Homeಮುಖಪುಟಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

ಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

- Advertisement -
- Advertisement -

ಜೂನ್ 4 ರಂದು ಮಂಗಳವಾರ ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟಿಸುವ ವೇಳೆ ವಿವಿಧ ರಾಜ್ಯಗಳ 362 ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮೂಲಕ ಚಲಾವಣೆಯಾದ 5,54,598 ಮತಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಕಸದ ಬುಟ್ಟಿಗೆ ಹಾಕಿದೆ ಎಂದು ವರದಿಯಾಗಿದೆ.

ಅಲ್ಲದೆ, ಚುನಾವಣಾ ಆಯೋಗ 176 ಕ್ಷೇತ್ರಗಳಲ್ಲಿ 35,093 ಇವಿಎಂ ಮತಗಳನ್ನು ಹೆಚ್ಚುವರಿಯಾಗಿ ದಾಖಲಿಸಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಎರಡು ಅಂಕಿ ಅಂಶಗಳ ನಡುವೆ ತಾಳೆಯಾಗದೆ 542 ಕ್ಷೇತ್ರಗಳ ಪೈಕಿ 538ರಲ್ಲಿ ಮತಗಳ ಅಂತರ ಕಂಡು ಬಂದಿದೆ. ಅರ್ಥಾತ್ ಈ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಲಾದ ಮತಗಳ ಸಂಖ್ಯೆ ಮತ್ತು ಫಲಿತಾಂಶದ ದಿನ ಎಣಿಕೆ ಮಾಡಲಾದ ಮತಗಳ ಸಂಖ್ಯೆಗಳು ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ (ಅಂಚೆ ಮತಗಳು ಹೊರತುಪಡಿಸಿ). ಕನಿಷ್ಠ 267 ಕ್ಷೇತ್ರಗಳಲ್ಲಿ ಚಲಾಯಿತ ಮತಗಳು ಮತ್ತು ಎಣಿಸಲಾದ ಮತಗಳ ನಡುವಿನ ವ್ಯತ್ಯಾಸ 500ಕ್ಕೂ ಹೆಚ್ಚಿದೆ.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆದ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಅಂಕಿ ಅಂಶಗಳನ್ನು ಚುನಾವಣಾ ಆಯೋಗ ಮೇ 25ರಂದು ಬಿಡುಗಡೆ ಮಾಡಿತ್ತು. ಆಯೋಗದ ಪ್ರಕಾರ ಈ ಕ್ಷೇತ್ರದಲ್ಲಿ ಚಲಾಯಿಸಿದ ಇವಿಎಂ ಮತಗಳ ಸಂಖ್ಯೆ 14,30,738. ಆದರೆ, ಜೂನ್ 4ರ ಮತ ಎಣಿಕೆಯಲ್ಲಿ ಎಣಿಸಲಾದ ಮತಗಳ ಸಂಖ್ಯೆ 14,13,947. ಅಂದರೆ 16,791 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ.

ಏಪ್ರಿಲ್ 26ರಂದು ಮತದಾನ ನಡೆದ ಅಸ್ಸಾಮಿನ ಕರೀಮ್ ಗಂಜ್ ಕ್ಷೇತ್ರದಲ್ಲಿ ಆಯೋಗದ ಅಂಕಿ ಅಂಶಗಳ ಪ್ರಕಾರ ಚಲಾಯಿಸಲಾದ ಒಟ್ಟು ಇವಿಎಂ ಮತಗಳು 11,32,538. ಆದರೆ, ಫಲಿತಾಂಶದ ದಿನದಂದು ಎಣಿಸಲಾದ ಮತಗಳ ಸಂಖ್ಯೆ 11,40,349. ಹೆಚ್ಚುವರಿಯಾಗಿ 3,811 ಮತಗಳನ್ನು ಹೆಚ್ಚುವರಿಯಾಗಿ ಎಣಿಸಲಾಗಿದೆ.

