Homeಚಳವಳಿಕಸಾಪ ಅಧ್ಯಕ್ಷರ ಹೊಸ ವಿವಾದ: ಸದಸ್ಯರಾದರಷ್ಟೇ ಪುಸ್ತಕ ಮಳಿಗೆಗೆ ಅವಕಾಶ!

ಕಸಾಪ ಅಧ್ಯಕ್ಷರ ಹೊಸ ವಿವಾದ: ಸದಸ್ಯರಾದರಷ್ಟೇ ಪುಸ್ತಕ ಮಳಿಗೆಗೆ ಅವಕಾಶ!

ಕಸಾಪ ಸದಸ್ಯರಾದರಷ್ಟೇ ಸಮ್ಮೇಳನದ ಪ್ರತಿನಿಧಿಯಾಗಲು, ಪುಸ್ತಕ ಮಳಿಗೆ ಪಡೆಯಲು ಸಾಧ್ಯ- ಇದು ತುಘಲಕ್ ದರ್ಬಾರ್‌ ಎಂದ ಪ್ರಕಾಶಕರು

- Advertisement -
- Advertisement -

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಬಾರಿ ಮುಂದೂಡಿಕೆಗಳೊಂದಿಗೆ ಕೊನೆಗೂ 2023ರ ಜನವರಿ 6,7,8 ರಂದು ಹಾವೇರಿಯಲ್ಲಿ ನಡೆಸಲು ತಯಾರಿಗಳು ನಡೆದಿವೆ. ಸಾಮರಸ್ಯದ ಭಾವ – ಕನ್ನಡದ ಜೀವ ಎಂಬ ಧ್ಯೇಯವಾಕ್ಯದೊಂದಿಗೆ ಕನ್ನಡಿಗರೆಲ್ಲರೂ ಸೇರಿ ‘ಕನ್ನಡಿಗರ ಹಬ್ಬ’ ಎಂಬ ಭಾವನೆಯಿಂದ ಒಗ್ಗಟಾಗಿ ಆಚರಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಕಸಾಪ ಸದಸ್ಯರಾದರಷ್ಟೇ ಸಮ್ಮೇಳನದ ಪ್ರತಿನಿಧಿಯಾಗಲು, ಪುಸ್ತಕ ಮಳಿಗೆ ಪಡೆಯಲು ಸಾಧ್ಯ, ಅದು ಕೂಡ ಮೊಬೈಲ್ ಆಪ್ ಮೂಲಕ ಮಾತ್ರ ಪಡೆಯಬಹುದು ಎಂಬ ನೂತನ ನಿಯಮವನ್ನು ಜಾರಿಗೊಳಿಸುವ ಮೂಲಕ ಒತ್ತಾಯಪೂರ್ವಕವಾಗಿ ಸದ್ಯಸ್ಯತ್ವ ಮಾಡಿಸಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.

ಇನ್ನು ಪತ್ರಿಕಾ ಪ್ರಕಟಣೆ ಹೊರಡಿಸುವಾಗಲೂ ನಾಡೋಜ ಡಾ.ಮಹೇಶ ಜೋಶಿಯವರ ಹೆಸರು ಮೇಲುಗಡೆ ಮತ್ತು ಕಸಾಪ ಹೆಸರು ಕೆಳಗಡೆ ಬರುವಂತೆ ಲೆಟರ್ ಹೆಡ್ ರಚಿಸಲಾಗಿದೆ. ಅದಕ್ಕೆ “ಮಹೇಶ ಜೋಶಿ ಮೊದಲೋ, ಕನ್ನಡ ಸಾಹಿತ್ಯ ಪರಿಷತ್ತು ಮೊದಲೋ? ನಾಡೋಜ ದೊಡ್ಡವರೋ? ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡದೋ”ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಎಂಬುದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಖ್ಯಾತಿ ಪಡೆದಿತ್ತು. ಆದರೆ ಅದು ಇತ್ತೀಚಿನ ದಿನಗಳಲ್ಲಿ ಕೇಂದ್ರೀಕರಣಗೊಂಡು ಕೆಲವೇ ಕೆಲವರು ಸ್ವತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದಕ್ಕೆ ಇಂಬು ಕೊಡುವಂತೆ ಅಧ್ಯಕ್ಷರಾದ ಮಹೇಶ್ ಜೋಶಿಯವರು ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ “30 ಸಾವಿರಕ್ಕೂ ಹೆಚ್ಚು ಹೆಬ್ಬೆಟ್ಟುಗಳು ಕಸಾಪದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಸದಸ್ಯ ಸ್ಥಾನದಿಂದ ತೆಗೆಯಬೇಕು” ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಲು ಹೋಗಿ ಭಾರೀ ವಿರೋಧದ ನಂತರ ಹಿಂದ್ಸರಿದಿದ್ದರು. ಈಗ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಬೇಕಾದರೆ ಕಡ್ಡಾಯವಾಗಿ ಸದಸ್ಯರಾಗಬೇಕು ಎಂಬ ನಿಯಮ ರೂಪಿಸುವ ಮೂಲಕ ಪರಿಷತ್ತಿನ ಘನತೆಗೆ ಚ್ಯುತಿ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ನವೆಂಬರ್ 30 ರಂದು ನಾಡೋಜ ಡಾ.ಮಹೇಶ್ ಜೋಶಿಯವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಮ್ಮೇಳನದ ಪ್ರತಿನಿಧಿಯಾಗಿ ನೋಂದಣಿ ಮಾಡಿಸುವುದನ್ನು ಕಡ್ಡಾಯವಾಗಿ ಮೊಬೈಲ್ ಆಪ್ (ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಮೂಲಕ ಮಾತ್ರವೇ ಮಾಡಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರತಿನಿಧಿಯಾಗಿ ಭಾಗವಹಿಸಲು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಯಸ್ಯತ್ವ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಪುಸ್ತಕ ಮಳಿಗೆ ನೋಂದಣಿ

ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಪ್ರಕಾಶಕರು, ಮಾರಾಟಗಾರರು ವೈಯಕ್ತಿಕವಾಗಿ ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ವಾಣಿಜ್ಯ ಮಳಿಗೆಗಳನ್ನು ತೆರೆಯಲು ಇಚ್ಛಿಸುವವರಿಗೂ ಸಹ ಇದೇ ನಿಯಮ ಅನ್ವಯವಾಗಲಿದೆ. ಅಲ್ಲದೇ ಮೊಬೈಲ್ ಆಪ್ ಮೂಲಕ ಮಾತ್ರವೇ ಮಳಿಗೆಗಳ ನೋಂದಣಿ ಮಾಡಬೇಕೆಂದು ತೀರ್ಮಾನಿಸಲಾಗಿದೆ.

ಓಪನ್ ಆಗದ ಮೊಬೈಲ್ ಆಪ್

ಸಾಮಾನ್ಯವಾಗಿ ಮೊದಲು ಪುಸ್ತಕ ಮಳಿಗೆಗಾಗಿ ಬುಕಿಂಗ್ ಮಾಡಿದವರಿಗೆ ಮೊದಲ ಆದ್ಯತೆಯಂತೆ ಸಭಾಂಗಣಕ್ಕೆ ಹತ್ತಿರದ ಪುಸ್ತಕ ಮಳಿಗೆ ಮತ್ತು ವಾಣಿಜ್ಯ ಮಳಿಗೆಗಳನ್ನು ನೀಡಲಾಗುತ್ತದೆ. ಅದರಂತೆ ಈ ಬಾರಿ ಮೊಬೈಲ್ ಆಪ್ ನಲ್ಲಿ ಮತ್ತು ಸದಸ್ಯರಾದವರಿಗೆ ಮಾತ್ರ ಬುಕಿಂಗ್ ಮಾಡಲು ಅವಕಾಶ ಎಂಬ ನಿಯಮ ಜಾರಿಯಾದ್ದರಿಂದ ಹಲವಾರು ಜನ ಪ್ರಕಾಶಕರು, ಪುಸ್ತಕ ಮಾರಾಟಗಾರರು ಬುಕಿಂಗ್ ಮಾಡಲು ಯತ್ನಿಸುತ್ತಿದ್ದರೂ ಸಹ ಮೊಬೈಲ್ ಆಪ್ ಓಪನ್ ಆಗದ ಕಾರಣ ಬುಕಿಂಗ್ ಮಾಡಲು ಸಾಧ್ಯವಾಗಿಲ್ಲ.

ಇನ್ನು ಕೆಲವು ಪ್ರಕಾಶಕರು ಮತ್ತು ಮಾರಾಟಗಾರರು ಸದಸ್ಯತ್ವ ಕಡ್ಡಾಯಗೊಳಿಸಿದ್ದರಿಂದ ಅನಿವಾರ್ಯವಾಗಿ ಮೊಬೈಲ್ ಆಪ್ ಮೂಲಕ ಸದಸ್ಯತ್ವ ಮಾಡಿಸಿಕೊಂಡಿದ್ದಾರೆ. ಆದರೆ ಪುಸ್ತಕ ಮಳಿಗೆ ಬುಕಿಂಗ್ ಮಾಡಲು ಮೊಬೈಲ್ ಆಪ್ ಕಾರ್ಯನಿರ್ವಹಿಸದ ಕಾರಣ ಕಾದು ಕುಳಿತಿದ್ದಾರೆ. ಡಿಸೆಂಬರ್ 1 ರ ಮಧ್ಯರಾತ್ರಿ 12 ಗಂಟೆಯಿಂದಲೇ ಮೊಬೈಲ್ ಆಪ್ ನಲ್ಲಿ ಬುಕಿಂಗ್ ಮಾಡಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ 18 ಗಂಟೆ ಕಳೆದರೂ ಸಹ ಆಪ್ ಕಾರ್ಯನಿರ್ವಹಿಸಿಲ್ಲ!

