Homeಕರೋನಾ ತಲ್ಲಣಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್...

ಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್ ನಿರ್ಬಂಧವೇಕೆ?

- Advertisement -
- Advertisement -

ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮೂಗಿನಲ್ಲಿ ನಿಂಬೆರಸ ಸುರಿದುಕೊಂಡಿದ್ದೇ ಕಾರಣ ಎಂದು ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಅಪಾದಿಸಿದ್ದಾರೆ. ನಿಂಬೆರಸ ಮೂಗಿಗೆ ಸುರಿದುಕೊಂಡ ಶಿಕ್ಷಕ ಒದ್ದಾಡಿ ಸತ್ತರು ಎಂದು ಕನ್ನಡದ ಹಲವು ಪತ್ರಿಕೆಗಳು ವರದಿ ಮಾಡಿದೆ.

ಇನ್ನೊಂದು ಕಡೆ, ಸಂಕೇಶ್ವರರ ನಿಂಬೆರಸ ಸಲಹೆಯನ್ನು ಆಕ್ಷೇಪಿಸಿ, ವೈಜ್ಞಾನಿಕ ಮತ್ತು ವೈದ್ಯಕೀಯ ಅಂಶಗಳನ್ನು ಉಲ್ಲೇಖಿಸಿದ್ದ ಜೀವ ರಸಾಯನ ತಜ್ಞ, ಮೂಢನಂಬಿಕೆ ವಿರುದ್ಧ ಆಂದೋಲನ ನಡೆಸುತ್ತ ಬಂದಿರುವ ಡಾ, ನರೇಂದ್ರ ನಾಯಕ್, ನಿಂಬೆರಸದಿಂದ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಮೊನ್ನೆ ಪ್ರಕಟಿಸಿದ್ದ ಫೇಸ್‌ಬುಕ್ ವಿಡಿಯೋ ಕಾರಣಕ್ಕಾಗಿ, ಫೇಸ್‌ಬುಕ್ ಇಂದು ಅವರ ಖಾತೆಯನ್ನು 24 ಗಂಟೆ ಕಾಲ ನಿರ್ಬಂಧಿಸಿದೆ!

ಈ ಎರಡೂ ಘಟನೆಗಳು ಮತ್ತೆ ನಮ್ಮನ್ನು ವಿಜಯ ಸಂಕೇಶ್ವರ್ ಅವರ ನಿಂಬೆರಸ-ಆಮ್ಲಜನಕ ಕತೆಗೆ ತಂದ ನಿಲ್ಲಿಸುತ್ತವೆ.

ಶಿಕ್ಷಕರ ಸಾವಿಗೆ ನಿಂಬೆರಸವೇ ಕಾರಣವಾಗಿತ್ತೆ?

ಸಿಂಧನೂರಿನ ಶರಣಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 43 ವಯಸ್ಸಿನ ಬಸವರಾಜ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅವರು ಅಗಲಿದ್ದಾರೆ. ಅವರು ನಿನ್ನೆ ರಾತ್ರಿ ಮತ್ತು ಇವತ್ತು ಮುಂಜಾನೆ ಆಮ್ಲಜನಕ ಮಟ್ಟ ಹೆಚ್ಚಿಸಿಕೊಳ್ಳಲು ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಅವರ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಮೃತ ಬಸವರಾಜ್ ಅವರ ಸಹೋದ್ಯೋಗಿ ವೀರೇಶ್, ‘ನಮಗಂತೂ ಹಾಗೆ ಅನ್ನಿಸಿದೆ ಸರ್. ನಿನ್ನೆ ತಾನೇ ಬಿಇಒ ಕಚೇರಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಸದಾ ಸದೃಢರಾಗಿದ್ದರು. ನಿಂಬೆರಸ ಪ್ರಮಾಣವನ್ನು ಜಾಸ್ತಿ ಹಾಕಿಕೊಂಡರು ಎನಿಸುತ್ತದೆ’ ಎಂದು ನಾನುಗೌರಿ.ಕಾಂಗೆ ತಿಳಿಸಿದರು.

