Homeಮುಖಪುಟಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

- Advertisement -
- Advertisement -

ಆಗಸದ ಅಲೆಮಾರಿಗಳ ನೆರಳು ಬೆಳಕಿನಾಟವೇ ಗ್ರಹಣ. ಗ್ರಹಣದ ಸಮಯದಲ್ಲಿ ತಾರ್ಕಿಕ ನಿಲುವುಗಳಿಲ್ಲದ, ಅಸಂಬದ್ಧವಾದ ಮೂಡ ನಂಬಿಕೆಗಳನ್ನು ಮೂಟೆಗಟ್ಟಲೆ ಜನರ ಮನಸ್ಸಿನಲ್ಲಿ ತುರುಕುವ ಕೆಲಸವನ್ನು ಇಂದಿಗೂ ಹಲವು ಮಾಧ್ಯಮಗಳೂ ಮತ್ತು ಕೆಲವು ಸಂಸ್ಥೆಗಳು ನಡೆಸುತ್ತಲೇ ಬಂದಿದ್ದಾರೆ. ಜನಗಳು ಭಯಭೀತರಾಗಿ ಕುರುಡು ಭಕ್ತಿಯಿಂದ ತಮ್ಮ ಹತ್ತಿರ ಬಂದು ಒಂದಷ್ಟು ದುಡ್ಡು ಚೆಲ್ಲಬೇಕೆಂಬ ಬಯಕೆ ಅವರದ್ದು ಎಂಬುದು ಎಷ್ಟೋ ಜನರ ತಿಳಿವಳಿಕೆಯ ಭಾಗವಾಗದಿರುವುದು ದುಃಖದ ಸಂಗತಿಯಾಗಿದೆ. ಈ ತಿಂಗಳ ಭಾಗಶಃ ಚಂದ್ರಗ್ರಹಣ, ಮುಂದಿನ ಐದು ಶತಮಾನಗಳಲ್ಲಿಯೇ ದೀರ್ಘವಾದ ಚಂದ್ರ ಗ್ರಹಣ ಎಂಬ ಲೆಕ್ಕಚಾರವನ್ನು ಖಗೋಳ ವಿಜ್ಞಾನದಿಂದ ತಿಳಿಯಲಾಗಿದೆ. ಶತಮಾನಗಳಷ್ಟು ಭಯಪಡಿಸುವ ಮೂಢನಂಬಿಕೆಗಳನ್ನು ಇದರ ಸುತ್ತ ಈಗ ಹುಟ್ಟು ಹಾಕುತ್ತಾರೋ ಏನೋ?

ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದುಹೋಗುವಾಗ, ಈ ಮೂರೂ ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಇಂತಹ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಮರೆಮಾಚುತ್ತದೆ, ಆಗ ಸೂರ್ಯನ ಬೆಳಕು ಭೂಮಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಬೀಳುವುದಿಲ್ಲ. ಇದು ಸೂರ್ಯ ಗ್ರಹಣ. ಸೂರ್ಯ ಗ್ರಹಣ ಅಮಾವಾಸ್ಯೆಯ ದಿನದಂದೇ ನಡೆಯುತ್ತದೆ. ಆದರೆ, ಇದೇ ರೀತಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದುಹೋಗುವಾಗ, ಆ ಸಮಯದಲ್ಲೂ ಮೂರು ಆಕಾಶಕಾಯಗಳು ಸರಳ ರೇಖೆಯಲ್ಲಿ ಬರುತ್ತವೆ. ಆದರೆ ಇಲ್ಲಿ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹುಣ್ಣಿಮೆಯ ಚಂದ್ರನನ್ನು ಭೂಮಿಯ ನೆರಳು ಆವರಿಸುತ್ತಾ ಹೋಗುತ್ತದೆ. ಇದು ಚಂದ್ರ ಗ್ರಹಣ. ಚಂದ್ರ ಗ್ರಹಣ ಹುಣ್ಣಿಮೆಯಂದೇ ನಡೆಯುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ (ಸರಳ ರೇಖೆಯಲ್ಲಿ), ಸೂರ್ಯಗ್ರಹಣ ಮತ್ತು ಅಮಾವಾಸ್ಯೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ (ಸರಳ ರೇಖೆಯಲ್ಲಿ), ಚಂದ್ರಗ್ರಹಣ ಮತ್ತು ಹುಣ್ಣಿಮೆ. ಹಾಗಾದರೆ, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುತ್ತವೆಯಾ? ಇಲ್ಲಾ, ಇದಕ್ಕೆ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಕಕ್ಷೆ (Orbit).

