Homeಪುಸ್ತಕ ವಿಮರ್ಶೆಕನ್ನಡ ಇಂಗ್ಲಿಷ್ ಡಿಕ್ಷ್‌ನರಿ ರಚಿಸಿದ ಕನ್ನಡದ ಹೆಮ್ಮೆಯ ಕಿಟ್ಟೆಲ್

ಕನ್ನಡ ಇಂಗ್ಲಿಷ್ ಡಿಕ್ಷ್‌ನರಿ ರಚಿಸಿದ ಕನ್ನಡದ ಹೆಮ್ಮೆಯ ಕಿಟ್ಟೆಲ್

- Advertisement -
- Advertisement -

ಕನ್ನಡ ಇಂಗ್ಲಿಷ್ ನಿಘಂಟು, 1894ರಲ್ಲಿ ಪ್ರಕಟವಾದ ಬಹಳ ವಿದ್ವತ್ಪೂರ್ಣ ಮಾತ್ರವಲ್ಲದೇ ಕನ್ನಡದ ಚಿರಸ್ಮರಣೀಯ ಕೃತಿಯಾಯ್ತು. ಜರ್ಮನಿಯ ಟ್ಯುಬಿಗನ್ ವಿಶ್ವವಿದ್ಯಾಲಯ ಕಿಟ್ಟೆಲ್ ರಿಗೆ ಗೌರವ ಡಾಕ್ಟರೇಟ್ ನೀಡಿತು. ಈ ಮೂಲಕ ಕನ್ನಡದ ಕೃತಿಯೊಂದಕ್ಕೆ ಸಂದ ಮೊಟ್ಟ ಮೊದಲ ಡಾಕ್ಟರೆಟ್ ಅದಾಯ್ತು.

ಧರ್ಮ ಪ್ರಚಾರ ಎಂಬ ಮುಖ್ಯ ಕಾರ್ಯಕ್ಕೆ ಪಾದ್ರಿಗಳು ಬಂದರೂ ಅವರು ಮಾಡುವಂತಹ ಉಪಕಾರ್ಯಗಳು ಬಹಳ ಮಹತ್ತರ ಕಾರ್ಯಗಳಾಗಿ ಪರಿಣಮಿಸುತ್ತವೆ. ಕಿಟ್ಟೆಲ್ಲರ ವಿಷಯದಲ್ಲೂ ಅದೇ ಆಗಿದ್ದು. ಕನ್ನಡದ ಬಗ್ಗೆ ಅಪಾರ ಅಭಿಮಾನ ಮತ್ತು ಆಸೆಯಿಂದ ಭಾಷೆ ಕಲಿತರೆಂದು ಕಿಟ್ಟೆಲ್ಲರ ಬಗ್ಗೆ ಪ್ರಶಂಸೆ ನೀಡುತ್ತಾರೆ. ಆದರೆ ಅವರಿಗೆ ಕನ್ನಡ ಕಲಿಕೆ ಅಭಿಮಾನವೋ, ಆಸೆಯೋ ಅಲ್ಲದೇ ಅನಿವಾರ್ಯವಾಗಿತ್ತು. ಮತಪ್ರಚಾರಕರು ತಾವು ಹೋದ ಪ್ರದೇಶದಲ್ಲಿ ನೆಲಸಿ, ಸ್ಥಳೀಯರೊಂದಿಗೆ ಸಂವಹನ ನಡೆಸಲೇ ಬೇಕಾದ ಕಾರಣದಿಂದ ಭಾಷೆಗಳನ್ನು ಕಲಿಯುತ್ತಿದ್ದರು. ಅಲ್ಲಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳನ್ನು ತಿಳಿಯಲು ಭಾಷೆಯ ಕಲಿಕೆ ಮತ್ತು ಪುಸ್ತಕಗಳ ಓದು ಬೇಕಾಗಿರುವುದೇ. ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ವ್ಯಾವಹಾರಿಕವಾಗಿ ಭಾಷೆ ಕಲಿತು ಸುಮ್ಮನಿರುವ ಬದಲು ವಿದ್ವತ್ಪೂರ್ಣ ಗ್ರಂಥಗಳನ್ನು ಓದಿ, ಸಂಶೋಧನೆಗಳನ್ನು ಮಾಡಿ, ನಮ್ಮ ಭಾಷೆಯ ಬಗ್ಗೆ ನಮಗೇ ಹೆಚ್ಚಿನ ಅರಿವನ್ನು ಮೂಡಿಸುವಂತಹ ಕೆಲಸವೆಂದರೆ, ಅದು ಸಾಮಾನ್ಯವಲ್ಲದ ಅವರ ಆಸಕ್ತಿ ಮತ್ತು ಶಕ್ತಿ.

