Homeಮುಖಪುಟಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

ಲೋಕಸಭಾ ಚುನಾವಣೆ: 362 ಕ್ಷೇತ್ರಗಳಲ್ಲಿ 5,54,598 ಮತಗಳನ್ನು ಎಣಿಕೆಗೆ ಪರಿಗಣಿಸದೆ ಕೈಬಿಡಲಾಗಿದೆ

- Advertisement -
- Advertisement -

ಜೂನ್ 4 ರಂದು ಮಂಗಳವಾರ ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟಿಸುವ ವೇಳೆ ವಿವಿಧ ರಾಜ್ಯಗಳ 362 ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮೂಲಕ ಚಲಾವಣೆಯಾದ 5,54,598 ಮತಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಕಸದ ಬುಟ್ಟಿಗೆ ಹಾಕಿದೆ ಎಂದು ವರದಿಯಾಗಿದೆ.

ಅಲ್ಲದೆ, ಚುನಾವಣಾ ಆಯೋಗ 176 ಕ್ಷೇತ್ರಗಳಲ್ಲಿ 35,093 ಇವಿಎಂ ಮತಗಳನ್ನು ಹೆಚ್ಚುವರಿಯಾಗಿ ದಾಖಲಿಸಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಎರಡು ಅಂಕಿ ಅಂಶಗಳ ನಡುವೆ ತಾಳೆಯಾಗದೆ 542 ಕ್ಷೇತ್ರಗಳ ಪೈಕಿ 538ರಲ್ಲಿ ಮತಗಳ ಅಂತರ ಕಂಡು ಬಂದಿದೆ. ಅರ್ಥಾತ್ ಈ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಲಾದ ಮತಗಳ ಸಂಖ್ಯೆ ಮತ್ತು ಫಲಿತಾಂಶದ ದಿನ ಎಣಿಕೆ ಮಾಡಲಾದ ಮತಗಳ ಸಂಖ್ಯೆಗಳು ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ (ಅಂಚೆ ಮತಗಳು ಹೊರತುಪಡಿಸಿ). ಕನಿಷ್ಠ 267 ಕ್ಷೇತ್ರಗಳಲ್ಲಿ ಚಲಾಯಿತ ಮತಗಳು ಮತ್ತು ಎಣಿಸಲಾದ ಮತಗಳ ನಡುವಿನ ವ್ಯತ್ಯಾಸ 500ಕ್ಕೂ ಹೆಚ್ಚಿದೆ.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆದ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಅಂಕಿ ಅಂಶಗಳನ್ನು ಚುನಾವಣಾ ಆಯೋಗ ಮೇ 25ರಂದು ಬಿಡುಗಡೆ ಮಾಡಿತ್ತು. ಆಯೋಗದ ಪ್ರಕಾರ ಈ ಕ್ಷೇತ್ರದಲ್ಲಿ ಚಲಾಯಿಸಿದ ಇವಿಎಂ ಮತಗಳ ಸಂಖ್ಯೆ 14,30,738. ಆದರೆ, ಜೂನ್ 4ರ ಮತ ಎಣಿಕೆಯಲ್ಲಿ ಎಣಿಸಲಾದ ಮತಗಳ ಸಂಖ್ಯೆ 14,13,947. ಅಂದರೆ 16,791 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ.

ಏಪ್ರಿಲ್ 26ರಂದು ಮತದಾನ ನಡೆದ ಅಸ್ಸಾಮಿನ ಕರೀಮ್ ಗಂಜ್ ಕ್ಷೇತ್ರದಲ್ಲಿ ಆಯೋಗದ ಅಂಕಿ ಅಂಶಗಳ ಪ್ರಕಾರ ಚಲಾಯಿಸಲಾದ ಒಟ್ಟು ಇವಿಎಂ ಮತಗಳು 11,32,538. ಆದರೆ, ಫಲಿತಾಂಶದ ದಿನದಂದು ಎಣಿಸಲಾದ ಮತಗಳ ಸಂಖ್ಯೆ 11,40,349. ಹೆಚ್ಚುವರಿಯಾಗಿ 3,811 ಮತಗಳನ್ನು ಹೆಚ್ಚುವರಿಯಾಗಿ ಎಣಿಸಲಾಗಿದೆ.

