Homeಕರ್ನಾಟಕಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

ಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

- Advertisement -
- Advertisement -

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು.

ಭಾರತ ಸಂವಿಧಾನ ಸಂಘಟನಾ ಸಮಿತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಡಿದ ಮಾತುಗಳನ್ನು ಉದ್ಧರಿಸುತ್ತ ಖ್ಯಾತ ಎಡಪಂಥೀಯ ಚಿಂತಕ, ಪಿ. ಸಾಯಿನಾಥ್ ‘ಭಾರತದ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿರುವ ದೌರ್ಬಲ್ಯದ ಬಗ್ಗೆ ಬಾಬಾ ಸಾಹೇಬರು ಬಹಳ ಹಿಂದೆಯೇ ಎಚ್ಚರಿಸಿದ್ದರು. ಸಮಾನತೆಯನ್ನು ಹೊರಗಿಟ್ಟ ಸ್ವಾತಂತ್ರ್ಯ ಬಹುಜನರ ಮೇಲೆ ಕೆಲವೇ ಕೆಲವು ಜನಗಳ ದಬ್ಬಾಳಿಕೆಗೆ ದಾರಿಮಾಡಿಕೊಡುತ್ತದೆ. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳ ಮೌಲ್ಯಗಳನ್ನು ಬೇರ್ಪಡಿಸಿ ನೋಡುವ ಹಾಗಿಲ್ಲ. ಅವುಗಳ ಪೈಕಿ ಒಂದನ್ನು ಹೊರತುಪಡಿಸಿ ಇನ್ನೊಂದು ಇರಲಾರದು’ ಎಂದು ಸಾಯಿನಾಥ್ ಬಾಬಾ ಸಾಹೇಬರನ್ನು ಉಲ್ಲೇಖಿಸಿದ್ದರು. ತನ್ನ ಮಾತು ಮುಂದುವರಿಸುತ್ತ ಸಾಯಿನಾಥ್ ಹಾಲೀ ಕೇಂದ್ರ ಸರಕಾರದ ಧೋರಣೆಗಳು ದೇಶದಲ್ಲಿ ಹಿಂದೆಂದೂ ಕಾಣದ ಅಸಮಾನತೆಗೆ ಕಾರಣವಾಗಿದೆ ಎಂದು ಹೇಳಿದರು.

ಈ ಸಂಗತಿಗಳಲ್ಲಿ ಒಂದಕ್ಕೊಂದು ಹೇಗೆ ಥಳಕು ಹಾಕಿಕೊಂಡಿದೆ ಎಂದು ಹೇಳುತ್ತ ಸಾಯಿನಾಥ್ ತನ್ನ ಮಾತಿಗೆ ಮುಸ್ಲಿಂ ಜಾನುವಾರು ಕಸಾಯಿಗಳ ನಿದರ್ಶನ ನೀಡಿದರು. ಈ ವ್ಯವಹಾರದ ಮೂಲಾಧಾರವಾಗಿರುವ ಜಾನುವಾರು ದಲ್ಲಾಳಿಗಳಲ್ಲಿ ಹೆಚ್ಚಿನವರು ಕೆಳಜಾತಿ, ವರ್ಗಗಳ ಹಿಂದುಗಳು. ಜಾನುವಾರು ಹತ್ಯೆ ನಿಷೇಧಗೊಂಡಾಗ ಮುಸ್ಲಿಂ ಕಸಾಯಿಗಳು ನಿರುದ್ಯೋಗಿಗಳಾದರು; ಹಿಂದುಳಿದ ಜಾತಿವರ್ಗಗಳವರು ತಮ್ಮ ಅರೆಕಾಲಿಕ ಉದ್ಯೋಗಗಳನ್ನು ಕಳಕಂಡರು. ಬೆಲೆಗಳು ಕುಸಿದವು. ಮಹಾರಾಷ್ಟ್ರ ರಾಜ್ಯದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾಗಿರುವ ಕೊಲ್ಹಾಪುರಿ ಚಪ್ಪಲಿಗಳ ತಯಾರಿಕೆ ದಿವಾಳಿ ಎದ್ದಿತು. ದೇಶದ ಆರ್ಥಿಕ ಧೋರಣೆಗಳನ್ನು ದೆಹಲಿಯಲ್ಲಿ ಕೂತು ನಿರ್ಧರಿಸುವವರಿಗೆ ಗ್ರಾಮೀಣ ಉದ್ಯಮಗಳು ಹೇಗೆ ಪರಸ್ಪರ ಸಂಬಂಧ ಹೊಂದಿದ್ದು ನಿಕಟವಾಗಿ ಹೆಣೆದುಕೊಂಡಿದೆ ಎಂಬ ಕಲ್ಪನೆಯೇ ಇಲ್ಲ ಎಂದು ಸಾಯಿನಾಥ್ ಹೇಳಿದರು. ದೇಶ ಈಗ ಕೃಷಿ, ಶಿಕ್ಷಣ ಅರ್ಥವ್ಯವಸ್ಥೆ ಮತ್ತು ಉದ್ಯೋಗ ನಿರ್ಮಾಣ ಕ್ಷೇತ್ರಗಳಲ್ಲಿ ಗಂಭೀರವಾದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅವರು ತಿಳಿಸಿದರು. ಮಂಗಳೂರಿನ ಈ ಉಪನ್ಯಾಸವನ್ನು ನಗರದ ಸೈಂಟ್ ಅಲೋಸಿಯಸ್ ಕಾಲೇಜು ಏರ್ಪಡಿಸಿತ್ತು.

