Homeಕಥೆಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

ಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

- Advertisement -
- Advertisement -

ಮನೆ ಹಿರಿಯರಾದ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳುತ್ತಿದ್ದ ಕಾಲವೊಂದಿತ್ತು. ದೂರದ ಬೆಟ್ಟದತ್ರ ಒಂದು ಪುಟ್ಟ ಊರಿತ್ತು. ಆ ಊರಿನಲ್ಲಿ ರಾಜಕುಮಾರಿಯೊಬ್ಬಳಿದ್ದಳು…. ಅಂತ ಕತೆ ಆರಂಭವಾಗುತ್ತಿತ್ತು. ಮಧ್ಯೆ ಮಧ್ಯೆ ಅಬ್ಬಾ ಹೀಗೆಲ್ಲಾ ಇತ್ತಾ? ಎನ್ನುವಷ್ಟು ಆಶ್ಚರ್ಯಪಡುವ ಸಂಗತಿಗಳನ್ನು ಅಜ್ಜಿ ಹೇಳುವಾಗ ಕಣ್ಣರಳಿಸಿ ಕೇಳುತ್ತದ್ದೆವು. ಅಲ್ಲಿ ರಾಜಕುಮಾರಿಯೇ ನಾಯಕಿಯಾಗಬೇಕಿರಲಿಲ್ಲ. ಕಾಗೆ, ಗುಬ್ಬಿ, ಬಡವ, ಕಸ ಗುಡಿಸೊ ಹುಡುಗಿ ಹೀಗೆ ಎಲ್ಲರೂ ಕತಾನಾಯಕರಾಗಿರುತ್ತಿದ್ದರು. ಕತೆಯಲ್ಲೊಂದು ಮೌಲ್ಯವಿರುತ್ತಿತ್ತು.

ಕಾಲ ಬದಲಾದಂತೆ ತಂತ್ರಜ್ಞಾನ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಅಜ್ಜಿ ಕತೆ ಹೇಳುವ-ಕೇಳುವ ವ್ಯವಧಾನ ಇಲ್ಲವಾಗಿದೆ. ದಿನವಿಡೀ ಓಡೂ, ಓಡೂ… ಎನ್ನುವಂತಾಗಿದೆ. ಇವತ್ತಿಗೆ ಅಜ್ಜಿ ಕತೆ ಹೇಳುತ್ತಿದ್ದ ಕಾಲವೊಂದಿತ್ತು ಅನ್ನೋದು ಮಾತ್ರ ಅಚ್ಚಳಿಯದ ನೆನಪಾಗಿ ಉಳಿದಿದೆ.

ಕೊರೊನಾ ಪಿಡುಗಿನಿಂದ ಬಿಡುವಿಲ್ಲದ ಕೆಲಸಗಳಿಗೆ ಬ್ರೇಕ್‌ ಹಾಕಿ ಮನೆಯಲ್ಲಿಯೇ ಇರುವಂತಾಗಿದೆ. ಮನೆಯವರೊಂದಿಗೆ ಮಾತನಾಡುತ್ತಾ, ಇಡೀ ಸಮಾಜದ ಆಗೂ ಹೋಗುಗಳ ಬಗ್ಗೆ ತಿಳಿಯುತ್ತಿರುವ ‘ಹೋಮ್‌ ಕ್ವಾರಂಟೈನ್‌’ ಸಂದರ್ಭದಲ್ಲಿ ಅಜ್ಜಿ ಕತೆಗಳ ಹಚ್ಚ ಹಸಿರಾದ ನೆನಪು ಮರುಕಳಿಸಿದ್ದು ‘ಕತೆ ಕೇಳೋಣ ಬನ್ನಿ’ ಕಾರ್ಯಕ್ರಮದಿಂದ. ಇಲ್ಲಿ ಅಜ್ಜಿ ಕತೆ ಹೇಳುವುದಿಲ್ಲ ಬದಲಾಗಿ ಕನ್ನಡದ ಹೆಸರಾಂತ ಕತೆಗಾರರು ತಾವು ಬರೆದ ಕತೆಗಳನ್ನು ಓದುತ್ತಾರೆ.

