Homeಮುಖಪುಟಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

ಲಾಕ್‌ಡೌನ್ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಅಪಾಯಕಾರಿ ಪ್ರಯೋಗ : ಎ.ಪಿ. ಶಾ

- Advertisement -
- Advertisement -

ದಿನನಿತ್ಯದ ಊಟದ ಅಗತ್ಯವಿರುವಂತೆಯೇ ದಿನನಿತ್ಯದ ನ್ಯಾಯವೂ ಅಗತ್ಯ ಮತ್ತು ಅದು ದಿನದ ಕೆಲವು ಹೊತ್ತು ಕೂಡಾ ಅಗತ್ಯ ಎಂದು ನಾಟಕಕಾರ ಬರ್ಟೋಲ್ಡ್ ಬ್ರೆಷ್ಟ್ (ಬ್ರೆಕ್ಟ್- Bertolt Brecht) ಹೇಳಿದ್ದಾನೆ. ಸುಪ್ರೀಂಕೋರ್ಟ್ ಈ ವಿಷಯವನ್ನು ನೆನಪಿಡದಿದ್ದಲ್ಲಿ ಜಾರ್ಜ್ ಓರ್ವೆಲ್‌ನ ದಬ್ಬಾಳಿಕೆಯ ಪ್ರಪಂಚವು ಸುಲಭದಲ್ಲಿ ನಿಜವಾಗಬಹುದು.

ಎ.ಪಿ. ಶಾ (ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶರು)

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನಾವು ಉದಾಸೀನದಿಂದ ಕಾಣುತ್ತಿರುವ ಅನೇಕ ಸ್ವಾತಂತ್ರ್ಯಗಳು ಅಭದ್ರ ನೆಲದ ಮೇಲೆ ನಿಂತಿವೆ ಎಂದು ಇತ್ತೀಚಿನ ಹಲವಾರು ಘಟನೆಗಳು ಸೂಚಿಸುತ್ತವೆ. ಸುಪ್ರೀಂಕೋರ್ಟ್ ನಿಜವಾಗಿಯೂ ನಮ್ಮ ಹಕ್ಕುಗಳನ್ನು ರಕ್ಷಿಸಲು ಸಮರ್ಥವೇ ಇಲ್ಲವೇ ಎಂದು ನಾವು ಸಂಶಯಪಡುವಂತೆ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸುಪ್ರೀಂಕೋರ್ಟಿನ ಆದ್ಯತೆಗಳು ಪರಿಹಾರ ಕಾಣಬೇಕಾದ ವಿಷಯಗಳಿಗೆ ಸರಿಹೊಂದುವಂತೆಯೂ ಕಾಣುತ್ತಿಲ್ಲ. ಉದಾಹರಣೆಗೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಗೆ ಸಂಬಂಧಪಟ್ಟ ಪ್ರಕರಣಗಳು, 6,000 ಕೋಟಿ ರೂ.ಗಳನ್ನು ಸಂಗ್ರಹಿಸಲಾದ ಚುನಾವಣಾ ಬಾಂಡ್‌ಗಳ ಪ್ರಕರಣಗಳು ಯಾವುದೇ ಪ್ರಜಾಪ್ರಭುತ್ವವಾದಿ ಸಂಸ್ಥೆಗೆ ಕಾಳಜಿಯ ವಿಷಯವಾಗಿರಬೇಕಿತ್ತು.

1952ರಷ್ಟು ಹಿಂದೆಯೇ ಮದ್ರಾಸ್ ಸರಕಾರ ವಿರುದ್ಧ ವಿ.ಜಿ. ರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನನ್ನು “ನಾಗರಿಕರ ಮೂಲಭೂತ ಹಕ್ಕುಗಳ ಸದಾ ಜಾಗೃತ (qui vive) ಕಾವಲುಗಾರ” ಎಂದು ಪರಿಗಣಿಸಿತ್ತು. ಆದರೆ, ಇಂದು ಈ ಕಾವಲುಗಾರ ಜಾಗೃತವಾಗಿರುವುದು ಹೌದೆ? ಆದುದರಿಂದಲೇ, ಕೇವಲ ಈಗಿನ ಕೋವಿಡ್- 19 ಪಿಡುಡು ಮಾತ್ರವಲ್ಲ, ಅದಕ್ಕಿಂತ ಸ್ವಲ್ಪ ಹಿಂದಿನ ಬಿಕ್ಕಟ್ಟುಗಳಲ್ಲಿ ಸುಪ್ರೀಂಕೋರ್ಟಿನ ಕಾರ್ಯಾಚರಣೆಯ ಕುರಿತು ಗಮನಹರಿಸಲು ನಾನು ನಿರ್ಧರಿಸಿದೆ.

