Homeಮುಖಪುಟಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

- Advertisement -
- Advertisement -

ನೂತನ ಪಾರ್ಲಿಮೆಂಟ್ ಭೂಮಿ ಪೂಜೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸಿಲ್ಲವೆಂಬ ಚರ್ಚೆ ಆರಂಭವಾಗಿದೆ. ನಿಜಕ್ಕೂ ಇಂತಹ ಸಂವಿಧಾನ ವಿರೋಧಿ ನಡೆ ಸಹ್ಯವಲ್ಲ. ರಾಷ್ಟ್ರಪತಿಗಳು ದಲಿತರೆಂಬ ಕಾರಣಕ್ಕೆ ಇಂತಹ ಅಮಾನವೀಯ ಕೃತ್ಯದಲ್ಲಿ ಕೇಂದ್ರ ಸರ್ಕಾರವೇ ಭಾಗಿಯಾಗಿದ್ದು ಖುದ್ದು ಪ್ರಧಾನ ಮಂತ್ರಿಗಳೇ ಇದರ ಸಹಭಾಗಿಯಾಗಿರುವುದು ವಿಷಾದನೀಯ ಸಂಗತಿ.

ಇದರ ಜೊತೆಗೆ ಮತ್ತೊಂದು ಸಂವಿಧಾನ ವಿರೋಧಿ ಕೃತ್ಯವೂ ಅಂದು ನಡೆದು ಹೋಗಿದೆ. ಭಾರತದ ಸಂವಿಧಾನವು ಧರ್ಮ, ಲಿಂಗ, ಜಾತಿ, ಜನಾಂಗ, ಪ್ರದೇಶಗಳ ಅಧಾರದಲ್ಲಿ ತಾರತಮ್ಯ ಸಲ್ಲದು ಎಂದು ಹೇಳಿರುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಆದರೆ ನೂತನ ಪಾರ್ಲಿಮೆಂಟ್ ಕಟ್ಟಡದ ಭೂಮಿ ಪೂಜೆಯನ್ನು ಕೇವಲ ಬ್ರಾಹ್ಮಣ ಪುರೋಹಿತರು ನೆರವೇರಿಸಿರುವುದು ಸಂವಿಧಾನ ವಿರೋಧಿಯೇ ಆಗಿದೆ.ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ

ಹಿಂದೂ ಧರ್ಮದಲ್ಲಿ ಬಹುತ್ವ ಪೂಜಾರಾಧನೆ ಇದೆ. ನೂರಾರು ಪಂಥದ ಪೂಜಾವಿಧಿಗಳಿವೆ. ಅಣ್ಣಮ್ಮ, ಮಾರಮ್ಮ, ಹುಲಿಗೆಮ್ಮ, ಉಕ್ಕಡದಮ್ಮ ಮುಂತಾದ ಮಾತೃಪ್ರಧಾನ ದೇವತೆಗಳಿಗೆ ಮಹಿಳಾ ಪೂಜಾರಿಗಳೂ ಇದ್ದಾರೆ. ಅದಲ್ಲದೆ ನಾಥ-ದತ್ತ ಪಂಥದಲ್ಲಿ ಶೂದ್ರ ಜಾತಿಗಳ ಪೂಜಾರಿಗಳಿದ್ದಾರೆ‌. ಲಿಂಗಾಯತ, ವೀರಶೈವ, ಬುಡಕಟ್ಟು, ದಲಿತ ಪೂಜಾರಿಗಳಿದ್ದಾರೆ. ದಕ್ಷಿಣ, ಈಶಾನ್ಯ, ಮಧ್ಯ ಭಾರತದಲ್ಲಿ ಹಲವು ರೀತಿಯ ಪೂಜಾರಿಕೆ ಇದ್ದು ಅದೆಲ್ಲವೂ ಅಬ್ರಾಹ್ಮಣ ಪೂಜಾ ಪದ್ಧತಿಗಳಾಗಿವೆ. ಹಿಂದೂ ಪೂಜಾವಿಧಿ ಬಹುತ್ವ ಪೂಜಾವಿಧಿಯಾಗಿದ್ದು ಬ್ರಾಹ್ಮಣರ ಪೂಜಾವಿಧಿ ಅದರ ಒಂದು ಸಣ್ಣ ಭಾಗವಷ್ಟೆ. ಅಂತಹದ್ದರಲ್ಲಿ ಕೇವಲ ಬ್ರಾಹ್ಮಣ ವಿಧಿವಿಧಾನಗಳ ಮೂಲಕ ಸಂವಿಧಾನಾತ್ಮಕ ಶಾಸಕಾಂಗದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿಸಿದ್ದು ಎಷ್ಟು ಸರಿ?

ಭಾರತದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಇದ್ದಾರೆಯೇ? ಹಿಂದೂಗಳಲ್ಲಿಯೇ ಸಾವಿರಾರು ಜಾತಿಗಳಿವೆ. ಇವರೆಲ್ಲರನ್ನು ಬ್ರಾಹ್ಮಣರು ಹೇಗೆ ಪ್ರತಿನಿಧಿಸುತ್ತಾರೆ. ಭಾರತೀಯರೆಂದರೆ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಮುಂತಾದವರು. ಅಷ್ಟೇ ಅಲ್ಲ ಧರ್ಮವನ್ನು ನಂಬದವರೂ ಸಹ ಭಾರತೀಯರೆ. ಭಾರತ ಯಾವೊಂದು ಧರ್ಮದವರ ಸ್ವತ್ತಲ್ಲ. ಭಾರತದಲ್ಲಿರುವ ಸಮಸ್ತ ಜನರೂ ಭಾರತೀಯರೇ. ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಇಲ್ಲಿ ಯಾವುದೋ ಒಂದು ಧರ್ಮದವರು ಮಾತ್ರ ತೆರಿಗೆ ಕಟ್ಟುವುದಿಲ್ಲ. ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದ್ದರಿಂದ ಪಾರ್ಲಿಮೆಂಟ್ ಭೂಮಿ ಪೂಜೆಗೆ ಬ್ರಾಹ್ಮಣರೊಟ್ಟಿಗೆ, ಬೌದ್ಧ ಭಿಕ್ಕುಗಳು, ಜೈನ ಶ್ರಮಣರು, ಸಿಖ್ ಗುರುಗಳು, ಮೌಲ್ವಿ, ಪಾದ್ರಿ ಹಾಗೂ ನೂರಾರು ಹಿಂದೂ ಜಾತಿಗಳ ಪೂಜಾರಿಗಳು, ಮಹಿಳಾ ಪೂಜಾರಿಗಳು ಅಲ್ಲಿದ್ದು ಭೂಮಿ ಪೂಜೆ ನೆರವೇರಿಸಬೇಕಿತ್ತಲ್ಲವೇ?

ಇದನ್ನೂ ಓದಿ: ಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಇದೇನು ಹೊಸತಲ್ಲ. ಕಾಂಗ್ರೆಸ್ ಪಕ್ಷ ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿಯಾಗಿದ್ದಾಗ 200 ಜನ ಬ್ರಾಹ್ಮಣರ ಪಾದ ಪೂಜೆ ಮಾಡಿದ್ದರು. ನೆಹರೂರವರು ಸ್ವತಂತ್ರ ಭಾಷಣ ಮಾಡಲು ಶಾಸ್ತ್ರ ಕೇಳಿ ಸಮಯ ನಿಗಧಿಗೊಳಿಸಿದ್ದರು. ಈಗಿನ ಛತ್ತೀಸ್ಗಡದ ಕಾಂಗ್ರೆಸ್ ಮುಖ್ಯಮಂತ್ರಿ ಎರಡು ವರ್ಷದ ಸಾಧನೆ ನೆನಪಿಗೆ ರಾಮ ರಥ ಯಾತ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ಮಾಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆಸಿದ್ದಾರೆ. ಹೊಸದೇನನ್ನೂ ಮಾಡಿಲ್ಲ.

ಅವರನ್ನು ಕೇಳಿದರೆ ಕಾಂಗ್ರೆಸ್ ಮಾಡಿದಾಗ ನೀವು ಕೇಳಿದಿರಾ ಎನ್ನುತ್ತಾರೆ ಅಷ್ಟೆ. ಮೋದಿಯವರು ಕಾಂಗ್ರೆಸ್‌ನವರನ್ನು ಆಪ್ತರಕ್ಷಕ ದಳದಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯರಿಗೆ ಉತ್ತರಿಸಲೇಬೇಕಲ್ಲ? ಭಾರತೀಯರೆಂದರೆ ಕಾಂಗ್ರೆಸ್-ಬಿಜೆಪಿ‌ ಮಾತ್ರವಲ್ಲ. ಧರ್ಮನಿರಪೇಕ್ಷವಾಗಿ ಯಾರೂ ಇಲ್ಲದೆ ಪ್ರಧಾನಿಗಳೇ ಒಂದು ಇಟ್ಟಿಗೆ ಇಟ್ಟಿದ್ದರೆ ನಾವೆಲ್ಲ ಚಪ್ಪಾಳೆ ತಟ್ಟಿ ಅನಂಧಿಸಬಹುದಿತ್ತಲ್ಲವೇ? ಅದು ಬಿಟ್ಟು 60 ವರ್ಷ ಕಾಂಗ್ರೆಸ್ ಮಾಡಿದ್ದನ್ನೇ ಮಾಡಿದ್ದಾರೆ.

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

ಇದನ್ನೂ ಓದಿ: ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...