‘ಸಾವಿನ ನಿಖರ ಕಾರಣ ನಂತರ ಗೊತ್ತಾಗಬಹುದು. ಆದರೆ ಸಂಕೇಶ್ವರ್ ಅವರು ಈ ನಿಂಬೆರಸ-ಆಮ್ಲಜನಕ ಕತೆ ಹೇಳಿದ ನಂತರ, ಸ್ವಲ್ಪ ಮೈ ಬಿಸಿಯಾದರೂ ಈ ನಿಂಬೆರಸಕ್ಕೆ ಬಹಳಷ್ಟು ಜನ ಒಡ್ಡಿಕೊಳ್ಳುತ್ತಿದ್ದಾರೆ. ನಾನೇ ಬಲ್ಲ ನಮ್ಮ ಕೆಲವು ಶಿಕ್ಷಕರು 20-25 ನಿಂಬೆ ಹಣ್ಣುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ತಿಳಿದವರೇ ಇಂತಹ ಅವೈಜ್ಞಾನಿಕ ಸಂಗತಿಗೆ ಶರಣಾದರೇ ಹೇಗೆ?’ ಎಂದು ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ್ ಮೃತರಾಗಿದ್ದಾರೆ ಎಂದು ಘೋಷಿಸಿದ ಸಿಂಧನೂರಿನ ಶಾಂತಿ ಆಸ್ಪತ್ರೆಯ ವೈದ್ಯರು ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಆಸ್ಪತ್ರೆಯ ಮಾಲೀಕ ನರೇಶ್ ನಮ್ಮೊಂದಿಗೆ ಮಾತನಾಡುತ್ತ, ‘ಇಲ್ಲಿಗೆ ಬರುವ ಮೊದಲೇ ಬಸವರಾಜ್ ಅವರು ಮೃತರಾಗಿದ್ದರು. ನಾವು ಸಹಜ ಕ್ರಮದಂತೆ ಇಸಿಜಿ ಮಾಡಿ, ಅವರು ಮೃತ ಎಂದು ಘೋಷಿಸಿದ್ದೇವೆ. ನಿಂಬೆರಸದಿಂದಾಗಿಯೇ ಸತ್ತರು ಎಂದು ದೃಢವಾಗಿಲ್ಲ. ಅವರಿಗೆ ಬೇರೇನೋ ಸಮಸ್ಯೆ ಇರಬಹುದು ಅಥವಾ ಮೊದಲೇ ಅವರಿಗೆ ಕೋವಿಡ್ ಇದ್ದು ಆ ಭಯಕ್ಕೆ ನಿಂಬೆರಸದ ಪ್ರಯೋಗ ಮಾಡಿರಬಹುದು. ಸಾವಿನ ನಿಖರ ಕಾರಣ ಗೊತ್ತಾಗಲು ಪೊಲೀಸರು ಪೋಸ್ಟ್ ಮಾರ್ಟಂ ಮಾಡಿಸಬೇಕು..’ ಎಂದರು.

ಸಿಂಧನೂರಿನ ಅನ್ನದಾನೀಶ್ವರ ಆಸ್ಪತ್ರೆಯ ಸರ್ಜರಿಯನ್ ಡಾ.ಬಿ.ಎನ್ ಪಾಟೀಲ್, ‘ಕೇಸ್ ಹಿಸ್ಟರಿ ಇಲ್ಲದೇ ಒಮ್ಮೆಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆ ಇದ್ದು, ಅವರು ಈ ಪ್ರಯೋಗ ಮಾಡಿದಾಗ ಏನೋ ಎಡವಟ್ಟಾಗಿರಬಹುದು. ಆದರೆ ಈಗಲೇ ನಿಖರವಾಗಿ ಹೇಳಲಾಗದು. ಒಂದಂತೂ ಸ್ಪಷ್ಟ, ನಿಂಬೆರಸ ಮೂಗಿನಲ್ಲಿ ಹಾಕಿಕೊಂಡರೆ ಯಾವ ಘನಂದಾರಿ ಅನುಕೂಲವೂ ಇಲ್ಲ, ಹಾಗೆಯೇ ಅದರಿಂದ ಸಾವು ಸಂಭವಿಸುವಂತಹ ಅಪಾಯವಿಲ್ಲ. ತಿಳಿಯಾಗಿರುವ ರಸ ಶ್ವಾಸಕೋಶ ಸೇರಿದರೆ ಸಾವೇನೂ ಸಂಭವಿಸದು. ಆದರೆ, ಈ ನಿಂಬೆರಸ ಪ್ರಯೋಗ ಅವೈಜ್ಞಾನಿಕ. ಜನರು ಎಚ್ಚರವಾಗಿರಬೇಕು’ ಎಂದು ನಾನುಗೌರಿ.ಕಾಂ ಗೆ ತಿಳಿಸಿದರು.

