Homeಅಂಕಣಗಳುಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

ಮೋದಿಗೆ ಕೃಷ್ಣ ಪರಮಾತ್ಮನ 10 ಸಲಹೆಗಳು

- Advertisement -
- Advertisement -

ಮೂಲ: ರಾಘವ್ ಬೆಹ್ಲ್, ಕ್ವಿಂಟ್
ಅನುವಾದ: ರಾಜಶೇಖರ್ ಅಕ್ಕಿ |

2019 ಹತ್ತಿರಕ್ಕೆ ಬರುತ್ತಿದ್ದಂತೆ, ಪ್ರಧಾನಿ ಮೋದಿಯವರು ತಮ್ಮ ಸೋಲುಗಳ ಲೆಕ್ಕ ಹಾಕುತ್ತಿರಬಹುದು. ಕಳೆದ 18 ವರ್ಷಗಳಲ್ಲಿ ಒಂದೂ ಸಲ ಕಾಂಗ್ರೆಸ್ ಪಕ್ಷಕ್ಕೆ ಸೋಲದ ಮೋದಿ ಈಗ ಮೂರು ರಾಜ್ಯಗಳಲ್ಲಿ ಸೋಲ ನುಭವಿಸಿದ್ದಾರೆ. ನನಗೆ ವರ್ಷ 2000 ನೆನಪಾಗುತ್ತಿದೆ, ಆಗ ಮೋದಿಯ ರಾಜಕೀಯ ಗುರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಹಾಗೂ ಅವರೂ ಕೂಡ ತಮ್ಮ ಅಧಿಕಾರದ ಅತ್ಯಂತ ಕೆಟ್ಟದಿನಗಳನ್ನೇ ಅನುಭವಿಸುತ್ತಿದ್ದರು; ಲೋಕಸಭೆ ಕೋಲಾಹಲದಲ್ಲಿತ್ತು, ಕಾಶ್ಮೀರ ನಿಯಂತ್ರಣದಲ್ಲಿರಲಿಲ್ಲ, ಪಾಕಿಸ್ತಾನ ತನ್ನ ಕರಾಳ ಅಶಿಸ್ತನ್ನು ಪ್ರದರ್ಶಿಸುತ್ತಿತ್ತು ಹಾಗೂ ರಾಮ ಮಂದಿರವನ್ನು ಬಲವಂತವಾಗಿ ನಿರ್ಮಿಸಲು ಗಟ್ಟಿಯಾದ ಕೂಗುಗಳು ಕೇಳಿಬರುತ್ತಿದ್ದವು. ನಿಜ, ನಮ್ಮ ಈ ಸಮಯಾತೀತ ದೇಶದಲ್ಲಿ ಸಮಯ, ಸಂಗತಿಗಳು ಬದಲಾಗುವುದಕ್ಕಿಂತ, ಬದಲಾಗದೇ ಉಳಿಯುವವೇ ಹಚ್ಚು.
ಈ ಎಲ್ಲವುಗಳಿಗೆ ಪ್ರತಿಕ್ರಿಯೆಯಾಗಿ ವಾಜಪೇಯಿ ಕೇರಳದ ಕುಮಾರಕೋಂ ರೆಸಾರ್ಟಿನಲ್ಲಿ ಠಿಕಾಣಿ ಹೂಡಿ ತಮ್ಮ ರಾಜಕೀಯ ‘ಆಲೋಚನೆ’ಗಳನ್ನು ಕಾವ್ಯದ ರೂಪದಲ್ಲಿ ಬರೆದರು. ಪ್ರಧಾನಿ ಮೋದಿಗೂ ಇಂತಹ ‘ಆಲೋಚನೆ’ಗಳನ್ನು ಕಾವ್ಯವಾಗಿಸುವ ಸಮಯ ಬಂದಿದೆ ಎಂದೆನಿಸುತ್ತಿದೆ.
ಮಹಾಭಾರತ ಯುದ್ಧದ ಸಮಯದಲ್ಲಿ ಭಗವಾನ್ ಕೃಷ್ಣ ಅರ್ಜುನನಿಗೆ ಉಪದೇಶ ನೀಡಿದ ಸ್ಥಳವಾದ ಕುರುಕ್ಷೇತ್ರದಲ್ಲಿಯೇ ಮೋದಿ ತನ್ನ ಟೆಂಟನ್ನು 31 ಡಿಸೆಂಬರ್‍ನ ಮಧ್ಯರಾತ್ರಿ ಹೂಡಬೇಕು. ಯಾರಿಗ್ಗೊತ್ತು, ಮೋದಿ ಕೂಡ ಅರ್ಜುನನಷ್ಟೇ ಅದೃಷ್ಟಶಾಲಿಯಾಗಿರಬಹುದು. ಭಗವಾನ್ ಕೃಷ್ಣ 2019ರ ಹೊಸ ಭಗವದ್ಗೀತೆಯ ಭಾಗವಾಗಿ, ಕೆಳಗೆ ಬರೆದಿರುವ ಹತ್ತು ಬೋಧೆಗಳನ್ನು ನೀಡಬಹುದು.

