HomeUncategorizedಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

- Advertisement -
- Advertisement -

ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಹೊಸ ಸರಕಾರವು ತನ್ನದೇ ಆದ ಬಜೆಟ್ ಮಂಡಿಸುತ್ತದೆ. ಈ ಕಾರಣಕ್ಕಾಗಿ ಅದಕ್ಕೂ ಎರಡು ತಿಂಗಳ ಮುಂಚೆ ಆಡಳಿತ ನಡೆಸುತ್ತಿರುವ ಸರಕಾರವು ಸಂಪೂರ್ಣ ಬಜೆಟ್ ಬದಲಿಗೆ ’ವೋಟ್ ಆನ್ ಅಕೌಂಟ್ ಮಂಡಿಸಬೇಕಾಗುತ್ತದೆ. ಆದರೆ, ೨೦೦೪ರಲ್ಲಿ ಆಗಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆಗೂ ಮುಂಚೆ ಬಜೆಟ್ ಮಂಡಿಸಿದರು. ನಂತರ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಹೊಸ ಬಜೆಟ್ ಮಂಡಿಸಿದರು. ನಂತರ ಅಧಿಕಾರದಲ್ಲಿರುವ ಪ್ರತಿ ಸರಕಾರವು ಚುನಾವಣೆ ವರ್ಷದಲ್ಲಿ ಬಜೆಟ್ ಮಂಡಿಸುವ ಕೆಟ್ಟ ಪರಂಪರೆ ಮುಂದುವರಿಸುತ್ತಾ ಬರಲಾಗಿದೆ. ಈಗಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಎರಡು ತಿಂಗಳ ನಂತರ ಅದರ ಆಸ್ತಿತ್ವ ಇರದ ಚುನಾವಣಾ ಗಿಮಿಕ್ ಆದ ಬಜೆಟ್‌ನ್ನು ಮಂಡಿಸಿದ್ದಾರೆ. ಇದನ್ನು ಬಿಜೆಪಿ ಪಕ್ಷದ ಪ್ರಣಾಳಿಕೆ ಎಂದು ಕರೆಯುವುದು ಸೂಕ್ತ.

ಪ್ರತಿ ಬಜೆಟ್ ಮಂಡನೆಯ ನಂತರ ಅದರ ಖರ್ಚು ಮತ್ತು ವೆಚ್ಚ, ಹಂಚಿಕೆ, ವಿತ್ತೀಯ ಕೊರತೆ ಇತ್ಯಾದಿಗಳ ಚರ್ಚೆ ನಡೆಯುತ್ತದೆ. ಆದರೆ ಬಜೆಟ್ ಮಂಡಿಸುವ ಸರಕಾರವು ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರುತ್ತದೆಯೇ ಎನ್ನುವ ಮುಖ್ಯ ಪ್ರಶ್ನೆಯೇ ಚರ್ಚೆಗೆ ಬರುವುದಿಲ್ಲ. ಈ ಬಜೆಟ್ ಎನ್ನುವುದು ಅಂದಾಜು ಲೆಕ್ಕಾಚಾರ ಮಾತ್ರ. ಆದರೆ ಒಂದು ವರ್ಷದ ನಂತರ ಪ್ರಕಟವಾಗುವ ಪರಿಷ್ಕೃತ ಅಂದಾಜು (ಆರ್‌ಇ) ಆಯಾ ವರ್ಷದ ಬಜೆಟ್‌ನ ನಿಜವಾದ ಹಣೆಬರಹವಾಗಿರುತ್ತದೆ. ಎರಡು ವರ್ಷಗಳ ನಂತರ ಮಂಡಿಸುವ ಬಜೆಟ್‌ನಲ್ಲಿ ಎರಡು ವರ್ಷ ಹಿಂದಿನ ಬಜೆಟ್‌ನ ಅಸಲಿಯತ್ತು ಗೊತ್ತಾಗುತ್ತದೆ. ಅಂದರೆ 2203-24ರ ಬಜೆಟ್‌ನಲ್ಲಿ 2021-22ರ ಬಜೆಟ್‌ನ ಕರಾರುವಕ್ಕಾದ ಅಂಕಿಅಂಶಗಳು ಗೊತ್ತಾಗುತ್ತದೆ. ಆದರೆ ಆ ವರ್ಷದ ಬಜೆಟ್‌ನ ಅಂದಾಜು ಮತ್ತು ನಂತರ ಲಭ್ಯವಾಗುವ ಅಸಲಿ ಆಯವ್ಯಯವನ್ನು ತೌಲನಿಕವಾಗಿ ನೋಡಿ ಚರ್ಚೆಯಾಗುವುದಿಲ್ಲ. ಪ್ರತಿ ವರ್ಷ ಮಂಡಿತವಾದ ಬಜೆಟ್ ಕುರಿತು ಚರ್ಚೆಯಲ್ಲಿ ಕಳೆದ ಎರಡು ವರ್ಷಗಳ ಆಶ್ವಾಸನೆಗಳು, ಹಂಚಿಕೆ, ಯೋಜನೆಗಳ ವಾಸ್ತವವೇನು ಎನ್ನುವುದು ಚರ್ಚೆಗೆ ಬರದೆ ಹಿನ್ನಲೆಗೆ ಸರಿಯುತ್ತದೆ.

