Homeಕರೋನಾ ತಲ್ಲಣಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್...

ಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್ ನಿರ್ಬಂಧವೇಕೆ?

- Advertisement -
- Advertisement -

ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮೂಗಿನಲ್ಲಿ ನಿಂಬೆರಸ ಸುರಿದುಕೊಂಡಿದ್ದೇ ಕಾರಣ ಎಂದು ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಅಪಾದಿಸಿದ್ದಾರೆ. ನಿಂಬೆರಸ ಮೂಗಿಗೆ ಸುರಿದುಕೊಂಡ ಶಿಕ್ಷಕ ಒದ್ದಾಡಿ ಸತ್ತರು ಎಂದು ಕನ್ನಡದ ಹಲವು ಪತ್ರಿಕೆಗಳು ವರದಿ ಮಾಡಿದೆ.

ಇನ್ನೊಂದು ಕಡೆ, ಸಂಕೇಶ್ವರರ ನಿಂಬೆರಸ ಸಲಹೆಯನ್ನು ಆಕ್ಷೇಪಿಸಿ, ವೈಜ್ಞಾನಿಕ ಮತ್ತು ವೈದ್ಯಕೀಯ ಅಂಶಗಳನ್ನು ಉಲ್ಲೇಖಿಸಿದ್ದ ಜೀವ ರಸಾಯನ ತಜ್ಞ, ಮೂಢನಂಬಿಕೆ ವಿರುದ್ಧ ಆಂದೋಲನ ನಡೆಸುತ್ತ ಬಂದಿರುವ ಡಾ, ನರೇಂದ್ರ ನಾಯಕ್, ನಿಂಬೆರಸದಿಂದ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಮೊನ್ನೆ ಪ್ರಕಟಿಸಿದ್ದ ಫೇಸ್‌ಬುಕ್ ವಿಡಿಯೋ ಕಾರಣಕ್ಕಾಗಿ, ಫೇಸ್‌ಬುಕ್ ಇಂದು ಅವರ ಖಾತೆಯನ್ನು 24 ಗಂಟೆ ಕಾಲ ನಿರ್ಬಂಧಿಸಿದೆ!

ಈ ಎರಡೂ ಘಟನೆಗಳು ಮತ್ತೆ ನಮ್ಮನ್ನು ವಿಜಯ ಸಂಕೇಶ್ವರ್ ಅವರ ನಿಂಬೆರಸ-ಆಮ್ಲಜನಕ ಕತೆಗೆ ತಂದ ನಿಲ್ಲಿಸುತ್ತವೆ.

ಶಿಕ್ಷಕರ ಸಾವಿಗೆ ನಿಂಬೆರಸವೇ ಕಾರಣವಾಗಿತ್ತೆ?

ಸಿಂಧನೂರಿನ ಶರಣಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 43 ವಯಸ್ಸಿನ ಬಸವರಾಜ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅವರು ಅಗಲಿದ್ದಾರೆ. ಅವರು ನಿನ್ನೆ ರಾತ್ರಿ ಮತ್ತು ಇವತ್ತು ಮುಂಜಾನೆ ಆಮ್ಲಜನಕ ಮಟ್ಟ ಹೆಚ್ಚಿಸಿಕೊಳ್ಳಲು ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಅವರ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಮೃತ ಬಸವರಾಜ್ ಅವರ ಸಹೋದ್ಯೋಗಿ ವೀರೇಶ್, ‘ನಮಗಂತೂ ಹಾಗೆ ಅನ್ನಿಸಿದೆ ಸರ್. ನಿನ್ನೆ ತಾನೇ ಬಿಇಒ ಕಚೇರಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಸದಾ ಸದೃಢರಾಗಿದ್ದರು. ನಿಂಬೆರಸ ಪ್ರಮಾಣವನ್ನು ಜಾಸ್ತಿ ಹಾಕಿಕೊಂಡರು ಎನಿಸುತ್ತದೆ’ ಎಂದು ನಾನುಗೌರಿ.ಕಾಂಗೆ ತಿಳಿಸಿದರು.

