Homeಕರ್ನಾಟಕಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

ಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

- Advertisement -
- Advertisement -

ಕೆ.ಆರ್ ಪೇಟೆಯ ಕೃಷ್ಣ ನಿಧನರಾಗಿದ್ದಾರೆ. ಈ ತಲೆಮಾರಿನ ರಾಜಕಾರಣಿಗಳು ಅನುಸರಿಸಲಾಗದ ಕೆಲವು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಕೃಷ್ಣ ಮಂಡ್ಯ ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರು, ಎಚ್.ಟಿ ಕೃಷ್ಣಪ್ಪ, ಬಂಡಿ ಸಿದ್ದೇಗೌಡ, ಪಾಂಡವಪುರದ ಕೆಂಪಣ್ಣ, ಎಸ್.ಎಂ ಲಿಂಗಪ್ಪ ಇಂತಹವರ ಸಾಲಿಗೆ ಸೇರಿದವರು ಕೃಷ್ಣ. ಅವರು ಮೊದಲು ಮೇಷ್ಟರಾಗಿದ್ದವರು. ಆ ಹುದ್ದೆ ತೊರೆದು ರಾಜಕಾರಣಕ್ಕೆ ಬಂದರೂ ಕಡೆಯವರೆಗೂ ಬಡ ಮೇಷ್ಟರಂತೆಯೇ ಕಾಣುತ್ತಿದ್ದರು. ಅವರನ್ನು ಭೇಟಿಯಾಗಲು ಬಂದವರು ಹೇಳುವುದನ್ನ ಪೂರ್ಣ ಕೇಳಿಸಿಕೊಳ್ಳುವುದು, ಹೇಳಿದ್ದರಲ್ಲಿ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳುವ ಮೇಷ್ಟರ ಗುಣವನ್ನು ಬಿಡಲೇ ಇಲ್ಲ. ಅವರು 1983ರ ಕಾಂಗ್ರೆಸ್ ವಿರೋಧಿ ಅಲೆಯಿಂದ ಗೆದ್ದು ಬಂದವರು. ಆದರೆ ಕೆ.ಆರ್ ಪೇಟೆ ಜನಮನಗೆದ್ದು ಮೂರು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಕಡೆಗೆ ವಿಧಾನಸಭೆಯ ಸ್ಪೀಕರ್ ಆದರೂ ಸರಳ ಸಜ್ಜನಿಕೆಯ ಮೇಷ್ಟರಾಗಿ ಉಳಿದರು. ಕೃಷ್ಣರಿಗೆ ಎಲ್ಲ ಅವಕಾಶಗಳೂ ಒದಗಿಬರುವಂತೆ ಮಾಡಿದ ದೇವೇಗೌಡರು ಕೃಷ್ಣ ಅಲಂಕರಿಸಿದ್ದ ಸ್ಪೀಕರ್ ಸ್ಥಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಾರದ ಯಾತನೆ ಅವರಿಗೆ ಕಡೆಯವರೆಗೂ ಉಳಿದಿತ್ತು. ಸಜ್ಜನ ರಾಜಕಾರಣಿಗಳಿಗೆ ಮುಖ ತೋರದಂತ ಕೀಳರಿಮೆ ಅನುಭವಿಸಿದ್ದರು.

ಜನಾಭಿಪ್ರಾಯವಿಲ್ಲದ ನಾಯಕನನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವ ಸಮಯದಲ್ಲಿ ಕೃಷ್ಣ, ದೇವೇಗೌಡರ ಸೂಚನೆಯಂತೆ ನಡೆದುಕೊಂಡರು. ಇದರ ಫಲವಾಗಿ ಆ ಮುಂದಿನ ಚುನಾವಣೆಯಲ್ಲಿ ಸೋತರು. 2013ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಲಿಲ್ಲ. ನಿಜಕ್ಕೂ ಕೃಷ್ಣ ಮಾಡಿದ ಉಪಕಾರಕ್ಕೆ ಜೆಡಿಎಸ್ ಕಡೆಯವರೆಗೂ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಆ ಸಮಯಕ್ಕಾಗಲೇ ಅವರು ಉಪಯೋಗಿಸಿ ಬಿಸಾಕಿದ ವಸ್ತುವಿನಂತಾಗಿದ್ದರು. ಏಕೆಂದರೆ ಬಾಂಬೆಯಿಂದ ಸೂಟ್‌ಕೇಸ್ ಹಿಡಿದು ಬಂದ ನಾರಾಯಣಗೌಡರು ಆಗಲೇ ಲಕಲಕ ಹೊಳೆಯುತ್ತಿದ್ದರು. ಇಂತಹವರ ಎದುರು ನಿವೃತ್ತ ಉಪಾಧ್ಯಾಯನಂತೆ ಕಾಣುವ ಕೃಷ್ಣ ಯಾರಿಗೆ ಬೇಕು! ಈ ಮೊದಲು ಅವರು ಚುನಾವಣೆಗೆ ನಿಂತಾಗ ಜನಗಳೇ ಚಂದಾ ಎತ್ತಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆದರೆ ಈಗ ಅಂತಹ ಮೌಲ್ಯಗಳೇ ಪತನಗೊಂಡು ಮತದಾರನೆ ರಾಜಕಾರಣಿ ಕೈಯಿಂದ ಚಂದಾ ವಸೂಲಿಗಿಳಿಯುತ್ತಿದ್ದಾನೆ. ಆದ್ದರಿಂದ ಕೃಷ್ಣ ಮೂಲೆಗುಂಪಾದರು. ಅವರು ಕಡೆಯಲ್ಲಿ ಕಾಂಗ್ರೆಸ್ ಸೇರಿದರೂ ನಾರಾಯಣಗೌಡರೆದುರಿಗೆ ನಿಲ್ಲಲಾಗಲಿಲ್ಲ. ಕೃಷ್ಣರಂತಹ ಸಜ್ಜನ ರಾಜಕಾರಣಿಯನ್ನ ಬೆಂಬಲಿಸಿದ್ದ ಕೆ.ಆರ್ ಪೇಟೆ ಈಗ ಬಿಜೆಪಿ ಪಾಲಾಗಿದೆ. ಈ ಅನಾಹುತಕ್ಕೆ ಕಾರಣ ಕೃಷ್ಣರನ್ನ ದುರುಪಯೋಗಪಡಿಸಿಕೊಂಡವರು.

