Homeಮುಖಪುಟವಿಶ್ವಾಸಾರ್ಹರ ಸಾಲಿನಲ್ಲಿ ವೈದ್ಯರಿಗೆ ಮೊದಲ ಸ್ಥಾನ: ಸ್ಟ್ಯಾಟಿಸ್ಟಾ ಸರ್ವೇ

ವಿಶ್ವಾಸಾರ್ಹರ ಸಾಲಿನಲ್ಲಿ ವೈದ್ಯರಿಗೆ ಮೊದಲ ಸ್ಥಾನ: ಸ್ಟ್ಯಾಟಿಸ್ಟಾ ಸರ್ವೇ

- Advertisement -
- Advertisement -

ಜಾಗತಿಕವಾಗಿ ಯಾವ ಗುಂಪಿನ ಜನರು ಹೆಚ್ಚು ವಿಶ್ವಾಸಾರ್ಹರು ಹಾಗೂ ಕಡಿಮೆ ವಿಶ್ವಾಸಾರ್ಹರು ಎಂದು ಸರ್ವೇ ಮಾಡಿರುವ ಅಂತಾರಾಷ್ಟ್ರೀಯ ಡೇಟಾ ಸಂಸ್ಥೆಯಾದ ‘ಸ್ಟ್ಯಾಟಿಸ್ಟಾ’ ವರದಿಯನ್ನು ಬಹಿರಂಗಪಡಿಸಿದೆ.

www.statista.comನಲ್ಲಿ ವರದಿ ಬಿಡುಗಡೆ ಮಾಡಲಾಗಿದ್ದು, ಅತಿಹೆಚ್ಚು ವಿಶ್ವಾಸಾರ್ಹ ಮನುಷ್ಯರೆಂದರೆ ವೈದ್ಯರು, ಅತ್ಯಂತ ಕಡಿಮೆ ವಿಶ್ವಾಸಾರ್ಹರೆಂದರೆ ರಾಜಕಾರಣಿಗಳು ಎಂದು ವರದಿ ಹೇಳಿದೆ. ಡೇಟಾ ಜರ್ನಲಿಸ್ಟ್‌ ಮಾರ್ಟಿನ್ ಆರ್ಮ್‌ಸ್ಟ್ರಾಂಗ್ ವರದಿಯನ್ನು ಬರೆದಿದ್ದಾರೆ.

ವೈದ್ಯಕೀಯ ವೃತ್ತಿಪರರು ನಿಜವಾಗಿಯೂ ವಿಶ್ವದ ಅತ್ಯಂತ ವಿಶ್ವಾಸಾರ್ಹ ಗುಂಪು. ಒಟ್ಟು 64 ಪ್ರತಿಶತದಷ್ಟು ಜನರು ವೈದ್ಯರು ನಂಬಲರ್ಹರು ಎಂದು ಭಾವಿಸುತ್ತಾರೆ, ಆದರೆ ಕೇವಲ 10 ಪ್ರತಿಶತದಷ್ಟು ಜನರು ಅವರನ್ನು ನಂಬುವುದಿಲ್ಲ. 54 ಪ್ರತಿಶತದಷ್ಟು ನಿವ್ವಳ ನಂಬಿಕೆಯನ್ನು ವೈದ್ಯರ ಕುರಿತು ಕಾಣಬಹುದು. ವಿಜ್ಞಾನಿಗಳು 51 ಪ್ರತಿಶತದಷ್ಟು ನಿವ್ವಳ ವಿಶ್ವಾಸಾರ್ಹತೆ ಹೊಂದಿದ್ದರೆ, ಶಿಕ್ಷಕರು 43 ಪ್ರತಿಶತದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

-52 ಪ್ರತಿಶತದಷ್ಟು ನಿವ್ವಳ ವಿಶ್ವಾಸಾರ್ಹತೆಯನ್ನು ರಾಜಕಾರಣಿಗಳು ಹೊಂದಿದ್ದು, ಅತ್ಯಂತ ಕಡಿಮೆ ವಿಶ್ವಾಸಾರ್ಹರಾಗಿ ಹೊಮ್ಮಿದ್ದಾರೆ. “ಭಾರತ ಹಾಗೂ ಮಲೇಷಿಯದಲ್ಲಿ ಅತಿಹೆಚ್ಚು ಜನರು ರಾಜಕಾರಣಿಗಳನ್ನು ನಂಬುತ್ತಾರೆ” ಎಂದು ಸಮೀಕ್ಷೆ ಉಲ್ಲೇಖಿಸಿದೆ.

