Homeಕರ್ನಾಟಕನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಾಯಕತ್ವದ ಐದು ಶಕ್ತಿ ಮೂಲಗಳ ಬಗ್ಗೆ ತಿಳಿಯೋಣ ಬನ್ನಿ.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಇತ್ತೀಚಿಗೆ ನಾಯಕತ್ವದ ಬಗ್ಗೆ ತರಗತಿಯೊಂದರಲ್ಲಿ ಪಾಠ ಮಾಡುತ್ತಿರುವಾಗ “ಓರ್ವ ವ್ಯಕ್ತಿಗೆ ನಾಯಕ ಆಗಲು ಶಕ್ತಿ ಎಲ್ಲಿಂದ ಬರುತ್ತದೆ?” ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ನನಗೆ ಹೊಳೆದಿದ್ದು ಮಿಷಿಗನ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಜಾನ್ ಫ್ರೆಂಚ್ ಮತ್ತು ಬರ್ಟ್ರಾಂಡ್ ರೇವನ್ ಅವರ 1959ರ ಅಧ್ಯಯನ. ಇವರ ಲೇಖನ ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಪ್ರಸಕ್ತ ರಾಜಕೀಯ ನಾಯಕತ್ವದ ಬಗ್ಗೆ ಒಂದು ವಿಡಂಬನೆ ಎನಿಸಬಹುದು  ಆದರೆ ಅದರ ಹಿಂದಿರುವ ಸತ್ಯವನ್ನು ತೆಗೆದುಹಾಕುವಂತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಾಯಕ (ನಾಯಕಿ) ಎಂದೆನಿಸಿಕೊಳ್ಳಲು ಆ ವ್ಯಕ್ತಿಯಲ್ಲಿ ಏನೋ ಒಂದು ಶಕ್ತಿ ಇರಬೇಕು; ಕೆಲವು ಕಣ್ಣಿಗೆ ಗೋಚರವಾಗಿದ್ದರೆ ಕೆಲವು ಅಗೋಚರವಾಗಿರುತ್ತವೆ. ಶಕ್ತಿಯ ರಹಸ್ಯವನ್ನು ನಾಯಕರು ತಮ್ಮ ಬೆಂಬಲಿಗರಿಗೆ ತಿಳಿಸುವುದಿಲ್ಲ, ಆದರೆ ಸಾಮಾನ್ಯ ಪ್ರಜೆಗಳು ಇದರ ಬಗ್ಗೆ  ತಿಳಿದಿರುವುದು ಉತ್ತಮ.

ಮೊದಲನೆಯದು ನ್ಯಾಯಯುತವಾದ ಸ್ಥಾನಿಕ ಮೂಲ – ಅಂದರೆ ನ್ಯಾಯಯುತವಾಗಿ ಅವರು ಯಾವುದೋ ಚುನಾವಣೆಯಲ್ಲಿ ಗೆದ್ದಿದ್ದರೆ ಅಥವಾ ಪದ/ಸ್ಥಾನವನ್ನು ಪಡೆದಿದ್ದರೆ ಅದರಿಂದ ಸಿಗುವ ನಾಯಕತ್ವ ಶಕ್ತಿ. ಇದು ಎಲ್ಲರಿಗೂ ಗೋಚರಿಸುವ ಶಕ್ತಿ ಮೂಲ. ಅವರು ನಿಜವಾಗಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದರೋ, ಇಲ್ಲವೋ ಅದರ ಚರ್ಚೆ ಈಗ ಬೇಡ. ಇದು