Homeಮುಖಪುಟವರವರ ರಾವ್‌ರನ್ನು ಆಸ್ಪತ್ರೆಗೆ ಸೇರಿಸಿ: 14 ಸಂಸದರಿಂದ ಮಹಾರಾಷ್ಟ್ರ ಸಿಎಂಗೆ ಪತ್ರ

ವರವರ ರಾವ್‌ರನ್ನು ಆಸ್ಪತ್ರೆಗೆ ಸೇರಿಸಿ: 14 ಸಂಸದರಿಂದ ಮಹಾರಾಷ್ಟ್ರ ಸಿಎಂಗೆ ಪತ್ರ

- Advertisement -
- Advertisement -

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ 81 ವರ್ಷದ ಕವಿ ವರವರ ರಾವ್ ಅವರ ಆರೋಗ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ ದೇಶದ 14 ಸಂಸದರು ಜೂನ್ 19 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ಅರ್ಜಿಯಲ್ಲಿ ವರವರ ರಾವ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಕೇಳಿಕೊಳ್ಳಲಾಗಿದೆ.

ಸಿಪಿಐ(ಎಂ), ಕಾಂಗ್ರೆಸ್, ಡಿಎಂಕೆ, ವಿಸಿಕೆ, ಸಿಪಿಐ ಮತ್ತು ಆರ್‌ಜೆಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹದಿನಾಲ್ಕು ಸಂಸದರು, ಜೈಲುಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವರಿಬ್ಬರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ.

ವರವರ ರಾವ್ ಅವರನ್ನು ನವೀ ಮುಂಬಯಿಯ ತಾಲೋಜ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಗಿದ್ದು, ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಹಾಗೂ ಪ್ರಧಾನಿ ಮೋದಿಯನ್ನು ಹತ್ಯೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಅವರನ್ನು ಆಗಸ್ಟ್ 28, 2018 ರಂದು ಬಂಧಿಸಲಾಯಿತು.

ಸಂಸದರು ತಮ್ಮ ಪತ್ರದಲ್ಲಿ, 81 ವರ್ಷ ವಯಸ್ಸಿನ ವರವರ ರಾವ್ ಪ್ರತಿದಿನ ವಾಂತಿ ಮಾಡಿಕೊಳ್ಳುತ್ತಿದ್ದಾರೆ, ಅವರ ಆರೋಗ್ಯ ಸರಿಯಿಲ್ಲ. ರಾವ್ ಹೃದಯ ರೋಗಿಯಾಗಿದ್ದರಿಂದ ಅವರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಎಲೆಕ್ಟ್ರೋಲೈಟ್ ಅಡಚಣೆಯನ್ನು ಅವರ ಆರೋಗ್ಯ ವರದಿಗಳು ಉಲ್ಲೇಖಿಸಿವೆ ಎಂದು ಸಂಸದರು ಉಲ್ಲೇಖಿಸಿದ್ದಾರೆ. ಅವನ ಕರುಳಿನ ಹುಣ್ಣುಗಳಿಗೆ ತುರ್ತು ಪರೀಕ್ಷೆಯ ಅಗತ್ಯವಿದ್ದು, ಆರು ತಿಂಗಳುಗಳಾಗಿಯೂ ಅದನ್ನು ನಡೆಸಲಾಗಿಲ್ಲ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

“ಅವರ ಆರೋಗ್ಯ ಇಂತಹ ದುಸ್ಥಿತಿಯಲ್ಲಿರುರುವುದರಿಂದ, ಅವರನ್ನು ಆಸ್ಪತ್ರೆಗೆ ವರ್ಗಾಯಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಜೈಲಿನಲ್ಲಿ ಪ್ರಸ್ತುತ ಒದಗಿಸಲಾದ ಆರೈಕೆ ಸ್ವೀಕಾರಾರ್ಹವಲ್ಲ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಮೂಲಕ ಅಗತ್ಯ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ ”ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪಿಆರ್ ನಟರಾಜನ್ (ಸಿಪಿಐ (ಎಂ), ಕೆಕೆ ರಾಗೇಶ್ (ಸಿಪಿಐ (ಎಂ)), ಕೆ ಸುಬ್ಬರಾಯಣ್ (ಸಿಪಿಐ), ಉತ್ತಮ ಕುಮಾರ್ ರೆಡ್ಡಿ (ಕಾಂಗ್ರೆಸ್), ಕೋಮತಿ ರೆಡ್ಡಿ ವೆಂಕಟ್ ರೆಡ್ಡಿ (ಕಾಂಗ್ರೆಸ್), ಮನೋಜ್ ಜಾ (ಆರ್‌ಜೆಡಿ), ಡಿ ರವಿಕುಮಾರ್ (ವಿಸಿಕೆ), ಥೋಲ್ ತಿರುಮಾವಾಲವನ್ (ವಿಸಿಕೆ), ಎ ರೇವಂತ್ ರೆಡ್ಡಿ (ಕಾಂಗ್ರೆಸ್), ಸುಮತಿ ತಮಿಳತಿ ತಂಗಪಾಂಡಿಯನ್ (ಡಿಎಂಕೆ), ತಿರುಚಿ ಶಿವ (ಡಿಎಂಕೆ), ಕನಿಮೋಜಿ (ಡಿಎಂಕೆ) ಮತ್ತು ಎಸ್ ವೆಂಕಟೇಶನ್ (ಸಿಪಿಐ) ) ಮೊದಲಾದ ಸಂಸದರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

