Homeಪುಸ್ತಕ ವಿಮರ್ಶೆಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ.

- Advertisement -
- Advertisement -

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಆರಂಭವಾದ ತೊಂಭತ್ತರ ದಶಕ ಬೌದ್ಧಿಕ ಚಿಂತನೆಯ ದೃಷ್ಟಿಯಿಂದಲೂ ಮಹತ್ವದ ಕಾಲಘಟ್ಟ. ಹಾಗೆಯೇ ಎಂಭತ್ತರ ದಶಕದ ನಂತರ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ವಸಾಹತೋತ್ತರ ಚಿಂತನೆಗಳು ಡಾಳಾಗಿ ಕಾಣಿಸಿಕೊಳ್ಳತೊಡಗಿದವು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೌದ್ಧಿಕ ನಿರ್ವಸಹತೀಕರಣದ ಪರಿಕಲ್ಪನೆ ಕಾಣಿಸಿಕೊಂಡದ್ದು ಈ ಹಂತದಲ್ಲಿಯೇ. ಹಾಗೆ ನೋಡಿದರೆ ಆಫ್ರಿಕಾದ ಚಿಂತಕ ಥಿಯಾಂಗೊ ಗೂಗಿಯ ನಿರ್ವಸಹತೀಕರಣ ಚಿಂತನೆಯನ್ನು ರಹಮತ್ ತರೀಕರೆಯವರು ಸಂಗ್ರಹರೂಪದಲ್ಲಿ ತಂದದ್ದು ಬಹುಶಃ ಮೊದಲ ಪ್ರಯತ್ನಗಳಲ್ಲೊಂದು.

ಇಂಥ ಬೌದ್ಧಿಕ ನಿರ್ವಸಹತೀಕರಣದ ಯತ್ನ ಭಾರತೀಯ ಭಾಷೆಗಳಲ್ಲಿ ಎರಡು ನೆಲೆಯಲ್ಲಿ ಆಗಬೇಕಿತ್ತು. ಭಾಷಿಕವಾಗಿ ಪ್ರಾದೇಶಿಕ ಭಾಷೆಗಳು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಚಿಂತನೆಯಿಂದ ಮುಕ್ತವಾಗಿ ತನ್ನದೆ ಆದ ಚಿಂತನಾ ಪರಂಪರೆಯನ್ನು ಕಂಡುಕೊಳ್ಳಬೇಕಾಗಿತ್ತು. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ನಮ್ಮಲ್ಲಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಹಾಗೆಯೇ ಡಿ ಎನ್ ಶಂಕರಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಕೂಡ ಈ ಚಿಂತನೆಯ ಆದ್ಯ ಕೃತಿಗಳಲ್ಲೊಂದು ಎಂಬುದನ್ನು ಮರೆಯುವಂತಿಲ್ಲ.

ಕನ್ನಡದ ಸಾಹಿತ್ಯ ಮೀಮಾಂಸೆಯೆಂದರೆ ಅದೊಂದು ಅಸ್ಮಿತೆಯ ಹುಡುಕಾಟದ ಮಹಾಯಾನ. ಅಥವಾ ಬೇರೊಂದು ಮಾತಿನಲ್ಲಿ ಅದನ್ನು ಬಿಡುಗಡೆಯ ಕಥನವೆಂದು ಕರೆಯಬಹುದು. ರಹಮತ್ ತರೀಕೆರೆಯವರು ಕನ್ನಡ ಸಾಹಿತ್ಯ ಮೀಮಾಂಸೆಯನ್ನು ವ್ಯಾಖ್ಯಾನಿಸುವುದು ಗಮನಾರ್ಹವಾದದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯದ ಹುಟ್ಟಿನ ಪ್ರೇರಣೆಗಳು, ಅದು ಸೃಷ್ಟಿಯಾಗುವ ಕ್ರಮಗಳು, ಅಭಿವ್ಯಕ್ತಿಯಾಗುವ ಪ್ರಕಾರಗಳು, ಅದು ಭಾಷೆಯನ್ನು ಬಳಸುವ ವಿಧಾನ, ಅನುಸರಿಸುವ ಶೈಲಿ, ಅದನ್ನು ಅನುಸಂದಾನ ಮಾಡುವ ಜನ ಮತ್ತು ಸಂಸ್ಥೆಗಳು, ಸಮಾಜದ ಮೇಲಾಗುವ ಪರಿಣಾಮ ಇವೆಲ್ಲವನ್ನು ಕುರಿತ ತಾತ್ವಿಕ ಚಿಂತನೆಯ ಸಾಹಿತ್ಯ ಮೀಮಾಂಸೆಯಾಗಿದೆ. ಅದು ಒಂದು ಭಾಷಿಕ ಸಮುದಾಯವು ಕಾಲಕಾಲಕ್ಕೆ ಪಟ್ಟ ಪಾಡುಗಳ ಮೂಲಕ ಹಾದು ಬಂದ ಕಥನವಾಗಿದೆ.

ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸುವ ಪ್ರಯತ್ನಗಳು ಹಲವು ರೀತಿಯಲ್ಲಿ ಆಗಿವೆ. ಬೇಂದ್ರೇ ಕುರ್ತಕೋಟಿಯವರಲ್ಲಿ ಪಾಶ್ಚಾತ್ಯ ಸಾಹಿತ್ಯ ಚಿಂತನೆಯ ಕುರಿತು ಸಮರ್ಥನೀಯ ನಿರಾಕರಣೆಯಿದೆ. ಆದರೆ ಭಾರತೀಯ ಕಾವ್ಯ ಮೀಮಾಂಸೆಯ ಕುರಿತು ಇಂಥ ನಿರಾಕರಣೆ ಕಾಣುವುದಿಲ್ಲ. ಆದರೆ ಎಂಭತ್ತರ ದಶಕದ ನಂತರದ ಕನ್ನಡ ಸಾಹಿತ್ಯ ಚಿಂತನೆಯಲ್ಲಿ ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ನಟರಾಜ್ ಬೂದಾಳ್, ರಹಮತ್ ತರೀಕೆರೆಯವರು ಸಂಸ್ಕೃತ ಮತ್ತು ಪಾಶ್ಚಾತ್ಯ ಮೀಮಾಂಸೆಗಳೆರಡು ನಮ್ಮ ಚಿಂತನೆಗಳನ್ನು ಹೇಳಲಾರವು ಎಂಬ ನಿಲುವಿಗೆ ಬರುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆಯ ಯಜಮಾನಿಕೆಯ ರಸದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಆನಂದದ ಅನುಸಂಧಾನದ ವೈದಿಕ ಪರಿಕಲ್ಪನೆಯಾದ ರಸಕ್ಕೆ ವಿರುದ್ಧವಾಗಿ ದುಃಖಾನುಸಂಧಾನವನ್ನು ಹೇಳಿಕೊಟ್ಟ ಬೌದ್ಧ ಮೀಮಾಂಸೆಯನ್ನು ಮಂಡಿಸುತ್ತಾರೆ. ಹಾಗೆಯೇ ಏಕರಸದ ಸರಳ ಸ್ಥಿತಿಯ ಚಿಂತನೆಗೆ ರ‍್ಯಾಯವಾಗಿ ಜೈನ ಚಿಂತನೆಯಾದ ಅನೇಕಾಂತವಾದವನ್ನು ಹಾಗೂ ಅರಿವಿನ ಅನುಸಂಧಾನದ ವಚನ ಚಿಂತನೆಯನ್ನು ಮುನ್ನೆಲೆಗೆ ತರುತ್ತಾರೆ.