ಪಂಪನಿಂದ ಆರಂಭಗೊಂಡು, ಕೇಶೀರಾಜನ ಒಳಗೊಂಡು, ಕೊಳ್ಳೇಗಾಲದ ನಿಜಗುಣ ಶಿವಯೋಗಿಗಳನ್ನೂ ಸೇರಿದಂತೆ ನೂರಾರು ಕೃತಿಗಳನ್ನು, ಕೃತಿಕಾರರನ್ನು ಅಧ್ಯಯನ ಮಾಡಿ, ಸಂಶೋಧನೆ ನಡೆಸಿ, ಸಾಧಾರವಾಗಿ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆಯುವು ದೆಂದರೆ ಖಂಡಿತವಾಗಿ ನಾವು ಬಹು ಹೆಮ್ಮೆ ಮತ್ತು ಅಭಿಮಾನದಿಂದ ಅವರನ್ನು ಸ್ಮರಿಸಬೇಕಾಗುತ್ತದೆ.

ಒಂದು ವೇಳೆ ಅವರು ತಮ್ಮ 23ರ ಹರೆಯದಲ್ಲಿ 1854ರಲ್ಲಿ ಮಂಗಳೂರಿಗೆ ಬದಲು ಪೋರ್ ಬಂದರಿಗೆ ಹೋಗಿದ್ದರೆ ಗುಜರಾತಿ ಕಲಿಯುತ್ತಿದ್ದರು. ಈಗ ಕನ್ನಡಕ್ಕೆ ಅವರು ನೀಡಿರುವ ಕೊಡುಗೆಗಳೆಲ್ಲವೂ ಗುಜರಾತಿ ಭಾಷೆಗೆ ಸಿಕ್ಕುತ್ತಿತ್ತು. ಹಾಗಾಗಿ, ಅದೃಷ್ಟವನ್ನು ನಂಬದ ನಾನೂ (ಅದಕ್ಕೆ ಪರ್ಯಾಯ ಪದದ ಕೊರತೆಯಿಂದ) ಕಿಟ್ಟೆಲ್ ಕನ್ನಡನಾಡಿಗೆ ಬಂದಿದ್ದು ನಮ್ಮ ಅದೃಷ್ಟ, ಭಾಗ್ಯ ಎನ್ನುತ್ತೇನೆ. 1752 ಪುಟಗಳ ಆ ನಿಘಂಟು ಅಕ್ಷರಶಃ ಪುಟಪುಟವೂ ಸಂಶೋಧನೆ, ವಿದ್ವತ್ತು, ಪರಿಶ್ರಮ, ಆಸಕ್ತಿ ಮತ್ತು ಅಗತ್ಯದಿಂದ ಕೂಡಿವೆ.

ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ, ವಿದ್ವಾಂಸರನ್ನು, ಶಿಕ್ಷಕರನ್ನು, ಸಂಶೋಧಕರನ್ನು ಮತ್ತು ಸಾಮಾನ್ಯ ಜನರನ್ನು ಮಾತಾಸಿಡಿ ಕೊಂಡು, ಅವರಿಂದ ಪದಗಳನ್ನು ಕಲಿತುಕೊಂಡು, ಅದನ್ನು ದಾಖಲಿಸಿ ಕೊಂಡು, ನಿಘಂಟಿಗೆ ಸೇರಿಸುವುದು ಮಾತ್ರವಲ್ಲದೇ ಪ್ರಾದೇಶಿಕ ಉಪಭಾಷೆ ಅಥವಾ ಆಡುನುಡಿಗಳನ್ನೂ (ಡಾಯ್ಲೆಕ್ಟ್) ಕೂಡಾ ಉಲ್ಲೇಖಿಸಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಸರು ಮತ್ತು ಖ್ಯಾತಿಯ ಮಟ್ಟಿಗಾದರೂ ಪರಿಚಯವಿರುವ ಪಂಪನಿರಲಿ, ಎಷ್ಟೋ ಸಂಶೋಧನಾ ವಿದ್ಯಾರ್ಥಿಗಳಿಗೂ ತಿಳಿಯದೇ ಇರುವಂತಹ ಹಲಾಯುಧನ ಅಭಿಧಾನ ರತ್ನಮಾಲ (ಕ್ರಿಸ್ತಶಕ 1000) ಕೂಡಾ ಇವರ ಅಧ್ಯಯನದ ಭಾಗವಾಗಿತ್ತು. ವಿಶೇಷವಾಗಿ ಭಾಷೆಯ ಕುರಿತಾದ ಆಸಕ್ತಿ ಅಷ್ಟು ಉನ್ನತವಾದದ್ದು. ಅಮರಕೋಶ (ಕ್ರಿ.ಶ. 1158), ಅರ್ಗಳನ ಚಂದ್ರಪ್ರಭ ಪುರಾಣ, ಲೀಲಾವತಿ ಪ್ರಬಂಧ, ನಾಗವರ್ಮನ ಕಾವ್ಯಾವಲೋಕನ ಮತ್ತು ಛಂದಸ್ಸು, ಕೇಶಿರಾಜನ ಶಬ್ಧಮಣಿ ದರ್ಪಣ, ಅಭಿನವ ಪಂಪನೆಂದು ಖ್ಯಾತನಾಗಿದ್ದ ನಾಗಚಂದ್ರನ ರಾಮಚಂದ್ರನ ಪುರಾಣ; ಹೀಗೇ ಅವರ ಅಧ್ಯಯನದ ಪಟ್ಟಿ ಸಾಗುತ್ತದೆ. ಈ ಹಿಂದೆ ಹೇಳಿದ್ದೆಲ್ಲಾ ಪ್ರಾಚೀನ ಕನ್ನಡ ಡಾಯ್ಲೆಕ್ಟ್ ಆದರೆ, ಮಧ್ಯಕಾಲದ ಕನ್ನಡದ ಆಡುನುಡಿಯನ್ನು ಗ್ರಹಿಸಲು ಸೋಮೇಶ್ವರ ಶತಕ (ಕ್ರಿ.ಶ. 1300) ದಿಂದ ಪ್ರಾರಂಭಿಸಿ, ಚಿದಾನಂದವಧೂತರ ಜ್ಞಾನಸಿಂಧು (ಕ್ರಿ.ಶ. 1820)ಗೆ, ಅಂದರೆ ಅವರ ಕಾಲದ ಗ್ರಂಥಗಳನ್ನು ಸಮೀಪಿಸುತ್ತಾರೆ.

ಕನ್ನಡದ ಗ್ರಂಥಗಳನ್ನು ಅಧ್ಯಯನ ಮಾಡುವುದು ಮಾತ್ರವಲ್ಲದೇ ಕನ್ನಡದ ಮೇಲೆ ಪ್ರಭಾವ ಬೀರಿರುವಂತಹ ಸಂಸ್ಕೃತ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಕೊಂಕಣಿ ಮತ್ತು ತುಳುವಿನ ಮೂಲಗಳನ್ನೂ ಅವಗಾಹನೆಗೆ ತೆಗೆದುಕೊಳ್ಳದೇ ಬಿಡುವುದಿಲ್ಲ. ಅತ್ಯಂತ ಶಾಸ್ತ್ರೀಯವಾಗಿ ಭಾಷೆಯ ವಿಷಯದಲ್ಲಿ ಕೆಲಸ ಮಾಡುವ ಮಾದರಿಯನ್ನು ಕೊಟ್ಟು ಉಪಕರಿಸಿದ್ದಾರೆ ಕಿಟ್ಟೆಲ್.

ಗ್ರಂಥಗಳಲ್ಲಿರುವ ಪದಗಳು ಮತ್ತು ಆಡು ನುಡಿಗಳಲ್ಲಿರುವ ಉಚ್ಚಾರಣೆಗಳನ್ನೂ ಕೂಡಾ ಗಮನದಲ್ಲಿಟ್ಟುಕೊಂಡು ಸೂಚನೆಗಳನ್ನು ಕೊಡುತ್ತಾರೆ. ಬಹಳ ಮುಖ್ಯವಾಗಿ ಪ್ರಾದೇಶಿಕ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸುವುದು. ಪದಗಳ ಅರ್ಥಗಳನ್ನು ಸ್ಪಷ್ಟೀಕರಿಸಲು ಸ್ಥಳೀಯ ನುಡಿಗಟ್ಟುಗಳನ್ನು, ಗಾದೆಗಳನ್ನು ಕೂಡಾ ಬಳಸುತ್ತಾರೆ. ಹಾಗೆಯೇ ಸ್ವಂತ ವ್ಯಾಕ್ಯಗಳಲ್ಲಿಯೂ ಕೂಡಾ ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ. ಅವರ ಕನ್ನಡದ ಎಲ್ಲಾ ಓದೂ ನಿಘಂಟಿನ ರಚನೆಯಲ್ಲಿ ಕೆಲಸ ಮಾಡಿವೆ. ಅಗತ್ಯವಿರುವ ಕಡೆ ಕೃತಿಗಳಲ್ಲಿನ ಸಾಲುಗಳನ್ನು ತೆಗೆದು ಪದ ಬಳಕೆಯು ಹೇಗಾಗಿದೆ ಎಂಬುದನ್ನು ನಮಗೆ ತೋರಿಸುತ್ತಾರೆ.

