Homeಅಂತರಾಷ್ಟ್ರೀಯಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್'

ಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್’

- Advertisement -
- Advertisement -

ಆತನ ಹೆಸರು ಸಲ್ಮಾನ್ ಖಾನ್. ಇಲ್ಲ, ಈತ ಬಾಲಿವುಡ್ ನಟನಲ್ಲ. ಬದಲಾಗಿ ಖ್ಯಾತ ಉದ್ಯಮಿ ಬಿಲ್ ಗೇಟ್ಸ್‌ಗೆ ಮಾತ್ರವಲ್ಲದೆ ಆತನ ಮಕ್ಕಳಿಗೂ ತನ್ನ “ಶಾಲೆ”ಯಲ್ಲಿ ಪ್ರತಿನಿತ್ಯ ‘ಪಾಠ’ ಹೇಳಿಕೊಡುತ್ತಿರುವ ‘ಶಿಕ್ಷಕ’!

ಅದಕ್ಕಿಂತ ಮುಖ್ಯವಾಗಿ ಈ ಸಲ್ಮಾನ್ ಖಾನ್ ನಡೆಸುತ್ತಿರುವ ‘ಶಾಲೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆಲ್ಲ ಪ್ರತಿನಿತ್ಯ ನೂರಾರು ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೂ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ಅಧ್ಯಾಪಕನಿದ್ದಾನೆ. ಆತನೇ ಈ ಸಲ್ಮಾನ್ ಖಾನ್!

ಅಚ್ಚರಿ ಎನಿಸುತ್ತಿದೆಯೆ? ಬನ್ನಿ ಸಲ್ಮಾನ್ ಖಾನ್ ನಡೆಸುತ್ತಿರುವ ‘ವರ್‍ಚ್ಯು ಅಲ್’ ಶಾಲೆಗೆ. ಈ ಸಲ್ಮಾನ್ ಖಾನ್‍ನ ತಾಯಿ ಭಾರತದ ಕೊಲ್ಕತ್ತಾದವರು. ತಂದೆ ಬಾಂಗ್ಲಾದೇಶದವರು. ಅಮೆರಿಕದಲ್ಲಿ ಜನಿಸಿದ ಸಲ್ಮಾನ್ ಖಾನ್ ಅಲ್ಲೇ ವಿದ್ಯಾಭ್ಯಾಸ ಮಾಡಿ ದೊಡ್ಡ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದು ಅಂತಿಂತಹ ಕೆಲಸವಲ್ಲ. ಜನರ ಅತಿ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅವರು ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ಹೂಡುವಂತೆ ಮಾಡುವ ಕೆಲಸ. ಅದಕ್ಕೆಂದು ಖಾನ್‍ಗೆ ಕೈತುಂಬ ಸಂಬಳ ಬರುತ್ತಿತ್ತು.

ಆರು ವರ್ಷಗಳ ಹಿಂದೆ ಒಮ್ಮೆ ಏನಾಯಿತೆಂದರೆ, ಖಾನ್‍ನ ಚಿಕ್ಕಮ್ಮನ ಮಗಳಾದ ನಾಡಿಯಾ ಶಾಲೆಯಲ್ಲಿ ಗಣಿತದಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಹಿಂದೆ ಬಿದ್ದಿದ್ದಾಳೆ ಎಂದು ಖಾನ್‍ಗೆ ಗೊತ್ತಾಯಿತು. ಆದರೆ ಆಗ ಖಾನ್ ಅಮೆರಿಕದ ಪೂರ್ವ ಕಡಲತೀರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರೆ, ನಾಡಿಯಾ ಪಶ್ಚಿಮ ಕಡಲತೀರದಲ್ಲಿರುವ ಮತ್ತೊಂದು ನಗರದಲ್ಲಿ ವಾಸಿಸುತ್ತಿದ್ದಳು. ಆದರೂ ಆಕೆಗೆ ಪ್ರತಿದಿನ ಫೋನ್ ಮೂಲಕವೇ ಗಣಿತದಲ್ಲಿ ಪಾಠ ಹೇಳಿಕೊಡಲು ಖಾನ್ ಪ್ರಾರಂಭಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಇದು ಕಷ್ಟವಾಗಲಾರಂಭಿಸಿತು. ಎರಡೂ ನಗರಗಳ ನಡುವೆ ನಾಲ್ಕು ಗಂಟೆಗಳ ವ್ಯತ್ಯಾಸ ಇತ್ತಲ್ಲದೆ, ಈತನ ಕೆಲಸದ ಸಮಯ-ನಾಡಿಯಾಳ ಶಾಲೆಯ ಸಮಯ ಇತ್ಯಾದಿಗಳು ನಿತ್ಯದ ಪಾಠಕ್ಕೆ ಅಡ್ಡಬರಲಾರಂಭಿಸಿದವು.

