Homeಕರ್ನಾಟಕದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

- Advertisement -
- Advertisement -

ಲಲಿತಮ್ಮನವರು ಹುಟ್ಟಿದ್ದು ಮದ್ದೂರು ತಾಲೂಕು ಕೌಡ್ಲೆ. ಬೆಳೆದಿದ್ದು ಬೆಂಗಳೂರು. ದೊರೆಸ್ವಾಮಿಯವರ ಜೊತೆ ಮದುವೆ (ದೊರೆಸ್ವಾಮಿಯವರ ಪ್ರಕಾರ “ಒಂದು ರೀತಿಯಲ್ಲಿ ಲವ್ ಮ್ಯಾರೇಜ್”!) ಡಿಸೆಂಬರ್ 1950. ಭರ್ತಿ 69 ವರ್ಷಗಳ ಸಹಜೀವನ ನಡೆಸಿ ಈಗ ತಮ್ಮ 89 ವರ್ಷನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಜೀವನ ಪೂರ್ತಿ ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತ ಸಾರ್ಥಕ ಬದುಕು ಬದುಕಿದರು. ಗಂಡನಾದ ಜಂಗಮ ತಿಂಗಳಿಗೆ ಕೈಗೆ ತಂದಿಡುತ್ತಿದ್ದ 100 ರೂ. ಮಾಸಾಶನದಲ್ಲಿ 34 ರೂಪಾಯಿ ಮನೆ ಬಾಡಿಗೆ ಕಟ್ಟಿ, ಮೂರೋ ನಾಲಕೋ ರೂಪಾಯಿ ಮನೆಗೆಲಸದಾಕೆಗೆ ಕೊಟ್ಟು ಮಿಕ್ಕಿದ್ದರಲ್ಲಿ ಎರಡು ಮಕ್ಕಳ ಎಲ್ಲ ಬೇಕುಬೇಡಗಳನ್ನು ನಿಭಾಯಿಸಿ ಮನೆ ತೂಗಿಸಿಕೊಂಡು ಬಂದ ಗಟ್ಟಿಗಿತ್ತಿ ಅವರಾಗಿದ್ದರು.

ಗಂಡ ಸತತ ನಾಲ್ಕು ವರ್ಷಗಳ ಕಾಲ ಭೂದಾನ ಚಳವಳಿಯ ಸಂಘಟಕರಾಗಿ ತಿಂಗಳಲ್ಲಿ ಮೂರುವಾರ ಊರೂರು ತಿರುಗಿ ಒಂದು ವಾರ ಮಾತ್ರ ಮನೆಯಲ್ಲಿರುತ್ತಿದ್ದುದು.

ಖಾದಿ ಪ್ರಸಾರ ಇತ್ಯಾದಿ ಕಾರಣ

ನಂತರ ಕೂಡ ದೊರೆಸ್ವಾಮಿಯವರು ಖಾದಿ ಪ್ರಸಾರ, ಪರಿಸರ ಚಳವಳಿ, ಶಾಲೆಗಳು-ಸಹಕಾರಿ ಸಂಘಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಇವೇ ಮುಂತಾದವುಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ತಿಂಗಳಲ್ಲಿ ಮೂರು ವಾರ ಹೊರಗೆ ಇರುತ್ತಿದ್ದವರೇ. ಕೈಗಾ ಚಳವಳಿಯಲ್ಲಿ ಸತತ ಎರಡು ವರ್ಷ ಆ ಕಡೆಯೇ ಇದ್ದವರು. ಆಗೆಲ್ಲ ಅಮ್ಮ ‘ಏಕಾಂಗವೀರ’ರೇ!

ಸಬ್‍ಇನ್‍ಸ್ಪೆಕ್ಟರ್‍ಗೇ ಗದರಿದರು!

