Homeಸಾಮಾಜಿಕಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

ಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

- Advertisement -
- Advertisement -

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು, ಯಾವ ಸರಕಾರಕ್ಕೂ ಸಹ್ಯವಾಗುವುದಿಲ್ಲ. ಕ್ರಮೇಣ ಅಂತಹವರನ್ನ ಅಧೈರ್ಯಗೊಳಿಸಿ ಮೆತ್ತಗಾಗಿಸುತ್ತವೆ. ಈಗ ತೀರಿಕೊಂಡ ಮಧುಕರ ಶೆಟ್ಟಿಯವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದವರು. ಇಂತಹ ಅಧಿಕಾರಿ ನಮ್ಮ ಚಿಕ್ಕಮಗಳೂರಿಗೆ ಎಸ್ಪಿಯಾಗಿ ಬಂದಾಗ ಸಾರ್ವಜನಿಕರಿಗೆ ಸಂಭ್ರಮವಾದರೆ, ಜನಪೀಡಕ ರಾಜಕಾರಣಿಗಳಿಗೆ ತೊಳ್ಳೆ ನಡುಕವುಂಟಾಯ್ತು. ಈ ಪೈಕಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಲಗೈಯಂತಿರುವ ಭೋಜೇಗೌಡ ಮತ್ತು ಸಿ.ಟಿ ರವಿ ಎಂಬ ಜಿಲ್ಲೆಯ ಸಮಸ್ಯೆಗಳು ಮಧುಕರ ಶೆಟ್ಟಿಯವರನ್ನ ಎದುರುಗೊಳ್ಳಲು ಹಿಂಜರಿಯತೊಡಗಿದವು. ಆದರೂ ಅವರನ್ನ ಎತ್ತಂಗಡಿ ಮಾಡಿಸಲು ಜೊತೆಯಾಗಿಯೇ ಶ್ರಮಿಸುತ್ತಿದ್ದವು. ಭೋಜೇಗೌಡ ಆಗಾಗ್ಗೆ ಕುಮಾರಸ್ವಾಮಿಗೆ ಎಸ್ಪಿ ವಿರುದ್ಧ ದೂರು ಹೇಳುವುದನ್ನೇ ಕಾಯಕ ಮಾಡಿಕೊಂಡರೆ ಸಿ.ಟಿ.ರವಿ ಎಸ್ಪಿಗೆ ಕೆಟ್ಟ ಹೆಸರು ತರಲು ಹವಣಿಸುತ್ತಿದ್ದರು. ಈ ಸವiಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಕಠಾರಿಯ ಧಕ್ಷ ಅಧಿಕಾರಿಯಾದ್ದರಿಂದ ರಾಜಕಾರಣಿಗಳ ಪುಂಗಿ ಬಂದಾಗಿತ್ತು. ಇಂತಹ ಉಸಿರುಗಟ್ಟುವ ಸನ್ನಿವೇಶದಲ್ಲಿ ಭೋಜೇಗೌಡ ಕುಮಾರಣ್ಣನ ಮೇಲೆ ವಿಪರೀತ ಒತ್ತಡ ತಂದಿದ್ದರಿಂದ ಮಧುಕರ ಶೆಟ್ಟರು ರಾಜ್ಯಪಾಲರ ಸೆಕ್ಯೂರಿಟಿ ಮುಖ್ಯಸ್ಥರಾಗಿ ವರ್ಗಾವಣೆಗೊಂಡರು! ಇದು ಒಬ್ಬ ದಕ್ಷ ಅಧಿಕಾರೊಗೆ ಸರಕಾರ ಮಾಡಿದ ತೀವ್ರ ತರದ ಅವಮಾನ. ಏಕೆಂದರೆ ಚಿಕ್ಕಮಗಳೂರ ಬಡವರು ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿಗಳು ನಮಗೆ ಯಾರಿಲ್ಲದಿದ್ದರೂ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಪೂರ್ಣ ರಕ್ಷಣೆಯಿದೆ ಎಂದು ಭಾವಿಸಿದ್ದರು. ಕಾಡಲ್ಲಿನ ನಕ್ಷಲರೂ ಕೂಡ ಮಧುಕರ ಶೆಟ್ಟರು ಎಸ್ಪಿಯಾಗಿರುವುದರಿಂದ ನಮಗಾವ ತೊಂದರೆಯಿಲ್ಲವೆಂದು ಭಾವಿಸಿದ್ದರು. ಎಸ್ಪಿ ಕೂಡ ಆ ನಕ್ಸಲರನ್ನ ಅಕ್ಕ-ಪಕ್ಕದ ಜಿಲ್ಲೆಗೆ ಓಡಿಸಿ ಎಂದು ಹೇಳಿದ್ದರು. ತಮ್ಮ ಇರುವಿಕೆಯ ಕಾರಣಕ್ಕೆ ಹಲವು ಸಮಸ್ಯೆಗಳು ಕರಗಿ ಹೋಗುವಂತೆ ನೋಡಿಕೊಂಡಿದ್ದ ಮಧುಕರ ಶೆಟ್ಟರಿಂದ ರಾಜಕಾರಣಿಗಳು ನಿರುದ್ಯೋಗಿಗಳಂತಾಗಿದ್ದರು. ಇಂತಿರುವಾಗ ನಮಗೆ ಬೇಕೇ ಇಲ್ಲದ ರಾಜ್ಯಪಾಲರೆಂಬ ಮುದಿಯಾನೆಯ ರಕ್ಷಣೆಗೆ ಹೋಗಿ ಅದರ ಹಿಂದೆ ನಿಂತಾಗ ಜಿಲ್ಲೆಯ ಕಿಡಿಗೇಡಿ ರಾಜಕಾರಣಿಗಳು ಕುಹಕವಾಗಿ ನಕ್ಕು ಸಂತೋಷ ವ್ಯಕ್ತಪಡಿಸಿದ್ದರು.
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಅವಮಾನವಾಗುತ್ತಿರುವುದು ಈ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಹೆಚ್.ಎಲ್.ನಾಗೇಗೌಡರು ಡಿ.ಸಿ.ಯಾಗಿದ್ದ ಕಾಲದಿಂದಲೂ ನಡೆದು ಬಂದಿದೆ. ಅದರಲ್ಲೂ ಬಿರೂರು ಶಾಸಕರಾಗಿದ್ದ ಲಕ್ಷ್ಮಯ್ಯ ಪಿಳ್ಳೆನಳ್ಳಿ ಊರ ಮುಂದೆ ನಿಂತು ಪ್ಯಾಂಟ್‍ಜಿಪ್ ತೆಗೆದು ತನ್ನ ವೈರಿಗಳ ಹೆಂಗಸರನ್ನು ಕರೆದು ತನ್ನ ತಾಕತ್ತು ತೋರುತ್ತೇನೆ ಎಂದಿದ್ದರು. ಇದನ್ನು ಕಂಡ ಬಿಪಿನ್ ಗೋಪಾಲಕೃಷ್ಣ ಎಂಬ ಎಸ್ಪಿ ಕೂಡಲೆ ಕ್ರಮ ಜರುಗಿಸಿದ್ದರಿಂದ ಅವರನ್ನು 24 ಗಂಟೆಯಲ್ಲಿ ವರ್ಗ ಮಾಡಿಸಿದ್ದರು. ಅದೇ ¯ಕ್ಷ್ಮಯ್ಯನವರ ಮಗ ಭೋಜೇಗೌಡ ಮಧುಕರ ಶೆಟ್ಟರನ್ನ ವರ್ಗ ಮಾಡಿಸಿದ್ದರು. ಕೆಟ್ಟ ಸರಕಾರಗಳು ಬಂದಾಗ ಒಳ್ಳೆ ಅಧಿಕಾರಿಗಳು ತೊಂದರೆ ಅವಮಾನಕ್ಕೊಳಗಾಗುವುದು ಸಾಮಾನ್ಯ. ಆದ್ದರಿಂದ ಮಧುಕರಶೆಟ್ಟರು ತಮ್ಮ ಸೇವಾವಧಿಯಲ್ಲಿ ನೋವನ್ನ ಅನುಭವಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ದಲಿತ ಜನಾಂಗದಿಂದ ಬಂದ ಬಿ.ಬಿ ನಿಂಗಯ್ಯ, ಮೋಟಮ್ಮ ಇಂತವರೆಲ್ಲಾ ಮಂತ್ರಿಗಳಾಗಿ ಮೆರೆದರು. ಆದರೂ ಭೂಮಾಲೀಕರ ನಿರಂತರ ಶೋಷಣೆಗೆ ತುತ್ತಾದ ದಲಿತರಿಗೆ ಹರ್ಷಗುಪ್ತ ಮತ್ತು ಮಧುಕರ ಶೆಟ್ಟರು ವಸತಿ ನಿರ್ಮಿಸಿಕೊಟ್ಟು ನಿರ್ಗತಿಕರ ಬಾಳಿಗೆ ಬೆಳಕಾದದ್ದು ವಿಶೇಷ ಇದರಿಂದ ಅರ್ಥವಾಗುವುದೇನೆಂದರೆ, ಈ ಪಂಚರಂಗಿ ರಾಜಕಾರಣಿಗಳಿಂದ ಏನೂ ಆಗುವುದಿಲ್ಲ. ಜನಪರ ಕಾಳಜಿಯ ಅಧಿಕಾರಿಗಳಿಂದ ಮಾತ್ರ ಜನ ನೆಮ್ಮದಿ ಕಾಣಬಲ್ಲರು ಎಂಬುದು ಸಾಬೀತಾಗಿದೆ. ಚಿಕ್ಕಮಗಳೂರಲ್ಲಿ ಎಷ್ಟೆಲ್ಲಾ ರಾಜಕಾರಣಿಗಳು ಆಗಿಹೋದರೂ ಜನಮಾನಸಲ್ಲುಳಿದವರು ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮಾತ್ರ ಎಂಬುದು ವಿಶೇಷ!

ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...