Homeಮುಖಪುಟಜಯ ಮಹಾಭಾರತದ ಮರುಕಥನ

ಜಯ ಮಹಾಭಾರತದ ಮರುಕಥನ

- Advertisement -
- Advertisement -

ಭಾರತದ ಮಹಾ ಕಾವ್ಯವಾದ ಮಹಾಭಾರತದ ಮೂಲಕೃತಿ “ಜಯ”. ಅದೇನೂ ಈಗ ನಾವು ಕಾಣುತ್ತಿರುವ ಮಹಾಭಾರತದಷ್ಟು ದೊಡ್ಡದಾಗಿರಲಿಲ್ಲ. ಕುಟುಂಬವೆರಡರ ದಾಯಾದಿ ಕಲಹದ ಕತೆಯು ಬಾಯಿಂದಬಾಯಿಗೆ ಹರಡಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿತು. ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿತು. ಹಾಗೆ ಹರಡುತ್ತಾ, ಸಂಚರಿಸುತ್ತಾ, ದಾಟುತ್ತಾ ವಿವಿಧ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತಾ, ವಿವಿಧ ರೀತಿನೀತಿಗಳನ್ನು ಒಳಗೊಳ್ಳುತ್ತಾ, ವಿವಿಧ ಮಾದರಿಗಳ ಪಾತ್ರಗಳೆಲ್ಲಾ ಭಾಗವಹಿಸುತ್ತಾ ಬೃಹತ್ತಾಗಿ ಬೆಳೆದು ಮಹಾಭಾರತವಾಯಿತು.

ಮಹಾಭಾರತವೆಂಬ ಗೊಂಡಾರಣ್ಯವನ್ನು ಹೊಕ್ಕು ನೋಡಿದರೆ ನಾವು ದೇಶವೆಂದು ಈಗ ಕರೆಯುವ ಈ ಭೂಭಾಗದಲ್ಲಿ ಎಂತೆಂತಹ ಸಂಸ್ಕೃತಿಗಳಿದ್ದವು, ಸಾಮಾಜಿಕ ಪದ್ಧತಿಗಳಿದ್ದವು, ಜನರಿದ್ದರು, ಎಂತೆಂತಹ ಘನತೆ ಗೌರವಗಳಿದ್ದವು, ಯಾವ್ಯಾವ ಕಾರಣಗಳಿಂದ ಸಾಮಾಜಿಕ ಮತ್ತು ವ್ಯಕ್ತಿಗತ ಅಪಮಾನಗಳು ಮತ್ತು ಸನ್ಮಾನಗಳಾಗುತ್ತಿದ್ದವು? ಎಂತೆಂತಹ ನಮೂನೆಯ ಮನಸ್ಥಿತಿಗಳಿದ್ದವು; ಹೀಗೆ ಬಲು ಸೂಕ್ಷ್ಮ ಮತ್ತು ಸ್ಥೂಲ ವಿಚಾರಗಳೆಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.

ರಾಜಕಾರಣ, ಧರ್ಮಕಾರಣ, ಮಾನುಷಕಾರಣ, ದ್ವೇಷಕಾರಣ, ಮೋಹಕಾರಣ, ಅಹಂಕಾರಕಾರಣ, ದೌರ್ಬಲ್ಯಕಾರಣ. ಹೀಗೆ ನಾನಾ ಕಾರಣಗಳು ಮನುಷ್ಯನಲ್ಲಿ ಮತ್ತು ಮಾನುಷ ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳನ್ನು ವಿವರಿಸುತ್ತದೆ ಈ ಮಹಾಭಾರತ. ಚಾತುರ್ವರ್ಣ ವ್ಯವಸ್ಥೆಯು, ಪ್ರಭುತ್ವದ ದಬ್ಬಾಳಿಕೆಯು, ಸ್ವಜನಾಸಕ್ತಿ, ಸ್ವಪರಿವಾರ ಮೋಹವು ಏನೆಲ್ಲಾ ಶೋಷಣೆಗಳನ್ನು ಮಾಡಿತು, ಎಂತೆಂತಹ ದುರಂತಗಳನ್ನು ಕಂಡಿತು ಎಂದು ಕಂಡಹಾಗೇ ವಿವರಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಎಂಬ ಗೆರೆ ಎಳೆದಂತಹ ಸಿದ್ಧ ಮಾದರಿಗಳನ್ನು ಮುಂದಿಡದೇ, ಒಳ್ಳೆಯತನದ ಹಿಂದಿನ ಕರಾಳ ಮುಖವನ್ನು, ಕೆಟ್ಟದೆನ್ನುವುದರ ಹಿಂದಿನ ನೈಜತೆ ಮತ್ತು ಪ್ರಾಮಾಣಿಕತೆಯ ಗುಣವನ್ನು ಗುರುತಿಸುತ್ತದೆ.