ಮೊದಲನೇ ಬೋಧನೆ: ನೀನು ಅತಿರೇಕವಿಲ್ಲದ, ನಡುಪಂಥೀಯ ರಾಜಕೀಯಕ್ಕೆ ಮುಖಮಾಡಬೇಕು.
ವಾಜಪೇಯಿ ಆಗ ಬರೆದಿದ್ದು, “ಕಲಹಕ್ಕೆ ಬದಲಾಗಿ ಸಂಧಾನ, ವಿರೋಧದ ಬದಲಿಗೆ ಮೈತ್ರಿ ಹಾಗೂ ತಿಕ್ಕಾಟದ ಬದಲಿಗೆ ಒಮ್ಮತ ಮತ್ತು ಸಹಕಾರದ ಕ್ರಮಗಳಲ್ಲಿ ಭಾರತದ ಸಾಮಥ್ರ್ಯ ಅಡಗಿದೆ ಹಾಗೂ (ನಮ್ಮ ಸರ್ಕಾರವು) ಇದನ್ನೇ ಬಯಸುತ್ತದೆ”
ದುರದೃಷ್ಟವಶಾತ್, ಮೋದಿಯ ಬಿಜೆಪಿಯು ನಡುಪಂಥೀಯ ಒಮ್ಮತವನ್ನು ಮುರಿದು ಹಾಕಿದೆ. ಇದರ ಮೂಲಸ್ವಭಾವ ಹಿಂದೂ-ಬಹುಪಕ್ಷೀಯತೆಯೆಡೆಗೇ ಇದೆ. ಇದು ಅತ್ಯಂತ ಸೂಕ್ಷ್ಮ ವಿಷಯಗಳಾದ ಮಿಲಿಟರಿ ಸಾಹಸಗಳನ್ನು, ಜಮ್ಮು ಕಾಶ್ಮೀರದ ಕ್ಷೋಭೆಯನ್ನು ಅತ್ಯಂತ ಸಂಕುಚಿತವಾದ ರಾಷ್ಟ್ರೀಯತೆಯ ವಿಷಯಗಳನ್ನಾಗಿ ಬದಲಿಸುತ್ತಿದೆ.
ಆದರೆ 2019ರಲ್ಲಿ ಇದು ವಾಜಪೇಯಿಯವರ ಸಂಧಾನ, ಮೈತ್ರಿ, ಒಮ್ಮತ ಮತ್ತು ಸಹಕಾರದೆಡೆಗೆ ಮರಳಬೇಕು.

ಎರಡನೇ ಬೋಧನೆ: ಪಂಡಿತ್ ನೆಹರು ಮತ್ತು ಇಂದಿರಾ ಗಾಂಧಿ ಇಂದು ಕಣದಲ್ಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು.
ಮೋದಿ ಸೈನ್ಯದ ಕಾಲಾಳುಗಳು ತಮ್ಮ ಶಕ್ತಿಯನ್ನೆಲ್ಲ ಬಳಸಿ ಭಾರತದ ಎಲ್ಲಾ ವೈಫಲ್ಯಗಳಿಗೆ ನಾಲ್ಕು ದಶಕಗಳವರೆಗೆ ಆಳಿದ ‘ಕುಟುಂಬದ ಆಳ್ವಿಕೆ’ಯೇ ಕಾರಣವೆಂದು ಸಾಬೀತುಪಡಿಸಲು ಹೊಸ ಹೊಸ ಸುಳ್ಳುಗಳ ಅವಿಷ್ಕಾರದಲ್ಲಿ ತೊಡಗಿರುತ್ತಾರೆ.
ಆದರೆ ಮೋದಿ ಭಾರತದ ಶ್ರೇಷ್ಠತೆಯ ಬಗ್ಗೆ ಮಾತನಾಡಿದಾಗ – ಅದು ನ್ಯೂಕ್ಲಿಯರ್ ವಿಜ್ಞಾನದ ಬಗ್ಗೆಯಿರಲಿ, ಅಂತರಿಕ್ಷದ ಬಗ್ಗೆ ಇರಲಿ, ಕೈಗಾರಿಕೆಯಾಗಿರಲಿ ಅಥವಾ ಕೃಷಿಯಾಗಿರಲಿ – ಇವರ ಈ ಎದೆತಟ್ಟುವಿಕೆಯಲ್ಲಿ ಆ ‘ಕುಟುಂಬದ ಆಳ್ವಿಕೆ’ಯ ಕಾಲದಲ್ಲಿ ಆದ ಸಾಧನೆಗಳನ್ನೇ ಸಂಭ್ರಮಿಸುತ್ತಾರೆ.
ಅದೇನೇ ಇರಲಿ, ಪಂಡಿತ್ ನೆಹರು ಅವರು 1964ರಲ್ಲಿ ಹಾಗೂ ಇಂದಿರಾ ಗಾಂಧಿ 1984ರಲ್ಲಿ ತೀರಿಕೊಂಡರು ಎಂದು ನಮ್ಮ ಪ್ರಧಾನಮಂತ್ರಿಗೆ ಯಾರಾದರೂ ಹೇಳಬೇಕಿದೆ.

