Homeಮುಖಪುಟಜಯ ಮಹಾಭಾರತದ ಮರುಕಥನ

ಜಯ ಮಹಾಭಾರತದ ಮರುಕಥನ

- Advertisement -
- Advertisement -

ಭಾರತದ ಮಹಾ ಕಾವ್ಯವಾದ ಮಹಾಭಾರತದ ಮೂಲಕೃತಿ “ಜಯ”. ಅದೇನೂ ಈಗ ನಾವು ಕಾಣುತ್ತಿರುವ ಮಹಾಭಾರತದಷ್ಟು ದೊಡ್ಡದಾಗಿರಲಿಲ್ಲ. ಕುಟುಂಬವೆರಡರ ದಾಯಾದಿ ಕಲಹದ ಕತೆಯು ಬಾಯಿಂದಬಾಯಿಗೆ ಹರಡಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿತು. ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿತು. ಹಾಗೆ ಹರಡುತ್ತಾ, ಸಂಚರಿಸುತ್ತಾ, ದಾಟುತ್ತಾ ವಿವಿಧ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತಾ, ವಿವಿಧ ರೀತಿನೀತಿಗಳನ್ನು ಒಳಗೊಳ್ಳುತ್ತಾ, ವಿವಿಧ ಮಾದರಿಗಳ ಪಾತ್ರಗಳೆಲ್ಲಾ ಭಾಗವಹಿಸುತ್ತಾ ಬೃಹತ್ತಾಗಿ ಬೆಳೆದು ಮಹಾಭಾರತವಾಯಿತು.

ಮಹಾಭಾರತವೆಂಬ ಗೊಂಡಾರಣ್ಯವನ್ನು ಹೊಕ್ಕು ನೋಡಿದರೆ ನಾವು ದೇಶವೆಂದು ಈಗ ಕರೆಯುವ ಈ ಭೂಭಾಗದಲ್ಲಿ ಎಂತೆಂತಹ ಸಂಸ್ಕೃತಿಗಳಿದ್ದವು, ಸಾಮಾಜಿಕ ಪದ್ಧತಿಗಳಿದ್ದವು, ಜನರಿದ್ದರು, ಎಂತೆಂತಹ ಘನತೆ ಗೌರವಗಳಿದ್ದವು, ಯಾವ್ಯಾವ ಕಾರಣಗಳಿಂದ ಸಾಮಾಜಿಕ ಮತ್ತು ವ್ಯಕ್ತಿಗತ ಅಪಮಾನಗಳು ಮತ್ತು ಸನ್ಮಾನಗಳಾಗುತ್ತಿದ್ದವು? ಎಂತೆಂತಹ ನಮೂನೆಯ ಮನಸ್ಥಿತಿಗಳಿದ್ದವು; ಹೀಗೆ ಬಲು ಸೂಕ್ಷ್ಮ ಮತ್ತು ಸ್ಥೂಲ ವಿಚಾರಗಳೆಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.

ರಾಜಕಾರಣ, ಧರ್ಮಕಾರಣ, ಮಾನುಷಕಾರಣ, ದ್ವೇಷಕಾರಣ, ಮೋಹಕಾರಣ, ಅಹಂಕಾರಕಾರಣ, ದೌರ್ಬಲ್ಯಕಾರಣ. ಹೀಗೆ ನಾನಾ ಕಾರಣಗಳು ಮನುಷ್ಯನಲ್ಲಿ ಮತ್ತು ಮಾನುಷ ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳನ್ನು ವಿವರಿಸುತ್ತದೆ ಈ ಮಹಾಭಾರತ. ಚಾತುರ್ವರ್ಣ ವ್ಯವಸ್ಥೆಯು, ಪ್ರಭುತ್ವದ ದಬ್ಬಾಳಿಕೆಯು, ಸ್ವಜನಾಸಕ್ತಿ, ಸ್ವಪರಿವಾರ ಮೋಹವು ಏನೆಲ್ಲಾ ಶೋಷಣೆಗಳನ್ನು ಮಾಡಿತು, ಎಂತೆಂತಹ ದುರಂತಗಳನ್ನು ಕಂಡಿತು ಎಂದು ಕಂಡಹಾಗೇ ವಿವರಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಎಂಬ ಗೆರೆ ಎಳೆದಂತಹ ಸಿದ್ಧ ಮಾದರಿಗಳನ್ನು ಮುಂದಿಡದೇ, ಒಳ್ಳೆಯತನದ ಹಿಂದಿನ ಕರಾಳ ಮುಖವನ್ನು, ಕೆಟ್ಟದೆನ್ನುವುದರ ಹಿಂದಿನ ನೈಜತೆ ಮತ್ತು ಪ್ರಾಮಾಣಿಕತೆಯ ಗುಣವನ್ನು ಗುರುತಿಸುತ್ತದೆ.

