Homeಕರ್ನಾಟಕನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಿಮ್ಮ ರಾಜಕೀಯ ಮುಖಂಡರ ನಾಯಕತ್ವದ ಶಕ್ತಿ ಎಷ್ಟಿದೆ ಗೊತ್ತೆ? ಆ ಶಕ್ತಿ ಬರುವುದಾದರೂ ಹೇಗೆ?

ನಾಯಕತ್ವದ ಐದು ಶಕ್ತಿ ಮೂಲಗಳ ಬಗ್ಗೆ ತಿಳಿಯೋಣ ಬನ್ನಿ.

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಇತ್ತೀಚಿಗೆ ನಾಯಕತ್ವದ ಬಗ್ಗೆ ತರಗತಿಯೊಂದರಲ್ಲಿ ಪಾಠ ಮಾಡುತ್ತಿರುವಾಗ “ಓರ್ವ ವ್ಯಕ್ತಿಗೆ ನಾಯಕ ಆಗಲು ಶಕ್ತಿ ಎಲ್ಲಿಂದ ಬರುತ್ತದೆ?” ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ನನಗೆ ಹೊಳೆದಿದ್ದು ಮಿಷಿಗನ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಜಾನ್ ಫ್ರೆಂಚ್ ಮತ್ತು ಬರ್ಟ್ರಾಂಡ್ ರೇವನ್ ಅವರ 1959ರ ಅಧ್ಯಯನ. ಇವರ ಲೇಖನ ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಪ್ರಸಕ್ತ ರಾಜಕೀಯ ನಾಯಕತ್ವದ ಬಗ್ಗೆ ಒಂದು ವಿಡಂಬನೆ ಎನಿಸಬಹುದು  ಆದರೆ ಅದರ ಹಿಂದಿರುವ ಸತ್ಯವನ್ನು ತೆಗೆದುಹಾಕುವಂತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಾಯಕ (ನಾಯಕಿ) ಎಂದೆನಿಸಿಕೊಳ್ಳಲು ಆ ವ್ಯಕ್ತಿಯಲ್ಲಿ ಏನೋ ಒಂದು ಶಕ್ತಿ ಇರಬೇಕು; ಕೆಲವು ಕಣ್ಣಿಗೆ ಗೋಚರವಾಗಿದ್ದರೆ ಕೆಲವು ಅಗೋಚರವಾಗಿರುತ್ತವೆ. ಶಕ್ತಿಯ ರಹಸ್ಯವನ್ನು ನಾಯಕರು ತಮ್ಮ ಬೆಂಬಲಿಗರಿಗೆ ತಿಳಿಸುವುದಿಲ್ಲ, ಆದರೆ ಸಾಮಾನ್ಯ ಪ್ರಜೆಗಳು ಇದರ ಬಗ್ಗೆ  ತಿಳಿದಿರುವುದು ಉತ್ತಮ.

