Homeಕರ್ನಾಟಕಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

ಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

- Advertisement -
- Advertisement -

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು.

ಭಾರತ ಸಂವಿಧಾನ ಸಂಘಟನಾ ಸಮಿತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಡಿದ ಮಾತುಗಳನ್ನು ಉದ್ಧರಿಸುತ್ತ ಖ್ಯಾತ ಎಡಪಂಥೀಯ ಚಿಂತಕ, ಪಿ. ಸಾಯಿನಾಥ್ ‘ಭಾರತದ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿರುವ ದೌರ್ಬಲ್ಯದ ಬಗ್ಗೆ ಬಾಬಾ ಸಾಹೇಬರು ಬಹಳ ಹಿಂದೆಯೇ ಎಚ್ಚರಿಸಿದ್ದರು. ಸಮಾನತೆಯನ್ನು ಹೊರಗಿಟ್ಟ ಸ್ವಾತಂತ್ರ್ಯ ಬಹುಜನರ ಮೇಲೆ ಕೆಲವೇ ಕೆಲವು ಜನಗಳ ದಬ್ಬಾಳಿಕೆಗೆ ದಾರಿಮಾಡಿಕೊಡುತ್ತದೆ. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳ ಮೌಲ್ಯಗಳನ್ನು ಬೇರ್ಪಡಿಸಿ ನೋಡುವ ಹಾಗಿಲ್ಲ. ಅವುಗಳ ಪೈಕಿ ಒಂದನ್ನು ಹೊರತುಪಡಿಸಿ ಇನ್ನೊಂದು ಇರಲಾರದು’ ಎಂದು ಸಾಯಿನಾಥ್ ಬಾಬಾ ಸಾಹೇಬರನ್ನು ಉಲ್ಲೇಖಿಸಿದ್ದರು. ತನ್ನ ಮಾತು ಮುಂದುವರಿಸುತ್ತ ಸಾಯಿನಾಥ್ ಹಾಲೀ ಕೇಂದ್ರ ಸರಕಾರದ ಧೋರಣೆಗಳು ದೇಶದಲ್ಲಿ ಹಿಂದೆಂದೂ ಕಾಣದ ಅಸಮಾನತೆಗೆ ಕಾರಣವಾಗಿದೆ ಎಂದು ಹೇಳಿದರು.

ಈ ಸಂಗತಿಗಳಲ್ಲಿ ಒಂದಕ್ಕೊಂದು ಹೇಗೆ ಥಳಕು ಹಾಕಿಕೊಂಡಿದೆ ಎಂದು ಹೇಳುತ್ತ ಸಾಯಿನಾಥ್ ತನ್ನ ಮಾತಿಗೆ ಮುಸ್ಲಿಂ ಜಾನುವಾರು ಕಸಾಯಿಗಳ ನಿದರ್ಶನ ನೀಡಿದರು. ಈ ವ್ಯವಹಾರದ ಮೂಲಾಧಾರವಾಗಿರುವ ಜಾನುವಾರು ದಲ್ಲಾಳಿಗಳಲ್ಲಿ ಹೆಚ್ಚಿನವರು ಕೆಳಜಾತಿ, ವರ್ಗಗಳ ಹಿಂದುಗಳು. ಜಾನುವಾರು ಹತ್ಯೆ ನಿಷೇಧಗೊಂಡಾಗ ಮುಸ್ಲಿಂ ಕಸಾಯಿಗಳು ನಿರುದ್ಯೋಗಿಗಳಾದರು; ಹಿಂದುಳಿದ ಜಾತಿವರ್ಗಗಳವರು ತಮ್ಮ ಅರೆಕಾಲಿಕ ಉದ್ಯೋಗಗಳನ್ನು ಕಳಕಂಡರು. ಬೆಲೆಗಳು ಕುಸಿದವು. ಮಹಾರಾಷ್ಟ್ರ ರಾಜ್ಯದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾಗಿರುವ ಕೊಲ್ಹಾಪುರಿ ಚಪ್ಪಲಿಗಳ ತಯಾರಿಕೆ ದಿವಾಳಿ ಎದ್ದಿತು. ದೇಶದ ಆರ್ಥಿಕ ಧೋರಣೆಗಳನ್ನು ದೆಹಲಿಯಲ್ಲಿ ಕೂತು ನಿರ್ಧರಿಸುವವರಿಗೆ ಗ್ರಾಮೀಣ ಉದ್ಯಮಗಳು ಹೇಗೆ ಪರಸ್ಪರ ಸಂಬಂಧ ಹೊಂದಿದ್ದು ನಿಕಟವಾಗಿ ಹೆಣೆದುಕೊಂಡಿದೆ ಎಂಬ ಕಲ್ಪನೆಯೇ ಇಲ್ಲ ಎಂದು ಸಾಯಿನಾಥ್ ಹೇಳಿದರು. ದೇಶ ಈಗ ಕೃಷಿ, ಶಿಕ್ಷಣ ಅರ್ಥವ್ಯವಸ್ಥೆ ಮತ್ತು ಉದ್ಯೋಗ ನಿರ್ಮಾಣ ಕ್ಷೇತ್ರಗಳಲ್ಲಿ ಗಂಭೀರವಾದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅವರು ತಿಳಿಸಿದರು. ಮಂಗಳೂರಿನ ಈ ಉಪನ್ಯಾಸವನ್ನು ನಗರದ ಸೈಂಟ್ ಅಲೋಸಿಯಸ್ ಕಾಲೇಜು ಏರ್ಪಡಿಸಿತ್ತು.