ಕನ್ನಡ ಸಾಹಿತ್ಯದ ಕುರಿತು ಮಾಹಿತಿ ನೀಡುವ ಇ-ತಾಣ ಬುಕ್‌ ಬ್ರಹ್ಮ ಕತೆ ಕೇಳುವ ಆಸಕ್ತರಿಗಾಗಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನ ಸಂಜೆ 6.30ಕ್ಕೆ ’ಕತೆ ಕೇಳೋಣ ಬನ್ನಿ’ ಫೇಸ್‌ಬುಕ್‌ ಲೈವ್‌ ಅನ್ನು ನಡೆಸುತ್ತಿದೆ. ಮುವತ್ತು ಮಂದಿ ಕತೆಗಾರರು, ವಿವಿಧ ಭಾಷಾ ಶೈಲಿಯ ಕತೆಗಳನ್ನು ಈ ಲೈವ್‌ನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಈವರೆಗೂ ವಿಕಾಸ್‌ ನೇಗಿಲೋಣಿ, ಗೀತಾ ವಸಂತ, ಹನುಮಂತ ಹಾಲಗೇರಿ, ದಯಾನಂದ, ಚಿದಾನಂದ ಸಾಲಿ, ಶ್ರೀಧರ ಬಳಗಾರ, ಕಪಿಲ ಹುಮನಬಾದೆ, ಮಹಂತೇಶ ನವಲಕಲ್‌, ಅಮರೇಶ ನುಗಡೋಣಿ ಸೇರಿದಂತೆ ಸುಮಾರು ಹದಿನೈದು ಕತೆಗಾರರು ಕತೆಯನ್ನು ಓದಿದ್ದಾರೆ.

ಮೂರನೇ ವಾರ ಅಂದರೆ ನಾಳೆಯಿಂದ ಕೇಶವ ಮಳಗಿ, ಕಲಿಗಣನಾಥ ಗುಡದೂರು, ಡಿ.ಎಸ್. ಚೌಗಲೆ, ಟಿ.ಎಸ್. ಗೊರವರ, ಶಿವಕುಮಾರ ಮಾವಲಿ, ಪದ್ಮಿನಿ ನಾಗರಾಜು ಅವರು ಕತೆ ಓದಲಿದ್ದಾರೆ. ಓದುಗರು ಕತೆಯೊಳಗೊಕ್ಕು ಪಾತ್ರವಾಗಿ ಓದುವುದು ಈ ಕಾರ್ಯಕ್ರಮದ ವಿಶೇಷ. ಇಲ್ಲಿನ ಪ್ರತಿ ಕತೆಯು ಭಿನ್ನವಾಗಿದೆ. ಚಿದಾನಂದ ಸಾಲಿಯವರ ಕತೆ ಹಳ್ಳಿ ಮುಗ್ದ ಜನರ ಬದುಕಿನ ಕುರಿತು ವಿವರಿಸಿದ್ದರೆ ದಯಾನಂದ ಅವರು ಇಂದಿನ ಕಾರ್ಪೊರೇಟ್‌ ಕಂಪನಿಗಳ ಉದ್ಯೋಗಿಗಳು ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅಲ್ಲಿನ ಜೀವನ ಹೇಗಿರುತ್ತದೆ ಎಂಬುದರ ಕುರಿತು ಹೆಣೆಯಲಾಗಿದೆ.