ನಿಷ್ಪಕ್ಷಪಾತ ನಿರೂಪಣೆಯೇ ಮಹಾಭಾರತದ ಶಕ್ತಿ ಮತ್ತು ಮೌಲ್ಯ. ಪಕ್ಷಪಾತ ಮಾಡುವ ಕೃಷ್ಣನು ಕೂಡ ಶಾಪಕ್ಕೆ, ದುರ್ವಿಧಿಯ ಸಾವಿಗೆ ಬಲಿಯಾಗುತ್ತಾನೆ. ಒಳ್ಳೆಯವರೆಂದು ಕೃಷ್ಣನಿಂದ ಮತ್ತು ಭೀಷ್ಮಾದಿಗಳಿಂದ ಪ್ರಾಮಾಣೀಕರಿಸಲ್ಪಡುವ ಪಾಂಡವರು ಹಾದಿಯಲ್ಲಿ ಹೆಣಗಳಾಗಿ ಬೀಳುತ್ತಾರೆ. ಇನ್ನು ಪಾತ್ರಗಳೆಂದರೆ ಅವು ಬರಿಯ ವ್ಯಕ್ತಿಗಳಲ್ಲ. ವ್ಯಕ್ತಿತ್ವದ ಮಾದರಿಗಳು. ಶಂತನುವಿನಿಂದ ಹಿಡಿದು ಪರೀಕ್ಷಿತನವರೆಗೂ ಈಗಲೂ ನಾವು ನಮ್ಮನಮ್ಮಲ್ಲಿ ಕಾಣುತ್ತಲೇ ಇರುವ ಹಲವು ಮನಸ್ಥಿತಿಗಳ, ಹಲವು ವ್ಯಕ್ತಿತ್ವಗಳ ಮಾದರಿಗಳು.

ಹಾಗಾಗಿಯೇ ಇದು ಒಂದು ಧಾರ್ಮಿಕ ಗ್ರಂಥವಲ್ಲ. ಈ ನೆಲದ ನಿವಾಸಿಗಳಿಗೆಲ್ಲಾ, ಅವರು ಯಾವುದೇ ಧರ್ಮದವರಾಗಲಿ, ತಮ್ಮತಮ್ಮಲ್ಲಿ ಕಾಣುತ್ತಿರುವ ವ್ಯಕ್ತಿತ್ವಗಳ, ಸಂಘರ್ಷಗಳ, ಬದುಕಿನ ನೋವುನಲಿವುಗಳ ಕಾರಣ ಮತ್ತು ಪರಿಣಾಮಗಳ ಸಮಾಜೋಸಾಂಸ್ಕೃತಿಕ ಕಥನವಿದು. ನಿರಂತರವಾಗಿ ಪ್ರಯೋಗಗಳಿಗೆ ಮತ್ತು ಪರಿವರ್ತನೆಗಳಿಗೆ ಒಳಪಡುತ್ತಿದ್ದ ತಾತ್ವಿಕತೆಗಳ ವಿಶ್ಲೇಷಣೆ ಇದು. ವಿಶಾಲ ಭೂಭಾಗದ ಸಂಕೀರ್ಣ ಸಂಸ್ಕೃತಿಗೆ ಇದೊಂದು ರೂಪಕ ಇತಿಹಾಸ. ಯಾರೂ ಅಮುಖ್ಯರಲ್ಲದೇ ಸಮಾಜದ ಮತ್ತು ವ್ಯಕ್ತಿಗಳ ಆಗುಹೋಗುಗಳಿಗೆ ಕಾರಣ ಕರ್ತೃಗಳಾದವರ ಒಂದು ಮಹಾಕಾವ್ಯ.

ಈ ಮಹಾಕಾವ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ದಾರಿ ತೋರುವ ಕೃತಿ ದೇವದತ್ತ ಪಟ್ನಾಯಕರವರ ಜಯ. ಗಿರಡ್ಡಿ ಗೋವಿಂದರಾಜ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಈಗ ನಾವು ತಿಳಿದಿರುವ ರಿಲೀಜಿಯನ್ ಎಂಬ ಧರ್ಮದ ಪರಿಕಲ್ಪನೆಯೇ ಇಲ್ಲದಿದ್ದ ಮಹಾಭಾರತದ ಕಾಲದಲ್ಲಿಯೂ ಧರ್ಮದ ಬಗ್ಗೆ ಮಾತಾಡುತ್ತಾರೆ. ಅದನ್ನು ಎತ್ತಿ ಹಿಡಿಯುತ್ತಾರೆ. ಅದನ್ನು ಪಾಲಿಸುತ್ತಾರೆ. ಅದಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಸಾಯುತ್ತಾರೆ. ಆದರೆ ಆ ಧರ್ಮವೆಂಬುದು ಅಲ್ಲಿ ಸ್ವಧರ್ಮ ಎಂಬ ಒಬ್ಬರ ಅಥವಾ ಒಂದರ ಅಥವಾ ಒಂದು ವ್ಯವಸ್ಥೆಯ ಮೂಲ ಗುಣಸ್ವಭಾವ, ರೀತಿ ಮತ್ತು ನೀತಿ. ಅದೊಂದು ಜೈವಿಕ, ಆಧ್ಯಾತ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಅಸ್ತಿತ್ವಗಳ ಸೂಕ್ಷ್ಮ ವಿಚಾರ.

ಮಹಾಭಾರತ ಭಾರತದ ಒಂದು ಹೆಮ್ಮೆಯ ಕಾವ್ಯ. ಆದರೆ ನಿಷ್ಪಕ್ಷಪಾತವಾದ ಈ ಮಹಾಭಾರತವನ್ನು ಪರ ಅಥವಾ ವಿರೋಧದ ನೆಲೆಗಟ್ಟುಗಳಿಂದ ನೋಡದೇ ರೂಪಕ ಇತಿಹಾಸವನ್ನು ಅಭ್ಯಾಸ ಮಾಡುವಂತೆ ದೇವದತ್ತ ಜಯವನ್ನು ಬರೆದು ಮಹದುಪಕಾರ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...