Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿ.. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ.

- Advertisement -
- Advertisement -

ನೀಟಾಗಿ ತೋಟ ಇಡುವುದೆಂದರೆ ಸಕಲ ಸಾವಯವ ವಸ್ತುಗಳನ್ನು ಅಲ್ಲಲ್ಲಿ ಗುಡ್ಡೆ ಹಾಕಿ ಸುಟ್ಟು, ತೋಟದ ಬದುಗಳನ್ನೆಲ್ಲಾ ಗುಡಿಸಿ ಅಂದವಾಗಿ ಕಾಣುವಂತೆ ಇಟ್ಟುಕೊಳ್ಳುವುದು ಎಂದು ನಂಬಿದ್ದ ನಮ್ಮಪ್ಪ ಹಾಗೇ ಇಟ್ಟುಕೊಂಡಿದ್ದರು. “ಇವರ ಅಪ್ಪ ಎಷ್ಟು ಅಚ್ಚುಕಟ್ಟಾಗಿ ತೋಟ ಇಟ್ಟುಕೊಂಡಿದ್ದರು, ನಡುಮನೆಯಂಥಾ ತೋಟವನ್ನು ಈ ಮನುಷ್ಯ ತಿಪ್ಪೆ ಗುಂಡಿ ಮಾಡಿ ಗಬ್ಬೆಬ್ಬಿಸಿದ್ದಾನೆ, ಇವನ ಪ್ರಯೋಗಕ್ಕಷ್ಟು ಬೆಂಕಿ ಹಾಕ, ಅಡವಾಗಿ ಸಂಬಳ ಬರುತ್ತೆ ಏನೇನಾದರು ಮಾಡಂಗಾಗುತ್ತೆ..” ಇತ್ಯಾದಿ ಬೈಗುಳಗಳನ್ನು ನಮ್ಮ ತೋಟದ ದಾರಿಯಲ್ಲಿ ಸಾಗುವ ಜನರು ಬಿತ್ತರಿಸುವಾಗ, ನಾನು ಬೇಲಿ ಸಾಲಲ್ಲಿ ಕೂತು ಆಲಿಸಿದ್ದೇನೆ. ಇದು ನನ್ನ ಭಾಗ್ಯ ಎಂದೇ ತಿಳಿದಿದ್ದೇನೆ. ಏಕೆಂದರೆ ಹಾಗೆ ಬೈದವರೇ ನಮ್ಮ ತೋಟವನ್ನು ಅನುಸರಿಸಿ ದಾರಿಗೆ ಬಂದಿದ್ದಾರೆ.

ಅವರ ಈ ಅಂಬೋಣಕ್ಕೆ ಕಾರಣವೂ ಇತ್ತು. ಮೊದಲು ನಾವು ತೋಟದ ಉಳುಮೆ ಬಿಟ್ಟಾಗ ಎಲ್ಲಾ ತೋಟದ ಉಳಿಕೆಯನ್ನು ಮರದ ಬುಡದಲ್ಲೆ ರಾಶಿಯಾಗುವಂತೆ ಬಿಟ್ಟ ಪರಿಣಾಮ ಅತಿಯಾಗಿ ಸೆದಾಲು ಉಂಟಾಯಿತು. ಅದರ ಮಧ್ಯದಲ್ಲಿ ಅನಗತ್ಯ ತರಾವರಿ ಗಿಡಗಳನ್ನು ಬೆಳೆಯಲು ಬಿಟ್ಟ ಕಾರಣ ತೋಟ ಕಾಡಿನ ಸ್ವರೂಪಕ್ಕೆ ತಲುಪಿತ್ತು. ನಡುಮನೆಯಂತಿದ್ದ ತೋಟವೀಗ ಒಡೆಯರಿಲ್ಲದೆ ರಜ ತುಂಬಿದ ತೋಟವಾಗಿ ಅವರಿಗೆ ಕಾಣತೊಡಗಿತ್ತು. ಕಾಲ ಕಳೆದಂತೆ ನಮಗೂ ಅದರ ಬಿಸಿ ತಟ್ಟಿತು. ತೋಟದೊಳಗೆ ಕೆಲಸ ಮಾಡುವುದು ಕಷ್ಟವಾಯಿತು. ಹುಳು ಹುಪ್ಪಡಿ ಮತ್ತು ಆಕಸ್ಮಿಕ ಬೆಂಕಿಯ ಭಯಗಳು ಸೇರಿಕೊಂಡು ನಮ್ಮನ್ನು ಎಚ್ಚರಿಸಿದವು.