ನಿಷ್ಪಕ್ಷಪಾತ ನಿರೂಪಣೆಯೇ ಮಹಾಭಾರತದ ಶಕ್ತಿ ಮತ್ತು ಮೌಲ್ಯ. ಪಕ್ಷಪಾತ ಮಾಡುವ ಕೃಷ್ಣನು ಕೂಡ ಶಾಪಕ್ಕೆ, ದುರ್ವಿಧಿಯ ಸಾವಿಗೆ ಬಲಿಯಾಗುತ್ತಾನೆ. ಒಳ್ಳೆಯವರೆಂದು ಕೃಷ್ಣನಿಂದ ಮತ್ತು ಭೀಷ್ಮಾದಿಗಳಿಂದ ಪ್ರಾಮಾಣೀಕರಿಸಲ್ಪಡುವ ಪಾಂಡವರು ಹಾದಿಯಲ್ಲಿ ಹೆಣಗಳಾಗಿ ಬೀಳುತ್ತಾರೆ. ಇನ್ನು ಪಾತ್ರಗಳೆಂದರೆ ಅವು ಬರಿಯ ವ್ಯಕ್ತಿಗಳಲ್ಲ. ವ್ಯಕ್ತಿತ್ವದ ಮಾದರಿಗಳು. ಶಂತನುವಿನಿಂದ ಹಿಡಿದು ಪರೀಕ್ಷಿತನವರೆಗೂ ಈಗಲೂ ನಾವು ನಮ್ಮನಮ್ಮಲ್ಲಿ ಕಾಣುತ್ತಲೇ ಇರುವ ಹಲವು ಮನಸ್ಥಿತಿಗಳ, ಹಲವು ವ್ಯಕ್ತಿತ್ವಗಳ ಮಾದರಿಗಳು.

ಹಾಗಾಗಿಯೇ ಇದು ಒಂದು ಧಾರ್ಮಿಕ ಗ್ರಂಥವಲ್ಲ. ಈ ನೆಲದ ನಿವಾಸಿಗಳಿಗೆಲ್ಲಾ, ಅವರು ಯಾವುದೇ ಧರ್ಮದವರಾಗಲಿ, ತಮ್ಮತಮ್ಮಲ್ಲಿ ಕಾಣುತ್ತಿರುವ ವ್ಯಕ್ತಿತ್ವಗಳ, ಸಂಘರ್ಷಗಳ, ಬದುಕಿನ ನೋವುನಲಿವುಗಳ ಕಾರಣ ಮತ್ತು ಪರಿಣಾಮಗಳ ಸಮಾಜೋಸಾಂಸ್ಕೃತಿಕ ಕಥನವಿದು. ನಿರಂತರವಾಗಿ ಪ್ರಯೋಗಗಳಿಗೆ ಮತ್ತು ಪರಿವರ್ತನೆಗಳಿಗೆ ಒಳಪಡುತ್ತಿದ್ದ ತಾತ್ವಿಕತೆಗಳ ವಿಶ್ಲೇಷಣೆ ಇದು. ವಿಶಾಲ ಭೂಭಾಗದ ಸಂಕೀರ್ಣ ಸಂಸ್ಕೃತಿಗೆ ಇದೊಂದು ರೂಪಕ ಇತಿಹಾಸ. ಯಾರೂ ಅಮುಖ್ಯರಲ್ಲದೇ ಸಮಾಜದ ಮತ್ತು ವ್ಯಕ್ತಿಗಳ ಆಗುಹೋಗುಗಳಿಗೆ ಕಾರಣ ಕರ್ತೃಗಳಾದವರ ಒಂದು ಮಹಾಕಾವ್ಯ.

ಈ ಮಹಾಕಾವ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ದಾರಿ ತೋರುವ ಕೃತಿ ದೇವದತ್ತ ಪಟ್ನಾಯಕರವರ ಜಯ. ಗಿರಡ್ಡಿ ಗೋವಿಂದರಾಜ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಈಗ ನಾವು ತಿಳಿದಿರುವ ರಿಲೀಜಿಯನ್ ಎಂಬ ಧರ್ಮದ ಪರಿಕಲ್ಪನೆಯೇ ಇಲ್ಲದಿದ್ದ ಮಹಾಭಾರತದ ಕಾಲದಲ್ಲಿಯೂ ಧರ್ಮದ ಬಗ್ಗೆ ಮಾತಾಡುತ್ತಾರೆ. ಅದನ್ನು ಎತ್ತಿ ಹಿಡಿಯುತ್ತಾರೆ. ಅದನ್ನು ಪಾಲಿಸುತ್ತಾರೆ. ಅದಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಸಾಯುತ್ತಾರೆ. ಆದರೆ ಆ ಧರ್ಮವೆಂಬುದು ಅಲ್ಲಿ ಸ್ವಧರ್ಮ ಎಂಬ ಒಬ್ಬರ ಅಥವಾ ಒಂದರ ಅಥವಾ ಒಂದು ವ್ಯವಸ್ಥೆಯ ಮೂಲ ಗುಣಸ್ವಭಾವ, ರೀತಿ ಮತ್ತು ನೀತಿ. ಅದೊಂದು ಜೈವಿಕ, ಆಧ್ಯಾತ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಅಸ್ತಿತ್ವಗಳ ಸೂಕ್ಷ್ಮ ವಿಚಾರ.

ಮಹಾಭಾರತ ಭಾರತದ ಒಂದು ಹೆಮ್ಮೆಯ ಕಾವ್ಯ. ಆದರೆ ನಿಷ್ಪಕ್ಷಪಾತವಾದ ಈ ಮಹಾಭಾರತವನ್ನು ಪರ ಅಥವಾ ವಿರೋಧದ ನೆಲೆಗಟ್ಟುಗಳಿಂದ ನೋಡದೇ ರೂಪಕ ಇತಿಹಾಸವನ್ನು ಅಭ್ಯಾಸ ಮಾಡುವಂತೆ ದೇವದತ್ತ ಜಯವನ್ನು ಬರೆದು ಮಹದುಪಕಾರ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...