ಆಗ ಖಾನ್‍ಗೆ ಹೊಳೆದದ್ದೇ ಈ ವೀಡಿಯೋ ಪಾಠಕ್ರಮ. ನಾಡಿಯಾ ಎದುರಿಸುತ್ತಿದ್ದ ಗಣಿತದ ಸಮಸ್ಯೆಗೆ ಹೇಗೆ ಉತ್ತರವನ್ನು ಕಂಡುಹಿಡಿಯಬೇಕೆಂಬುದನ್ನು ಕುರಿತು ಖಾನ್ ಪುಟ್ಟ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ‘ಯೂಟ್ಯೂಬ್’ ಎಂಬ ವೆಬ್‍ಸೈಟಿನಲ್ಲಿ ಹಾಕಲಾರಂಭಿಸಿದ. ಅದರಿಂದಾಗಿ ನಾಡಿಯಾ ಯಾವಾಗ ಬೇಕಾದರೂ ಅವುಗಳನ್ನು ನೋಡಬಹುದಿತ್ತು ಮತ್ತು ಅಗತ್ಯವಿದ್ದರೆ ಹಳೆ ಪಾಠಗಳಿಗೂ ಮತ್ತೆ ಭೇಟಿ ನೀಡಬಹುದಿತ್ತು. ಇದರಿಂದಾಗಿ ನಾಡಿಯಾಳಿಗೆ ಎಷ್ಟು ಉಪಯೋಗವಾಯಿತೆಂದರೆ ಆಕೆ ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆದಳು.

ಇದನ್ನೂ ಓದಿ: ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ನಾಡಿಯಾಳ ನಂತರ ಆಕೆಯ ಸಹೋದರರಾದ ಆರ್ಮನ್ ಮತ್ತು ಆಲಿಗೂ ಖಾನ್ ಇದೇರೀತಿ ಪಾಠ ಮಾಡಲಾರಂಭಿಸಿದ. ಆದರೆ ಅಷ್ಟು ಹೊತ್ತಿಗೆ ಖಾನ್‍ನ ಇತರೆ ಸಂಬಂಧಿಕರ ಮಕ್ಕಳು ಮತ್ತು ಆ ಮಕ್ಕಳ ಸ್ನೇಹಿತರೂ ಈ ಪಾಠಗಳನ್ನು ನೋಡಿ ಕಲಿಯಲಾರಂಭಿಸಿದ್ದರು. ಇದಕ್ಕೆಲ್ಲ ಖಾನ್ ಬಳಸಿದ್ದು ತನ್ನ ಕಂಪ್ಯೂಟರ್ ಮತ್ತು ಅದಕ್ಕೆ ಅಳವಡಿಸಿದ್ದ 200 ಡಾಲರ್‌ಗಳ ಕ್ಯಾಮೆರಾ, 80 ಡಾಲರ್‌ಗಳ ಪ್ಯಾಡ್ ಮತ್ತು 20 ಡಾಲರ್‌ಗಳ ವೀಡಿಯೋ ರೆಕಾರ್ಡರ್ ಹಾಗೂ ಪುಕ್ಕಟೆ ಸಿಗುವ ಹಲವು ಸಾಫ್ಟ್‍ವೇರ್‌ಗಳನ್ನು.

ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಖಾನ್ ತನ್ನದೇ ಒಂದು ವೆಬ್‍ಸೈಟ್ ಶುರು ಮಾಡಿ ಅವುಗಳನ್ನೆಲ್ಲ ಅದರಲ್ಲಿ ಸೇರಿಸಲಾರಂಭಿಸಿದ. ಕಾಲಕ್ರಮೇಣ ಇದು ಎಷ್ಟು ದೊಡ್ಡದಾಯಿತು ಎಂದರೆ ಇದರಲ್ಲಿ ಪಾಠಗಳನ್ನು ಹೇಳಿಕೊಡುವುದಕ್ಕೆ ಆತನಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದಾಯಿತು. ಆಗ ಖಾನ್ ಯೋಚಿಸಿದ: “ನನಗೆ ಒಬ್ಬಳು ಸುಂದರ ಹೆಂಡತಿ ಇದ್ದಾಳೆ, ಇಬ್ಬರು ಮುದ್ದಿನ ಮಕ್ಕಳಿದ್ದಾರೆ, ವಾಸಿಸಲು ಒಂದು ಮನೆ ಇದೆ, ಎರಡು ಕಾರ್‌ಗಳಿವೆ, ಸಾಕಷ್ಟು ಉಳಿತಾಯವಿದೆ. ಇದಕ್ಕಿಂತ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇನ್ನೇನು ಬೇಕು? ನನಗೆ 80 ವರ್ಷ ವಯಸ್ಸಾದಾಗ ನನ್ನ ಹತ್ತಿರ ಎಷ್ಟು ದುಡ್ಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕಾಗಿ ಏನನ್ನು ಮಾಡಿದೆ ಎಂಬುದು ಮುಖ್ಯವಾಗುತ್ತದೆ. ಈ ನನ್ನ ಪಾಠಗಳಿಂದ ಜನರಿಗೆ ಉಪಯೋಗವಾದರೆ ಅದಕ್ಕಿಂತ ಉತ್ತಮವಾದದ್ದೇನಿದೆ? ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಎಲ್ಲದಕ್ಕಿಂತ ಮುಖ್ಯ” ಎಂದು ಖಾನ್ ನಿರ್ಧರಿಸಿದ.

