Homeಕರ್ನಾಟಕನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ನಿಮ್ಮ ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ: ಟಿವಿ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಆಕ್ರೋಶ

- Advertisement -
- Advertisement -

ನಾನು ನಿರ್ಮಾಪಕನಾಗಿದ್ದೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಮ್ಮ ತಂದೆಯವರು ನನಗೆ ವಿರೋಧ ವ್ಯಕ್ತಪಡಿಸಿದ್ದರು. ಅವರು ರೇವಣ್ಣನವರಿಗೆ ಮಾತ್ರ ಆಶರ್ವಾದ ಮಾಡಿದ್ದರು. ನನಗೆ ರಾಜಕಾರಣ ಬೇಡವೆಂದಿದ್ದರು. ಆಗ ನಾನು ಅವರ ಮಾತು ಕೇಳಬೇಕಿತ್ತು, ಕೇಳಿಲ್ಲ. ಆಗ ದೇವೆಗೌಡರು ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ ನ ಚಂದ್ರಶೇಖರ್ ವಿರುದ್ಧ ನಾನು ಚುನಾವಣೆಗೆ ನಿಂತಿದ್ದು.. ಅಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಬೇಕಿತ್ತು.. ಆಗ ರಾಜಕಾರಣ ಪ್ರವೇಶಿಸಿದೆ.

ಒಂದು ಕಡೆ ದೇವೇಗೌಡರು ಮತ್ತು ಇನ್ನೊಂದು ಕಡೆ ಶಾಸಕರ ವಿಶ್ವಾಸ ನನ್ನ ಜೊತೆಗಿತ್ತು. ಆದರೆ 1999ರಲ್ಲಿ ರೇವಣ್ಣನವರು, ದೇವೇಗೌಡರು, ನಾನು ಸೋತಿದ್ದೇವು. ಅವತ್ತೇ ರಾಜಕಾರಣಕ್ಕೆ ಎಳ್ಳುನೀರು ಬಿಡಬೇಕಿತ್ತು. ಆದರೆ ಜನ.. ನನ್ನನ್ನು ನೋಡಲು ಬಂದಿದ್ದರು..  ಅವರು ನಮ್ಮ ಕೈಬಿಡಬೇಡಿ ಅಂದರು. ಹಾಗಾಗಿ ಮುಂದುವರೆದೆ. ಹಾಗಾಗಿ ಜನಗಳ ಮಧ್ಯಕ್ಕೆ ಹೋದೆ. 2004ರಲ್ಲಿ ಗೆದ್ದ.. ಅವತ್ತಿನ ರಾಜಕಾರಣ ನಿಮಗೆಲ್ಲ ಗೊತ್ತೆ ಇದೆ.

ವಿರೋಧ ಪಕ್ಷದ ನಾಯಕರಿಗೆ ಹೇಳುತ್ತೇನೆ. ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ.. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತಿದ್ದಾರೆ. ದೇಶದ ಸಂಸ್ಕೃತಿ ನಾಶ ಮಾಡಲಿಕ್ಕೆ ಈ ಸೋಷಿಯಲ್ ಮೀಡಿಯಾ ಆರಂಭವಾಗಿದೆ..

ನಾನು ತಪ್ಪು ಮಾಡಿದ್ದೇನೆ. ತಪ್ಪು ತಿದ್ದಿಕೊಂಡಿದ್ದೇನೆ.. ನನ್ನ ಜೀವನದಲ್ಲಿ ಆ ಅವಕಾಶವಿದೆ. ಆದರೆ ಬಿಜೆಪಿಯವರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಟ್ವಿಟ್ಟರ್ ನಲ್ಲಿ Session for Karnataka Trust Vote has begun But CM h.d kumaraswamy is resting at his Taj West end hotel His message is clear He will continue to loot & waste tax payers money to the very last second as CM ಅಂತ ಬರೆದಿದ್ದಾರೆ.

ನಾನು ತಾಜ್ ಹೋಟೆಲ್ ನಲ್ಲಿ ಭಾಷಣ ಪ್ರಿಪೇರ್ ಮಾಡ್ತಾ ಕೂತಿದ್ದೆ. ಹೌದು ಸ್ವಲ್ಪ ಪ್ರಯತ್ನ ಪಟ್ಟೆ.. ಏನಾದರೂ ಕೊನೆ ಹಂತದಲ್ಲಿ ವಿಶ್ವಾಸಮತ ಗೆಲ್ಲಲ್ಲಿಕ್ಕೆ, ಸದನ ಗೆಲ್ಲಿಸುತ್ತೆ ಅಂತ.. ಪ್ರಯತ್ನ ಮಾಡಿದೆ. ನಾನು ಕದ್ದು ಮುಚ್ಚಿ ಮಾತಾಡೋಲ್ಲ.. ಶಾಸಕರು ಕಣ್ಣೀರು ಹಾಕಿದ್ದಾರೆ.. ಅವರಿಗಾಗಿ ಅದಕ್ಕೋಸ್ಕರ ತಡವಾಯ್ತು.. ಈ ರಾಜ್ಯ ಲೂಟಿ ಮಾಡಲಿಕ್ಕಲ್ಲ..

ಆದರೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಬರೆಯುತ್ತೀರಿ. ನನ್ನ ಯೋಗ್ಯತೆಯ ಬಗ್ಗೆ ಮಾತಾಡುತ್ತೀರಿ. ಯೋಗ್ಯತೆಗೆ ತಕ್ಕ ಜವಾಬ್ದಾರಿ ನೀಡುತ್ತೇವೆ.. ಎಚ್ ವಿಶ್ವನಾಥ ರವರು ಸಾರ ಮಹೇಶ್ ಬಗ್ಗೆ ಬಳಸಿರುವ ಪದಬಳಕೆ.. ಬಹಳ ಕೆಟ್ಟ ರೀತಿಯ ಹೇಳಿಕೆ ಕೊಟ್ಟಿದ್ದಾರೆ..

ಇನ್ನು ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಅದನ್ನು ನೋಡಿದರೆ ಬಗ್ಗೆ ವಾಂತಿ ಬರುತ್ತೆ.. ಥೂ..

ಇವತ್ತಿನ ಮಾಧ್ಯಮಗಳಿಗೆ ಮನುಷ್ಯತ್ವ, ಮಾನವೀಯತೆ ಇದೆಯೇ.? ಪ್ರಿಂಟ್ ಮಾಧ್ಯಮಗಳು ಇನ್ನು ನಂಬಿಕೆ ಉಳಿಸಿಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ದೇಶ ಯಾಕೆ ಹಾಳು ಮಾಡುತ್ತಿದ್ದೀರಿ.. ನಿಮಗೆ ಬ್ಯುಸಿನೆಸ್ ಮಾಡಬೇಕಾರೆ ಬೇರೆ ಉದ್ಯಮ ಮಾಡಿಕೊಳ್ಳಿ. ಇಲ್ಲಿ ಬಂದು ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ. ನಾನು ಜೆ.ಪಿ ನಗರಕ್ಕೆ ಹೋಗುವಾಗ ಕ್ಯಾಮರ ಇಟ್ಟುಕೊಂಡು ಬಂದಿದ್ದರು.. ಪ್ರೈವಸಿ ಎಲ್ಲಿದೆ?

ನಾನು ನಾಡಿನ ಮುಖ್ಯಮಂತ್ರಿ ಯಾಗಿದ್ದಾಗ ಒಂದು ಮಾಧ್ಯಮದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೇವೆ.. ಕತ್ತಲೆ ಲೋಕದ ಕುಮಾರ .. ಎಂದು ವರದಿ ಮಾಡಿದ್ದರು. ಸ್ವಚ್ಛ ಭಾವನಾತ್ಮಕ ಜೀವನ ನನ್ನದು.. ಅದನ್ನು ನೋಡಿದಾಗ ಇಂತಹ ಸರ್ಟಿಫಿಕೇಟ್ ತಗೊಂಡು ಮುಖ್ಯಮಂತ್ರಿ ಆಗಬೇಕ ಅನ್ನಿಸಿತು. ಅಂದು ರಾತ್ರಿಯೆಲ್ಲ ಮಲಗಿಲ್ಲ .. ಅವತ್ತು ಎಡಗಾಲು ಸ್ವಾಧೀನ ಕಳೆದುಕೊಂಡು ಒಂದೂವರೆ ಗಂಟೆ ನೊಂದಿದ್ದೇನೆ..

ಇಂದು ನಾನು ಅತ್ಯಂತ ಸಂತೋಷವಾಗಿ ಈ ಸ್ಥಾನ ತ್ಯಜಿಸುತ್ತಿದ್ದೇನೆ. ನನಗೆ ಯಾವ ನೋವು ಇಲ್ಲ.  ಮತ್ತೊಮ್ಮೆ ವಚನ ಭ್ರಷ್ಟ.. ಎನ್ನುವ ಮಾಧ್ಯಮಗಳು ಪ್ರಶ್ನೆ ಹಾಕಿಕೊಳ್ಳಿ.