ನಾವೀಗ ತೋಟದ ಉಳಿಕೆಯನ್ನು ನೆಲಕ್ಕೆ ವ್ಯವಸ್ಥಿತವಾಗಿ ಹೊದಿಸುತ್ತೇವೆ. ಅತಿ ಹೆಚ್ಚಾದ ಸಾವಯವ ಉಳಿಕೆಯನ್ನು ಬುಡದಿಂದ ತೆಗೆದು ಕಡಗಿಗೆ ಹಾಕುತ್ತೇವೆ. ಈ ಎಲ್ಲ ಉಳಿಕೆ ನೆಲದ ಸಂಪರ್ಕಕ್ಕೆ ಬರುವ ಕಾರಣ ಗೆದ್ದಲು ಆಯಾ ವರ್ಷದ ಉಳಿಕೆಯನ್ನು ಆಯಾ ವರ್ಷವೇ ತಿಂದು ಮಣ್ಣು ಮಾಡುತ್ತವೆ. ಅನಗತ್ಯ ಗಿಡಗಳನ್ನು ಕಿತ್ತುಹಾಕಿ ತಿರುಗಾಡಲು ಅನುಕೂಲ ಮಾಡಿಕೊಳ್ಳುತ್ತೇವೆ.

ಈಗ ತೋಟ ನೋಡಿದವರು ಮೊದಲಿನಂತೆ ಬೈಯ್ಯದೆ ಒಪ್ಪುವುದಕ್ಕೆ ಮನಸ್ಸು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾವೂ ಬೆಳೆಗಳ ಉಳಿಕೆಗಳನ್ನು ಸುಡುವುದನ್ನು ನಿಲ್ಲಿಸಿ ಗೆದ್ದಲಿಗೆ ಉಣಿಸುತ್ತಿದ್ದಾರೆ. ಈಗವರಿಗೆ ಗೊತ್ತಾಗಿದೆ ಸುಟ್ಟರೆ ಸಿಕ್ಕುವುದು ಬೂದಿಯೆಂದು, ತೋಟ ಸುಡುಗಾಡಾಗುವುದೆಂದು. ತೋಟ ಸ್ವಲ್ಪ ಅಸ್ತವ್ಯಸ್ತವಾಗಿದ್ದರೂ ಪರವಾಗಿಲ್ಲವೆಂಬ ತಿಳುವಳಿಕೆ ಅವರಿಗೀಗ ಬಂದಿದೆ.

ಕೆಲವರು ಇಂಥ ಸಾವಯವ ಉಳಿಕೆಗಳನ್ನು ಪುಡಿಮಾಡಲು ದೊಡ್ಡ ಮಿಷನ್‌ ತಂದು ಪ್ರಯತ್ನಿಸಿದರು. ಹೀಗೆ ಮಾಡದಿದ್ದರೆ ತೆಂಗಿನ ಎಡಮಟ್ಟೆ, ಕುರಂಬಳೆ, ಮಟ್ಟೆ ಇತ್ಯಾದಿಗಳು ಕರಗುವುದಿಲ್ಲವೆಂಬುದು ಇವರ ಅಂಬೋಣವಾಗಿತ್ತು. ಆದರೆ ಇದು ಬಲು ಖರ್ಚಿನ, ಅತಿ ಶ್ರಮದ ಬಾಬ್ತು. ನಿಜ, ಎಡಮಟ್ಟೆಗಳು ಬೇಗ ಕರಗುವುದಿಲ್ಲ, ಅದಕ್ಕೆ ನಾವು ಈ ಎಡಮಟ್ಟೆಗಳನ್ನು ಬೇಲಿ ಸಾಲಲ್ಲಿ ವ್ಯವಸ್ಥಿತವಾಗಿ ಒಟ್ಟುತ್ತೇವೆ. ಅವು ಅಲ್ಲಿ ನಿಧಾನವಾಗಿ ಗೆದ್ದಲು ಪಾಲಾಗಿ ಗೊಬ್ಬರವಾಗುತ್ತದೆ. ಬೆಟ್ಟಕ್ಕೆ ಕಲ್ಲು ಹೊರುವುದು ತಪ್ಪುತ್ತದೆ. ತೋಟದೊಳಗೇ ಗೊಬ್ಬರ ಉತ್ಪಾದನೆಯಾಗಿ ಮೇಲೆ ಫಲ ಪಲ್ಲವಿಸುವ ವಿಸ್ಮಯವಿದು.