ಕೋವಿಡ್ ಅಥವಾ ಉಸಿರಾಟದ ಸಮಸ್ಯೆ ಇದ್ದು, ಮೃತರು ನಿಂಬೆರಸ ಪ್ರಯೋಗಕ್ಕೆ ಒಡ್ಡಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿತೆ? ಇದು ನಿಜವಾದರೆ, ಸಂಕೇಶ್ವರ್ ಕ್ರಿಮಿನಲ್ ಅಪರಾಧ ಎಸಗಿದಂತೆ ಅಲ್ಲವೇ?

ಸತ್ಯ ಹೇಳಿದ ವಿಜ್ಞಾನಿಗೆ ಫೇಸ್‌ಬುಕ್ ನಿರ್ಬಂಧ!

ವಿಜಯ ಸಂಕೇಶ್ವರ್ ಅವರು ಸುದ್ದಿಗೋಷ್ಠಿ ಕರೆದು, ಆಮ್ಲಜನಕ ಮಟ್ಟ ವೃದ್ದಿಗೆ ನಿಂಬೆರಸವನ್ನು ಮೂಗಿನ ಮೂಲಕ ಹಾಕೊಕೊಳ್ಳುವುದು ಪರಿಣಾಮಕಾರಿ ಎಂದ ವಿಷಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಯಿತು. ಮರುದಿನ ಅಲ್ಲೇ ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ವಧು-ವರ ಸೇರಿ ಹಲವಾರು ಜನರ ಮೂಗಿನಲ್ಲಿ ಕೆಲವರು ನಿಂಬೆರಸ ಸುರಿಯುತ್ತ, ‘ಪೇಪರ್‌ನ್ಯಾಗ ಬಂದೈತೋ ಮಾರಾಯ. ಕೋವಿಡ್ ಬರಂಗಿಲ್ಲ’ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು.

ಆದರೆ ಇದೊಂದು ಅವೈಜ್ಞಾನಿಕ ಕ್ರಮ, ಇದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ ಎಂದು ಸತ್ಯ ಪ್ರತಿಪಾದನೆ ಮಾಡಿದ ಮೌಢ್ಯ ವಿರೋಧಿ ಹೋರಾಟ ನಡೆಸಿಕೊಂಡು ಬಂದಿರುವ ಹಿರಿಯ ಜೀವ ರಸಾಯನ ಶಾಸ್ತ್ರಜ್ಞ ನರೇಂದ್ರ ನಾಯಕ್ ಅವರು, ಆ ವಿವರಗಳ ವಿಡಿಯೋವನ್ನು ಫೇಸ್‌ಬುಕ್ ಖಾತೆಗೆ ಹಾಕಿಕೊಂಡಿದ್ದರು.

ಈ ವಿಡಿಯೋ ಭರ್ಜರಿ ವೈರಲ್ ಆಗಿ ಜನರಲ್ಲಿ ಪ್ರಜ್ಞೆ ಮೂಡಿಸಲು ನೆರವಾಗಿತ್ತು. ಆದರೆ ಹಲವು ಜನರ ದೂರುಗಳ ಆಧಾರದ ಮೇಲೆ, ‘ಈ ವಿಡಿಯೋ ಫೇಸ್‌ಬುಕ್ ಕಮ್ಯುನಿಟಿ ಸ್ಟ್ಯಾಂಡರ್ಡ್‌ಗಳಿಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ಫೇಸ್‌ಬುಕ್ ಕಂಪನಿ ಅವರ ಖಾತೆಯನ್ನು 24 ಗಂಟೆ ಸ್ಥಗಿತಗೊಳಿಸಿದೆ.

ವೈಜ್ಞಾನಿಕ ಮನೋಭಾವ ಎತ್ತಿ ಹಿಡಿಯಬೇಕಾದ ಫೇಸ್‌ಬುಕ್ ಮೇಲೆ ಯಾವ ಶಕ್ತಿಗಳ ಒತ್ತಡವಿದೆ ಎಂಬುದು ನಗ್ನಸತ್ಯ ಅಲ್ಲವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...