ಕುಂದಾಪುರದಲ್ಲಿ ‘ಸಮುದಾಯ’ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ‘ಕಾರ್ಪೊರೇಟ್ ಫಾರ್ಮಿಂಗ್ – ಭಾರತದ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ನೀಡಿದ ಉಪನ್ಯಾಸದಲ್ಲಿ ಸಾಯಿನಾಥ್ ರೈತನಿಗೆ ಆತ ಬಳಸುವ ನೆಲ ಹೊರತು ಪಡಿಸಿ, ಬೇರೆ ಯಾವುದರ ಮೇಲೂ ಹಿಡಿತವಿಲ್ಲ. ಕೃಷಿಯ ಮೂಲಭೂತ ಅಗತ್ಯಗಳಾದ ನೀರು, ಗೊಬ್ಬರ, ಬೀಜ, ಮಾರುಕಟ್ಟೆ, ಸಾರಿಗೆ – ಎಲ್ಲವೂ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣದಲ್ಲಿವೆ. ಕಾರ್ಪೊರೇಟ್ ಕಂಪನಿಗಳು ಕೃಷಿಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ. ಇದರ ಪರಿಣಾಮವಾಗಿ ರೈತ, ಇಂದು, ಅಕ್ಷರಶಃ ಕಾರ್ಪೊರೇಟ್ ಹಿತಾಸಕ್ತಿಗಳ ಗುಲಾಮನಾಗಿದ್ದಾನೆ. ಒಬ್ಬ ಬಡಗಿ, ನೇಕಾರ, ಮೋಚಿ ಅಥವಾ ಅಕ್ಕಸಾಲಿಗ, ಹೀಗೆ ಯಾವ ದುಡಿಮೆಗಾರನಿಗಾದರೂ ತನ್ನ ದುಡಿಮೆಯ ವೇತನ ಎಷ್ಟು? ತಾನು ಉತ್ಪಾದಿಸಿದ ಸರಕಿನ ಬೆಲೆ ಎಷ್ಟು? ಎಂದು ನಿರ್ಧರಿಸುವ ಹಕ್ಕು ಇರುತ್ತದೆ. ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ರೈತನ ನಿರ್ಧಾರಗಳನ್ನೂ ಆತನ ಹೆಸರಿನಲ್ಲಿ ಕಾರ್ಪೊರೇಶನ್ ಕಂಪನಿಗಳೇ ತೆಗೆದುಕೊಳ್ಳುತ್ತವೆ. ಹಾಗಾಗಿ ‘ರೈತ’ ಎಂಬ ಶಬ್ದಕ್ಕೆ ಈಗ ಯಾವ ಅರ್ಥವೂ ಉಳಿದಿಲ್ಲ. ಹಾಲೀಕೇಂದ್ರ ಸರಕಾರದ ಬಹುಮುಖ್ಯ ಆರ್ಥಿಕ ನಿರ್ಧಾರಗಳನ್ನೆ ನೋಡಿ. ನೋಟು ಅಮಾನ್ಯೀಕರಣ ಹಾಗೂ ಜಿ.ಎಸ್.ಟಿ ತೆರಿಗೆಗಳು ರೈತನ ಪರವಾಗಿಲ್ಲ. ರೈತರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸದೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳು ಅವು. ದೇಶದ ಕೃಷಿ ವಿಶ್ವ ವಿದ್ಯಾಲಯಗಳು ಸಹ ಈಗ ರೈತರ ಬದಲು ಕಾರ್ಪೊರೇಟ್ ಹಿತಾಸಕ್ತಿಗಳ ವಕ್ತಾರರಂತೆ ವರ್ತಿಸುತ್ತಿವೆ. ಅವು ಹೆಸರಿಗಷ್ಟೇ ‘ಸ್ವಾವಲಂಬಿ’ ವಾಸ್ತವವಾಗಿ ಅವೆಲ್ಲವೂ ಕಾರ್ಪೊರೇಟ್ ಬಂಡವಾಳಶಾಹಿಯ ಕೃಪಾಪೋಷಿತ ಸಂಸ್ಥೆಗಳು ಈ ಸನ್ನಿವೇಶದಲ್ಲಿ ಮಾರುಕಟ್ಟೆಯನ್ನೇ ಅವಲಂಬಿಸಿದ ವಾಣಿಜ್ಯ ಕೃಷಿ ಅತಂತ್ರವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆನಿಲ್ಲಾ ಬೆಳೆಗೆ ವಿಪರೀತ ಬೆಲೆ ಏರಿದುದರಿಂದ ಕೇರಳ, ಮಂಗಳೂರುಗಳ ರೈತರು ಭಾರೀ ವರಮಾನ ಗಳಿಸಿದರು. ಆದರೆ ಒಮ್ಮೆ ವೆನಿಲ್ಲಾದ ಬೆಲೆ ಕುಸಿಯಲಾರಂಭಿಸಿದಾಗ ಅವುಗಳ ಮೇಲೆ ಭರವಸೆ ಇಟ್ಟಿದ್ದ ರೈತರು ದಿಕ್ಕೆಟ್ಟು ಆತ್ಮಹತ್ಯೆ ಮಾಡಿ ಕೊಳ್ಳಬೇಕಾಯಿತು. ಇದೇ ಪರಿಸ್ಥಿತಿ ಪಂಜಾಬ್‍ನ ರೈತರಿಗೂ ಎದುರಾಯಿತು. ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೋ ಪಂಜಾಬ್‍ನ ರೈತರು ಬೆಳೆಸಿದ ವಿಶಿಷ್ಟ ತಳಿಯ ಟೊಮೆಟೋ ಹಣ್ಣು ಕೊಳ್ಳಲಾರಂಭಿತು. ಮೊದಲ ಎರಡು ವರ್ಷ ಪಂಜಾಬ್ ರೈತರಿಗೆ ಪೆಪ್ಸಿಕೋ ಬಹಳ ಒಳ್ಳೆಯ ವರ ನೀಡಿತು. ಆ ನಂತರ ಕಂಪನಿಗೆ ಅದೇ ಗುಣಮಟ್ಟದ ಟೊಮೆಟೋ ಹಣ್ಣು ಬೇರೆ ದೇಶಗಳಲ್ಲಿ ಲಭ್ಯವಿದ್ದುದರಿಂದ ಪಂಜಾಬ್ ಟೊಮೆಟೋ ಬೆಳೆಯನ್ನು ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ತಲೆದೋರಿತು.

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣ ಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು. ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಬಂಡವಾಳಶಾಹಿಯ ದುರಾಶೆಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಭಾಗವಾಗಿ 1991 ರಿಂದ ಮುಂದಿನ 20 ವರ್ಷಗಳ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಕಾಲಾವಧಿಯಲ್ಲಿ 72 ಲಕ್ಷಕ್ಕೂ ಮೀರಿ ರೈತರು ಕೃಷಿಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ಈ ಪರಿಸ್ಥಿತಿ ಬದಲಾಗಲೇಬೇಕು. ಇದು ನಮ್ಮ ಕಾಲ ಎದುರಿಸುತ್ತಿರುವ ಬಹು ದೊಡ್ಡ ಪಂಥಾಹ್ವಾನ ಎಂದು ಸಾಯಿನಾಥ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...