ಹೀಗೆ ಕನ್ನಡ ಸಾಹಿತ್ಯ ಮೀಮಾಂಸೆಯೆಂಬುದು ಬಹುಮುಖಿ ನೆಲೆಗಳಲ್ಲಿ ಕಟ್ಟಲ್ಪಡುತ್ತಿರುವ ಸಂದರ್ಭದಲ್ಲಿ ಡಾ.ರವಿಕುಮಾರ್ ನೀಹ ಅವರ ‘ದಲಿತ ಸಾಹಿತ್ಯ ಮೀಮಾಂಸೆ’ ಕೃತಿ ಪ್ರಕಟವಾಗಿದೆ. ಈ ಕೃತಿ ಕೆಲವು ಮುಖ್ಯ ಕಾರಣಗಳಿಂದ ಮುಖ್ಯವಾಗಿ ಕಾಣುತ್ತದೆ. ಈ ಕೃತಿಯಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆಗಾಗಿ ಮಹತ್ವದ್ದಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಾಹಿತ್ಯ ಮೀಮಾಂಸೆಗೆ ಪರ್ಯಾಯವಾಗಿ ದಲಿತ ಸಾಹಿತ್ಯ ಮೀಮಾಂಸೆ ಹುಟ್ಟಿಕೊಂಡಿದೆ ಎಂಬ ನಿಲುವು ಈ ಅಧ್ಯಯನದಲ್ಲಿ ಇಲ್ಲ. ದಲಿತ ಸಾಹಿತ್ಯ ಮೀಮಾಂಸೆಯು ಕನ್ನಡ ಸಾಹಿತ್ಯ ಮೀಮಾಂಸೆಯ ಒಂದು ಭಾಗವೇ ಆಗಿದ್ದೂ, ಅದರ ಒಂದು ವಿಶಿಷ್ಟ ಭಾಗವಾಗಿ ರೂಪುಗೊಂಡಿದೆ ಎಂಬ ನಿಲುವು ಅವರಲ್ಲಿದೆ. ಹಾಗೆಯೆ ದಲಿತರ ಸಾಮಾಜಿಕ ಬದುಕು, ಸೌಲಭ್ಯ, ಕಸುಬು, ಅಭಿವ್ಯಕ್ತಿ, ಆಲೋಚನೆ, ಅನುಭವ, ಬಹುಮುಖತೆ, ಮೂಲಕವೇ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವರದು. ಜೊತೆಗೆ ದಲಿತ ಮೀಮಾಂಸೆಯೆನ್ನುವುದು ಒಂದು ಲೋಕದೃಷ್ಟಿಯಾದ್ದರಿಂದ ಬದುಕಿನ ವಿನ್ಯಾಸಗಳು ಬದಲಾದ ಹಾಗೆ ಲೋಕವನ್ನು ನೋಡುವ ನೋಟಕ್ರಮವು ಬದಲಾಗಬೇಕಾದದ್ದು ಸಹಜ ಹಾಗೂ ಅನಿವಾರ್ಯ ನಂಬಿಕೆ ಇಲ್ಲಿಯದು. ತಳವೂರಿದ ಕುರುಬ ಕಟುಕನಾದ ಎನ್ನುವ ನಿಸಾರರ ಕವನದ ಸಾಲು ಹೇಳುವುದು ಇದನ್ನೇ. ಯಾವುದೇ ಚಿಂತನೆ ಎಲ್ಲ ಕಾಲಕ್ಕೂ ಶಾಶ್ವತ ಮತ್ತು ಸಾರ್ವತ್ರಿಕ ಮತ್ತು ತ್ರಿಕಾಲಾ ಭಾದಿತ ಚಿಂತನೆಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ್ದಾಗಿದೆ.

ಡಾ.ರವಿಕುಮಾರ್ ನೀಹ

ದಲಿತ ಸಾಹಿತ್ಯ ಮೀಮಾಂಸೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ದಲಿತ’ ಪದ ಪಡೆದ ಹಲವು ಅರ್ಥ ಸ್ವರೂಪವನ್ನು ಗುರುತಿಸುವ ಕೆಲಸವನ್ನು ಕೃತಿ ಮಾಡಿದೆ. ಆರಂಭದಲ್ಲಿದ್ದ ಹಸಿವಿನ ಪ್ರಶ್ನೆ, ಅವಮಾನದ ಪ್ರಶ್ನೆಯನ್ನು ಹಾದು ಈಗ ಅಸ್ಮಿತೆಯ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ವಿಶ್ಲೇಷಿಸಿದೆ. ಹಾಗೆಯೆ ದಲಿತ ಸಾಹಿತ್ಯ ಮೀಮಾಂಸೆಯ ಪರಂಪರೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಆರಂಭವನ್ನು ಡಿ ಆರ್ ನಾಗರಾಜ್ ಅವರ ಪ್ಲೇಮಿಂಗ್ ಪೀಟ್ ಕೃತಿಯ ಮೂಲಕ ಗುರುತಿಸುತ್ತದೆ. ನಂತರದ ಕಾಲಘಟ್ಟದಲ್ಲಿ ದೇವಯ್ಯ ಹರವೆ, ಪ್ರೊ.ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಬಿ.ಎಂ. ಪುಟ್ಟಯ್ಯನವರು ವಿಸ್ತರಿಸಿದ ಪರಂಪರೆಯನ್ನು ವಿಸ್ತರಿಸಿದೆ. ಆದರೆ ಇಲ್ಲಿ ವಿಶ್ಲೇಷಿಸುವ ಕ್ರಮ ಎಂಭತ್ತರ ದಶಕದ ದಲಿತ ಸಾಹಿತ್ಯಕ್ಕೆ ಸೀಮಿತಗೊಂಡಿರುವುದು ಗಂಭೀರವಾದ ಮಿತಿಯೆನಿಸುತ್ತದೆ. ದಲಿತ ಸಾಹಿತ್ಯ ಆರಂಭವಾಗುವ ಮೊದಲಿನ ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ ಕೃತಿಯ ವ್ಯಾಪ್ತಿ ಹೆಚ್ಚುತ್ತಿತ್ತು. ಇಂದಿನ ದಲಿತ ಸಾಹಿತ್ಯ ಸಾಮಾಜಿಕ ಕ್ರೋಧದ ಮಾದರಿಯ ಜೊತೆಗೆ ಆಧ್ಯಾತ್ಮಿಕ ಹುಡುಕಾಟದ ಮಾದರಿಯನ್ನು ಸಹ ತೀವ್ರವಾಗಿ ಅಭಿವ್ಯಕ್ತಿಸುವುದರಿಂದ ಆಧ್ಯಾತ್ಮಿಕ ದಂಗೆಯ ನಾಯಕರಾದ ಮಂಟೇಸ್ವಾಮಿ, ಮಾದಪ್ಪನವರೆಗೆ ಈ ಪರಂಪರೆಯನ್ನು ವಿಸ್ತರಿಸುವ ಸಾಧ್ಯತೆಯಿತ್ತು.