ಮೊದಲನೆಯದು ನ್ಯಾಯಯುತವಾದ ಸ್ಥಾನಿಕ ಮೂಲ – ಅಂದರೆ ನ್ಯಾಯಯುತವಾಗಿ ಅವರು ಯಾವುದೋ ಚುನಾವಣೆಯಲ್ಲಿ ಗೆದ್ದಿದ್ದರೆ ಅಥವಾ ಪದ/ಸ್ಥಾನವನ್ನು ಪಡೆದಿದ್ದರೆ ಅದರಿಂದ ಸಿಗುವ ನಾಯಕತ್ವ ಶಕ್ತಿ. ಇದು ಎಲ್ಲರಿಗೂ ಗೋಚರಿಸುವ ಶಕ್ತಿ ಮೂಲ. ಅವರು ನಿಜವಾಗಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದರೋ, ಇಲ್ಲವೋ ಅದರ ಚರ್ಚೆ ಈಗ ಬೇಡ. ಇದು ಕೇವಲ ರಾಜಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಯಾವುದೇ ಸರಕಾರಿ, ಖಾಸಗಿ ಅಥವಾ ಸರಕಾರೇತರ ಸಂಸ್ಥೆಯ ಹುದ್ದೆಯಲ್ಲಿರುವವರಿಗೂ ಅನ್ವಯಿಸುತ್ತದೆ. ಈ ಶಕ್ತಿ ಮೂಲ ಎಷ್ಟೇ ಪ್ರಬಲವಾಗಿದ್ದರೂ ಸಹ ಇದು ಕಾಯಂ ಆಗಲು ಸಾಧ್ಯವಿಲ್ಲ. ಕುರ್ಚಿ ಬಿಟ್ಟು ಕೆಳಗಿಳಿದ ಕ್ಷಣದಲ್ಲೇ ಶಕ್ತಿ ಮೂಲ ಮಾಯವಾಗುತ್ತದೆ. ಇತ್ತೀಚಿಗೆ ಚುನಾವಣೆಯಲ್ಲಿ ಪರಾಭವಗೊಂಡು ಅಥವಾ ಕೆಲಸ ಕಳೆದುಕೊಂಡು ಕಳೆಗುಂದಿದ  ಹಲವಾರು ನಾಯಕರನ್ನು ನೀವು ಈಗಾಗಲೇ ಕಂಡಿರಬಹುದು. ಅನುಯಾಯಿಗಳು ಇವರನ್ನು ಗೌರವಿಸುತ್ತಿರಲಿಲ್ಲ, ಇವರು ಅಲಂಕರಿಸಿದ ಸ್ಥಾನವನ್ನು ಹಿಂಬಾಲಿಸುತ್ತಿದ್ದರು. ಹಾಗಾಗಿ ಇದು ಅಸ್ಥಾಯಿ ಸ್ಥಾನಿಕ ಶಕ್ತಿ ಮೂಲ.

ಎರಡನೆಯದು ಸಂಭಾವನೆ ಅಥವಾ ಇನಾಮು ಹಂಚುವ ಶಕ್ತಿ ಮೂಲ – ಅಂದರೆ ಇಲ್ಲಿ ನಾಯಕರು ತಮ್ಮ ಹಣ ಅಥವಾ ಸ್ಥಾನಕ್ಕೆ ಇರುವ ಶಕ್ತಿಯನ್ನು ಉಪಯೋಗಿಸಿಕೊಂಡು ತಮಗೆ ಬೇಕಾದವರಿಗೆ ಸೂಕ್ತ ಸಂಭಾವನೆ ನೀಡಿ, ಅನುಯಾಯಿಗಳನ್ನಾಗಿ ಮಾಡಿಕೊಂಡು ನಾಯಕರಾಗಿ ಮೆರೆಯುವ ಶಕ್ತಿ. ಇಲ್ಲಿ ಬಳಸಲ್ಪಡುವುದು ಮೊದಲನೆಯ ಸ್ಥಾನದಲ್ಲಿದ್ದಾಗ ಗಳಿಸಲ್ಪಟ್ಟ/ಕಬಳಿಸಲ್ಪಟ್ಟ ಹಣವಾದರೂ ಆಗಬಹುದು ಅಥವಾ ಬೇರೆ ಮಾರ್ಗದಿಂದ ಬಂದ ಹಣವಾದರೂ ಆಗಬಹುದು. ಎಲ್ಲವೂ ಹಣದ ರೂಪದಲ್ಲೇ ಇರಬೇಕಾಗಿಲ್ಲ, ತಮಗೆ ಬೇಕಾದವರಿಗೆ ಕೊಟ್ಟ ಬಡ್ತಿ, ವರ್ಗಾವಣೆ, ಮಾಡಿದ ಉಪಕಾರ, ಕಲ್ಪಿಸಿಕೊಟ್ಟ ಸೌಕರ್ಯ, ನೀಡಿದ ಬಿರುದು-ಬಹುಮಾನ, ವಾಗ್ದಾನಗಳು ಮುಂತಾದವು ಇಲ್ಲಿ ಕೆಲಸ ಮಾಡುತ್ತವೆ. ಇದು ಕೆಲವರಿಗೆ ಗೋಚರಿಸುತ್ತದೆ, ಕೆಲವರಿಗೆ ರಹಸ್ಯ ಅನಿಸುತ್ತದೆ. ಈ ಶಕ್ತಿ ಮೂಲದ ಆಯಸ್ಸು ಮೊದಲನೆಯದಕ್ಕಿಂತ ಸ್ವಲ್ಪ ಜಾಸ್ತಿ ಆದರೂ ಕಾಯಂ ಅಲ್ಲ. ಹಂಚುವ ಶಕ್ತಿ ಕ್ಷೀಣವಾದಂತೆ ಅನುಯಾಯಿಗಳೂ, ಶಕ್ತಿ ಮೂಲವೂ ಮಾಯವಾಗುತ್ತವೆ.

ಮೂರನೆಯದು ಬೆದರಿಕೆಯ ಶಕ್ತಿ ಮೂಲ ಅಂದರೆ ಅಧಿಕಾರ, ಧನಬಲ ಅಥವಾ ತೋಳ್ಬಲದ ಶಕ್ತಿಯ ಮೇಲೆ ಇತರರಿಗೆ ಬೆದರಿಕೆ ಹಾಕಿ/ಹಾಕಿಸಿ, ಅವರನ್ನು ತಮ್ಮ ಫರ್ಮಾನು ಕೇಳುವಂತೆ ಮಾಡುವ ನಾಯಕತ್ವ. ಇದು ಮೇಲಿನ ಎರಡು ಶಕ್ತಿ ಮೂಲದಿಂದಲಾದರೂ ಅಥವಾ ಪ್ರತ್ಯೇಕವಾಗಿಯೂ ಬಂದಿರಬಹುದು. ಕೆಲಸದಲ್ಲಿ ಡಿಮೋಷನ್, ಬಡ್ತಿ ತಡೆಹಿಡಿಯುವಿಕೆ, ನೀರು-ಮೇವು ಸಿಗದ ಸ್ಥಳಕ್ಕೆ ವರ್ಗಾವಣೆ, ಕಾರ್ಯ ಕ್ಷಮತೆಯ ಬಗ್ಗೆ ಟೀಕಾತ್ಮಕ ವರದಿ, ಮುಂತಾದ ಬೆದರಿಕೆ ಹಾಕುವುದು ಈ ತರಹದ ನಾಯಕತ್ವದ ವೈಶಿಷ್ಟ್ಯ. ಅಲ್ ಕೈದಾ, ತಾಲಿಬಾನ್ ಅಥವಾ ಇತ್ತೀಚಿನ ಐಸಿಸ್, ಮುಂತಾದ ಸಂಸ್ಥೆಗಳು ಮಾತ್ರವಲ್ಲದೆ ಎಷ್ಟೋ ಬಹುರಾಷ್ಟ್ರೀಯ ಸಂಸ್ಥೆಗಳು ಸಹ ಇದನ್ನು ಆಗಾಗ್ಗೆ ಬಳಸುತ್ತವೆ. ಈ ಶಕ್ತಿಮೂಲವೂ ಸಹ ಗೋಚರ – ಅಗೋಚರವಾಗಿರಬಹುದು ಆದರೆ ಬಹುಕಾಲ ನಡೆಯುವುದಿಲ್ಲ; ಒಂದಲ್ಲ ಒಂದು ದಿನ ಜನರು ಸಿಡಿದೇಳುತ್ತಾರೆ.

ನಾಲ್ಕನೆಯದು ವಿದ್ವತ್ ಶಕ್ತಿ ಮೂಲ – ಅಂದರೆ ಆ ವ್ಯಕ್ತಿ ಯಾವುದೇ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಪರಿಣಿತಿ ಹೊಂದಿದ್ದಲ್ಲಿ ಅಥವಾ ಸಾಧನೆ ಮಾಡಿದಲ್ಲಿ ಅದರಿಂದ ಬರುವ ಆತ್ಮಶಕ್ತಿ ಮತ್ತು ಖ್ಯಾತಿ ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಇದು ಎಲ್ಲರಿಗೂ ಕಾಣುವಂತಹ, ಜನಸಾಮಾನ್ಯರಿಗೆ ಕೈಗೆಟುಕಬಹುದಾದ ಏಕೈಕ ಶಕ್ತಿಮೂಲ. ಅವರು ನಿಜವಾಗಿ ವಿದ್ವಾಂಸರೋ ಅಥವಾ ಕರ್ತಿಚೌರ್ಯ ಮಾಡಿ ವಿದ್ವಾಂಸರಾದರೋ ಅದರ ಚರ್ಚೆ ಈಗ ಬೇಡ. ಮೋಸ ಮಾಡಿದ್ದರೆ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಈ ಶಕ್ತಿ ಮೂಲ ಅತ್ಯಂತ ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಾಗಿದ್ದು ಇದನ್ನು ಯಾರೂ ಅವರಿಂದ ಕಸಿದುಕೊಳ್ಳಲಾರರು. ಇವರಿಗಿಂತ ಹೆಚ್ಚು ಸಾಧನೆ ಮಾಡಿದವರು ಇನ್ನೂ ಹೆಚ್ಚಿನ ಪ್ರೀತಿ- ವಿಶ್ವಾಸ, ಹಣ ಗಳಿಸಿದರೂ ಸಹ ಇವರ ಖ್ಯಾತಿಗೆ ಧಕ್ಕೆಯಿರುವುದಿಲ್ಲ. ಉದಾಹರಣೆಗೆ ಸಚಿನ್ ತೆಂಡುಲ್ಕರ್ ಮತ್ತು ಡಾನ್ ಬ್ರಾಡ್ಮನ್.  ಆದರೆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೊಂದು ಗೊತ್ತಿಲ್ಲದ ಕ್ಷೇತ್ರದಲ್ಲಿ ನಾಯಕನಾಗ ಹೊರಟು – ಸಿನಿಮಾ ಅಥವಾ ಕ್ರೀಡಾ ತಾರೆಗಳಿಗೆ ರಾಜಕೀಯದಲ್ಲಿ ಆದ ಹಾಗೆ – ಮುಖಭಂಗ ಮಾಡಿಕೊಂಡ ನಿದರ್ಶನಗಳು ಇವೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿ ಎರಡರಲ್ಲೂ ಮಿಂಚಿದವರೂ ಇದ್ದಾರೆ.

ಐದನೆಯದು ಒಬ್ಬರ ಬೆನ್ನು ಇನ್ನೊಬ್ಬರು ತಟ್ಟುವ ಕಲೆಯಿಂದ ಬರುವ ಶಿಫಾರಸ್ಸು (ರೆಫೆರಲ್) ಶಕ್ತಿ ಮೂಲ ಅಂದರೆ ಇದರಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತನ್ನಾಡಿ ಅವರನ್ನು ಮೇಲಕ್ಕೇರಿಸುವುದು. ರಾಜಕೀಯ ಕ್ಷೇತ್ರದಲ್ಲಿ ಸರಿಯಾದ ಕುಟುಂಬದಲ್ಲಿ ಜನ್ಮ ತಾಳಿದುದರಿಂದ ಮತ್ತು ಅಪ್ಪ-ಅಮ್ಮನ ಚೇಲಾಗಳು ಇವರನ್ನು ತಲೆಯ ಮೇಲೆ ಕೂರಿಸಿಕೊಳ್ಳುವುದರಿಂದ ಈ ಶಕ್ತಿ ಮೂಲ ಕೈಹತ್ತಬಹುದು. ಇದನ್ನು ಅಂತರ್ಜಾಲ ಪ್ರಪಂಚದಲ್ಲಿ ಕೆಲವು (ಲಿಂಕ್ಡ್ ಇನ್ ಮುಂತಾದ) ತಾಣದಲ್ಲಿ ಎಂಡಾರ್ಸ್ಮೆಂಟ್ ರೂಪದಲ್ಲಿ ಕಾಣಬಹುದು. ಇದು ನ್ಯಾಯಯುತ ಅಥವಾ ಮೋಸಯುತವೂ ಆಗಿರಬಹುದು. ಈ ಶಕ್ತಿ ಮೂಲವೂ ಗೋಚರ ಅಥವಾ ಅಗೋಚರವಾಗಿರಬಹುದು. ಸರಿಯಾದ ಜನರನ್ನು ಶಿಫಾರಸ್ಸು ಮಾಡದೆ, ತಮ್ಮ ಅನುಯಾಯಿಗಳನ್ನು ಮೇಲೇರಿಸಲು ಪ್ರಯತ್ನಿಸಿ, ತಾವೂ ಬಿದ್ದು, ಮಿಕ್ಕವರನ್ನು ಬೀಳಿಸಿದ ನಾಯಕರೂ, ಪಕ್ಷದಿಂದ ಪಕ್ಷಕ್ಕೆ ಅಥವಾ ಕಂಪನಿಯಿಂದ ಕಂಪನಿಗೆ ಹಾರಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅದ ಕಥೆಗಳು ನಿಮಗೆ ತಿಳಿದಿರಬಹುದು.

