Homeಕಥೆಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

ಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

- Advertisement -
- Advertisement -

ಮನೆ ಹಿರಿಯರಾದ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳುತ್ತಿದ್ದ ಕಾಲವೊಂದಿತ್ತು. ದೂರದ ಬೆಟ್ಟದತ್ರ ಒಂದು ಪುಟ್ಟ ಊರಿತ್ತು. ಆ ಊರಿನಲ್ಲಿ ರಾಜಕುಮಾರಿಯೊಬ್ಬಳಿದ್ದಳು…. ಅಂತ ಕತೆ ಆರಂಭವಾಗುತ್ತಿತ್ತು. ಮಧ್ಯೆ ಮಧ್ಯೆ ಅಬ್ಬಾ ಹೀಗೆಲ್ಲಾ ಇತ್ತಾ? ಎನ್ನುವಷ್ಟು ಆಶ್ಚರ್ಯಪಡುವ ಸಂಗತಿಗಳನ್ನು ಅಜ್ಜಿ ಹೇಳುವಾಗ ಕಣ್ಣರಳಿಸಿ ಕೇಳುತ್ತದ್ದೆವು. ಅಲ್ಲಿ ರಾಜಕುಮಾರಿಯೇ ನಾಯಕಿಯಾಗಬೇಕಿರಲಿಲ್ಲ. ಕಾಗೆ, ಗುಬ್ಬಿ, ಬಡವ, ಕಸ ಗುಡಿಸೊ ಹುಡುಗಿ ಹೀಗೆ ಎಲ್ಲರೂ ಕತಾನಾಯಕರಾಗಿರುತ್ತಿದ್ದರು. ಕತೆಯಲ್ಲೊಂದು ಮೌಲ್ಯವಿರುತ್ತಿತ್ತು.

ಕಾಲ ಬದಲಾದಂತೆ ತಂತ್ರಜ್ಞಾನ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಅಜ್ಜಿ ಕತೆ ಹೇಳುವ-ಕೇಳುವ ವ್ಯವಧಾನ ಇಲ್ಲವಾಗಿದೆ. ದಿನವಿಡೀ ಓಡೂ, ಓಡೂ… ಎನ್ನುವಂತಾಗಿದೆ. ಇವತ್ತಿಗೆ ಅಜ್ಜಿ ಕತೆ ಹೇಳುತ್ತಿದ್ದ ಕಾಲವೊಂದಿತ್ತು ಅನ್ನೋದು ಮಾತ್ರ ಅಚ್ಚಳಿಯದ ನೆನಪಾಗಿ ಉಳಿದಿದೆ.

ಕೊರೊನಾ ಪಿಡುಗಿನಿಂದ ಬಿಡುವಿಲ್ಲದ ಕೆಲಸಗಳಿಗೆ ಬ್ರೇಕ್‌ ಹಾಕಿ ಮನೆಯಲ್ಲಿಯೇ ಇರುವಂತಾಗಿದೆ. ಮನೆಯವರೊಂದಿಗೆ ಮಾತನಾಡುತ್ತಾ, ಇಡೀ ಸಮಾಜದ ಆಗೂ ಹೋಗುಗಳ ಬಗ್ಗೆ ತಿಳಿಯುತ್ತಿರುವ ‘ಹೋಮ್‌ ಕ್ವಾರಂಟೈನ್‌’ ಸಂದರ್ಭದಲ್ಲಿ ಅಜ್ಜಿ ಕತೆಗಳ ಹಚ್ಚ ಹಸಿರಾದ ನೆನಪು ಮರುಕಳಿಸಿದ್ದು ‘ಕತೆ ಕೇಳೋಣ ಬನ್ನಿ’ ಕಾರ್ಯಕ್ರಮದಿಂದ. ಇಲ್ಲಿ ಅಜ್ಜಿ ಕತೆ ಹೇಳುವುದಿಲ್ಲ ಬದಲಾಗಿ ಕನ್ನಡದ ಹೆಸರಾಂತ ಕತೆಗಾರರು ತಾವು ಬರೆದ ಕತೆಗಳನ್ನು ಓದುತ್ತಾರೆ.