ಇನ್ನು ಬರವಣಿಗೆಯ ಮೂಲಕ ನಮ್ಮನ್ನೆಲ್ಲಾ ಆಳವಾಗಿ ಚಿಂತಿಸುವಂತೆ ಮಾಡಿರುವ ಹನುಮಂತ ಹಾಲಗೇರಿಯವರು ಓದಿದ ಕತೆ ಸುಡುಗಾಡು ಸಿದ್ದರ ಬದುಕಿನ ಕುರಿತಾಗಿತ್ತು. ನಗರೀಕರಣ ಪ್ರಕ್ರಿಯೆಯಲ್ಲಿ ಮನುಷ್ಯರ ಕೆಲಸವನ್ನು ಯಂತ್ರಗಳು ಕಸಿದುಕೊಂಡದ್ದೇಗೆ ಎಂಬುದನ್ನು ಈ ಕತೆ ಚಿತ್ರಿಸಿದೆ. ಉತ್ತರ ಕರ್ನಾಟಕ ಶೈಲಿ, ಬಯಲು ಸೀಮೆ, ಪಕ್ಕ ಮಂಡ್ಯ ಭಾಷೆ ಕುಂದಾಪುರ ಕನ್ನಡ ಹೀಗೆ ವಿವಿಧ ಬಗೆಯ ಭಾಷಾ ಶೈಲಿ ಇಲ್ಲಿನ ಕತೆಗಳಲ್ಲಿವೆ.

ಕಾರ್ಯಕ್ರಮದ ಕುರಿತು ವಿವರಣೆ ನೀಡಿರುವ ಬುಕ್‌ ಬ್ರಹ್ಮ ‘ಇಂದು ಎಲ್ಲರಿಗೂ ಸಂಕಷ್ಟದ ದಿನಗಳು. ಒಂಟಿಯಾಗಿ ಕಾಲ ಕಳೆಯಬೇಕಾದ ಪರೀಕ್ಷೆಯ ದಿನಗಳಿವು. ಆತಂಕ ಎದುರಾದಾಗ ಸಾಹಿತ್ಯ ಸಾಂತ್ವನ ಹೇಳುವ ಕೆಲಸ ಮಾಡಬಲ್ಲದು. ಸಾಹಿತ್ಯದ ಸಾಂಗತ್ಯ ಮತ್ತು ಕತೆಯ ಒಡನಾಟವು ಈಗ ಎದುರಿಸುತ್ತಿರುವ ಸವಾಲನ್ನು ಇಲ್ಲವಾಗಿಸುವುದಿಲ್ಲ. ಆದರೆ, ಹತಾಶೆಗೆ ಸಮಾಧಾನ ಹೇಳಬಲ್ಲದು. ಆದ್ದರಿಂದ ’ಬುಕ್‌ ಬ್ರಹ್ಮ ವಾಚನ’ದ ಅಡಿಯಲ್ಲಿ ’ಕತೆ ಕೇಳೋಣ ಬನ್ನಿ’ ಎಂಬ ಕತೆಗಾರರು ಕತೆ ಓದುವ ಸರಣಿ ಆರಂಭಿಸಿದ್ದೇವೆ’ ಎಂದಿದ್ದಾರೆ.

ಪ್ರತಿದಿನ ಇಂಟರ್‌ನೆಟ್‌ ಬಳಸುತ್ತಾ, ಟಿ.ವಿ. ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಪುಸ್ತಕವನ್ನು ತಿರುವಿ ಹಾಕುವ ಕೆಲಸದ ನಡುವೆಯೂ ಸ್ವಲ್ಪ ಬಿಡುವಿಟ್ಟುಕೊಂಡು ಕತೆ ಕೇಳಿ, ನೋಡಿ. ಅಚ್ಚಳಿಯದೇ ಉಳಿದಿರುವ ಅಜ್ಜಿ ಕತೆಗಳನ್ನು ನೆನಪಿಸಿಕೊಳ್ಳಿ.

ಕತೆ ಕೇಳಲು ಫೇಸ್‌ಬುಕ್‌ನ ಪೇಜ್‌ ನೋಡಿ: Book Brahma

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...