Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿ.. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ.

- Advertisement -
- Advertisement -

ನೀಟಾಗಿ ತೋಟ ಇಡುವುದೆಂದರೆ ಸಕಲ ಸಾವಯವ ವಸ್ತುಗಳನ್ನು ಅಲ್ಲಲ್ಲಿ ಗುಡ್ಡೆ ಹಾಕಿ ಸುಟ್ಟು, ತೋಟದ ಬದುಗಳನ್ನೆಲ್ಲಾ ಗುಡಿಸಿ ಅಂದವಾಗಿ ಕಾಣುವಂತೆ ಇಟ್ಟುಕೊಳ್ಳುವುದು ಎಂದು ನಂಬಿದ್ದ ನಮ್ಮಪ್ಪ ಹಾಗೇ ಇಟ್ಟುಕೊಂಡಿದ್ದರು. “ಇವರ ಅಪ್ಪ ಎಷ್ಟು ಅಚ್ಚುಕಟ್ಟಾಗಿ ತೋಟ ಇಟ್ಟುಕೊಂಡಿದ್ದರು, ನಡುಮನೆಯಂಥಾ ತೋಟವನ್ನು ಈ ಮನುಷ್ಯ ತಿಪ್ಪೆ ಗುಂಡಿ ಮಾಡಿ ಗಬ್ಬೆಬ್ಬಿಸಿದ್ದಾನೆ, ಇವನ ಪ್ರಯೋಗಕ್ಕಷ್ಟು ಬೆಂಕಿ ಹಾಕ, ಅಡವಾಗಿ ಸಂಬಳ ಬರುತ್ತೆ ಏನೇನಾದರು ಮಾಡಂಗಾಗುತ್ತೆ..” ಇತ್ಯಾದಿ ಬೈಗುಳಗಳನ್ನು ನಮ್ಮ ತೋಟದ ದಾರಿಯಲ್ಲಿ ಸಾಗುವ ಜನರು ಬಿತ್ತರಿಸುವಾಗ, ನಾನು ಬೇಲಿ ಸಾಲಲ್ಲಿ ಕೂತು ಆಲಿಸಿದ್ದೇನೆ. ಇದು ನನ್ನ ಭಾಗ್ಯ ಎಂದೇ ತಿಳಿದಿದ್ದೇನೆ. ಏಕೆಂದರೆ ಹಾಗೆ ಬೈದವರೇ ನಮ್ಮ ತೋಟವನ್ನು ಅನುಸರಿಸಿ ದಾರಿಗೆ ಬಂದಿದ್ದಾರೆ.

ಅವರ ಈ ಅಂಬೋಣಕ್ಕೆ ಕಾರಣವೂ ಇತ್ತು. ಮೊದಲು ನಾವು ತೋಟದ ಉಳುಮೆ ಬಿಟ್ಟಾಗ ಎಲ್ಲಾ ತೋಟದ ಉಳಿಕೆಯನ್ನು ಮರದ ಬುಡದಲ್ಲೆ ರಾಶಿಯಾಗುವಂತೆ ಬಿಟ್ಟ ಪರಿಣಾಮ ಅತಿಯಾಗಿ ಸೆದಾಲು ಉಂಟಾಯಿತು. ಅದರ ಮಧ್ಯದಲ್ಲಿ ಅನಗತ್ಯ ತರಾವರಿ ಗಿಡಗಳನ್ನು ಬೆಳೆಯಲು ಬಿಟ್ಟ ಕಾರಣ ತೋಟ ಕಾಡಿನ ಸ್ವರೂಪಕ್ಕೆ ತಲುಪಿತ್ತು. ನಡುಮನೆಯಂತಿದ್ದ ತೋಟವೀಗ ಒಡೆಯರಿಲ್ಲದೆ ರಜ ತುಂಬಿದ ತೋಟವಾಗಿ ಅವರಿಗೆ ಕಾಣತೊಡಗಿತ್ತು. ಕಾಲ ಕಳೆದಂತೆ ನಮಗೂ ಅದರ ಬಿಸಿ ತಟ್ಟಿತು. ತೋಟದೊಳಗೆ ಕೆಲಸ ಮಾಡುವುದು ಕಷ್ಟವಾಯಿತು. ಹುಳು ಹುಪ್ಪಡಿ ಮತ್ತು ಆಕಸ್ಮಿಕ ಬೆಂಕಿಯ ಭಯಗಳು ಸೇರಿಕೊಂಡು ನಮ್ಮನ್ನು ಎಚ್ಚರಿಸಿದವು.

