Homeಕರ್ನಾಟಕದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

- Advertisement -
- Advertisement -

ಲಲಿತಮ್ಮನವರು ಹುಟ್ಟಿದ್ದು ಮದ್ದೂರು ತಾಲೂಕು ಕೌಡ್ಲೆ. ಬೆಳೆದಿದ್ದು ಬೆಂಗಳೂರು. ದೊರೆಸ್ವಾಮಿಯವರ ಜೊತೆ ಮದುವೆ (ದೊರೆಸ್ವಾಮಿಯವರ ಪ್ರಕಾರ “ಒಂದು ರೀತಿಯಲ್ಲಿ ಲವ್ ಮ್ಯಾರೇಜ್”!) ಡಿಸೆಂಬರ್ 1950. ಭರ್ತಿ 69 ವರ್ಷಗಳ ಸಹಜೀವನ ನಡೆಸಿ ಈಗ ತಮ್ಮ 89 ವರ್ಷನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಜೀವನ ಪೂರ್ತಿ ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತ ಸಾರ್ಥಕ ಬದುಕು ಬದುಕಿದರು. ಗಂಡನಾದ ಜಂಗಮ ತಿಂಗಳಿಗೆ ಕೈಗೆ ತಂದಿಡುತ್ತಿದ್ದ 100 ರೂ. ಮಾಸಾಶನದಲ್ಲಿ 34 ರೂಪಾಯಿ ಮನೆ ಬಾಡಿಗೆ ಕಟ್ಟಿ, ಮೂರೋ ನಾಲಕೋ ರೂಪಾಯಿ ಮನೆಗೆಲಸದಾಕೆಗೆ ಕೊಟ್ಟು ಮಿಕ್ಕಿದ್ದರಲ್ಲಿ ಎರಡು ಮಕ್ಕಳ ಎಲ್ಲ ಬೇಕುಬೇಡಗಳನ್ನು ನಿಭಾಯಿಸಿ ಮನೆ ತೂಗಿಸಿಕೊಂಡು ಬಂದ ಗಟ್ಟಿಗಿತ್ತಿ ಅವರಾಗಿದ್ದರು.

ಗಂಡ ಸತತ ನಾಲ್ಕು ವರ್ಷಗಳ ಕಾಲ ಭೂದಾನ ಚಳವಳಿಯ ಸಂಘಟಕರಾಗಿ ತಿಂಗಳಲ್ಲಿ ಮೂರುವಾರ ಊರೂರು ತಿರುಗಿ ಒಂದು ವಾರ ಮಾತ್ರ ಮನೆಯಲ್ಲಿರುತ್ತಿದ್ದುದು.

ಖಾದಿ ಪ್ರಸಾರ ಇತ್ಯಾದಿ ಕಾರಣ

ನಂತರ ಕೂಡ ದೊರೆಸ್ವಾಮಿಯವರು ಖಾದಿ ಪ್ರಸಾರ, ಪರಿಸರ ಚಳವಳಿ, ಶಾಲೆಗಳು-ಸಹಕಾರಿ ಸಂಘಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಇವೇ ಮುಂತಾದವುಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ತಿಂಗಳಲ್ಲಿ ಮೂರು ವಾರ ಹೊರಗೆ ಇರುತ್ತಿದ್ದವರೇ. ಕೈಗಾ ಚಳವಳಿಯಲ್ಲಿ ಸತತ ಎರಡು ವರ್ಷ ಆ ಕಡೆಯೇ ಇದ್ದವರು. ಆಗೆಲ್ಲ ಅಮ್ಮ ‘ಏಕಾಂಗವೀರ’ರೇ!

ಸಬ್‍ಇನ್‍ಸ್ಪೆಕ್ಟರ್‍ಗೇ ಗದರಿದರು!