ಉದಾಹರಣೆಗೆ 2020-21ರ ಬಜೆಟ್‌ನಲ್ಲಿ ಜಿಎಸ್‌ಟಿ ಪರಿಹಾರ 16,116 ಕೋಟಿ ಎಂದು ಅಂದಾಜಿಸಿದ್ದರು. ಆದರೆ ಕೇಂದ್ರ ನೀಡಿದ್ದು 13,798 ಕೋಟಿ. ಶೇ.14ರಷ್ಟು ಕಡಿತವಾಗಿತ್ತು. ಈ ಬಾರಿಯ ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ 2023-24ರಲ್ಲಿ ಜಿಎಸ್‌ಟಿ ಪಾಲು 37,252 ಕೋಟಿ ಎಂದು ಅಂದಾಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಂದಾಜಿಸಿದ ಜಿಎಸ್‌ಟಿ ಪಾಲಿನಲ್ಲಿ ಶೇ.14ರಷ್ಟು ಕಡಿತವಾದದ್ದರ ಬಗ್ಗೆ ಮಾತಿಲ್ಲ. ಈ ಬಾರಿಯೂ ನೀವು ಹೇಳುವ ಮೊತ್ತ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ ಎನ್ನುವ ಖಾತರಿ ಏನು ಎಂದು ಯಾರೂ ಕೇಳುತ್ತಿಲ್ಲ. 2022-23ರ ಬಜೆಟ್‌ನಲ್ಲಿ ಕೇಂದ್ರ ಸರಕಾರದ ಸಹಾಯ ಅನುದಾನದ ಪ್ರಮಾಣ ಶೇ.6ರಷ್ಟು ಎಂದು ಅಂದಾಜಿಸಿದ್ದರು. ಆದರೆ 2023-24ರಲ್ಲಿ ಅದು ಶೇ.4ಕ್ಕೆ ಕುಸಿದಿದೆ. ಇದನ್ನು ಪ್ರಶ್ನಿಸಬೇಕಲ್ಲವೇ?

ಈ ಬಾರಿ ಬಜೆಟ್‌ನಲ್ಲಿ 77,750 ಕೋಟಿ ವಾರ್ಷಿಕ ಸಾಲ ಮತ್ತು ಒಟ್ಟು ಸಾಲ 5.64 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. 2020-21ರಲ್ಲಿ ವಾರ್ಷಿಕ ಸಾಲ 84,527 ಕೋಟಿ, 2021-22ರಲ್ಲಿ 80,767 ಕೋಟಿ, 2022-22ರಲ್ಲಿ 67,000 ಕೋಟಿ ಎಂದು ಅಂದಾಜಿಸಿದ್ದರು. ಅಂದರೆ ಒಟ್ಟು 3.10 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇದರ ಹೊರತಾಗಿ 2021ರಲ್ಲಿ ಬಜೆಟ್‌ನ ಹೊರಗೆ ಅಂದರೆ ಸಾರ್ವಜನಿಕ ಉದ್ಯಮಗಳ ಮೂಲಕ 10,000 ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಈ ಸಾಲವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದಿಲ್ಲ.2020-21 ರಲ್ಲಿ 23,620 ಕೋಟಿ ಬಡ್ಡಿ, 2021-22ರಲ್ಲಿ 24,983 ಕೋಟಿ, 2022-23ರಲ್ಲಿ 29,394 ಕೋಟಿ ಬಡ್ಡಿ ಕಟ್ಟಿದ್ದಾರೆ. 2023-24ರಲ್ಲಿ 34,023 ಕೋಟಿ ಬಡ್ಡಿ ಎಂದು ಅಂದಾಜಿಸಿದ್ದಾರೆ. ಅಂದರೆ ಒಟ್ಟು 1.12 ಲಕ್ಷ ಕೋಟಿ ಬಡ್ಡಿ ಕಟ್ಟಲಾಗಿದೆ. 2019-20ರಲ್ಲಿ ಶೇ.10.6ರಷ್ಟಿದ್ದ ಬಡ್ಡಿಯ ಪ್ರಮಾಣವು 2023-24ರ ಹೊತ್ತಿಗೆ ಶೇ.15.1ರಷ್ಟಾಗಿದೆ. ಮತ್ತೊಂದೆಡೆ 2021-22ರಲ್ಲಿ ಯೋಜನೇತರ ವೆಚ್ಚ 97,150. 2022-23 ಪರಿಷ್ಕೃತ ಯೋಜನೇತರ ವೆಚ್ಚ 1.16ಲಕ್ಷ ಕೋಟಿಯಾಗಿದೆ. 2023-24ರಲ್ಲಿ ಯೋಜನೇತರ ವೆಚ್ಚ 20.25 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಮೂರು ವರ್ಷಗಳ ಹಿಂದೆ ಶೇ.45ರಷ್ಟಿದ್ದ ಯೋಜನೇತರ ವೆಚ್ಚ 2023-24ರ ಹೊತ್ತಿಗೆ ಶೇ.60ರಷ್ಟಾಗಿದೆ. ಇದೇ ಸಂದರ್ಭದಲ್ಲಿ 2021-22ರಲ್ಲಿ ಯೋಜನಾಧಾರಿತ ವೆಚ್ಚ 74,879 ಕೋಟಿ, 2022-23 ಪರಿಷ್ಕೃತ ಯೋಜನಾಧಾರಿತ ವೆಚ್ಚ 69,766 ಕೋಟಿಯಾಗಿದೆ. 2023-24ರಲ್ಲಿ ಯೋಜನಾಧಾರಿತ ವೆಚ್ಚ 71,570 ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಯೋಜನಾಧಾರಿತ ವೆಚ್ಚ ಮೂರು ವರ್ಷಗಳಲ್ಲಿ ಶೇ.3ರಷ್ಟು ಕಡಿಮೆಯಾಗಿದೆ. ಮೇಲಿನ ಅಂಕಿಅಂಶಗಳನ್ನು ಒಂದಕ್ಕೊಂದು ತಾಳೆಯಾಗುವಂತೆ ಜೋಡಿಸಿಕೊಂಡಾಗ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಕೇಳಬೇಕಿರುವ ಪ್ರಶ್ನೆಗಳು