“ಯುದ್ಧದ ಸಮಯದಲ್ಲಿ ಕಾನೂನು ಮೌನವಾಗುತ್ತದೆ (Inter arma enim silent lēgēs) ಎಂಬ ಪ್ರಖ್ಯಾತ ಮಾತುಗಳನ್ನು ರೋಮನ್ ಮುತ್ಸದ್ಧಿ, ತತ್ವಶಾಸ್ತ್ರಜ್ಞ ಸಿಸೆರೊ (Cicero) ಹೇಳಿದ್ದನೆಂದು ನಂಬಲಾಗಿದೆ. ಆದರೆ, ಈ ಹೇಳಿಕೆಯನ್ನು- ಕನಿಷ್ಟ ಆಧುನಿಕ ಕಾಲದಲ್ಲಾದರೂ- ಮತ್ತೆ ಮತ್ತೆ ತಿರಸ್ಕರಿಸಲಾಗಿದೆ. ಇವುಗಳಲ್ಲಿ “ಶಸ್ತ್ರಗಳ ತಾಕಲಾಟದ ನಡುವೆ ಕಾನೂನುಗಳು ಮೌನವಾಗಿಲ್ಲ” ಎಂಬ ಬ್ರಿಟನ್‌ನ ಲಾರ್ಡ್ ಅಟ್ಕಿನ್ ಹೇಳಿಕೆ ಹೆಚ್ಚು ಪರಿಚಿತ.

ದಶಕಗಳ ನಂತರ ಎಡಿಎಂ ಜಬ್ಬಲ್ಪುರ್ ಪ್ರಕರಣದ ತನ್ನ ಸ್ಮರಣಾರ್ಹ ಬಿನ್ನಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಇದೇ ಭಾವನೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿದ್ದಾರೆ. “ಸರಕಾರದ ಉದ್ದೇಶಗಳು ಉದಾರವಾದಿಯಾಗಿದ್ದಾಗ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವು ಹೆಚ್ಚು ಎಚ್ಚರದಲ್ಲಿರಬೇಕು ಎಂದು ಅನುಭವವವು ನಮಗೆ ಕಲಿಸಬೇಕಾಗಿದೆ…..ಸ್ವಾತಂತ್ರ್ಯಕ್ಕೆ ಅತೀದೊಡ್ಡ ಅಪಾಯವಿರುವುದು ಕಾನೂನಿನ ಆಡಳಿತದ ಬಗ್ಗೆ ಗೌರವವಿಲ್ಲದ ಅತ್ಯುತ್ಸಾಹದ ವ್ಯಕ್ತಿಗಳು- ಅವರ ಉದ್ದೇಶವು ಎಷ್ಟೇ ಒಳ್ಳೆಯದಾಗಿದ್ದರೂ ಕೂಡಾ- ಕಪಟದಿಂದ ಅದನ್ನು ಆಕ್ರಮಿಸಿಕೊಳ್ಳುವುದು” ಎಂದು ಅವರು ಹೇಳಿದ್ದಾರೆ. ವಕೀಲ ಉಪೇಂದ್ರ ಬಕ್ಷಿ ಅವರೂ ಈ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. ಸಿಸೆರೋನ ಮಾತುಗಳನ್ನು ನಾವು ಒಕ್ಕೊರಲಿನಿಂದ ಇಂದು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಇವೆಲ್ಲವೂ ಈಗ ಏಕೆ ಪ್ರಸ್ತುತ? ನಾವೀಗ ಯುದ್ಧದಲ್ಲಿ ಇಲ್ಲದೇ ಇರಬಹುದು ಆದರೆ, ಹಿಂದೆಂದೂ ಕಾಣದಷ್ಟು ದೊಡ್ಡ ತುರ್ತು ಸ್ಥಿತಿಯಲ್ಲಿ ಇದ್ದೇವೆ. ಇಂತಹಾ ಸಮಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯಪ್ರವೇಶ ಅಥವಾ ಮೇಲುಸ್ತುವಾರಿ ಇಲ್ಲದೆ ಕಾರ್ಯಾಂಗವು ಎಷ್ಟರ ಮಟ್ಟಿನ ಅನಿರ್ಬಂಧಿತ ಅಧಿಕಾರವನ್ನು ಹೊಂದಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜಕೀಯ ಮತ್ತು ನೀತಿ ನಿರೂಪಕರ ವಲಯದಲ್ಲಿ ಮಾತ್ರವಲ್ಲ, ಕಾನೂನು ವಲಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಕ್ರಿಯವಾಗಿರುವ ವಕೀಲರ ನಡುವೆಯಂತೂ ಇದು ಎರಡು ಧ್ರುವಗಳಷ್ಟು ತದ್ವಿರುದ್ಧವಾದ ಅಭಿಪ್ರಾಯಗಳಿಗೆ ಕಾರಣವಾಗಿದೆ. ವಕೀಲ ದುಷ್ಯಂತ ದವೆ ಹೇಳುತ್ತಾರೆ- “ಕಾರ್ಯಾಂಗ ಮಾತ್ರ ಅದರ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಸಂಸತ್ತು ವಿರಾಮದಲ್ಲಿದೆ. ನ್ಯಾಯಾಂಗವು ಕೊಮಾದಲ್ಲಿದೆ”. “ಕೋಟ್ಯಂತರ ಜನರ ಪ್ರಸ್ತುತ ಸಂಕಷ್ಟಗಳ ಬಗ್ಗೆ ಸಂಸತ್ತು ಮತ್ತು ನ್ಯಾಯಾಂಗ ಏಕೆ ಸಂಪೂರ್ಣ ಮೌನವಹಿಸಿವೆ?” ಎಂದವರು ಕೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹರೀಶ್ ಸಾಳ್ವೆ ಅವರು- ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಸ್ಪಕ್ಷಪಾತದ ಆಡಳಿತದಲ್ಲಿ ಕಾರ್ಯಾಂಗದ ವಿವೇಚನೆಯು ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಒಳಪಟ್ಟಿರಬಾರದು ಎಂಬ ಅಭಿಪ್ರಾಯ ಹೊಂದಿದ್ದಾರೆ.