ಈಗ ನಮ್ಮ ತೋಟದ ಸುತ್ತಮುತ್ತಲ ರೈತರಿಗೆ ಸುಡುವುದರ ನೋವು ಮತ್ತು ಸಾವು ಅರ್ಥವಾಗಿದೆ. ಅವರು ಸುಡುತ್ತಿದ್ದುದು ಕೇವಲ ತೆಂಗಿನ ಉಳಿಕೆಗಳಷ್ಟೇ ಅಲ್ಲ, ನಮಗೆ ಉಪಕಾರಿಯಾದ ಗೆದ್ದಲನ್ನು ಇನ್ನಿತರ ಜೀವಿಗಳನ್ನು ಎಂಬ ಅರಿವು ಉಂಟಾಗಿದೆ. ಅದಕ್ಕೀಗ ಅವರು ಬೆಂಕಿಬೊಮ್ಮರ ಸ್ಥಾನಕ್ಕೆ ರಾಜಿನಾಮೆ ಬಿಸಾಕಿದ್ದಾರೆ. ಗೆದ್ದಲು ಸಂಭ್ರಮದಿಂದ ತೋಟಕ್ಕೆ ಗೊಬ್ಬರ ಉತ್ಪಾದಿಸಿ ಕೊಡುತ್ತಿವೆ. ಅವುಗಳಿಗೆ ಸಲಾಂ ಹೇಳಲು ಬೇರೆ ಕಾರಣ ಇನ್ನೇನು ಬೇಕು? ಆದರೂ ಮುಳ್ಳು ಇನ್ನಿತರ ಕಸಗಳನ್ನು ಸುಡುವುದು ಮುಂದುವರಿದಿದೆ. ಏನನ್ನೂ ಸುಡುವ ಅಗತ್ಯವಿಲ್ಲ, ಬಂಡೆಯೇ ದಿನಪತ್ತಿನ ಮೇಲೆ ಕರಗುತ್ತದೆ ಎಂದರೆ ಇದ್ಯಾವ ಲೆಕ್ಕ?

ಎಷ್ಟೋ ಜನ ಗೆದ್ದಲು ಎಂದರೆ ಸಾವು ಎಂದು ತಿಳಿಯುತ್ತಾರೆ. ಗೆದ್ದಲು ಎಂದರೆ ಹುತ್ತದತ್ತ ಇವರ ಚಿತ್ತ ಹರಿಯುತ್ತದೆ, ಹಾವುಗಳು ಇವರನ್ನು ಸುತ್ತಿಕೊಳ್ಳುತ್ತವೆ, ಗೆದ್ದಲು ಎಂದರೆ ನಾಶ ಎಂದೆ ಇವರ ಸ್ವಷ್ಟ ನಿಲುವು. ಆದರೆ ವಾಸ್ತವವೇ ಬೇರೆ. ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿಗಳೆಂದು ಅವರಿಗೆ ಗೊತ್ತಿಲ್ಲ. ನಿಮ್ಮ ಹೊಲ ತೋಟಗಳಲ್ಲಿ ಗೆದ್ದಲು ಒಣಗಿದ ಎಲೆ, ಗರಿ, ತೊಗಟೆ ಮುಂತಾದ ಪದಾರ್ಥಗಳನ್ನು ತಿಂದು ಬದುಕುತ್ತವೆ. ಇದರಿಂದ ಯಾರಿಗೂ ಯಾವ ತೊಂದರೆಯೂ ಇಲ್ಲ. ಇವುಗಳನ್ನು ಆಜನ್ಮ ವೈರಿಗಳೆಂದು ಭಾವಿಸುವುದು ತಪ್ಪು. ಅನೇಕರಿಗೆ ತಮ್ಮ ವೈರಿ ಯಾರೆಂದು ತಿಳಿಯುವುದೇ ಇಲ್ಲ, ತಮ್ಮ ಮಿತ್ರರನ್ನೇ ವೈರಿಗಳೆಂದು ತಿಳಿದು ಸುಟ್ಟು ಹಾಕುತ್ತಾರೆ. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ. ಕಡಿಮೆ ಖರ್ಚು ಒಳ್ಳೆ ಫಸಲು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ. ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತೋಟವನ್ನು ಸುಡುಗಾಡು ಮಾಡದೆ ಕಾಯುವ ಕಾಡು ಮಾಡುವ ಸಂದೇಶದೊಂದಿಗೆ ಕೃಷಿಯ ಸಂತೋಷ ಸಾರುವ ಸುಂದರ ಲೇಖನ.
    ಧನ್ಯವಾದಗಳು ಬಿಳಿಗೆರೆ ಸರ್ ಮತ್ತು ಗೌರಿ.ಕಾಮ್

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...