Homeಪುಸ್ತಕ ವಿಮರ್ಶೆಕನ್ನಡ ಇಂಗ್ಲಿಷ್ ಡಿಕ್ಷ್‌ನರಿ ರಚಿಸಿದ ಕನ್ನಡದ ಹೆಮ್ಮೆಯ ಕಿಟ್ಟೆಲ್

ಕನ್ನಡ ಇಂಗ್ಲಿಷ್ ಡಿಕ್ಷ್‌ನರಿ ರಚಿಸಿದ ಕನ್ನಡದ ಹೆಮ್ಮೆಯ ಕಿಟ್ಟೆಲ್

- Advertisement -
- Advertisement -

ಕನ್ನಡ ಇಂಗ್ಲಿಷ್ ನಿಘಂಟು, 1894ರಲ್ಲಿ ಪ್ರಕಟವಾದ ಬಹಳ ವಿದ್ವತ್ಪೂರ್ಣ ಮಾತ್ರವಲ್ಲದೇ ಕನ್ನಡದ ಚಿರಸ್ಮರಣೀಯ ಕೃತಿಯಾಯ್ತು. ಜರ್ಮನಿಯ ಟ್ಯುಬಿಗನ್ ವಿಶ್ವವಿದ್ಯಾಲಯ ಕಿಟ್ಟೆಲ್ ರಿಗೆ ಗೌರವ ಡಾಕ್ಟರೇಟ್ ನೀಡಿತು. ಈ ಮೂಲಕ ಕನ್ನಡದ ಕೃತಿಯೊಂದಕ್ಕೆ ಸಂದ ಮೊಟ್ಟ ಮೊದಲ ಡಾಕ್ಟರೆಟ್ ಅದಾಯ್ತು.

ಧರ್ಮ ಪ್ರಚಾರ ಎಂಬ ಮುಖ್ಯ ಕಾರ್ಯಕ್ಕೆ ಪಾದ್ರಿಗಳು ಬಂದರೂ ಅವರು ಮಾಡುವಂತಹ ಉಪಕಾರ್ಯಗಳು ಬಹಳ ಮಹತ್ತರ ಕಾರ್ಯಗಳಾಗಿ ಪರಿಣಮಿಸುತ್ತವೆ. ಕಿಟ್ಟೆಲ್ಲರ ವಿಷಯದಲ್ಲೂ ಅದೇ ಆಗಿದ್ದು. ಕನ್ನಡದ ಬಗ್ಗೆ ಅಪಾರ ಅಭಿಮಾನ ಮತ್ತು ಆಸೆಯಿಂದ ಭಾಷೆ ಕಲಿತರೆಂದು ಕಿಟ್ಟೆಲ್ಲರ ಬಗ್ಗೆ ಪ್ರಶಂಸೆ ನೀಡುತ್ತಾರೆ. ಆದರೆ ಅವರಿಗೆ ಕನ್ನಡ ಕಲಿಕೆ ಅಭಿಮಾನವೋ, ಆಸೆಯೋ ಅಲ್ಲದೇ ಅನಿವಾರ್ಯವಾಗಿತ್ತು. ಮತಪ್ರಚಾರಕರು ತಾವು ಹೋದ ಪ್ರದೇಶದಲ್ಲಿ ನೆಲಸಿ, ಸ್ಥಳೀಯರೊಂದಿಗೆ ಸಂವಹನ ನಡೆಸಲೇ ಬೇಕಾದ ಕಾರಣದಿಂದ ಭಾಷೆಗಳನ್ನು ಕಲಿಯುತ್ತಿದ್ದರು. ಅಲ್ಲಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳನ್ನು ತಿಳಿಯಲು ಭಾಷೆಯ ಕಲಿಕೆ ಮತ್ತು ಪುಸ್ತಕಗಳ ಓದು ಬೇಕಾಗಿರುವುದೇ. ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ವ್ಯಾವಹಾರಿಕವಾಗಿ ಭಾಷೆ ಕಲಿತು ಸುಮ್ಮನಿರುವ ಬದಲು ವಿದ್ವತ್ಪೂರ್ಣ ಗ್ರಂಥಗಳನ್ನು ಓದಿ, ಸಂಶೋಧನೆಗಳನ್ನು ಮಾಡಿ, ನಮ್ಮ ಭಾಷೆಯ ಬಗ್ಗೆ ನಮಗೇ ಹೆಚ್ಚಿನ ಅರಿವನ್ನು ಮೂಡಿಸುವಂತಹ ಕೆಲಸವೆಂದರೆ, ಅದು ಸಾಮಾನ್ಯವಲ್ಲದ ಅವರ ಆಸಕ್ತಿ ಮತ್ತು ಶಕ್ತಿ.