ದಲಿತ ಸಾಹಿತ್ಯ ಮೀಮಾಂಸೆ ಇನ್ನೊಂದು ನೆಲೆಯಲ್ಲಿ ನನಗೆ ಮುಖ್ಯವೆನಿಸುತ್ತದೆ. ಈ ಮೀಮಾಂಸೆ ತನ್ನ ಸ್ವರೂಪದಲ್ಲಿಯೇ ಒಳಗೊಳ್ಳುವಿಕೆಯ ನೆಲೆಯನ್ನು(inclusive) ಒಳಗೊಂಡಿದೆ. ಹಾಗೆಯೇ ಪ್ರಖರ ರಾಜಕೀಯ ಚಿಂತನೆಯನ್ನು ತನ್ನ ಭಿತ್ತಿಯಾಗಿಸಿಕೊಂಡಿದೆ. ವೈಯಕ್ತಿಕವು ರಾಜಕೀಯವೇ ಆಗಿರುವ ಇಂದಿನ ಕಾಲಘಟ್ಟದಲ್ಲಿ ಸ್ಪಷ್ಟ ರಾಜಕೀಯ ಚಿಂತನೆಯನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗೆಯೆ ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿರುವ ಬೌದ್ಧದರ್ಶನವನ್ನು ಚರ್ಚಿಸುವುದರ ಮೂಲಕ, ಜೊತೆಗೆ ಅಲೆಮಾರಿಗಳು ಲೈಂಗಿಕ ಅಲ್ಪಸಂಖ್ಯಾತರು, ಬಿಕ್ಷುಕರ ಜಗತ್ತುಗಳ ಮೂಲಕ ಅನಾವರಣಗೊಳ್ಳುತ್ತಿರುವ ಕಲಾಲೋಕವನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

ಡಾ.ಪ್ರಕಾಶ್ ಬಡವನಹಳ್ಳಿ

ಈ ಕೃತಿಯ ಕುಲಕಥನ ಮೀಮಾಂಸೆ ನವೀನ ರೀತಿಯದ್ದಾಗಿದೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಚಲಿತವಾಗಿರುವ ಖಂಡಕಾವ್ಯಗಳಿಗಿಂತ ಭಿನ್ನವಾಗಿ ಕುಲಕಥನಗಳನ್ನು ನೋಡಬೇಕೆಂದು ಗಟ್ಟಿಯಾಗಿ ವಾದಿಸುತ್ತದೆ. ಈ ಕಾವ್ಯಗಳು ಸಾಮಾಜಿಕ ಆಕ್ರೋಶದ ಮಾದರಿಗಿಂತ ಭಿನ್ನವಾಗಿ ಸ್ವಾಭಿಮಾನ ಸಮಾನತೆಗಳನ್ನು ತಮ್ಮ ಕುಲಪುರಾಣಗಳಲ್ಲಿ ಹೆಕ್ಕಿ ತೆಗೆಯುವ ಮಾದರಿಯನ್ನು ಪಠ್ಯಗಳ ಮೂಲಕವೇ ವಿಶ್ಲೇಷಿಸುವ ಕ್ರಮ ಮಹತ್ವದ್ದಾಗಿದೆ. ಇಷ್ಟಾಗಿ ನಮ್ಮ ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ ಎಂಬ ಸೂಕ್ಷ್ಮತೆ ಇರುವ ದಲಿತ ಸಾಹಿತ್ಯ ಮೀಮಾಂಸೆ ಮಹತ್ವದ ಕೃತಿಯಾಗಿದೆ.

  • ಡಾ.ಪ್ರಕಾಶ್ ಬಡವನಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...