ಭೂಮಿ ಸೂರ್ಯನ ಸುತ್ತು ಸುತ್ತುತ್ತಿರುವ ಕಕ್ಷೆಯು ಮತ್ತು ಚಂದ್ರ ಭೂಮಿಯ ಸುತ್ತು ಸುತ್ತುತ್ತಿರುವ ಕಕ್ಷೆಯು ಒಂದೆ ಸಮತಲದಲ್ಲಿ ಇಲ್ಲ. ಈ ಎರಡೂ ಕಕ್ಷೆಗಳು ಸುಮಾರು ಐದು ಡಿಗ್ರಿಯಷ್ಟು ಓರೆಯಾಗಿದ್ದು, ಎರಡು ಬಿಂದುಗಳಲ್ಲಿ ಮಾತ್ರ ಸಂಧಿಸುತ್ತವೆ (Intercepts). ಗ್ರಹಣಗಳು ನಡೆಯಬೇಕಾದರೆ ಅದಕ್ಕಿರುವ ಮೂಲ ನಿಯಮ: ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಇರುವ ಸಂದರ್ಭ ಬರಬೇಕಿರುವುದು. ಇಂತಹ ಸಂದರ್ಭ ಉಂಟಾಗಬೇಕೆಂದರೆ, ಚಂದ್ರನು ತನ್ನ ಕಕ್ಷೆಯಲ್ಲಿ ಸುತ್ತುವಾಗ, ಭೂಮಿಯ ಕಕ್ಷೆಯ ಸಮತಲದಲ್ಲಿ (Ecliptic Plane) ಸಂಧಿಸುವ ಬಿಂದುಗಳಲ್ಲಿ ಅದು ಬಂದಾಗ ಹಾಗೂ ಆಗ ಅಮಾವಾಸ್ಯೆ ಅಥವಾ ಹುಣ್ಣಿಮೆ ಇದ್ದರೆ ಮಾತ್ರ ಗ್ರಹಣಗಳು ನಡೆಯಲು ಸಾಧ್ಯ. ಈ ಕಾರಣದಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುವುದಿಲ್ಲ ಹಾಗೂ ಗ್ರಹಣಗಳು ವಿರಳವಾಗಿರುವುದು. ಆದರೆ, ಭೂಮಿ ಮತ್ತು ಚಂದ್ರನ ಚಲನೆಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಲು ಸಾಧ್ಯವಾಗಿರುವುದರಿಂದ ನಿಖರವಾಗಿ ಯಾವಾಗ ಗ್ರಹಣಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಸೂರ್ಯ ಗ್ರಹಣವನ್ನು ವೀಕ್ಷಿಸುವಾಗ ಕೆಲವು ಸುರಕ್ಷತಾ ಮೆನ್ನೆಚ್ಚರಿಕೆಯನ್ನು ವಹಿಸಲೇಬೇಕಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನನ್ನು ಎಂದೂ ಬರಿಗಣ್ಣಿನಲ್ಲಿ ನೋಡುವುದು ತಪ್ಪು. ಮನುಷ್ಯನ ಅಂಗಗಳಲ್ಲಿ ಕಣ್ಣು ಅತೀ ಸೂಕ್ಷ್ಮವಾದದ್ದು. ಸೂರ್ಯನ ತೀಕ್ಷ್ಣವಾದ ಕಿರಣಗಳು ಕಣ್ಣಿನ ರೆಟಿನಾವನ್ನು ಹಾಳು ಮಾಡುವ ಸಂಭವವಿರುತ್ತದೆ. ಯಾವುದೇ ಸಮಯದಲ್ಲೂ ಕೂಡ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಸಮಯದಲ್ಲೂ ಕೂಡು ಭೂಮಿಯ ಜೀವರಾಶಿಗೆ ತೊಂದರೆ ಮಾಡವ ಯಾವ ಹಾನಿಕಾರಕ
ಕಿರಣಗಳೂ ಸುರ್ಯನಿಂದ ಬರುವುದಿಲ್ಲ. ಇವೆಲ್ಲವೂ ಕೇವಲ ಕಪೋಲಕಲ್ಪಿತವಾದವು. ಗ್ರಹಣಗಳು ಕೇವಲ ಸಾಪೇಕ್ಷವಾದ (relative) ಘಟನೆಗಳು. ಗ್ರಹಣದ ಸಮಯದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನಲ್ಲಿ ಯಾವುದೇ ಭೌತಿಕವಾದ ಬದಲಾವಣೆಗಳೂ ನಡೆಯುವುದಿಲ್ಲ. ಇದು ಕೇವಲ ನೆರಳು ಬೆಳಕಿನ ಆಟ. ಸೂರ್ಯನನ್ನು ನಾವು ಎಂದಿಗೂ ನೇರ ಕಣ್ಣುಗಳಿಂದ ನೋಡಬಾರದು, ಅದು ಗ್ರಹಣದ ಸಮಯಕ್ಕೂ ಅನ್ವಯವಾಗುತ್ತದೆ. ಸೂರ್ಯನನ್ನು ನೋಡಬೇಕಾದರೆ, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು ಬಳಸಿ ನೋಡುವುದು ಸುರಕ್ಷಿತ. ಗ್ರಹಣದ ಸಮಯದಲ್ಲೂ ಕೂಡ ಸೌರ ಕನ್ನಡಕದ ಮೂಲಕವೇ ಸೂರ್ಯ ಗ್ರಹಣವನ್ನು ನೋಡಬೇಕು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿದರೆ, ಅವುಗಳಿಗೂ ಸೂಕ್ತವಾದ ಸೌರ ಶೋಧಕ (Sun Filters) ಅಳವಡಿಸಿಯೇ ನೋಡಬೇಕು. ಆದರೆ, ಚಂದ್ರಗ್ರಹಣ ಇದಕ್ಕೆ ವ್ಯತಿರಿಕ್ತವಾದದ್ದು. ಎಲ್ಲಾ ವಿಧದ ಚಂದ್ರ ಗ್ರಹಣಗಳನ್ನು ಬರಿಗಣ್ಣಿನಿಂದಲೇ ನೋಡಬಹುದು. ಕೆಲವು ಸಮಯಗಳಲ್ಲಿ ಹುಣ್ಣಿಮೆಯ ಚಂದ್ರ ಪ್ರಕಾಶಮಾನವಾಗಿ ಇರುವುದರಿಂದ ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳಲ್ಲಿ ನೋಡಬೇಕಾದರೆ ಚಂದ್ರ ಶೋಧಕಗಳನ್ನು (Moon Filters) ಬಳಸುತ್ತಾರೆ.