ಈ ಎರಡು ಅಂಕಿ ಅಂಶಗಳು ತಾಳೆಯಾಗದೆ ಇರುವುದಕ್ಕೆ ಆಯೋಗ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಕ್ಸ್‌ನಲ್ಲಿ ಉತ್ತರ ಪ್ರದೇಶಕ್ಕೆ ಸೀಮಿತಗೊಂಡಂತೆ ಈ ವ್ಯತ್ಯಾಸದ ಕುರಿತು ವಿವರಣೆ ನೀಡಿದ್ದಾರೆ.

“ಚುನಾವಣಾ ಆಯೋಗ ಮತ್ತು ಹಲವಾರು ಕೈಪಿಡಿಗಳಲ್ಲಿ ಒದಗಿಸಲಾಗಿರುವ ಸವಿವರ ಶಿಷ್ಟಾಚಾರದ (ಪ್ರೋಟೋಕಾಲ್) ಪ್ರಕಾರ ಹಲವು ನಿರ್ದಿಷ್ಟ ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಿಲ್ಲ. ಹೀಗಾಗಿ, ಚಲಾಯಿತ ಮತಗಳು ಮತ್ತು ಎಣಿಸಿದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಸಲು ಮತದಾನ ಶುರುವಾಗುವ ಮುನ್ನ ಕಂಟ್ರೋಲ್ ಯೂನಿಟ್‌ನಲ್ಲಿ ಉಳಿದಿರಬಹುದಾದ ಅಣಕು ಚುನಾವಣಾ ಅಂಕಿ ಅಂಶವನ್ನು ಚುನಾವಣಾಧಿಕಾರಿ ಅಳಿಸಲು ಸಾಧ್ಯವಾಗದೆ ಹೋದಾಗ ಅಥವಾ ವಿವಿಪ್ಯಾಟ್ ನಲ್ಲಿರುವ ಅಣಕು ಮತ ಚೀಟಿಗಳನ್ನು ಅಸಲು ಮತದಾನ ಆರಂಭ ಆಗುವ ಮುನ್ನ ತೆಗೆದು ಹಾಕದೆ ಇದ್ದಾಗ ಈ ವ್ಯತ್ಯಾಸ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.

ಎರಡನೆಯದಾಗಿ ಕಂಟ್ರೋಲ್ ಯೂನಿಟ್‌ನಲ್ಲಿ ದಾಖಲಾದ ಒಟ್ಟು ಚಲಾಯಿತ ಮತಗಳ ಸಂಖ್ಯೆಗೂ ಚುನಾವಣಾಧಿಕಾರಿ ಭರ್ತಿ ಮಾಡಿದ ನಮೂನೆ 17ಸಿ ಯಲ್ಲಿ ದಾಖಲಿಸಿದ ಒಟ್ಟು ಚಲಾಯಿತ ಮತಗಳಿಗೂ ಅಂತರವಿದ್ದಾಗ ಈ ವ್ಯತ್ಯಾಸ ಕಂಡು ಬಂದಿದೆ. ಈ ಎರಡೂ ಸನ್ನಿವೇಶಗಳಲ್ಲಿ ಚುನಾವಣಾಧಿಕಾರಿಯಿಂದ ಆಕಸ್ಮಿಕವಾಗಿ ಜರುಗುವ ದೋಷಗಳಿವು. ಉದ್ದೇಶಪೂರ್ವಕ ಅಲ್ಲ. ಎಲೆಕ್ಟ್ರಾನಿಕ್ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಮತದಾನದ ದಿನ ಬೆಳಗಿನ ಜಾವ ಐದಕ್ಕೆ ಅಣಕು ಮತದಾನ ನಡೆಯುತ್ತದೆ. ಪ್ರತಿ ಅಭ್ಯರ್ಥಿಗೆ ಐದು ಅಣಕು ಮತಗಳನ್ನು ಹಾಕಲಾಗುತ್ತದೆ. ಅವುಗಳ ಫಲಿತಾಂಶಗಳನ್ನು ಆನಂತರ ಪರೀಕ್ಷಿಸಲಾಗುತ್ತದೆ.