ಈ ಎರಡು ಅಂಕಿ ಅಂಶಗಳು ತಾಳೆಯಾಗದೆ ಇರುವುದಕ್ಕೆ ಆಯೋಗ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಕ್ಸ್‌ನಲ್ಲಿ ಉತ್ತರ ಪ್ರದೇಶಕ್ಕೆ ಸೀಮಿತಗೊಂಡಂತೆ ಈ ವ್ಯತ್ಯಾಸದ ಕುರಿತು ವಿವರಣೆ ನೀಡಿದ್ದಾರೆ.

“ಚುನಾವಣಾ ಆಯೋಗ ಮತ್ತು ಹಲವಾರು ಕೈಪಿಡಿಗಳಲ್ಲಿ ಒದಗಿಸಲಾಗಿರುವ ಸವಿವರ ಶಿಷ್ಟಾಚಾರದ (ಪ್ರೋಟೋಕಾಲ್) ಪ್ರಕಾರ ಹಲವು ನಿರ್ದಿಷ್ಟ ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಿಲ್ಲ. ಹೀಗಾಗಿ, ಚಲಾಯಿತ ಮತಗಳು ಮತ್ತು ಎಣಿಸಿದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಸಲು ಮತದಾನ ಶುರುವಾಗುವ ಮುನ್ನ ಕಂಟ್ರೋಲ್ ಯೂನಿಟ್‌ನಲ್ಲಿ ಉಳಿದಿರಬಹುದಾದ ಅಣಕು ಚುನಾವಣಾ ಅಂಕಿ ಅಂಶವನ್ನು ಚುನಾವಣಾಧಿಕಾರಿ ಅಳಿಸಲು ಸಾಧ್ಯವಾಗದೆ ಹೋದಾಗ ಅಥವಾ ವಿವಿಪ್ಯಾಟ್ ನಲ್ಲಿರುವ ಅಣಕು ಮತ ಚೀಟಿಗಳನ್ನು ಅಸಲು ಮತದಾನ ಆರಂಭ ಆಗುವ ಮುನ್ನ ತೆಗೆದು ಹಾಕದೆ ಇದ್ದಾಗ ಈ ವ್ಯತ್ಯಾಸ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.

ಎರಡನೆಯದಾಗಿ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಒಟ್ಟು ಚಲಾಯಿತ ಮತಗಳ ಸಂಖ್ಯೆಗೂ ಚುನಾವಣಾಧಿಕಾರಿ ಭರ್ತಿ ಮಾಡಿದ ನಮೂನೆ 17ಸಿ ಯಲ್ಲಿ ದಾಖಲಿಸಿದ ಒಟ್ಟು ಚಲಾಯಿತ ಮತಗಳಿಗೂ ಅಂತರವಿದ್ದಾಗ ಈ ವ್ಯತ್ಯಾಸ ಕಂಡು ಬಂದಿದೆ. ಈ ಎರಡೂ ಸನ್ನಿವೇಶಗಳಲ್ಲಿ ಚುನಾವಣಾಧಿಕಾರಿಯಿಂದ ಆಕಸ್ಮಿಕವಾಗಿ ಜರುಗುವ ದೋಷಗಳಿವು. ಉದ್ದೇಶಪೂರ್ವಕ ಅಲ್ಲ. ಎಲೆಕ್ಟ್ರಾನಿಕ್ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಮತದಾನದ ದಿನ ಬೆಳಗಿನ ಜಾವ ಐದಕ್ಕೆ ಅಣಕು ಮತದಾನ ನಡೆಯುತ್ತದೆ. ಪ್ರತಿ ಅಭ್ಯರ್ಥಿಗೆ ಐದು ಅಣಕು ಮತಗಳನ್ನು ಹಾಕಲಾಗುತ್ತದೆ. ಅವುಗಳ ಫಲಿತಾಂಶಗಳನ್ನು ಆನಂತರ ಪರೀಕ್ಷಿಸಲಾಗುತ್ತದೆ.