ತುರ್ತುಪರಿಸ್ಥಿತಿ ಅವಧಿಯಲ್ಲಿ ದೊರೆಸ್ವಾಮಿಯವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗ ಅಮ್ಮ ಪ್ರತಿವಾರ ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ, ರವೆಉಂಡೆ, ಪುಳಿಯೋಗರೆ… ಹೀಗೆ ಏನಾದರೊಂದು ತಿಂಡಿಯನ್ನು ಎಲ್ಲ ಸತ್ಯಾಗ್ರಹಿಗಳಿಗೂ ಆಗುವಷ್ಟು ಮಾಡಿಕೊಂಡು ಜೈಲುಭೇಟಿಗೆ ಹೋಗುವರು. ಎಲ್ಲರೂ ಗಂಟೆ ಕಾಲ ಕೂತು ಹರಟುತ್ತ ಕುರುಕುತ್ತ ಸಮಯ ಕಳೆಯುವರು. ಜೈಲು ಸಿಬ್ಬಂದಿ ಕೂಡ ಸಾಮಾನ್ಯವಾಗಿ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ ಒಮ್ಮೆ ಯಾರೋ ಒಬ್ಬ ಹೊಸಬ ‘ಉತ್ಸಾಹಿ’ ಸಬ್‍ಇನ್‍ಸ್ಪೆಕ್ಟರ್‍ಗೆ ಗ್ರಹಚಾರ ಕೆಟ್ಟುಬಿಟ್ಟಿತ್ತು! “ಅದನ್ನೆಲ್ಲ ಇಲ್ಲಿ ತರಬಾರದಮ್ಮ. ಇದು ಜೈಲು. ಗೊತ್ತು ತಾನೆ? ಇಲ್ಲಿ ಅದನ್ನೆಲ್ಲ ಅಲೋ ಮಾಡಲ್ಲ” ಅಂದರು. ಅಮ್ಮ ಅವರಿಗೆ ಸಮಾಧಾನವಾಗಿಯೇ ತಿಳಿಹೇಳಿ ನೋಡಿದರು. ಆತ ಜಗ್ಗಲಿಲ್ಲ. ತನ್ನ ಮಗನ ವಯಸ್ಸಿನ ಆತನಿಗೆ “ಇದೇನಪ್ಪ. ಇಷ್ಟು ದಿನ ಬಿಡುತ್ತಿದ್ದರು, ನಿಮ್ಮದೊಂದು ಹೊಸ ರೂಲ್ಸಾ?” ಎಂದರು ಅಮ್ಮ. ಆತನದು ಬಿಸಿರಕ್ತ. ತನ್ನ ರೂಲುದೊಣ್ಣೆ ಅಡ್ಡಹಿಡಿದು ತಡೆದು ಬಿಟ್ಟ. ಅಮ್ಮ ರಣಚಂಡಿಯಾಗಿ ಬಿಟ್ಟರು!

“ಏನು ಮಾಡ್ತೀಯೋ ಮಾಡ್ಕೋ. ಜೈಲಿಗೆ ಹಾಕ್ತೀಯಾ? ತಯಾರಾಗಿಯೇ ಬಂದಿದೀನಿ. ಈ ತಿಂಡಿಯನ್ನು ಮಾತ್ರ ನಾನು ಹಂಚದೆ ವಾಪಸ್ ಹೋಗೋಳಲ್ಲ..” ಎನ್ನುತ್ತಾ ಅವನ ರೂಲ್ ದೊಣ್ಣೆಯನ್ನೂ ಅವನನ್ನೂ ತಳ್ಳಿ ನುಗ್ಗಿ ನಡೆದೇಬಿಟ್ಟರು. ಇದು ಯಾಕೋ ವಿಕೋಪಕ್ಕೆ ಹೋಗಬಹುದೆಂದು ಹೆದರಿದ ಇತರ ಸಿಬ್ಬಂದಿ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಿದರು. ಅಮ್ಮನಿಗೆ, “ಸಾಹೇಬ ಹೊಸಬ. ನಿಧಾನವಾಗಿ ನಾವು ಅವನಿಗೆ ಹೇಳ್ತೀವಿ. ಇವತ್ತೊಂದು ದಿನ ನಮ್ಮ ಕೈಲೇ ಕೊಡಿಯಮ್ಮ, ನಾವೇ ಹಂಚ್ತೀವಿ” ಅಂತ ರಣಚಂಡಿಯನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು!

ದೊರೆಸ್ವಾಮಿಯವರು ಅಮ್ಮನನ್ನು ನೆನೆದು ಹೇಳುತ್ತಾರೆ..

“70 ವರ್ಷಗಳ ಸಾರ್ಥಕ ಬದುಕು ಒಟ್ಟಿಗೆ ಕಳೆದೆವು. ಕಷ್ಟ ಸುಖ ಎಲ್ಲವನ್ನೂ ಕಂಡಿದ್ದೀವಿ. ಕಷ್ಟವನ್ನು ಪಟ್ಟಿದ್ದೀವಿ, ಸುಖವನ್ನು ಹಂಚಿಕೊಂಡಿದ್ದೆವು. ನಿಮ್ಮಂತ ನೂರಾರು ಗೆಳೆಯರನ್ನು ಪಡೆಯಲಿಕ್ಕೆ ಅವಳು ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅವಳು ನನ್ನ ಪಾಡಿಗೆ ನನ್ನನ್ನು ಬಿಟ್ಟು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದರಿಂದಲೇ ನಾನು ಊರೂರು ತಿರುಗಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಲಿಕ್ಕೆ ಸಾಧ್ಯವಾಯಿತು. ನನಗೆ ನೀವೆಲ್ಲರೂ ಸೇರಿ ಸಮಾಜ ನನ್ನ ರಕ್ಷಣೆಗೆ ನಿಲ್ಲುತ್ತದೆ. ಒಂದು ವೇಳೆ ನಾನೇ ಮೊದಲು ಹೊರಟುಹೋಗಿದ್ದರೆ ಅವಳನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬ ಆತಂಕ ಕಾಡುತ್ತಿತ್ತು. ಆ ಆತಂಕ ಇವತ್ತು ದೂರವಾಗಿದೆ. ಅವಳು ಮುಂದೆ ಹೋಗಿದ್ದಾಳೆ. ಇದು ನಿಜವಾಗಿಯೂ ಸಮಾಧಾನದ ದಿನವಾಗಿದೆ.