ತುರ್ತುಪರಿಸ್ಥಿತಿ ಅವಧಿಯಲ್ಲಿ ದೊರೆಸ್ವಾಮಿಯವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗ ಅಮ್ಮ ಪ್ರತಿವಾರ ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ, ರವೆಉಂಡೆ, ಪುಳಿಯೋಗರೆ… ಹೀಗೆ ಏನಾದರೊಂದು ತಿಂಡಿಯನ್ನು ಎಲ್ಲ ಸತ್ಯಾಗ್ರಹಿಗಳಿಗೂ ಆಗುವಷ್ಟು ಮಾಡಿಕೊಂಡು ಜೈಲುಭೇಟಿಗೆ ಹೋಗುವರು. ಎಲ್ಲರೂ ಗಂಟೆ ಕಾಲ ಕೂತು ಹರಟುತ್ತ ಕುರುಕುತ್ತ ಸಮಯ ಕಳೆಯುವರು. ಜೈಲು ಸಿಬ್ಬಂದಿ ಕೂಡ ಸಾಮಾನ್ಯವಾಗಿ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ ಒಮ್ಮೆ ಯಾರೋ ಒಬ್ಬ ಹೊಸಬ ‘ಉತ್ಸಾಹಿ’ ಸಬ್‍ಇನ್‍ಸ್ಪೆಕ್ಟರ್‍ಗೆ ಗ್ರಹಚಾರ ಕೆಟ್ಟುಬಿಟ್ಟಿತ್ತು! “ಅದನ್ನೆಲ್ಲ ಇಲ್ಲಿ ತರಬಾರದಮ್ಮ. ಇದು ಜೈಲು. ಗೊತ್ತು ತಾನೆ? ಇಲ್ಲಿ ಅದನ್ನೆಲ್ಲ ಅಲೋ ಮಾಡಲ್ಲ” ಅಂದರು. ಅಮ್ಮ ಅವರಿಗೆ ಸಮಾಧಾನವಾಗಿಯೇ ತಿಳಿಹೇಳಿ ನೋಡಿದರು. ಆತ ಜಗ್ಗಲಿಲ್ಲ. ತನ್ನ ಮಗನ ವಯಸ್ಸಿನ ಆತನಿಗೆ “ಇದೇನಪ್ಪ. ಇಷ್ಟು ದಿನ ಬಿಡುತ್ತಿದ್ದರು, ನಿಮ್ಮದೊಂದು ಹೊಸ ರೂಲ್ಸಾ?” ಎಂದರು ಅಮ್ಮ. ಆತನದು ಬಿಸಿರಕ್ತ. ತನ್ನ ರೂಲುದೊಣ್ಣೆ ಅಡ್ಡಹಿಡಿದು ತಡೆದು ಬಿಟ್ಟ. ಅಮ್ಮ ರಣಚಂಡಿಯಾಗಿ ಬಿಟ್ಟರು!

“ಏನು ಮಾಡ್ತೀಯೋ ಮಾಡ್ಕೋ. ಜೈಲಿಗೆ ಹಾಕ್ತೀಯಾ? ತಯಾರಾಗಿಯೇ ಬಂದಿದೀನಿ. ಈ ತಿಂಡಿಯನ್ನು ಮಾತ್ರ ನಾನು ಹಂಚದೆ ವಾಪಸ್ ಹೋಗೋಳಲ್ಲ..” ಎನ್ನುತ್ತಾ ಅವನ ರೂಲ್ ದೊಣ್ಣೆಯನ್ನೂ ಅವನನ್ನೂ ತಳ್ಳಿ ನುಗ್ಗಿ ನಡೆದೇಬಿಟ್ಟರು. ಇದು ಯಾಕೋ ವಿಕೋಪಕ್ಕೆ ಹೋಗಬಹುದೆಂದು ಹೆದರಿದ ಇತರ ಸಿಬ್ಬಂದಿ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಿದರು. ಅಮ್ಮನಿಗೆ, “ಸಾಹೇಬ ಹೊಸಬ. ನಿಧಾನವಾಗಿ ನಾವು ಅವನಿಗೆ ಹೇಳ್ತೀವಿ. ಇವತ್ತೊಂದು ದಿನ ನಮ್ಮ ಕೈಲೇ ಕೊಡಿಯಮ್ಮ, ನಾವೇ ಹಂಚ್ತೀವಿ” ಅಂತ ರಣಚಂಡಿಯನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು!