ದವೆ ಮತ್ತು ಸಾಳ್ವೆ ಅವರಿಬ್ಬರೂ ನೇರವಾಗಿ ಯಾವುದೇ ಪ್ರಕರಣವನ್ನು ಉಲ್ಲೇಖಿಸಿಲ್ಲ. ಆದರೆ, ಅವರಿಬ್ಬರೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸಲ್ಲಿಸಲಾದ ಸುಪ್ರೀಂಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆಂದು ನಾವು ಊಹಿಸಬಹುದು. ನಾನು ಈ ಅರ್ಜಿಗಳು ಮತ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಅನಗತ್ಯವಾಗಿ ಇಸ್ಲಾಮೋಫೋಬಿಕ್ ತಿರುವನ್ನು ಪಡೆದ ಹಿನ್ನೆಲೆಯಲ್ಲಿ ನಾನಿಲ್ಲಿ ಚರ್ಚಿಸುತ್ತೇನೆ.

ಮಾರ್ಚ್ 25, 2020ರಿಂದ ಆರಂಭಗೊಂಡ ಹಠಾತ್ ಲಾಕ್‌ಡೌನ್‌ನಿಂದಾಗಿ, ಕೆಲಸ ಹುಡುಕಿಕೊಂಡು ದೇಶದಾದ್ಯಂತ ಪ್ರಯಾಣಬೆಳೆಸಿದ್ದ ಲಕ್ಷಾಂತರ, ಬಹುಶಃ ಕೋಟ್ಯಂತರ ವಲಸೆ ಕಾರ್ಮಿಕರು ಜೀವನೋಪಾಯ, ಆದಾಯ, ಭದ್ರತೆ ಮತ್ತು ಗೌರವ ಎಲ್ಲವನ್ನೂ ಕಳೆದುಕೊಂಡರು. ಇವೆಲ್ಲವೂ ಕೇವಲ ಒಂದು ತಿಂಗಳ ಒಳಗಾಗಿ ನಡೆಯಿತು. ತಾವು ಅನಿರ್ದಿಷ್ಟಾವಧಿಗೆ ಯಾವುದೇ ಆಹಾರ, ಆಶ್ರಯ, ಸಾರಿಗೆ ಇಲ್ಲದೇ ಉಪವಾಸ ಕಳೆಯಬೇಕಾಗಬಹುದು ಎಂದು ಅವರಲ್ಲಿ ಬಹುತೇಕರು ಊಹಿಸಿಯೇ ಇರಲಾರರು.

