Homeಮುಖಪುಟಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

- Advertisement -
- Advertisement -

ನೂತನ ಪಾರ್ಲಿಮೆಂಟ್ ಭೂಮಿ ಪೂಜೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸಿಲ್ಲವೆಂಬ ಚರ್ಚೆ ಆರಂಭವಾಗಿದೆ. ನಿಜಕ್ಕೂ ಇಂತಹ ಸಂವಿಧಾನ ವಿರೋಧಿ ನಡೆ ಸಹ್ಯವಲ್ಲ. ರಾಷ್ಟ್ರಪತಿಗಳು ದಲಿತರೆಂಬ ಕಾರಣಕ್ಕೆ ಇಂತಹ ಅಮಾನವೀಯ ಕೃತ್ಯದಲ್ಲಿ ಕೇಂದ್ರ ಸರ್ಕಾರವೇ ಭಾಗಿಯಾಗಿದ್ದು ಖುದ್ದು ಪ್ರಧಾನ ಮಂತ್ರಿಗಳೇ ಇದರ ಸಹಭಾಗಿಯಾಗಿರುವುದು ವಿಷಾದನೀಯ ಸಂಗತಿ.

ಇದರ ಜೊತೆಗೆ ಮತ್ತೊಂದು ಸಂವಿಧಾನ ವಿರೋಧಿ ಕೃತ್ಯವೂ ಅಂದು ನಡೆದು ಹೋಗಿದೆ. ಭಾರತದ ಸಂವಿಧಾನವು ಧರ್ಮ, ಲಿಂಗ, ಜಾತಿ, ಜನಾಂಗ, ಪ್ರದೇಶಗಳ ಅಧಾರದಲ್ಲಿ ತಾರತಮ್ಯ ಸಲ್ಲದು ಎಂದು ಹೇಳಿರುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಆದರೆ ನೂತನ ಪಾರ್ಲಿಮೆಂಟ್ ಕಟ್ಟಡದ ಭೂಮಿ ಪೂಜೆಯನ್ನು ಕೇವಲ ಬ್ರಾಹ್ಮಣ ಪುರೋಹಿತರು ನೆರವೇರಿಸಿರುವುದು ಸಂವಿಧಾನ ವಿರೋಧಿಯೇ ಆಗಿದೆ.ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ

ಹಿಂದೂ ಧರ್ಮದಲ್ಲಿ ಬಹುತ್ವ ಪೂಜಾರಾಧನೆ ಇದೆ. ನೂರಾರು ಪಂಥದ ಪೂಜಾವಿಧಿಗಳಿವೆ. ಅಣ್ಣಮ್ಮ, ಮಾರಮ್ಮ, ಹುಲಿಗೆಮ್ಮ, ಉಕ್ಕಡದಮ್ಮ ಮುಂತಾದ ಮಾತೃಪ್ರಧಾನ ದೇವತೆಗಳಿಗೆ ಮಹಿಳಾ ಪೂಜಾರಿಗಳೂ ಇದ್ದಾರೆ. ಅದಲ್ಲದೆ ನಾಥ-ದತ್ತ ಪಂಥದಲ್ಲಿ ಶೂದ್ರ ಜಾತಿಗಳ ಪೂಜಾರಿಗಳಿದ್ದಾರೆ‌. ಲಿಂಗಾಯತ, ವೀರಶೈವ, ಬುಡಕಟ್ಟು, ದಲಿತ ಪೂಜಾರಿಗಳಿದ್ದಾರೆ. ದಕ್ಷಿಣ, ಈಶಾನ್ಯ, ಮಧ್ಯ ಭಾರತದಲ್ಲಿ ಹಲವು ರೀತಿಯ ಪೂಜಾರಿಕೆ ಇದ್ದು ಅದೆಲ್ಲವೂ ಅಬ್ರಾಹ್ಮಣ ಪೂಜಾ ಪದ್ಧತಿಗಳಾಗಿವೆ. ಹಿಂದೂ ಪೂಜಾವಿಧಿ ಬಹುತ್ವ ಪೂಜಾವಿಧಿಯಾಗಿದ್ದು ಬ್ರಾಹ್ಮಣರ ಪೂಜಾವಿಧಿ ಅದರ ಒಂದು ಸಣ್ಣ ಭಾಗವಷ್ಟೆ. ಅಂತಹದ್ದರಲ್ಲಿ ಕೇವಲ ಬ್ರಾಹ್ಮಣ ವಿಧಿವಿಧಾನಗಳ ಮೂಲಕ ಸಂವಿಧಾನಾತ್ಮಕ ಶಾಸಕಾಂಗದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿಸಿದ್ದು ಎಷ್ಟು ಸರಿ?

ಭಾರತದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಇದ್ದಾರೆಯೇ? ಹಿಂದೂಗಳಲ್ಲಿಯೇ ಸಾವಿರಾರು ಜಾತಿಗಳಿವೆ. ಇವರೆಲ್ಲರನ್ನು ಬ್ರಾಹ್ಮಣರು ಹೇಗೆ ಪ್ರತಿನಿಧಿಸುತ್ತಾರೆ. ಭಾರತೀಯರೆಂದರೆ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಮುಂತಾದವರು. ಅಷ್ಟೇ ಅಲ್ಲ ಧರ್ಮವನ್ನು ನಂಬದವರೂ ಸಹ ಭಾರತೀಯರೆ. ಭಾರತ ಯಾವೊಂದು ಧರ್ಮದವರ ಸ್ವತ್ತಲ್ಲ. ಭಾರತದಲ್ಲಿರುವ ಸಮಸ್ತ ಜನರೂ ಭಾರತೀಯರೇ. ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಇಲ್ಲಿ ಯಾವುದೋ ಒಂದು ಧರ್ಮದವರು ಮಾತ್ರ ತೆರಿಗೆ ಕಟ್ಟುವುದಿಲ್ಲ. ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದ್ದರಿಂದ ಪಾರ್ಲಿಮೆಂಟ್ ಭೂಮಿ ಪೂಜೆಗೆ ಬ್ರಾಹ್ಮಣರೊಟ್ಟಿಗೆ, ಬೌದ್ಧ ಭಿಕ್ಕುಗಳು, ಜೈನ ಶ್ರಮಣರು, ಸಿಖ್ ಗುರುಗಳು, ಮೌಲ್ವಿ, ಪಾದ್ರಿ ಹಾಗೂ ನೂರಾರು ಹಿಂದೂ ಜಾತಿಗಳ ಪೂಜಾರಿಗಳು, ಮಹಿಳಾ ಪೂಜಾರಿಗಳು ಅಲ್ಲಿದ್ದು ಭೂಮಿ ಪೂಜೆ ನೆರವೇರಿಸಬೇಕಿತ್ತಲ್ಲವೇ?

ಇದನ್ನೂ ಓದಿ: ಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಇದೇನು ಹೊಸತಲ್ಲ. ಕಾಂಗ್ರೆಸ್ ಪಕ್ಷ ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿಯಾಗಿದ್ದಾಗ 200 ಜನ ಬ್ರಾಹ್ಮಣರ ಪಾದ ಪೂಜೆ ಮಾಡಿದ್ದರು. ನೆಹರೂರವರು ಸ್ವತಂತ್ರ ಭಾಷಣ ಮಾಡಲು ಶಾಸ್ತ್ರ ಕೇಳಿ ಸಮಯ ನಿಗಧಿಗೊಳಿಸಿದ್ದರು. ಈಗಿನ ಛತ್ತೀಸ್ಗಡದ ಕಾಂಗ್ರೆಸ್ ಮುಖ್ಯಮಂತ್ರಿ ಎರಡು ವರ್ಷದ ಸಾಧನೆ ನೆನಪಿಗೆ ರಾಮ ರಥ ಯಾತ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ಮಾಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆಸಿದ್ದಾರೆ. ಹೊಸದೇನನ್ನೂ ಮಾಡಿಲ್ಲ.

ಅವರನ್ನು ಕೇಳಿದರೆ ಕಾಂಗ್ರೆಸ್ ಮಾಡಿದಾಗ ನೀವು ಕೇಳಿದಿರಾ ಎನ್ನುತ್ತಾರೆ ಅಷ್ಟೆ. ಮೋದಿಯವರು ಕಾಂಗ್ರೆಸ್‌ನವರನ್ನು ಆಪ್ತರಕ್ಷಕ ದಳದಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯರಿಗೆ ಉತ್ತರಿಸಲೇಬೇಕಲ್ಲ? ಭಾರತೀಯರೆಂದರೆ ಕಾಂಗ್ರೆಸ್-ಬಿಜೆಪಿ‌ ಮಾತ್ರವಲ್ಲ. ಧರ್ಮನಿರಪೇಕ್ಷವಾಗಿ ಯಾರೂ ಇಲ್ಲದೆ ಪ್ರಧಾನಿಗಳೇ ಒಂದು ಇಟ್ಟಿಗೆ ಇಟ್ಟಿದ್ದರೆ ನಾವೆಲ್ಲ ಚಪ್ಪಾಳೆ ತಟ್ಟಿ ಅನಂಧಿಸಬಹುದಿತ್ತಲ್ಲವೇ? ಅದು ಬಿಟ್ಟು 60 ವರ್ಷ ಕಾಂಗ್ರೆಸ್ ಮಾಡಿದ್ದನ್ನೇ ಮಾಡಿದ್ದಾರೆ.

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

ಇದನ್ನೂ ಓದಿ: ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...