- Advertisement -
- Advertisement -
ಕರ್ತಾರ್ ಪುರ ಸಾಹೀಬ್ ಕಾರಿಡಾರ್ ಯೋಜನೆ ಹಿನ್ನೆಲೆ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವೆಂದು ಭಾರತ ಹೇಳಿದೆ. ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸಿಖ್ಖ್ ಯಾತ್ರಾರ್ಥಿಗಳಿಗೆ ವಿಧಿಸುವ ಲೇವಿ ಸೇವಾ ಶುಲ್ಕ 20 ಡಾಲರ್ ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಿಖ್ಖರ ಪವಿತ್ರ ಸ್ಥಳ ಗುರುದ್ವಾರಕ್ಕೆ ತೆರಳಲು ಸೂಕ್ತ ಮಾರ್ಗವಿಲ್ಲದೇ ಸಮುದಾಯದ ಜನ ಪರದಾಡುವಂತಾಗಿದೆ. ಗುರುದ್ವಾರದ ಕರ್ತಾರ್ ಪುರ ಸಾಹೀಬ್ ಗೆ ವೀಸಾ ಮುಕ್ತ ಪ್ರವೇಶ ನೀಡಬೇಕು ಎಂಬುದು ಯಾತ್ರಾರ್ಥಿಗಳ ಬಹುದಿನದ ಬೇಡಿಕೆಯಾಗಿದೆ. ಈ ಹಿನ್ನೆಲೆ ನವೆಂಬರ್ 12ಕ್ಕಿಂತ ಮೊದಲೇ ಕಾರಿಡಾರ್ ನ್ನು ಕಾರ್ಯಗತಗೊಳಿಸುವ ಒಪ್ಪಂದಕ್ಕೆ ಅಕ್ಟೋಬರ್ 23ರಂದು ಸಹಿ ಹಾಕಲು ಭಾರತ ಸಿದ್ಧವಿದೆ ಎಂದು ಒಪ್ಪಿಕೊಂಡಿದೆ.