ಬಿಜೆಪಿ ಜೊತೆ 20 ತಿಂಗಳು ಇದ್ದೆ. ಅಧಿಕಾರ ಹಸ್ತಾಂತರವನ್ನು ಮಾಡಬೇಕೆಂದಿದ್ದೆ. ಈಶ್ವರಪ್ಪ ಜಗದೀಶ್ ಶೆಟ್ಟರ್ ಯಡಿಯೂರಪ್ಪರವರ ಒಪ್ಪಂದ ಮಾಡಿಕೊಂಡಿದೆ. ಆಗ ನನ್ನ ಗೆಳೆಯರಾದ ಬಾಲಕೃಷ್ಣ, ಚಲುವರಾಯಸ್ವಾಮಿ ಜೊತೆಗಿದ್ದರು. ಅಗ್ರಿಮೆಂಟ್ ಮಾಡಿಕೊಂಡರು. ದೇವೆಗೌಡರು ಮತ್ತು ಬಿಜೆಪಿ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಆದರೆ ಆಗಲಿಲ್ಲ ಅಷ್ಟೇ..

ನಾನು ತಾಜ್ ವೆಸ್ಟೆಂಡ್ ನಲ್ಲಿಯೇ ಇರುತ್ತೇನೆ ಅಂತ ಆರೋಪ ಮಾಡುತ್ತೀರಿ. 2018ರ ಚುನಾವಣೆಯ ಫಲಿತಾಂಶದ ದಿನ. ಅಂದು ಅದೇ ಹೋಟೆಲ್ ನಲ್ಲಿ ಕುಳಿತು ಟಿ.ವಿ ನೋಡುತ್ತಿದ್ದೆ. ಅಂದು ರಾಜಕೀಯ ಬಿಡಬೇಕಿತ್ತು.. ಆದರೆ ಆಗ ಗುಲಾಂ ನಬಿ ಆಜಾದ್ ರವರು ದೂರವಾಣಿ ಕರೆ ಮಾಡಿ.. ನಿಮಗೆ ಬೆಂಬಲ ನೀಡುತ್ತೇವೆ, ಸಮ್ಮಿಶ್ರ ಸರ್ಕಾರ ಮಾಡೋಣ ಅಂದರು. ಹಾಗಾಗಿ ಆ ರೂಂ ಬಗ್ಗೆ ಪ್ರೀತಿ ಅಷ್ಟೇ.

ನಾನು ವಚನ ಭ್ರಷ್ಟ ಅಲ್ಲ.. ಒಂಭತ್ತು ದಿನದ ಮುಖ್ಯಮಂತ್ರಿ ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಬೇಕು. ಈ ನಾಡಿನ ಜನತೆಗೆ ತಿಳಿಸಬೇಕಿದೆ. ದೇವೇಗೌಡರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಸ್ವಲ್ಪ ದಿನದಲ್ಲಿಯೇ ಹೊರಬರುತ್ತೆ. ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ.. ಈ ಸರ್ಕಾರ ಇರುತ್ತೊ ಹೋಗುತ್ತೊ .. ಆದರೆ ನನ್ನ ಅಧಿಕಾರಿಗಳಿಗೆ ಹೃದಯತುಂಬಿದ ಧನ್ಯವಾದಗಳು

ಡೇ ಒಂದರಿಂದ ಮಾಧ್ಯಮಗಳು ತೊಂದರೆ ಕೊಟ್ಟಿವೆ. ಸುಭದ್ರ ಸರ್ಕಾರಗಲೇ ಕೆಲಸ ಮಾಡುವುದು ಕಷ್ಟ. ನಮ್ಮ ನಡವಳಿಕೆ ನೋಡಿ, ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಇದು ಕೇವಲ ನನ್ನ ಸಾಧನೆ ಅಲ್ಲ.. ಅವರೆಲ್ಲರ ಪಾಲಿದೆ.