ಮೂರನೇ ಬೋಧನೆ: ರಾಮಮಂದಿರದ ಬಗ್ಗೆ ನಿಮ್ಮ ಮೌನವನ್ನು ಮುರಿಯುವಿರಿ
ಆಗ ವಾಜಪೇಯಿ ತನ್ನ ಸರಕಾರಕ್ಕೆ ಹೇಳಿದ್ದೇನೆಂದರೆ, “ನ್ಯಾಯಾಂಗದ ತೀರ್ಪು, ಅದೇನೇ ಆಗಿರಲಿ, ಅದನ್ನು ಅನುಷ್ಠಾನಗೊಳಿಸಲು ಸಂವಿಧಾನಾತ್ಮಕವಾಗಿ ಬದ್ಧರಾಗಿದ್ದೇವೆ ಹಾಗು ಒಪ್ಪಿಕೊಳ್ಳುತ್ತೇವೆ”
ಆದರೆ ಮೋದಿ ಅಡಿಯಲ್ಲಿ, ನ್ಯಾಯಾಂಗದ ತೀರ್ಪನ್ನು ರದ್ದು ಮಾಡಲು ಸುಗ್ರೀವಾಜ್ಞೆಯೊಂದನ್ನು ತರುವ ಭೀತಿ ಸೃಷ್ಟಿಯಾಗುತ್ತಿದೆ. ಮೋದಿ ಇಂತಹ ಯಾವುದೇ ರಾಜಕೀಯ-ಕಾನೂನಾತ್ಮಕ ದುಸ್ಸಾಹಸವನ್ನು ಮಾಡುವ ವಿಚಾರವನ್ನು ಕೈಬಿಡಬೇಕು.

ನಾಲ್ಕನೇ ಬೋಧನೆ: ನಿಮ್ಮ ಹಿಂಬಾಲಕರ ಹಿಂಸೆಯ ಬಗ್ಗೆ ತಾಳಿರುವ ಮೌನವನ್ನು ಮುರಿಯಬೇಕು.
ದೇಶದಲ್ಲಿ ಆಗುತ್ತಿರುವ ಗುಂಪು ಹತ್ಯೆ-ಮಾಬ್ ಲಿಂಚಿಂಗ್ ಬಗ್ಗೆ ಒಂದು ವಿಶೇಷ ತನಿಖಾ ದಳವನ್ನು ರಚಿಸಿ (ಎಸ್.ಐ.ಟಿ) ಇಂತಹ ಕೃತ್ಯಗಳನ್ನು ಮಾಡುವವರನ್ನು ಎಲ್ಲರಿಗೂ ಗೋಚರವಾಗುವಂತೆ ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಿಸಬೇಕು. ಹಾಗೂ ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಬಿತ್ತರಿಸುತ್ತಿರುವ ವ್ಯಕ್ತಿಗಳನ್ನು  ಸ್ವತಃ ತಾನೇ ಹಿಂಬಾಲಿಸುವುದನ್ನು ಕೂಡಲೇ ಬಿಡಬೇಕು.

ಐದನೇ ಬೋಧನೆ: ಈ ಗಣರಾಜ್ಯ (ರಿಪಬ್ಲಿಕ್)ದಲ್ಲಿ ನ್ಯಾಯಯುತವಾದ ಸಂವಾದಕ್ಕೆ ಅನುವು ಮಾಡಿಕೊಡಬೇಕು.
ತಮ್ಮ ಸಹಭಾಗಿ ಟಿವಿ ವಾಹಿನಿಗಳಲ್ಲಿ ಪ್ರತಿ ಸಂಜೆ ನಂಬಲಸಾಧ್ಯವಾದ ರೀತಿಯಲ್ಲಿ ಇವರ ವಕ್ತಾರರ ಮುಖಾಂತರ ನಡೆಯುತ್ತಿರುವ ಪ್ರಾಕ್ಸಿ ರಾಜಕೀಯ ಪ್ರಚಾರವನ್ನು ಈ ಕೂಡಲೇ ನಿಲ್ಲಿಸಬೇಕು.