ನಾವೀಗ ತೋಟದ ಉಳಿಕೆಯನ್ನು ನೆಲಕ್ಕೆ ವ್ಯವಸ್ಥಿತವಾಗಿ ಹೊದಿಸುತ್ತೇವೆ. ಅತಿ ಹೆಚ್ಚಾದ ಸಾವಯವ ಉಳಿಕೆಯನ್ನು ಬುಡದಿಂದ ತೆಗೆದು ಕಡಗಿಗೆ ಹಾಕುತ್ತೇವೆ. ಈ ಎಲ್ಲ ಉಳಿಕೆ ನೆಲದ ಸಂಪರ್ಕಕ್ಕೆ ಬರುವ ಕಾರಣ ಗೆದ್ದಲು ಆಯಾ ವರ್ಷದ ಉಳಿಕೆಯನ್ನು ಆಯಾ ವರ್ಷವೇ ತಿಂದು ಮಣ್ಣು ಮಾಡುತ್ತವೆ. ಅನಗತ್ಯ ಗಿಡಗಳನ್ನು ಕಿತ್ತುಹಾಕಿ ತಿರುಗಾಡಲು ಅನುಕೂಲ ಮಾಡಿಕೊಳ್ಳುತ್ತೇವೆ.

ಈಗ ತೋಟ ನೋಡಿದವರು ಮೊದಲಿನಂತೆ ಬೈಯ್ಯದೆ ಒಪ್ಪುವುದಕ್ಕೆ ಮನಸ್ಸು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾವೂ ಬೆಳೆಗಳ ಉಳಿಕೆಗಳನ್ನು ಸುಡುವುದನ್ನು ನಿಲ್ಲಿಸಿ ಗೆದ್ದಲಿಗೆ ಉಣಿಸುತ್ತಿದ್ದಾರೆ. ಈಗವರಿಗೆ ಗೊತ್ತಾಗಿದೆ ಸುಟ್ಟರೆ ಸಿಕ್ಕುವುದು ಬೂದಿಯೆಂದು, ತೋಟ ಸುಡುಗಾಡಾಗುವುದೆಂದು. ತೋಟ ಸ್ವಲ್ಪ ಅಸ್ತವ್ಯಸ್ತವಾಗಿದ್ದರೂ ಪರವಾಗಿಲ್ಲವೆಂಬ ತಿಳುವಳಿಕೆ ಅವರಿಗೀಗ ಬಂದಿದೆ.

ಕೆಲವರು ಇಂಥ ಸಾವಯವ ಉಳಿಕೆಗಳನ್ನು ಪುಡಿಮಾಡಲು ದೊಡ್ಡ ಮಿಷನ್‌ ತಂದು ಪ್ರಯತ್ನಿಸಿದರು. ಹೀಗೆ ಮಾಡದಿದ್ದರೆ ತೆಂಗಿನ ಎಡಮಟ್ಟೆ, ಕುರಂಬಳೆ, ಮಟ್ಟೆ ಇತ್ಯಾದಿಗಳು ಕರಗುವುದಿಲ್ಲವೆಂಬುದು ಇವರ ಅಂಬೋಣವಾಗಿತ್ತು. ಆದರೆ ಇದು ಬಲು ಖರ್ಚಿನ, ಅತಿ ಶ್ರಮದ ಬಾಬ್ತು. ನಿಜ, ಎಡಮಟ್ಟೆಗಳು ಬೇಗ ಕರಗುವುದಿಲ್ಲ, ಅದಕ್ಕೆ ನಾವು ಈ ಎಡಮಟ್ಟೆಗಳನ್ನು ಬೇಲಿ ಸಾಲಲ್ಲಿ ವ್ಯವಸ್ಥಿತವಾಗಿ ಒಟ್ಟುತ್ತೇವೆ. ಅವು ಅಲ್ಲಿ ನಿಧಾನವಾಗಿ ಗೆದ್ದಲು ಪಾಲಾಗಿ ಗೊಬ್ಬರವಾಗುತ್ತದೆ. ಬೆಟ್ಟಕ್ಕೆ ಕಲ್ಲು ಹೊರುವುದು ತಪ್ಪುತ್ತದೆ. ತೋಟದೊಳಗೇ ಗೊಬ್ಬರ ಉತ್ಪಾದನೆಯಾಗಿ ಮೇಲೆ ಫಲ ಪಲ್ಲವಿಸುವ ವಿಸ್ಮಯವಿದು.