ವಾಸ್ತವ ಮತದಾನ ಆರಂಭ ಆಗುವ ಮುನ್ನ ಕಂಟ್ರೋಲ್ ಯೂನಿಟ್‌ನಿಂದ ಈ ಮತಗಳನ್ನು ಚುನಾವಣಾಧಿಕಾರಿ ಅಳಿಸಿ ಹಾಕಬೇಕು. ನಮೂನೆ 17 ಸಿ ಎಂಬುದು ಪ್ರತಿಯೊಂದು ಮತಗಟ್ಟೆಯ ಮತದಾನದ ಸಮಗ್ರ ದಾಖಲೆ. ಪ್ರತಿಯೊಂದು ಮತಗಟ್ಟೆಗೆ ಹಂಚಿಕೆ ಮಾಡಲಾದ ಒಟ್ಟು ಮತದಾರರ ಸಂಖ್ಯೆ, ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು ಮತದಾರರ ಸಂಖ್ಯೆ, ಮತದಾನ ಮಾಡದೆ ಇರುವ ಮತದಾರರ ಸಂಖ್ಯೆ, ಮತದಾನ ಮಾಡಲು ಅವಕಾಶ ನಿರಾಕರಿಸಲಾದವರ ಸಂಖ್ಯೆ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮುಖಾಂತರ ಚಲಾಯಿತ ಮತಗಳ ಸಂಖ್ಯೆ ಹಾಗೂ ಮತಪತ್ರಗಳು ಮತ್ತು ಪೇಪರ್ ಮೊಹರುಗಳ ಕುರಿತ ವಿವರಗಳನ್ನು ಫಾರ್ಮ್ 17 ಸಿ ಹೊಂದಿರುತ್ತದೆ.

ಆದರೆ, ಯಾವ್ಯಾವ ಸನ್ನಿವೇಶಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಬಹುದು ಎಂಬುವುದಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿಲ್ಲ.

ಬಿಹಾರದ ಬಕ್ಸರ್‌ (1010), ಮಧ್ಯ ಪ್ರದೇಶದ ಮಂಡ್ಲಾ (1089), ಆಂಧ್ರ ಪ್ರದೇಶದ ಓಂಗೋಲ್ (1467) ಹಾಗೂ ಅಸ್ಸಾಮಿನ ಕರೀಮ್ ಗಂಜ್ (3811) ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಲಾಗಿದೆ. ಕರೀಮ್ ಗಂಜ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಕೃಪಾನಾಥ ಮಲ್ಲಾ 18,360 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಡಿಶಾದ ಜಜಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಬೀಂದ್ರ ನಾರಾಯಣ ಬೆಹೆರ ಅವರು ಕೇವಲ 1,587 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಣಿಸಲಾಗಿರುವ ಹೆಚ್ಚುವರಿ ಮತಗಳು 809.

ಈ ವ್ಯತ್ಯಾಸಗಳಿಗೆ ಕ್ಷೇತ್ರವಾರು ನಿರ್ದಿಷ್ಟ ವಿವರಣೆಗಳನ್ನು ನೀಡಬೇಕೆಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ಸಹಸಂಸ್ಥಾಪಕ ಜಗದೀಪ್ ಛೋಕರ್ ಚುನಾವಣಾ ಆಯೋಗವನ್ನು ಒತ್ತಾಯಪಡಿಸಿದ್ದಾರೆ.

