Homeಕರ್ನಾಟಕಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

ಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

- Advertisement -
- Advertisement -

ಕೆ.ಆರ್ ಪೇಟೆಯ ಕೃಷ್ಣ ನಿಧನರಾಗಿದ್ದಾರೆ. ಈ ತಲೆಮಾರಿನ ರಾಜಕಾರಣಿಗಳು ಅನುಸರಿಸಲಾಗದ ಕೆಲವು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಕೃಷ್ಣ ಮಂಡ್ಯ ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರು, ಎಚ್.ಟಿ ಕೃಷ್ಣಪ್ಪ, ಬಂಡಿ ಸಿದ್ದೇಗೌಡ, ಪಾಂಡವಪುರದ ಕೆಂಪಣ್ಣ, ಎಸ್.ಎಂ ಲಿಂಗಪ್ಪ ಇಂತಹವರ ಸಾಲಿಗೆ ಸೇರಿದವರು ಕೃಷ್ಣ. ಅವರು ಮೊದಲು ಮೇಷ್ಟರಾಗಿದ್ದವರು. ಆ ಹುದ್ದೆ ತೊರೆದು ರಾಜಕಾರಣಕ್ಕೆ ಬಂದರೂ ಕಡೆಯವರೆಗೂ ಬಡ ಮೇಷ್ಟರಂತೆಯೇ ಕಾಣುತ್ತಿದ್ದರು. ಅವರನ್ನು ಭೇಟಿಯಾಗಲು ಬಂದವರು ಹೇಳುವುದನ್ನ ಪೂರ್ಣ ಕೇಳಿಸಿಕೊಳ್ಳುವುದು, ಹೇಳಿದ್ದರಲ್ಲಿ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳುವ ಮೇಷ್ಟರ ಗುಣವನ್ನು ಬಿಡಲೇ ಇಲ್ಲ. ಅವರು 1983ರ ಕಾಂಗ್ರೆಸ್ ವಿರೋಧಿ ಅಲೆಯಿಂದ ಗೆದ್ದು ಬಂದವರು. ಆದರೆ ಕೆ.ಆರ್ ಪೇಟೆ ಜನಮನಗೆದ್ದು ಮೂರು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಕಡೆಗೆ ವಿಧಾನಸಭೆಯ ಸ್ಪೀಕರ್ ಆದರೂ ಸರಳ ಸಜ್ಜನಿಕೆಯ ಮೇಷ್ಟರಾಗಿ ಉಳಿದರು. ಕೃಷ್ಣರಿಗೆ ಎಲ್ಲ ಅವಕಾಶಗಳೂ ಒದಗಿಬರುವಂತೆ ಮಾಡಿದ ದೇವೇಗೌಡರು ಕೃಷ್ಣ ಅಲಂಕರಿಸಿದ್ದ ಸ್ಪೀಕರ್ ಸ್ಥಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಾರದ ಯಾತನೆ ಅವರಿಗೆ ಕಡೆಯವರೆಗೂ ಉಳಿದಿತ್ತು. ಸಜ್ಜನ ರಾಜಕಾರಣಿಗಳಿಗೆ ಮುಖ ತೋರದಂತ ಕೀಳರಿಮೆ ಅನುಭವಿಸಿದ್ದರು.

ಜನಾಭಿಪ್ರಾಯವಿಲ್ಲದ ನಾಯಕನನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವ ಸಮಯದಲ್ಲಿ ಕೃಷ್ಣ, ದೇವೇಗೌಡರ ಸೂಚನೆಯಂತೆ ನಡೆದುಕೊಂಡರು. ಇದರ ಫಲವಾಗಿ ಆ ಮುಂದಿನ ಚುನಾವಣೆಯಲ್ಲಿ ಸೋತರು. 2013ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಲಿಲ್ಲ. ನಿಜಕ್ಕೂ ಕೃಷ್ಣ ಮಾಡಿದ ಉಪಕಾರಕ್ಕೆ ಜೆಡಿಎಸ್ ಕಡೆಯವರೆಗೂ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಆ ಸಮಯಕ್ಕಾಗಲೇ ಅವರು ಉಪಯೋಗಿಸಿ ಬಿಸಾಕಿದ ವಸ್ತುವಿನಂತಾಗಿದ್ದರು. ಏಕೆಂದರೆ ಬಾಂಬೆಯಿಂದ ಸೂಟ್‌ಕೇಸ್ ಹಿಡಿದು ಬಂದ ನಾರಾಯಣಗೌಡರು ಆಗಲೇ ಲಕಲಕ ಹೊಳೆಯುತ್ತಿದ್ದರು. ಇಂತಹವರ ಎದುರು ನಿವೃತ್ತ ಉಪಾಧ್ಯಾಯನಂತೆ ಕಾಣುವ ಕೃಷ್ಣ ಯಾರಿಗೆ ಬೇಕು! ಈ ಮೊದಲು ಅವರು ಚುನಾವಣೆಗೆ ನಿಂತಾಗ ಜನಗಳೇ ಚಂದಾ ಎತ್ತಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆದರೆ ಈಗ ಅಂತಹ ಮೌಲ್ಯಗಳೇ ಪತನಗೊಂಡು ಮತದಾರನೆ ರಾಜಕಾರಣಿ ಕೈಯಿಂದ ಚಂದಾ ವಸೂಲಿಗಿಳಿಯುತ್ತಿದ್ದಾನೆ. ಆದ್ದರಿಂದ ಕೃಷ್ಣ ಮೂಲೆಗುಂಪಾದರು. ಅವರು ಕಡೆಯಲ್ಲಿ ಕಾಂಗ್ರೆಸ್ ಸೇರಿದರೂ ನಾರಾಯಣಗೌಡರೆದುರಿಗೆ ನಿಲ್ಲಲಾಗಲಿಲ್ಲ. ಕೃಷ್ಣರಂತಹ ಸಜ್ಜನ ರಾಜಕಾರಣಿಯನ್ನ ಬೆಂಬಲಿಸಿದ್ದ ಕೆ.ಆರ್ ಪೇಟೆ ಈಗ ಬಿಜೆಪಿ ಪಾಲಾಗಿದೆ. ಈ ಅನಾಹುತಕ್ಕೆ ಕಾರಣ ಕೃಷ್ಣರನ್ನ ದುರುಪಯೋಗಪಡಿಸಿಕೊಂಡವರು.