‘ಸಾವಿನ ನಿಖರ ಕಾರಣ ನಂತರ ಗೊತ್ತಾಗಬಹುದು. ಆದರೆ ಸಂಕೇಶ್ವರ್ ಅವರು ಈ ನಿಂಬೆರಸ-ಆಮ್ಲಜನಕ ಕತೆ ಹೇಳಿದ ನಂತರ, ಸ್ವಲ್ಪ ಮೈ ಬಿಸಿಯಾದರೂ ಈ ನಿಂಬೆರಸಕ್ಕೆ ಬಹಳಷ್ಟು ಜನ ಒಡ್ಡಿಕೊಳ್ಳುತ್ತಿದ್ದಾರೆ. ನಾನೇ ಬಲ್ಲ ನಮ್ಮ ಕೆಲವು ಶಿಕ್ಷಕರು 20-25 ನಿಂಬೆ ಹಣ್ಣುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ತಿಳಿದವರೇ ಇಂತಹ ಅವೈಜ್ಞಾನಿಕ ಸಂಗತಿಗೆ ಶರಣಾದರೇ ಹೇಗೆ?’ ಎಂದು ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ್ ಮೃತರಾಗಿದ್ದಾರೆ ಎಂದು ಘೋಷಿಸಿದ ಸಿಂಧನೂರಿನ ಶಾಂತಿ ಆಸ್ಪತ್ರೆಯ ವೈದ್ಯರು ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಆಸ್ಪತ್ರೆಯ ಮಾಲೀಕ ನರೇಶ್ ನಮ್ಮೊಂದಿಗೆ ಮಾತನಾಡುತ್ತ, ‘ಇಲ್ಲಿಗೆ ಬರುವ ಮೊದಲೇ ಬಸವರಾಜ್ ಅವರು ಮೃತರಾಗಿದ್ದರು. ನಾವು ಸಹಜ ಕ್ರಮದಂತೆ ಇಸಿಜಿ ಮಾಡಿ, ಅವರು ಮೃತ ಎಂದು ಘೋಷಿಸಿದ್ದೇವೆ. ನಿಂಬೆರಸದಿಂದಾಗಿಯೇ ಸತ್ತರು ಎಂದು ದೃಢವಾಗಿಲ್ಲ. ಅವರಿಗೆ ಬೇರೇನೋ ಸಮಸ್ಯೆ ಇರಬಹುದು ಅಥವಾ ಮೊದಲೇ ಅವರಿಗೆ ಕೋವಿಡ್ ಇದ್ದು ಆ ಭಯಕ್ಕೆ ನಿಂಬೆರಸದ ಪ್ರಯೋಗ ಮಾಡಿರಬಹುದು. ಸಾವಿನ ನಿಖರ ಕಾರಣ ಗೊತ್ತಾಗಲು ಪೊಲೀಸರು ಪೋಸ್ಟ್ ಮಾರ್ಟಂ ಮಾಡಿಸಬೇಕು..’ ಎಂದರು.

ಸಿಂಧನೂರಿನ ಅನ್ನದಾನೀಶ್ವರ ಆಸ್ಪತ್ರೆಯ ಸರ್ಜರಿಯನ್ ಡಾ.ಬಿ.ಎನ್ ಪಾಟೀಲ್, ‘ಕೇಸ್ ಹಿಸ್ಟರಿ ಇಲ್ಲದೇ ಒಮ್ಮೆಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆ ಇದ್ದು, ಅವರು ಈ ಪ್ರಯೋಗ ಮಾಡಿದಾಗ ಏನೋ ಎಡವಟ್ಟಾಗಿರಬಹುದು. ಆದರೆ ಈಗಲೇ ನಿಖರವಾಗಿ ಹೇಳಲಾಗದು. ಒಂದಂತೂ ಸ್ಪಷ್ಟ, ನಿಂಬೆರಸ ಮೂಗಿನಲ್ಲಿ ಹಾಕಿಕೊಂಡರೆ ಯಾವ ಘನಂದಾರಿ ಅನುಕೂಲವೂ ಇಲ್ಲ, ಹಾಗೆಯೇ ಅದರಿಂದ ಸಾವು ಸಂಭವಿಸುವಂತಹ ಅಪಾಯವಿಲ್ಲ. ತಿಳಿಯಾಗಿರುವ ರಸ ಶ್ವಾಸಕೋಶ ಸೇರಿದರೆ ಸಾವೇನೂ ಸಂಭವಿಸದು. ಆದರೆ, ಈ ನಿಂಬೆರಸ ಪ್ರಯೋಗ ಅವೈಜ್ಞಾನಿಕ. ಜನರು ಎಚ್ಚರವಾಗಿರಬೇಕು’ ಎಂದು ನಾನುಗೌರಿ.ಕಾಂ ಗೆ ತಿಳಿಸಿದರು.