ಕನ್ನಡ ಸಾಹಿತ್ಯದ ಕುರಿತು ಮಾಹಿತಿ ನೀಡುವ ಇ-ತಾಣ ಬುಕ್‌ ಬ್ರಹ್ಮ ಕತೆ ಕೇಳುವ ಆಸಕ್ತರಿಗಾಗಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನ ಸಂಜೆ 6.30ಕ್ಕೆ ’ಕತೆ ಕೇಳೋಣ ಬನ್ನಿ’ ಫೇಸ್‌ಬುಕ್‌ ಲೈವ್‌ ಅನ್ನು ನಡೆಸುತ್ತಿದೆ. ಮುವತ್ತು ಮಂದಿ ಕತೆಗಾರರು, ವಿವಿಧ ಭಾಷಾ ಶೈಲಿಯ ಕತೆಗಳನ್ನು ಈ ಲೈವ್‌ನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಈವರೆಗೂ ವಿಕಾಸ್‌ ನೇಗಿಲೋಣಿ, ಗೀತಾ ವಸಂತ, ಹನುಮಂತ ಹಾಲಗೇರಿ, ದಯಾನಂದ, ಚಿದಾನಂದ ಸಾಲಿ, ಶ್ರೀಧರ ಬಳಗಾರ, ಕಪಿಲ ಹುಮನಬಾದೆ, ಮಹಂತೇಶ ನವಲಕಲ್‌, ಅಮರೇಶ ನುಗಡೋಣಿ ಸೇರಿದಂತೆ ಸುಮಾರು ಹದಿನೈದು ಕತೆಗಾರರು ಕತೆಯನ್ನು ಓದಿದ್ದಾರೆ.

ಮೂರನೇ ವಾರ ಅಂದರೆ ನಾಳೆಯಿಂದ ಕೇಶವ ಮಳಗಿ, ಕಲಿಗಣನಾಥ ಗುಡದೂರು, ಡಿ.ಎಸ್. ಚೌಗಲೆ, ಟಿ.ಎಸ್. ಗೊರವರ, ಶಿವಕುಮಾರ ಮಾವಲಿ, ಪದ್ಮಿನಿ ನಾಗರಾಜು ಅವರು ಕತೆ ಓದಲಿದ್ದಾರೆ. ಓದುಗರು ಕತೆಯೊಳಗೊಕ್ಕು ಪಾತ್ರವಾಗಿ ಓದುವುದು ಈ ಕಾರ್ಯಕ್ರಮದ ವಿಶೇಷ. ಇಲ್ಲಿನ ಪ್ರತಿ ಕತೆಯು ಭಿನ್ನವಾಗಿದೆ. ಚಿದಾನಂದ ಸಾಲಿಯವರ ಕತೆ ಹಳ್ಳಿ ಮುಗ್ದ ಜನರ ಬದುಕಿನ ಕುರಿತು ವಿವರಿಸಿದ್ದರೆ ದಯಾನಂದ ಅವರು ಇಂದಿನ ಕಾರ್ಪೊರೇಟ್‌ ಕಂಪನಿಗಳ ಉದ್ಯೋಗಿಗಳು ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅಲ್ಲಿನ ಜೀವನ ಹೇಗಿರುತ್ತದೆ ಎಂಬುದರ ಕುರಿತು ಹೆಣೆಯಲಾಗಿದೆ.

ಇನ್ನು ಬರವಣಿಗೆಯ ಮೂಲಕ ನಮ್ಮನ್ನೆಲ್ಲಾ ಆಳವಾಗಿ ಚಿಂತಿಸುವಂತೆ ಮಾಡಿರುವ ಹನುಮಂತ ಹಾಲಗೇರಿಯವರು ಓದಿದ ಕತೆ ಸುಡುಗಾಡು ಸಿದ್ದರ ಬದುಕಿನ ಕುರಿತಾಗಿತ್ತು. ನಗರೀಕರಣ ಪ್ರಕ್ರಿಯೆಯಲ್ಲಿ ಮನುಷ್ಯರ ಕೆಲಸವನ್ನು ಯಂತ್ರಗಳು ಕಸಿದುಕೊಂಡದ್ದೇಗೆ ಎಂಬುದನ್ನು ಈ ಕತೆ ಚಿತ್ರಿಸಿದೆ. ಉತ್ತರ ಕರ್ನಾಟಕ ಶೈಲಿ, ಬಯಲು ಸೀಮೆ, ಪಕ್ಕ ಮಂಡ್ಯ ಭಾಷೆ ಕುಂದಾಪುರ ಕನ್ನಡ ಹೀಗೆ ವಿವಿಧ ಬಗೆಯ ಭಾಷಾ ಶೈಲಿ ಇಲ್ಲಿನ ಕತೆಗಳಲ್ಲಿವೆ.

ಕಾರ್ಯಕ್ರಮದ ಕುರಿತು ವಿವರಣೆ ನೀಡಿರುವ ಬುಕ್‌ ಬ್ರಹ್ಮ ‘ಇಂದು ಎಲ್ಲರಿಗೂ ಸಂಕಷ್ಟದ ದಿನಗಳು. ಒಂಟಿಯಾಗಿ ಕಾಲ ಕಳೆಯಬೇಕಾದ ಪರೀಕ್ಷೆಯ ದಿನಗಳಿವು. ಆತಂಕ ಎದುರಾದಾಗ ಸಾಹಿತ್ಯ ಸಾಂತ್ವನ ಹೇಳುವ ಕೆಲಸ ಮಾಡಬಲ್ಲದು. ಸಾಹಿತ್ಯದ ಸಾಂಗತ್ಯ ಮತ್ತು ಕತೆಯ ಒಡನಾಟವು ಈಗ ಎದುರಿಸುತ್ತಿರುವ ಸವಾಲನ್ನು ಇಲ್ಲವಾಗಿಸುವುದಿಲ್ಲ. ಆದರೆ, ಹತಾಶೆಗೆ ಸಮಾಧಾನ ಹೇಳಬಲ್ಲದು. ಆದ್ದರಿಂದ ’ಬುಕ್‌ ಬ್ರಹ್ಮ ವಾಚನ’ದ ಅಡಿಯಲ್ಲಿ ’ಕತೆ ಕೇಳೋಣ ಬನ್ನಿ’ ಎಂಬ ಕತೆಗಾರರು ಕತೆ ಓದುವ ಸರಣಿ ಆರಂಭಿಸಿದ್ದೇವೆ’ ಎಂದಿದ್ದಾರೆ.

ಪ್ರತಿದಿನ ಇಂಟರ್‌ನೆಟ್‌ ಬಳಸುತ್ತಾ, ಟಿ.ವಿ. ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಪುಸ್ತಕವನ್ನು ತಿರುವಿ ಹಾಕುವ ಕೆಲಸದ ನಡುವೆಯೂ ಸ್ವಲ್ಪ ಬಿಡುವಿಟ್ಟುಕೊಂಡು ಕತೆ ಕೇಳಿ, ನೋಡಿ. ಅಚ್ಚಳಿಯದೇ ಉಳಿದಿರುವ ಅಜ್ಜಿ ಕತೆಗಳನ್ನು ನೆನಪಿಸಿಕೊಳ್ಳಿ.

ಕತೆ ಕೇಳಲು ಫೇಸ್‌ಬುಕ್‌ನ ಪೇಜ್‌ ನೋಡಿ: Book Brahma

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...