ಇದನ್ನೂ ಓದಿ: ಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಆದಾಯ ಹೆಚ್ಚಾಗಿದೆ ಎಂದು ಹೇಳಿಕೊಳ್ಳುವ ನೀವು ಸಾಲ ಮತ್ತು ಬಡ್ಡಿಯ ಪ್ರಮಾಣ ಹೆಚ್ಚು ಮಾಡಿದ್ದು ಯಾಕೆ?

ಆದಾಯ ಹೆಚ್ಚಾಗಿದ್ದರೆ ಯೋಜನಾಧಾರಿತ ವೆಚ್ಚ ಕಡಿಮೆಯಾಗಿದ್ದು ಯಾಕೆ? ಶಿಕ್ಷಣಕ್ಕೆ ಬಜೆಟ್ ವೆಚ್ಚದ ಶೇ.12 ಮತ್ತು ಜಿಡಿಪಿಯ ಶೇ.2.25ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುತ್ತಿರುವಿರಿ? ಆರೋಗ್ಯಕ್ಕೆ ಬಜೆಟ್ ವೆಚ್ಚದ ಶೇ.4ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುವಿರಿ?

ರಾಜ್ಯದಲ್ಲಿ 2.4 ಲಕ್ಷ ಹುದ್ದೆಗಳು ಖಾಲಿಯಿವೆ. ಅಲ್ಲಿ ನೇಮಕಾತಿ ಮಾಡಿಕೊಳ್ಳದೆ ನಿರುದ್ಯೋಗಿಗಳನ್ನು ಸೃಷ್ಟಿಸುವ ನೀವು ಮತ್ತೊಂದೆಡೆ ನಿರುದ್ಯೋಗಿಗಳಿಗೆ 2000 ಸ್ಟೈಫಂಡ್ ಕೊಡುತ್ತೇವೆ ಎಂದು ಕೊಚ್ಚಿಕೊಳ್ಳುವುದು ಜೀವವಿರೋಧಿಯಲ್ಲವೇ? ಮುಖ್ಯವಾಗಿ ಒಂದು ಕಾಲು ಭಾಗದಷ್ಟು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೆ ನಿಮ್ಮ ಯೋಜನೇತರ ವೆಚ್ಚ ಹೆಚ್ಚಾಗುತ್ತದೆ. ಅದನ್ನು ಸರಿದೂಗಿಸಲು ಆದಾಯ ಮೂಲಗಳಿಲ್ಲ. ಈ ಸತ್ಯವನ್ನು ಹೇಳಲು ನಿಮಗೆ ಧೈರ್ಯವಿಲ್ಲ.

ವೆಚ್ಚ ಕಡಿಮೆ ಮಾಡಲು ಸಬ್ಸಿಡಿಗಳನ್ನು ನಿಲ್ಲಿಸುವುದೊಂದೇ ಸರಕಾರಗಳು ಕಂಡುಕೊಂಡ ಹೊಸ ಪರಿಹಾರ ಮಾರ್ಗವಾಗಿದೆ. ಇದು ಬಜೆಟ್‌ನಲ್ಲಿ ಪ್ರತಿಫಲನವಾಗಿದೆ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...