ಇವಿಎಂ ಮತಗಳ ಹೆಚ್ಚುವರಿ ಅಥವಾ ಕೊರತೆಯ ಕುರಿತು ಆಯೋಗ ಈವರೆಗೆ ಸಾಮಾನ್ಯ ವಿವರಣೆ ನೀಡಿದೆ. ಅದೂ ಟ್ವಿಟರ್ ನಲ್ಲಿ. ನಿರ್ದಿಷ್ಟ ವಿವರಗಳನ್ನು ನೀಡಲೇಬೇಕು. ಈ ಕಾರಣಕ್ಕಾಗಿ ನಮೂನೆ 17ಸಿ ಯನ್ನು ಸಾರ್ವಜನಿಕಗೊಳಿಸಬೇಕು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ನೀಡುವ ಅಂಶವಿದು. ಚುನಾವಣೆಯ ಫಲಿತಾಂಶಗಳ ಕುರಿತು ನಾವು ಸಂದೇಹ ವ್ಯಕ್ತಪಡಿಸುತ್ತಿಲ್ಲ. ಆದರೆ, ಮತ ಎಣಿಕೆಯ ಕುರಿತು ಪಾರದರ್ಶಕವಾದ ಮತ್ತು ಕಟ್ಟು ನಿಟ್ಟಾದ ವ್ಯವಸ್ಥೆ ಇರಲೇಬೇಕು ಎಂಬುವುದು ಛೋಕರ್ ಅಭಿಪ್ರಾಯ.

ತಮಿಳುನಾಡಿನ ತಿರುವಳ್ಳೂರಿನಲ್ಲಿ ಚಲಾಯಿತ ಮತಗಳಿಗಿಂತ 16,791 ಕಡಿಮೆ ಮತಗಳನ್ನು ಎಣಿಸಲಾಗಿದೆ. ಅಸ್ಸಾಮಿನ ಕೋಕ್ರಝಾರ್ ನಲ್ಲಿ ಇಂತಹ ಮತಗಳ ಸಂಖ್ಯೆ 10,760. ಒಡಿಶಾದ ಧೇಂಕನಾಳದಲ್ಲಿ 9,427. ಕೇರಳದ ಆಲಪ್ಪುಝದಲ್ಲಿ 7,928 ಮತ್ತು ಆಂಧ್ರ ಪ್ರದೇಶದ ಗುಂಟೂರಿನಲ್ಲಿ 7,928.

ಕೋಕ್ರಝಾರ್‌ನಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಜೊಯೊಂತ ಬಸುಮತಾರಿ 51,580 ಮತಗಳಿಂದ ಗೆದ್ದಿದ್ದಾರೆ. ಉತ್ತರ ಪ್ರದೇಶದ ಅಲೀಗಢದಲ್ಲಿ ಬಿಜೆಪಿಯ ಸತೀಶ್ ಕುಮಾರ್ ಗೌತಮ್ 15,647 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಎಣಿಕೆಗೆ ಪರಿಗಣಿಸದೆ ಕೈ ಬಿಟ್ಟ ಮತಗಳ ಸಂಖ್ಯೆ 5,896.

2019ರಲ್ಲಿಯೂ ಇಂತಹುದೇ ದೋಷಗಳನ್ನು ಕ್ವಿಂಟ್ ವರದಿ ಬಯಲು ಮಾಡಿತ್ತು. ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ದೋಷಗಳನ್ನು ಸರಿಪಡಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟನ್ನು ಕೋರಿತ್ತು. ವಿವಿಪ್ಯಾಟ್ ಮತಚೀಟಿಗಳು ಮತ್ತು ಇವಿಎಂಗಳ ಮತಗಳನ್ನು ಸಂಪೂರ್ಣವಾಗಿ ಪರಸ್ಪರ ತಾಳೆ ನೋಡಬೇಕೆಂಬ ಅಹವಾಲಿನ ಜೊತೆಗೆ ಈ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

ನಾಲ್ಕು ಕೋಟಿ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಿರುವುದಾಗಿಯೂ, ಎಣಿಸಲಾದ ಮತಗಳು ಮತ್ತು ವಿವಿಪ್ಯಾಟ್ ಚೀಟಿಗಳ ಸಂಖ್ಯೆಗಳ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವೆಂದೂ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ತೀರ್ಪು ಹೊರಬಿದ್ದಿತ್ತು.

ಕೃಪೆ : ದಿ ಕ್ವಿಂಟ್ 

ಇದನ್ನೂ ಓದಿ : ಮೋದಿ ನೇತೃತ್ವದ ನೂತನ ಎನ್‌ಡಿಎ ಸರಕಾರದಲ್ಲಿ ಮುಸ್ಲಿಮರಿಗೆ ಸಿಗದ ಪ್ರಾತಿನಿಧ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...