90% ವಿಕಲಾಂಗತೆ ಹೊಂದಿರುವ ಡಾ. ಜಿ.ಎನ್. ಸಾಯಿಬಾಬ ಅವರ ಆರೋಗ್ಯ ಕೂಡಾ ದುರ್ಬಲವಾಗಿದ್ದು ಅವರಿಗೆ ಕೂಡಾ ಚಿಕಿತ್ಸೆಯನ್ನು ನೀಡುವಂತೆ ಕೇಳಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋಧಿಸಿದ್ದಾರೆಂದು ಬಂಧನಕ್ಕೊಳಗಾಗಿ ಜೈಲಿನಲ್ಲಿರುವ 11 ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಕವಿ ಮತ್ತು ಬರಹಗಾರ ವರವರ ರಾವ್ ಕೂಡಾ ಸೇರಿದ್ದಾರೆ. ಇದಲ್ಲದೆ ಸುಧಾ ಭರದ್ವಾಜ್, ಶೋಮಾ ಸೇನ್, ಆನಂದ್ ತೇಲ್ಟುಂಬ್ಡೆ, ಗೌತಮ್ ನವಲಖಾ, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಸುರೇಂದ್ರ ಗ್ಯಾಡ್ಲಿಂಗ್, ಮಹೇಶ್ ರೌತ್, ಸುಧೀರ್ ಧವಾಲೆ ಮತ್ತು ರೋನಾ ವಿಲ್ಸನ್ ಇತರರು ಕೂಡಾ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಈ ಪತ್ರವಲ್ಲದೆ ಜೂನ್ 16 ರಂದು ಚಲನಚಿತ್ರ ನಟರಾದ ಸೌಮಿತ್ರ ಚಟರ್ಜಿ, ಅಡೂರ್‌ ಗೋಪಾಲಕೃಷ್ಣನ್, ನಸೀರುದ್ದೀನ್ ಷಾ ಮತ್ತು ಅಪರ್ಣ ಸೇನ್ ಸೇರಿದಂತೆ 500 ಗಣ್ಯರು ಬಂಧನನಕ್ಕೊಳಗಾದ ಸಾಮಾಜಿಕ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಪತ್ರ ಬರೆಯಲಾಗಿತ್ತು.

ಅಲ್ಲದೆ ಮೇ 28 ರಂದು ವರವರ ರಾವ್ ಅವರನ್ನು ಸರ್ಕಾರಿ ನಿಯಂತ್ರಿತ ಜೆಜೆ ಆಸ್ಪತ್ರೆಗೆ ದಾಖಲಿಸಿದ ನಂತರ ಅವರ ಪತ್ನಿ ಮೇ 30 ರಂದು ಅವರನ್ನು ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆಸ್ಪತ್ರೆಯ ಮೂಲಗಳ ಪ್ರಕಾರ ರಾವ್ ಅವರು ತನಗೆ ತಲೆತಿರುಗುತ್ತಿದೆ ಎಂದು ಹೇಳಿದ್ದರು ಹಾಗೂ ಸ್ವಲ್ಪ ಸಮಯದ ವರೆಗೆ ಅವರು ಮೂರ್ಚೆ ಹೋಗಿದ್ದರು ಎನ್ನಲಾಗಿತ್ತು. ಆದರೂ ಅವರನ್ನು ಕೇವಲ ಮೂರು ದಿನಗಳಷ್ಟೇ ಇಡಲಾಗಿತ್ತು.


ಓದಿ: ಸಫೂರಾ ಝರ್ಗರ್‌ ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಬಿಡುಗಡೆಗೆ 500 ಗಣ್ಯರ ಪತ್ರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...