ಈ ತಿಂಗಳ ನವೆಂಬರ್ 19ರಂದು ಹುಣ್ಣಿಮೆ. ಅಂದು ಆಗಸದಲ್ಲಿ ಭಾಗಶಃ ಚಂದ್ರ ಗ್ರಹಣ (Partial Lunar Eclipse) ಗೋಚರಿಸಲಿದೆ. ಈ ಗ್ರಹಣವನ್ನು ಅಮೆರಿಕಾ, ಯುರೋಪ್, ಪೂರ್ವ ಎಷ್ಯಾ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿ ನೋಡಬಹುದಾಗಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಂದ್ರ ಹುಟ್ಟುವಾಗ ಈ ಗ್ರಹಣವನ್ನು ನೋಡಬಹುದಾಗಿರುತ್ತದೆ. ದಕ್ಷಿಣ ಭಾರತದಿಂದ ಈ ಗ್ರಹಣ ಗೋಚರಿಸುವುದಿಲ್ಲ. ಈ ಗ್ರಹಣದ ವಿಶೇಷ ಎಂದರೆ ಇದು ಮುಂದಿನ ಸುಮಾರು ಐದು ಶತಮಾನಗಳಲ್ಲಿ ನಡೆಯಬಹುದಾದ ಭಾಗಶಃ ಚಂದ್ರಗ್ರಹಣಗಳಲ್ಲಿಯೇ ಅತ್ಯಂತ ದೀರ್ಘವಾದದ್ದು. ಈ ಕಾರಣದಿಂದು ಈ ಭಾಗಶಃ ಚಂದ್ರ ಗ್ರಹಣ ಹೆಚ್ಚು ಸುದ್ದಿಯಲ್ಲಿದೆ. ಭಾಗಶಃ ಏಕೆಂದರೆ, ಚಂದ್ರ ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಶೇ.97 ಭಾಗದಲ್ಲಿ ಬೀಳುತ್ತಿರುತ್ತದೆ. ಶೇ. 100 ಭಾಗದಲ್ಲಿ ಬಿದ್ದಿದ್ದರೆ ಅದು ಪೂರ್ಣಚಂದ್ರ ಗ್ರಹಣವಾಗುತ್ತಿತ್ತು.