ಆಧುನಿಕ ತುಘಲಕ್ ವ್ಯವಸ್ಥೆಯಾಗಿದೆ: ಲೇಖಕ, ಪ್ರಕಾಶಕ ಬಸವರಾಜ ಸೂಳಿಭಾವಿ ಆಕ್ರೋಶ

ಕಸಾಪ ರಾಜಾಶ್ರಯ ಮತ್ತು ಪ್ರಭುತ್ವದ ನೆರಳಿನಲ್ಲಿದ್ದರೂ ಸಹ ಇದುವರೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿತ್ತು. ಜನರು ಅದರ ಸದಸ್ಯತ್ವ ಪಡೆದಿರಲೇಬೇಕೆಂಬ ಯಾವುದೇ ನಿಯಮವಿಲ್ಲದೆ, ಎಲ್ಲಾ ಜನರು ಸಮ್ಮೇಳನದ ಪ್ರತಿನಿಧಿಯಾಗಬಹುದಿತ್ತು. ಆದರೆ ಈಗ ಮಹೇಶ್ ಜೋಶಿಯವರು ಈ ನಿಯಮ ಹೇರಿರುವುದು ಒಂದು ರೀತಿಯ ಆಧುನಿಕ ತುಘಲಕ್ ದರ್ಬಾರಿನ ನಡಾವಳಿಯನ್ನು ನೆನಪಿಗೆ ತರುತ್ತದೆ ಎನ್ನುತ್ತಾರೆ ಲಡಾಯಿ ಪ್ರಕಾಶನದ ಮುಖ್ಯಸ್ಥರು ಮತ್ತು ಕನ್ನಡದ ಲೇಖಕರಾದ ಬಸವರಾಜ ಸೂಳಿಭಾವಿಯವರು.

ಕಸಾಪ ಸದಸ್ಯರು ಮಾತ್ರ ಪುಸ್ತಕ ಮಳಿಗೆ ಹಾಕಬೇಕೆಂಬ ನಿಯಮ ಕನ್ನಡದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದುವರೆಗೂ ನೂರಾರು ಪ್ರಕಾಶಕರು ಕನ್ನಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಸಾಪ ಕನ್ನಡದ ಬೆಳವಣಿಗೆಗೆ ಎಷ್ಟು ಶ್ರಮಿಸಿದೆಯೋ ಅದರ ನೂರು ಪಟ್ಟು ಹೆಚ್ಚಾಗಿ ಕನ್ನಡದ ಪ್ರಕಾಶಕರು ಶ್ರಮಿಸಿದ್ದಾರೆ. ಇವತ್ತು ಕನ್ನಡ ಉಳಿದಿದೆ, ಬೆಳೆದಿದೆ, ನಾಡನ್ನು ದಾಟಿ ಹಬ್ಬಿದೆ ಎಂದರೆ ಅದಕ್ಕೆ ನಾಡಿನ ಪ್ರಕಾಶಕರು, ಲೇಖಕರು ಕಾರಣವೇ ಹೊರತು ಕಸಾಪ ನಿಮಿತ್ತ ಮಾತ್ರ. ಕನ್ನಡದ ಪ್ರಕಾಶಕರಿಗೆ ಹೋಲಿಸಿದರೆ ಅದೊಂದು ಸಣ್ಣ ಸಂಸ್ಥೆ. ಅಂತಹ ಪ್ರಕಾಶಕರಿಗೆ ಈ ರೀತಿಯ ನಿಯಮ ಹೇರುವುದರಿಂದ ಅನೇಕ ಪ್ರಕಾಶರು ಈ ಸಮ್ಮೇಳನದಿಂದ ಹೊರಗುಳಿಯುವ ಅಪಾಯವಿದ ಎಂದರು.

ಇನ್ನೊಂದೆಡೆ ಪ್ರತಿನಿಧಿಯಾಗಲು ಸದಸ್ಯತ್ವ ಪಡೆದಿರಲೇಬೇಕೆಂಬ ನಿಯಮದಿಂದ ಸಾವಿರಾರು ಕನ್ನಡಿಗರು ಸಮ್ಮೇಳನದಿಂದ ಹೊರಗುಳಿಯಬಹುದು. ಕಸಾಪ ಅಧ್ಯಕ್ಷರಾಗಿ ಮಹೇಶ್ ಜೋಶಿ ಆಯ್ಕೆಯಾದ ನಂತರವೇ ಈ ರೀತಿಯ ಕನ್ನಡದ ಹಿತಾಸಕ್ತಿಗೆ ವಿರುದ್ಧವಾದ ಕೆಲಸಗಳು ಆರಂಭವಾಗಿವೆ. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ, ಈ ಕೂಡಲೇ ಈ ನಿಯಮಗಳು ರದ್ದಾಗಬೇಕು ಎಂದು ಆಗ್ರಹಿಸಿದರು.