ಕೃಷ್ಣ ಅಜಾತಶತ್ರು. ಅವರನ್ನ ಟೀಕಿಸಲು ಮತ್ತು ವಿರೋಧಿಸಲು ಕಾರಣಗಳೇ ಇಲ್ಲದಂತೆ ಬದುಕಿದವರು. ಅವರೊಮ್ಮೆ ನಾಗಮಂಗಲ ಐಬಿಗೆ ಬಂದಾಗ ಜನತಾದಳದ ಕಾರ್ಯಕರ್ತನೊಬ್ಬ ಕೇಳಿಸಿಕೊಳ್ಳಲು ಅಸಹ್ಯವಾಗುವ ಬೈಗುಳದಿಂದ ಬೈದ. ಕೃಷ್ಣ ನಗುತ್ತಲೇ ಅದನ್ನ ಸಹಿಸಿಕೊಂಡರು. ಅಂತಹ ಅಸಮಾನ್ಯ ತಾಳ್ಮೆ ಹೊಂದಿದ್ದರು. ಆದರೆ, ಸಾವಿರಾರು ರೂಪಾಯಿ ಸಂಬಳ ಎಣಿಸುವ ಅಧಿಕಾರಿಗಳು ಜನಗಳ ಕೆಲಸ ಮಾಡಿಕೊಡದಿದ್ದರೆ ಅಧಿಕಾರಿಗೆ ಭೂತ ಬಿಡಿಸುತ್ತಿದ್ದರು. ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಕರೆದು, ಬಾಗಿಲು ಹಾಕಿಕೊಂಡು, ಏರುದನಿಯಲ್ಲಿ ಬೈಯ್ಯುತ್ತಾ, “ಜನಗಳನ್ನು ನನ್ನವರೆಗೂ ಬುಟ್ಟಿದ್ದೀಯಾ, ನೀನ್ಯಾಕ್ಲ ಇರದು? ವಸಿ ಸಂಬ್ಳ ತಗತಿಯೇನೂ” ಎಂದು ಮಂಗಳಾರತಿ ಮಾಡಿ, ಎಚ್ಚರಿಸಿ, ರಿಪೇರಿ ಕೆಲಸ ಮುಗಿಸಿದಂತೆ ಈಚೆ ಬಂದು, ನಂತರ ಎಂದಿನ ಪ್ರಸನ್ನತೆ ಮತ್ತು ಸಮಾಧಾನದಿಂದ “ಸಾಯಬ್ರಿಗೇಳಿದ್ದೀನಿ, ಅವುರು ಮಾಡಿಕೊಡ್ತಾರೆ ಹೋಗ್ರಪ್ಪ ಎಂದು ಕಳಿಸುತ್ತಿದ್ದರು. ಇದು ಈ ಲೋಕಕ್ಕೆ ಗೊತ್ತಿಲ್ಲದಂತೆ ನಡೆದ ವ್ಯವಹಾರ.

ಕೃಷ್ಣ ಶಾಸಕ, ಮಂತ್ರಿ, ಸ್ಪೀಕರ್ ಹೀಗೆ ಹಲವಾರು ಹುದ್ದೆ ನಿಭಾಯಿಸಿದವರು. ದುಡ್ಡು ಮಾಡಿದವರಲ್ಲ. ಅದಾಗಿ ಬಂದುದನ್ನು ಬಡವರಿಗೆ, ಅನಾರೋಗ್ಯದವರಿಗೆ ಹಂಚುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪತ್ನಿ ಇಂದಿರಮ್ಮ ಮತ್ತು ಸಾಕುಮಗಳು ಮಂಜುಳ ಇದಿಷ್ಟೆ ಅವರ ಸಂಸಾರವಾಗಿದ್ದರೂ ಇಡೀ ತಾಲೂಕನ್ನೇ ಬಂಧು ಬಳಗವಾಗಿ ಪರಿಗಣಿಸಿದ್ದರು. ಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುತ್ತಿದ್ದರು. ಸದ್ಯಕ್ಕೆ ಈ ತರಹ ರಾಜಕಾರಣಿ ಮಂಡ್ಯ ಜಿಲ್ಲೆಯಲ್ಲಿ ಯಾರೂ ಇಲ್ಲ ಎಂಬುದೇ ನೋವಿನ ಸಂಗತಿ.


ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...