Homeಮುಖಪುಟಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

- Advertisement -
- Advertisement -

ನೂತನ ಪಾರ್ಲಿಮೆಂಟ್ ಭೂಮಿ ಪೂಜೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸಿಲ್ಲವೆಂಬ ಚರ್ಚೆ ಆರಂಭವಾಗಿದೆ. ನಿಜಕ್ಕೂ ಇಂತಹ ಸಂವಿಧಾನ ವಿರೋಧಿ ನಡೆ ಸಹ್ಯವಲ್ಲ. ರಾಷ್ಟ್ರಪತಿಗಳು ದಲಿತರೆಂಬ ಕಾರಣಕ್ಕೆ ಇಂತಹ ಅಮಾನವೀಯ ಕೃತ್ಯದಲ್ಲಿ ಕೇಂದ್ರ ಸರ್ಕಾರವೇ ಭಾಗಿಯಾಗಿದ್ದು ಖುದ್ದು ಪ್ರಧಾನ ಮಂತ್ರಿಗಳೇ ಇದರ ಸಹಭಾಗಿಯಾಗಿರುವುದು ವಿಷಾದನೀಯ ಸಂಗತಿ.

ಇದರ ಜೊತೆಗೆ ಮತ್ತೊಂದು ಸಂವಿಧಾನ ವಿರೋಧಿ ಕೃತ್ಯವೂ ಅಂದು ನಡೆದು ಹೋಗಿದೆ. ಭಾರತದ ಸಂವಿಧಾನವು ಧರ್ಮ, ಲಿಂಗ, ಜಾತಿ, ಜನಾಂಗ, ಪ್ರದೇಶಗಳ ಅಧಾರದಲ್ಲಿ ತಾರತಮ್ಯ ಸಲ್ಲದು ಎಂದು ಹೇಳಿರುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಆದರೆ ನೂತನ ಪಾರ್ಲಿಮೆಂಟ್ ಕಟ್ಟಡದ ಭೂಮಿ ಪೂಜೆಯನ್ನು ಕೇವಲ ಬ್ರಾಹ್ಮಣ ಪುರೋಹಿತರು ನೆರವೇರಿಸಿರುವುದು ಸಂವಿಧಾನ ವಿರೋಧಿಯೇ ಆಗಿದೆ.ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ

ಹಿಂದೂ ಧರ್ಮದಲ್ಲಿ ಬಹುತ್ವ ಪೂಜಾರಾಧನೆ ಇದೆ. ನೂರಾರು ಪಂಥದ ಪೂಜಾವಿಧಿಗಳಿವೆ. ಅಣ್ಣಮ್ಮ, ಮಾರಮ್ಮ, ಹುಲಿಗೆಮ್ಮ, ಉಕ್ಕಡದಮ್ಮ ಮುಂತಾದ ಮಾತೃಪ್ರಧಾನ ದೇವತೆಗಳಿಗೆ ಮಹಿಳಾ ಪೂಜಾರಿಗಳೂ ಇದ್ದಾರೆ. ಅದಲ್ಲದೆ ನಾಥ-ದತ್ತ ಪಂಥದಲ್ಲಿ ಶೂದ್ರ ಜಾತಿಗಳ ಪೂಜಾರಿಗಳಿದ್ದಾರೆ‌. ಲಿಂಗಾಯತ, ವೀರಶೈವ, ಬುಡಕಟ್ಟು, ದಲಿತ ಪೂಜಾರಿಗಳಿದ್ದಾರೆ. ದಕ್ಷಿಣ, ಈಶಾನ್ಯ, ಮಧ್ಯ ಭಾರತದಲ್ಲಿ ಹಲವು ರೀತಿಯ ಪೂಜಾರಿಕೆ ಇದ್ದು ಅದೆಲ್ಲವೂ ಅಬ್ರಾಹ್ಮಣ ಪೂಜಾ ಪದ್ಧತಿಗಳಾಗಿವೆ. ಹಿಂದೂ ಪೂಜಾವಿಧಿ ಬಹುತ್ವ ಪೂಜಾವಿಧಿಯಾಗಿದ್ದು ಬ್ರಾಹ್ಮಣರ ಪೂಜಾವಿಧಿ ಅದರ ಒಂದು ಸಣ್ಣ ಭಾಗವಷ್ಟೆ. ಅಂತಹದ್ದರಲ್ಲಿ ಕೇವಲ ಬ್ರಾಹ್ಮಣ ವಿಧಿವಿಧಾನಗಳ ಮೂಲಕ ಸಂವಿಧಾನಾತ್ಮಕ ಶಾಸಕಾಂಗದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿಸಿದ್ದು ಎಷ್ಟು ಸರಿ?

ಭಾರತದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಇದ್ದಾರೆಯೇ? ಹಿಂದೂಗಳಲ್ಲಿಯೇ ಸಾವಿರಾರು ಜಾತಿಗಳಿವೆ. ಇವರೆಲ್ಲರನ್ನು ಬ್ರಾಹ್ಮಣರು ಹೇಗೆ ಪ್ರತಿನಿಧಿಸುತ್ತಾರೆ. ಭಾರತೀಯರೆಂದರೆ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಮುಂತಾದವರು. ಅಷ್ಟೇ ಅಲ್ಲ ಧರ್ಮವನ್ನು ನಂಬದವರೂ ಸಹ ಭಾರತೀಯರೆ. ಭಾರತ ಯಾವೊಂದು ಧರ್ಮದವರ ಸ್ವತ್ತಲ್ಲ. ಭಾರತದಲ್ಲಿರುವ ಸಮಸ್ತ ಜನರೂ ಭಾರತೀಯರೇ. ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಇಲ್ಲಿ ಯಾವುದೋ ಒಂದು ಧರ್ಮದವರು ಮಾತ್ರ ತೆರಿಗೆ ಕಟ್ಟುವುದಿಲ್ಲ. ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದ್ದರಿಂದ ಪಾರ್ಲಿಮೆಂಟ್ ಭೂಮಿ ಪೂಜೆಗೆ ಬ್ರಾಹ್ಮಣರೊಟ್ಟಿಗೆ, ಬೌದ್ಧ ಭಿಕ್ಕುಗಳು, ಜೈನ ಶ್ರಮಣರು, ಸಿಖ್ ಗುರುಗಳು, ಮೌಲ್ವಿ, ಪಾದ್ರಿ ಹಾಗೂ ನೂರಾರು ಹಿಂದೂ ಜಾತಿಗಳ ಪೂಜಾರಿಗಳು, ಮಹಿಳಾ ಪೂಜಾರಿಗಳು ಅಲ್ಲಿದ್ದು ಭೂಮಿ ಪೂಜೆ ನೆರವೇರಿಸಬೇಕಿತ್ತಲ್ಲವೇ?

ಇದನ್ನೂ ಓದಿ: ಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಇದೇನು ಹೊಸತಲ್ಲ. ಕಾಂಗ್ರೆಸ್ ಪಕ್ಷ ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿಯಾಗಿದ್ದಾಗ 200 ಜನ ಬ್ರಾಹ್ಮಣರ ಪಾದ ಪೂಜೆ ಮಾಡಿದ್ದರು. ನೆಹರೂರವರು ಸ್ವತಂತ್ರ ಭಾಷಣ ಮಾಡಲು ಶಾಸ್ತ್ರ ಕೇಳಿ ಸಮಯ ನಿಗಧಿಗೊಳಿಸಿದ್ದರು. ಈಗಿನ ಛತ್ತೀಸ್ಗಡದ ಕಾಂಗ್ರೆಸ್ ಮುಖ್ಯಮಂತ್ರಿ ಎರಡು ವರ್ಷದ ಸಾಧನೆ ನೆನಪಿಗೆ ರಾಮ ರಥ ಯಾತ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ಮಾಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆಸಿದ್ದಾರೆ. ಹೊಸದೇನನ್ನೂ ಮಾಡಿಲ್ಲ.

ಅವರನ್ನು ಕೇಳಿದರೆ ಕಾಂಗ್ರೆಸ್ ಮಾಡಿದಾಗ ನೀವು ಕೇಳಿದಿರಾ ಎನ್ನುತ್ತಾರೆ ಅಷ್ಟೆ. ಮೋದಿಯವರು ಕಾಂಗ್ರೆಸ್‌ನವರನ್ನು ಆಪ್ತರಕ್ಷಕ ದಳದಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯರಿಗೆ ಉತ್ತರಿಸಲೇಬೇಕಲ್ಲ? ಭಾರತೀಯರೆಂದರೆ ಕಾಂಗ್ರೆಸ್-ಬಿಜೆಪಿ‌ ಮಾತ್ರವಲ್ಲ. ಧರ್ಮನಿರಪೇಕ್ಷವಾಗಿ ಯಾರೂ ಇಲ್ಲದೆ ಪ್ರಧಾನಿಗಳೇ ಒಂದು ಇಟ್ಟಿಗೆ ಇಟ್ಟಿದ್ದರೆ ನಾವೆಲ್ಲ ಚಪ್ಪಾಳೆ ತಟ್ಟಿ ಅನಂಧಿಸಬಹುದಿತ್ತಲ್ಲವೇ? ಅದು ಬಿಟ್ಟು 60 ವರ್ಷ ಕಾಂಗ್ರೆಸ್ ಮಾಡಿದ್ದನ್ನೇ ಮಾಡಿದ್ದಾರೆ.

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

ಇದನ್ನೂ ಓದಿ: ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...