Homeಅಂಕಣಗಳುಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

ಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

- Advertisement -
- Advertisement -

ವಾಟಿಸ್ಸೆ ಬಂದ ಕೂಡಲೆ ಜುಮ್ಮಿ ಏನೋ ಹೊಳೆದಂತೆ.

“ಲೇ ವಾಟಿಸ್ಸೆ ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ” ಎಂದಳು.

“ನಿನಿಗೇನಾಯ್ತಕ್ಕ ಇಂತ ಮಾತಾಡ್ತೀ.”

“ಪ್ರಪಂಚನೆ ಹೆದರಿಕಂಡು ಕುಂತದೆ ಇವುಳಿಗೆ ವಳ್ಳೆದಾಯ್ತಂತೆ ಇದಕೇನೇಳ್ತಿಯಪ್ಪ” ಎಂದ ಉಗ್ರಿ.

“ಅಕ್ಕನೆ ಹೇಳ್ತಳೆ ಬುಡು. ಅದೇನೇಳಕ್ಕ.”

“ನಮ್ಮೂರು ಮಂದ್ಲಿದ್ದಂಗಾಯ್ತು ಕಂಡ್ಳ.”

“ಯಂಗೇ ಅಂತ.”

“ಹೆಚ್ಚುಕಮ್ಮಿ ಇಪ್ಪತ್ತು ಮನೆ ಬಾಗಲಾಕಿದ್ದೊ ಕಂಡ್ಳ, ಅವುರ್ಯಲ್ಲ ಬೆಂಗಳೂರು ಸೇರಿಕಂಡಿದ್ರು. ಈಗ್ಯಲ್ಲ ಬಂದು ಬಾಗಲತಗದವುರೆ ಕತ್ಲೆ ಮನೆ ಬೆಳಕಾದೊ.”

“ಓಟರ್‍ಲಿಸ್ಟು ಪಿಲಪ್ಪಾದ ರಾಜಕಾರಣಿಯಂಗೆ ಖುಷಿಯಾಗಿದ್ದಿಯಲ್ಲಕ್ಕ. ಜನಕೆ ಇದ್ದ ಜಾಗದಲ್ಲಿ ಕ್ಯಲಸಿರಲಿಲ್ಲ. ಯಲ್ಲ ಬೆಂಗಳೂರಿಗೋಗಿದ್ರು, ಕರೋನಾ ಕಾಯಿಲಗೆ ಹೆದರಿ ತಿರಗ ಊರಿಗೆ ಬಂದವುರೆ ಅಷ್ಟೆಯ.”

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

“ಊರಿಗೆ ಕಳೆ ಬರದು ದುಡಿಯೋಕೈಗೆ ಕ್ಯಲಸಿದ್ದಾಗ ಕಣಕ್ಕ. ಕ್ಯಲಸಿಲ್ದೊರ ಮಕ ನೋಡಕ್ಕಾದತೆ?”

“ಅಲ್ಲಾ ಕಣೊ ವಾಟಿಸ್ಸೆ ರಾಜಕಾರಣಿಗಳಿಗ್ಯಾವ ಕ್ಯಲಸದೊ ಆದ್ರು ಅವುರ ಮಕ ನೋಡು ಯಂಗೆ ಲಕಲಕ ಅಂತ ವಳಿತದೆ” ಎಂದ ಉಗ್ರಿ.

“ಅದೇನೊ ನಿಜ ಆ ಸಿ.ಟಿ ರವಿ ಅನ್ನೊ ಮಿನಿಸ್ಟ್ರಿಗೆ ಪಾಪ ಏನೂ ಕ್ಯಲಸಿಲ್ಲ ಅದ್ಕೆ ಲೇಖನ ಬರಿತ ಕುಂತವುನೆ.”

“ಏನು ಬರದವುನೆ.”

“ನಾವು ಚೀಣಾ ದೇಸದ ಪದಾರ್ಥ ಬಳಸಬಾರ್ದು ನಾವೇ ತಯಾರು ಮಾಡಿಕಬೇಕು ಅಂತ ಬರದವುನೆ.”