ವಾಸ್ತವ ಮತದಾನ ಆರಂಭ ಆಗುವ ಮುನ್ನ ಕಂಟ್ರೋಲ್ ಯೂನಿಟ್‌ನಿಂದ ಈ ಮತಗಳನ್ನು ಚುನಾವಣಾಧಿಕಾರಿ ಅಳಿಸಿ ಹಾಕಬೇಕು. ನಮೂನೆ 17 ಸಿ ಎಂಬುದು ಪ್ರತಿಯೊಂದು ಮತಗಟ್ಟೆಯ ಮತದಾನದ ಸಮಗ್ರ ದಾಖಲೆ. ಪ್ರತಿಯೊಂದು ಮತಗಟ್ಟೆಗೆ ಹಂಚಿಕೆ ಮಾಡಲಾದ ಒಟ್ಟು ಮತದಾರರ ಸಂಖ್ಯೆ, ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು ಮತದಾರರ ಸಂಖ್ಯೆ, ಮತದಾನ ಮಾಡದೆ ಇರುವ ಮತದಾರರ ಸಂಖ್ಯೆ, ಮತದಾನ ಮಾಡಲು ಅವಕಾಶ ನಿರಾಕರಿಸಲಾದವರ ಸಂಖ್ಯೆ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮುಖಾಂತರ ಚಲಾಯಿತ ಮತಗಳ ಸಂಖ್ಯೆ ಹಾಗೂ ಮತಪತ್ರಗಳು ಮತ್ತು ಪೇಪರ್ ಮೊಹರುಗಳ ಕುರಿತ ವಿವರಗಳನ್ನು ಫಾರ್ಮ್ 17 ಸಿ ಹೊಂದಿರುತ್ತದೆ.

ಆದರೆ, ಯಾವ್ಯಾವ ಸನ್ನಿವೇಶಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಬಹುದು ಎಂಬುವುದಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿಲ್ಲ.

ಬಿಹಾರದ ಬಕ್ಸರ್‌ (1010), ಮಧ್ಯ ಪ್ರದೇಶದ ಮಂಡ್ಲಾ (1089), ಆಂಧ್ರ ಪ್ರದೇಶದ ಓಂಗೋಲ್ (1467) ಹಾಗೂ ಅಸ್ಸಾಮಿನ ಕರೀಮ್ ಗಂಜ್ (3811) ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಲಾಗಿದೆ. ಕರೀಮ್ ಗಂಜ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಕೃಪಾನಾಥ ಮಲ್ಲಾ 18,360 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಡಿಶಾದ ಜಜಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಬೀಂದ್ರ ನಾರಾಯಣ ಬೆಹೆರ ಅವರು ಕೇವಲ 1,587 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಣಿಸಲಾಗಿರುವ ಹೆಚ್ಚುವರಿ ಮತಗಳು 809.

ಈ ವ್ಯತ್ಯಾಸಗಳಿಗೆ ಕ್ಷೇತ್ರವಾರು ನಿರ್ದಿಷ್ಟ ವಿವರಣೆಗಳನ್ನು ನೀಡಬೇಕೆಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ಸಹಸಂಸ್ಥಾಪಕ ಜಗದೀಪ್ ಛೋಕರ್ ಚುನಾವಣಾ ಆಯೋಗವನ್ನು ಒತ್ತಾಯಪಡಿಸಿದ್ದಾರೆ.

ಇವಿಎಂ ಮತಗಳ ಹೆಚ್ಚುವರಿ ಅಥವಾ ಕೊರತೆಯ ಕುರಿತು ಆಯೋಗ ಈವರೆಗೆ ಸಾಮಾನ್ಯ ವಿವರಣೆ ನೀಡಿದೆ. ಅದೂ ಟ್ವಿಟರ್ ನಲ್ಲಿ. ನಿರ್ದಿಷ್ಟ ವಿವರಗಳನ್ನು ನೀಡಲೇಬೇಕು. ಈ ಕಾರಣಕ್ಕಾಗಿ ನಮೂನೆ 17ಸಿ ಯನ್ನು ಸಾರ್ವಜನಿಕಗೊಳಿಸಬೇಕು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ನೀಡುವ ಅಂಶವಿದು. ಚುನಾವಣೆಯ ಫಲಿತಾಂಶಗಳ ಕುರಿತು ನಾವು ಸಂದೇಹ ವ್ಯಕ್ತಪಡಿಸುತ್ತಿಲ್ಲ. ಆದರೆ, ಮತ ಎಣಿಕೆಯ ಕುರಿತು ಪಾರದರ್ಶಕವಾದ ಮತ್ತು ಕಟ್ಟು ನಿಟ್ಟಾದ ವ್ಯವಸ್ಥೆ ಇರಲೇಬೇಕು ಎಂಬುವುದು ಛೋಕರ್ ಅಭಿಪ್ರಾಯ.