ಕೇವಲ ರಾಜಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಯಾವುದೇ ಸರಕಾರಿ, ಖಾಸಗಿ ಅಥವಾ ಸರಕಾರೇತರ ಸಂಸ್ಥೆಯ ಹುದ್ದೆಯಲ್ಲಿರುವವರಿಗೂ ಅನ್ವಯಿಸುತ್ತದೆ. ಈ ಶಕ್ತಿ ಮೂಲ ಎಷ್ಟೇ ಪ್ರಬಲವಾಗಿದ್ದರೂ ಸಹ ಇದು ಕಾಯಂ ಆಗಲು ಸಾಧ್ಯವಿಲ್ಲ. ಕುರ್ಚಿ ಬಿಟ್ಟು ಕೆಳಗಿಳಿದ ಕ್ಷಣದಲ್ಲೇ ಶಕ್ತಿ ಮೂಲ ಮಾಯವಾಗುತ್ತದೆ. ಇತ್ತೀಚಿಗೆ ಚುನಾವಣೆಯಲ್ಲಿ ಪರಾಭವಗೊಂಡು ಅಥವಾ ಕೆಲಸ ಕಳೆದುಕೊಂಡು ಕಳೆಗುಂದಿದ  ಹಲವಾರು ನಾಯಕರನ್ನು ನೀವು ಈಗಾಗಲೇ ಕಂಡಿರಬಹುದು. ಅನುಯಾಯಿಗಳು ಇವರನ್ನು ಗೌರವಿಸುತ್ತಿರಲಿಲ್ಲ, ಇವರು ಅಲಂಕರಿಸಿದ ಸ್ಥಾನವನ್ನು ಹಿಂಬಾಲಿಸುತ್ತಿದ್ದರು. ಹಾಗಾಗಿ ಇದು ಅಸ್ಥಾಯಿ ಸ್ಥಾನಿಕ ಶಕ್ತಿ ಮೂಲ.

ಎರಡನೆಯದು ಸಂಭಾವನೆ ಅಥವಾ ಇನಾಮು ಹಂಚುವ ಶಕ್ತಿ ಮೂಲ – ಅಂದರೆ ಇಲ್ಲಿ ನಾಯಕರು ತಮ್ಮ ಹಣ ಅಥವಾ ಸ್ಥಾನಕ್ಕೆ ಇರುವ ಶಕ್ತಿಯನ್ನು ಉಪಯೋಗಿಸಿಕೊಂಡು ತಮಗೆ ಬೇಕಾದವರಿಗೆ ಸೂಕ್ತ ಸಂಭಾವನೆ ನೀಡಿ, ಅನುಯಾಯಿಗಳನ್ನಾಗಿ ಮಾಡಿಕೊಂಡು ನಾಯಕರಾಗಿ ಮೆರೆಯುವ ಶಕ್ತಿ. ಇಲ್ಲಿ ಬಳಸಲ್ಪಡುವುದು ಮೊದಲನೆಯ ಸ್ಥಾನದಲ್ಲಿದ್ದಾಗ ಗಳಿಸಲ್ಪಟ್ಟ/ಕಬಳಿಸಲ್ಪಟ್ಟ ಹಣವಾದರೂ ಆಗಬಹುದು ಅಥವಾ ಬೇರೆ ಮಾರ್ಗದಿಂದ ಬಂದ ಹಣವಾದರೂ ಆಗಬಹುದು. ಎಲ್ಲವೂ ಹಣದ ರೂಪದಲ್ಲೇ ಇರಬೇಕಾಗಿಲ್ಲ, ತಮಗೆ ಬೇಕಾದವರಿಗೆ ಕೊಟ್ಟ ಬಡ್ತಿ, ವರ್ಗಾವಣೆ, ಮಾಡಿದ ಉಪಕಾರ, ಕಲ್ಪಿಸಿಕೊಟ್ಟ ಸೌಕರ್ಯ, ನೀಡಿದ ಬಿರುದು-ಬಹುಮಾನ, ವಾಗ್ದಾನಗಳು ಮುಂತಾದವು ಇಲ್ಲಿ ಕೆಲಸ ಮಾಡುತ್ತವೆ. ಇದು ಕೆಲವರಿಗೆ ಗೋಚರಿಸುತ್ತದೆ, ಕೆಲವರಿಗೆ ರಹಸ್ಯ ಅನಿಸುತ್ತದೆ. ಈ ಶಕ್ತಿ ಮೂಲದ ಆಯಸ್ಸು ಮೊದಲನೆಯದಕ್ಕಿಂತ ಸ್ವಲ್ಪ ಜಾಸ್ತಿ ಆದರೂ ಕಾಯಂ ಅಲ್ಲ. ಹಂಚುವ ಶಕ್ತಿ ಕ್ಷೀಣವಾದಂತೆ ಅನುಯಾಯಿಗಳೂ, ಶಕ್ತಿ ಮೂಲವೂ ಮಾಯವಾಗುತ್ತವೆ.