“ಅಲ್ಲಾ ಕಣೊ ವಾಟಿಸ್ಸೆ ಅವುನ ಮನೆಲಿರೊ ಅರ್ದಕ್ಕರ್ದ ಪದಾರ್ಥ ಚೀಣಾ ದೇಸದ ಪದಾರ್ಥ. ಅಂತದ್ರಲ್ಲಿ ಲೇಖನ ಬರಿತನೆ ಅಂದ್ರೆ, ಅವುನ ಮನೆಲಿರೊ ಚೀಣಾ ದೇಸದ ಪದಾರ್ಥವ ವರಿಕಾಕಿ ಬೆಂಕಿ ಹಚ್ಚಿ ಅಮ್ಯಾಲೆ ಲೇಖನ ಪಾಕನ ಬರಿಬೇಕಲವೇನೊ.”

“ಬಿಜೆಪಿಗಳೇ ಅಂಗಲವೇನೊ, ಹೇಳದೊಂದು ಮಾಡದೊಂದು. ಯಲ್ಲಾನು ನಾವೇ ತಯಾರು ಮಾಡಿಕಬೇಕು ಅಂದ್ರೆ ಈ ಚೆಡ್ಡಿಗಳ ಕೈಲಿ ಏನಾಯ್ತದಪ್ಪಾ ಅಂದ್ರೇ, ಅವು ಕುಂಕುಮ ಗಂಧವ ಅವೇ ತಯಾರಿಸತ್ತವೆ? ಮಡಿ ಪಂಚೆ, ಟವಲ್ಲು, ಗಂಟೆ, ಮಂಗಳಾರತಿ ತಟ್ಟೆ ಕರ್ಪೂರನು ಬೇಕಾದ್ರೆ ಮಾಡಿಕತ್ತವೆ. ಇನ್ನುಳದಂಗೆ ಪೂಜಾರಿ ಕೈಲಿರೊ ಮೊಬೈಲು, ಗಡಿಯಾರ, ಮಂಗಳಾರತಿ ತಟ್ಟಿಗೆ ಬಿದ್ದ ಕಾಸಿನ ಲೆಕ್ಕ ಬರಿಯೋ ಪೆನ್ನೂ ಕೂಡ ಚೀಣಾ ದೇಸದ್ದೆಯಪ್ಪ ಅಂತದರಲ್ಲಿ ಚೀಣಾ ದೇಸದಿಂದ ಬರೋ ಪದಾರ್ಥವ ತಾವೇ ತಯಾರಿಸಿಕೊಳಕ್ಕಾದತೆ.”

“ಸಿ.ಟಿ ರವಿ ಅಂದ್ರೆ ಅವುನ್ಯಾರ್ಲ.”

“ಇದೇನಕ್ಕ ಹಿಂಕೇಳ್ತಿ ಅವುನು ಚಿಕ್ಕಮಗಳೂರು ಕಡೆ ರಾಜಕಾರಣಿ. ಬಾಬಾಬುಡನ್‍ಗಿರಿಯ ದತ್ತಪೀಠ ಮಾಡಕ್ಕೊಗಿ ಗಲಾಟೆ ಎಬ್ಬಿಸಿ ಎಮ್ಮೆಲ್ಲೆ ಆದೋನು. ಈಗ ಮಂತ್ರಿಯಾಗ್ಯವುನೆ, ಕರೋನಾ ಕಾಯ್ಲದ ಕಾರಣಕ್ಕೆ ಕ್ಯಲಸಕ್ಕೆ ಬಾರದೋನಂಗಾಗ್ಯವುನೆ.”

“ಅದ್ಯಾಕಂಗಾದ.”

“ಅವುನೊಬ್ಬನೆ ಅಂಗಾಗಿಲ್ಲ ಕಣಕ್ಕ ಇಡೀ ಎಡೂರಪ್ಪನ ಸಂಪುಟವೇ ಅಂಗಾಗ್ಯದೆ. ಮಂತ್ರಿಗಳಾಗಿ ಮ್ಯರಿತ ಸನ್ಮಾನ ಮ್ಯರವಣಿಗೆ ದೇಸಭಕ್ತಿ ಬಾಸಣ ಮಾಡಿಕಂಡು ಮೋದಿ ಹೊಗಳಿಕಂಡು ಮ್ಯರಿಯನ ಅಂತ ಇದ್ದೊರಿಗೆ ಶನಿ ವಕ್ರಿಸಿದಂಗೆ ಕರೋನಾ ವಕ್ರಿಸಿಬುಡ್ತು ಹಂಗಾಗಿ ಯಲ್ಲ ಡಲ್ಲಾಗ್ಯವುರೆ.”