ಪಂಪನಿಂದ ಆರಂಭಗೊಂಡು, ಕೇಶೀರಾಜನ ಒಳಗೊಂಡು, ಕೊಳ್ಳೇಗಾಲದ ನಿಜಗುಣ ಶಿವಯೋಗಿಗಳನ್ನೂ ಸೇರಿದಂತೆ ನೂರಾರು ಕೃತಿಗಳನ್ನು, ಕೃತಿಕಾರರನ್ನು ಅಧ್ಯಯನ ಮಾಡಿ, ಸಂಶೋಧನೆ ನಡೆಸಿ, ಸಾಧಾರವಾಗಿ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆಯುವು ದೆಂದರೆ ಖಂಡಿತವಾಗಿ ನಾವು ಬಹು ಹೆಮ್ಮೆ ಮತ್ತು ಅಭಿಮಾನದಿಂದ ಅವರನ್ನು ಸ್ಮರಿಸಬೇಕಾಗುತ್ತದೆ.

ಒಂದು ವೇಳೆ ಅವರು ತಮ್ಮ 23ರ ಹರೆಯದಲ್ಲಿ 1854ರಲ್ಲಿ ಮಂಗಳೂರಿಗೆ ಬದಲು ಪೋರ್ ಬಂದರಿಗೆ ಹೋಗಿದ್ದರೆ ಗುಜರಾತಿ ಕಲಿಯುತ್ತಿದ್ದರು. ಈಗ ಕನ್ನಡಕ್ಕೆ ಅವರು ನೀಡಿರುವ ಕೊಡುಗೆಗಳೆಲ್ಲವೂ ಗುಜರಾತಿ ಭಾಷೆಗೆ ಸಿಕ್ಕುತ್ತಿತ್ತು. ಹಾಗಾಗಿ, ಅದೃಷ್ಟವನ್ನು ನಂಬದ ನಾನೂ (ಅದಕ್ಕೆ ಪರ್ಯಾಯ ಪದದ ಕೊರತೆಯಿಂದ) ಕಿಟ್ಟೆಲ್ ಕನ್ನಡನಾಡಿಗೆ ಬಂದಿದ್ದು ನಮ್ಮ ಅದೃಷ್ಟ, ಭಾಗ್ಯ ಎನ್ನುತ್ತೇನೆ. 1752 ಪುಟಗಳ ಆ ನಿಘಂಟು ಅಕ್ಷರಶಃ ಪುಟಪುಟವೂ ಸಂಶೋಧನೆ, ವಿದ್ವತ್ತು, ಪರಿಶ್ರಮ, ಆಸಕ್ತಿ ಮತ್ತು ಅಗತ್ಯದಿಂದ ಕೂಡಿವೆ.

ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ, ವಿದ್ವಾಂಸರನ್ನು, ಶಿಕ್ಷಕರನ್ನು, ಸಂಶೋಧಕರನ್ನು ಮತ್ತು ಸಾಮಾನ್ಯ ಜನರನ್ನು ಮಾತಾಸಿಡಿ ಕೊಂಡು, ಅವರಿಂದ ಪದಗಳನ್ನು ಕಲಿತುಕೊಂಡು, ಅದನ್ನು ದಾಖಲಿಸಿ ಕೊಂಡು, ನಿಘಂಟಿಗೆ ಸೇರಿಸುವುದು ಮಾತ್ರವಲ್ಲದೇ ಪ್ರಾದೇಶಿಕ ಉಪಭಾಷೆ ಅಥವಾ ಆಡುನುಡಿಗಳನ್ನೂ (ಡಾಯ್ಲೆಕ್ಟ್) ಕೂಡಾ ಉಲ್ಲೇಖಿಸಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಸರು ಮತ್ತು ಖ್ಯಾತಿಯ ಮಟ್ಟಿಗಾದರೂ ಪರಿಚಯವಿರುವ ಪಂಪನಿರಲಿ, ಎಷ್ಟೋ ಸಂಶೋಧನಾ ವಿದ್ಯಾರ್ಥಿಗಳಿಗೂ ತಿಳಿಯದೇ ಇರುವಂತಹ ಹಲಾಯುಧನ ಅಭಿಧಾನ ರತ್ನಮಾಲ (ಕ್ರಿಸ್ತಶಕ 1000) ಕೂಡಾ ಇವರ ಅಧ್ಯಯನದ ಭಾಗವಾಗಿತ್ತು. ವಿಶೇಷವಾಗಿ ಭಾಷೆಯ ಕುರಿತಾದ ಆಸಕ್ತಿ ಅಷ್ಟು ಉನ್ನತವಾದದ್ದು. ಅಮರಕೋಶ (ಕ್ರಿ.ಶ. 1158), ಅರ್ಗಳನ ಚಂದ್ರಪ್ರಭ ಪುರಾಣ, ಲೀಲಾವತಿ ಪ್ರಬಂಧ, ನಾಗವರ್ಮನ ಕಾವ್ಯಾವಲೋಕನ ಮತ್ತು ಛಂದಸ್ಸು, ಕೇಶಿರಾಜನ ಶಬ್ಧಮಣಿ ದರ್ಪಣ, ಅಭಿನವ ಪಂಪನೆಂದು ಖ್ಯಾತನಾಗಿದ್ದ ನಾಗಚಂದ್ರನ ರಾಮಚಂದ್ರನ ಪುರಾಣ; ಹೀಗೇ ಅವರ ಅಧ್ಯಯನದ ಪಟ್ಟಿ ಸಾಗುತ್ತದೆ. ಈ ಹಿಂದೆ ಹೇಳಿದ್ದೆಲ್ಲಾ ಪ್ರಾಚೀನ ಕನ್ನಡ ಡಾಯ್ಲೆಕ್ಟ್ ಆದರೆ, ಮಧ್ಯಕಾಲದ ಕನ್ನಡದ ಆಡುನುಡಿಯನ್ನು ಗ್ರಹಿಸಲು ಸೋಮೇಶ್ವರ ಶತಕ (ಕ್ರಿ.ಶ. 1300) ದಿಂದ ಪ್ರಾರಂಭಿಸಿ, ಚಿದಾನಂದವಧೂತರ ಜ್ಞಾನಸಿಂಧು (ಕ್ರಿ.ಶ. 1820)ಗೆ, ಅಂದರೆ ಅವರ ಕಾಲದ ಗ್ರಂಥಗಳನ್ನು ಸಮೀಪಿಸುತ್ತಾರೆ.

ಕನ್ನಡದ ಗ್ರಂಥಗಳನ್ನು ಅಧ್ಯಯನ ಮಾಡುವುದು ಮಾತ್ರವಲ್ಲದೇ ಕನ್ನಡದ ಮೇಲೆ ಪ್ರಭಾವ ಬೀರಿರುವಂತಹ ಸಂಸ್ಕೃತ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಕೊಂಕಣಿ ಮತ್ತು ತುಳುವಿನ ಮೂಲಗಳನ್ನೂ ಅವಗಾಹನೆಗೆ ತೆಗೆದುಕೊಳ್ಳದೇ ಬಿಡುವುದಿಲ್ಲ. ಅತ್ಯಂತ ಶಾಸ್ತ್ರೀಯವಾಗಿ ಭಾಷೆಯ ವಿಷಯದಲ್ಲಿ ಕೆಲಸ ಮಾಡುವ ಮಾದರಿಯನ್ನು ಕೊಟ್ಟು ಉಪಕರಿಸಿದ್ದಾರೆ ಕಿಟ್ಟೆಲ್.

ಗ್ರಂಥಗಳಲ್ಲಿರುವ ಪದಗಳು ಮತ್ತು ಆಡು ನುಡಿಗಳಲ್ಲಿರುವ ಉಚ್ಚಾರಣೆಗಳನ್ನೂ ಕೂಡಾ ಗಮನದಲ್ಲಿಟ್ಟುಕೊಂಡು ಸೂಚನೆಗಳನ್ನು ಕೊಡುತ್ತಾರೆ. ಬಹಳ ಮುಖ್ಯವಾಗಿ ಪ್ರಾದೇಶಿಕ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸುವುದು. ಪದಗಳ ಅರ್ಥಗಳನ್ನು ಸ್ಪಷ್ಟೀಕರಿಸಲು ಸ್ಥಳೀಯ ನುಡಿಗಟ್ಟುಗಳನ್ನು, ಗಾದೆಗಳನ್ನು ಕೂಡಾ ಬಳಸುತ್ತಾರೆ. ಹಾಗೆಯೇ ಸ್ವಂತ ವ್ಯಾಕ್ಯಗಳಲ್ಲಿಯೂ ಕೂಡಾ ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ. ಅವರ ಕನ್ನಡದ ಎಲ್ಲಾ ಓದೂ ನಿಘಂಟಿನ ರಚನೆಯಲ್ಲಿ ಕೆಲಸ ಮಾಡಿವೆ. ಅಗತ್ಯವಿರುವ ಕಡೆ ಕೃತಿಗಳಲ್ಲಿನ ಸಾಲುಗಳನ್ನು ತೆಗೆದು ಪದ ಬಳಕೆಯು ಹೇಗಾಗಿದೆ ಎಂಬುದನ್ನು ನಮಗೆ ತೋರಿಸುತ್ತಾರೆ.