ತಮಿಳುನಾಡಿನ ತಿರುವಳ್ಳೂರಿನಲ್ಲಿ ಚಲಾಯಿತ ಮತಗಳಿಗಿಂತ 16,791 ಕಡಿಮೆ ಮತಗಳನ್ನು ಎಣಿಸಲಾಗಿದೆ. ಅಸ್ಸಾಮಿನ ಕೋಕ್ರಝಾರ್ ನಲ್ಲಿ ಇಂತಹ ಮತಗಳ ಸಂಖ್ಯೆ 10,760. ಒಡಿಶಾದ ಧೇಂಕನಾಳದಲ್ಲಿ 9,427. ಕೇರಳದ ಆಲಪ್ಪುಝದಲ್ಲಿ 7,928 ಮತ್ತು ಆಂಧ್ರ ಪ್ರದೇಶದ ಗುಂಟೂರಿನಲ್ಲಿ 7,928.

ಕೋಕ್ರಝಾರ್‌ನಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಜೊಯೊಂತ ಬಸುಮತಾರಿ 51,580 ಮತಗಳಿಂದ ಗೆದ್ದಿದ್ದಾರೆ. ಉತ್ತರ ಪ್ರದೇಶದ ಅಲೀಗಢದಲ್ಲಿ ಬಿಜೆಪಿಯ ಸತೀಶ್ ಕುಮಾರ್ ಗೌತಮ್ 15,647 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಎಣಿಕೆಗೆ ಪರಿಗಣಿಸದೆ ಕೈ ಬಿಟ್ಟ ಮತಗಳ ಸಂಖ್ಯೆ 5,896.

2019ರಲ್ಲಿಯೂ ಇಂತಹುದೇ ದೋಷಗಳನ್ನು ಕ್ವಿಂಟ್ ವರದಿ ಬಯಲು ಮಾಡಿತ್ತು. ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ದೋಷಗಳನ್ನು ಸರಿಪಡಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟನ್ನು ಕೋರಿತ್ತು. ವಿವಿಪ್ಯಾಟ್ ಮತಚೀಟಿಗಳು ಮತ್ತು ಇವಿಎಂಗಳ ಮತಗಳನ್ನು ಸಂಪೂರ್ಣವಾಗಿ ಪರಸ್ಪರ ತಾಳೆ ನೋಡಬೇಕೆಂಬ ಅಹವಾಲಿನ ಜೊತೆಗೆ ಈ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

ನಾಲ್ಕು ಕೋಟಿ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಿರುವುದಾಗಿಯೂ, ಎಣಿಸಲಾದ ಮತಗಳು ಮತ್ತು ವಿವಿಪ್ಯಾಟ್ ಚೀಟಿಗಳ ಸಂಖ್ಯೆಗಳ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವೆಂದೂ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ತೀರ್ಪು ಹೊರಬಿದ್ದಿತ್ತು.

ಕೃಪೆ : ದಿ ಕ್ವಿಂಟ್ 

ಇದನ್ನೂ ಓದಿ : ಮೋದಿ ನೇತೃತ್ವದ ನೂತನ ಎನ್‌ಡಿಎ ಸರಕಾರದಲ್ಲಿ ಮುಸ್ಲಿಮರಿಗೆ ಸಿಗದ ಪ್ರಾತಿನಿಧ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...