“ಎಡೂರಪ್ಪನೆ ಡಲ್ಲಾಗ್ಯವುರೆ.”

“ಅವುನ್ಯಾವತ್ತು ಲವುಲವಿಕೆ ಆಗಿದ್ನೊ ಪಾಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಪೈಲ್ಸ್ ತರ ಶೋಭಾ ಕಾಡಿದ್ಲು, ಈಗ ಕರೋನಾ ಕಾಡ್ತಾ ಅದೆ. ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಕ್ಕೆ ಆಗಲಿಲ್ಲ.”

“ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಿದೋರು ಅಂದ್ರೆ ಸಿದ್ದರಾಮಯ್ಯ, ಕುಮಾರಣ್ಣ ಕಣೊ.”

“ಸಿದ್ದರಾಮಯ್ಯನಿಗಿಂತ ಕುಮಾರಣ್ಣ ಕಣೊ ಎಂಜಾಯ್ ಮಾಡಿದ್ದು.”

“ಅದ್ಯಂಗ್ಲಾ ಎಂದಳು ಜುಮ್ಮಿ.”

“ಕುಮಾರಣ್ಣ ಕ್ಯಲಸದ ಒತ್ತಡ ಜಾಸ್ತಿಯಾಯ್ತು ಅಂದ್ರೆ ರಾಧಿಕನ ಮನೆಗೋಗಿ ಮನಗಿಬುಡತಿದ್ದ. ಆಗ ಎಂ.ಪಿ ಪ್ರಕಾಸಿದ್ರು ಯಲ್ಲನು ನೋಡಿಕಳರು. ಈಗ ಹೋಟ್ಳಲ್ಲಿದ್ದ ಕಣಕ್ಕ ಮುಖ್ಯಮಂತ್ರಿಯಾದೊನು ಹೋಟ್ಳಲ್ಲಿರತರೇನಕ್ಕ ಅದ್ಕೆ ಪವರ್ ಕಳಕಂಡ.”

“ಆ ಹೋಟ್ಳು ರೂಮು ದೆಸೆರೂಮಂತೆ ಕಣೊ. ಅದರಲ್ಲಿದ್ದಾಗ ಮುಖ್ಯಮಂತ್ರಿಯಾದೆ ಅದಕೆ ಅದರೊಳಗಿದ್ದಿನಿ ಅಂದಿದ್ದ.”

“ಸರಿಯಪ್ಪ ಆ ರೂಮಲ್ಲೆ ಇದ್ದಾಗ ಮುಖ್ಯಮಂತ್ರಿಗಿರಿ ಕಳಕಂಡನಲ್ಲ ಅದಕೇನೇಳ್ತನೆ.”

“ಅದನ್ನ ತಗದು ಶಾಸಕರ ಮ್ಯಾಲಾಕ್ತನೆ. ಏನೇ ಆಗ್ಲಿ ಕುಮಾರಣ್ಣ ಅವುರ್ಯಲ್ಲ ಈ ಬಿಜೆಪಿಗಳಷ್ಟು ಕ್ಯಟ್ಟೊರಲ್ಲ ಕಣೊ ಈ ಮುಂಡೆ ಮಕ್ಕಳು ಭ್ಯಳೆಮ್ಯಾಲೆ ಎರಗತಾಯಿರೋ ಮಿಡತೆ ದಂಡಿದ್ದಂಗೆ. ಯಲ್ಲನು ವಕ್ಕತಿಂದ ಸರ್ವನಾಶ ಮಾಡ್ತರೆ ನೋಡ್ತಾಯಿರು.”

“ !?


ಇದನ್ನು ಓದಿ:

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...