ಈಗ ನಮ್ಮ ತೋಟದ ಸುತ್ತಮುತ್ತಲ ರೈತರಿಗೆ ಸುಡುವುದರ ನೋವು ಮತ್ತು ಸಾವು ಅರ್ಥವಾಗಿದೆ. ಅವರು ಸುಡುತ್ತಿದ್ದುದು ಕೇವಲ ತೆಂಗಿನ ಉಳಿಕೆಗಳಷ್ಟೇ ಅಲ್ಲ, ನಮಗೆ ಉಪಕಾರಿಯಾದ ಗೆದ್ದಲನ್ನು ಇನ್ನಿತರ ಜೀವಿಗಳನ್ನು ಎಂಬ ಅರಿವು ಉಂಟಾಗಿದೆ. ಅದಕ್ಕೀಗ ಅವರು ಬೆಂಕಿಬೊಮ್ಮರ ಸ್ಥಾನಕ್ಕೆ ರಾಜಿನಾಮೆ ಬಿಸಾಕಿದ್ದಾರೆ. ಗೆದ್ದಲು ಸಂಭ್ರಮದಿಂದ ತೋಟಕ್ಕೆ ಗೊಬ್ಬರ ಉತ್ಪಾದಿಸಿ ಕೊಡುತ್ತಿವೆ. ಅವುಗಳಿಗೆ ಸಲಾಂ ಹೇಳಲು ಬೇರೆ ಕಾರಣ ಇನ್ನೇನು ಬೇಕು? ಆದರೂ ಮುಳ್ಳು ಇನ್ನಿತರ ಕಸಗಳನ್ನು ಸುಡುವುದು ಮುಂದುವರಿದಿದೆ. ಏನನ್ನೂ ಸುಡುವ ಅಗತ್ಯವಿಲ್ಲ, ಬಂಡೆಯೇ ದಿನಪತ್ತಿನ ಮೇಲೆ ಕರಗುತ್ತದೆ ಎಂದರೆ ಇದ್ಯಾವ ಲೆಕ್ಕ?

ಎಷ್ಟೋ ಜನ ಗೆದ್ದಲು ಎಂದರೆ ಸಾವು ಎಂದು ತಿಳಿಯುತ್ತಾರೆ. ಗೆದ್ದಲು ಎಂದರೆ ಹುತ್ತದತ್ತ ಇವರ ಚಿತ್ತ ಹರಿಯುತ್ತದೆ, ಹಾವುಗಳು ಇವರನ್ನು ಸುತ್ತಿಕೊಳ್ಳುತ್ತವೆ, ಗೆದ್ದಲು ಎಂದರೆ ನಾಶ ಎಂದೆ ಇವರ ಸ್ವಷ್ಟ ನಿಲುವು. ಆದರೆ ವಾಸ್ತವವೇ ಬೇರೆ. ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿಗಳೆಂದು ಅವರಿಗೆ ಗೊತ್ತಿಲ್ಲ. ನಿಮ್ಮ ಹೊಲ ತೋಟಗಳಲ್ಲಿ ಗೆದ್ದಲು ಒಣಗಿದ ಎಲೆ, ಗರಿ, ತೊಗಟೆ ಮುಂತಾದ ಪದಾರ್ಥಗಳನ್ನು ತಿಂದು ಬದುಕುತ್ತವೆ. ಇದರಿಂದ ಯಾರಿಗೂ ಯಾವ ತೊಂದರೆಯೂ ಇಲ್ಲ. ಇವುಗಳನ್ನು ಆಜನ್ಮ ವೈರಿಗಳೆಂದು ಭಾವಿಸುವುದು ತಪ್ಪು. ಅನೇಕರಿಗೆ ತಮ್ಮ ವೈರಿ ಯಾರೆಂದು ತಿಳಿಯುವುದೇ ಇಲ್ಲ, ತಮ್ಮ ಮಿತ್ರರನ್ನೇ ವೈರಿಗಳೆಂದು ತಿಳಿದು ಸುಟ್ಟು ಹಾಕುತ್ತಾರೆ. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ. ಕಡಿಮೆ ಖರ್ಚು ಒಳ್ಳೆ ಫಸಲು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ. ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತೋಟವನ್ನು ಸುಡುಗಾಡು ಮಾಡದೆ ಕಾಯುವ ಕಾಡು ಮಾಡುವ ಸಂದೇಶದೊಂದಿಗೆ ಕೃಷಿಯ ಸಂತೋಷ ಸಾರುವ ಸುಂದರ ಲೇಖನ.
    ಧನ್ಯವಾದಗಳು ಬಿಳಿಗೆರೆ ಸರ್ ಮತ್ತು ಗೌರಿ.ಕಾಮ್

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...