ಕೋವಿಡ್ ಅಥವಾ ಉಸಿರಾಟದ ಸಮಸ್ಯೆ ಇದ್ದು, ಮೃತರು ನಿಂಬೆರಸ ಪ್ರಯೋಗಕ್ಕೆ ಒಡ್ಡಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿತೆ? ಇದು ನಿಜವಾದರೆ, ಸಂಕೇಶ್ವರ್ ಕ್ರಿಮಿನಲ್ ಅಪರಾಧ ಎಸಗಿದಂತೆ ಅಲ್ಲವೇ?

ಸತ್ಯ ಹೇಳಿದ ವಿಜ್ಞಾನಿಗೆ ಫೇಸ್‌ಬುಕ್ ನಿರ್ಬಂಧ!

ವಿಜಯ ಸಂಕೇಶ್ವರ್ ಅವರು ಸುದ್ದಿಗೋಷ್ಠಿ ಕರೆದು, ಆಮ್ಲಜನಕ ಮಟ್ಟ ವೃದ್ದಿಗೆ ನಿಂಬೆರಸವನ್ನು ಮೂಗಿನ ಮೂಲಕ ಹಾಕೊಕೊಳ್ಳುವುದು ಪರಿಣಾಮಕಾರಿ ಎಂದ ವಿಷಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಯಿತು. ಮರುದಿನ ಅಲ್ಲೇ ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ವಧು-ವರ ಸೇರಿ ಹಲವಾರು ಜನರ ಮೂಗಿನಲ್ಲಿ ಕೆಲವರು ನಿಂಬೆರಸ ಸುರಿಯುತ್ತ, ‘ಪೇಪರ್‌ನ್ಯಾಗ ಬಂದೈತೋ ಮಾರಾಯ. ಕೋವಿಡ್ ಬರಂಗಿಲ್ಲ’ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು.

ಆದರೆ ಇದೊಂದು ಅವೈಜ್ಞಾನಿಕ ಕ್ರಮ, ಇದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ ಎಂದು ಸತ್ಯ ಪ್ರತಿಪಾದನೆ ಮಾಡಿದ ಮೌಢ್ಯ ವಿರೋಧಿ ಹೋರಾಟ ನಡೆಸಿಕೊಂಡು ಬಂದಿರುವ ಹಿರಿಯ ಜೀವ ರಸಾಯನ ಶಾಸ್ತ್ರಜ್ಞ ನರೇಂದ್ರ ನಾಯಕ್ ಅವರು, ಆ ವಿವರಗಳ ವಿಡಿಯೋವನ್ನು ಫೇಸ್‌ಬುಕ್ ಖಾತೆಗೆ ಹಾಕಿಕೊಂಡಿದ್ದರು.

ಈ ವಿಡಿಯೋ ಭರ್ಜರಿ ವೈರಲ್ ಆಗಿ ಜನರಲ್ಲಿ ಪ್ರಜ್ಞೆ ಮೂಡಿಸಲು ನೆರವಾಗಿತ್ತು. ಆದರೆ ಹಲವು ಜನರ ದೂರುಗಳ ಆಧಾರದ ಮೇಲೆ, ‘ಈ ವಿಡಿಯೋ ಫೇಸ್‌ಬುಕ್ ಕಮ್ಯುನಿಟಿ ಸ್ಟ್ಯಾಂಡರ್ಡ್‌ಗಳಿಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ಫೇಸ್‌ಬುಕ್ ಕಂಪನಿ ಅವರ ಖಾತೆಯನ್ನು 24 ಗಂಟೆ ಸ್ಥಗಿತಗೊಳಿಸಿದೆ.

ವೈಜ್ಞಾನಿಕ ಮನೋಭಾವ ಎತ್ತಿ ಹಿಡಿಯಬೇಕಾದ ಫೇಸ್‌ಬುಕ್ ಮೇಲೆ ಯಾವ ಶಕ್ತಿಗಳ ಒತ್ತಡವಿದೆ ಎಂಬುದು ನಗ್ನಸತ್ಯ ಅಲ್ಲವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯವರ್ತಿಯಾದರೆ ಅದು ಭಾರತದ ರಾಜತಾಂತ್ರಿಕ ಹಿನ್ನೆಡೆಯಾಗಬಹುದು; ಕಾಂಗ್ರೆಸ್ 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂವಹನದಲ್ಲಿ ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ದೃಢಪಟ್ಟರೆ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ,...