ಮೂರನೆಯದು ಬೆದರಿಕೆಯ ಶಕ್ತಿ ಮೂಲ ಅಂದರೆ ಅಧಿಕಾರ, ಧನಬಲ ಅಥವಾ ತೋಳ್ಬಲದ ಶಕ್ತಿಯ ಮೇಲೆ ಇತರರಿಗೆ ಬೆದರಿಕೆ ಹಾಕಿ/ಹಾಕಿಸಿ, ಅವರನ್ನು ತಮ್ಮ ಫರ್ಮಾನು ಕೇಳುವಂತೆ ಮಾಡುವ ನಾಯಕತ್ವ. ಇದು ಮೇಲಿನ ಎರಡು ಶಕ್ತಿ ಮೂಲದಿಂದಲಾದರೂ ಅಥವಾ ಪ್ರತ್ಯೇಕವಾಗಿಯೂ ಬಂದಿರಬಹುದು. ಕೆಲಸದಲ್ಲಿ ಡಿಮೋಷನ್, ಬಡ್ತಿ ತಡೆಹಿಡಿಯುವಿಕೆ, ನೀರು-ಮೇವು ಸಿಗದ ಸ್ಥಳಕ್ಕೆ ವರ್ಗಾವಣೆ, ಕಾರ್ಯ ಕ್ಷಮತೆಯ ಬಗ್ಗೆ ಟೀಕಾತ್ಮಕ ವರದಿ, ಮುಂತಾದ ಬೆದರಿಕೆ ಹಾಕುವುದು ಈ ತರಹದ ನಾಯಕತ್ವದ ವೈಶಿಷ್ಟ್ಯ. ಅಲ್ ಕೈದಾ, ತಾಲಿಬಾನ್ ಅಥವಾ ಇತ್ತೀಚಿನ ಐಸಿಸ್, ಮುಂತಾದ ಸಂಸ್ಥೆಗಳು ಮಾತ್ರವಲ್ಲದೆ ಎಷ್ಟೋ ಬಹುರಾಷ್ಟ್ರೀಯ ಸಂಸ್ಥೆಗಳು ಸಹ ಇದನ್ನು ಆಗಾಗ್ಗೆ ಬಳಸುತ್ತವೆ. ಈ ಶಕ್ತಿಮೂಲವೂ ಸಹ ಗೋಚರ – ಅಗೋಚರವಾಗಿರಬಹುದು ಆದರೆ ಬಹುಕಾಲ ನಡೆಯುವುದಿಲ್ಲ; ಒಂದಲ್ಲ ಒಂದು ದಿನ ಜನರು ಸಿಡಿದೇಳುತ್ತಾರೆ.

ನಾಲ್ಕನೆಯದು ವಿದ್ವತ್ ಶಕ್ತಿ ಮೂಲ – ಅಂದರೆ ಆ ವ್ಯಕ್ತಿ ಯಾವುದೇ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಪರಿಣಿತಿ ಹೊಂದಿದ್ದಲ್ಲಿ ಅಥವಾ ಸಾಧನೆ ಮಾಡಿದಲ್ಲಿ ಅದರಿಂದ ಬರುವ ಆತ್ಮಶಕ್ತಿ ಮತ್ತು ಖ್ಯಾತಿ ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಇದು ಎಲ್ಲರಿಗೂ ಕಾಣುವಂತಹ, ಜನಸಾಮಾನ್ಯರಿಗೆ ಕೈಗೆಟುಕಬಹುದಾದ ಏಕೈಕ ಶಕ್ತಿಮೂಲ. ಅವರು ನಿಜವಾಗಿ ವಿದ್ವಾಂಸರೋ ಅಥವಾ ಕರ್ತಿಚೌರ್ಯ ಮಾಡಿ ವಿದ್ವಾಂಸರಾದರೋ ಅದರ ಚರ್ಚೆ ಈಗ ಬೇಡ. ಮೋಸ ಮಾಡಿದ್ದರೆ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಈ ಶಕ್ತಿ ಮೂಲ ಅತ್ಯಂತ ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಾಗಿದ್ದು ಇದನ್ನು ಯಾರೂ ಅವರಿಂದ ಕಸಿದುಕೊಳ್ಳಲಾರರು. ಇವರಿಗಿಂತ ಹೆಚ್ಚು ಸಾಧನೆ ಮಾಡಿದವರು ಇನ್ನೂ ಹೆಚ್ಚಿನ ಪ್ರೀತಿ- ವಿಶ್ವಾಸ, ಹಣ ಗಳಿಸಿದರೂ ಸಹ ಇವರ ಖ್ಯಾತಿಗೆ ಧಕ್ಕೆಯಿರುವುದಿಲ್ಲ. ಉದಾಹರಣೆಗೆ ಸಚಿನ್ ತೆಂಡುಲ್ಕರ್ ಮತ್ತು ಡಾನ್ ಬ್ರಾಡ್ಮನ್.  ಆದರೆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೊಂದು ಗೊತ್ತಿಲ್ಲದ ಕ್ಷೇತ್ರದಲ್ಲಿ ನಾಯಕನಾಗ ಹೊರಟು – ಸಿನಿಮಾ ಅಥವಾ ಕ್ರೀಡಾ ತಾರೆಗಳಿಗೆ ರಾಜಕೀಯದಲ್ಲಿ ಆದ ಹಾಗೆ – ಮುಖಭಂಗ ಮಾಡಿಕೊಂಡ ನಿದರ್ಶನಗಳು ಇವೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿ ಎರಡರಲ್ಲೂ ಮಿಂಚಿದವರೂ ಇದ್ದಾರೆ.

ಐದನೆಯದು ಒಬ್ಬರ ಬೆನ್ನು ಇನ್ನೊಬ್ಬರು ತಟ್ಟುವ ಕಲೆಯಿಂದ ಬರುವ ಶಿಫಾರಸ್ಸು (ರೆಫೆರಲ್) ಶಕ್ತಿ ಮೂಲ ಅಂದರೆ ಇದರಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತನ್ನಾಡಿ ಅವರನ್ನು ಮೇಲಕ್ಕೇರಿಸುವುದು. ರಾಜಕೀಯ ಕ್ಷೇತ್ರದಲ್ಲಿ ಸರಿಯಾದ ಕುಟುಂಬದಲ್ಲಿ ಜನ್ಮ ತಾಳಿದುದರಿಂದ ಮತ್ತು ಅಪ್ಪ-ಅಮ್ಮನ ಚೇಲಾಗಳು ಇವರನ್ನು ತಲೆಯ ಮೇಲೆ ಕೂರಿಸಿಕೊಳ್ಳುವುದರಿಂದ ಈ ಶಕ್ತಿ ಮೂಲ ಕೈಹತ್ತಬಹುದು. ಇದನ್ನು ಅಂತರ್ಜಾಲ ಪ್ರಪಂಚದಲ್ಲಿ ಕೆಲವು (ಲಿಂಕ್ಡ್ ಇನ್ ಮುಂತಾದ) ತಾಣದಲ್ಲಿ ಎಂಡಾರ್ಸ್ಮೆಂಟ್ ರೂಪದಲ್ಲಿ ಕಾಣಬಹುದು. ಇದು ನ್ಯಾಯಯುತ ಅಥವಾ ಮೋಸಯುತವೂ ಆಗಿರಬಹುದು. ಈ ಶಕ್ತಿ ಮೂಲವೂ ಗೋಚರ ಅಥವಾ ಅಗೋಚರವಾಗಿರಬಹುದು. ಸರಿಯಾದ ಜನರನ್ನು ಶಿಫಾರಸ್ಸು ಮಾಡದೆ, ತಮ್ಮ ಅನುಯಾಯಿಗಳನ್ನು ಮೇಲೇರಿಸಲು ಪ್ರಯತ್ನಿಸಿ, ತಾವೂ ಬಿದ್ದು, ಮಿಕ್ಕವರನ್ನು ಬೀಳಿಸಿದ ನಾಯಕರೂ, ಪಕ್ಷದಿಂದ ಪಕ್ಷಕ್ಕೆ ಅಥವಾ ಕಂಪನಿಯಿಂದ ಕಂಪನಿಗೆ ಹಾರಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅದ ಕಥೆಗಳು ನಿಮಗೆ ತಿಳಿದಿರಬಹುದು.