ಹೌದು ಅವಳಿಲ್ಲದಿರುವುದು ಹಲವು ದಿನಗಳು ಕಾಡುತ್ತದೆ ನಿಜ. ಆದರೂ ಪರವಾಗಿಲ್ಲ. ನೀವೆಲ್ಲರೂ ಇದ್ದೀರಿ, ಇಷ್ಟೊಂದು ಜನ ನನ್ನ ವಿಶ್ವಾಸಿಗಳು, ಸ್ನೇಹಿತರೂ, ಹಿತೈಷಿಗಳಾಗಿದ್ದಿರಿ. ನಿಮ್ಮೆಲ್ಲರ ಬೆಂಬಲದೊಂದಿಗೆ ಇನ್ನುಳಿದ ಜೀವನವನ್ನು ಕಳೆಯಬಲ್ಲೆ ಎಂಬುದಾಗಿ ದೊರೆಸ್ವಾಮಿಯವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ.

ಸಾವಿನಲ್ಲೂ ಮಾದರಿ

ಶ್ರೀಮತಿ ಲಲಿತಮ್ಮನವರಿಗೆ ದೊರೆಸ್ವಾಮಿಯವರು ಮತ್ತವರ ಕುಟುಂಬವರ್ಗದವರು ಯಾವುದೇ ಸಾಂಪ್ರದಾಯಿಕ ಅಂತ್ಯಸಂಸ್ಕಾರ ಮಾಡದೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೋಸ್ಕರ ದೇಹದಾನ ಮಾಡಿದ್ದಾರೆ. ಸಮಾಜಕ್ಕೆ ಮಾದರಿ ಮತ್ತು ಆದರ್ಶವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದ ಭಿವಾಡಿಯಲ್ಲಿ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ಘರ್ಷಣೆ: ಯುವಕ ಸಾವು

ಜೈಪುರ: ರಾಜಸ್ಥಾನದ ಭಿವಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ಮೃತನ ಕುಟುಂಬ ಪ್ರತಿಭಟನೆ ನಡೆಸಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...

ಖಮೇನಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ತಮ್ಮ ನಿಲುವು ತಿಳಿಸಬೇಕು: ರಾಹುಲ್ ಗಾಂಧಿ ಒತ್ತಾಯ

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆ. ಅಮೆರಿಕ ಮತ್ತು...

ಇರಾನ್‌ ಮೇಲೆ ಇಸ್ರೇಲ್ ದಾಳಿ: ಟೆಹ್ರಾನ್‌ನಿಂದ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕೋಮ್‌ಗೆ ಸ್ಥಳಾಂತರ

ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ತೀವ್ರಗೊಳ್ಳುತ್ತಿರುವ ಮಧ್ಯೆ, ಟೆಹ್ರಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಆದರೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪ್ರಜೆಗಳನ್ನು ಮನೆಯೊಳಗೆ ಇರುವಂತೆ...

‘ಪಿಟಿಸಿಎಲ್‌ ಕಾಯ್ದೆ’ ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

'ಪಿಟಿಸಿಎಲ್‌ (PTCL) ಕಾಯ್ದೆ' ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು 'ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ' ಮುಖಂಡರು ಘೋಷಿಸಿದರು. ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ...

ರಾಜಸ್ಥಾನ| ‘ನೀವು ಕೆಳಜಾತಿಯವರು, ಎಲ್‌ಎಲ್‌ಬಿ ನಿಮಗೆ ಸೂಕ್ತವಲ್ಲ..’; ದಲಿತ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಜಾತಿ ನಿಂದನೆ

ರಾಜಸ್ಥಾನದ ಚುರುವಿನ ಸರ್ಕಾರಿ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ದಲಿತ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು, ಇಬ್ಬರು ಪ್ರಾಧ್ಯಾಪಕರಿಂದ ಜಾತಿ ಆಧಾರಿತ ನಿಂದನೆ, ಬೆದರಿಕೆ ಮತ್ತು ತಾರತಮ್ಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ಎಸ್‌ಸಿ...

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ರಕ್ಷಣೆ

ಬೆಂಗಳೂರು: ಸೋಮವಾರ ರಾತ್ರಿ ಉತ್ತರ ಬೆಂಗಳೂರಿನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರನ್ನು 55 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಅವರ ಪತಿ ಗುತ್ತಿಗೆದಾರ ರಮೇಶ್...

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....