ದೊರೆಸ್ವಾಮಿಯವರು ಅಮ್ಮನನ್ನು ನೆನೆದು ಹೇಳುತ್ತಾರೆ..

“70 ವರ್ಷಗಳ ಸಾರ್ಥಕ ಬದುಕು ಒಟ್ಟಿಗೆ ಕಳೆದೆವು. ಕಷ್ಟ ಸುಖ ಎಲ್ಲವನ್ನೂ ಕಂಡಿದ್ದೀವಿ. ಕಷ್ಟವನ್ನು ಪಟ್ಟಿದ್ದೀವಿ, ಸುಖವನ್ನು ಹಂಚಿಕೊಂಡಿದ್ದೆವು. ನಿಮ್ಮಂತ ನೂರಾರು ಗೆಳೆಯರನ್ನು ಪಡೆಯಲಿಕ್ಕೆ ಅವಳು ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅವಳು ನನ್ನ ಪಾಡಿಗೆ ನನ್ನನ್ನು ಬಿಟ್ಟು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದರಿಂದಲೇ ನಾನು ಊರೂರು ತಿರುಗಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಲಿಕ್ಕೆ ಸಾಧ್ಯವಾಯಿತು. ನನಗೆ ನೀವೆಲ್ಲರೂ ಸೇರಿ ಸಮಾಜ ನನ್ನ ರಕ್ಷಣೆಗೆ ನಿಲ್ಲುತ್ತದೆ. ಒಂದು ವೇಳೆ ನಾನೇ ಮೊದಲು ಹೊರಟುಹೋಗಿದ್ದರೆ ಅವಳನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬ ಆತಂಕ ಕಾಡುತ್ತಿತ್ತು. ಆ ಆತಂಕ ಇವತ್ತು ದೂರವಾಗಿದೆ. ಅವಳು ಮುಂದೆ ಹೋಗಿದ್ದಾಳೆ. ಇದು ನಿಜವಾಗಿಯೂ ಸಮಾಧಾನದ ದಿನವಾಗಿದೆ.

ಹೌದು ಅವಳಿಲ್ಲದಿರುವುದು ಹಲವು ದಿನಗಳು ಕಾಡುತ್ತದೆ ನಿಜ. ಆದರೂ ಪರವಾಗಿಲ್ಲ. ನೀವೆಲ್ಲರೂ ಇದ್ದೀರಿ, ಇಷ್ಟೊಂದು ಜನ ನನ್ನ ವಿಶ್ವಾಸಿಗಳು, ಸ್ನೇಹಿತರೂ, ಹಿತೈಷಿಗಳಾಗಿದ್ದಿರಿ. ನಿಮ್ಮೆಲ್ಲರ ಬೆಂಬಲದೊಂದಿಗೆ ಇನ್ನುಳಿದ ಜೀವನವನ್ನು ಕಳೆಯಬಲ್ಲೆ ಎಂಬುದಾಗಿ ದೊರೆಸ್ವಾಮಿಯವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ.

ಸಾವಿನಲ್ಲೂ ಮಾದರಿ

ಶ್ರೀಮತಿ ಲಲಿತಮ್ಮನವರಿಗೆ ದೊರೆಸ್ವಾಮಿಯವರು ಮತ್ತವರ ಕುಟುಂಬವರ್ಗದವರು ಯಾವುದೇ ಸಾಂಪ್ರದಾಯಿಕ ಅಂತ್ಯಸಂಸ್ಕಾರ ಮಾಡದೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೋಸ್ಕರ ದೇಹದಾನ ಮಾಡಿದ್ದಾರೆ. ಸಮಾಜಕ್ಕೆ ಮಾದರಿ ಮತ್ತು ಆದರ್ಶವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...