ಆರನೇ ಬೋಧನೆ: ಸುಳ್ಳುಗಳನ್ನು ತುಂಬಿಸಿ ಇತಿಹಾಸವನ್ನು ತಿದ್ದುವುದನ್ನು, ಪುನರ್‍ರಚಿಸುವುದನ್ನು ನಿಲ್ಲಿಸಿ.
ಮೋದಿಯ ‘ಬುದ್ಧಿಜೀವಿ’ಗಳು ಇತಿಹಾಸವನ್ನು ತಿದ್ದುವುದನ್ನು ನಿಲ್ಲಿಸಬೇಕು; 16ನೇ ಶತಮಾನದಲ್ಲಿ ಆದ ಯುದ್ಧದಲ್ಲಿ ಅಕ್ಬರ್‍ನನ್ನು ಮಹಾರಾಣಾ ಪ್ರತಾಪ್ ಸೋಲಿಸಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಸ್ವಾಮಿ ವಿವೇಕಾನಂದ ಅವರು ಎಂದೂ ಹಿಂದುತ್ವದ ಐಕಾನ್ ಆಗಿರಲಿಲ್ಲ; ಹಾಗೂ ಸರದಾರ್ ಪಟೇಲ್ ಅವರು ಎಂದೂ ಆರ್.ಎಸ್.ಎಸ್. ಕಾರ್ಯಕರ್ತರಾಗಿರಲಿಲ್ಲ ಎಂಬುದೇ ವಾಸ್ತವ. ಇದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.

ಏಳನೇ ಬೋಧನೆ: ವೂಡೂ ಆರ್ಥಿಕತೆಯ ಪ್ರಯೋಗವನ್ನು ಬಿಟ್ಟುಬಿಡಿ.
ಈಗ ಮಾಡುತ್ತಿರುವ ಫ್ಯಾಂಟಮ್ ಹೂಡಿಕೆಯನ್ನು (ಒಂದು ಸರಕಾರೀ ಸಂಸ್ಥೆ ಇನ್ನೊಂದು ಸರಕಾರೀ ಸಂಸ್ಥೆಯನ್ನು ಖರೀದಿಸಿ ತುಂಬಾ ವ್ಯವಹಾರ ನಡೆಯುತ್ತಿದೆ ಎಂಬ ಭ್ರಾಂತಿಯನ್ನು ಸೃಷ್ಟಿಸುವುದು) ಕೈಬಿಡಿ.
ನಿರುದ್ಯೋಗದ ಬಿಕ್ಕಟ್ಟಿನ ಪ್ರಶ್ನೆಗೆ ‘ಪಕೋಡಾ ಉದ್ಯೋಗ’ದ ಸಂಖ್ಯೆಗಳನ್ನು ಕಂಡುಹಿಡಿದು, ಅಥವಾ ಅದಕ್ಕೆ ಸಂಬಂಧಪಡದ ಮುದ್ರಾ ಮತ್ತು ಇ.ಪಿ.ಎಫ್. ಸಂಖ್ಯೆಗಳನ್ನು ಬಳಸಿ ಮೂಲಪ್ರಶ್ನೆಯಿಂದ ನುಣುಚಿಕೊಳ್ಳುವುದನ್ನು ನಿಲ್ಲಿಸಬೇಕು.
2014/15 ರಲ್ಲಿ ಮೋದಿ ತನ್ನ ರಾಜಕೀಯ ಅಧಿಕಾರದ ಉತ್ತುಂಗದಲ್ಲಿದ್ದಾಗ ಸಾರ್ವಜನಿಕ ಬ್ಯಾಂಕ್ ವಲಯವನ್ನು ಸರಿಪಡಿಸದೇ ಇರುವುದನ್ನು ಒಪ್ಪಿಕೊಳ್ಳಬೇಕು.