1451ರಿಂದ 2650ರವರೆಗೆ ಗೋಚರಿಸಿರುವ/ಗೋಚರಿಸಲಿರುವ ದೀರ್ಘವಾದ ಭಾಗಶಃ ಚಂದ್ರ ಗ್ರಹಣಗಳನ್ನು, ಅವುಗಳ ಅವಧಿಗೆ ಅನುಸಾರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ.

1. 19.11.2021- 6 ಗಂಟೆ 2 ನಿಮಿಷ
2. 30.11.2039- 6 ಗಂಟೆ 0 ನಿಮಿಷ
3. 11.12.2057- 5 ಗಂಟೆ 59 ನಿಮಿಷ
4. 22.12.2075- 5 ಗಂಟೆ 58 ನಿಮಿಷ
5. 9.10.2489- 6 ಗಂಟೆ 0 ನಿಮಿಷ

ಮೇಲಿನ ಪಟ್ಟಿಗಳಲ್ಲಿ ನವೆಂಬರ್ 2021ರ ಭಾಗಶಃ ಚಂದ್ರ ಗ್ರಹಣ ಐದು ಶತಮಾನಗಳಲ್ಲಿಯೇ ದೀರ್ಘವಾದದ್ದು ಎಂಬುವುದು ತಿಳಿಯುತ್ತದೆ. ಈ ಹಿಂದೆ ಅಂದರೆ 2003ರ ನವೆಂಬರ್ ೯ರಂದು ನಡೆದ ಚಂದ್ರ ಗ್ರಹಣದ ಅವಧಿ 6 ಗಂಟೆ 3 ನಿಮಿಷಗಳಷ್ಟಿತ್ತು. ಆದರೆ, ಅದು ಭಾಗಶಃ ಚಂದ್ರ ಗ್ರಹಣವಾಗಿರದೆ, ಪೂರ್ಣ ಚಂದ್ರ ಗ್ರಹಣವಾಗಿತ್ತು.
ಈ ಕಾರಣಗಳಿಂದ ನವೆಂಬರ್ 19, 2021ರ ಭಾಗಶಃ ಚಂದ್ರ ಗ್ರಹಣ 15ನೇ ಶತಮಾನದಿಂದಲೂ ನಡೆದಿರುವ ಬಾಗಶಃ ಚಂದ್ರ ಗ್ರಹಣದಲ್ಲಿಯೇ ಅತ್ಯಂತ ದೀರ್ಘವಾದದ್ದು. ಇಂತಹದೇ ದೀರ್ಘವಾದ ಭಾಗಶಃ ಚಂದ್ರ ಗ್ರಹಣ ಮತ್ತೊಮ್ಮೆ ನಡೆಯವುದು ಫೆಬ್ರವರಿ 8, 2669ರಲ್ಲಿ!


ಇದನ್ನೂ ಓದಿ: ಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು – CMBR

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...