ಸರಿಯಾದವರಿಂದ ಸರಿಯಾದವರಿಗೆ ಸಿಕ್ಕ ಶಿಫಾರಸ್ಸು ಶಕ್ತಿ ಮೂಲದಿಂದ ತುಂಬಾ ಮೇಲಕ್ಕೆ ಹೋದ ನಾಯಕರ ಉದಾಹರಣೆಗಳು ಸುಮಾರಷ್ಟಿವೆ. ಈ ಶಕ್ತಿಯನ್ನು ನುರಿತ ವೃತ್ತಿಪರರಿಂದ ‘ಇಮೇಜ್ ಬಿಲ್ಡಿಂಗ್’ ತಂತ್ರಕಲೆ ಉಪಯೋಗಿಸಿ ಕಟ್ಟಿಸಲೂಬಹುದು. ಕೆಲವು ರಾಜಕಾರಣಿಗಳು ಇದನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆ ಒಂದು ಸಾಬೂನಿನ ಬಗ್ಗೆ ಹೊಗಳಿ ಅದನ್ನು ನಂಬರ್ ಒನ್ ಮಾರಾಟದ ವಸ್ತುವನ್ನಾಗಿ ಮಾಡುವಂತೆ ಈ ಕಲೆಯನ್ನು  ವ್ಯಕ್ತಿಗಳ ಮೇಲೂ ಪ್ರಯೋಗಿಸಬಹುದು. ಐದು ಅಡಿ ಎತ್ತರದ ಮನುಷ್ಯನನ್ನು ಐವತ್ತು ಅಡಿ ‘ಕಟೌಟ್’ನಂತೆ ಪ್ರತಿಬಿಂಬಿಸಲೂಬಹುದು. ಈ ಕಲೆಯನ್ನು ಬಳಸಿಕೊಂಡು ಮೂರು ಕಾಸಿನ ಬೆಲೆ ಇಲ್ಲದ ವ್ಯಕ್ತಿಗಳು ನ್ಯಾಯಯುತ ನಾಯಕರಾದ ಉದಾಹರಣೆಗೇನೂ ಕೊರತೆಯಿಲ್ಲ. ಇದನ್ನು ವೃತ್ತಿಪರ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠಾಧೀಶರು, ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ಇದೂ ಶಾಶ್ವತವಲ್ಲ. ಇದನ್ನು ಜವಾಬ್ದಾರಿಯುತವಾಗಿ ಬಳಸದಿದ್ದಲ್ಲಿ ಇದು ಹಾನಿಕಾರಕವಾಗಿ ಪರಿಣಮಿಸಬಹು. ನಿಜವಾದ ವಿದ್ವತ್ ಶಕ್ತಿಮೂಲ ಇಲ್ಲದಿದ್ದಾಗ ಮಿಕ್ಕ ಯಾವುದೇ ಒಂದು ಶಕ್ತಿಮೂಲವನ್ನು ನಂಬಿದರೆ ಸಾಲದು ಎಂದು ತಿಳಿದು, ಉಳಿದವನ್ನೂ ಕಾಲಕಾಲಕ್ಕೆ ತಕ್ಕಂತೆ ಬಳಸಿಕೊಂಡು ದೀರ್ಘಕಾಲದಿಂದ ಬದುಕುಳಿದಿರುವ ನಾಯಕರು ಬಹಳಷ್ಟಿದ್ದಾರೆ.

ಏನೇ ಇರಲಿ, ತಮ್ಮ ನಾಯಕರನ್ನು ಹಿಂಬಾಲಿಸುವ ಮುನ್ನ ಅವರ ಶಕ್ತಿಮೂಲಗಳನ್ನು ಸರಿಯಾಗಿ ಅರಿತುಕೊಂಡಲ್ಲಿ ಜನರು ಬೇಸ್ತು ಬೀಳುವುದು ಕಡಿಮೆಯಾಗುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...