ಕುಂದಾಪುರದಲ್ಲಿ ‘ಸಮುದಾಯ’ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ‘ಕಾರ್ಪೊರೇಟ್ ಫಾರ್ಮಿಂಗ್ – ಭಾರತದ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ನೀಡಿದ ಉಪನ್ಯಾಸದಲ್ಲಿ ಸಾಯಿನಾಥ್ ರೈತನಿಗೆ ಆತ ಬಳಸುವ ನೆಲ ಹೊರತು ಪಡಿಸಿ, ಬೇರೆ ಯಾವುದರ ಮೇಲೂ ಹಿಡಿತವಿಲ್ಲ. ಕೃಷಿಯ ಮೂಲಭೂತ ಅಗತ್ಯಗಳಾದ ನೀರು, ಗೊಬ್ಬರ, ಬೀಜ, ಮಾರುಕಟ್ಟೆ, ಸಾರಿಗೆ – ಎಲ್ಲವೂ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣದಲ್ಲಿವೆ. ಕಾರ್ಪೊರೇಟ್ ಕಂಪನಿಗಳು ಕೃಷಿಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ. ಇದರ ಪರಿಣಾಮವಾಗಿ ರೈತ, ಇಂದು, ಅಕ್ಷರಶಃ ಕಾರ್ಪೊರೇಟ್ ಹಿತಾಸಕ್ತಿಗಳ ಗುಲಾಮನಾಗಿದ್ದಾನೆ. ಒಬ್ಬ ಬಡಗಿ, ನೇಕಾರ, ಮೋಚಿ ಅಥವಾ ಅಕ್ಕಸಾಲಿಗ, ಹೀಗೆ ಯಾವ ದುಡಿಮೆಗಾರನಿಗಾದರೂ ತನ್ನ ದುಡಿಮೆಯ ವೇತನ ಎಷ್ಟು? ತಾನು ಉತ್ಪಾದಿಸಿದ ಸರಕಿನ ಬೆಲೆ ಎಷ್ಟು? ಎಂದು ನಿರ್ಧರಿಸುವ ಹಕ್ಕು ಇರುತ್ತದೆ. ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ರೈತನ ನಿರ್ಧಾರಗಳನ್ನೂ ಆತನ ಹೆಸರಿನಲ್ಲಿ ಕಾರ್ಪೊರೇಶನ್ ಕಂಪನಿಗಳೇ ತೆಗೆದುಕೊಳ್ಳುತ್ತವೆ. ಹಾಗಾಗಿ ‘ರೈತ’ ಎಂಬ ಶಬ್ದಕ್ಕೆ ಈಗ ಯಾವ ಅರ್ಥವೂ ಉಳಿದಿಲ್ಲ. ಹಾಲೀಕೇಂದ್ರ ಸರಕಾರದ ಬಹುಮುಖ್ಯ ಆರ್ಥಿಕ ನಿರ್ಧಾರಗಳನ್ನೆ ನೋಡಿ. ನೋಟು ಅಮಾನ್ಯೀಕರಣ ಹಾಗೂ ಜಿ.ಎಸ್.ಟಿ ತೆರಿಗೆಗಳು ರೈತನ ಪರವಾಗಿಲ್ಲ. ರೈತರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸದೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳು ಅವು. ದೇಶದ ಕೃಷಿ ವಿಶ್ವ ವಿದ್ಯಾಲಯಗಳು ಸಹ ಈಗ ರೈತರ ಬದಲು ಕಾರ್ಪೊರೇಟ್ ಹಿತಾಸಕ್ತಿಗಳ ವಕ್ತಾರರಂತೆ ವರ್ತಿಸುತ್ತಿವೆ. ಅವು ಹೆಸರಿಗಷ್ಟೇ ‘ಸ್ವಾವಲಂಬಿ’ ವಾಸ್ತವವಾಗಿ ಅವೆಲ್ಲವೂ ಕಾರ್ಪೊರೇಟ್ ಬಂಡವಾಳಶಾಹಿಯ ಕೃಪಾಪೋಷಿತ ಸಂಸ್ಥೆಗಳು ಈ ಸನ್ನಿವೇಶದಲ್ಲಿ ಮಾರುಕಟ್ಟೆಯನ್ನೇ ಅವಲಂಬಿಸಿದ ವಾಣಿಜ್ಯ ಕೃಷಿ ಅತಂತ್ರವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆನಿಲ್ಲಾ ಬೆಳೆಗೆ ವಿಪರೀತ ಬೆಲೆ ಏರಿದುದರಿಂದ ಕೇರಳ, ಮಂಗಳೂರುಗಳ ರೈತರು ಭಾರೀ ವರಮಾನ ಗಳಿಸಿದರು. ಆದರೆ ಒಮ್ಮೆ ವೆನಿಲ್ಲಾದ ಬೆಲೆ ಕುಸಿಯಲಾರಂಭಿಸಿದಾಗ ಅವುಗಳ ಮೇಲೆ ಭರವಸೆ ಇಟ್ಟಿದ್ದ ರೈತರು ದಿಕ್ಕೆಟ್ಟು ಆತ್ಮಹತ್ಯೆ ಮಾಡಿ ಕೊಳ್ಳಬೇಕಾಯಿತು. ಇದೇ ಪರಿಸ್ಥಿತಿ ಪಂಜಾಬ್‍ನ ರೈತರಿಗೂ ಎದುರಾಯಿತು. ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೋ ಪಂಜಾಬ್‍ನ ರೈತರು ಬೆಳೆಸಿದ ವಿಶಿಷ್ಟ ತಳಿಯ ಟೊಮೆಟೋ ಹಣ್ಣು ಕೊಳ್ಳಲಾರಂಭಿತು. ಮೊದಲ ಎರಡು ವರ್ಷ ಪಂಜಾಬ್ ರೈತರಿಗೆ ಪೆಪ್ಸಿಕೋ ಬಹಳ ಒಳ್ಳೆಯ ವರ ನೀಡಿತು. ಆ ನಂತರ ಕಂಪನಿಗೆ ಅದೇ ಗುಣಮಟ್ಟದ ಟೊಮೆಟೋ ಹಣ್ಣು ಬೇರೆ ದೇಶಗಳಲ್ಲಿ ಲಭ್ಯವಿದ್ದುದರಿಂದ ಪಂಜಾಬ್ ಟೊಮೆಟೋ ಬೆಳೆಯನ್ನು ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ತಲೆದೋರಿತು.

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣ ಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು. ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಬಂಡವಾಳಶಾಹಿಯ ದುರಾಶೆಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಭಾಗವಾಗಿ 1991 ರಿಂದ ಮುಂದಿನ 20 ವರ್ಷಗಳ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಕಾಲಾವಧಿಯಲ್ಲಿ 72 ಲಕ್ಷಕ್ಕೂ ಮೀರಿ ರೈತರು ಕೃಷಿಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ಈ ಪರಿಸ್ಥಿತಿ ಬದಲಾಗಲೇಬೇಕು. ಇದು ನಮ್ಮ ಕಾಲ ಎದುರಿಸುತ್ತಿರುವ ಬಹು ದೊಡ್ಡ ಪಂಥಾಹ್ವಾನ ಎಂದು ಸಾಯಿನಾಥ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...