ಸರಿಯಾದವರಿಂದ ಸರಿಯಾದವರಿಗೆ ಸಿಕ್ಕ ಶಿಫಾರಸ್ಸು ಶಕ್ತಿ ಮೂಲದಿಂದ ತುಂಬಾ ಮೇಲಕ್ಕೆ ಹೋದ ನಾಯಕರ ಉದಾಹರಣೆಗಳು ಸುಮಾರಷ್ಟಿವೆ. ಈ ಶಕ್ತಿಯನ್ನು ನುರಿತ ವೃತ್ತಿಪರರಿಂದ ‘ಇಮೇಜ್ ಬಿಲ್ಡಿಂಗ್’ ತಂತ್ರಕಲೆ ಉಪಯೋಗಿಸಿ ಕಟ್ಟಿಸಲೂಬಹುದು. ಕೆಲವು ರಾಜಕಾರಣಿಗಳು ಇದನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆ ಒಂದು ಸಾಬೂನಿನ ಬಗ್ಗೆ ಹೊಗಳಿ ಅದನ್ನು ನಂಬರ್ ಒನ್ ಮಾರಾಟದ ವಸ್ತುವನ್ನಾಗಿ ಮಾಡುವಂತೆ ಈ ಕಲೆಯನ್ನು  ವ್ಯಕ್ತಿಗಳ ಮೇಲೂ ಪ್ರಯೋಗಿಸಬಹುದು. ಐದು ಅಡಿ ಎತ್ತರದ ಮನುಷ್ಯನನ್ನು ಐವತ್ತು ಅಡಿ ‘ಕಟೌಟ್’ನಂತೆ ಪ್ರತಿಬಿಂಬಿಸಲೂಬಹುದು. ಈ ಕಲೆಯನ್ನು ಬಳಸಿಕೊಂಡು ಮೂರು ಕಾಸಿನ ಬೆಲೆ ಇಲ್ಲದ ವ್ಯಕ್ತಿಗಳು ನ್ಯಾಯಯುತ ನಾಯಕರಾದ ಉದಾಹರಣೆಗೇನೂ ಕೊರತೆಯಿಲ್ಲ. ಇದನ್ನು ವೃತ್ತಿಪರ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠಾಧೀಶರು, ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ಇದೂ ಶಾಶ್ವತವಲ್ಲ. ಇದನ್ನು ಜವಾಬ್ದಾರಿಯುತವಾಗಿ ಬಳಸದಿದ್ದಲ್ಲಿ ಇದು ಹಾನಿಕಾರಕವಾಗಿ ಪರಿಣಮಿಸಬಹು. ನಿಜವಾದ ವಿದ್ವತ್ ಶಕ್ತಿಮೂಲ ಇಲ್ಲದಿದ್ದಾಗ ಮಿಕ್ಕ ಯಾವುದೇ ಒಂದು ಶಕ್ತಿಮೂಲವನ್ನು ನಂಬಿದರೆ ಸಾಲದು ಎಂದು ತಿಳಿದು, ಉಳಿದವನ್ನೂ ಕಾಲಕಾಲಕ್ಕೆ ತಕ್ಕಂತೆ ಬಳಸಿಕೊಂಡು ದೀರ್ಘಕಾಲದಿಂದ ಬದುಕುಳಿದಿರುವ ನಾಯಕರು ಬಹಳಷ್ಟಿದ್ದಾರೆ.

ಏನೇ ಇರಲಿ, ತಮ್ಮ ನಾಯಕರನ್ನು ಹಿಂಬಾಲಿಸುವ ಮುನ್ನ ಅವರ ಶಕ್ತಿಮೂಲಗಳನ್ನು ಸರಿಯಾಗಿ ಅರಿತುಕೊಂಡಲ್ಲಿ ಜನರು ಬೇಸ್ತು ಬೀಳುವುದು ಕಡಿಮೆಯಾಗುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...