ಇವೆಲ್ಲವೂ ಎಪ್ರಿಲ್ 1ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಒಂದು ಪ್ರಮುಖ ಪ್ರಶ್ನೆಯಾಯಿತು. ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿ ಕೋರಿತ್ತು.  ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯಿದೆಯ ಅನ್ವಯ ಹೇರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೂಲಕ ಸಂವಿಧಾನದ ವಿಧಿ 21ರಲ್ಲಿ ಖಾತರಿಪಡಿಸಲಾದ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಈ ಅರ್ಜಿಯಲ್ಲಿ ವಾದಿಸಲಾಗಿತ್ತು.

ಆದರೆ, ವಿಚಾರಣೆಯ ವೇಳೆಯಲ್ಲಿ ಸುಪ್ರೀಂಕೋರ್ಟ್ ಹೇಳಿಕೆಯು ವಿಶೇಷವಾಗಿ ನಿರಾಶಾದಾಯಕವಾಗಿತ್ತು. “ಮುಂದಿನ ಕೆಲವು ಕಾಲ ಮಧ್ಯಪ್ರವೇಶ ಮಾಡಲು” ತನಗೆ ಮನಸ್ಸಿಲ್ಲ ಎಂದು ಅದು ಹೇಳಿತು. ಇದು ಸರಕಾರದ ಧೋರಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ನ್ಯಾಯಾಲಯವು ಅತಿಕ್ರಮಣ ಮಾಡಲು ಬಯಸುವುದಿಲ್ಲ ಎಂದು ಕೂಡಾ ಹೇಳಿತು. ಅದು ಕೇಳಿದ ಇನ್ನೊಂದು ಪ್ರಶ್ನೆಯೆಂದರೆ, “ಸರಕಾರವೇ ಊಟಕೊಡುತ್ತಿರುವಾಗ, ವೇತನದ ಅಗತ್ಯವೇನು?” (ಸರಕಾರದ ಊಟದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ!)

ಸಾಂವಿಧಾನಿಕ ವಿದ್ವಾಂಸ ಗೌತಮ್ ಭಾಟಿಯಾ ಅವರು ಹೇಳುವಂತೆ, ಸರಕಾರದ ಕಾರ್ಯಾಚರಣೆಯು ವಲಸೆ ಕಾರ್ಮಿಕರ ಜೀವನೋಪಾಯ ನಷ್ಟಕ್ಕೆ ನೇರ ಹೊಣೆ. ಲಾಕ್‌ಡೌನ್ ಎಲ್ಲಾ ಸಂಪನ್ಮೂಲ ಮತ್ತು ಸಂಚಾರಕ್ಕೆ ತಡೆಯೊಡ್ಡಿತು. ಭಾರತದಾದ್ಯಂತ ಸುಮಾರು ನಾಲ್ಕು ಕೋಟಿಗಳಷ್ಟಿರುವ ವಲಸೆ ಕಾರ್ಮಿಕರು- ಮೊದಲಾಗಿ ಮತ್ತು ಅತ್ಯಂತ ಹೆಚ್ಚು ಬಾಧಿತರು. ಲಾಕ್‌ಡೌನ್ ಒಂದು ಧೋರಣಾತ್ಮಕ ನಿರ್ಧಾರವಾಗಿರಬಹುದು. ಆದರೆ, ಈ ಧೋರಣಾತ್ಮಕ ನಿರ್ಧಾರವು ಸಂವಿಧಾನದ ವಿಧಿ 21ರಲ್ಲಿ ಪ್ರತಿಷ್ಟಾಪಿಸಲಾಗಿರುವ ವಲಸೆ ಕಾರ್ಮಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ವ್ಯಾವಹಾರಿಕವಾಗಿ ನೋಡಿದರೆ, ಸುಪ್ರೀಂಕೋರ್ಟ್ ಸರಕಾರದ ಕಾರ್ಯವನ್ನು ಪರಿಶೀಲಿಸಿ ಸಾಂವಿಧಾನಿಕ ಮಾನದಂಡದೊಂದಿಗೆ ತುಲನೆ ಮಾಡಲು ಕರ್ತವ್ಯಬದ್ಧವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...