ತಮ್ಮ ಅಧ್ಯಯನ, ಸುತ್ತಾಟ, ಮತ್ತು ಇತರ ಎಲ್ಲಾ ಕೆಲಸಗಳ ಜೊತೆಜೊತೆಗೇ ಈ ನಿಘಂಟನ್ನು ರಚಿಸುವಂತಹ ಮಹೋನ್ನತ ಉದ್ದೇಶವನ್ನು ಒಯ್ಯುತ್ತಲೇ ಇದ್ದುದರಿಂದ ಇದು ಇಷ್ಟು ಅಮೂಲ್ಯ ಕೃತಿಯಾಗಲು ಸಾಧ್ಯ. ಅವರ ಆಸಕ್ತಿ, ಬದ್ಧತೆ, ಕೆಲಸದಲ್ಲಿನ ಪ್ರಾಮಾಣಿಕತೆ, ಜ್ಞಾನದಾಹ ನಮ್ಮ ಕನ್ನಡಕ್ಕೆ ಕೊಡುಗೆಗಳಾದವು.

ತೆಲುಗು, ತಮಿಳು, ಮಲಯಾಳಂಗಳೂ ಸೇರಿದಂತೆ ಬಹಳಷ್ಟು ಪ್ರಾದೇಶಿಕ ಭಾಷೆಗಳ ನಿಘಂಟುಗಳನ್ನು ರಚಿಸಿರುವವರು ವಿದೇಶಿಯರೇ ಮತ್ತು ಈ ಬಗೆಯ ಧರ್ಮಪ್ರಚಾರಕರೇ. ಬಹುಶಃ ಭಾಷಾಧ್ಯಯನ ಮತ್ತು ನಿಘಂಟು ರಚನೆ ಅವರಿಗೆಲ್ಲಾ ಬಹಳ ಪ್ರೀತಿಯ ಹವ್ಯಾಸವಾಗಿದ್ದಿರಬಹುದು. ಅದೇನೇ ಆಗಲಿ, ಈ ನಿಘಂಟೂ ಸೇರಿದಂತೆ ಕಿಟ್ಟೆಲ್ ಭೂತಾರಾಧನೆಯಂತಹ ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಐತಿಹಾಸಿಕವಾಗಿ ಮತ್ತು ಗ್ರಂಥಗಳ ಬಗ್ಗೆ ಅನೇಕ ಸಂಶೋಧನಾ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಇಂಗ್ಲೀಷಿಗೆ ಮತ್ತು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ತಾಳೆಗ್ರಂಥಗಳಲ್ಲಿರುವಂತಹ ಅನೇಕ ಕನ್ನಡದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಬಿ ಎಲ್ ರೈಸ್ ರವರು ಕನ್ನಡದಲ್ಲಿ ಅರುಣೋದಯ ಎಂಬ ಪತ್ರಿಕೆಯೊಂದನ್ನು ತರುತ್ತಿದ್ದರು. ಅದಕ್ಕೆ ಇವರು ಸಹಸಂಪಾದಕರಾಗಿಯೂ ದುಡಿಯುತ್ತಿದ್ದರು.

ಇವರ ಯಾವ ಕೃತಿಗಳನ್ನು ನಮಗೆ ಪರಿಶೀಲಿಸುವ, ಅಧ್ಯಯನ ಮಾಡುವ, ಓದುವ ಅಗತ್ಯ ಬರುತ್ತದೆಯೋ ಇಲ್ಲವೋ, ಈ ಕನ್ನಡ ಇಂಗ್ಲಿಷ್ ಡಿಕ್ಷನರಿ ಮಾತ್ರ ನಿಜಕ್ಕೂ ಕನ್ನಡ ಭಾಷಾಶಾಸ್ತ್ರದ ಪುಸ್ತಕಗಳ ಸಾಲಿನಲ್ಲಿ ಅನರ್ಘ್ಯ ರತ್ನ. ಅವರ ಬದ್ಧತೆಗೆ, ಕಾಳಜಿಗೆ, ವೃತ್ತಿಪರತೆಗೆ ಶರಣು.


ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಡುವ ವೈದ್ಯರಿಗೆ ಮೂಲಭೂತ ಸೌಕರ್ಯವಿಲ್ಲ: ವೀಡಿಯೊ ಬಿಡುಗಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...