ಎಂಟನೇ ಬೋಧನೆ: ಬಿಕ್ಕಟ್ಟಿನಲ್ಲಿರುವ ರೈತರಿಗೆ ದುಪ್ಪಟ್ಟು ಆದಾಯ ಮತ್ತು ಹೆಚ್ಚಿನ ಎಮ್.ಎಸ್.ಪಿ(ಕನಿಷ್ಠ ಬೆಂಬಲ ಬೆಲೆ)ಗಳ ಲಾಲಿಪಾಪ್‍ಗಳಿಂದ ದಾರಿತಪ್ಪಿಸುವುದನ್ನು ಕೈಬಿಡಬೇಕು.
ಅದರ ಬದಲಿಗೆ, “ಒಂದು ಬಾರಿಯ ಸಾಲ ಪರಿಹಾರ”ದ ದಿಟ್ಟ ನೀತಿಯನ್ನು ರಚಿಸಿ, ಅದರೊಂದಿಗೆ ಆದಾಯ ವರ್ಗಾವಣೆ, ಗ್ರಾಮೀಣ ಸಂಪನ್ಮೂಲಗಳನ್ನು ಹೆಚ್ಚಿಸುವುದಕ್ಕೆ ಹೂಡಿಕೆ, ಗುತ್ತಿಗೆ ಕೃಷಿ, ಜಿ.ಎಮ್. ಬೆಳೆಗಳು ಹಾಗೂ ಆಹಾರ ಉದ್ಯಮಗಳೊಂದಿಗೆ ನೇರ ಸಂಯೋಜನೆ, ಇವೆಲ್ಲವುಗಳನ್ನೂ ಒಳಗೊಂಡ ನಿಜವಾದ ಕೃಷಿ ಸುಧಾರಣೆಗಳನ್ನು ತರಬೇಕು,
ಮಧ್ಯವರ್ತಿಗಳಿಗೇ ದೊಡ್ಡ ಆದಾಯವನ್ನು ಸೃಷ್ಟಿಸುವ, ಈಗ ಏಕಸ್ವಾಮ್ಯತೆಯನ್ನು ಹೊಂದಿರುವ ಮಾರುಕಟ್ಟೆ/ಮಂಡಿಗಳನ್ನು ನಾಶಮಾಡಬೇಕು.

ಒಂಬತ್ತನೇ ಬೋಧನೆ: ಮುಕ್ತ ಮಾರುಕಟ್ಟೆಗಳಲ್ಲಿ ನಿಜವಾದ ಶ್ರದ್ಧೆಯನ್ನು ತೋರಿಸಿ.
2019 ರಲ್ಲಿ ಮೋದಿಯು ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಬೇಕು. ತೆರಿಗೆದಾರರಿಗೆ ಮತ್ತು ಏಂಜೆಲ್ ಹೂಡಿಕೆದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಅಂತರರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸಬೇಕು. ವಿದೇಶೀ ಹೂಡಿಕೆದಾರರ ಹಕ್ಕುಗಳನ್ನು ಗೌರವಿಸಬೇಕು, ಐ.ಎ.ಎಸ್ ಅಲ್ಲದ ನಿಯಂತ್ರಕರನ್ನು ನೇಮಕಾತಿ ಮಾಡಬೇಕು ಹಾಗೂ ನೋಟುರದ್ದತಿ ಮತ್ತು ಜಿ.ಎಸ್.ಟಿಯ ಡಬಲ್ ಹೊಡೆತದಿಂದ ಬಳಲುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನೋವಿಗೆ ಸ್ಪಂದಿಸಬೇಕು.

ಹತ್ತನೇ ಬೋಧನೆ: ನಿಮ್ಮ ಪರಿವಾರದ ಸಂವಿಧಾನೇತರ ‘ಏಜೆನ್ಸಿಗಳು….’ ಮಾಡುತ್ತಿರುವ ಕತ್ತರಿಸುವ ಕೆಲಸಗಳನ್ನು ನಿಲ್ಲಿಸಿ
ಕೊನೆಯದಾಗಿ ಭಗವಾನ್ ಕೃಷ್ಣ ತನ್ನ ಆದೇಶವನ್ನು ಹೀಗೆ ಮುಕ್ತಾಯಗೊಳಿಸುತ್ತಾನೆ: ಎಲೈ ಬಿಜೆಪಿ ಆಡಳಿತಗಾರರಾ, ಹೋಗ್ರೋ, ಒಂಚೂರು ಹಾಸ್ಯಪ್ರಜ್ಞೆಯನ್ನು ಎಲ್ಲಿಂದಾದರೂ ತೊಗೊಂಬನ್ನಿ. ನಿಮ್ಮ ಒಂದು ಮುಗುಳ್ನಗೆ ರಾಜಕೀಯ ಎದುರಾಳಿಗಳನ್ನು ನಿಶ್ಯಸ್ತ್ರಗೊಳಿಸುವುದಕ್ಕೆ ದೊಡ್ಡ ಅಸ್ತ್ರವಾಗುತ್ತೆ. ಒಳ್ಳೇದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...