Homeಸಾಮಾಜಿಕಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

ಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

- Advertisement -
- Advertisement -

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು, ಯಾವ ಸರಕಾರಕ್ಕೂ ಸಹ್ಯವಾಗುವುದಿಲ್ಲ. ಕ್ರಮೇಣ ಅಂತಹವರನ್ನ ಅಧೈರ್ಯಗೊಳಿಸಿ ಮೆತ್ತಗಾಗಿಸುತ್ತವೆ. ಈಗ ತೀರಿಕೊಂಡ ಮಧುಕರ ಶೆಟ್ಟಿಯವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದವರು. ಇಂತಹ ಅಧಿಕಾರಿ ನಮ್ಮ ಚಿಕ್ಕಮಗಳೂರಿಗೆ ಎಸ್ಪಿಯಾಗಿ ಬಂದಾಗ ಸಾರ್ವಜನಿಕರಿಗೆ ಸಂಭ್ರಮವಾದರೆ, ಜನಪೀಡಕ ರಾಜಕಾರಣಿಗಳಿಗೆ ತೊಳ್ಳೆ ನಡುಕವುಂಟಾಯ್ತು. ಈ ಪೈಕಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಲಗೈಯಂತಿರುವ ಭೋಜೇಗೌಡ ಮತ್ತು ಸಿ.ಟಿ ರವಿ ಎಂಬ ಜಿಲ್ಲೆಯ ಸಮಸ್ಯೆಗಳು ಮಧುಕರ ಶೆಟ್ಟಿಯವರನ್ನ ಎದುರುಗೊಳ್ಳಲು ಹಿಂಜರಿಯತೊಡಗಿದವು. ಆದರೂ ಅವರನ್ನ ಎತ್ತಂಗಡಿ ಮಾಡಿಸಲು ಜೊತೆಯಾಗಿಯೇ ಶ್ರಮಿಸುತ್ತಿದ್ದವು. ಭೋಜೇಗೌಡ ಆಗಾಗ್ಗೆ ಕುಮಾರಸ್ವಾಮಿಗೆ ಎಸ್ಪಿ ವಿರುದ್ಧ ದೂರು ಹೇಳುವುದನ್ನೇ ಕಾಯಕ ಮಾಡಿಕೊಂಡರೆ ಸಿ.ಟಿ.ರವಿ ಎಸ್ಪಿಗೆ ಕೆಟ್ಟ ಹೆಸರು ತರಲು ಹವಣಿಸುತ್ತಿದ್ದರು. ಈ ಸವiಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಕಠಾರಿಯ ಧಕ್ಷ ಅಧಿಕಾರಿಯಾದ್ದರಿಂದ ರಾಜಕಾರಣಿಗಳ ಪುಂಗಿ ಬಂದಾಗಿತ್ತು. ಇಂತಹ ಉಸಿರುಗಟ್ಟುವ ಸನ್ನಿವೇಶದಲ್ಲಿ ಭೋಜೇಗೌಡ ಕುಮಾರಣ್ಣನ ಮೇಲೆ ವಿಪರೀತ ಒತ್ತಡ ತಂದಿದ್ದರಿಂದ ಮಧುಕರ ಶೆಟ್ಟರು ರಾಜ್ಯಪಾಲರ ಸೆಕ್ಯೂರಿಟಿ ಮುಖ್ಯಸ್ಥರಾಗಿ ವರ್ಗಾವಣೆಗೊಂಡರು! ಇದು ಒಬ್ಬ ದಕ್ಷ ಅಧಿಕಾರೊಗೆ ಸರಕಾರ ಮಾಡಿದ ತೀವ್ರ ತರದ ಅವಮಾನ. ಏಕೆಂದರೆ ಚಿಕ್ಕಮಗಳೂರ ಬಡವರು ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿಗಳು ನಮಗೆ ಯಾರಿಲ್ಲದಿದ್ದರೂ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಪೂರ್ಣ ರಕ್ಷಣೆಯಿದೆ ಎಂದು ಭಾವಿಸಿದ್ದರು. ಕಾಡಲ್ಲಿನ ನಕ್ಷಲರೂ ಕೂಡ ಮಧುಕರ ಶೆಟ್ಟರು ಎಸ್ಪಿಯಾಗಿರುವುದರಿಂದ ನಮಗಾವ ತೊಂದರೆಯಿಲ್ಲವೆಂದು ಭಾವಿಸಿದ್ದರು. ಎಸ್ಪಿ ಕೂಡ ಆ ನಕ್ಸಲರನ್ನ ಅಕ್ಕ-ಪಕ್ಕದ ಜಿಲ್ಲೆಗೆ ಓಡಿಸಿ ಎಂದು ಹೇಳಿದ್ದರು. ತಮ್ಮ ಇರುವಿಕೆಯ ಕಾರಣಕ್ಕೆ ಹಲವು ಸಮಸ್ಯೆಗಳು ಕರಗಿ ಹೋಗುವಂತೆ ನೋಡಿಕೊಂಡಿದ್ದ ಮಧುಕರ ಶೆಟ್ಟರಿಂದ ರಾಜಕಾರಣಿಗಳು ನಿರುದ್ಯೋಗಿಗಳಂತಾಗಿದ್ದರು. ಇಂತಿರುವಾಗ ನಮಗೆ ಬೇಕೇ ಇಲ್ಲದ ರಾಜ್ಯಪಾಲರೆಂಬ ಮುದಿಯಾನೆಯ ರಕ್ಷಣೆಗೆ ಹೋಗಿ ಅದರ ಹಿಂದೆ ನಿಂತಾಗ ಜಿಲ್ಲೆಯ ಕಿಡಿಗೇಡಿ ರಾಜಕಾರಣಿಗಳು ಕುಹಕವಾಗಿ ನಕ್ಕು ಸಂತೋಷ ವ್ಯಕ್ತಪಡಿಸಿದ್ದರು.
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಅವಮಾನವಾಗುತ್ತಿರುವುದು ಈ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಹೆಚ್.ಎಲ್.ನಾಗೇಗೌಡರು ಡಿ.ಸಿ.ಯಾಗಿದ್ದ ಕಾಲದಿಂದಲೂ ನಡೆದು ಬಂದಿದೆ. ಅದರಲ್ಲೂ ಬಿರೂರು ಶಾಸಕರಾಗಿದ್ದ ಲಕ್ಷ್ಮಯ್ಯ ಪಿಳ್ಳೆನಳ್ಳಿ ಊರ ಮುಂದೆ ನಿಂತು ಪ್ಯಾಂಟ್‍ಜಿಪ್ ತೆಗೆದು ತನ್ನ ವೈರಿಗಳ ಹೆಂಗಸರನ್ನು ಕರೆದು ತನ್ನ ತಾಕತ್ತು ತೋರುತ್ತೇನೆ ಎಂದಿದ್ದರು. ಇದನ್ನು ಕಂಡ ಬಿಪಿನ್ ಗೋಪಾಲಕೃಷ್ಣ ಎಂಬ ಎಸ್ಪಿ ಕೂಡಲೆ ಕ್ರಮ ಜರುಗಿಸಿದ್ದರಿಂದ ಅವರನ್ನು 24 ಗಂಟೆಯಲ್ಲಿ ವರ್ಗ ಮಾಡಿಸಿದ್ದರು. ಅದೇ ¯ಕ್ಷ್ಮಯ್ಯನವರ ಮಗ ಭೋಜೇಗೌಡ ಮಧುಕರ ಶೆಟ್ಟರನ್ನ ವರ್ಗ ಮಾಡಿಸಿದ್ದರು. ಕೆಟ್ಟ ಸರಕಾರಗಳು ಬಂದಾಗ ಒಳ್ಳೆ ಅಧಿಕಾರಿಗಳು ತೊಂದರೆ ಅವಮಾನಕ್ಕೊಳಗಾಗುವುದು ಸಾಮಾನ್ಯ. ಆದ್ದರಿಂದ ಮಧುಕರಶೆಟ್ಟರು ತಮ್ಮ ಸೇವಾವಧಿಯಲ್ಲಿ ನೋವನ್ನ ಅನುಭವಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ದಲಿತ ಜನಾಂಗದಿಂದ ಬಂದ ಬಿ.ಬಿ ನಿಂಗಯ್ಯ, ಮೋಟಮ್ಮ ಇಂತವರೆಲ್ಲಾ ಮಂತ್ರಿಗಳಾಗಿ ಮೆರೆದರು. ಆದರೂ ಭೂಮಾಲೀಕರ ನಿರಂತರ ಶೋಷಣೆಗೆ ತುತ್ತಾದ ದಲಿತರಿಗೆ ಹರ್ಷಗುಪ್ತ ಮತ್ತು ಮಧುಕರ ಶೆಟ್ಟರು ವಸತಿ ನಿರ್ಮಿಸಿಕೊಟ್ಟು ನಿರ್ಗತಿಕರ ಬಾಳಿಗೆ ಬೆಳಕಾದದ್ದು ವಿಶೇಷ ಇದರಿಂದ ಅರ್ಥವಾಗುವುದೇನೆಂದರೆ, ಈ ಪಂಚರಂಗಿ ರಾಜಕಾರಣಿಗಳಿಂದ ಏನೂ ಆಗುವುದಿಲ್ಲ. ಜನಪರ ಕಾಳಜಿಯ ಅಧಿಕಾರಿಗಳಿಂದ ಮಾತ್ರ ಜನ ನೆಮ್ಮದಿ ಕಾಣಬಲ್ಲರು ಎಂಬುದು ಸಾಬೀತಾಗಿದೆ. ಚಿಕ್ಕಮಗಳೂರಲ್ಲಿ ಎಷ್ಟೆಲ್ಲಾ ರಾಜಕಾರಣಿಗಳು ಆಗಿಹೋದರೂ ಜನಮಾನಸಲ್ಲುಳಿದವರು ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮಾತ್ರ ಎಂಬುದು ವಿಶೇಷ!

ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...