ಭಯೋತ್ಪಾದಕ ಚಟುವಟಿಕೆಗಳ ಆರೋಪ; ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಕಾಶ್ಮೀರಿ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆಕೆಯ ಸಹಚರರಾದ ಸೋಫಿ...

ಬಿಜೆಪಿ ಸೀಲ್ ಇರುವ ಚು.ಆಯೋಗದ ಪತ್ರದ ಕುರಿತ ಪೋಸ್ಟ್‌ಗಳನ್ನು ತೆಗೆದು ಹಾಕಲು ಕೇರಳ ಪೊಲೀಸರಿಂದ ಸೂಚನೆ

ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಕೇರಳ ರಾಜ್ಯ ಘಟಕದ ಸೀಲ್ ಇದ್ದ ಬಗ್ಗೆ ಸೋಮವಾರದಿಂದ (ಮಾ.23) ಭಾರೀ ಚರ್ಚೆಯಾಗುತ್ತಿದೆ. ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಚುನಾವಣಾ...

ಪಂಜಾಬ್: ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳಕ್ಕೆ ಅಧಿಕಾರಿ ಆತ್ಮಹತ್ಯೆ; ಅಮೃತಸರದಲ್ಲಿ ಶವಪರೀಕ್ಷೆಗೆ ಕುಟುಂಬ ಒಪ್ಪಿಗೆ

ಪಂಜಾಬ್‌ನ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಗೋದಾಮು ನಿಗಮದ ಅಧಿಕಾರಿ ಗಗನ್‌ದೀಪ್ ಸಿಂಗ್ ರಾಂಧವ ಅವರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಅಮೃತಸರದಲ್ಲಿ ನಡೆಸಲಾಗುವುದು...

ಮುಸ್ಲಿಂ ಮಹಿಳೆಯರು ‘ನಮಾಜ್’ ಮಾಡುತ್ತಿದ್ದ ಕೊಠಡಿಯಲ್ಲಿ ಮಂತ್ರ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ

ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ)ದ ವಿವಾದಾತ್ಮಕ ನಾಯಕಿ ಮಾಧವಿ ಲತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್‌ ಮಾಡುತ್ತಿದ್ದವರ ಹಿಂದೆ ಮಂತ್ರ ಪಠಿಸುತ್ತಿರುವ ಅವರ ವೀಡಿಯೊವೊಂದು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...

ತೂತುಕುಡಿ ಸಾತನ್‌ಕುಳಂ ತಂದೆ ಮಗನ ಕಸ್ಟಡಿ ಸಾವು ಪ್ರಕರಣ : ಒಂಬತ್ತು ಪೊಲೀಸರು ದೋಷಿಗಳು ಎಂದ ಕೋರ್ಟ್

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

4 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ; ಗುರುಗ್ರಾಮ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹರಿಯಾಣದ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಹರಿಯಾಣ ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವಿನೊಂದಿಗೆ...

ದಾವಣಗೆರೆ: ನಿಮ್ಮ ದೇಶಭಕ್ತಿ ಪ್ರಶ್ನಿಸುವ ಅಯೋಗ್ಯರಿಗೆ ಮತ ಹಾಕಬೇಡಿ; ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ

ದಾವಣಗೆರೆ: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ, ಅವರ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇವತ್ತು ಯಾವುದೋ ಅಸಮಾಧಾನಕ್ಕೆ ಬಿಜೆಪಿಗೆ ಮತ ಹಾಕದರೆ ನಿಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಇಂತಹ ಅಯೋಗ್ಯರಿಗೆ ಮತ...

ಭಜನ್‌ಪುರ ಹತ್ಯೆ: ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮುಸ್ಲಿಂ ಯುವಕ ಸಾವು 

"ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮೊಹಮ್ಮದ್ ಆಸಿಫ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ" ಎಂದು ಭಜನ್‌ಪುರ ಹತ್ಯೆಯ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ 18 ವರ್ಷದ ಯುವಕನೊಬ್ಬನನ್ನು...

ಹಿಂದೂ, ಬೌದ್ಧ, ಸಿಖ್ ಧರ್ಮ ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ ಕೋರ್ಟ್

ಒಬ್ಬರು ವ್ಯಕ್ತಿಯು ಒಮ್ಮೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಅದನ್ನೇ ಸಕ್ರಿಯವಾಗಿ ಪ್ರತಿಪಾದಿಸಿ, ಆಚರಿಸಿದರೆ, ಅವರನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಸದಸ್ಯರು ಎಂಬುವುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು...