Homeಕರ್ನಾಟಕನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಾಯಕತ್ವದ ಐದು ಶಕ್ತಿ ಮೂಲಗಳ ಬಗ್ಗೆ ತಿಳಿಯೋಣ ಬನ್ನಿ.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಇತ್ತೀಚಿಗೆ ನಾಯಕತ್ವದ ಬಗ್ಗೆ ತರಗತಿಯೊಂದರಲ್ಲಿ ಪಾಠ ಮಾಡುತ್ತಿರುವಾಗ “ಓರ್ವ ವ್ಯಕ್ತಿಗೆ ನಾಯಕ ಆಗಲು ಶಕ್ತಿ ಎಲ್ಲಿಂದ ಬರುತ್ತದೆ?” ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ನನಗೆ ಹೊಳೆದಿದ್ದು ಮಿಷಿಗನ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಜಾನ್ ಫ್ರೆಂಚ್ ಮತ್ತು ಬರ್ಟ್ರಾಂಡ್ ರೇವನ್ ಅವರ 1959ರ ಅಧ್ಯಯನ. ಇವರ ಲೇಖನ ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಪ್ರಸಕ್ತ ರಾಜಕೀಯ ನಾಯಕತ್ವದ ಬಗ್ಗೆ ಒಂದು ವಿಡಂಬನೆ ಎನಿಸಬಹುದು  ಆದರೆ ಅದರ ಹಿಂದಿರುವ ಸತ್ಯವನ್ನು ತೆಗೆದುಹಾಕುವಂತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಾಯಕ (ನಾಯಕಿ) ಎಂದೆನಿಸಿಕೊಳ್ಳಲು ಆ ವ್ಯಕ್ತಿಯಲ್ಲಿ ಏನೋ ಒಂದು ಶಕ್ತಿ ಇರಬೇಕು; ಕೆಲವು ಕಣ್ಣಿಗೆ ಗೋಚರವಾಗಿದ್ದರೆ ಕೆಲವು ಅಗೋಚರವಾಗಿರುತ್ತವೆ. ಶಕ್ತಿಯ ರಹಸ್ಯವನ್ನು ನಾಯಕರು ತಮ್ಮ ಬೆಂಬಲಿಗರಿಗೆ ತಿಳಿಸುವುದಿಲ್ಲ, ಆದರೆ ಸಾಮಾನ್ಯ ಪ್ರಜೆಗಳು ಇದರ ಬಗ್ಗೆ  ತಿಳಿದಿರುವುದು ಉತ್ತಮ.

ಮೊದಲನೆಯದು ನ್ಯಾಯಯುತವಾದ ಸ್ಥಾನಿಕ ಮೂಲ – ಅಂದರೆ ನ್ಯಾಯಯುತವಾಗಿ ಅವರು ಯಾವುದೋ ಚುನಾವಣೆಯಲ್ಲಿ ಗೆದ್ದಿದ್ದರೆ ಅಥವಾ ಪದ/ಸ್ಥಾನವನ್ನು ಪಡೆದಿದ್ದರೆ ಅದರಿಂದ ಸಿಗುವ ನಾಯಕತ್ವ ಶಕ್ತಿ. ಇದು ಎಲ್ಲರಿಗೂ ಗೋಚರಿಸುವ ಶಕ್ತಿ ಮೂಲ. ಅವರು ನಿಜವಾಗಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದರೋ, ಇಲ್ಲವೋ ಅದರ ಚರ್ಚೆ ಈಗ ಬೇಡ. ಇದು ಕೇವಲ ರಾಜಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಯಾವುದೇ ಸರಕಾರಿ, ಖಾಸಗಿ ಅಥವಾ ಸರಕಾರೇತರ ಸಂಸ್ಥೆಯ ಹುದ್ದೆಯಲ್ಲಿರುವವರಿಗೂ ಅನ್ವಯಿಸುತ್ತದೆ. ಈ ಶಕ್ತಿ ಮೂಲ ಎಷ್ಟೇ ಪ್ರಬಲವಾಗಿದ್ದರೂ ಸಹ ಇದು ಕಾಯಂ ಆಗಲು ಸಾಧ್ಯವಿಲ್ಲ. ಕುರ್ಚಿ ಬಿಟ್ಟು ಕೆಳಗಿಳಿದ ಕ್ಷಣದಲ್ಲೇ ಶಕ್ತಿ ಮೂಲ ಮಾಯವಾಗುತ್ತದೆ. ಇತ್ತೀಚಿಗೆ ಚುನಾವಣೆಯಲ್ಲಿ ಪರಾಭವಗೊಂಡು ಅಥವಾ ಕೆಲಸ ಕಳೆದುಕೊಂಡು ಕಳೆಗುಂದಿದ  ಹಲವಾರು ನಾಯಕರನ್ನು ನೀವು ಈಗಾಗಲೇ ಕಂಡಿರಬಹುದು. ಅನುಯಾಯಿಗಳು ಇವರನ್ನು ಗೌರವಿಸುತ್ತಿರಲಿಲ್ಲ, ಇವರು ಅಲಂಕರಿಸಿದ ಸ್ಥಾನವನ್ನು ಹಿಂಬಾಲಿಸುತ್ತಿದ್ದರು. ಹಾಗಾಗಿ ಇದು ಅಸ್ಥಾಯಿ ಸ್ಥಾನಿಕ ಶಕ್ತಿ ಮೂಲ.

ಎರಡನೆಯದು ಸಂಭಾವನೆ ಅಥವಾ ಇನಾಮು ಹಂಚುವ ಶಕ್ತಿ ಮೂಲ – ಅಂದರೆ ಇಲ್ಲಿ ನಾಯಕರು ತಮ್ಮ ಹಣ ಅಥವಾ ಸ್ಥಾನಕ್ಕೆ ಇರುವ ಶಕ್ತಿಯನ್ನು ಉಪಯೋಗಿಸಿಕೊಂಡು ತಮಗೆ ಬೇಕಾದವರಿಗೆ ಸೂಕ್ತ ಸಂಭಾವನೆ ನೀಡಿ, ಅನುಯಾಯಿಗಳನ್ನಾಗಿ ಮಾಡಿಕೊಂಡು ನಾಯಕರಾಗಿ ಮೆರೆಯುವ ಶಕ್ತಿ. ಇಲ್ಲಿ ಬಳಸಲ್ಪಡುವುದು ಮೊದಲನೆಯ ಸ್ಥಾನದಲ್ಲಿದ್ದಾಗ ಗಳಿಸಲ್ಪಟ್ಟ/ಕಬಳಿಸಲ್ಪಟ್ಟ ಹಣವಾದರೂ ಆಗಬಹುದು ಅಥವಾ ಬೇರೆ ಮಾರ್ಗದಿಂದ ಬಂದ ಹಣವಾದರೂ ಆಗಬಹುದು. ಎಲ್ಲವೂ ಹಣದ ರೂಪದಲ್ಲೇ ಇರಬೇಕಾಗಿಲ್ಲ, ತಮಗೆ ಬೇಕಾದವರಿಗೆ ಕೊಟ್ಟ ಬಡ್ತಿ, ವರ್ಗಾವಣೆ, ಮಾಡಿದ ಉಪಕಾರ, ಕಲ್ಪಿಸಿಕೊಟ್ಟ ಸೌಕರ್ಯ, ನೀಡಿದ ಬಿರುದು-ಬಹುಮಾನ, ವಾಗ್ದಾನಗಳು ಮುಂತಾದವು ಇಲ್ಲಿ ಕೆಲಸ ಮಾಡುತ್ತವೆ. ಇದು ಕೆಲವರಿಗೆ ಗೋಚರಿಸುತ್ತದೆ, ಕೆಲವರಿಗೆ ರಹಸ್ಯ ಅನಿಸುತ್ತದೆ. ಈ ಶಕ್ತಿ ಮೂಲದ ಆಯಸ್ಸು ಮೊದಲನೆಯದಕ್ಕಿಂತ ಸ್ವಲ್ಪ ಜಾಸ್ತಿ ಆದರೂ ಕಾಯಂ ಅಲ್ಲ. ಹಂಚುವ ಶಕ್ತಿ ಕ್ಷೀಣವಾದಂತೆ ಅನುಯಾಯಿಗಳೂ, ಶಕ್ತಿ ಮೂಲವೂ ಮಾಯವಾಗುತ್ತವೆ.

ಮೂರನೆಯದು ಬೆದರಿಕೆಯ ಶಕ್ತಿ ಮೂಲ ಅಂದರೆ ಅಧಿಕಾರ, ಧನಬಲ ಅಥವಾ ತೋಳ್ಬಲದ ಶಕ್ತಿಯ ಮೇಲೆ ಇತರರಿಗೆ ಬೆದರಿಕೆ ಹಾಕಿ/ಹಾಕಿಸಿ, ಅವರನ್ನು ತಮ್ಮ ಫರ್ಮಾನು ಕೇಳುವಂತೆ ಮಾಡುವ ನಾಯಕತ್ವ. ಇದು ಮೇಲಿನ ಎರಡು ಶಕ್ತಿ ಮೂಲದಿಂದಲಾದರೂ ಅಥವಾ ಪ್ರತ್ಯೇಕವಾಗಿಯೂ ಬಂದಿರಬಹುದು. ಕೆಲಸದಲ್ಲಿ ಡಿಮೋಷನ್, ಬಡ್ತಿ ತಡೆಹಿಡಿಯುವಿಕೆ, ನೀರು-ಮೇವು ಸಿಗದ ಸ್ಥಳಕ್ಕೆ ವರ್ಗಾವಣೆ, ಕಾರ್ಯ ಕ್ಷಮತೆಯ ಬಗ್ಗೆ ಟೀಕಾತ್ಮಕ ವರದಿ, ಮುಂತಾದ ಬೆದರಿಕೆ ಹಾಕುವುದು ಈ ತರಹದ ನಾಯಕತ್ವದ ವೈಶಿಷ್ಟ್ಯ. ಅಲ್ ಕೈದಾ, ತಾಲಿಬಾನ್ ಅಥವಾ ಇತ್ತೀಚಿನ ಐಸಿಸ್, ಮುಂತಾದ ಸಂಸ್ಥೆಗಳು ಮಾತ್ರವಲ್ಲದೆ ಎಷ್ಟೋ ಬಹುರಾಷ್ಟ್ರೀಯ ಸಂಸ್ಥೆಗಳು ಸಹ ಇದನ್ನು ಆಗಾಗ್ಗೆ ಬಳಸುತ್ತವೆ. ಈ ಶಕ್ತಿಮೂಲವೂ ಸಹ ಗೋಚರ – ಅಗೋಚರವಾಗಿರಬಹುದು ಆದರೆ ಬಹುಕಾಲ ನಡೆಯುವುದಿಲ್ಲ; ಒಂದಲ್ಲ ಒಂದು ದಿನ ಜನರು ಸಿಡಿದೇಳುತ್ತಾರೆ.

ನಾಲ್ಕನೆಯದು ವಿದ್ವತ್ ಶಕ್ತಿ ಮೂಲ – ಅಂದರೆ ಆ ವ್ಯಕ್ತಿ ಯಾವುದೇ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಪರಿಣಿತಿ ಹೊಂದಿದ್ದಲ್ಲಿ ಅಥವಾ ಸಾಧನೆ ಮಾಡಿದಲ್ಲಿ ಅದರಿಂದ ಬರುವ ಆತ್ಮಶಕ್ತಿ ಮತ್ತು ಖ್ಯಾತಿ ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಇದು ಎಲ್ಲರಿಗೂ ಕಾಣುವಂತಹ, ಜನಸಾಮಾನ್ಯರಿಗೆ ಕೈಗೆಟುಕಬಹುದಾದ ಏಕೈಕ ಶಕ್ತಿಮೂಲ. ಅವರು ನಿಜವಾಗಿ ವಿದ್ವಾಂಸರೋ ಅಥವಾ ಕರ್ತಿಚೌರ್ಯ ಮಾಡಿ ವಿದ್ವಾಂಸರಾದರೋ ಅದರ ಚರ್ಚೆ ಈಗ ಬೇಡ. ಮೋಸ ಮಾಡಿದ್ದರೆ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಈ ಶಕ್ತಿ ಮೂಲ ಅತ್ಯಂತ ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಾಗಿದ್ದು ಇದನ್ನು ಯಾರೂ ಅವರಿಂದ ಕಸಿದುಕೊಳ್ಳಲಾರರು. ಇವರಿಗಿಂತ ಹೆಚ್ಚು ಸಾಧನೆ ಮಾಡಿದವರು ಇನ್ನೂ ಹೆಚ್ಚಿನ ಪ್ರೀತಿ- ವಿಶ್ವಾಸ, ಹಣ ಗಳಿಸಿದರೂ ಸಹ ಇವರ ಖ್ಯಾತಿಗೆ ಧಕ್ಕೆಯಿರುವುದಿಲ್ಲ. ಉದಾಹರಣೆಗೆ ಸಚಿನ್ ತೆಂಡುಲ್ಕರ್ ಮತ್ತು ಡಾನ್ ಬ್ರಾಡ್ಮನ್.  ಆದರೆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೊಂದು ಗೊತ್ತಿಲ್ಲದ ಕ್ಷೇತ್ರದಲ್ಲಿ ನಾಯಕನಾಗ ಹೊರಟು – ಸಿನಿಮಾ ಅಥವಾ ಕ್ರೀಡಾ ತಾರೆಗಳಿಗೆ ರಾಜಕೀಯದಲ್ಲಿ ಆದ ಹಾಗೆ – ಮುಖಭಂಗ ಮಾಡಿಕೊಂಡ ನಿದರ್ಶನಗಳು ಇವೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿ ಎರಡರಲ್ಲೂ ಮಿಂಚಿದವರೂ ಇದ್ದಾರೆ.

ಐದನೆಯದು ಒಬ್ಬರ ಬೆನ್ನು ಇನ್ನೊಬ್ಬರು ತಟ್ಟುವ ಕಲೆಯಿಂದ ಬರುವ ಶಿಫಾರಸ್ಸು (ರೆಫೆರಲ್) ಶಕ್ತಿ ಮೂಲ ಅಂದರೆ ಇದರಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತನ್ನಾಡಿ ಅವರನ್ನು ಮೇಲಕ್ಕೇರಿಸುವುದು. ರಾಜಕೀಯ ಕ್ಷೇತ್ರದಲ್ಲಿ ಸರಿಯಾದ ಕುಟುಂಬದಲ್ಲಿ ಜನ್ಮ ತಾಳಿದುದರಿಂದ ಮತ್ತು ಅಪ್ಪ-ಅಮ್ಮನ ಚೇಲಾಗಳು ಇವರನ್ನು ತಲೆಯ ಮೇಲೆ ಕೂರಿಸಿಕೊಳ್ಳುವುದರಿಂದ ಈ ಶಕ್ತಿ ಮೂಲ ಕೈಹತ್ತಬಹುದು. ಇದನ್ನು ಅಂತರ್ಜಾಲ ಪ್ರಪಂಚದಲ್ಲಿ ಕೆಲವು (ಲಿಂಕ್ಡ್ ಇನ್ ಮುಂತಾದ) ತಾಣದಲ್ಲಿ ಎಂಡಾರ್ಸ್ಮೆಂಟ್ ರೂಪದಲ್ಲಿ ಕಾಣಬಹುದು. ಇದು ನ್ಯಾಯಯುತ ಅಥವಾ ಮೋಸಯುತವೂ ಆಗಿರಬಹುದು. ಈ ಶಕ್ತಿ ಮೂಲವೂ ಗೋಚರ ಅಥವಾ ಅಗೋಚರವಾಗಿರಬಹುದು. ಸರಿಯಾದ ಜನರನ್ನು ಶಿಫಾರಸ್ಸು ಮಾಡದೆ, ತಮ್ಮ ಅನುಯಾಯಿಗಳನ್ನು ಮೇಲೇರಿಸಲು ಪ್ರಯತ್ನಿಸಿ, ತಾವೂ ಬಿದ್ದು, ಮಿಕ್ಕವರನ್ನು ಬೀಳಿಸಿದ ನಾಯಕರೂ, ಪಕ್ಷದಿಂದ ಪಕ್ಷಕ್ಕೆ ಅಥವಾ ಕಂಪನಿಯಿಂದ ಕಂಪನಿಗೆ ಹಾರಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅದ ಕಥೆಗಳು ನಿಮಗೆ ತಿಳಿದಿರಬಹುದು.

ಸರಿಯಾದವರಿಂದ ಸರಿಯಾದವರಿಗೆ ಸಿಕ್ಕ ಶಿಫಾರಸ್ಸು ಶಕ್ತಿ ಮೂಲದಿಂದ ತುಂಬಾ ಮೇಲಕ್ಕೆ ಹೋದ ನಾಯಕರ ಉದಾಹರಣೆಗಳು ಸುಮಾರಷ್ಟಿವೆ. ಈ ಶಕ್ತಿಯನ್ನು ನುರಿತ ವೃತ್ತಿಪರರಿಂದ ‘ಇಮೇಜ್ ಬಿಲ್ಡಿಂಗ್’ ತಂತ್ರಕಲೆ ಉಪಯೋಗಿಸಿ ಕಟ್ಟಿಸಲೂಬಹುದು. ಕೆಲವು ರಾಜಕಾರಣಿಗಳು ಇದನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆ ಒಂದು ಸಾಬೂನಿನ ಬಗ್ಗೆ ಹೊಗಳಿ ಅದನ್ನು ನಂಬರ್ ಒನ್ ಮಾರಾಟದ ವಸ್ತುವನ್ನಾಗಿ ಮಾಡುವಂತೆ ಈ ಕಲೆಯನ್ನು  ವ್ಯಕ್ತಿಗಳ ಮೇಲೂ ಪ್ರಯೋಗಿಸಬಹುದು. ಐದು ಅಡಿ ಎತ್ತರದ ಮನುಷ್ಯನನ್ನು ಐವತ್ತು ಅಡಿ ‘ಕಟೌಟ್’ನಂತೆ ಪ್ರತಿಬಿಂಬಿಸಲೂಬಹುದು. ಈ ಕಲೆಯನ್ನು ಬಳಸಿಕೊಂಡು ಮೂರು ಕಾಸಿನ ಬೆಲೆ ಇಲ್ಲದ ವ್ಯಕ್ತಿಗಳು ನ್ಯಾಯಯುತ ನಾಯಕರಾದ ಉದಾಹರಣೆಗೇನೂ ಕೊರತೆಯಿಲ್ಲ. ಇದನ್ನು ವೃತ್ತಿಪರ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠಾಧೀಶರು, ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ಇದೂ ಶಾಶ್ವತವಲ್ಲ. ಇದನ್ನು ಜವಾಬ್ದಾರಿಯುತವಾಗಿ ಬಳಸದಿದ್ದಲ್ಲಿ ಇದು ಹಾನಿಕಾರಕವಾಗಿ ಪರಿಣಮಿಸಬಹು. ನಿಜವಾದ ವಿದ್ವತ್ ಶಕ್ತಿಮೂಲ ಇಲ್ಲದಿದ್ದಾಗ ಮಿಕ್ಕ ಯಾವುದೇ ಒಂದು ಶಕ್ತಿಮೂಲವನ್ನು ನಂಬಿದರೆ ಸಾಲದು ಎಂದು ತಿಳಿದು, ಉಳಿದವನ್ನೂ ಕಾಲಕಾಲಕ್ಕೆ ತಕ್ಕಂತೆ ಬಳಸಿಕೊಂಡು ದೀರ್ಘಕಾಲದಿಂದ ಬದುಕುಳಿದಿರುವ ನಾಯಕರು ಬಹಳಷ್ಟಿದ್ದಾರೆ.

ಏನೇ ಇರಲಿ, ತಮ್ಮ ನಾಯಕರನ್ನು ಹಿಂಬಾಲಿಸುವ ಮುನ್ನ ಅವರ ಶಕ್ತಿಮೂಲಗಳನ್ನು ಸರಿಯಾಗಿ ಅರಿತುಕೊಂಡಲ್ಲಿ ಜನರು ಬೇಸ್ತು ಬೀಳುವುದು ಕಡಿಮೆಯಾಗುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...