟಾಗಿದೆ. ಇದೇ ಸಂದರ್ಭದಲ್ಲಿ 2021-22ರಲ್ಲಿ ಯೋಜನಾಧಾರಿತ ವೆಚ್ಚ 74,879 ಕೋಟಿ, 2022-23 ಪರಿಷ್ಕೃತ ಯೋಜನಾಧಾರಿತ ವೆಚ್ಚ 69,766 ಕೋಟಿಯಾಗಿದೆ. 2023-24ರಲ್ಲಿ ಯೋಜನಾಧಾರಿತ ವೆಚ್ಚ 71,570 ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಯೋಜನಾಧಾರಿತ ವೆಚ್ಚ ಮೂರು ವರ್ಷಗಳಲ್ಲಿ ಶೇ.3ರಷ್ಟು ಕಡಿಮೆಯಾಗಿದೆ. ಮೇಲಿನ ಅಂಕಿಅಂಶಗಳನ್ನು ಒಂದಕ್ಕೊಂದು ತಾಳೆಯಾಗುವಂತೆ ಜೋಡಿಸಿಕೊಂಡಾಗ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಕೇಳಬೇಕಿರುವ ಪ್ರಶ್ನೆಗಳು

ಇದನ್ನೂ ಓದಿ: ಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಆದಾಯ ಹೆಚ್ಚಾಗಿದೆ ಎಂದು ಹೇಳಿಕೊಳ್ಳುವ ನೀವು ಸಾಲ ಮತ್ತು ಬಡ್ಡಿಯ ಪ್ರಮಾಣ ಹೆಚ್ಚು ಮಾಡಿದ್ದು ಯಾಕೆ?

ಆದಾಯ ಹೆಚ್ಚಾಗಿದ್ದರೆ ಯೋಜನಾಧಾರಿತ ವೆಚ್ಚ ಕಡಿಮೆಯಾಗಿದ್ದು ಯಾಕೆ? ಶಿಕ್ಷಣಕ್ಕೆ ಬಜೆಟ್ ವೆಚ್ಚದ ಶೇ.12 ಮತ್ತು ಜಿಡಿಪಿಯ ಶೇ.2.25ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುತ್ತಿರುವಿರಿ? ಆರೋಗ್ಯಕ್ಕೆ ಬಜೆಟ್ ವೆಚ್ಚದ ಶೇ.4ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುವಿರಿ?

ರಾಜ್ಯದಲ್ಲಿ 2.4 ಲಕ್ಷ ಹುದ್ದೆಗಳು ಖಾಲಿಯಿವೆ. ಅಲ್ಲಿ ನೇಮಕಾತಿ ಮಾಡಿಕೊಳ್ಳದೆ ನಿರುದ್ಯೋಗಿಗಳನ್ನು ಸೃಷ್ಟಿಸುವ ನೀವು ಮತ್ತೊಂದೆಡೆ ನಿರುದ್ಯೋಗಿಗಳಿಗೆ 2000 ಸ್ಟೈಫಂಡ್ ಕೊಡುತ್ತೇವೆ ಎಂದು ಕೊಚ್ಚಿಕೊಳ್ಳುವುದು ಜೀವವಿರೋಧಿಯಲ್ಲವೇ? ಮುಖ್ಯವಾಗಿ ಒಂದು ಕಾಲು ಭಾಗದಷ್ಟು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೆ ನಿಮ್ಮ ಯೋಜನೇತರ ವೆಚ್ಚ ಹೆಚ್ಚಾಗುತ್ತದೆ. ಅದನ್ನು ಸರಿದೂಗಿಸಲು ಆದಾಯ ಮೂಲಗಳಿಲ್ಲ. ಈ ಸತ್ಯವನ್ನು ಹೇಳಲು ನಿಮಗೆ ಧೈರ್ಯವಿಲ್ಲ.

ವೆಚ್ಚ ಕಡಿಮೆ ಮಾಡಲು ಸಬ್ಸಿಡಿಗಳನ್ನು ನಿಲ್ಲಿಸುವುದೊಂದೇ ಸರಕಾರಗಳು ಕಂಡುಕೊಂಡ ಹೊಸ ಪರಿಹಾರ ಮಾರ್ಗವಾಗಿದೆ. ಇದು ಬಜೆಟ್‌ನಲ್ಲಿ ಪ್ರತಿಫಲನವಾಗಿದೆ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...