ರಾಜಕಾರಣಿಗಳ ಮೇಲೆ ಶೇ. 18ರಷ್ಟು ನಂಬಿಕೆಯನ್ನು ಮಲೇಷಿಯನ್ನರು, ಶೇ. 19ರಷ್ಟು ನಂಬಿಕೆಯನ್ನು ಭಾರತೀಯರು ಹೊಂದಿದ್ದಾರೆ. ಅರ್ಜೆಂಟೀನಾ ಹಾಗೂ ಕೊಲಂಬಿಯ ರಾಷ್ಟ್ರಗಳಲ್ಲಿ ರಾಜಕಾರಣಿಗಳನ್ನು ಜನರು ಅತ್ಯಂತ ಕಡಿಮೆ ನಂಬುತ್ತವೆ. ಕ್ರಮವಾಗಿ – 3 ಮತ್ತು 4ರಷ್ಟು ನಂಬಿಕೆಯನ್ನು ಈ ರಾಷ್ಟ್ರಗಳಲ್ಲಿ ಕಾಣಬಹುದು ಎಂದು ಸಮೀಕ್ಷೆ ತಿಳಿಸಿದೆ.

ಎಲ್ಲಾ ವರ್ಗಗಳ ಪ್ರತಿಕ್ರಿಯೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಮಲೇಷ್ಯಾ ಮತ್ತು ಭಾರತವು ವಾಸ್ತವವಾಗಿ ಸಮೀಕ್ಷೆಯಲ್ಲಿ ಅತಿ ಹೆಚ್ಚು ವಿಶ್ವಾಸವನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಕೊಲಂಬಿಯಾ ಮತ್ತು ಚಿಲಿ ರಾಷ್ಟ್ರಗಳು ಸಮೀಕ್ಷೆಗಳ ಕುರಿತು ಅತ್ಯಂತ ಕಡಿಮೆ ವಿಶ್ವಾಸ ಹೊಂದಿವೆ.

ಹೆಚ್ಚು ವಿಶ್ವಾಸಾರ್ಹರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ವೈದ್ಯರು (ಶೇ.54 ನಿವ್ವಳ ಅಂಕ), ಎರಡನೇಯವರಾಗಿ ವಿಜ್ಞಾನಿಗಳು (ಶೇ.51), ಮೂರನೇ ಸ್ಥಾನದಲ್ಲಿ ಶಿಕ್ಷಕರು (ಶೇ.43), ನಾಲ್ಕನೇ ಸ್ಥಾನದಲ್ಲಿ ಸಾಮಾನ್ಯ ಜನರು (ಶೇ. 27), ಐದನೇ ಸ್ಥಾನದಲ್ಲಿ ಸೇನಾ ಬಲ (ಶೇ. 22) ಇರುವುದನ್ನು ಕಾಣಬಹುದು.

ಕಡಿಮೆ ವಿಶ್ವಾಸಾರ್ಹರ ಸಾಲಿನಲ್ಲಿ ತಕ್ಕಮಟ್ಟಿಗೆ ನಂಬಬಹುದಾದವರಲ್ಲಿ ಪತ್ರಕರ್ತರು ಮೊದಲಿದ್ದಾರೆ. ಶೇ. -10ರಷ್ಟು ಅಂಕಗಳನ್ನು ಪತ್ರಕರ್ತರಿಗೆ ನೀಡಲಾಗಿದೆ. ನಂತರದಲ್ಲಿ ಬ್ಯಾಂಕರ್ಸ್‌ (ಶೇ.-11), ಜಾಹೀರಾತುದಾರರು (ಶೇ. -22), ಸರ್ಕಾರಿ ಸಚಿವರು (ಶೇ.-39), ಸಾಮಾನ್ಯ ರಾಜಕಾರಣಿಗಳು (ಶೇ. -52) ಇದ್ದಾರೆ.


ಇದನ್ನೂ ಓದಿರಿ: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...