ಇದೊಂದು ಬ್ಲಾಕ್‌ಮೇಲ್ ತಂತ್ರ – ಎನ್ ಧನಂಜಯ್

“ಕಸಾಪದ ಕನ್ನಡಪರ ಕೆಲಸಗಳನ್ನು ನೋಡಿ, ಮೆಚ್ಚಿ ನಾವು ಅದರ ಸದಸ್ಯರಾಗಬೇಕೆ ಹೊರತು, ಈ ರೀತಿ ಒತ್ತಾಯಪೂರ್ವಕವಾಗಿ ಆಗುವುದು ಅರ್ಥಹೀನ” ಎನ್ನುತ್ತಾರೆ ಜೀರುಂಡೆ ಪ್ರಕಾಶನದ ಎನ್.ಧನಂಜಯ್‌ರವರು.

ಕಸಾಪ ಅತ್ಯುತ್ತಮವಾಗಿ ಕೆಲಸ ಮಾಡಿದರೆ, ಅತ್ಯುತ್ತಮ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಪ್ರಕಟಿಸಿದರೆ, ಪಾರದರ್ಶಕವಾಗಿ ಎಲ್ಲರನ್ನು ಒಳಗೊಂಡು ಕೆಲಸ ಮಾಡಿದರೆ, ಕನ್ನಡತನವನ್ನು ಎತ್ತಿ ಹಿಡಿಯುವ ಮೂಲಕ ಕನ್ನಡಿಗರನ್ನು ತಲುಪಿದರೆ ಜನರು ತಾವಾಗಿಯೇ ಕಸಾಪದ ಸದಸ್ಯರಾಗುತ್ತಾರೆ. ಆ ರೀತಿಯ ಸದಸ್ಯರಾಗುವ ಆಯ್ಕೆ ಪ್ರತಿಯೊಬ್ಬರಿಗೂ ಇರಬೇಕೆ ಹೊರತು ಈ ರೀತಿ ಸಮ್ಮೇಳನವನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ರೀತಿಯಲ್ಲಿ ಮಾಡಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಈ ವಿವಾದದ ಕುರಿತು ಪ್ರತಿಕ್ರಿಯೆ ಪಡೆಯಲು ಕಸಾಪ ಅಧ್ಯಕ್ಷರಾದ ಡಾ.ಮಹೇಶ್ ಜೋಶಿಯವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಕರೆಗೆ ಉತ್ತರಿಸಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಅದನ್ನು ಅಪ್ಡೇಟ್ ಮಾಡಲಾಗುವುದು.

ಇದನ್ನೂ ಓದಿ; ತೀವ್ರ ಕೇಂದ್ರೀಕರಣ ಆರೋಪ; ಸರ್ಕಾರಿ ಸಂಸ್ಥೆಯಾಗುತ್ತಿದೆಯೇ ’ಕಸಾಪ’?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶರಣಾರ್ಥಿಗಳು.
    ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯದವರು ಸಮ್ಮೇಳನದಲ್ಲಿ ಭಾಗವಹಿಸುವಂತಿಲ್ಲವೆ…?
    ಇದನ್ನು ಸ್ಥಾಪಿಸಿದ ಮಹಾರಾಜರು ರಾಜ ಆಡಳಿತದಿಂದ ದೂರ ಇಟ್ಟಿದ್ದರು ಎನ್ನುವುದು ಐತಿಹಾಸಿಕ ಸತ್ಯ.
    ಈಗೇಕೆ ಈ ಪಕ್ಷ ನಿಷ್ಟೆಯ ಮಾತುಗಳು.

    ಒಂದು ಪಕ್ಷಕ್ಕೆ ಸೇರಿದವರು ಬೇರೆ ಪಕ್ಷದವರು ಮಾಡುವ ಯಾವುದೆ ಸಾರ್ವಜನಿಕ ಉತ್ಸವದಲ್ಲಿ ಭಾಗವಹಿಸುವುದಿಲ್ಲ. ಭಾಗವಹಿಸ ಬಾರದು ಎನ್ನುವುದು ಅಲಿಖಿತ ಶಾಸನ .

    ಹಾಗಾದರೆ ವೇದಿಕೆಯ ಮೇಲೆ ರಾರಾಜಿಸುವವರೆಲ್ಲರೂ ಕ.ಸಾ.ಪ ಸದಸ್ಯರು ಮಾತ್ರವೆ….?

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...