ಸಾಲ ಮನ್ನಾ .. 25 ಸಾವಿರ ಕೋಟಿ ತೆಗೆದಿದ್ದೇವೆ.. ರೈತರಿಗೆ ಮೋಸ ಮಾಡಲಿಕ್ಕೆ ಹೋಗಿಲ್ಲ.. 2018ರಲ್ಲಿ ಸಿದ್ದರಾಮಯ್ಯ ನವರು ಫೇಬ್ರವರಿ ತಿಂಗಳ ಬಜೆಟ್ ಮಂಡನೆ ಮಾಡಿದ್ದರು. ನಂತರ ನಾನು ಅಧಿಕಾರಕ್ಕೆ ಬಂದರೂ ಅವರ ಯಾವುದೇ ಕಾರ್ಯಕ್ರಮ ಕಡಿತ ಮಾಡಿಲ್ಲ.. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾದ 2700 ಕೋಟಿ ರೂ ನಾವು ತೀರಿಸಿದೆವು. ರೈತರಿಗೆ ನಮ್ಮಿಂದ ಮೋಸವಾಗಿಲ್ಲ.. ಟ್ರಾಕ್ಟರ್, ಮನೆ ಕಟ್ಟುವಾಗ ಸಾಲ ಮಾಡಿದರೆ ಅದಕ್ಕೂ ಕುಮಾರಸ್ವಾಮಿ ಕಾರಣ ಎಂದು ಈ ಮಾಧ್ಯಮಗಳು ಅರಚುತ್ತವೆ.

ಒಂದೇ ಒಂದು ಹಗರಣ ಇದ್ರೆ ನನ್ನ ಮುಂದೆ ತಂದುಕೊಡಿ. ಬರಿ ಚಪಲಕ್ಕೆ ಹೇಳಬೇಡಿ. ದಾಖಲೆಗಳ ಸಮೇತ ತಂದಿಡಿ. ನಾನು ಸರ್ಕಾರಿ ಕಾರು, ಬಂಗಲೆ, ಟಿ.ಎ ಡಿ.ಎ, ಪೆಟ್ರೋಲ್ ಖರ್ಚು ತಗೊಂಡಿಲ್ಲ.. ಜನರ ತೆರಿಗೆ ಹಣ ಖರ್ಚು ಮಾಡಬೇಕಾದರೆ ನನ್ನ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ಖರ್ಚು ಮಾಡುತ್ತೇನೆ.

ಪ್ರಧಾನ್ ಮಂತ್ರಿ ಸಮ್ಮಾನ್ ಯೋಜನೆಗೆ 35 ಲಕ್ಷ ರೈತರ ವಿವರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದೇವೆ. ಆದರೆ ಹಣ 15 ಲಕ್ಷ ರೈತ ಕುಟುಂಬಗಳಿಗೆ ಮಾತ್ರ. 1500 ಕೋಟಿ ಮಾತ್ರ. ನಾನು ತಪ್ಪು ಮಾಡಿದ್ರೆ ಕಿವಿಹಿಂಡಿ ಬುದ್ದಿ ಹೇಳಿ. ಹಾಗೆಯೇ ಒಳ್ಳೇಯ ಕೆಲಸ ಮಾಡಿದರೆ ಮನಸ್ಸು ಬಿಚ್ಚು ಹೇಳಿ. ಬೋಪಯ್ಯ ಅಪ್ಪಚ್ಚು ರಂಜಾನ್ ಕೇಳಿ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಬಂದಾಗ ಯಾವ ರೀತಿ ಕೆಲಸ ಮಾಡಿದ್ದೀವಿ ಅಂತ. ಯಾವ ರೀತಿ ಕೆಲಸ ಮಾಡಿದ್ದೀನಿ ..

ಬಸವರಾಜ ಬೊಮ್ಮಾಯಿ ಜ್ಯೋತಿಷಿ ಯಾವಾಗ ಆದ್ರಿ? ಫೆಬ್ರವರಿ ನಲ್ಲೇ ನುಡಿದಿದ್ದರು.. ಈ ಸರ್ಕಾರ ಬೀಳುತ್ತೆ ಅಂತ. ನಾನು ಜ್ಯೋತಿಷಿ ಕೇಳಲ್ಲ.. ನಂಬೋಲ್ಲ. ರೇವಣ್ಣನ ಬಗ್ಗೆ ಮಾತಾಡುತ್ತಾರೆ.  ದಿನಾ ಟಿವಿಯೊಳಗೆ ನಿಂಬೆ ಹಣ್ಣಿನ ಚರ್ಚೆ ಮಾಡುತ್ತಾರೆ. ಆತ ಅಮಾಯಕ. ನನ್ನ ಪ್ರಕಾರ ಮುಗ್ಧ.

ನಾನು ಓಡಿ ಹೋಗೋಲ್ಲ. ವಿಶ್ವಾಸಮತಕ್ಕೆ ಹಾಕುತ್ತೇನೆ. ಗೆಲುವು ಸೋಲು ಎರಡನ್ನು ಸಮಭಾವದಿಂದ ಸ್ವೀಕರಿಸುತ್ತೇನೆ…

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...