ಆಗ ಖಾನ್ ವರ್ಷಕ್ಕೆ ಮಿಲಿಯನ್ ಡಾಲರ್ ಸಂಬಳ ನೀಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ‘ಖಾನ್ ಅಕಾಡೆಮಿ’ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ. ಈತ ತನ್ನ ಪಾಠಗಳಿಗೆ ಶುಲ್ಕವನ್ನು ವಿಧಿಸದೆ ಬಿಟ್ಟಿಯಾಗಿ ಹೇಳಿಕೊಡುತ್ತಿದ್ದರಿಂದ ನಿಧಾನವಾಗಿ ಆತನ ಉಳಿತಾಯದ ಹಣವೆಲ್ಲ ಕರಗಲಾರಂಭಿಸಿತು. ಆದರೂ ಈತನ ಅಕಾಡೆಮಿಯ ಜನಪ್ರಿಯತೆಯನ್ನು ಕಂಡು ಅದೆಷ್ಟೋ ಉದ್ಯಮಿಗಳು ಅದನ್ನು ಆತನಿಂದ ಖರೀದಿಸಲು ಮುಂದಾದರು. ಆದರೆ ಅದನ್ನು ಕೊಂಡವರು ತನ್ನಂತೆ ಪುಕ್ಕಟೆಯಾಗಿ ಪಾಠ ಹೇಳಿಕೊಡುವುದಿಲ್ಲ ಎಂದು ಗೊತ್ತಿದ್ದರಿಂದ ಖಾನ್ ಅದನ್ನು ಮಾರಲು ನಿರಾಕರಿಸಿದ್ದ.

ಅದೃಷ್ಟವಶಾತ್ ಅದೇಹೊತ್ತಿಗೆ ಈ ಖಾನ್ ಅಕಾಡೆಮಿ ಬಗ್ಗೆ ಬಿಲ್ ಗೇಟ್ಸ್‌ನ ಮಕ್ಕಳಿಗೂ ಗೊತ್ತಾಗಿ ಅವರೂ ಇಲ್ಲಿದ್ದ ಮಾಹಿತಿಯನ್ನು ಆಧರಿಸಿ ಕಲಿಯಲಾರಂಭಿಸಿದ್ದರು. ಒಮ್ಮೆ ಇದರ ಬಗ್ಗೆ ತಮ್ಮ ತಂದೆಗೂ ಹೇಳಿದರು. ಆತ ಕೂಡ ಇದನ್ನು ನೋಡಿ ಮೆಚ್ಚಿಕೊಂಡ. ಎಷ್ಟರಮಟ್ಟಿಗೆ ಅಂದರೆ ಖಾನ್ ಅಕಾಡೆಮಿಗೆ ಬಿಲ್ ಗೇಟ್ಸ್ ಫೌಂಡೇಷನ್‍ನಿಂದ ದೊಡ್ಡಮೊತ್ತದ ದೇಣಿಗೆಯನ್ನು ನೀಡಿದೆ. ಬಿಲ್ ಗೇಟ್ಸ್ ಅಲ್ಲದೆ ಗೂಗಲ್ ಸಂಸ್ಥೆಯವರೂ ಖಾನ್ ಅಕಾಡೆಮಿಯ ಸಾಧನೆಯನ್ನು ಮೆಚ್ಚಿ ಅದಕ್ಕೆ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನೀಡಿದರಲ್ಲದೆ ಅವರೂ ದೇಣಿಗೆಯನ್ನು ನೀಡಿದರು. ಇವತ್ತು ಅದಷ್ಟೋ ಅಭಿಮಾನಿಗಳು ತಮ್ಮ ಶಕ್ತಾನುಸಾರ ಖಾನ್‍ನ ಈ ವಿದ್ಯಾಸಂಸ್ಥೆಗೆ ಹಣ ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವಿದೆ. ನಮ್ಮ ಪತ್ರಿಕೆಯ ಓದುಗರಲ್ಲಿ ಬಹಳಷ್ಟು ಜನ ಶಾಲಾ ಅಧ್ಯಾಪಕರಿದ್ದಾರೆ. ಅವರೆಲ್ಲರೂ ಸಲ್ಮಾನ್ ಖಾನ್ ಅವರ khanacademy.org ಎಂಬ ವೆಬ್‍ಸೈಟಿಗೆ ಭೇಟಿ ನೀಡಿದರೆ ನಮ್ಮ ರಾಜ್ಯದ ಶಾಲಾಮಕ್ಕಳಿಗೆ ಇವತ್ತು ಕಷ್ಟದ ಸಬ್ಜೆಕ್ಟ್ ಆಗಿರುವ ಗಣಿತವನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ಅವರೆಲ್ಲ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದಾಗಿದೆ. ಓರ್ವ ಗುರುವಿನ ಕರ್ತವ್ಯ ಅದೇ ಅಲ್ಲವೇ?

 ಗೌರಿ ಲಂಕೇಶ್
13 ಜುಲೈ, 2011 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...