ತಮ್ಮ ಅಧ್ಯಯನ, ಸುತ್ತಾಟ, ಮತ್ತು ಇತರ ಎಲ್ಲಾ ಕೆಲಸಗಳ ಜೊತೆಜೊತೆಗೇ ಈ ನಿಘಂಟನ್ನು ರಚಿಸುವಂತಹ ಮಹೋನ್ನತ ಉದ್ದೇಶವನ್ನು ಒಯ್ಯುತ್ತಲೇ ಇದ್ದುದರಿಂದ ಇದು ಇಷ್ಟು ಅಮೂಲ್ಯ ಕೃತಿಯಾಗಲು ಸಾಧ್ಯ. ಅವರ ಆಸಕ್ತಿ, ಬದ್ಧತೆ, ಕೆಲಸದಲ್ಲಿನ ಪ್ರಾಮಾಣಿಕತೆ, ಜ್ಞಾನದಾಹ ನಮ್ಮ ಕನ್ನಡಕ್ಕೆ ಕೊಡುಗೆಗಳಾದವು.

ತೆಲುಗು, ತಮಿಳು, ಮಲಯಾಳಂಗಳೂ ಸೇರಿದಂತೆ ಬಹಳಷ್ಟು ಪ್ರಾದೇಶಿಕ ಭಾಷೆಗಳ ನಿಘಂಟುಗಳನ್ನು ರಚಿಸಿರುವವರು ವಿದೇಶಿಯರೇ ಮತ್ತು ಈ ಬಗೆಯ ಧರ್ಮಪ್ರಚಾರಕರೇ. ಬಹುಶಃ ಭಾಷಾಧ್ಯಯನ ಮತ್ತು ನಿಘಂಟು ರಚನೆ ಅವರಿಗೆಲ್ಲಾ ಬಹಳ ಪ್ರೀತಿಯ ಹವ್ಯಾಸವಾಗಿದ್ದಿರಬಹುದು. ಅದೇನೇ ಆಗಲಿ, ಈ ನಿಘಂಟೂ ಸೇರಿದಂತೆ ಕಿಟ್ಟೆಲ್ ಭೂತಾರಾಧನೆಯಂತಹ ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಐತಿಹಾಸಿಕವಾಗಿ ಮತ್ತು ಗ್ರಂಥಗಳ ಬಗ್ಗೆ ಅನೇಕ ಸಂಶೋಧನಾ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಇಂಗ್ಲೀಷಿಗೆ ಮತ್ತು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ತಾಳೆಗ್ರಂಥಗಳಲ್ಲಿರುವಂತಹ ಅನೇಕ ಕನ್ನಡದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಬಿ ಎಲ್ ರೈಸ್ ರವರು ಕನ್ನಡದಲ್ಲಿ ಅರುಣೋದಯ ಎಂಬ ಪತ್ರಿಕೆಯೊಂದನ್ನು ತರುತ್ತಿದ್ದರು. ಅದಕ್ಕೆ ಇವರು ಸಹಸಂಪಾದಕರಾಗಿಯೂ ದುಡಿಯುತ್ತಿದ್ದರು.

ಇವರ ಯಾವ ಕೃತಿಗಳನ್ನು ನಮಗೆ ಪರಿಶೀಲಿಸುವ, ಅಧ್ಯಯನ ಮಾಡುವ, ಓದುವ ಅಗತ್ಯ ಬರುತ್ತದೆಯೋ ಇಲ್ಲವೋ, ಈ ಕನ್ನಡ ಇಂಗ್ಲಿಷ್ ಡಿಕ್ಷನರಿ ಮಾತ್ರ ನಿಜಕ್ಕೂ ಕನ್ನಡ ಭಾಷಾಶಾಸ್ತ್ರದ ಪುಸ್ತಕಗಳ ಸಾಲಿನಲ್ಲಿ ಅನರ್ಘ್ಯ ರತ್ನ. ಅವರ ಬದ್ಧತೆಗೆ, ಕಾಳಜಿಗೆ, ವೃತ್ತಿಪರತೆಗೆ ಶರಣು.


ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಡುವ ವೈದ್ಯರಿಗೆ ಮೂಲಭೂತ ಸೌಕರ್ಯವಿಲ್ಲ: ವೀಡಿಯೊ ಬಿಡುಗಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...