ಕೃಷ್ಣ ಅಜಾತಶತ್ರು. ಅವರನ್ನ ಟೀಕಿಸಲು ಮತ್ತು ವಿರೋಧಿಸಲು ಕಾರಣಗಳೇ ಇಲ್ಲದಂತೆ ಬದುಕಿದವರು. ಅವರೊಮ್ಮೆ ನಾಗಮಂಗಲ ಐಬಿಗೆ ಬಂದಾಗ ಜನತಾದಳದ ಕಾರ್ಯಕರ್ತನೊಬ್ಬ ಕೇಳಿಸಿಕೊಳ್ಳಲು ಅಸಹ್ಯವಾಗುವ ಬೈಗುಳದಿಂದ ಬೈದ. ಕೃಷ್ಣ ನಗುತ್ತಲೇ ಅದನ್ನ ಸಹಿಸಿಕೊಂಡರು. ಅಂತಹ ಅಸಮಾನ್ಯ ತಾಳ್ಮೆ ಹೊಂದಿದ್ದರು. ಆದರೆ, ಸಾವಿರಾರು ರೂಪಾಯಿ ಸಂಬಳ ಎಣಿಸುವ ಅಧಿಕಾರಿಗಳು ಜನಗಳ ಕೆಲಸ ಮಾಡಿಕೊಡದಿದ್ದರೆ ಅಧಿಕಾರಿಗೆ ಭೂತ ಬಿಡಿಸುತ್ತಿದ್ದರು. ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಕರೆದು, ಬಾಗಿಲು ಹಾಕಿಕೊಂಡು, ಏರುದನಿಯಲ್ಲಿ ಬೈಯ್ಯುತ್ತಾ, “ಜನಗಳನ್ನು ನನ್ನವರೆಗೂ ಬುಟ್ಟಿದ್ದೀಯಾ, ನೀನ್ಯಾಕ್ಲ ಇರದು? ವಸಿ ಸಂಬ್ಳ ತಗತಿಯೇನೂ” ಎಂದು ಮಂಗಳಾರತಿ ಮಾಡಿ, ಎಚ್ಚರಿಸಿ, ರಿಪೇರಿ ಕೆಲಸ ಮುಗಿಸಿದಂತೆ ಈಚೆ ಬಂದು, ನಂತರ ಎಂದಿನ ಪ್ರಸನ್ನತೆ ಮತ್ತು ಸಮಾಧಾನದಿಂದ “ಸಾಯಬ್ರಿಗೇಳಿದ್ದೀನಿ, ಅವುರು ಮಾಡಿಕೊಡ್ತಾರೆ ಹೋಗ್ರಪ್ಪ ಎಂದು ಕಳಿಸುತ್ತಿದ್ದರು. ಇದು ಈ ಲೋಕಕ್ಕೆ ಗೊತ್ತಿಲ್ಲದಂತೆ ನಡೆದ ವ್ಯವಹಾರ.

ಕೃಷ್ಣ ಶಾಸಕ, ಮಂತ್ರಿ, ಸ್ಪೀಕರ್ ಹೀಗೆ ಹಲವಾರು ಹುದ್ದೆ ನಿಭಾಯಿಸಿದವರು. ದುಡ್ಡು ಮಾಡಿದವರಲ್ಲ. ಅದಾಗಿ ಬಂದುದನ್ನು ಬಡವರಿಗೆ, ಅನಾರೋಗ್ಯದವರಿಗೆ ಹಂಚುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪತ್ನಿ ಇಂದಿರಮ್ಮ ಮತ್ತು ಸಾಕುಮಗಳು ಮಂಜುಳ ಇದಿಷ್ಟೆ ಅವರ ಸಂಸಾರವಾಗಿದ್ದರೂ ಇಡೀ ತಾಲೂಕನ್ನೇ ಬಂಧು ಬಳಗವಾಗಿ ಪರಿಗಣಿಸಿದ್ದರು. ಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುತ್ತಿದ್ದರು. ಸದ್ಯಕ್ಕೆ ಈ ತರಹ ರಾಜಕಾರಣಿ ಮಂಡ್ಯ ಜಿಲ್ಲೆಯಲ್ಲಿ ಯಾರೂ ಇಲ್ಲ ಎಂಬುದೇ ನೋವಿನ ಸಂಗತಿ.


ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...